Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Tuesday, June 30, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 194/2015 ಕಲಂ. 279, 304(ಎ) ಐ.ಪಿ.ಸಿ:.
ದಿನಾಂಕ:- 29-06-2015 ರಂದು ಬೆಳಿಗ್ಗೆ 09:30 ಗಂಟೆಗೆ ಫಿರ್ಯಾದಿದಾರರಾದ  ಶ್ರೀ ಡಿ. ಶ್ರೀನಿವಾಸ ರೆಡ್ಡಿ ತಂದೆ ಡಿ. ರಾಮಕೃಷ್ಣ ರೆಡ್ಡಿ, ವಯಸ್ಸು 48 ವರ್ಷ, ಜಾತಿ: ರೆಡ್ಡಿ ಉ: ಒಕ್ಕಲುತನ ಸಾ: ರಾಂಪೂರು. ತಾ: ಗಂಗಾವತಿ. ಇವರು ಠಾಣೆಗೆ ಹಾಜರಾಗಿ ನುಡಿ ಹೇಳಿಕೆ ಫಿರ್ಯಾದಿಯನ್ನು ನೀಡಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ.  ನಾನು ಗಂಗಾವತಿ ತಾಲೂಕಿನ ರಾಂಪೂರು ಗ್ರಾಮದ ನಿವಾಸಿ ಇದ್ದು, ಒಕ್ಕಲುತನ ಮಾಡಿಕೊಂಡಿರುತ್ತೇನೆ. ನಾವು ಮೂರು ಜನ ಅಣ್ಣ ತಮ್ಮಂದಿರು ಇದ್ದು, (1) ನಾನು (2) ನಾರಾಯಣರೆಡ್ಡಿ (3) ಸೋಮರೆಡ್ಡಿ ಅಂತಾ ಇರುತ್ತೇವೆ.  ಸೋಮರೆಡ್ಡಿಗೆ (1) ರಾಮಕಿರಣ ರೆಡ್ಡಿ-19 ವರ್ಷ (2) ಅನುಷಾ-16 ವರ್ಷ ಅಂತಾ ಇಬ್ಬರು ಮಕ್ಕಳು ಇರುತ್ತಾರೆ.  ರಾಮಕಿರಣ ರೆಡ್ಡಿ ಈತನು ಪ್ರಸ್ತುತ ಸಾಲಿನಲ್ಲಿ ಪಿ.ಯು.ಸಿ. ದ್ವಿತೀಯ ವರ್ಷದಲ್ಲಿ ಅನುತ್ತೀರ್ಣನಾಗಿದ್ದರಿಂದ ಈಗ ಸಪ್ಲಿಮೆಂಟರಿ ಪರೀಕ್ಷೆಗಳು ನಡೆಯುತ್ತಿದ್ದವು. ಇಂದು ದಿನಾಂಕ:- 29-06-2015 ರಂದು ಬೆಳಿಗ್ಗೆ 08:10 ಗಂಟೆಯ ಸುಮಾರಿಗೆ ರಾಮಕಿರಣ ರೆಡ್ಡಿ ಈತನು ಪರೀಕ್ಷೆ ಬರೆಯುವ ಸಲುವಾಗಿ ಮನೆಯಿಂದ ತಮ್ಮ ಬಜಾಜ್ ಪಲ್ಸರ್ ಮೋಟಾರ್ ಸೈಕಲ್ ನಂ: ಕೆ.ಎ-37/ ಆರ್-7137 ನೇದ್ದನ್ನು ನಡೆಯಿಸಿಕೊಂಡು ಗಂಗಾವತಿಗೆ ಹೋದನು. ನಂತರ ಬೆಳಿಗ್ಗೆ 08:30 ಗಂಟೆಯ ಸುಮಾರಿಗೆ ನಮ್ಮೂರ ವೈ. ರವಿ ತಂದೆ ರಂಗಯ್ಯ, ಬಲಿಜ, 30 ವರ್ಷ ಈತನು ಫೋನ್ ಮಾಡಿ ಬಸವನದುರ್ಗ ಸೀಮಾದಲ್ಲಿರುವ ಬಾಗೋಡಿ ಗೌರೀಶ ಇವರ ಹೊಲದ ಹತ್ತಿರ ಮಲ್ಲಾಪೂರು-ರಾಂಪೂರು ರಸ್ತೆಯಲ್ಲಿ ರಾಮಕಿರಣ ರೆಡ್ಡಿಗೆ ಬಸ್ ಅಪಘಾತ ಮಾಡಿದ್ದರಿಂದ ಆತನು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದನು.  ಕೂಡಲೇ ನಾನು, ನನ್ನ ತಮ್ಮ ಸೋಮರೆಡ್ಡಿ ಸ್ಥಳಕ್ಕೆ ಬಂದು ನೋಡಲಾಗಿ ರಾಮಕಿರಣ ರೆಡ್ಡಿಗೆ ತಲೆಯ ಬಲಭಾಗಕ್ಕೆ ಭಾರೀ ಸ್ವರೂಪ ರಕ್ತಗಾಯವಾಗಿದ್ದು ಮತ್ತು ಬಲಗಾಲಿಗೆ ಗಾಯವಾಗಿ ಆತನು ಸ್ಥಳದಲ್ಲಿಯೇ ಮೃತಪಟ್ಟಿದ್ದನು. ಸ್ಥಳದಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ನಂಬರ್: ಕೆ.ಎ-37/ ಎಫ್-260 (ಗಂಗಾವತಿ-ರಾಂಪೂರು) ನೇದ್ದು ನಿಂತಿತ್ತು. ಮತ್ತು ಮೋಟಾರ್ ಸೈಕಲ್ ಸಹ ಸ್ಥಳದಲ್ಲಿಯೇ ಬಿದ್ದಿತ್ತು. ಅಲ್ಲಿದ್ದ ವೈ. ರವಿಗೆ ವಿಚಾರಿಸಲು ತಿಳಿಸಿದ್ದೇನೆಂದರೆ,  ಬೆಳಿಗ್ಗೆ 08:20 ಗಂಟೆಯ ಸುಮಾರಿಗೆ ನಾನು ಮೋಟಾರ್ ಸೈಕಲ್ ನಡೆಯಿಸಿಕೊಂಡು ಗಂಗಾವತಿಗೆ ಬರುತ್ತಿದ್ದೆನು. ಆಗ ರಾಮಕಿರಣ ರೆಡ್ಡಿಯು ಸಹ ಬಜಾಜ್ ಪಲ್ಸರ್ ಮೋಟಾರ್ ಸೈಕಲ್ ನಡೆಯಿಸಿಕೊಂಡು ನನ್ನ ಮುಂದೆ ಗಂಗಾವತಿ ಕಡೆಗೆ ಹೋಗುತ್ತಿರುವಾಗ ಆತನ ಎದುರುಗಡೆ ಸಂಗಾಪೂರು ಕಡೆಯಿಂದ ಒಂದು ಬಸ್ ಬರುತ್ತಿದ್ದು, ಸದರಿ ಬಸ್ ಚಾಲಕನು ತನ್ನ ಬಸ್ನ್ನು ಅಡ್ಡಾದಿಡ್ಡಿಯಾಗಿ ಅತೀ ಜೋರಾಗಿ ಮತ್ತು ತೀವ್ರ ನಿರ್ಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ರಾಮಕಿರಣ ರೆಡ್ಡಿಯ ಮೋಟಾರ್ ಸೈಕಲ್ಗೆ ಟಕ್ಕರ್ ಕೊಟ್ಟು ಅಪಘಾತ ಮಾಡಿದನು. ಇದರಿಂದ ರಾಮಕಿರಣ ರೆಡ್ಡಿಯ ತಲೆಗೆ ತೀವ್ರ ಸ್ವರೂಪದ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ  ಅಂತಾ ತಿಳಿಸಿದನು. ಬಸ್ ಚಾಲಕನ ಬಗ್ಗೆ ವಿಚಾರಿಸಲು ಮಲ್ಲೇಶ ತಂದೆ ದೊಡ್ಡಪ್ಪ ಗಂಗಾವತಿ ಕೆ.ಎಸ್.ಆರ್.ಟಿ.ಸಿ. ಡಿಪೋ ಸಾ: ನಾರಿನಾಳ ಅಂತಾ ತಿಳಿಯಿತು. ನಂತರ ರಾಮಕಿರಣ ರೆಡ್ಡಿಯ ಶವವನ್ನು ಯಾವುದೋ ಒಂದು ಟಾಟಾ ಏಸ್ ವಾಹನದಲ್ಲಿ ತೆಗೆದುಕೊಂಡು ಬಂದು ಗಂಗಾವತಿ ಉಪವಿಭಾಗ ಆಸ್ಪತ್ರೆಯ ಶವಾಗಾರ ಕೋಣೆಯಲ್ಲಿ ಹಾಕಿ ಈಗ ಈ ಹೇಳಿಕೆ ಫಿರ್ಯಾದಿಯನ್ನು ನೀಡಿರುತ್ತೇನೆ. ಕಾರಣ ಈ ಅಪಘಾತಕ್ಕೆ ಕಾರಣನಾದ ಕೆ.ಎಸ್.ಆರ್.ಟಿ.ಸಿ. ಬಸ್ ನಂಬರ್: ಕೆ.ಎ-37/ ಎಫ್-260 ನೇದ್ದರ ಚಾಲಕ ಮಲ್ಲೇಶನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ. ಅಂತಾ ನೀಡಿದ ಹೇಳಿಕೆ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಳ್ಳಲಾಯಿತು
2) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 139/2015  ಕಲಂ 279, 337 ಐ.ಪಿ.ಸಿ:
ದಿನಾಂಕ 29-06-2015 ರಂದು ಪಿರ್ಯಾದಿದಾರ ಶಿವರಾಜ ತಮ್ಮ ಕಾರ ನಂ.ಕೆ.ಎ 34/ಎ 9037 ನೇದ್ದರಲ್ಲಿ ಬಳ್ಳಾರಿಯಿಂದ ಕೊಪ್ಪಳಕ್ಕೆ ಕುಷ್ಟಗಿ- ಹೊಸಪೇಟೆ ಎನ್.ಹೆಚ್.13 ಒನ್ ವೇ ರಸ್ತೆಯ ಮೇಲೆ ಐ.ಆರ್.ಬಿ ಕ್ರಾಸ್ ಹತ್ತಿರ ಹೋಗುತ್ತಿರುವಾಗ ಆರೋಪಿ ಅಶೋಕ ತನ್ನ ಟಿಪ್ಪರ್ ಲಾರಿ ನಂ.ಕೆ.ಎ37/8453 ನೇದ್ದನ್ನು ಅತೀ ವೇಗ ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು  ಪಿರ್ಯಾದುದಾರರ ಕಾರಿಗೆ ಡಿಕ್ಕಿ ಪಡಿಸಿಕೊಂಡು ಅಪಘಾತ ಪಡಿಸಿದ್ದರಿಂದ ಕಾರಿನಲ್ಲಿದ್ದ ಇಬ್ಬರಿಗೆ ಗಾಯಗಳಾಗಿರುತ್ತವೆ ಅಂತಾ ಮುಂತಾಗಿದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.
3) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 112/2015  ಕಲಂ 96(ಬಿ) & (ಸಿ) ಕೆ.ಪಿ. ಕಾಯ್ದೆ:

ದಿನಾಂಕ: 29-06-2015 ರಂದು ಬೆಳಿಗ್ಗೆ 6-00 ಗಂಟೆಗೆ ದೇವೇಂದ್ರಪ್ಪ ಸಿಪಿಸಿ 120 ರವರು ಠಾಣೆಗೆ ಹಾಜರಾಗಿ ಫಿರ್ಯಾದಿಯನ್ನ ಹಾಜರು ಪಡಿಸಿದ್ದು, ಸದರಿ ಫಿರ್ಯಾದಿಯ ಸಾರಾಂಶವೇನೆಂದರೆ, ಇಂದು ದಿನಾಂಕ: 29-06-2015 ರಂದು 4-00 ಗಂಟೆಯಿಂದ ತಾನು ಮತ್ತು ಪಿಸಿ 150 ರವರು ನಗರದಲ್ಲಿ ಗುಡ್ ಮಾರ್ನಿಂಗ್ ಬೀಟ್ ಕರ್ತವ್ಯದಲ್ಲಿದ್ದಾಗ ಬೆಳಗಿನ ಜಾವ 5-00 ಗಂಟೆಗೆ ನಗರದ ಶರ್ಮಾ ಪೆಟ್ರೋಲ್ ಬಂಕ್ ಹತ್ತಿರ ಗಸ್ತು ತಿರುಗುತ್ತಿದ್ದಾಗ, ಬೆಳಿಗ್ಗೆ 5-15 ಗಂಟೆಗೆ ಶರ್ಮಾ ಪೆಟ್ರೊಲ್ ಬಂಕ್ ಹತ್ತಿರ ಫಿರ್ಯಾದಿದಾರರನ್ನು ನೋಡಿ ಕತ್ತಲಲ್ಲಿ ತನ್ನ ಮುಖ ಮುಚ್ಚಿಕೊಂಡು ಅವಿತುಕೊಂಡಿರುವುದನ್ನು ಫಿರ್ಯದಿದಾರು ನೋಡಿ ಸಂಶ ಬಂದು ಅವರು ಅವನನ್ನು ಹಿಡಿದುಕೊಂಡು ಅವನಿಗೆ ವಿಚಾರಿಸಲಾಗಿ ಅವನು ಮೊದಲು ತನ್ನ ಹೆಸರನ್ನು ತಪ್ಪು ತಪ್ಪಾಗಿ ಹೆಳಿದ್ದು ಮತ್ತು ರಾತ್ರಿ ವೇಳೆಯಲ್ಲಿ ಸದರಿ ಸ್ಥಳದಲ್ಲಿದ್ದ ಬಗ್ಗೆ ವಿಚಾರಿಸಿದಾಗ ಅವನು ತಪ್ಪು ತಪ್ಪಾಗಿ ಹೇಳಿದ್ದು, ನಂತರ ಅವನಿಗೆ ಮೇಲಿಂದ ಮೆಲೆ ವಿಚಾರಿಸಿದಾಗ ಅವನು ತನ್ನ ಹೆಸರು ಅಮರೇಶ ತಂದೆ ರಾಮಣ್ಣ ತೆಗ್ಗಿನ ಮನೆ ವಯಾ; 24 ವರ್ಷ ಜಾ: ಮೋಚಿ ಉ: ಕೂಲಿ ಕೆಲಸ ಸಾ: ಬಿಸರಳ್ಳಿ ತಾ:ಜಿ: ಕೊಪ್ಪಳ ಅಂತಾ ಹೇಳಿದ್ದು ಅನವ ಮೇಲೆ ಸಂಶಯ ಬಂದು ಹಾಗೂ ಸದರಿ ಸ್ಥಳದಲ್ಲಿ ರಾತ್ರಿ ವೇಳೆಯಲ್ಲಿ ಇದ್ದ ಬಗ್ಗೆ ಸಮರ್ಪಕ ಉತ್ತರ ಕೊಡದೇ ಇರುವುದರಿಂದ ಮುಂಜಾಗೃತ ಕ್ರಮವಾಗಿ ಸದರಿಯವನನ್ನು ಸದರಿಯವನನ್ನು ವಶಕ್ಕೆ ತೆಗೆದುಕೊಂಡು ಬೆಳಿಗ್ಗೆ 5-30 ಗಂಟೆಗೆ ಠಾಣೆಗೆ ಕರೆತಂದು ಬೆಳಿಗ್ಗೆ 6-00 ಗಂಟೆಗೆ ಫಿರ್ಯಾದಿಯನ್ನ ತಯಾರಿಸಿ ಮುಂದಿನ ಕ್ರಮ ಜರುಗಿಸುವಂತೆ ವಿನಂತಿಸಿಕೊಳ್ಳಲಾಗಿದೆ. ಅಂತಾ ಇರುವ ಫಿರ್ಯಾದಿಯ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಅದೆ.

Monday, June 29, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ. 71/2015  ಕಲಂ 87 Karnataka Police Act
ದಿನಾಂಕ: 28-06-2015 ರಂದು 15-00 ಗಂಟೆಗೆ ಹಗೇದಾಳ ಗ್ರಾಮದ ಹೊರವಲಯದಲ್ಲಿ  ಡಿ.ಬಿ ಘೋರ್ಪಡೆ ಇವರ ತೋಟದ ಮುಂದಿನ ಸಿಮೆಂಟ ಪೂಲ ಮೇಲಿನ ಸಾರ್ವಜನಿಕ ರಸ್ತೆಯ ಮೇಲೆ ಆರೋಪಿತರೆಲ್ಲರೂ ಕೂಡಿಕೊಂಡು ದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಅಂದರ-ಬಾಹರ ಎಂಬ ನಸೀಬ ಜೂಜಾಟದಲ್ಲಿ ತೊಡಗಿದ್ದಾಗ 15-10 ಗಂಟೆಗೆ ಶ್ರೀ. ವಿನಾಯಕ ಪಿ.ಎಸ್.ಐ. ಮತ್ತು ಸಿಬ್ಬಂದಿ ಸಮೇತ ದಾಳಿ ಮಾಡಿ ಹಿಡಿದಿದ್ದು 11 ಜನರು ಸಿಕ್ಕಿ ಬಿದ್ದಿದ್ದು ಇರುತ್ತದೆ.  ಸಿಕ್ಕಿ ಬಿದ್ದ ಆರೋಪಿತರ ಹತ್ತಿರ ಮತ್ತು ಕಣದಲ್ಲಿದ್ದ ಹಣ ಸೇರಿ ಒಟ್ಟು 30,500=00 ರೂಪಾಯಿ ನಗದು ಹಣ, 52 ಇಸ್ಪೀಟ ಎಲೆಗಳುಒಂದು ಪ್ಲಾಸ್ಟೀಕ ಚೀಲ ಸಿಕ್ಕಿದ್ದು ಇರುತ್ತದೆ.
2) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 193/2015  ಕಲಂ 87 Karnataka Police Act
ದಿ:- 28-06-2015 ರಂದು ಬೆಳಿಗ್ಗೆ 7:00 ಗಂಟೆಗೆ ಶ್ರೀ ಟಿ.ಜಿ. ನಾಗರಾಜ, ಎ.ಎಸ್.ಐ. ಗಂಗಾವತಿ ಗ್ರಾಮೀಣ ಠಾಣೆ ರವರು ಪೊಲೀಸ್ ಪರವಾಗಿ ಸ್ವಂತ ಪಿರ್ಯಾದಿಯೊಂದಿಗೆ ಮೂಲ ಪಂಚನಾಮೆ ಮುದ್ದೇಮಾಲು ಮತ್ತು ಆರೋಪಿತರನ್ನು ಹಾಜರ್ಪಡಿಸಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ. ಇಂದು ದಿನಾಂಕ:- 28-06-2015 ರಂದು ಬೆಳಗಿನಜಾವ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಶ್ರೀರಾಮನಗರದ ಪುಲ್ಲಾರಾವ್ ಎಂಬುವವರ ರೈಸ್ ಮಿಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಂದರ್-ಬಹಾರ್ ಇಸ್ಪೇಟ್ ಜೂಜಾಟ ನಡೆಯುತ್ತಿದೆ ಅಂತಾ ಖಚಿತವಾದ ಮಾಹಿತಿ ಬಂದ ಮೇರೆಗೆ ಮಾನ್ಯ ಡಿ.ಎಸ್.ಪಿ. ಗಂಗಾವತಿ ಮತ್ತು ಸಿಪಿಐ ಗಂಗಾವತಿ (ಗ್ರಾ) ವೃತ್ತರವರ ಮಾರ್ಗದರ್ಶನದಲ್ಲಿ ನಾನು ಮತ್ತು ಸಿಬ್ಬಂದಿಯವರಾದ ಪಿ.ಸಿ. 129, 160, 429, 358, 131, 38, ಎ.ಪಿ.ಸಿ. ಮಹಿಬೂಬರವರನ್ನು ಮತ್ತು ಇಬ್ಬರು ಪಂಚರನ್ನು ಬರಮಾಡಿಕೊಂಡು ಸರಕಾರಿ ಜೀಪ್ ಮತ್ತು ವೈಯಕ್ತಿಕ ಮೋಟಾರ್ ಸೈಕಲ್ಗಳಲ್ಲಿ ಹೊರಟು ಶ್ರೀರಾಮನಗರ ತಲುಪಿ ರೈಸ್ಮಿಲ್ನಿಂದ ಸ್ವಲ್ಪ ದೂರದಲ್ಲಿ ವಾಹನಗಳನ್ನು ನಿಲ್ಲಿಸಿ ನಂತರ ಎಲ್ಲರೂ ನಡೆದುಕೊಂಡು ಹೊರಟು ನೋಡಲಾಗಿ ಅಲ್ಲಿ ಪುಲ್ಲಾರಾವ್ ರೈಸ್ಮಿಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಬೀದಿ ದೀಪದ ಲೈಟಿನ ಬೆಳಕಿನಲ್ಲಿ ಜನರು ದುಂಡಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ್ ಎಲೆಗಳಿಂದ ಅಂದರ್ ಬಹಾರ್ ಎನ್ನುವ ಕಾನೂನು ಬಾಹಿರವಾದ ಅದೃಷ್ಠದ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದು, ಆಗ ಸಮಯ ಬೆಳಗಿನಜಾವ 05:00 ಗಂಟೆಯಾಗಿದ್ದು, ಕೂಡಲೇ ಅವರ ಮೇಲೆ ದಾಳಿ ಮಾಡಲಾಗಿ 4 ಜನರು ಸಿಕ್ಕಿಬಿದ್ದಿದ್ದು ಉಳಿದ ಇಬ್ಬರು ಅಲ್ಲಿಂದ ಓಡಿ ಹೋದರು. ಸಿಕ್ಕವರನ್ನು ವಿಚಾರಿಸಲು ಅವರು ತಮ್ಮ ಹೆಸರುಗಳು (1) ಉಮೇಶ ಜಾದವ ತಂದೆ ಲಿಂಬು ಜಾದವ, 28 ವರ್ಷ, ಲಮಾಣಿ ಉ: ಎಳೆ ನೀರು ವ್ಯಾಪಾರ ಸಾ: 6ನೇ ವಾರ್ಡ, ಬಂಜಾರ ಕಾಲೋನಿ, ಶ್ರೀರಾಮನಗರ (2) ಅಬ್ದುಲ್ ತಂದೆ ಶೇಖ್ ಮಹೆಬೂಬ ಪಾಷಾ, 22 ವರ್ಷ, ಉ: ಅಕ್ಕಸಾಲಿಗ ಸಾ: 1ನೇ ವಾರ್ಡ-ಶ್ರೀರಾಮನಗರ (3) ಸತೀಶ ತಂದೆ ಲಾಲಸಿಂಗ್, 28 ವರ್ಷ, ಜಾತಿ: ಲಮಾಣಿ ಉ: ಹೋಟಲ್ ಸಾ: 6ನೇ ವಾರ್ಡ, ಬಂಜಾರ ಕಾಲೋನಿ, ಶ್ರೀರಾಮನಗರ (4) ಗೋಪಿ ತಂದೆ ರೇಖು, ವಯಸಸು 32 ವರ್ಷ, ಜಾತಿ: ಲಮಾಣಿ ಉ: ಡ್ರೈವರ್ ಸಾ: 6ನೇ ವಾರ್ಡ, ಬಂಜಾರ ಕಾಲೋನಿ, ಶ್ರೀರಾಮನಗರ ಅಂತಾ ತಿಳಿಸಿದರು. ಓಡಿ ಹೋದವರ ಬಗ್ಗೆ ವಿಚಾರಿಸಲು ಅವರೇ ಈ ಇಸ್ಪೇಟ್ ಜೂಜಾಟವನ್ನು ಆಡಿಸುತ್ತಿದ್ದು, ಅವರ ಹೆಸರು (5) ಮೀರಿ ಸಾ: ಹೆಬ್ಬಾಳ ಕ್ಯಾಂಪ್ (6) ಪೆದ್ದ ಪಂಡು ತಂದೆ ದೋನೆಪುಡಿ ಮೋಹನರಾವ್ ಸಾ: 6ನೇ ವಾರ್ಡ-ಶ್ರೀರಾಮನಗರ ಇರುತ್ತದೆ ಅಂತಾ ತಿಳಿಸಿದರು. ಸದರಿ ಸಿಕ್ಕವರಿಂದ ಹಾಗೂ ಸ್ಥಳದಿಂದ ಜೂಜಾಟದ ನಗದು ಹಣ ರೂ. 4,100/- ಗಳು ಮತ್ತು 52 ಇಸ್ಪೇಟ್ ಎಲೆಗಳು ಮತ್ತು ಒಂದು ಪ್ಲಾಸ್ಟಿಕ್ ಚೀಲ ಮತ್ತು (1) ಹಿರೋ ಹೋಂಡಾ ಸಿ.ಡಿ. ಡಿಲಕ್ಸ್ ಮೋ.ಸೈ. ಕೆ.ಎ-37/ ವಿ-4726 (2) ಬಜಾಜ್ ಪ್ಲಾಟಿನ ಮೋಟಾರ್ ಸೈಕಲ್ ನಂ: ಕೆ.ಎ-04/ ಇ.ವೈ-7550 ನೇದ್ದವುಗಳನ್ನು ಜಪ್ತು ಮಾಡಲಾಯಿತು. ಈ ಬಗ್ಗೆ  ಬೆಳಗಿನಜಾವ 05:00 ರಿಂದ 06:00 ಗಂಟೆಯವರೆಗೆ ಪಂಚನಾಮೆ ನಿರ್ವಹಿಸಿ ನಂತರ ಆರೋಪಿತರೊಂದಿಗೆ ಬೆಳಿಗ್ಗೆ 07:00 ಗಂಟೆಗೆ ಠಾಣೆಗೆ ವಾಪಸ್ ಬಂದು ಈ ವರದಿಯನ್ನು ಸಲ್ಲಿಸಿದ್ದು ಇರುತ್ತದೆ.  ಅಂತಾ ಇದ್ದ ವರದಿ ಆಧಾರದ ಮೇಲಿಂದ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 193/2015 ಕಲಂ 87 ಕ.ಪೋ. ಕಾಯ್ದೆ ಆಡಿ ಪ್ರಕರಣವನ್ನು ದಾಖಲು ಮಾಡಿ ತನಿಖೆ ಕೈಗೊಳ್ಳಲಾಯಿತು
3) ಹನುಮಸಾಗರ ಪೊಲೀಸ್ ಠಾಣಾ ಗುನ್ನೆ ನಂ 63/2015  ಕಲಂ 498(ಎ), 307 ಐ.ಪಿ.ಸಿ:.

ದಿನಾಂಕ 28-06-2015 ರಂದು ಮುಂಜಾನೆ 10-00 ಗಂಟೆಗೆ ಕುಷ್ಟಗಿ ಸರಕಾರಿ ಆಸ್ಪತ್ರೆಯಿಂಧ ಎಂ.ಎಲ್.ಸಿ. ಮಾಹಿತಿ ಬಂದ ಮೇರೆಗೆ ಹೆಚ್.ಸಿ-11, ಪಿ/ಸಿ-168 ರವರೊಂದಿಗೆ ಕುಷ್ಟಗಿ ಆಸ್ಪತ್ರೆಗೆ ಬೇಟಿ ನೀಡಿ ಚಿಕಿತ್ಸೆ ಪಡೆಯುತ್ತಿದ್ದಾ ಗಾಯಾಳು ಫಿರ್ಯಾದಿ ಹನಮವ್ವ ಗಂಡ ಹನಮಂತ ಗೌಡ್ರ ಸಾ: ವೆಂಕಟಾಪೂರ ರವರ ನುಡಿ ಹೇಳಿಕೆಯನ್ನು ಮುಂಜಾನೆ 11-00 ಗಂಟೆಯಿಂದ 12-30 ಗಂಟೆಯವರೆಗೆ ಪಡೆದುಕೊಂಡಿದ್ದರ ಸಾರಾಂಶವೆನೆಂದರೆ, ನಾನು ಮೇಲ್ಕಂಡ ವಿಳಾಸದ ನಿವಾಸಿಯಾಗಿದ್ದು ಹೊಲ ಮನೆ ಕೆಲಸ ಮಾಡಿಕೊಂಡು ಉಪಜೀವಿಸುತ್ತಿದ್ದೇನೆ, ನನ್ನ ತವರು ಮನೆ ಹುನಗುಂದ ತಾಲೂಕಿನ ಗಾಣದಾಳ ಗ್ರಾಮವಾಗಿರುತ್ತದೆ. ನಮ್ಮ ತಂದೆ ತಾಯಿಗೆ 2 ಜನ ಗಂಡು ಮಕ್ಕಳುಇ 3 ಜನ ಹೆಣ್ಣುಮಕ್ಕಳು ಹೀಗೆ ಒಟ್ಟು 5 ಜನ ಮಕ್ಕಳಿದ್ದು ನನಗೆ ಈಗ್ಗೆ ಸುಮಾರು 3 ತಿಂಗಳ ಹಿಂದೆ ನಮ್ಮ ತಾಯಿಯ ಅಣ್ಣನಾದ ಪರಮೇಶ್ವರ ಗೌಡ ಈತನ ಮಗನಾದ ಹನಮಂತಗೌಡ ಸಾ: ವೆಂಕಟಾಪೂರ ಈತನೊಂದಿಗೆ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ. ನಾನು ನನ್ನ ಗಂಡನ ಮನೆಗೆ ಸಂಸಾರ ಮಾಡಲು ಬಂದಾಗ ನನ್ನ ಗಂಡನು ನನ್ನ ಸಂಗಡ ಸುಮಾರು 2 ತಿಂಗಳು ಚನ್ನಾಗಿದ್ದನು. ನಂತರ ನನ್ನ ಗಂಡನು ನನಗೆ ನೀನು ಚನ್ನಾಗಿಲ್ಲ ನಿನ್ನ ಮೇಲೆ ಮನಸ್ಸಿಲ್ಲ ಅಂತಾ ಹೇಳಿ ನನ್ನ ಸಂಗಡ ಜಗಳ ಮಾಡುತ್ತ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಿದ್ದನು. ಈ ಬಗ್ಗೆ ನಾನು ನಮ್ಮ ತಂದೆ ತಾಯಿಗೆ ಹೇಳಿರುವದಿಲ್ಲ. ಆದಾಗ್ಯೂ ಸಹ ನನ್ನ ಗಂಡನು ನನಗೆ ಮೇಲಿಂದ ಮೇಲೆ ಜಗಳ ಮಾಡುತ್ತ ನೀನು ಚನ್ನಾಗಿಲ್ಲ ನಿನ್ನ ಮೇಲೆ ಮನಸ್ಸಿಲ್ಲ ಅಂತಾ ಕಿರುಕುಳ ಕೊಡುತ್ತಿದ್ದನು. ಅದರಂತೆ ದಿನಾಂಕ 23-06-2015 ರಂದು ಮಂಗಳವಾರ ದಿವಸ ರಾತ್ರಿ ವೇಳೆಯಲ್ಲಿ ನಾನು ಮತ್ತು ನನ್ನ ಗಂಡ ಅತ್ತೆ ರಂಗವ್ವ ಮತ್ತು ನನ್ನ ಗಂಡನ ಅಣ್ಣನಾದ ಕಡ್ಡೆಪ್ಪ @ ಕನಕಪ್ಪ ಎಲ್ಲರೂ ಕೂಡಿ ಊಟ ಮಾಡಿದೆವು ನಾನು ಮತ್ತು ನನ್ನ ಗಂಡ ಕೂಡಿ ಅಡುಗೆ ಮನೆಯಲ್ಲಿ ಮಲಗಿಕೊಂಡೆವು ನಮ್ಮ ಅತ್ತೆ ರಂಗವ್ವ ನನ್ನ ಗಂಡನ ಅಣ್ಣ ಕಡ್ಡೆಪ್ಪ @ ಕನಕಪ್ಪ ಇವರು ಹೊರಗೆ ಪಡಸಾಲೆಯಲ್ಲಿ ಮಲಗಿಕೊಂಡಿದ್ದರು ನನ್ನ ಮಾವ ಪರಮೇಶ್ವರಗೌಡ ರವರು ನಮ್ಮ ತೋಟದ ಮನೆಯಲ್ಲಿ ಮಲಗಿಕೊಂಡಿದ್ದರು ನಾವು ಮಲಗುವಾಗ ನನ್ನ ಗಂಡನು ನನ್ನ ಸಂಗಡ ಜಗಳ ತೆಗೆದು ನಿನಗೆ ಸಾಯಿಸಿ ಬೇರೆ ಮದುವೆ ಮಾಡಿಕೊಳ್ಳುವೆನು ಅಂತಾ ಜಗಳ ಮಾಡಿದನು ಅದರಂತೆ ಬುಧವಾರ ಬೆಳಗಿನ ಜಾವ ಅಂದರೆ ದಿನಾಂಕ 24-06-2015 ರಂದು 4-00 ಗಂಟೆಯ ಸುಮಾರಿಗೆ ನನ್ನ ಮೇಲೆ ನನ್ನ ಗಂಡನು ಸೀಮೆ ಎಣ್ಣೆ ಸುರದಿದ್ದರಿಂದ ಎಚ್ಚರವಾಗಿ ಎದ್ದಾಗ ನನ್ನ ಗಂಡನು ನನಗೆ ಸಾಯಿಸುವ ಉದ್ದೇಶದಿಂದ ನನಗೆ ಸೀಮೆ ಎಣ್ಣೆಯನ್ನು ಸುರಿದು ಬೆಂಕಿ ಹಚ್ಚಿದನು ನಾನು ಚೀರಾಡಹತ್ತಿದಾಗ ಪಡಸಾಲೆಯಲ್ಲಿ ಮಲಗಿದ್ದ ನನ್ನ ಗಂಡನ ಅಣ್ಣ ಕಡ್ಡೆಪ್ಪ @ ಕನಕಪ್ಪ ನಮ್ಮ ಅತ್ತೆ ರಂಗವ್ವ ನಮ್ಮ ಮನೆಯ ಹತ್ತಿರ ಇದ್ದ ನಮ್ಮ ದೊಡ್ಡವ್ವ ಪರಾತೆವ್ವ ರವರು ಚೀರಿದ ದ್ವನಿ ಕೇಳಿ ಬಂದರು. ನನಗೆ ಬೆಂಕಿ ಹತ್ತಿದ್ದನ್ನು ನೋಡಿ ಎಲ್ಲರೂ ಕೂಡಿ ಆರಿಸಿದರು. ನನಗೆ ಬಲಗೈ ರಟ್ಟೆಯ ಕೆಳಗೆ ಎಡಗೈ ಬಲಗಾಲಿಗೆ ಬಲಗಡೆಯ ಎದೆಯ ಮತ್ತು ಎಡ ತೊಡೆಗೆ ಸುಟ್ಟ ಗಾಯವಾಗಿರುತ್ತದೆ ನನಗೆ ಇಲಾಜ ಕುರಿತು ನನ್ನ ಗಂಡನ ಅಣ್ಣ ಕಡ್ಡೆಪ್ಪ @ ಕನಕಪ್ಪ ಅತ್ತೆ ರಂಗವ್ವ ಹಾಗೂ ದೊಡ್ಡ ಮಗಳಾದ ಪಾರತೆವ್ವ ಕೂಡಿ ಯಾವದೋ ಒಂದು ವಾಹನದಲ್ಲಿ ಹನಮಸಾಗರಕ್ಕೆ ಕರೆದುಕೊಂಡು ಬಂದು ಡಾ// ದಾನಿಯವರ ಖಾಸಗಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದರು ಆ ವೇಳೆಯಲ್ಲಿ ನಾನುಇ ಅರೆ ಪ್ರಜ್ಞೆಯಲ್ಲಿದ್ದೇನು, ಇಂದು ಬೆಳಿಗ್ಗೆ ಪ್ರಜ್ಞೆ ಬಂದಿದ್ದು ನಾನು ಕುಷ್ಟಗಿ ಸರಕಾರಿ ಆಸ್ಪತ್ರೆಯಲ್ಲಿ ಇಲಾಜ ಪಡೆಯುತ್ತಿದ್ದೇನು. ನನ್ನ ಗಂಡನು ನನ್ನ ಸಂಗಡ ವಿನಾಃ ಕಾರಣ ಜಗಳ ಮಾಡುತ್ತ ನೀನು ಚನ್ನಾಗಿಲ್ಲ ನಿನ್ನ ಮೇಲೆ ಮನಸ್ಸಿಲ್ಲ ಅಂತಾ ಹೇಳಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳಕೊಡುತ್ತಾ ಹೊಡಿ ಬಡಿ ಮಾಡುತ್ತಿದ್ದನು. ನನಗೆ ಸಾಯಿಸಿ ಬೇರೆ ಮದುವೆ ಮಾಡಿಕೊಳ್ಳುವ ಉದ್ದೇಶದಿಂದ ನನಗೆ ದಿನಾಂಕ 24-06-2015 ರಂದು ಬುಧವಾರ ಬೆಳಿಗ್ಗೆ 4-00 ಗಂಟೆಯ ಸುಮಾರಿಗೆ ನಾನು ಮಲಗಿಕೊಂಡಾಗ ನನ್ನ ಮೇಲೆ ಸೀಮೇ ಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಲು ಪ್ರಯತ್ನಿಸಿದ್ದು ಅದೆ. ಕಾರಣ ನನ್ನ ಗಂಡ ಹನಮಂತ ತಂದಿ ಪರಮೇಶ ಗೌಡ ಗೌಡ್ರ ಈತನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ್ದನ್ನು ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಅದೆ.

Sunday, June 28, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಯಲಬುರ್ಗಾ ಪೊಲೀಸ್ ಠಾಣಾ ಗುನ್ನೆ ನಂ 70/2015  ಕಲಂ 279 337, 338, 304(ಎ) ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ :
ದಿನಾಂಕ: 27-06-2015 ರಂದು ಸಂಜೆ 7-30 ಗಂಟೆಯ ಸುಮಾರಿಗೆ ಪಿರ್ಯಾದಾರರ ಮಗನಾದ ಮೃತ ಶರಣಪ್ಪ ಸಿಪಾಯಿ ಈತನು ತಾನು ನಡೆಯಿಸುತ್ತಿದ್ದ ಮೋಟಾರ ಸೈಕಲ ನಂ: ಕೆ.ಎ-37/ಎಸ್-7965 ನೇದ್ದರ ಹಿಂದುಗಡೆ ಗಾಯಾಳು ಇಮಾಮಸಾಬ @ ಸದ್ದಾಂ ತಂದೆ ಖಾದರಸಾಬ ಸಾ: ರೇವಣಕಿ ಈತನಿಗೆ ಕೂಡಿಸಿಕೊಂಡು ಬೇವೂರದಿಂದ ಯಲಬುರ್ಗಾಕ್ಕೆ ಕುಡುಗುಂಟಿ ಸೀಮಾದಲ್ಲಿ ಬರುವ ಸಂಗಪ್ಪ ರೇವಣಕಿ ಇವರ ಹೊಲದ ಹತ್ತಿರ ಕೊರಮ್ಮನ ಹಳ್ಳದ ಸಮೀಪ ಬರುತ್ತಿರುವಾಗ ಅದೇ ಸಮಯಕ್ಕೆ ಅವರ ಎದುಗಡೆಯಿಂದ ಅಂದರೆ,  ಯಲಬುರ್ಗಾ ಕಡೆಯಿಂದ ಬೇವೂರ ಕಡೆಗೆ ಯಾವುದೋ ಒಂದು ವಾಹನ ಚಾಲಕನು ತಾನು ನಡೆಸುತ್ತಿದ್ದ ವಾಹನವನ್ನು ಅತೀ ಜೋರಾಗಿ ಹಾಗೂ ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿ ಆಗುವ ರೀತಿಯಲ್ಲಿ  ನಡೆಸಿಕೊಂಡು ಬಂದು ಸದರಿಯವರಿಗೆ ಹಾಗೂ ಅವರ ಮೋಟಾರ್ ಸೈಕಲನ್ನು ಲೇಕ್ಕಿಸದೇ ಜೋರಾಗಿ ಠಕ್ಕರ ಕೊಟ್ಟು ಅಪಘಾತಪಡಿಸಿದ್ದರಿಂದ ಮೋಟಾರ ಸೈಕಲ ಸವಾರನಾದ ಶರಣಪ್ಪನ ತಲೆಗೆ, ಬಲಗೈಗೆ, ಬಲತೊಡೆಗೆ, ಬಲಗಾಲ ಮೊಣಕಾಲಕೆಳಗೆ, ಭಾರಿಸ್ವರೂಪದ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ.  ಮೋಟಾರ್ ಸೈಕಲ ಹಿಂದೆ ಕುಳಿತುಕೊಂಡಿದ್ದ ಇಮಾಮಸಾಬನ ಬಲಬುಜಕ್ಕೆ, ತೆರಚಿದ ಗಾಯ, ಬಲಗಾಲ ತೊಡೆಗೆ, ಬಲಗಾಲು ಮೊಣಕಾಲು ಕೆಳಗೆ ಭಾರಿ ಸ್ವರೂಪದ ಒಳಪೆಟ್ಟಾಗಿದ್ದು ಇರುತ್ತದೆ. ಸದರಿ ಅಪಘಾತ ಮಾಡಿದ ವಾಹನ ಚಾಲಕನು ಅಪಘಾತ ಮಾಡಿದ ನಂತರ ವಾಹನ ಸಮೇತ ಓಡಿ ಹೋಗಿದ್ದು ಇರುತ್ತದೆ. ಅಂತಾ ಮುಂತಾಗಿ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ. 
2) ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ 65/2015  ಕಲಂ 279 337, 338  ಐ.ಪಿ.ಸಿ:.
ದಿನಾಂಕ 27-06-2015 ರಂದು ಸಂಜೆ 04-15 ಗಂಟೆಗೆ ಸರಕಾರಿ ಆಸ್ಪತ್ರೆ ಕುಷ್ಟಗಿಯಿಂದ ಒಂದು ಎಂ.ಎಲ್.ಸಿ ಬಂದಿದ್ದು ಠಾಣೆಯ ಶ್ರಿ ಮಾನಪ್ಪ ಹೆಚ್.ಸಿ-81 ರವರು ಆಸ್ಪತ್ರೆಗೆ ಹೋಗಿ ಒಂದು ಪಿರ್ಯಾದಿಯನ್ನು ಪಡೆದುಕೊಂಡು ವಾಪಾಸು ಸಂಜೆ 06-15 ಗಂಟೆಗೆ ಹಾಜರುಪಡಿಸಿದ್ದು ಸಾರಾಂಶವೆನೆಂದರೆ ಇಂದು ದಿನಾಂಕ: 27-06-2015 ರಂದು ಪಿರ್ಯಾದಿದಾರರಾದ ಶ್ರೀ ವೆಂಕಣ್ಣ ತಂದೆ ದಾಸಪ್ಪ ಶೆಟ್ಟರ, ವಯ : 55 ವರ್ಷ, ಜಾತಿ : ವೈಶ್ಯ, ಉ : ವ್ಯಾಪಾರ, ಸಾ : ಗುಮಗೇರ. ತಾ : ಕುಷ್ಟಗಿ ರವರು ಮನೆಯಲ್ಲಿದ್ದಾಗ ತಮ್ಮ ಸಂಬಂಧಿ ಮಾವನಾಗಬೇಕಾದ ಗೋಪಾಲ ಶೆಟ್ಟಿರವರ ಕಾರ ಪಲ್ಟಿಯಾಗಿ ಕುಷ್ಟಗಿ ಆಸ್ಪತ್ರೆಯಲ್ಲಿ ಇಲಾಜು ಕುರಿತು ದಾಖಲಾಗಿದ್ದು ಅಂತಾ ತಿಳಿದು ಹೋಗಿ ನೋಡಲಾಗಿ ವಿಷಯ ನಿಜವಿದ್ದು, ಪಿರ್ಯಾದಿದಾರರ ಸಂಬಂದಿ ಗೋಪಾಲ ಶೆಟ್ಟಿರವರನ್ನು ವಿಚಾರಿಸಲು ತಾವು ತನ್ನ ಹೆಂಡತಿ ಶಕ್ತಿನಗರದಲ್ಲಿದ್ದು ಆಕೆಯನ್ನು ಕರೆದುಕೊಂಡು ಬರಲು ಧಾರವಾಡದಿಂದ ಶಕ್ತಿನಗರಕ್ಕೆ ತಾನೊಬ್ಬನೆ ತನ್ನ ಪೋರ್ಡ ಟೈಟಾನಿಯಮ್ ಕಾರ ನಂ: ಕೆ.ಎ-30/ಎಂ6300 ನೇದ್ದರಲ್ಲಿ ತಾವರಗೇರಾ ಮುಖಾಂತರ ಹೋಗುತ್ತಿರುವಾಗ ತಾವರಗೇರಾದ ಶೋಭಾ ಪೆಟ್ರೊಲ್ ಬಂಕ್ ಹತ್ತಿರ ತನ್ನ ವಾಹನವನ್ನು ಅತೀವೆಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೊರಟಾಗ ಎದುರುಗಡೆಯಿಂದ ಒಂದು ವಾಹನ ಬಂದಿದ್ದು ಸೈಡ್ ತೆಗೆದುಕೊಳ್ಳಲು ಹೋದಾಗ ಕಾರ್ ಕಂಟ್ರೋಲ್ ಆಗದೇ ರಸ್ತೆಯ ಬಲಬದಿಯ ತೆಗ್ಗಿನಲ್ಲಿ ಪಲ್ಟಿಯಾಗಿದ್ದು ಆಗ ಸಮಯ ಮದ್ಯಾಹ್ನ 2-30 ಗಂಟೆಯಾಗಿರಬಹುದು. ನೋಡಲಾಗಿ ತನ್ನ ತಲೆಯ ಎಡಬದಿಗೆ, ಹಿಂದೆ ರಕ್ತಗಾಯ ಹಾಗೂ ಬೆನ್ನಿಗೆ ಒಳಪೆಟ್ಟಾಗಿದ್ದು ತನ್ನ ಕಾರ ಸಹ ಡ್ಯಾಮೇಜ್ ಆಗ ಬಗ್ಗೆ ತಿಳಿಸಿದರು. ನಂತರ ಆತನನ್ನು 108 ವಾಹನದಲ್ಲಿ ಕುಷ್ಟಗಿ ಸರಕಾರಿ ಆಸ್ಪತ್ರೆಗೆ ಇಲಾಜು ಕುರಿತು ದಾಖಲು ಮಾಡಿದ್ದು ಕಾರಣ ಸದರಿ ಕಾರ ಚಾಲಕ ಗೋಪಾಲ ಶೆಟ್ಟಿರವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ಮುಂತಾಗಿ ನೀಡಿದ ಹೇಳಿಕೆ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿ ತನಿಖೆ ಕೈಕೊಂಡಿದ್ದು ಇರುತ್ತದೆ.
3) ಸಂಚಾರಿ ಪೊಲೀಸ್ ಠಾಣೆ ಕೊಪ್ಪಳ ಗುನ್ನೆ ನಂ. 39/2015  ಕಲಂ 279, 338 ಐ.ಪಿ.ಸಿ ಸಹಿತ 187 ಐ.ಎಂ.ವಿ. ಕಾಯ್ದೆ:.
ದಿನಾಂಕ 27-06-2015 ರಂದು ರಾತ್ರಿ 8-20 ಗಂಟೆಗೆ ಕೊಪ್ಪಳದ ಕಿಮ್ಸ್ ಆಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಕೂಡಲೇ ಆಸ್ಪತ್ರೆಗೆ ಹೋಗಿ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಶ್ರೀ ಈಶ್ವರಪ್ಪ ತಂದೆ ಪರಪ್ಪ ಚಿಕ್ಕೊಪ್ಪ ಇವರ ಹೇಳಿಕೆಯನ್ನು ಪಡೆದುಕೊಂಡಿದ್ದು ಅದರ ಸಾರಾಂಶವೆನೆಂದರೆ, ನಿನ್ನೆ ದಿನಾಂಕ 26-06-2015 ರಂದು ರಾತ್ರಿ 8-15 ಗಂಟೆಗೆ ಫಿರ್ಯಾದಿದಾರರು ಭಾಗ್ಯನಗರ ರಸ್ತೆಯ ಮೇಲೆ ಸಾಯಿಬಾಬ ದೇವಸ್ಥಾನದ ಸಮೀಪ ನಡೆದುಕೊಂಡು ಮನೆಗೆ ಹೋಗುತ್ತಿರುವಾಗ ಹಿಂದಿನಿಂದ ಒಬ್ಬ ಮೋಟಾರ್ ಸೈಕಲ್ ಸವಾರನು ತಾನು ಚಲಾಯಿಸುತ್ತಿರುವ ಮೋಟಾರ್ ಸೈಕಲ್ ವಾಹನವನ್ನು ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಟಕ್ಕರಮಾಡಿ ಅಪಘಾತ ಮಾಡಿದ್ದು ಇದರಿಂದ ಫಿರ್ಯಾದಿದಾರರಿಗೆ ಬಲಕಾಲ ಪಾದದ ಹತ್ತಿರ ಭಾರಿ ಒಳಪೆಟ್ಟು, ಸೊಂಟಕ್ಕೆ ಒಳಪೆಟ್ಟು ಆಗಿದ್ದು, ಮೋಟಾರ್ ಸೈಕಲ್ ಸವಾರನ ಹೆಸರು ವಿಚಾರ ಮಾಡಿದ್ದು, ಅಲ್ಲಿ ಕತ್ತಲು ಇದ್ದ ಕಾರಣ ಮೋಟಾರ್ ಸೈಕಲ್ ನಂಬರ್ ಕಾಣಲಿಲ್ಲ. ನಿನ್ನೆ ನನಗೆ ನೋವು ಕಾಣಿಸದ ಕಾರಣ ಮನೆಗೆ ಹೋಗಿದ್ದು ಇಂದು ಬೆಳಿಗ್ಗೆ ಬಲಗಾಲ ಪಾದದ ಹತ್ತಿರ ಬಹಳಷ್ಟು ಬಾವು ಬಂದು ನಡೆದಾಡಲು ಆಗದ ಕಾರಣ ಶ್ರೀ ಮಹಾದೇವಿ ಎಲುಬು ಕೀಲು ಆಸ್ಪತ್ರೆಯಲ್ಲಿ ಎಕ್ಸರೆ ಮಾಡಿಸಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಕುರಿತು ಇಂದು ತಡವಾಗಿ ಆಸ್ಪತ್ರೆಗೆ ಬಂದು ದಾಖಲಾಗಿರುತ್ತೇನೆ ಅಂತಾ ಮುಂತಾಗಿದ್ದ ಹೇಳಿಕೆ ಫಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆಯನ್ನು ಕೈಕೊಂಡೆನು.


Saturday, June 27, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಬೇವೂರ ಪೊಲೀಸ್ ಠಾಣಾ ಗುನ್ನೆ ನಂ. 69/2015  ಕಲಂ 279, 304(ಎ) ಐ.ಪಿ.ಸಿ :
ದಿನಾಂಕ: 26-06-2015 ರಂದು ಸಂಜೆ 7-00 ಗಂಟೆಯ ಸುಮಾರಿಗೆ ಮೃತ ಶರಣಪ್ಪ ತಂದೆ ಪಕೀರಪ್ಪ ಚಿಕ್ಕಗೌಡ್ರ ವಯ: 35 ವರ್ಷ ಜಾತಿ: ಕುರಬರ ಉ: ಜೇಸ್ಕಾಂ ಕಂಪನಿಯ 33 ಕೆ.ವಿ. ವಿದ್ಯುತ್ ಉಪಕೇಂದ್ರದಲ್ಲಿ ಕೆಲಸ ಹಾಗೂ ಮೋಟಾರ ಸೈಕಲ ನಂ: ಕೆ.ಎ-37/ಎಕ್ಷ-5919 ನೇದ್ದರ ಸವಾರ ಸಾ: ವಜ್ರಬಂಡಿ ತಾ: ಯಲಬುರ್ಗಾ  ಜಿ: ಕೊಪ್ಪಳ.  ಆರೋಪಿತನು ತಾನು ನಡೆಯಿಸುತ್ತಿದ್ದ ಮೋಟಾರ ಸೈಕಲ ನಂ: ಕೆ.ಎ-37/ಎಕ್ಷ-5919 ನೇದ್ದನ್ನು ದಮ್ಮೂರು-ಜೀ. ಜರಕುಂಟಿ ರಸ್ತೆಯ ಮೇಲೆ ಸದರಿ ಮೋಟಾರ್ ಸೈಕಲನ್ನು ದಮ್ಮೂರು ಗ್ರಾಮದ ಕಡೆಯಿಂದ ಜೀ. ಜರಕುಂಟಿ ಗ್ರಾಮದ ಕಡೆಗೆ ಅತೀಜೋರಾಗಿ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ದಮ್ಮೂರು ಸೀಮಾದಲ್ಲಿಯ ಪರಸಪ್ಪ ಕುಡಗುಂಟಿ ಇವರ ಹೋಲದ ಹತ್ತಿರ ಬರುತ್ತಿರುವಾಗ ಮೋಟಾರ್ ಸೈಕಲ್ ನಿಯಂತ್ರಣ ತಪ್ಪಿ ರಸ್ತೆಯ ಮೇಲೆ ಬಿದ್ದಿದ್ದರಿಂದ ಸದರಿಯವನ ಹಣೆಗೆ ಮತ್ತು ತಲೆಗೆ ಭಾರಿ ಸ್ವರೂಪದ ಗಾಯ ಹಾಗೂ ಕೈ-ಕಾಲುಗಳಿಗೆ ತೆರಚಿದ ನಮೂನೆಯ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ.  ಅಂತಾ ಮುಂತಾಗಿ ಇದ್ದ ಪಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ. 
2) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 137/2015  ಕಲಂ 78(3) Karnataka Police Act
ದಿನಾಂಕ. 26-06-2015 ರಂದು 09-00 ಪಿ.ಎಂ.ಕ್ಕೆ ಫಿರ್ಯಾದಿದಾರರಾದ ಮಾನ್ಯ ಕೆ.ಜಯಪ್ರಕಾಶ ಪಿ.ಎಸ್.ಐ. ಮುನಿರಾಬಾದ  ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿ ನೀಡಿದ್ದು ಸಾರಾಂಶವೆನಂದರೆ. ದಿನಾಂಕ. 26-06-2015 ರಂದು 6-45 ಪಿ.ಎಂ.ಕ್ಕೆ ಫಿರ್ಯಾದಿದಾರರು ಮತ್ತು ತಮ್ಮ ಸಿಬ್ಬಂದಿಯವರು ಹಿರೇ ಬಗನಾಳ ಗ್ರಾಮದ ದುರ್ಗಾ ದೇವಿ ದೇವಸ್ಥಾದ ಹತ್ತಿರ ಮಟಕಾ ಜೂಜಾಜ ನಡೆದ ಬಗ್ಗೆ ಮಾಹಿತಿ ಇದ್ದ ಪ್ರಕಾರ ಅಲ್ಲಿಗೆ ಹೋಗಿ ಸಿಬ್ಬಂದಿ ಮತ್ತು ಪಂಚರೊಂದಿಗೆ ಮಟಕಾ ಜೂಜನಾಟದಲ್ಲಿ ತೊಡಿಗಿದ್ದ ಆರೋಪಿತನಿಗೆ ದಾಳಿ ಮಾಡಿ ಹಿಡಿದುಕೊಂಡು ಆರೋಪಿ ನಿಂಗಪ್ಪ ತಾಯಿ ಹುಲಿಗೆವ್ವ ಮಾದಿನೂರ ಸಾ: ಹಿರೇಬಗನಾಳ ಕೊಪ್ಪಳ ಇತನಿಂದ ಜೂಜಾಟದ ಸಾಮಗ್ರಿಗಳಾದ ಮಟನಾ ನಂಬರ 1 ಮಟಕಾ ನಂಬರ ಬರೆದ ಚೀಟಿ, ಒಂದು ಬಾಲಪೆನ್ನು ಮತ್ತು ಜೂಜಾಟದ ನಗದು ಹಣ 2310 - 00 ರೂ. ಗಳನ್ನು ಜಪ್ತ ಮಾಡಿಕೊಂಡು ಠಾಣೆಗೆ ಬಂದು ಆರೋಪಿತನ ವಿರುದ್ದ ಕ್ರಮ ಜರುಗಿಸಲು ನೀಡಿದ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ.
3) ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ. 71/2015  ಕಲಂ 279, 337, 338 ಐ.ಪಿ.ಸಿ :
ದಿನಾಂಕ: 26-06-2015 ರಂದು ಮಧ್ಯಾಹ್ನ 5-00 ಗಂಟೆಗೆ ಮೈನಳ್ಳಿ ಕ್ರಾಸ್ ಹತ್ತಿರ ರಸ್ತೆ ಅಫಘಾತವಾದ ಬಗ್ಗೆ ಪೋನ್ ಮುಖಾಂತರ ಮಾಹಿತಿ ಬಂದ ಮೇರೆಗೆ ಕೂಡಲೇ ಘಟನಾ ಸ್ಥಳಕ್ಕೆ ಬೇಟಿ ನೀಡಿ, ಪರಿಶೀಲಿಸಿದ್ದು, ಆರೋಪಿತನಿಗೆ ಭಾರಿ ಸ್ವರೂಪದ ರಕ್ತಗಾಯ ವಾಗಿದ್ದು ಇರುತ್ತದೆ. ನಂತರ ಗಾಯಾಳುವಿಗೆ 108 ವಾಹನದಲ್ಲಿ ಹಾಕಿ ಚಿಕಿತ್ಸೆ ಕುರಿತು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿದ್ದು, ನಂತರ ಅಲ್ಲಿಯೇ ಇದ್ದ ಘಟನೆಯ ಪ್ರತ್ಯೇಕ್ಷದಶರ್ಿಯಾದ ಫಿರ್ಯಾದಿದಾರರು ತಮ್ಮ ಹೇಳಿಕೆ ಫಿರ್ಯಾದಿಯನ್ನು ನೀಡಿದ್ದು, ಅದರ ಸಾರಾಂಶವೆನೆಂದರೆ, ಇಂದು ದಿನಾಂಕ: 26-06-2015 ರಂದು ಮಧ್ಯಾಹ್ನ 4-30 ಗಂಟೆಯ ಸುಮಾರಿಗೆ ತಾನು ಅಳವಂಡಿ-ಹಿರೇಸಿಂದೋಗಿ ರಸ್ತೆಗೆ ಹೊಂದಿಕೊಂಡಿರುವ ತಮ್ಮ ಹೊದಲ್ಲಿ ಕೆಲಸ ಮಾಡುತ್ತಿದ್ದಾಗ, ಅಳವಂಡಿ ಕಡೆಯಿಂದ ಆರೋಪಿತನು ತಾನು ನಡೆಸುತ್ತಿದ್ದ ಮೋಟರ್ ಸೈಕಲ್ ನಂ: ಕೆಎ-37 ಎಕ್ಸ್-3591 ನೇದ್ದನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ವೇಗದ ಮೇಲೆ ನಿಯಂತ್ರಣ ತಪ್ಪಿ ರಸ್ತೆಯ ಮೇಲೆ ಜೋರಾಗಿ ಬಿದ್ದ ಪರಿಣಾಮ, ಆರೋಪಿನಿಗೆ ಬಲಗಡೆ ಕಣ್ಣಿನ ಮೇಲೆ ಹುಬ್ಬಿಗೆ, ಬಲಗಡೆಯ ಹಣೆಯ ಮೇಲೆ ತಲೆಗೆ ಭಾರಿ ರಕ್ತಗಾಯವಾಗಿದ್ದು, ಅಲ್ಲದೇ ಎರಡೂ ಕೈಗಳಿಗೆ, ಮೂಗಿಗೆ, ಹೊಟ್ಟೆಗೆ, ಎರಡೂ ಕಾಲುಗಳಿಗೆ ತೆರಚಿದ ರಕ್ತಗಾಯವಾಗಿದ್ದು ಇರುತ್ತದೆ. ಕಾರಣ ಸದರಿ ಸವಾರನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಕೊಟ್ಟ ಫಿರ್ಯಾದಿಯನ್ನು ಪಡೆದುಕೊಂಡು ಸಂಜೆ 8-30 ಗಂಟೆಗೆ ವಾಪಸ್ ಠಾಣೆಗೆ ಬಂದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
4) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 152/2015  ಕಲಂ 279, 338 ಐ.ಪಿ.ಸಿ ಸಹಿತ 187 ಐ.ಎಂ.ವಿ. ಕಾಯ್ದೆ:
ದಿನಾಂಕ 26.06.2015 ರಂದು ಸಾಯಂಕಾಲ 5:00 ಗಂಟೆಗೆ  ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕುರಿತು ದಾಖಲಾಗಿದ್ದ ಪಿರ್ಯಾದಿದಾರರಾದ ಯಮನಪ್ಪ ಕನ್ಯಾಹಾಳ್ ಸಾ: ಗಾಣದಾಳ ಇವರು ನೀಡಿದ ಹೇಳಿಕೆ ಪಿರ್ಯಾದಿ ಸಾರಾಂಶವೇನೆಂದರೆ ಇಂದು ದಿನಾಂಕ 26.06.2015 ರಂದು ಬೆಳಿಗ್ಗೆ 9:00 ಗಂಟೆಯ ಸುಮಾರಿಗೆ ಪಿರ್ಯಾದಿದಾರರು ತನ್ನ ಹೊಸ ಹಿರೋ ಸ್ಲಂಡೆರ್ ಪ್ಲಸ್ ಮೋ.ಸೈ ಹಿಂದೆ ಹುಚ್ಚಪ್ಪ ಇತನನ್ನು ಕೂಡಿಸಿಕೊಂಡು ಕೊಪ್ಪಳದಿಂದ ಇರಕಲಗಡಾ ಗ್ರಾಮದ ಕಡೆಗೆ ಹೊರಟಿದ್ದಾಗ ಓಜನಹಳ್ಳಿ ಕ್ರಾಸ್ ಹತ್ತಿರ ಎದುರುಗಡೆಯಿಂದ ಒಬ್ಬ ಟಾಟಾ ಏಸಿ ನಂ ಕೆ.ಎ-37/ಎ-938 ನೇದ್ದರ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ರಾಂಗ್ ಸೈಡಗೆ ಬಂದು ಪಿರ್ಯಾದಿಯ ಮೋ.ಸೈಗೆ ಟಕ್ಕರಕೊಟ್ಟು ಅಪಘಾತ ಮಾಡಿದ್ದರಿಂದ ಮೋ.ಸೈ ಚಲಾಯಿಸುತ್ತಿದ್ದ ಪಿರ್ಯಾಧಿಗೆ ಭಾರಿ ಸ್ವರೂಪದ ಗಾಯವಾಗಿದ್ದು ಇರುತ್ತದೆ. ಅಪಘಾತ ಪಡಿಸಿದ ನಂತರ ಟಾಟಾ ಏಸಿ ಚಾಲಕನ್ನು ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದು  ಇರುತ್ತದೆ. ಕಾರಣ ಆರೋಪಿತನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ಪಿರ್ಯಾದಿಯನ್ನು  ಪಡೆದುಕೊಂಡು ವಾಪಾಸ ಠಾಣೆಗೆ ಸಾಯಂಕಾಲ 5:30 ಗಂಟೆಗೆ ಬಂದು ಪಿರ್ಯಾದಿ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 152/2015  ಕಲಂ 279, 338 ಐ.ಪಿ.ಸಿ ಸಹಿತ 187 ಐ.ಎಮ್.ವಿ ಕಾಯ್ದೆ ನೇದ್ದರಲ್ಲಿ ಪ್ರಕರಣ ದಾಖಲಿಸಿ ತನಿಖೆಕೈಗೊಂಡಿದ್ದು ಇರುತ್ತದೆ.
5) ಸಂಚಾರಿ ಪೊಲೀಸ್ ಠಾಣೆ ಗಂಗಾವತಿ ಗುನ್ನೆ ನಂ. 24/2015  ಕಲಂ 279, 337, 338 ಐ.ಪಿ.ಸಿ  
ದಿನಾಂಕ 26-06-2015 ರಂದು ಬೆಳಗ್ಗೆ 08-45 ಗಂಟೆಗೆ ನಾನು ಆರಾಳ ಗ್ರಾಮದಿಂದ ವಡ್ಡರಹಟ್ಟಿ ಕ್ಯಾಂಪ್ಗೆ ಬಂದು ಅಲ್ಲಿ ವಾಸವಿರುವ 8 ಮಕ್ಕಳನ್ನು ಪ್ರತಿ ದಿನ ಸದರಿ ಮಕ್ಕಳು ವಿದ್ಯಾಭ್ಯಾಸ ಮಾಡುವ ಗಂಗಾವತಿಯಲ್ಲಿರುವ ಶಾಲೆಗಳಿಗೆ ಬಿಡುತ್ತೆನೆ ಪ್ರತಿ ದಿನದಂತೆ ನಾನು ಇಂದು ಬೆಳಗ್ಗೆ 09-00 ಗೆ ವಡ್ಡರಹಟ್ಟಿ ಕ್ಯಾಂಪ್ ನಲ್ಲಿರುವ ಮಕ್ಕಳನ್ನು ನನ್ನ ಆಟೋ ಕೆಎ37 -8939 ನೇದ್ದರಲ್ಲಿ ಕರೆದುಕೊಂಡು ನನ್ನ ವಾಹನವನ್ನು ಚಾಲಾಯಿಸಿಕೊಂಡು ವಡ್ಡರಹಟ್ಟಿಯಿಂದ ಗಂಗಾವತಿಯ ಕಡೆಗೆ ಅಶೋಕ ಹೋಟಲ್ ಹತ್ತಿರ ಬರುವಾಗ ಸಿಬಿಎಸ್ ವೃತ್ತದ ಕಡೆ ಇಂದ ಮಾರುತಿ ಸುಜಿಕಿ ಸಿಫ್ಟ್ ಕಾರು ಕೆಎ 37 ಎಮ್ 8409 ನೇದ್ದರ ಚಾಲಕನಾದ ಬಸವರಾಜ ಸಾ:ಮರಳಿ ಇತನು ತನ್ನ ವಾಹನವನ್ನು ಅತೀಜೋರಾಗಿ ಮತ್ತು ಅಲಕ್ಪ್ಷತನದಿಂದ ಚಾಲನೆ ಮಾಡಿಕೊಂಡು ಅಶೋಕ ಹೋಟಲ್ ಒಳಗಡೆ ಹೋಗಲು ತನ್ನ ವಾಹನವನ್ನು ಬಲಕ್ಕೆ  ತಿರುಗಿಸಿ ನನ್ನ ಆಟೋದ ಬಲ ಭಾಗಕ್ಕೆ ಟಕ್ಕರ್ ಕೊಟ್ಟಿದ್ದರಿಂದ ಅದರಲ್ಲಿ ಇದ್ದ 8 ಶಾಲೆ ಮಕ್ಕಳಲ್ಲಿ 3 ಮಕ್ಕಳಾದ 1] ಉಷಾ ತಂದೆ ಕೆ.ದೇವರಾಜ ವ;11 ಜಾ: ಕುಂಬಾರ ಸಾ: ವಡ್ಡಹಟ್ಟಿ ಕ್ಯಾಂಪ್, ಇವಳಿಗೆ ಬಲಗಣ್ಣಿನ ಹತ್ತಿರ ರಕ್ತಗಾಯವಾಗಿದ್ದು 2] ಅನೀಲ್ ಕುಮಾರ ತಂದೆ ಕೆ ನಾಗೇಶ ವ:10 ಜಾ: ಕುಂಬಾರ ಸಾ: ವಡ್ಡಹಟ್ಟಿ ಕ್ಯಾಂಪ್, ಇವನಿಗೆ ಬಲಗಾಲ ಮೊಣಕಾಲ ಕೆಳಗೆ ರಕ್ತಗಾಯವಾಗಿದ್ದು ಇರುತ್ತದೆ.3] ನವೀನ್ ಕುಮಾರ ವ:10 ,ರವರಿಗೆ ಸಾದಾ ಮತು ಗಂಭೀರವಾದ ಗಾಯವಾಗಿದ್ದು ಕೂಡಲೆ ನಾನು ಸದರಿ ಗಾಯವಾದ ಮಕ್ಕಳ ಪಾಲಕರಿಗೆ ಪೊನ್ ಮುಖಂತರ ವಿಷಯ ತಿಳಿಸಿದೆನು ನಂತರ ಅಲ್ಲಿ ಹಾಜರಿದ್ದ ರುದ್ರೇಶ ತಂದೆ ಶರಣಪ್ಪ ಆಟೋ ಚಾಲಕ 108 ವಾಹನಕ್ಕೆ ಪೊನ್ ಮಾಡಿ ತಿಳಿಸಿದನು ಅಷ್ಟರಲ್ಲಿ  ಉಷಾಳ ಪಾಲಕರು ಸ್ಥಳಕ್ಕೆ ಬಂದು ಗಂಭೀರ ಸ್ವರೂಪದ ಗಾಯವಾಗಿದ್ದ ಉಷಾ ಮತ್ತು ಅನೀಲ್ ಕುಮಾರ ರವರನ್ನು ಚಿನಿವಾಲ ಆಸ್ಪತ್ರೆಗೆ ಕರೆದು ಕೊಂಡು ಹೋಗಿ ದಾಖಲು ಮಾಡಿದ್ದು ಹಾಗು ಸಾದ ಸ್ವರೂಪದ ಗಾಯವಾಗಿದ್ದ ನವೀನ್ ನನ್ನು 108 ವಾಹನದಲ್ಲಿ ಕರೆದುಕೊಂಡು ಬಂದು ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದು ಇರುತ್ತದೆ.   ಸದರಿ ಘಟಣೆಗೆ ಕಾರಣವಾದ ಮಾರುತಿ ಸುಜಿಕಿ ಸಿಫ್ಟ್ ಕಾರು ಕೆಎ 37 ಎಮ್ 8409 ನೇದ್ದರ ಚಾಲಕ ಬಸವರಾಜ ಸಾ: ಮರಳಿ ತನ್ನ ವಾಹನವನ್ನು ಅತೀಜೋರಾಗಿ ಮತ್ತು ಅಲಕ್ಷತನದಿಂದ ಚಾಲನೆ ಮಾಡಿಕೊಂಡು ಬಂದು ಟಕ್ಕರ ಕೊಟ್ಟು ಅಪಘಾತ ಮಾಡಿದ್ದು ಸದರಿ ಅಪಘಾತ ಮಾಡಿದ  ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ನೀಡಿದ ದೂರಿನ ಮೇಲಿಂದ ಪ್ರಕರಣ ತನಿಖೆಕೈಗೊಂಡಿದ್ದು ಇರುತ್ತದೆ.
6) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 151/2015  ಕಲಂ 379 ಐ.ಪಿ.ಸಿ:.

ದಿನಾಂಕ 26.06.2015 ರಂದು ಮದ್ಯಾನ 1:45 ಗಂಟೆಯ ಸುಮಾರಿಗೆ ಪಿರ್ಯಾದಿದಾರ ತಿರುಮಲನ ರವರು ಠಾಣೆಗೆ ಹಾಜರಾಗಿ ಒಂದು ಲಿಖಿತ ಪಿರ್ಯಾದಿಯನ್ನು ಹಾಜರು ಪಡಿಸಿದ್ದು ಅದರ ಸಾರಾಂಶವೇನೆಂದರೆ ದಿನಾಂಕ 25.06.2015 ರಂದು ರಾತ್ರಿ 8:30 ಗಂಟೆಯಿಂದ ರಾತ್ರಿ 08:42 ಗಂಟೆಯ ನಡುವಿನ ಅವಧಿಯಲ್ಲಿ ಕಲ್ಯಾಣಿ ಫ್ಯಾಕ್ಟ್ರಿಯ ಆವರಣದ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಕಾರ ನಂ ಕೆ.ಎ-37/ಎಮ್.ಎ-0949 ಅ.ಕಿ 3 ಲಕ್ಷ  ರೂಪಾಯಿಗಳಷ್ಟು ಕಿಮ್ಮತ್ತಿನವುಗಳನ್ನು ಯಾರೋ ಅಪರಿಚಿತ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದು ಇರುತ್ತದೆ. ಕಾರಣ ಕಳುವಾದ ಕಾರ ಮತ್ತು ಕಳುವು ಮಾಡಿಕೊಂಡು ಹೋದ ಕಳ್ಳರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

Tuesday, June 9, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕುಷ್ಟಗಿ ಪೊಲೀಸ್ ಠಾಣಾ ಗುನ್ನೆ ನಂ. 93/2015  ಕಲಂ 279, 337, 338 ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:
ದಿನಾಂಕ 08-06-2015 ರಂದು ಮುಂಜಾನೆ 9-00 ಗಂಟೆಗೆ ಕುಷ್ಟಗಿ ಸರಕಾರಿ ಆಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಕೂಡಲೆ ಸರಕಾರಿ ಆಸ್ಪತ್ರೆಗೆ ಭೇಟಿಕೊಟ್ಟು ಆಸ್ಪತ್ರೆಯಲ್ಲಿ ಇಲಾಜು ಪಡೆಯುತ್ತಿದ್ದ ಪಿರ್ಯಾದಿ ಗಾಯಾಳು ಅಬ್ದುಲ್ ರಜಾಕ ತಂದೆ ಬಡೇಸಾಬ ಅತ್ತಾರ ವಯ: 57 ಜಾ: ಮುಸ್ಲಿಂ ಉ: ಎಲೆಕ್ಟ್ರೀಶಿಯನ್  ಸಾ: ಮನಗುಳಿ ಅಗಸಿ ವಿಜಯಪೂ ರವರ ಹೇಳಿಕೆ ಪಡೆದುಕೊಂಡಿದ್ದರ ಸಾರಾಂಶ ವೆನೆಂದರೆ ಚಿಕ್ಕಬಳ್ಳಾಪೂರದಲ್ಲಿ ಎಲೆಕ್ಟ್ರಿಶಿಯನ ಸಾಮಾನುಗಳನ್ನು ತರುವ ಕುರಿತು ಟಾ.ಟಾ ಎ.ಸಿ ನಂ ಕೆಎ 28/ಬಿ-0755 ನೇದ್ದನ್ನು ಬಾಡಿಗೆಗೆ ತೆಗೆದುಕೊಂಡಿದ್ದು  ಅದರ ಚಾಲಕ ರಾಜಶೇಖರ ತಂದೆ ಬಸವರಾಜ ಪಾಟೀಲ್ ಸಾ: ಜಲನಗರ ವಿಜಯಪೂರ ಅಂತಾ ಇದ್ದು ಸದರಿ ಸಾಮಾನುಗಳನ್ನು ತೆಗೆದುಕೊಂಡು ಬರುವ ಕುರಿತು ಟಾ.ಟಾ ಎ.ಸಿ ವಾಹನದಲ್ಲಿ ನಾನು ಮತ್ತು ಟಾ.ಟಾ ಎ.ಸಿ ಮಾಲೀಕರಾದ ನಂದೀಶ ಹಾಗೂ ತನ್ನ ಮಗ ಮಹಿಬೂಬ ಎಲ್ಲರೂ ಕೂಡಿ ಇಂದು ಬೆಳಗು ಜಾವ 12-30 ಗಂಟೆಗೆ ವಿಜಯಪೂರವನ್ನು ಬಿಟ್ಟೆವು ಸದರಿ ವಾಹನವನ್ನು ಅದರ ಚಾಲಕ ರಾಜಶೇಖರ ಈತನು ನಡೆಯಿಸುತ್ತಿದ್ದನು ನಾವು ಇಲಕಲ್ ಕುಷ್ಟಗಿ ಮಾರ್ಗವಾಗಿ ಹೊಸಪೇಟೆ ಕಡೆಗೆ ಹೋಗುತ್ತಿದ್ದಾಗ ನಮ್ಮ ಟಾ.ಟಾ ಎ.ಸಿ ಚಾಲಕ ವಾಹನವನ್ನು ಅತಿವೇಗವಾಗಿ ಅಲಕ್ಷತನದಿಂದ ನಡೆಯಿಸಿಕೊಂಡು ಹೊರಟಿದ್ದು ಕುಷ್ಟಗಿ ದಾಟಿ ಹೊಸಪೇಟೆ ಕಡೆಗೆ ಹೋಗುತ್ತಿದ್ದಾಗ ಬೆಳಗುಜಾವ 3-30 ಗಂಟೆ ಸುಮಾರಿಗೆ ರಾಮದೇವ ಡಾಬಾದಿಂದ ಸ್ವಲ್ಪ ಮುಂದೆ ಹೊಸಪೇಟೆ ಕಡೆಗೆ ಮುಂದೆ ಹೋಗುತ್ತಿದ್ದ ಯಾವುದೋ ಒಂದು ವಾಹನಕ್ಕೆ ಹಿಂದಿನಿಂದ ಟಕ್ಕರಕೊಟ್ಟು ಅಪಘಾತ ಪಡಿಸಿ ಸ್ವಲ್ಪ ಮುಂದೆ ಹೋಗಿ ವಾಹನವನ್ನು ನಿಲ್ಲಿಸಿದನು ನಮ್ಮ ವಾಹನ ಅಪಘಾತ ಪಡಿಸಿದ ವಾಹನ ಹಾಗೆಯೇ ಹೊರಟು ಹೋಗಿದ್ದು ಅದು ಯಾವುದು ಅಂತಾ ಗೊತ್ತಾಗಿರುವದಿಲ್ಲಾ ನೋಡಲಾಗಿ ನನಗೆ ಸದರಿ ಅಪಘಾತದಿಂದ ಬಲಗೈಗೆ,ಮತ್ತು ಎಡಗೈಗೆ ತೆರಚಿದಗಾಯ ಹಾಗೂ ಕಿವಿಗೆ ತೀವ್ರ ಸ್ವರೂಪದ ರಕ್ತಗಾಯವಾಗಿತ್ತು ಮತ್ತು ನಮ್ಮ ವಾಹನದಲ್ಲಿದ್ದ ವಾಹನದ ಮಾಲೀಕ ನಂದಿಶನಿಗೆ ಮತ್ತು ನನ್ನ ಮಗ ಮಹಿಬೂಬನಿಗೆ  ಯಾವುದೇ ಗಾಯವಗೈರೆ ಆಗಿರುವದಿಲ್ಲಾ ನಂತರ ಅಪಘಾತ ಪಡಿಸಿದ ನಂತರ ಅದರ ಚಾಲಕ ರಾಜಶೇಖರ ಈತನು ವಾಹನವನ್ನು ಬಿಟ್ಟು ಓಡಿ ಹೋಗಿದ್ದು ಅಲ್ಲಿಗೆ ಬಂದ ಯಾವುದೋ ಒಂದು ಖಾಸಗಿ ವಾಹನದಲ್ಲಿ ಇಲಾಜಕ್ಕಾಗಿ ಬಂದು ಸೇರಿಕೆಯಾಗಿದ್ದು ಇರುತ್ತದೆ ಕಾರಣ ಸದರಿ ಟಾ.ಟಾ ಎ.ಸಿ ಚಾಲಕ ರಾಜಶೇಖರ ಈತನ ವಿರುದ್ದ ಸೂಕ್ತ ಕಾನೂನು ಕ್ರಮಕ್ಕಾಗಿ ವಿನಂತಿ ಅಂತಾ ಮುಂತಾಗಿದ್ದ ಹೇಳಿಕೆ ಪಿರ್ಯಾದಿಯನ್ನು ಆಸ್ಪತ್ರೆಯಲ್ಲಿ ಪಡೆದುಕೊಂಡು ವಾಪಾಸ್ ಠಾಣೆಗೆ 10-30 ಗಂಟೆಗೆ ಬಂದು ಇದರ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 93/2015 ಕಲಂ 279,337,338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದೆ.
2) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ಗುನ್ನೆ ನಂ. 138/2015  ಕಲಂ 279, 337, 338 ಐ.ಪಿ.ಸಿ
ದಿ:08-06-2015 ರಂದು ಸಾಯಂಕಾಲ 4-15 ಗಂಟೆಗೆ ಜಿಲ್ಲಾ ಆಸ್ಪತ್ರೆಯಿಂದ ವಾಹನ ಅಪಘಾತದಲ್ಲಿ ದುಖಾಃಪಾತಗೊಂಡವರು ಚಿಕಿತ್ಸೆಗೆ ದಾಖಲಾದ ಬಗ್ಗೆ ಎಮ್.ಎಲ್.ಸಿ ಸ್ವೀಕೃತವಾಗಿದ್ದು, ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಶರಣಪ್ಪ ಗೋಡೆಕಾರ ಸಾ: ಮಸಬಹಂಚಿನಾಳ ಇವರನ್ನು ವಿಚಾರಿಸಿ ಹೇಳಿಕೆ ಫಿರ್ಯಾದಿಯನ್ನು ಪಡೆದುಕೊಂಡಿದ್ದು ದೂರಿನ ಸಾರಾಂಶವೇನೆಂದರೇ, ಇಂದು ದಿ:08-06-2015 ರಂದು ಮಧ್ಯಾಹ್ನ ನನ್ನ ಸ್ನೇಹಿತ ಹನುಮರೆಡ್ಡಿ ಇತನು ಕೊಪ್ಪಳದಲ್ಲಿ ಕೆಲಸವಿದೆ ಅಂತಾ ಹೇಳಿ ಹನುಮರೆಡ್ಡಿ ಇವರ ಮೋಟಾರ ಸೈಕಲ್ ನಂ: ಕೆಎ-35/ಆರ್-2863 ನೇದ್ದರಲ್ಲಿ ಕುಳಿತುಕೊಂಡು ಕೊಪ್ಪಳಕ್ಕೆ ಬರುತ್ತಿದ್ದೆವು. ಹನುಮರೆಡ್ಡಿ ಇತನು ಮೋಟಾರ ಸೈಕಲ್ ಚಾಲನೆ ಮಾಡುತ್ತಿದ್ದನು. ನಂತರ ಮಧ್ಯಾಹ್ನ 3-00 ಗಂಟೆಯ ಸುಮಾರಿಗೆ ಗದಗ-ಕೊಪ್ಪಳ ಎನ್,.ಎಚ್-63 ರಸ್ತೆಯ ಹಲಿಗೇರಿ ಸಮೀಪ ಹೊರಟಿದ್ದಾಗ, ಅದೇವೇಳೆಗೆ ಕೊಪ್ಪಳ ಕಡೆಯಿಂದ ಟಾಟಾ ಜಿಪ್ ನಂ: ಕೆಎ-37/ಎ-2900 ನೇದ್ದರ ಚಾಲಕನು ತನ್ನ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷ್ಯತನದಿಂದಾ ಓಡಿಸಿಕೊಂಡು ಮಾನವ ಜೀವಕ್ಕೆ ಅಪಾಯಕರವಾಗುವ ರೀತಿಯಲ್ಲಿ ಓಡಿಸುತ್ತಾ ಒಮ್ಮಲೆ ರಾಂಗಸೈಡ್ ಬಂದವನೇ ನಮ್ಮ ಮೋಟಾರ ಸೈಕಲ್ ಗೆ ಟಕ್ಕರ ಕೊಟ್ಟು ಅಪಘಾತ ಮಾಢಿದ್ದರಿಂದ ಈ ಅಪಘಾತದಲ್ಲಿ ನನಗೆ ಬಲಕಾಲತೊಡೆಗೆ ಭಾರಿ ರಕ್ತಗಾಯವಾಗಿ ಮೂಳೆ ಮುರಿದಂತಾಗಿರುತ್ತದೆ. ಮತ್ತು ಸ್ನೇಹಿತ ಹನುಮರೆಡ್ಡಿ ಇತನ ತಲೆಗೆ ಭಾರಿ ರಕ್ತಗಾಯವಾಗಿದ್ದು, ಅಲ್ಲದೇ ಬಲಗಡೆ ರಟ್ಟೆಗೆ ಮತ್ತು ಎದೆಯ ಎಡಭಾಗದಲ್ಲಿ ರಕ್ತಗಾಯವಾಗಿರುತ್ತದೆ. ಕಾರಣ ಅಪಘಾತ ಮಾಡಿದ ಟಾಟಾ ಜಿಪ್ ನಂ: ಕೆಎ-37/ಎ2900 ನೇದ್ದರ ಚಾಲಕ ಶಿವಕುಮಾರ ಕೊಟಗಿ ಸಾ: ಹಳ್ಳಿಕೇರಿ ತಾ: ಮುಂಡರಗಿ ಇತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರನ್ನು ಸಾಯಂಕಾಲ 5-30 ಗಂಟೆಗೆ ಪಡೆದುಕೊಂಡು ವಾಪಾಸ್ ಠಾಣೆಗೆ ಸಾಯಂಕಾಲ 6-00 ಗಂಟೆಗೆ ಬಂದು ಸದರಿ ದೂರಿನ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
3) ಯಲಬುರ್ಗಾ ಪೊಲೀಸ್ ಠಾಣಾ ಗುನ್ನೆ ನಂ. 59/2015  ಕಲಂ 279, 338 ಐ.ಪಿ.ಸಿ:
ದಿನಾಂಕ: 08-06-2015 ರಂದು ಮುಂಜಾನೆ 11-15 ಗಂಟೆ ಸುಮಾರಿಗೆ ಪಿರ್ಯಾದಿದಾರನು ತನ್ನ ಮೋಟಾರ್ ಸೈಕಲ್ ನಂ. ಕೆಎ-26/ಯು-5361 ನೇದ್ದರ ಮೇಲೆ ಗಜೇಂದ್ರಗಡದಿಂದ ಚಿಕ್ಕಬೋಮ್ಮನಾಳ, ಹಿರೇಬಿಮ್ಮನಾಳ, ಉಪ್ಪಲದಿನ್ನಿ ಮುಂತಾದ ಗ್ರಾಮಗಳಲ್ಲಿಯ ಹತ್ತಿ ಪ್ಲಾಟಗಳನ್ನು ಪರಿವೀಕ್ಷಣೆ ಮಾಡಲು ವಜ್ರಬಂಡಿ ಮುಖಾಂತರ ವಜ್ರಬಂಡಿ-ಮಂಡಲಮರಿ ರಸ್ತೆಯ ಮೇಲೆ ವಜ್ರಬಂಡಿ ಸೀಮಾದಲ್ಲಿಯ ಶರಣಪ್ಪ ಹುಡೇದ ಇವರ ಹೋಲದ ಹತ್ತಿರ ಸಾಲಭಾವಿ ಕ್ರಾಸನಿಂದ 200 ಮೀಟರ್ ಪೂರ್ವದಲ್ಲಿ ತಿರುವಿನಲ್ಲಿ ಹೋಗುತಿದ್ದಾಗ ಅದೇವೇಳೆಗೆ ಆರೋಪಿತನು ತಾನು ಚಲಾಯಿಸುತಿದ್ದ ಜೀಪ್ ನಂ. ಕೆಎ-23/ಎಂ-4452 ನೇದ್ದನ್ನು ಮಂಡಲಮರಿ ಕಡೆಯಿಂದ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಎದುರುಗಡೆಯಿಂದ ಡಿಕ್ಕಿ ಹೊಡೆಸಿ ಅಪಘಾತಪಡಿಸಿದ್ದು ಇರುತ್ತದೆ. ಇದರಿಂದ ಪಿರ್ಯಾದಿದಾರನಿಗೆ ಭಾರಿ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ ಅಂತಾ ಮುಂತಾಗಿ ಪಿರ್ಯಾದಿಯ  ಸಾರಾಂಶದ ಯಲಬುರ್ಗಾ ಠಾಣೆ ಗುನ್ನೆ ನಂ: 59/2015 ಕಲಂ. 279, 338 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
4) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 164/2015  ಕಲಂ 114, 415, 417, 420, 463, 468, 469 ಸಹಿತ 34 ಐ.ಪಿ.ಸಿ:

ದಿನಾಂಕ: 08-06-2015 ರಂದು ಸಂಜೆ 5:00 ಗಂಟೆಗೆ ಮಾನ್ಯ ಸಿಪಿಐ ಸಾಹೇಬರು ಗಂಗಾವತಿ ಗ್ರಾಮೀಣ ವೃತ್ತ ರವರ ಜ್ಞಾಪನ ಪತ್ರ ಸಂ: /ಉ.ಪ್ರ/2015461 ದಿನಾಂಕ: 05-06-2015 ರನ್ವಯ ಮಾನ್ಯ ನ್ಯಾಯಲಯದ ಖಾಸಗಿ ಫಿರ್ಯಾದಿ ಸಂ: 137/2015 ನೇದ್ದು ಸ್ವೀಕೃತವಾಗಿದ್ದು ಸದರಿ ದೂರನ್ನು ಶ್ರೀ ರಮೇಶ ಮ್ಯಾದರ ತಂದೆ ನೀಲಪ್ಪ ಮ್ಯಾದಾರ, 40 ವರ್ಷ, ವ್ಯಾಪಾರ ಸಾ: ಕಾರಟಗಿ ತಾ: ಗಂಗಾವತಿ ಇವರು ಸಲ್ಲಿಸಿದ್ದು, ಅದರ ಸಾರಾಂಶ ಏನಂದರೆ, ಶ್ರೀರಾಮನಗರದಲ್ಲಿ ಆರೋಪಿತರಾದ (1) ಶ್ರೀಮತಿ ಯಮುನಾಬಾಯಿ ಗಂಡ ಬೇಲೂರಪ್ಪ 60 ವರ್ಷ, ಸಾ: ಶ್ರೀರಾಮನಗರ (2) ಬೇಲೂರಪ್ಪ 65 ವರ್ಷ, ಸಾ: ಶ್ರೀರಾಮನಗರ ಮತ್ತು (3) ಸುಬಾಸ ತಂದೆ ಬೇಲೂರಪ್ಪ 30 ವರ್ಷ, ಸಾ: ಶ್ರೀರಾಮನಗರ ಇವರುಗಳು ತಮ್ಮ ಪ್ಲಾಟ್ ನಂ: 58/12, 58/13, 58/15, 58/16, 58/17 ನೇದ್ದವುಗಳನ್ನು ಫಿರ್ಯಾದಿದಾರರಿಗೆ ಮಾರಾಟ ಮಾಡಿ ದಿನಾಂಕ: 15-3-2013 ರಂದು  ನೊಂದಣಿ ಸಂ: 98/13-14 ರನ್ವಯ 22 ಲಕ್ಷ ರೂಪಾಯಿಗಳಿಗೆ ಖರೀದಿ ಕರಾರು ಪತ್ರ ಬರೆದುಕೊಟ್ಟು ಮುಂಗಡವಾಗಿ 1 ಲಕ್ಷ ರೂಪಾಯಿಗಳನ್ನು ಪಡೆದುಕೊಂಡಿದ್ದು, ಆದರೆ ಆರೋಪಿತರು ಇದಕ್ಕೂ ಮುಂಚಿತವಾಗಿ  ದಿನಾಂಕ: 05-04-2010 ರಂದು  ಇವೇ ಪ್ಲಾಟುಗಳನ್ನು ಮ್ಯಾನೇಜರ್ ಶ್ರೀರಾಮ ಸಿಟಿ ಯೂನಿಯನ್ ಫೈನಾನ್ಸ್ ಲಿಮಿಟೆಡ್, ಸಿಂಧನೂರು ಇವರಿಗೆ ಒತ್ತೆ ಹಾಕಿ (Mortgage), ಫಿರ್ಯಾದಿದಾರರಿಗೆ ತಿಳಿಯದಂತೆ ಅವರಿಗೆ ಪ್ಲಾಟಗಳನ್ನು ಮಾರಾಟ ಮಾಡಿ ಹಣ ಪಡೆದು ಮೋಸ ಮಾಡಿರುತ್ತಾರೆ. ಕಾರಣ ಆರೋಫಿತರ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ." ಅಂತಾ ಮುಂತಾಗಿ ಇದ್ದ ದೂರಿನ ಆಧಾರದ ಮೇಲಿಂದ ಪ್ರಕರಣ ದಾಖಲು ಮಾಡಿ ಪ್ರಕರಣದ ತನಿಖೆ ಕೈಗೊಳ್ಳಲಾಯಿತು.

 
Will Smith Visitors
Since 01/02/2008