1] ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ. 89/2017 ಕಲಂ. 78(3) Karnataka Police Act.
ದಿನಾಂಕ:
12-07-2017 ರಂದು ರಾತ್ರಿ 20:50 ಗಂಟೆಗೆ ಶ್ರೀ ಈರಣ್ಣ ಮಾಳವಾಡ ಎ.ಎಸ್.ಐ. ತಾವರಗೇರಾ ಪೊಲೀಸ್ ಠಾಣೆರವರು ನ್ಯಾಯಾಲಯದ ಪರವಾನಿಗೆ ಗಣಕೀಕೃತ ವರದಿ, ಹಾಗೂ ದಾಳಿ ಪಂಚನಾಮೆ, ಮುದ್ದೇಮಾಲು ಸಿಕ್ಕಿಬಿದ್ದ ಒಬ್ಬ ಆರೋಪಿಯನ್ನು ಹಾಜರಪಡಿಸಿದ್ದು, ವರದಿಯಲ್ಲಿ ತಾವರಗೇರಾ ಪಟ್ಟಣದ ಸಾರ್ವಜನಿಕ ಸ್ಥಳದಲ್ಲಿ ಮುಲ್ಲಾರ ಓಣಿಯ ಕಟ್ಟೆಯ ಹತ್ತಿರ ಮಟ್ಕಾ ಜೂಜಾಟವನ್ನು ಆಡುತ್ತಿದ್ದು, ಆ ಕಾಲಕ್ಕೆ ಅಧಿಕಾರಿ ಹಾಗೂ ಸಿಬ್ಬಂದಿಯವರು ದಾಳಿ ಮಾಡಿ ಜೂಜಾಟದ ಒಟ್ಟು ನಗದು ಹಣ ರೂ.1550-00,
ರೂ ಒಂದು ಬಾಲ್ ಪೆನ್, ಒಂದು ಮಟಕಾ ಚೀಟಿ, ಜಪ್ತಿ ಮಾಡಿಕೊಂಡಿದ್ದು, ಸಿಕ್ಕಿಬಿದ್ದ ಆರೋಪಿತನಾದ ಎ-1 ಪ್ರಾಣೇಶ್ವರಾವ ತಂದೆ ಹನಮಂತರಾವ್ ದೇಸಾಯಿ ವಯ: 30 ವರ್ಷ, ಜಾತಿ: ಬ್ರಾಹ್ಮಣ ಉ: ವ್ಯಾಪಾರ, ಸಾ:ವಿದ್ಯಾನಗರ ತಾವರಗೇರಾ ಈತನ ವಿರುದ್ದ ಕಾನೂನು ಕ್ರಮ ಜರುಗಿಸಲು ವರದಿಯನ್ನು ನೀಡಿದ್ದು ಇರುತ್ತದೆ. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ
2] ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ. 102/2017 ಕಲಂ. 143, 147, 148, 447, 323, 324,
504, 506 ಸಹಿತ 149 ಐ.ಪಿ.ಸಿ:.
ಫಿರ್ಯಾದಿ ಹಾಗೂ ಆರೋಪಿತರಿಗೆ ಬೆನಕನಾಳ ಸೀಮಾದಲ್ಲಿ
ಸರ್ವೆ ನಂ: 113/6 ನೇದ್ದರ
ಜಮೀನಿನ ವಿಷಯವಾಗಿ ನ್ಯಾಯಾಲಯದಲ್ಲಿ ದಾವೆ ಹೂಡಿ ಈ ಬಗ್ಗೆ ನ್ಯಾಯಾಲಯದ ಫಿರ್ಯಾದಿಯಂತೆ ಆದೇಶವಾಗಿದ್ದು, ಫಿರ್ಯಾದಿ ಮತ್ತು ಆರೋಪಿತರಿಗೆ ವೈಷಮ್ಯ ಬೆಳೆದು ಇಂದು ದಿನಾಂಕ: 12-07-2017 ರಂದು ಮುಂಜಾನೆ 08-00 ಗಂಟೆಯ ಸುಮಾರಿಗೆ ಫಿರ್ಯಾದಿದಾರರು ಹಾಗೂ ಅವರ ಮನೆಯವರು ಕೂಡಿ ಹೊಲದಲ್ಲಿ ಸಾಗುವಳಿ ಮಾಡುತ್ತಿರುವಾಗ್ಗೆ ಆರೋಪಿತರು ಅಕ್ರಮ ಕೂಟ ರಚಿಸಿಕೊಂಡು ಕೈಯಲ್ಲಿ, ಕಟ್ಟಿಗೆ, ಸೈಕಲ್ ಚೈನ್, ಖಾರ ಪುಡಿ ಹಿಡಿದುಕೊಂಡು ಬಂದು ಜಮೀನಿನಲ್ಲಿ ಅಕ್ರಮ ಮಾಡಿ ಫಿರ್ಯಾದಿ ಮನೆಯವರಿಗೆ ಕಣ್ಣಲ್ಲಿ ಖಾರದ ಪುಡಿ ಉಗ್ಗಿ, ಕೈಯಿಂದ, ಕಟ್ಟಿಗೆಯಿಂದ, ಸೈಕಲ್ ಚೈನಿನಿಂದ ಹೊಡೆದು ರಕ್ತ ಗಾಯಗೊಳಿಸಿ, ಅವಾಚ್ಯ ಬೈದಾಡಿ, ಜೀವದ ಬೆದರಿಕೆ ಹಾಕಿದ್ದು, ಸದರಿ ಆರೋಪಿತರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ಮುಂತಾಗಿ ಫಿರ್ಯಾದಿ ಅದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
0 comments:
Post a Comment