Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Tuesday, February 7, 2017

1] ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ: 14/2017 ಕಲಂ 78(3) Karnataka Police Act.
ದಿನಾಂಕ 06-02-2017 ರಂದು ಸಂಜೆ 7-30 ಗಂಟೆಯ ಸುಮಾರಿಗೆ ನಾಗಲಾಪೂರ ಗ್ರಾಮದ ಅಗಸಿ ಮುಂದೆ ಸಮುದಾಯದ ಭವನದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಆರೋಫಿ ನಂ.1 ಮತ್ತು 2 ರವರು ಸಾರ್ವಜನಿಕರನ್ನು ಬರ ಮಾಡಿಕೊಂಡು ಅವರಿಗೆ 1 ರೂಪಾಯಿಗೆ 80 ರೂಪಾಯಿ ಬರುತ್ತದೆ ಬನ್ನಿ ನಸೀಬದ ಜೂಜಾಟ ಅಂತಾ ಕೂಗುತ್ತಾ ಅವರಿಂದ ಹಣ ಪಡೆದು ಅವರಿಗೆ ಓ.ಸಿ ನಂಬರಗಳನ್ನು ಬರೆದು ಕೊಡುತ್ತಿದ್ದಾಗ  ಶ್ರೀ ವೀರಾರೆಡ್ಡಿ ಪಿ.ಎಸ್.ಐ. ಕನಕಗಿರಿ ಠಾಣೆ ರವರು ಪಂಚರೊಂದಿಗೆ ದಾಳಿ ಮಾಡಲು ಆರೋಪಿ ನಂ.1 ಮತ್ತು 2 ರವರಿಂದ 1 ಮಟಕಾ ಪಟ್ಟಿ, 1 ಬಾಲ್ ಪೆನ್ನು ಹಾಗೂ ನಗದು ಹಣ ರೂ.410/-  ಗಳನ್ನು ಸಂಜೆ 7-30 ಗಂಟೆಯಿಂದ 8-30 ಗಂಟೆಯವರೆಗೆ ಲೈಟಿನ  ಬೆಳಕಿನಲ್ಲಿ ಪಂಚರ ಸಮಕ್ಷಮ ಜಪ್ತ ಮಾಡಿಕೊಂಡಿದ್ದು ಮಟಕಾ ಪಟ್ಟಿಯನ್ನು ಆರೋಫಿ ನಂ.3 ರವರಿಗೆ ಕೊಡುವುದಾಗಿ ತಿಳಿಸಿದ್ದು ಇರುತ್ತದೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2] ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ: 09/2017 ಕಲಂ 78(3) Karnataka Police Act.
ದಿನಾಂಕ: 06-02-2017 ರಂದು ರಾತ್ರಿ 21:15 ಗಂಟೆಗೆ ಪಿ.ಎಸ್.ಐ. ತಾವರಗೇರಾ ಪೊಲೀಸ್ ಠಾಣೆರವರು ಗಣಕೀಕೃತ ವರದಿ, ದಾಳಿ ಪಂಚನಾಮೆ, ಮುದ್ದೇಮಾಲು ಸಿಕ್ಕಿಬಿದ್ದ ಒಬ್ಬ ಆರೋಪಿಯನ್ನು ಹಾಜರಪಡಿಸಿದ್ದು, ವರದಿಯಲ್ಲಿ ಕನ್ನಾಳ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟವನ್ನು ಆಡುತ್ತಿದ್ದು, ಆ ಕಾಲಕ್ಕೆ ಅಧಿಕಾರಿ ಹಾಗೂ ಸಿಬ್ಬಂದಿಯವರು ದಾಳಿ ಮಾಡಿ ಜೂಜಾಟದ ಒಟ್ಟು ನಗದು ಹಣ ರೂ.2050-00, ಒಂದು ಬಾಲ್ ಪೆನ್ ,ಒಂದು ಮಟಕಾ ಚೀಟಿ, ಜಪ್ತ ಮಾಡಿಕೊಂಡಿದ್ದು, ಸಿಕ್ಕಿಬಿದ್ದ ಆರೋಪಿತನಾದ ಹನಮಂತ ತಂದೆ ಕನಕಪ್ಪ ಹೊಸಗೇರಿ, ಹಾಗೂ ಮಟಕಾ ಪಟ್ಟಿ ತೆಗೆದುಕೊಳ್ಳುವವನಾದ ಹನಮಂತ ಸಾ:ಹಾಗಲದಾಳ ತಾ:ಗಂಗಾವತಿ ಈತನ ವಿರುದ್ದ ಕಾನೂನು ಕ್ರಮ ಜರುಗಿಸಲು ವರದಿಯನ್ನು ನೀಡಿದ್ದು ಇರುತ್ತದೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
3] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 29/2017 ಕಲಂ 143, 147, 447, 323, 504, 506 ರೆಡ್ ವಿತ್ 149 .ಪಿ.ಸಿ. ಮತ್ತು 3(1)(x) S.C/S.T. P.A. Act 1989:.

ದಿನಾಂಕ:- 06-02-2017 ರಂದು ಸಂಜೆ 7:00 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಹನುಮೇಶ ತಂದೆ ದಿ: ರಾಮಲಿಂಗಪ್ಪ ಕನಕಗಿರಿ ರವರು, ದೂರನ್ನು ಹಾಜರಪಡಿಸಿದ್ದು, "ನಮಗೂ ಹಾಗೂ ನನ್ನ ದೊಡ್ಡಪ್ಪ ಕನಕಪ್ಪ ಇವರಿಗೂ ಜಮೀನಿನ ವಿಭಾಗದ ವಿಚಾರದಲ್ಲಿ ಸಿವಿಲ್ ವ್ಯಾಜ್ಯ ನಡೆದಿರುತ್ತದೆ. ಆದರೆ ಇಂದು ದಿನಾಂಕ:- 06-02-2017 ರಂದು ಮಧ್ಯಾಹ್ನ 2:00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ತಾಯಿಯಾದ ಯಂಕಮ್ಮ ಗಂಡ ದಿ: ರಾಮಲಿಂಗಪ್ಪ-75 ವರ್ಷ ಇಬ್ಬರೂ ಕೇಸರಹಟ್ಟಿ ಗ್ರಾಮ ಸೀಮಾದ ನಮ್ಮ ಜಮೀನು ಸರ್ವೆ ನಂ: 80/ ರಲ್ಲಿ ಇದ್ದಾಗ ಜಮೀನುಗಳಿಗೆ ಸಂಬಂಧವಿರದ ವ್ಯಕ್ತಿಗಳಾದ (1) ಬಸವರಾಜ ತಂದೆ ಪಂಪಾಪತೆಪ್ಪ ಹಳ್ಳಿ-35 ವರ್ಷ (2) ವಿರುಪಣ್ಣ ತಂದೆ ಪಂಪಾಪತೆಪ್ಪ ಹಳ್ಳಿ-40 ವರ್ಷ (3) ಮಂಜುನಾಥ ತಂದೆ ಪಂಪಾಪತೆಪ್ಪ ಹಳ್ಳಿ-32 ವರ್ಷ (4) ನಿರುಪಾದಿಗೌಡ ತಂದೆ ಬಸವನಗೌಡ ಕನ್ನಾಳ-33 ವರ್ಷ (5) ಚಂದ್ರಶೇಖರ ತಂದೆ ರುದ್ರಪ್ಪ ಗುಡೂರ-30 ವರ್ಷ (6) ಹೆಚ್.ಎಲ್. ಬಸವರಾಜ ತಂದೆ ಲಿಂಗರಡ್ಡೆಪ್ಪ ಹಳ್ಳಿ-45 ವರ್ಷ (7) ವಿರುಪಣ್ಣ @ ವಿ.ಪಿ. ಸಿಂಗ್ ತಂದೆ ಬಸಪ್ಪ ಹಳ್ಳಿ-48 ವರ್ಷ (8) ರೆಡ್ಡಿ ತಂದೆ ಅನ್ನನಗೌಡ ಹಳ್ಳಿ-48 ವರ್ಷ ಎಲ್ಲರೂ ಜಾತಿ: ಲಿಂಗಾಯತ ಸಾ: ಕೇಸರಹಟ್ಟಿ  (9) ವಿಶ್ವನಾಥ ತಂದೆ ಮಲ್ಲಯ್ಯ ಜಿನ್ನದ,-30 ವರ್ಷ (10) ಶಿವಯ್ಯ ತಂದೆ ಆದಯ್ಯಸ್ವಾಮಿ-30 ವರ್ಷ ಇಬ್ಬರೂ ಜಾತಿ: ಜಂಗಮರು ಸಾ: ಕೇಸರಹಟ್ಟಿ ಇವರುಗಳು ಅಕ್ರಮಕೂಟ ರಚಿಸಿಕೊಂಡು ಸಮಾನ ಉದ್ದೇಶದಿಂದ ಕೂಡಿಕೊಂಡು ಜೆ.ಸಿ.ಬಿ.ಯನ್ನು ತೆಗೆದುಕೊಂಡು ನಮ್ಮ ಜಮೀನಿನಲ್ಲಿ ಅತಿಕ್ರಮ ಪ್ರವೇಶ ಮಾಡಿ ಬಂದು ನಮ್ಮ ಜಮೀನಿನಲ್ಲಿಯ ಜಾಲಿಯನ್ನು ಸ್ವಚ್ಛ ಮಾಡಲು ಬಂದರುಆಗ ನಾನು, ನನ್ನ ತಾಯಿ ಅಡ್ಡ ಹೋಗಿ ಜಮೀನು ನಮ್ಮದು ಇದೆ ಇಲ್ಲಿ ಯಾಕೆ ಬಂದು ಸ್ವಚ್ಛ ಮಾಡುತ್ತೀರಾ ಅಂತಾ ಕೇಳಿದ್ದಕ್ಕೆ  ಲೇ ನಾಯಕ ಸೂಳೇ ಮಕ್ಕಳ ಜಮೀನನ್ನು ನಾವು ಖರೀದಿ ಮಾಡಿದ್ದೇವೆ, ಜಮೀನು ನಮ್ಮದು ಇದೆ  ಅಂತಾ ಜಾತಿ ಎತ್ತಿ ಬೈದು ಬೈದರುಆಗ ನಾವು ಅಡ್ಡ ಹೋಗಿದ್ದಕ್ಕೆ  ನೀವೇನಾದರೂ ಅಡ್ಡ ಬಂದರೆ ಇಲ್ಲಿಯೇ ಹೂತು ಹಾಕುತ್ತೇವೆ  ಅಂತಾ ಬೆದರಿಕೆ ಹಾಕಿ ಜೆ.ಸಿ.ಬಿ.ಯನ್ನು ಹಾಗೆಯೇ ಮೈಮೇಲೆ ತಂದರು. ನಂತರ ನನಗೆ ಕೈಗಳಿಂದ ಹೊಡಿ-ಬಡಿ ಮಾಡಿ ಎಳೆದಾಡಿದರುಬಿಡಿಸಲು ಬಂದ ನನ್ನ ತಾಯಿ ಯಂಕಮ್ಮಳನ್ನು ದಬ್ಬಿದರು. ಇದರಿಂದ ನಮಗೆ ಒಳಪೆಟ್ಟಾಯಿತು ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.

Monday, February 6, 2017

1] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 14/2017 ಕಲಂ 87 Karnataka Police Act.

ದಿನಾಂಕಃ- 05-02-2017  ಸಾಯಂಕಾಲ 6-45 ಗಂಟೆಯ ಸುಮಾರಿಗೆ  ಶ್ರೀ  ರಾಜಕುಮಾರ ವಾಜಂತ್ರಿ ಪಿ.ಐ. ಗಂಗಾವತಿ ನಗರ ಠಾಣೆಗೆ ಹಾಜರಾಗಿ ಒಂದು ಮೂಲ ಪಂಚನಾಮೆಯೊಂದಿಗೆ ಮಾನ್ಯ ನ್ಯಾಯಾಲಯದ ಅನುಮತಿ ಪತ್ರದೊಂದಿಗೆ ವರದಿಯನ್ನು ಹಾಜರುಪಡಿಸಿದ್ದು ಸಾರಾಂಶವೆನಂದರೆ, ದಿನಾಂಕ 05-02-2017 ರಂದು ಸಾಯಂಕಾಲ 4-15 ಗಂಟೆಯ ಸುಮಾರಿಗೆ ಕಾರಟಗಿಯ ಪದ್ಮಾವತಿ ಟಾಕೀಜ್ ಹತ್ತಿರ ಸಾರ್ವಜನಿಕರ ಸ್ಥಳದಲ್ಲಿ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದ ಆರೋಪಿತರ ಮೇಲೆ  ಮಾನ್ಯ ಪಿ.ಐ. ಗಂಗಾವತಿ ನಗರಠಾಣೆ, ಮತ್ತು ಪಿ.ಎಸ್.ಐ. ಕಾರಟಗಿ ರವರು  ಮಾನ್ಯ ಡಿ.ಎಸ್.ಪಿ. ಸಾಹೇಬರ ಮಾರ್ಗದರ್ಶನದಂತೆ ಸಿಬ್ಬಂದಿಯವರು   ಪಂಚರ ಸಮಕ್ಷದಲ್ಲಿ ದಾಳಿ ಮಾಡಿದಾಗ ಆರೋಪಿ  ನಂ-1 ರಿಂದಾ 6 ನೇದ್ದವರು ಸಿಕ್ಕಿಬಿದ್ದಿದ್ದು ಸದರ್ ಆರೋಪಿತರ ವಶದಿಂದ  86600/- ರೂಗಳನ್ನು ವಶಪಡಿಸಿಕೊಂಡಿದ್ದು .ಇವರ ಮೇಲೆ ಕಾನೂನು ಕ್ರಮ ಕೈಕೊಳ್ಳಲು ನೀಡಿದ ವರದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇದೆ.

Thursday, February 2, 2017

1] ಸಂಚಾರಿ  ಪೊಲೀಸ್ ಠಾಣೆ ಕೊಪ್ಪಳ ಗುನ್ನೆ ನಂ: 08/2017 ಕಲಂ 279, 338, 304(ಎ) ಐ.ಪಿ.ಸಿ:.
ದಿನಾಂಕ. 01-02-2017 ರಂದು ಬೆಳಿಗ್ಗೆ 8-40 ಗಂಟೆಗೆ ಫಿರ್ಯಾದಿಯ ತನ್ನ ಆಟೋವನ್ನು ಚಲಾಯಿಸಿಕೊಂಡು ಕೊಪ್ಪಳದ ನಗರದ ಗದಗ-ಹೊಸಪೇಟೆ ಎನ್.ಹೆಚ್. 63 ರಸ್ತೆಯ ಮೇಲೆ ಬಿ.ಇ.ಓ ಆಫೀಸ್ ಸಮೀಪ ಅಶೋಕ ಸರ್ಕಲ್ ಕಡೆಗೆ ಹೊಗುತ್ತಿರುವಾಗ ಗಾಯಾಳು ಅನ್ವರ ಅಲಿ ತನ್ನ ಸೈಕಲ್ ತೆಗೆದುಕೊಂಡು ಅಶೋಕ ಸರ್ಕಲ್ ಕಡೆಗೆ ಹೊಗುತ್ತಿರುವಾಗ ಹಿಂದಿನಿಂದ ಕೆ.ಎಸ್.ಆರ್.ಟಿ.ಸಿ ಬಸ್ ನಂ. KA-37/F-0432 ನೆದ್ದರ ಚಾಲಕ ವಾಹನವನ್ನು ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಸೈಕಲ್ ಸವಾರ ಅನ್ವರ ಅಲಿಗೆ ಟಕ್ಕರಮಾಡಿ ಅಪಘಾತಮಾಡಿದ್ದರಿಂದ ಆತನು ಬಸ್ಸಿನ ಮುಂದಿನ ಎಡಗಾಲಿಯಲ್ಲಿ ಬಿದ್ದಿದ್ದು ಇದರಿಂದ ಅನ್ವರ ಅಲಿ ಇತನಿಗೆ ಬಲಕಾಲ ತೊಡೆಗೆ, ಸೊಂಟದ ಹತ್ತಿರ, ಮೂತ್ರ ಜನಕಾಂಗದ ಹತ್ತಿರ ಮತ್ತು ಕೆಳ ಹೊಟ್ಟೆಗೆ ಬಾರಿ ರಕ್ತಗಾಯ ಗಾಯವಾಗಿರುತ್ತವೆ ಅಂತಾ ಇದ್ದ ಫಿರ್ಯಾದಿಯ ಹೇಳಿಕೆಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ  ನಂ. 08/2017 ಕಲಂ. 279, 338 ಐ.ಪಿ.ಸಿ ಅಡಿಯಲ್ಲಿ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು. ಪ್ರಕರಣದಲ್ಲಿ ತೀವ್ರವಾಗಿ ಗಾಯಗೊಂಡ ಗಾಯಾಳು ಅನ್ವರ ಅಲಿ ತಂದೆ ಶಾಬುದ್ದೀನ್ ಏಕ್ಲಾಸಪೂರ ವಯ. 18 ಜಾತಿ. ಮುಸ್ಲಿಂ ಉ. ಕೂಲಿ ಕೆಲಸ ಸಾ. ದೇವರಾಜ ಅರಸ ಕಾಲೋನಿ ಕೊಪ್ಪಳ ಇತನಿಗೆ ಕೊಪ್ಪಳದ ಕಿಮ್ಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿರುವಾಗ, ಇಂದು ದಿನಾಂಕ. 01-02-2018 ರಂದು ಮದ್ಯಾಹ್ನ 1-30 ಗಂಟೆಗೆ ಕೊಪ್ಪಳದ ಕಿಮ್ಸ ಆಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ಬಂದಿದ್ದು ಅದರ ಪ್ರಕಾರ ಚಿಕಿತ್ಸೆ ಪಡೆಯುತ್ತಿರುವ ಅನ್ವರ ಅಲಿ ಇತನು ಚಿಕಿತ್ಸೆ ಫಲಕಾರಿಯಾಗದೇ ಇಂದು ಮದ್ಯಾಹ್ನ 1-20 ಗಂಟೆಗೆ ಮೃತಪಟ್ಟಿರುತ್ತಾನೆ ಅಂತಾ ಮಾಹಿತಿ ನೀಡಿದ ಪ್ರಕಾರ ಈ ಪ್ರಕರಣದಲ್ಲಿ ಕಲಂ. 304 (ಎ) ಐಪಿಸಿ ಯನ್ನು ಅಳವಡಿಸಲು ಮಾನ್ಯ ನ್ಯಾಯಾಲಯಕ್ಕೆ ಪತ್ರವನ್ನು ಬರೆದು ಕಳುಹಿಸಲಾಗಿದೆ.
2] ಕುಕನೂರ  ಪೊಲೀಸ್ ಠಾಣೆ ಗುನ್ನೆ ನಂ: 04/2017 ಕಲಂ 379  ಐಪಿಸಿ.

ದಿನಾಂಕ:01-02-2017 ರಂದು 8-00 ಪಿಎಂಕ್ಕೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕೀಕರಣ ಮಾಡಿಸಿದ ದೂರನ್ನು ಸಲ್ಲಿಸಿದ್ದು, ಅದರ ಸಾರಾಂಶವೇನೆಂದರೆ, ಪಿರ್ಯಾದಿದಾರರು ತಾವು ತಮ್ಮ ಮನೆಯ ಮುಂದೆ ರಾತ್ರಿ ಹ್ಯಾಂಡ್ ಲಾಕ್ ಮಾಡಿ ನಿಲ್ಲಿಸಿದ ಹಿರೋ ಹೊಂಡಾ ಸ್ಲೆಂಡರ್ ಪ್ಲಸ್ ಮೋಟಾರ್ ಸೈಕಲ್ ನಂ. ಕೆ.ಎ.37 ಆರ್.0542 ನೇದ್ದರ ಚಾಸ್ಸಿ ನಂ. MBLHA10EJ9HJ42904, ಇಂಜಿನ್ ನಂ.HA10EA9HJ96641 ನೇದ್ದು ಅಂ.ಕಿ.20,000=00 ರೂ. ಬೆಲೆ ಬಾಳುವದನ್ನು ದಿನಾಂಕ:25-01-2017 ರಂದು ರಾತ್ರಿ 11—00 ಪಿಎಂ.ದಿಂದ ದಿನಾಂಕ:26-01-2017 ರಂದು ಬೆಳಗಿನ ಜಾವ 3.00 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ತಾವು ತಮ್ಮ ಮನೆಯಲ್ಲಿ ವಿಷಯ ತಿಳಿಸಿ ಕುಕನೂರದಲ್ಲಿ ಅಲ್ಲಲ್ಲಿ ಹುಡುಕಾಡಿ ಸಿಗದೇ ಇದ್ದುದರಿಂದ ಮತ್ತೆ ಬೆಳಿಗ್ಗೆ ತಮ್ಮ ಅಳಿಯ ಸಂಗಪ್ಪನೊಂದಿಗೆ ಕಲ್ಲೂರು, ಯಲಬುರ್ಗಾ, ಕುಷ್ಟಗಿ, ಕೊಪ್ಪಳ, ಗದಗ ಕಡೆಗೆ ತಿರುಗಾಡಿ ಹುಡುಕಾಡಿದ್ದು ಎಲ್ಲಿಯೂ ಸಿಗದೇ ಇದ್ದುದರಿಂದ ಈಗ ತಡವಾಗಿ ಠಾಣೆಗೆ ಬಂದು ದೂರು ನೀಡಿರುತ್ತೇನೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು. 

Wednesday, February 1, 2017

1] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 27/2017 ಕಲಂ 279, 338 ಐ.ಪಿ.ಸಿ:.
ದಿನಾಂಕ. 31-01-2016 ರಂದು ಸಂಜೆ 7:00 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಗೋಪಿನಾಥ ತಂದೆ ವೆಂಕೋಬ ವಯಸ್ಸು: 41 ವರ್ಷ ಲಿಖಿತ ಫಿರ್ಯಾದಿ ನೀಡಿದ್ದು ಸಾರಾಂಶವೆನಂದರೆ. “ ದಿನಾಂಕ: 22-01-2017 ರಂದು ಮಧ್ಯಾಹ್ನ 3:45 ಗಂಟೆಯ ಸುಮಾರಿಗೆ ಫಿರ್ಯಾದಿ ಚಿಕ್ಕಪ್ಪನ ಮಗನಾದ ವಿಜಯಕುಮಾರನು ಗಂಗಾವತಿ-ಸಿಂಧನೂರ ಮುಖ್ಯ ರಸ್ತೆಯಲ್ಲಿ ಒಂದು ಮೋಟಾರ ಸೈಕಲ ಪಕ್ಕದಲ್ಲಿ ನಿಂತಿರುವಾಗ ಆತನ ಹಿಂಭಾಗದಿಂದ ಅಂದರೆ ಗಂಗಾವತಿ ಕಡೆಯಿಂದ ರವೀಂದ್ರ ಟಿ. ತಂದೆ ಲಿಂಗಪ್ಪ ಟಿ. ಹೊಸ ಹಿರೋ ಹೆಚ್.ಎಫ್. ಡೀಲಕ್ಸ್ ಕಂಪನಿಯ (ಚಾಸ್ಸಿ ನಂ: ನೋಡಲು MBLHA11ATG9KO9464 ) ನೇದ್ದರ ಚಾಲಕ ಸಾ: ಚಿಕ್ಕಜಂತಕಲ್ ಎಂಬಾತನು ತನ್ನ ಮೋಟಾರ ಸೈಕಲನ್ನು ಅತೀವೇಗ ಹಾಗೂ ತೀವ್ರ ನಿರ್ಲಕ್ಷ್ಯತನದಿಂದ ನಡೆಯಿಸಿಕೊಂಡು ಹೋಗಿ ಟಕ್ಕರು ಕೊಟ್ಟು ಅಪಘಾತ ಮಾಡಿದ್ದರಿಂದ ಎಡಗೈ ಮುಂಗೈ ಹತ್ತಿರ ಪೆಟ್ಟಾಗಿ ಎಡಬುಜಕ್ಕೆ, ಎಡಗಡೆ ಸೊಂಟಕ್ಕೆ ತೀವ್ರ ಒಳಪೆಟ್ಟಾಗಿ ಮಾತನಾಡುವ ಸ್ಥಿತಿಯಲ್ಲಿ ಇರದೇ ಇದ್ದುದರಿಂದ ಚಿಕಿತ್ಸೆ ಕುರಿತು ಶ್ರೀರಾಮನಗರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಲು ವೈಧ್ಯರು ಯಾರೂ ಇರದೇ ಇದ್ದುದರಿಂದ ಗಂಗಾವತಿಯಿಂದ ಬಳ್ಳಾರಿಯ ಆಶಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕುರಿತು ಸೇರಿಕೆ ಮಾಡಿಸಿ ಅಲ್ಲಿಂದ ವೈಧ್ಯರ ಸಲಹೆ ಮೇರೆಗೆ ಬೆಂಗಳೂರಿನ ನೀಮಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಮಾಡಿಸಿ ವಾಪಸ್ಸು ದಿನಾಂಕ: 26-01-2017 ರಂದು ಬಳ್ಳಾರಿಯ ಆಶಾ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿದ್ದು ಆದರೆ ಅಪಘಾತ ಮಾಡಿದ ಮೋಟಾರ ಸೈಕಲ ಮಾಲಿಕರು ಈ ಬಗ್ಗೆ ಕೇಸು ಮಾಡುವದು ಬೇಡ ಆಸ್ಪತ್ರೆಯ ಖರ್ಚು ಕೊಡುತ್ತೇವೆ ಅಂತಾ ಹೇಳಿ ಹೋದವರು ಇಲ್ಲಿಯವರಗೆ ಬಾರದೇ ಇದ್ದುದರಿಂದ ಮತ್ತು ಇಲ್ಲಿಯವರಗೆ ವಿಜಯಕುಮಾರನಿಗೆ ಚಿಕಿತ್ಸೆ ಮಾಡಿಸುವದರಲ್ಲಿ ನಿರತನಾಗಿದ್ದರಿಂದ ಈ ದಿವಸ ತಡವಾಗಿ ಠಾಣೆಗೆ ಬಂದು ಈ ದೂರನ್ನು ಕೊಟ್ಟಿರುತ್ತೇನೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 
2] ಗಂಗಾವತಿ ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ: 04/2017 ಕಲಂ 279, 337, 338  ಐಪಿಸಿ.
ದಿನಾಂಕ 31-01-2017 ರಂದು ಬೆಳಗ್ಗೆ 8-00 ಗಂಟೆಗೆ ಪಿರ್ಯಾದಿದಾರನು ಆರೋಪಿತನ ಮೋಟಾರು ಸೈಕಲ್ಲ ಹಿರೋ ಸ್ಪಂಡರ್ ಪ್ಲಸ್ ಮೋ/ಸೈ ನಂ ಕೆ.. 35-ಇಎ 0727  ನೇದ್ದರ ಹಿಂದೆ ಕುಳಿತುಕೊಂಡು ತಮ್ಮೂರಿಗೆ ಹೊರಟಿರುವಾಗ ಕಂಪ್ಲಿ ರಸ್ತೆಯ ಶ್ರೀ ಉದ್ಬವ ಲಕ್ಷ್ಮೀ ಗುಡಿ ಹತ್ತಿರ ಆರೋಪಿತನು ಸದರಿ ಮೋಟಾರು ಸೈಕಲ್ಲನ್ನು ಅತೀಜೋರಾಗಿ ಮತ್ತು ಅಲಕ್ಷತನದಿಂದ ಚಾಲನೆ ಮಾಡಿಕೊಂಡು ಹೊರಟಿರುವಾಗ ರಸ್ತೆಯಲ್ಲಿ ಅಡ್ಡವಾಗಿ ನಾಯಿಅಡ್ಡ ಬಂದಿದ್ದರಿಂದ ಆರೋಪಿತನು ತನ್ನ ಮೋಟಾರು ಸೈಕಲ್ಲನ್ನು ಒಮ್ಮೆಲೆ ಬ್ರೇಕ್ ಹಾಕಿದ್ದರಿಂದ ಮೋ/ಸೈ ಸ್ಕಿಡ್ ಆಗಿ ಮೋಟಾರುಸೈಕಲ್ಲ ಸಮೇತ  ಬಿದ್ದಿದ್ದರಿಂದ ಪಿರ್ಯಾದಿದಾರನಿಗೆ ಬಲಕೈ ಮೋಣಕೈಗೆ ಭಾರಿ ಒಳಪೆಟ್ಟಾಗಿದ್ದುಮತ್ತು ಮೂಗಿಗೆತರೆಚಿದಗಾಯವಾಗಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
3] ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ: 08/2017 ಕಲಂ 326 324 323 504 506 ಸಹಿತ 34 ಐಪಿಸಿ
ದಿನಾಂಕ 31-01-2017 ರಂದು ಮುಂಜಾನೆ 10-30 ಗಂಟೆಗೆ ಫಿರ್ಯಾದಿದಾರ ಶ್ರೀ ಭೀಮಪ್ಪ ತಂದೆ ದುರಗಪ್ಪ ಚನ್ನದಾಸರ ಸಾ: ಹುಲಸನಹಟ್ಟಿ ಇವರು ಫಿರ್ಯಾದಿ ನೀಡಿದ್ದು, ದಿನಾಂಕ 31-01-2017 ರಂದು ಮುಂಜಾನೆ 6-00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ಯಂಕಮ್ಮ ಮತ್ತು ಮಗ ಮಹಾದೇವಮ್ಮ, ಮೊಮ್ಮಗ ಶಿವಾನಂದ ರವರೊಂದಿಗೆ ನಮ್ಮ ಮನೆಯ ಮುಂದೆ ಕುಳಿತುಕೊಂಡಾಗ ಆ ಸಮಯದಲ್ಲಿ ನನ್ನ ಮಗ ಬಸಪ್ಪ, ಆತನ ಹೆಂಡತಿ ಶಂಕ್ರಮ್ಮ, ಮೊಮ್ಮಗ ಶರಣಪ್ಪ ರವರು ಕೂಡಿಕೊಂಡು ನಮ್ಮ ಮನೆಯ ಹತ್ತಿರ ಬಂದು ನನ್ನ ಮೊಮ್ಮಗ ಶರಣಪ್ಪ ಈತನು ಲೇ ಮುದಿಯವಾ ನಮ್ಮ ಹೊಲವನ್ನು ನಮ್ಮ ಹೆಸರಿನಲ್ಲಿ ಮಾಡಿಸಿಕೊಡಲೇ ಅಂತಾ ಅಂದನು, ಆಗ ನನ್ನನ್ನೇನು ಕೇಳುತ್ತೀ ನಿಮ್ಮಪ್ಪನಿಗೆ ಕೇಳು ಅಂತಾ ಅಂದೆನು, ಅಲ್ಲಿಯೇ ಇದ್ದ ಮಹಾದೇವಮ್ಮಳು ನಮ್ಮ ಹತ್ತಿರ ಬಂದು ಶರಣಪ್ಪನಿಗೆ ಯಾಕೇ ಹಿರಿಯರ ಜೊತೆ ಹೇಂಗ್ಯಾ ಮಾತಾಡುತ್ತೀ ಸರಿಯಾಗಿ ಮಾತಾನಾಡು ಅಂತಾ ಶರಣಪ್ಪನಿಗೆ ಬುದ್ದಿ ಹೇಳಿದಳು. ಆಗ ಶರಣಪ್ಪನು ಒಮ್ಮೇಲೆ ಸಿಟ್ಟಿಗೆ ಲೇ ಭೂಸುಡೀ ಸೂಳೇ, ನಮ್ಮಗೇನು ಸೆಂಟ್ ಹೇಳುತ್ತೀ ಅಂತಾ ಅಂದವನೇ ತನ್ನ ಕೈಯಲ್ಲಿದ್ದ ರಾಡ್ದಿಂದ ಮಹಾದೆವಮ್ಮಳ ಬಾಯಿಗೆ, ಹಣೆಗೆ ಜೋರಾಗಿ ಬಡೆದನು. ಇದರಿಂದ ಮಹಾದೇವಮ್ಮಳ ಹಲ್ಲು ಮುರಿದು ಸಡಿಲಾಗಿರುತ್ತವೆ ತಲೆಗೆ ಭಾರಿ ರಕ್ತ ಗಾಯವಾಗಿರುತ್ತದೆ. ನನ್ನ ಮಗ ಬಸಪ್ಪನು ನನ್ನ ಬಾಯಿಯನ್ನು ಗಟ್ಟಿಯಾಗಿ ಹಿಡಿದುಕೊಂಡು ಕೈಯಿಂದ ಹೊಟ್ಟೆಗೆ, ಬೆನ್ನಿಗೆ ಗುದ್ದಿದನು. ಶಂಕ್ರಮ್ಮಳು ಬಡಿಗೆಯಿಂದ ನನ್ನ ಹಣೆಗೆ ಹೊಡೆದಳು. ನನ್ನ ಮೊಮ್ಮಗ ಶಿವಾನಂದನಿಗೆ ಶರಣಪ್ಪನು ಕೈಯಿಂದ ಕಪಾಳಕ್ಕೆ ಬಡೆದು ಒಳ ಪೆಟ್ಟು ಮಾಡಿರುತ್ತಾನೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

 
Will Smith Visitors
Since 01/02/2008