Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Friday, January 1, 2016

1) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 01/2016 ಕಲಂ. 79, 80 Karnataka Police Act.
ದಿನಾಂಕ: 01-01-2016 ರಂದು ಬೆಳಗಿನ ಜಾವ 01:30 ಗಂಟೆಯ ಸುಮಾರಿಗೆ ಮೇಲ್ಕಂಡ 14 ಜನರು ಆರೋಪಿತರು ನೀಲಂ ಲಾಡ್ಜ ನಂ 117 ನೇದ್ದರಲ್ಲಿ ವಿದ್ಯುತ್ ಬೆಳಕಿನಲ್ಲಿ ಪಣಕ್ಕೆ ನಗದು ಹಣ ಹಚ್ಚಿ ಇಸ್ಪೇಟ್ ಎಲೆಗಳಿಂದ ಅಂದರ ಬಾಹರ್ ಎಂಬ ಜೂಜಾಟದಲ್ಲಿ ತೊಡಗಿದ್ದಾಗ ಫಿರ್ಯಾದಿದಾರರಾದ ಸತೀಶ ಎಸ್ ಪಾಟೀಲ ಪಿ. ಕೊಪ್ಪಳ ನಗರ ರವರು ದಾಳಿ ಮಾಡಿ ಮೇಲ್ಕಾಣಿಸಿದ ಮುದ್ದೇಮಾಲುಗಳನ್ನು ಜಫ್ತು ಮಾಡಿಕೊಂಡು 14 ಜನ ಜೂಜುಕೋರರನ್ನು ವಶಕ್ಕೆ ತಗೆದುಕೊಂಡು ಪಂಚನಾಮೆಯನ್ನು ಬೆಳಗಿನ ಜಾವ 01:30 ಗಂಟೆಯಿಂದ 02:30 ಗಂಟೆಯವರಗೆ ಪೂರೈಸಿ ಕೊಂಡು ಬಂದು ಸದರಿ ಜೂಜುಕೊರರ ವಿರುದ್ದ ಕಾನೂನು ರೀತಿ ಕ್ರಮ ಜರಗಿಸುವ ಕುರಿತು  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 235/2015 ಕಲಂ. 498(ಎ), 323, 324, 448, 504, 506 ಸಹಿತ 34 ಐ.ಪಿ.ಸಿ.
ದಿನಾಂಕ:31-12-2015 ರಂದು ರಾತ್ರಿ 8-45 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ನೇತ್ರಾ ಗಂಡ ಅಶೋಕ ಹೇರೂರು ವಯಾ: 20 ವರ್ಷ ಸಾ:  ಅಬ್ಬಿಗೇರಿ ಹಾಲಿ ವಸ್ತಿ: ಹಿರೇಮನ್ನಾಪೂರ ರವರು ಠಾಣೆಗೆ ಹಾಜರಾಗಿ ಒಂದು ಲಿಖಿತ ಪಿರ್ಯಾದಿಯನ್ನು ಹಾಜರಪಡಿಸಿದ್ದು ಸದರ ಪಿರ್ಯಾದಿ ಸಾರಾಂಶವೆನೆಂದರೆ, ಇಂದು ದಿನಾಕ:31-12-2015 ರಂದು ಮದ್ಯಾಹ್ನ 12-30 ಗಂಟೆ ಸುಮಾರಿಗೆ ಪಿರ್ಯಾದಿದಾರರಿಗೆ ಅವರ ಗಂಡನಾದ ಅಶೋಕ ಹೇರೂರು,  ಅವರ ಅಣ್ಣನಾದ ಪ್ರಕಾಶ ಹೇರೂರು, ಅತ್ತೆಯಾದ ಕಸ್ತೂರೆಮ್ಮ ಮತ್ತು ಫಿರ್ಯಾದಿದಾರರ ಗಂಡನ ಅಣ್ಣನ ಹೆಂಡತಿಯಾದ ನೀಲಮ್ಮ ಎಲ್ಲರೂ ಕೂಡಿ ಫಿರ್ಯಾದಿದಾರರನ್ನು ಏಕಾ ಏಕಿ ಮನೆ ಒಳಗೆ ಬಂದು ಲೇ ಸೂಳೆ ಮಗಳೇ ಎಂದು ಮನೆಯಿಂದ ಹೊರಗೆ ಎಳೆದು ತಂದು ಅಂಗಳದಲ್ಲಿ ಹಾಕಿ ಒದ್ದು ಬಡಿದು ಸೀರೆಯನ್ನು ಎಳೆದರು, ಫಿರ್ಯಾದಿಯ ಗಂಡ ಮತ್ತು ಭಾವ ಕಟ್ಟಿಗೆಯಿಂದ ಹೊಡೆದರು. ಅವರ ಅತ್ತೆಯವರು ಮತ್ತು  ಅವರ ಭಾವನ ಹೆಂಡತಿಯಾದ ನೀಲಮ್ಮ ಇವರು ಕೈಕಾಲುಗಳನ್ನು ಹಿಡಿದುಕೊಂಡಿದ್ದು ಅತ್ತೆಯವರು ಅವಳನ್ನು ಏನು ಕೇಳುತ್ತಿರಿ ಹೊತ್ತುಕೊಂಡು ಹೋಗೋಣ ನಡಿರಿ ಅಂತಾ ಬಾಯಿಯಲ್ಲಿ ಬಟ್ಟೆಯನ್ನು ತುರುಕಿ ಸಿಕ್ಕಾ ಪಟ್ಟಿಯಿಂದ ಬಡಿದು ಅವರ ಮೈಮೇಲೆ ಸೀಮೆ ಎಣ್ಣೆಯನ್ನು ಹಾಕಿ ಕಡ್ಡಿಯನ್ನು ಕೊರೆದು ಬೆಂಕಿಯನ್ನು ಹಚ್ಚಲು ಬಂದರು ಇದನ್ನು ಕಂಡ ಅವರ ತಾಯಿಯವರು  ನಮ್ಮ ಅಕ್ಕನ ಗಂಡ ನಮ್ಮೂರಿನ ಜನ ಸೇರಿಕೊಂಡು ಬಿಡಿಸಲು ಬಂದರು. ಲೇ ನಿವೇನು ಸೆಂಟಾ ಹೇಳುತ್ತಿರಿ ನನ್ನ ಹೆಂಡತಿಯನ್ನು ನಾವು ಏನಾದರೂ ಮಾಡುತ್ತೇವೆ ಅದನ್ನು ಹೇಳುವದಕ್ಕೆ ನೀವು ಯಾರು ಎಂದು ಅವರಿಗೆ ಅವ್ಯಾಚ್ಯ ಶಬ್ದಗಳಿಂದ ಬೈದಾಡಿ ಕೇಕೆ  ಹೊಡೆದು ಚಿರಾಡಿರುತ್ತಾರೆ. ನಿನ್ನ ಜೀವ ಉಳಿಸುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಮುಂತಾಗಿ ಇದ್ದ ಪಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
3) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 280/2015 ಕಲಂ. 379 ಐ.ಪಿ.ಸಿ:.

ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ಕೊಪ್ಪಳ ರವರ ಜ್ಞಾಪನ ಪತ್ರ ಸಂಖ್ಯೆ ಅಪರಾಧ/1/2015 ದಿನಾಂಕ: 02-12-2015 ರ ಪ್ರಕಾರ ಬಳ್ಳಾರಿ ಜಿಲ್ಲೆ ಎಂ.ಎಂ. ಹಳ್ಳಿ  ಪೊಲೀಸ್ ಠಾಣೆ ಗುನ್ನೆ ನಂ. 135/2015 ಕಲಂ 379 ಐ.ಪಿ.ಸಿ. ಪ್ರಕರಣವು ಹದ್ದಿ ಪ್ರಯುಕ್ತ ಮುನಿರಾಬಾದ ಪೊಲೀಸ್ ಠಾಣೆಗೆ ವರ್ಗಾವಣಗೊಂಡು ಬಂದಿದ್ದರ ಮೇರೆಗೆ ಇಂದು ದಿನಾಂಕ: 31-12-2015 ರಂದು ಸಾಯಂಕಾಲ 6-45 ಗಂಟೆಗೆ ಪೊಲೀಸ್ ಐ.ಟಿ. ತಂತ್ರಾಂಶದಲ್ಲಿ ಸ್ವೀಕೃತ ಮಾಡಿಕೊಂಡಿದ್ದು ಅದರ ಸಾರಾಂಶವೇನಂದರೆ, ದಿನಾಂಕ:  17-10-2015 ರಂದು ರಾತ್ರಿ 10-00 ಗಂಟೆಯಿಂದ 11-30 ಗಂಟೆಯ ನಡುವಿನ ಅವಧಿಯಲ್ಲಿ ಪಿರ್ಯಾದಿದಾರರ ಲಾರಿ ಚಾಲಕನು ತನ್ನ ಲಾರಿಯನ್ನು ಬೂದಗುಂಪಾ ಕ್ರಾಸ್ ಹತ್ತಿರ ಇವರು ಹೋಟೆಲ್ ಸೀಮ್ಲಾ ಪ್ಯಾಲೇಸ್ ಮುಂದೆ ನಿಲ್ಲಿಸಿದ್ದ ಸಮಯದಲ್ಲಿ ಲಾರಿಯಲ್ಲಿ ಲೋಡ ಮಾಡಿದ್ದ 36 ಬಾಕ್ಸ್ ಬ್ರೆಕ್ ಆಯಿಲ್ ಅಂ.ಕಿ. 81,930-00 ರೂ. ಬೆಲೆ ಬಾಳವುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಮೇಲಿಂದ  ಪ್ರಕರಣ ದಾಖಲು ಮಾಡಿಕೊಂಡಿದ್ದು ಇರುತ್ತದೆ. 

0 comments:

 
Will Smith Visitors
Since 01/02/2008