Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Monday, February 29, 2016

1) ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ. 81/2016 ಕಲಂ: 87 Karnataka Police Act.
ದಿನಾಂಕ 28-02-2016 ರಂದು ಸಂಜೆ 6-45 ಗಂಟೆಗೆ ಶ್ರೀ ಉದಯರವಿ ಪಿ.ಎಸ್.ಐ ಕನಕಗಿರಿ ಪೊಲೀಸ್ ಠಾಣೆ ರವರು ಜಪ್ತ ಮಾಡಿದ ಮಾಲು ಮತ್ತು ಆರೋಪಿತರೊಂದಿಗೆ ವಾಪಸ್ ಠಾಣೆಗೆ ಬಂದು ವರದಿ ಮತ್ತು ಜಪ್ತಿ ಪಂಚನಾಮೆ ಕೊಟ್ಟಿದ್ದು, ಸದರ ವರದಿಯ ಸಾರಾಂಶವೇನೆಂದರೆ, ಇಂದು ದಿನಾಂಕ 28-02-2016 ರಂದು ಸಂಜೆ 5-00 ಗಂಟೆಯಿಂದ 6-15 ಗಂಟೆಯವರೆಗೆ ಮಲಕನಮರಡಿ ಸೀಮಾದ ರುದ್ರಪ್ಪ ಗಂಗಾವತಿ ಇವರ ಹೊಲದ ಪಕ್ಕದಲ್ಲಿರುವ ಹಳ್ಳದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮೇಲ್ಕಾಣಿಸಿದ ಆರೋಪಿತರು ದುಂಡಾಗಿ ಕುಳಿತುಕೊಂಡು ದೈವಲಿಲೇ ಮೇಲೆ ಇಸ್ಪೇಟ್ ಜೂಜಾಟ ಆಡುತ್ತಿದ್ದಾಗ ಫಿರ್ಯಾದಿದಾರರು ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದಿದ್ದು, ಅದರಲ್ಲಿ 4-5 ಜನರು ಓಡಿ ಹೋಗಿದ್ದು, ಉಳಿದವರು ಸಿಕ್ಕಿದ್ದು, ಅವರಿಂದ ಒಟ್ಟು ನಗದು ಹಣ ರೂ. 70,410/ ಹಾಗೂ ಜೂಜಾಟಕ್ಕೆ ಉಪಯೋಗಿಸಿದ ಸಾಮಾಗ್ರಿಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿ, ಈ ಬಗ್ಗೆ ವಿವರವಾದ ಜಪ್ತಿ ಪಂಚನಾಮೆ ಮಾಡಿಕೊಂಡು ವಾಪಸ್ ಠಾಣೆಗೆ ಬಂದು ಪಂಚನಾಮೆ, ವರದಿಯನ್ನು ಕೊಟ್ಟಿದ್ದು, ಸದರ ವರದಿ & ಪಂಚನಾಮೆ ಆಧಾರದ  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
2) ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ. 43/2016 ಕಲಂ: 279, 337, 338, 304(ಎ) ಐ.ಪಿ.ಸಿ:
ದಿನಾಂಕ: 28-02-2016 ರಂದು ಬೆಳಗ್ಗೆ 10-30 ಗಂಟೆಗೆ ಫಿರ್ಯಾದಿದಾರನು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬರೆದ ಒಂದು ಪಿರ್ಯಾದಿಯನ್ನು ಹಾಜರು ಪಡಿಸಿದ್ದು, ಸದರಿ ಫಿರ್ಯಾದಿಯ ಸಾರಾಂಶವೆನೆಂದರೆ, ಇಂದು ದಿನಾಂಕ: 28-02-2016 ರಂದು ಬೆಳಗ್ಗೆ 09-30 ಗಂಟೆಗೆ ಪಿರ್ಯಾದಿ ಹಾಗೂ ಗಾಯಾಳು ಲಕ್ಷ್ಮಣ್ಣ ಇಬ್ಬರೂ ನಿಲೋಗಿಪುರ ಗ್ರಾಮದ ಪಿರ್ಯಾದಿದಾರರ ದೊಡ್ಡಪ್ಪನ ಹೊಲಕ್ಕೆ ಕಬ್ಬನ್ನು ಹೇರಿಕೊಂಡು ಬರುವ ಸಲುವಾಗಿ ತಮ್ಮೂರ  ಪಾಂಡು ಬೋರಿನ್ ಇವರ ಟ್ರಾಕ್ಟರನಲ್ಲಿ ಹೋರಟ್ಟಿದ್ದ, ಸದರಿ ಟ್ರಾಕ್ಟರರನ್ನು ಮೃತ ಆರೋಪಿತನು ನಡೆಸುತ್ತಿದ್ದನು. ಕೇಸಲಾಪುರ ದಾಟಿ ಹಲವಾಗಲಿ ಕಡೆಗೆ ಹೋಗುತ್ತಿದ್ದಾಗ, ಆರೋಪಿತನು ತಾನು ನಡೆಸುತ್ತಿದ್ದ ಕೆಂಪು ಬಣ್ಣದ 1035 DI Massey Ferguson  ಕಂಪನಿಯ ಇಂಜನ್ ನಂ: S337A67038 ಹಾಗೂ ಚಸ್ಸಿ ನಂ: MEA629A1KF2069853 ಹಾಗೂ ನಂಬರ್ ಇಲ್ಲದ ಟ್ರಾಲಿಯನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ವೇಗದ ಮೇಲೆ ನಿಯಂತ್ರಣ ತಪ್ಪಿ, ರಸ್ತೆ ಬಲಗಡೆಯ ತಗ್ಗಿನಲ್ಲಿ ಪಲ್ಟಿಯಾಗಿ ಬಿದ್ದಿದ್ದರಿಂದ ಟ್ರಾಲಿಯಲ್ಲಿದ್ದ ಪಿರ್ಯಾದಿಗೆ ಯಾವುದೇ ಗಾಯಗಳಾಗಿರುವುದಿಲ್ಲ. ಲಕ್ಷ್ಮಣ್ಣ ಈತನಿಗೆ ಹಣೆಗೆ ರಕ್ತಗಾಯವಾಗಿದ್ದು, ಅಲ್ಲದೇ ಚಾಲಕನಾದ ನಾಗರಾಜ ಈತನು ಟ್ರಾಕ್ಟರನ ಇಂಜನಿನ ಕೆಳಗೆ ಸಿಕ್ಕಿ ಹಾಕಿಕೊಂಡು ಕಣ್ಣಿನ ಮೇಲೆ, ಬಾಯಿಯ ಹತ್ತಿರ ಗದ್ದಕ್ಕೆ, ಬಲಗಡೆಯ ಕಿವಿಯ ಹಿಂದೆ ಭಾರಿ ಸ್ವರೂಪದ ರಕ್ತಗಾಯವಾಗಿದ್ದು, ಮೂಗಿನಲ್ಲಿ ಬಾಯಿಯಲ್ಲಿ ರಕ್ತ ಬಂದಿದ್ದು ಇರುತ್ತದೆ. ಅಲ್ಲದೇ ಅಲ್ಲಲ್ಲಿ ತರಚಿದ ರಕ್ತಗಾಯವಾಗಿ ಸ್ಥಳದಲ್ಲಿಯ ಮೃತ ಪಟ್ಟಿದ್ದು ಇರುತ್ತದೆ. ಕಾರಣ ಈ ಅಫಘಾ ತಕ್ಕೆ ಕಾರಣನಾದ ಟ್ರಾಕ್ಟರ್ ಚಾಲಕನಾದ ನಾಗರಾಜ ತಂದೆ ಹಾಲಪ್ಪ ಪೂಜಾರ ಸಾ: ಹಟ್ಟಿ ಇವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ಫಿರ್ಯಾದಿಯ ಸಾರಾಂಶದ ಮೇಲಿಂದ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3) ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ. 18/2016 ಕಲಂ: 143, 504, 506 ಸಹಿತ 149 ಐ.ಪಿ.ಸಿ:

ದಿನಾಂಕ 28-02-2016 ರಂದು ಮದ್ಯಾಹ್ನ 01-00 ಗಂಟೆಗೆ ಫಿರ್ಯಾದಿದಾರರಾದ ಶ್ರೀಮತಿ ವಿದ್ಯಾ ಗಂಡ ದುರ್ಗಪ್ರಸಾದ ವಯ : 38 ವರ್ಷ, ಜಾತಿ : ಲಿಂಗಾಯತ, : ವಕೀಲ ವೃತ್ತಿ. ಸಾ : ಕುಷ್ಟಗಿ. ಜಿ : ಕೊಪ್ಪಳ ರವರು ಠಾಣೆಗೆ ಹಾಜರಾಗಿ ಒಂದು ಲಿಖಿತ ಫಿರ್ಯಾದಿಯನ್ನು ನೀಡಿದ್ದು ಸಾರಾಂಶವೇನೆಂದರೆ ಫಿಯರ್ಾದಿದಾರರು ಮೂರು ವರ್ಷದ ಹಿಂದೆ  ಮ್ಯಾಗಳಡೊಕ್ಕಿ ಗ್ರಾಮದ ಬಸವರಾಜ ತಂದೆ ಬಸಪ್ಪ ಚೌಡಿ ಇವರ ಬಳಿ 3 ಎಕರೆ 3 ಗುಂಟೆ ಹೊಲವನ್ನು ತೆಗೆದುಕೊಂಡಿದ್ದು ಆದರೆ ಬಸವರಾಜನು ಹೊಲವನ್ನು ಮಾರಿದ್ದಾನೆ ಎಂದು ತಿಳಿದು ಇಂದು ದಿನಾಂಕ: 28-02-2016 ರಂದು ಬೆಳಿಗ್ಗೆ 10-00 ಗಂಟೆಯಿಂದ 12-00 ಗಂಟೆಯ ಅವಧಿಯಲ್ಲಿ ಫಿರ್ಯಾದಿದಾರರು ತಮ್ಮ ಜೋತೆಯಲ್ಲಿ ತಮ್ಮ ಮಗಳು ಅಖಿಲಾ. ಮತ್ತು ಸಂತೋಷ್ ರವರನ್ನು ಕರೆದುಕೊಂಡು ಮ್ಯಾಗಳಡೊಕ್ಕಿ ಗ್ರಾಮಕ್ಕೆ ಹೋಗಿ ಹಣವನ್ನು ಕೇಳಿದಾಗ ಆರೋಪಿತರಾದ 1) ಬಸವರಾಜ ತಂದೆ ಬಸಪ್ಪ ಚೌಡಿ 2) ಶರಣಮ್ಮ ಗಂಡ ಬಸವರಾಜ 3) ಸೋಮನಗೌಡ ತಂದೆ ದೊಡ್ಡನಗೌಡ 4) ಗಂಗಮ್ಮ ಗಂಡ ಸೋಮನಗೌಡ 5) ದೊಡ್ಡನಗೌಡ ತಂದೆ ಸೋಮನಗೌಡ ಸಾ : ಎಲ್ಲರೂ ಮ್ಯಾಗಳಡೊಕ್ಕಿ ತಾ:ಕುಷ್ಟಗಿ ರವರು ಫಿಯರ್ಾದಿದಾರರೊಂದಿಗೆ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ನಿನ್ನನ್ನು ಒಂದು ಕೈ ನೋಡಿಕೊಳ್ಳುತ್ತಿವಿ ನಾನು ಹಣವನ್ನು ಕೊಡುವುದಿಲ್ಲಾ. ಏನು ಮಾಡಿಕೊಳ್ಮ್ಳತ್ತಿಯಾ ಮಾಡಿಕೊಳ್ಳಿ ನಿನ್ನನ್ನು ಕೊಂದು ಬಿಡುವೆನು. ಅಂತಾ ಜೀವ ಬೆದರಿಗೆ ಹಾಕಿದ್ದು ಇರುತ್ತದೆ. ಕಾರಣ ಆರೋಪಿತರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಮುಂತಾಗಿ ಇದ್ದ ಫಿರ್ಯಾದಿ ಸಾರಾಂಶದ ಮೇಲಿಂದ   ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

Sunday, February 28, 2016

1) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 35/2016 ಕಲಂ: 326, 504, 506, 354 ಐ.ಪಿ.ಸಿ:.
ದಿನಾಂಕ: 27-02-2016 ರಂದು ಮಧ್ಯಾಹ್ನ 3-15 ಪಿ.ಎಂ ಕ್ಕೆ ಜಿಲ್ಲಾ ಆಸ್ಪತ್ರೆಯಿಂದ ಫಿರ್ಯಾದಿ ಶ್ರೀಮತಿ ಶಿಲ್ಪಾ ಸಂಗಮದವರ ಇವಳಿಗೆ ಹೇಳಿಕೆ ಫಿರ್ಯಾದಿ ಪಡೆದುಕೊಂಡು ಬಂದಿದ್ದು, ಸದರಿ ದೂರಿನ ಸಾರಾಂಶವೇನೆಂದರೆ, ದಿ: 27-02-2016 ರಂದು ಮುಂಜಾನೆ 10-30 ಗಂಟೆಗೆ ಕೊಪ್ಪಳ ಶ್ರೀ ಶೈಲ ನಗರದ ನಮ್ಮ ಮನೆಯ ಮುಂದೆ ರಸ್ತೆಯಲ್ಲಿ ನಮ್ಮ ಮಾವ ಹುಚ್ಚಪ್ಪನು ನನಗೆ ಲೇ ಬೊಸುಡಿ ನೀನು ನನ್ನ ಮಗ ಬಾಲಚಂದ್ರನ ತಲೆ ಕೆಡಿಸಿ ಅವನಿಂದ ನನಗೆ ಹಣ ಕೊಡದ ಹಾಗೆ ಮಾಡಿರುವ ನಿನಗೆ ಬಿಡುವುದಿಲ್ಲಾ ಅಂತಾ ಅವಾಚ್ಯವಾಗಿ ಬೈಯುತ್ತಾ  ತನ್ನ ಕೈಯಲ್ಲಿದ್ದ ಮಚ್ಚನ್ನು ತೆಗೆದುಕೊಂಡು ನನಗೆ ಹೊಡೆಯಲು ಬಂಗಾಗ ನಾನು ತಪ್ಪಿಸಿಕೊಂಡು ಹೋಡಿ ಹೋಗಲು ನಮ್ಮ ಮನೆಯ ಬಾಜು ರವಿ ಇವರ ಮನೆಯ ಮುಂದೆ ಕಲ್ಲು ಎಡವಿ ಕೆಳಗೆ ಬಿದ್ದಾಗ ನಮ್ಮ ಮಾವ ಮಚ್ಚಿನಿಂದ ನನ್ನ ಬಲ ಕುತ್ತಿಗೆ ಮತ್ತು ಬಲ ಭುಜದ ಹತ್ತಿರ ಮೂರು ನಾಲ್ಕು ಸಾರಿ ಹೊಡೆದಿದ್ದು ನಾನು ನನ್ನ ಕೈಯನ್ನು ಅಡ್ಡಹಿಡಿದು ನನ್ನ ಕೈ ಬೆರಳಿಗೆ ರಕ್ತ ಗಾಯವಾಗಿ ನನ್ನ ಕೊರಳು ಕುತ್ತಿಗೆ ಹತ್ತಿರ  ತೀವ್ರ ಒಳಪೆಟ್ಟಾಗಿರುತ್ತದೆ. ಅಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಜನರ ಮುಂದೆ ಈ ರೀತಿ ಹಲ್ಲೆ ಮಾಡಿ ಅವಮಾನಪಡಿಸಿದ್ದು ಇರುತ್ತದೆ. ನಂತರ ನನ್ನ ಮೈದುನ ನನಗೆ ಆಸ್ಪತ್ರೆಗೆ ಸೇರಿಸಿದ್ದು ಈಗ ನಾನು ಚಿಕಿತ್ಸೆ ಪಡೆಯುತ್ತಿರುತ್ತೇನೆ ಕಾರಣ ನನ್ನ ಮೇಲೆ ಕಬ್ಬಿಣದ ಮಚ್ಚಿನಿಂದ ಹಲ್ಲೆ ಮಾಡಿ ರಕ್ತ ಗಾಯ ಮಾಡಿದ ಹುಚ್ಚಪ್ಪ ಈತನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳು ವಿನಂತಿ ಸಲ್ಲಿಸಿದ ದೂರಿನ ಮೇಲಿಂದ  ಪ್ರಕರಣ ದಾಖಲಿಸಿದ್ದು ಅದೆ.
2) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 46/2016 ಕಲಂ: ಮನುಷ್ಯ ಕಾಣೆ :.

ದಿನಾಂಕ 27-02-2016 ರಂದು 17-00 ಗಂಟೆಗೆ. ಬಸವರಾಜ ತಂದೆ ಅಯ್ಯನಗೌಡ ಹಡ್ಲಿಗಿ, ವಯಸ್ಸು 22 ವರ್ಷ, ಜಾತಿ: ಲಿಂಗಾಯತ, ಉ: ವಿದ್ಯಾರ್ಥಿ , ಸಾ: ಕುಂಟೋಜಿ, ತಾ: ಗಂಗಾವತಿ. ರವರು ಠಾಣೆಗೆ ಬಂದು ತಮ್ಮದೊಂದು ಫಿರ್ಯಾದಿ ನೀಡಿದ್ದು ಅದರ ಸಾರಂಶವೇನೆಂದರೆ, ಫಿರ್ಯಾದಿದಾರರ ತಮ್ಮನಾದ ಕೀರ್ತಿ ಕುಮಾರ ತಂದೆ ಅಯ್ಯನಗೌಡ ಹಡ್ಲಿಗಿ, ವಯಸ್ಸು 19 ವರ್ಷ, ಜಾತಿ: ಲಿಂಗಾಯತ, ಉ: ವಿದ್ಯಾರ್ಥಿ, ಸಾ: ಕುಂಟೋಜಿ, ತಾ: ಗಂಗಾವತಿ ಇತನು ಗಂಗಾವತಿಯ ಶ್ರೀ ಸಾಯಿಬಾಬಾ ಐಟಿಯ ಕಾಲೇಜಿನಲ್ಲಿ ಐ.ಟಿ.ಐ. ಮೊದಲನೆಯ ವರ್ಷದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು  ಸದರಿಯವನು ದಿನಾಂಕ: 17-02-2016 ರಂದು ಮುಂಜಾನೆ ಕುಂಟೋಜಿಯಿಂದ ಗಂಗಾವತಿಯಲ್ಲಿರುವ ಕಾಲೇಜಿಗೆ ಬಂದಿದ್ದು ನಂತರ ಮುಂಜಾನೆ 11-00 ಗಂಟೆಗೆ ಹೆಚ್.ಅರ್.ಜಿ. ಇವರ ಮನೆಯ ಹತ್ತಿರ ಕ್ರಾಸಿನಲ್ಲಿ ಫಿರ್ಯಾದಿಯನ್ನು ಕಂಡಾಗ ವಾಪಸ್ಸು ಮನೆಗೆ ಹೋಗುವುದಾಗಿ ಹೇಳಿ ಮನೆಗೆ ಹೋಗದೆ ಕಾಣೆಯಾಗಿರುತ್ತಾನೆಂದು ನೀಡಿದ ಫಿರ್ಯಾದಿ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

Saturday, February 27, 2016

1) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 44/2016 ಕಲಂ: 420, 406, 409, 504, 506 ಸಹಿತ 34 ಐ.ಪಿ.ಸಿ:.
ದಿನಾಂಕ 26-02-2016 ರಂದು 18-00 ಗಂಟೆಗೆ ಮಾನ್ಯ ಪ್ರಿನ್ಸಿಪಲ್ ಸಿ.ಜೆ. & ಜೆ.ಎಂ.ಎಫ್.ಸಿ. ನ್ಯಾಯಾಲಯ, ಗಂಗಾವತಿರವರ ಪತ್ರ ಸಂ. 508/2016 ದಿನಾಂಕ 18-02-2015 ನೇದ್ದು ಕಲಂ. 156(3) ಸಿ.ಆರ್.ಪಿ.ಸಿ. ನೇದ್ದರ ಪ್ರಕಾರ ಕ್ರಮ ಜರುಗಿಸುವ ಕುರಿತು ಸ್ವೀಕೃತವಾಗಿರುತ್ತದೆ.  ಸದರಿ ಖಾಸಗಿ ಫಿರ್ಯಾದಿಯನ್ನು ಶ್ರೀಮತಿ ರತ್ನಮ್ಮ ಅಮ್ದಿಹಾಳ ಗಂಡ ದೇವಪ್ಪ ವಯಸ್ಸು 43 ವರ್ಷ ಉ: ಮನೆಗೆಲಸ ಸಾ: ವಾರ್ಡ ನಂ. 20 ಚಲುವಾದಿ ಓಣಿ, ಗಂಗಾವತಿ ರವರು ಮಾಡಿದ್ದು ಇರುತ್ತದೆ.  ಸದರಿ ಫಿರ್ಯಾದಿ ಸಾರಂಶವೇನೆಂದರೆ, ಫಿರ್ಯಾದಿದಾರಳು ಆರೋಪಿ ನಂ. 01 ಶಾಮೀದ ಮನಿಯಾರ ತಂದೆ ಮೆಹಬೂಬಸಾಬ ವಯ 45 ವರ್ಷ ಉ: ಮಾಜಿ ನಗರಸಭೆ ಅಧ್ಯಕ್ಷರು ಸಾ: ವಾರ್ಡ ನಂ. 19 ಗಂಗಾವತಿ. ನೇದ್ದವರಿಗೆ ಗಂಗಾವತಿ ನಗರದಲ್ಲಿ ವಾಸಿಸಲು ಒಂದು ಪ್ಲಾಟನ್ನು ಕೊಡಿಸಲು ಕೇಳಿದಾಗ ಆರೋಪಿ ನಂ. 01, 02 & 04 ನೇದ್ದವರು ಗಂಗಾವತಿ ನಗರದ ಹೊಸಳ್ಳಿ ರಸ್ತೆಯಲ್ಲಿರುವ 30 X 40 ವಿಸ್ತೀರ್ಣದ ಒಂದು ಪ್ಲಾಟನ್ನು ತೋರಿಸಿ ಅದು ಆರೋಪಿ ನಂ. 02 ನೇದ್ದವರ ಮಾಲೀಕತ್ವದ ಪ್ಲಾಟ್ ಅಂತಾ ಹೇಳಿ 05 ಲಕ್ಷ ರೂಪಾಯಿ ಕೊಡಬೇಕೆಂದು ಇದರಲ್ಲಿ ಪ್ಲಾಟಿನ ಕಿಮ್ಮತ್ತು, ನೊಂದಣಿ ಖರ್ಚು ಮತ್ತು ನಗರಸಭೆಯಲ್ಲಿ ವರ್ಗ ಮಾಡಿಸುವ ಸಂಪೂರ್ಣ ವೆಚ್ಚ ಒಳಗೊಂಡಿರುತ್ತದೆ ಅಂತಾ ಹೇಳಿದ್ದರಿಂದ ಫಿರ್ಯಾದಿದಾರಳು ದಿನಾಂಕ 01-03-2012 ರಂದು ರೂ. 05 ಲಕ್ಷ ಗಳನ್ನು ಆರೋಪಿ ನಂ. 01 ನೇದ್ದವರಿಗೆ ಕೊಟ್ಟಿದ್ದು, ಸದರಿ ಪ್ಲಾಟನ್ನು ಆರೋಪಿತರು ಫಿರ್ಯಾದಿದಾರಳ ಹೆಸರಿಗೆ ನೊಂದಣಿ ಮಾಡಿಸಿಕೊಟ್ಟಿದ್ದು ಇರುತ್ತದೆ.  ಸದರಿ ಪ್ಲಾಟ್ ಸರಕಾರಿ ಅಭಿಯೋಜಕರಿಗಾಗಿ ಕಾಯ್ದಿರಿಸಿದ ಪ್ಲಾಟ್ ಆಗಿದ್ದು  ಆರೋಪಿ ನಂ. 01 ನೇದ್ದವರು ತನ್ನ ಸಹೋದರರಾದ ಆರೋಪಿ ನಂ. 05 & 06 ಹಾಗೂ ಮಿತ್ರರಾದ ಆರೋಪಿ ನಂ. 03 & 04 ನೇದ್ದವರ ಜೊತೆಗೂಡಿ ಸಮಾನ ಉದ್ದೇಶದಿಂದ ಫಿರ್ಯಾದಿಗೆ ನಂಬಿಕೆ ದ್ರೋಸ ಮಾಡಿ ನಗರಸಭೆ ಅಧಿಕಾರಿಯಾದ ಆರೋಪಿ ನಂ. 02 ರವರೊಂದಿಗೆ ಸೇರಿ ಖೊಟ್ಟಿ ದಾಖಲೆಗಳನ್ನು ಸೃಷ್ಟಿ ಮಾಡಿ ಸರ್ಕಾರಿ ನಿವೇಶನವನ್ನು ತೋರಿಸಿ  ಅದನ್ನು ಫಿರ್ಯಾದಿದಾರಳಿಗೆ ಮಾರಾಟ ಮಾಡಿಸಿ ವಂಚನೆ ಮಾಡಿ ಈ ಬಗ್ಗೆ ಫಿರ್ಯಾದಿ ಸಲ್ಲಿಸದಂತೆ ಧಮಕಿ ಹಾಕಿ ಜೀವದ ಬೆದರಿಕೆ ಹಾಕಿರುತ್ತಾರೆಂದು ವಗೈರೆ ಫಿರ್ಯಾದಿ ಸಾರಂಶದ ಮೇಲಿಂದ  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 45/2016 ಕಲಂ: 323, 326, 308, 504, 506 ಸಹಿತ 34 ಐ.ಪಿ.ಸಿ ಮತ್ತು 3 & 4 ವರದಕ್ಷಿಣೆ ನಿಷೇಧ ಕಾಯ್ದೆ:.
ದಿನಾಂಕ 26-02-2016 ರಂದು 18-30 ಗಂಟೆಗೆ ಮಾನ್ಯ ಪ್ರಿನ್ಸಿಪಲ್ ಸಿ.ಜೆ. & ಜೆ.ಎಂ.ಎಫ್.ಸಿ. ನ್ಯಾಯಾಲಯ, ಗಂಗಾವತಿರವರ ಪತ್ರ ಸಂ. 514/2016 ದಿನಾಂಕ 24-02-2015 ನೇದ್ದು ಕಲಂ. 156(3) ಸಿ.ಆರ್.ಪಿ.ಸಿ. ನೇದ್ದರ ಪ್ರಕಾರ ಕ್ರಮ ಜರುಗಿಸುವ ಕುರಿತು ಸ್ವೀಕೃತವಾಗಿರುತ್ತದೆ.  ಸದರಿ ಖಾಸಗಿ ಫಿರ್ಯಾದಿಯನ್ನು ಶ್ರೀಮತಿ ಉಮಾದೇವಿ @ ಗಂಗಮ್ಮ ಗಂಡ ಯು.ರಾಘವೇಂದ್ರ 24 ವರ್ಷ ಉ: ಮನೆಗೆಲಸ ಸಾ: ಹಿರೇಜಂತಕಲ್, ಗಂಗಾವತಿ ರವರು ಮಾಡಿದ್ದು ಇರುತ್ತದೆ.  ಸದರಿ ಫಿರ್ಯಾದಿ ಸಾರಂಶವೇನೆಂದರೆ,   ಫಿರ್ಯಾದಿದಾರಳ ಮದುವೆಯು ಆರೋಪಿ ಯು.ರಾಘವೇಂದ್ರ ತಂದೆ ಯು.ದೇವಪ್ಪ ವಯ 32 ವರ್ಷ ಉ: ವ್ಯವಸಾಯ ಮತ್ತು ಹೋಟಲ್ ವ್ಯಾಪಾರ.  ನೇದ್ದವನೊಂದಿಗೆ ದಿನಾಂಕ 25-05-2006 ರಂದು ಆಗಿರುತ್ತದೆ. ಫಿರ್ಯಾದಿದಾರಳ ಮದುವೆ ನಂತರ ಗಂಡನೊಂದಿಗೆ ಸಂಸಾರ ಮಾಡಲು ಮರಿಯಮ್ಮನಹಳ್ಳಿ ಗ್ರಾಮಕ್ಕೆ ಹೋಗಿದ್ದು,  ಮದುವೆ ಆದ 02 ತಿಂಗಳವರೆಗೆ ಆರೋಪಿತರು ಫಿರ್ಯಾದಿದಾರಳನ್ನು ಚೆನ್ನಾಗಿ ನೋಡಿಕೊಂಡಿದ್ದು ನಂತರದಿಂದ ಆರೋಪಿತರು ಹೆಚ್ಚಿನ ವರದಕ್ಷೀಣೆಯಾಗಿ 40,000-00 ರೂ. ಹಣ ಮತ್ತು 02 ತೊಲೆ ಬಂಗಾರ ತೆಗೆದುಕೊಂಡು ಬರುವಂತೆ ಕಿರುಕುಳ ನೀಡುತ್ತಾ ಹೊಡಿ-ಬಡಿ ಮಾಡುತ್ತಿದ್ದು ಅಲ್ಲದೇ ಮರಿಯಮ್ಮನಹಳ್ಳಿಯಲ್ಲಿರುವಾಗ ಕಬ್ಬಿಣದ ರಾಡಿನಿಂದ ಹಲ್ಲೆ ಮಾಡಿದ್ದು ಫಿರ್ಯಾದಿದಾರಳಿಗೆ ಆರೋಪಿತರು ಅವಾಚ್ಯ ಶಬ್ದಗಳಿಂದ  ತಿಂದು ತಿಂದು ಹಂದಿಯ ಹಾಗೆ ಆಗಿದ್ದೀಯಾ, ನೀನು ಕರ್ರಗೆ ಇದ್ದೀಯಾ ದಿನಕ್ಕೆ ಎಷ್ಟು ಸಲ ತಿಂತಿಯಾ ಸೂಳೆ ಅಂತಾ ಅವಾಚ್ಯ ಶಬ್ದಗಳಿಂದ ಬೈದಾಡುತ್ತಾ ವರದಕ್ಷೀಣೆ ತರುವಂತೆ ತೊಂದರೆ ನೀಡುತ್ತಿದ್ದು ಅಲ್ಲದೇ ಫಿರ್ಯಾದಿದಾರಳು ಗಂಗಾವತಿಯ ಹಿರೇಜಂತಕಲ್ ದಲ್ಲಿರುವ ತನ್ನ ಮನೆಯಲ್ಲಿರುವಾಗ ದಿನಾಂಕ 01-12-2015 ರಂದು ಆರೋಪಿತರು ಗಂಗಾವತಿಯಲ್ಲಿರುವ ಫಿರ್ಯಾದಿದಾರರ ಮನೆಗೆ ಬಂದು ಬಂದು ಫಿರ್ಯಾದಿಗೆ ಲೇ ಸೂಳೆ ಗಂಡನ ಜೊತೆ ಬಾಳುವೆ ಮಾಡುವುದು ಬಿಟ್ಟು ತವರು ಮನೆ ಸೇರಿಕೊಂಡಿದ್ದೀಯಾ ಎಂದು ಅವಾಚ್ಯ ಶಬ್ದಗಳಿಂದ ಬೈದಾಡಿ ಹೊಡಿ-ಬಡಿ ಮಾಡಿರುತ್ತಾರೆ. ಆರೋಪಿತರೆಲ್ಲರೂ ಕೂಡಿಕೊಂಡು ಫಿರ್ಯಾದಿದಾರಳಿಗೆ ವರದಕ್ಷೀಣೆಯ ಸಲುವಾಗಿ ತೊಂದರೆ ನೀಡಿ ಹೊಡಿ-ಬಡಿ ಮಾಡಿ ಅವಾಚ್ಯ ಶಬ್ದಗಳಿಂದ ಬೈದಾಡಿ ಜೀವದ ಬೆದರಿಕೆ ಹಾಕಿರುತ್ತಾರೆಂದು ನೀಡಿದ ಫಿರ್ಯಾದಿ ಸಾರಂಶದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.


Friday, February 26, 2016

1) ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 18/2016 ಕಲಂ: 279, 304(ಎ) ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ.
ದಿನಾಂಕ:25-02-2016 ರಂದು ಸಾಯಂಕಾಲ 5-30 ಗಂಟೆಯ ಸುಮಾರು ಹಿರೇಬಿಡನಾಳ ಸೀಮಾದಲ್ಲಿ  ರಸ್ತೆ ಅಪಘಾತವಾಗಿ ಇಬ್ಬರೂ ಮೃತಪಟ್ಟ ಬಗ್ಗೆ ಮಾಹಿತಿ ಬಂದ ಮೇರೆಗೆ ನಾನು ಕೂಡಲೇ ಘಟನಾ ಸ್ಥಳಕ್ಕೆ ಭೇಟಿ ಕೊಟ್ಟು, ಪರಿಶೀಲಿಸಿದ್ದು, ಘಟನಾ ಸ್ಥಳದಲ್ಲಿದ್ದ ಪಿರ್ಯಾದಿದಾರನು ಒಂದು ಲಿಖಿತ ಪಿರ್ಯಾದಿಯನ್ನು  7-00 ಪಿಎಂಕ್ಕೆ ಹಾಜರಪಡಿಸಿದ್ದು, ಅದರ ಸಾರಾಂಶವೇನೆಂದರೆ, ಶ್ರೀಧರ ಈತನು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ ನಂ:ಕೆಎ-36 ಇಬಿ-0014 ನೇದ್ದರಲ್ಲಿ ತನ್ನ ಮಗ ಮಲ್ಲೇಶ ಈತನು ಕುಳಿತುಕೊಂಡು ಸರ್ಜಾಪುರದಿಂದ ಕಿನ್ನಾಳಗೆ ಬರುವ ಕುರಿತು ಮುತ್ತಾಳ ದಾಟಿ ಹಿರೇಬಿಡನಾಳ ಕಡೆಗೆ ಹಿರೇಬಿಡನಾಳ ಸೀಮಾದ ಶರಣಪ್ಪಗೌಡ ಇವರ ಹೊಲದ ಹತ್ತಿರ ಬರುತ್ತಿರುವಾಗ ಹಿರೇಬಿಡನಾಳ ಕಡೆಯಿಂದ ಟಿಪ್ಪರ್ ನಂ:ಜಿಎ-09 ಯು-2902 ನೇದ್ದರ ಚಾಲಕ ತನ್ನ ಟಿಪ್ಪರ್ ನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಮೋಟಾರ್ ಸೈಕಲ್ ನಂ:ಕೆಎ-36 ಇಬಿ-0014 ನೇದ್ದಕ್ಕೆ ಟಕ್ಕರ್ ಕೊಟ್ಟಿದ್ದರಿಂದ ಮೋಟಾರ್ ಸೈಕಲ್ ದಲ್ಲಿದ್ದ ಶ್ರೀಧರ ಮತ್ತು ಮಲ್ಲೇಶ ಇವರು ಭಾರೀ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದು,ಅಪಘಾತಪಡಿಸಿದ ನಂತರ ಟಿಪ್ಪರ್ ಚಾಲಕ ವಾಹನವನ್ನು ಬಿಟ್ಟು ಓಡಿಹೋಗಿರುತ್ತಾನೆ.   ಘಟನೆಯ ವಿಷಯವನ್ನು ಸಾಕ್ಷಿದಾರರಿಂದ ತಿಳಿದು ಬಂದು ನೋಡಿದ್ದು, ಕಾರಣ, ಟಿಪ್ಪರ್ ಚಾಲಕನ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಪಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
2) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 79/2016 ಕಲಂ. 279, 337, 338 ಐ.ಪಿ.ಸಿ:
ದಿನಾಂಕ: 25-02-2016 ರಂದು ರಾತ್ರಿ 7-15 ಗಂಟೆಗೆ ಪಿರ್ಯಾದಿದಾರನಾದ  ಅಜ್ಮಿರಸಾಬ ತಂದೆ ಬಡೇಸಾಬ ಗುಡಿಮನಿ ವಯಾ: 42 ವರ್ಷ ಜಾತಿ: ಮುಸ್ಲಿಂ ಉ: ಒಕ್ಕಲುತನ ಸಾ: ಹುಲಗೇರಿ ರವರು ಒಂದು ಗಣಕೃತ ಮಾಡಿಸಿದ  ಫಿರ್ಯಾದಿಯನ್ನು ಹಾಜರಪಡಿಸಿದ್ದು ಸದರ ಪಿರ್ಯಾದಿಯ  ಸಾರಾಂಶವೆನೆಂದರೆ ಫಿರ್ಯಾದಿದಾರರು ದಿನಾಂಕ: 23-02-2016 ರಂದು ನಮ್ಮ ಸಂಬಂಧಿಕರಾದ ಹಸನಸಾಬ ದೋಟಿಹಾಳ ರವರ ತಾಯಿಯು ತೀರಿಕೊಂಡಿದ್ದು ಸದರಿಯವರ ಅಂತ್ಯ ಕ್ರಿಯೇಗಾಗಿ ನನಗೆ ಮತ್ತು ನಮ್ಮೂರ ಹುಸೇನಸಾಬ ತಂದೆ ದಸ್ತಗಿರಿಸಾಬ ನಂದವಾಡಗಿ ವಯಾ: 40 ವರ್ಷ ಜಾ: ಮುಸ್ಲಿಂ ಉ: ಒಕ್ಕಲುತನ ಇಬ್ಬರಿಗೆ ಫೋನ್ ಮುಖಾಂತರ ಮಾಹಿತಿ ತಿಳಿಸಿದ್ದು ನಾನು ಮತ್ತು ಹುಸೇನಸಾಬ ಇಬ್ಬರೂ ಕೂಡಿ ನನ್ನ ಮೋ.ಸೈ. ನಂ: ಕೆ.ಎ-36/ಡಬ್ಲೂ-6009 ಹಿರೋ ಹೊಂಡಾ ಸಿಡಿ ಡಿಲಕ್ಸ ತೆಗೆದುಕೊಂಡು ದೋಟಿಹಾಳ ಗ್ರಾಮಕ್ಕೆ ಹೋಗಿ ಅಂತ್ಯ ಕ್ರಿಯೆ ಕಾರ್ಯಕ್ರಮವನ್ನು ಮುಗಿಸಿಕೊಂಡು ವಾಪಾಸ್ ನಮ್ಮೂರಿಗೆ ಹೋಗಲು ದೋಟಿಹಾಳ- ಕ್ಯಾದಗುಪ್ಪಾ ರಸ್ತೆಯ ಮೇಲೆ ನಾವು ತೊಣಸಿಹಾಳ ಕ್ರಾಸ್ ದಾಟಿ ರಾತ್ರಿ 10-30 ಗಂಟೆ ಸುಮಾರಿಗೆ ಹೋಗುತ್ತಿರುವಾಗ ಎದುರುಗಡೆಯಿಂದ ಒಂದು ಮೋ.ಸೈ. ಸವಾರನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ರಸ್ತೆಯ ಎಡಗಡೆ ಹೋಗುತ್ತಿದ್ದ ನಮಗೆ ಟಕ್ಕರ ಕೊಟ್ಟು ಅಪಘಾತಪಡಿಸಿದ್ದು ಅಪಘಾತದಲ್ಲಿ ನನಗೆ ಬಲಗೈ ಮುಂಗೈ ಹತ್ತಿರ ತೆರಚಿದ ಗಾಯವಾಗಿ ಎಡಗೈ ಮುಂಗೈಗೆ ಭಾರಿ ಒಳಪೆಟ್ಟಾಗಿ ಬಲಗಾಲ ಮೊಣಕಾಲ ಕೆಳಗೆ ಮತ್ತು ಬೆರಳುಗಳಿಗೆ ರಕ್ತ ಗಾಯವಾಗಿದ್ದು ಮತ್ತು ಬಲಗಾಲ ಹಿಮ್ಮಡಕ್ಕೆ ತೆರಚಿದ ಗಾಯವಾಗಿ ಎದೆಯ ಮೇಲೆ ಒಳ ಪೆಟ್ಟಾಗಿರುತ್ತದೆ. ನಮ್ಮ ಮೋ.ಸೈ. ಹಿಂದೆ ಕುಳಿತ ಹುಸೇನಸಾಬನನ್ನು ನೋಡಲು ಇತನಿಗೆ ಬಲಗಾಲ ಮೊಣಕಾಲ ಹತ್ತಿರ ಭಾರಿ ರಕ್ತ ಗಾಯವಾಗಿ ಮುರಿದಂತಾಗಿದ್ದು ಎಡಗೈ ಮುಂಗೈ ಮೇಲೆ ತೆರಚಿದ ಗಾಯವಾಗಿರುತ್ತದೆ. ಅಪಘಾತಪಡಿಸಿದ ಮೋ.ಸೈ. ನೋಡಲು ಬಜಾಜ ಕಂಪನಿಯ ಹೊಸ ಅವೆಂಜರ್ ಮೋ.ಸೈ. ಆಗಿದ್ದು ಅದರ ಚೆಸ್ಸಿ ನಂ: MD2A85CZOGCK27177 ಮತ್ತು ಇಂಜೀನ ನಂ: PDZCGK13569 ಅಂತಾ ಇದ್ದು ಅದನ್ನು ದೇವೇಂದ್ರ ತಂದೆ ಯಮನಪ್ಪ ನರೇಗಲ್ ವಯಾ: 21 ವರ್ಷ ಜಾ: ವಾಲ್ಮೀಕಿ ಉ: ಒಕ್ಕಲುತನ ಸಾ: ಗೋತಗಿ ಇತನು ನಡೆಸುತ್ತಿದ್ದು ಇತನಿಗೆ ಎಡಗಡೆ ಭುಜಕ್ಕೆ ಒಳಪೆಟ್ಟಾಗಿ ಎಡಗೈ ಮೊಣಕೈಗೆ ಎಡಗಡೆ ಸೊಂಟಕ್ಕೆ ಮತ್ತು ಬಲಗಾಲು ಹೆಬ್ಬೆರಳಿಗೆ ತೆರಚಿದ ರಕ್ತ ಗಾಯವಾಗಿರುತ್ತದೆ. ಇತನ ಹಿಂದ ಕುಳಿತ ಜಯಪ್ರಕಾಶ ತಂದೆ ರುದ್ರಪ್ಪ ಹಳೆಮನಿ ವಯಾ: 24 ವರ್ಷ ಜಾ: ಹಿಂದೂ ಹಡಪದ ಉ: ಆರ್ಮಿಯಲ್ಲಿ ಕಾನಸ್ಟೇಬಲ್  ಸಾ: ಗೋತಗಿ ಇತನಿಗೆ ಬಲಗಾಲ ಮೊಣಕಾಲ ಕೆಳಗೆ ಭಾರಿ ರಕ್ತ ಗಾಯವಾಗಿ ಮುರಿದಂತಾಗಿರುತ್ತದೆ. ನಂತರ 108 ಅಂಬುಲೇನ್ಸಗೆ ಫೋನ್ ಮಾಡಿ ಅಂಬುಲೇನ್ಸ ಬಂದ ನಂತರ ನಾವೆಲ್ಲರೂ ಚಿಕಿತ್ಸೆ ಕುರಿತು ಕುಷ್ಟಗಿ ಆಸ್ಪತ್ರೆಗೆ ಬಂದು ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಹಾಂತೇಶ ಅಕ್ಕಿ ಆಸ್ಪತ್ರೆ ಇಲಕಲಗೆ ಬಂದು ಸೇರಿಕೆಯಾಗಿದ್ದು ಇರುತ್ತದೆ ಅಂತಾ ನೀಡಿದ ಪಿರ್ಯಾದಿಯ ಸಾರಾಂಶ ಮೇಲಿಂದ   ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
3) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 32/2016 ಕಲಂ. 306, 504, 511 ಸಹಿತ 34 ಐ.ಪಿ.ಸಿ:
ದಿನಾಂಕ : 25-02-2016 ರಂದು ಜಿಲ್ಲಾ ಸರ್ಕಾರಿ ಆಸ್ಪತ್ರೆಯಿಂದ ಎಮ್.ಎಲ್.ಸಿ. ಮಾಹಿತಿ ಬಂದ ಮೇರೆಗೆ ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿದ್ದು ಕೊಪ್ಪಳದ ಶ್ರೀನಿವಾಸ ರೆಸಿಡೆನ್ಸಿ ಲಾಡ್ಜಿಂಗ್ ರೂಮ್ ನಂ. 209 ರಲ್ಲಿ ಬೆಳಗಿನ ಜಾವ 05-30 ಗಂಟೆಯ ಸುಮಾರಿಗೆ ವಿಷ ಸೇವನೆ ಮಾಡಿ. ಚಿಕಿತ್ಸೆ ಕುರಿತು ದಾಖಲಾದ ವ್ಯೆಕ್ತಿಗಳನ್ನು ಪರಿಶೀಲಿಸಿ. ಶ್ರೀ ರಾಘವೇಂದ್ರ ಪಾನಘಂಟಿ ಸಾ : ಪಾಪಿನಾಯಕನಹಳ್ಳಿ ಇವರ ಹೇಳಿಕೆ ಫಿರ್ಯಾದಿಯನ್ನು ಪಡೆದುಕೊಂಡಿದ್ದು, ಅದರ ಸಾರಾಂಶವೇನೆಂದರೆ, ಫಿರ್ಯಾದಿದಾರರು ಆರೋಪಿತರಿಂದ ಬೇಕರಿ ವ್ಯವಹಾರದ ಸಂಬಂಧ ಮತ್ತು ಮನೆಯ ಅಡಚಣೆ ಸಂಬಂಧ ಲಕ್ಷಾಂತರ ರೂಪಾಯಿ ಹಣವನ್ನು  ಕೈಗಡವನ್ನು ಪಡೆದುಕೊಂಡಿದ್ದು, ಸದರಿ ಹಣವನ್ನು ಫಿರ್ಯಾದಿದಾರರು ವ್ಯವಹಾರಕ್ಕೆ ಹಾಗೂ ಇತರೆ ಕೆಲಸ ಕಾರ್ಯಗಳಿಗೆ ಬಳಸಿ ಲುಕ್ಸಾನ್ ಆಗಿದ್ದರಿಂದ ಆರೋಪಿತರು ಫಿರ್ಯಾದಿದಾರರ ಮನೆಯ ಹತ್ತಿರ ಹೋಗಿ ತಾವು ಕೊಟ್ಟ ಹಣವನ್ನು ಕೊಡುವಂತೆ ಮಾನಸಿಕವಾಗಿ ಹಾಗೂ ಪದೇ ಪದೇ ಸತ್ತು ಹೋಗು ಅಂತಾ ಪ್ರಚೋದನೆ ನೀಡಿದ್ದರಿಂದ ಫಿರ್ಯಾದಿದಾರರು ಹಾಗೂ ಅವರ ಹೆಂಡತಿ ಶ್ರೀಮತಿ ಸಂಧ್ಯಾ ಇವರು ಇಂದು ದಿನಾಂಕ : 25-02-2016 ರಂದು ಬೆಳಗಿನ ಜಾವ 05-30 ಗಂಟೆಯ ಸುಮಾರಿಗೆ ಕೊಪ್ಪಳದ ಶ್ರೀನಿವಾಸ ರೆಸಿಡೆನ್ಸಿ ಲಾಡ್ಜಿಂಗ್ ರೂಮ್ ನಂ. 209 ನೇದ್ದರಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ಆರೋಪಿತರ ಕಿರುಕುಳ ತಾಳಲಾರದೆ ಅವರ ಪ್ರಚೋದನೆಯಿಂದ ವಿಷ ಸೇವನೆ ಮಾಡಿ. ಆತ್ಮಹತ್ಯೆಗೆ ಪ್ರಯತ್ನಿಸಿದ್ದು ಇರುತ್ತದೆ. ಕಾರಣ ಆರೋಪಿತರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ ಫಿರ್ಯಾದಿ ಸಾರಾಂಶ ಮೇಲಿಂದ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
4) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 77/2016 ಕಲಂ. 457, 380 ಐ.ಪಿ.ಸಿ:

ದಿನಾಂಕ 25-02-2016 ರಂದು ಬೆಳಿಗ್ಗೆ 11-00 ಗಂಟೆಗೆ ಫಿರ್ಯಾದಿದಾರರಾದ ರಾಜೇಶ ತಂದೆ ಹನಮಂತಪ್ಪ ಪತ್ತಾರ ವಯಾ: 38 ವರ್ಷ ಜಾ: ಬೈಲ ಪತ್ತಾರ ಸಾ: ಬಿ.ಬಿ. ನಗರ ಕುಷ್ಟಗಿ ರವರು ಠಾಣೆಗೆ ಹಾಜರಾಗಿ ಫಿರ್ಯಾದಿ ನೀಡಿದ್ದು ಸಾರಾಂಶವೇನೆಂದರೆ, ಪ್ರತಿ ದಿನದಂತೆ ನಿನ್ನೆ ರಾತ್ರಿ 9.30 ಗಂಟೆಗೆ ಅಂಗಡಿ ಮುಚ್ಚಿ ಕೀಲಿ ಹಾಕಿಕೊಂಡು ಮನೆಗೆ ಹೋದೆನು. ಈ ದಿವಸ ಬೆಳಿಗ್ಗೆ ಖಾಸಗಿ ಕೆಲಸ ನಿಮೀತ್ಯ ಗಜೇಂದ್ರಗಡಕ್ಕೆ ಹೋಗಬೇಕು ಅಂತಾ ನಮ್ಮ ಅಂಗಡಿಯ ಹತ್ತಿರ ಬಂದೆನು ನೋಡಲಾಗಿ ನನ್ನ ಅಂಗಡಿಯ ಮುಂದಿನ ಬಾಗಿಲ ಕೀಲಿ ಪತ್ತಾ ಮುರಿದು ಬಿದಿದ್ದು ನಾನು ಗಾಬರಿಯಾಗಿ ಒಳಗೆ ಪ್ರವೇಶಿಸಿ ನೋಡಲು ಜನರು ರಿಪೇರಿ ಕುರಿತು ಕೊಟ್ಟಿದ 2 ತೊಲೆ ಬಂಗಾರದ ಸಾಮಾನುಗಳು ಕಾಣಲಿಲ್ಲ ಅವುಗಳ ವಿವರ 1 ಜೊತೆ ರವಿ ಬೆಂಡೋಲೆ 3 ಗ್ರಾಂ 1 ಫಿಸ್ ಡ್ರಾಸ್ಪ್ 500 ಮೀಲಿ, 1 ಜೊತೆ ಡ್ರಾಪ್ಸ 1 ಗ್ರಾಂ 1 ಜಾಲರಿ 2 ಗ್ರಾಂ 1 ಸಿಂಗಲ್ ಜಾಲರಿ 1 ಗ್ರಾಂ 1 ಜೊತೆ ಬುಗಡಿ ಕಡ್ಡಿ 3 ಗ್ರಾಂ ಹ್ಯಾಂಗಿಂಗ್ಸ 1 ಗ್ರಾಂ 500 ಮೀಲಿ 1 ಜೊತೆ ಬೆಂಡೊಲೆ 2 ಗ್ರಾಂ 500 ಮೀಲಿ, 1 ಸಿಂಗಲ್ ಬಾವಲಿ ಕಡ್ಡಿ 500 ಮೀಲಿ, 5 ಗ್ರಾಂ ನ ಹರಳಿನ ರಿಂಗ್ ಮತ್ತು ಡ್ರಾದಲ್ಲಿಟ್ಟಿದ್ದ ಸುಮಾರು 3 ಕೆ.ಜಿ. ಬೆಳ್ಳಿಯ ಸಾಮಾನುಗಳು ಅಂದರೆ ಆರತಿ ತಾಟುಗಳು, ಸಮೆ, ಕುಂಕುಮ ಭರಣಿಗಳು, ಮತ್ತು ದೇವರ ಮೂರ್ತಿ ಸಾಮಾನುಗಳು ಸಹ ಇರಲಿಲ್ಲ ನಾನು ಆ ಕಡೆ ಈ ಕಡೆ ಹುಡುಕಾಡಲು ಎಲ್ಲಿಯೂ ಸಿಗಲಿಲ್ಲ ನಿನ್ನೆ ರಾತ್ರಿ 9.30 ಗಂಟೆಗೆ ಅಂಗಡಿ ಬಂದ್ ಮಾಡಿಕೊಂಡು ಹೊದ ನಂತರ ಯಾರೋ ಕಳ್ಳರು ನಮ್ಮ ಅಂಗಡಿಯ ಬಾಗಿಲ ಕೀಲಿ ಮುರಿದು ಒಳಗೆ ಪ್ರವೇಶಿಸಿ ಅಂಗಡಿಯಲ್ಲಿದ್ದ ಸುಮಾರು 3 ಕೆ.ಜಿ ಬೆಳ್ಳಿ ಸಾಮಾನುಗಳು ಅಂ.ಕಿಂ 1.00,000=00 ಮತ್ತು 2 ತೋಲೆ ಬಂಗಾರದ ಸಾಮಾನುಗಳು ಅಂ.ಕಿಂ. 50,000=00 ರಷ್ಟು ಆಭರಣಗಳನ್ನು ಯಾರೋ ಕಳ್ಳರು ಕಳತನ ಮಾಡಿಕೊಂಡು ಹೋಗಿದ್ದು ಕಂಡುಬರುತ್ತದೆ ಕಳುವಾದ ಸಾಮಾನುಗಳ ಒಟ್ಟು ಅಂ.ಕಿಂ 1,50,000=00 ಗಳಾಗಬಹುದು. ದಿನಾಂಕ 24-02-2016 ರಂದು ರಾತ್ರಿ 9.30 ಗಂಟೆಯಿಂದ ಈ ದಿನ ಬೆಳಗಿನ 6.00 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ಅಂಗಡಿಯ ಬೀಗ ಮುರಿದು ಒಳಗೆ ಪ್ರವೇಶಿಸಿ ಅಂಗಡಿಯಲ್ಲಿದ್ದ 3 ಕೆ.ಜಿ. ಬೆಳ್ಳಿ ಸಾಮಾನುಗಳು ಅಂ. ಕಿ. 1,00,000=00 ಹಾಗೂ 2 ತೋಲೆ ಬಂಗಾರದ ಸಾಮಾನುಗಳು ರಿಪೇರಿಗಾಗಿ ಬಂದವುಗಳು ಅಂ.ಕಿಂ 50,000=00 ಹೀಗೆ 1,50,000=00 ಬೆಲೆ ಬಾಳುವ ಬಂಗಾರ ಬೆಳ್ಳಿ ಸಾಮಾನುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಸದರಿ ಸಾಮಾನುಗಳನ್ನು ಮತ್ತು ಕಳ್ಳರನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸಲು ಈ ಮೂಲಕ ವಿನಂತಿ ಇರುತ್ತದೆ ಅಂತಾ ಮುಂತಾಗಿ  ಪಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣವನ್ನು ದಾಖಲು ಮಾಡಿ ತನಿಖೆಯನ್ನು ಕೈಕೊಂಡಿದೆ.

 
Will Smith Visitors
Since 01/02/2008