Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Saturday, April 29, 2017

1] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 98/2017 ಕಲಂ: 87 Karnataka Police Act.
ದಿನಾಂಕ :28-04-2017 ರಂದು ಮದ್ಯಾಹ್ನ 4-30 ಗಂಟೆ ಸುಮಾರಿಗೆ ಗಂಗನಾಳ ಗ್ರಾಮದ ಬಸರಿಕಟ್ಟೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಂದರಬಾಹರ ಎಂಬ ಇಸ್ಪಿಟ್ ಜೂಜಾಟ ನಡೆದಿದೆ ಅಂತಾ ತಿಳಿದು ಬಂದಿದ್ದು ಪಿ.ಎಸ್.ಐ ಕುಷ್ಠಗಿ ಪೊಲೀಸ ಠಾಣೆರವರು ತಮ್ಮ ಸಿಬ್ಬಂದಿ ಪಂಚರೊಂದಿಗೆ ಎಲ್ಲರೂ ಕೂಡಿ ಹೋಗಿ ರೇಡ್ ಮಾಡಿ 7 ಜನ ಆರೋಪಿತರು 1] ಬೀರಪ್ಪ ತಂದಿ ನಾಗಪ್ಪ ಕಂಬಳಿಹಾಳ ವಯ: 28 ವರ್ಷ ಜಾ: ಕುರುಬರ ಉ:ಒಕ್ಕಲುತನ ಸಾ: ತುರುವಿಹಾಳ ತಾ: ಸಿಂಧನೂರು. 2] ಹನಮೇಶ ತಂದಿ ದೊಡ್ಡಪ್ಪ ಮಾದಾಪೂರ ವಯಾ: 26 ವರ್ಷ ಜಾತಿ: ಕುರುಬರ ಉ: ಒಕ್ಕಲುತನ ಸಾ: ಮಾದಾಪೂರ ತಾ: ಕುಷ್ಟಗಿ. 3] ಶರಣಪ್ಪ ತಂದಿ ಶಂಕ್ರಪ್ಪ ಹುಣಸಿಹಾಳ ವಯಾ: 22 ವರ್ಷ ಜಾತಿ: ವಾಲ್ಮೀಕಿ ಉ: ಒಕ್ಕಲುತನ ಸಾ: ಹುಣಸಿಹಾಳ ತಾ: ಯಲಬುರ್ಗಾ 4] ಕರಿಯಪ್ಪ ತಂದಿ ಹನಮಪ್ಪ ಯಾಪಲದಿನ್ನಿ ವಯಾ: 26 ವರ್ಷ ಜಾ:ವಾಲ್ಮೀಕಿ ಉ:ಕೂಲಿಕೆಲಸ ಸಾ: ಗಂಗನಾಳ ತಾ: ಕುಷ್ಟಗಿ 5] ಶಂಕ್ರಪ್ಪ ತಂದಿ ಹನಮಪ್ಪ ಮ್ಯಾಗೇರಿ ವಯಾ: 23 ವರ್ಷ ಜಾತಿ: ವಾಲ್ಮೀಕಿ ಉ:ಕೂಲಿ ಕೆಲಸ ಸಾ: ಗಂಗನಾಳ ತಾ: ಕುಷ್ಟಗಿ 6) ಶರಣಪ್ಪ ತಂದಿ ಸಣ್ಣಹನಮಪ್ಪ ಶಾಖಾಪೂರ ವಯಾ: 40 ವರ್ಷ ಜಾ: ಕುರುಬರ ಉ:ಒಕ್ಕಲುತನ ಸಾ:ಹಿರೇಮನ್ನಾಪೂರ ತಾ: ಕುಷ್ಟಗಿ ಮತ್ತು 7) ಶರಣಪ್ಪ ತಂದಿ ಕರಿಯಪ್ಪ ಗಂಗನಾಳ ವಯಾ: 45 ವರ್ಷ ಜಾ: ಕುರುಬರ ಉ:ಕೂಲಿಕೆಲಸ ಸಾ: ಗುಮಗೇರಿ ತಾ: ಕುಷ್ಟಗಿ ಸಿಕ್ಕಿದ್ದು ಹಾಗೂ ಆರೋಪಿತರಿಂದ ಇಸ್ಪೆಟ್ ಜೂಜಾಟದ ಒಟ್ಟು ಹಣ 5390=00 ರೂ, ಹಾಗೂ 52 ಇಸ್ಪೆಟ್ ಎಲೆಗಳು ಹಾಗೂ ಒಂದು ಹಳೆ ನ್ಯೂಸ್ ಪೇಪರರನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 99/2017 ಕಲಂ: 32, 34, Karnataka Execise Act.
ದಿನಾಂಕ 28-04-2017 ರಾತ್ರಿ 8-00 ಗಂಟೆ ಸುಮಾರಿಗೆ ಕುಷ್ಟಗಿ ಬಸ್ ಸ್ಟಾಂಡ್ ಹತ್ತಿರ ಅನಧಿಕೃತವಾಗಿ ಸರಾಯಿ ಮಾರಾಟ ಮಾಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಕುಷ್ಟಗಿ ರವರು ಹಾಗೂ ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಹೋಗಿದ್ದು ಸಾರಾಯಿ ಮಾರಾಟ ಮಾಡುತ್ತಿದ್ದ ವ್ಯಕ್ತಿ ಸಿಕ್ಕಿ ಬಿದ್ದನು. ಸದರಿಯವನನ್ನು ವಿಚಾರಿಸಿ ಅವನ ಹತ್ತಿರ ಇದ್ದ ಸಾರಾಯಿ ಟೆಟ್ರಾಪ್ಯಾಕ್ ಗಳನ್ನು ಪರೀಶಿಲಿಸಿ ನೋಡಿ ಅವನ ಅಂಗ ಜಪ್ತಿ ಮಾಡಲಾಗಿ ಆತನ ಹೆಸರು ಶಿವಾನಂದ ತಂದೆ ಯಮನಪ್ಪ ಸೂಡಿ ವಯಾ 32 ವರ್ಷ ಜಾ.ಲಿಂಗಾಯತ ಉ.ಒಕ್ಕಲುತನ ಸಾ.ಹಿರೇಮನ್ನಾಪೂರ ಅಂತಾ ಹೇಳಿದ್ದು ಆತನ ಹತ್ತಿರ ಒಟ್ಟು 45 ಓಲ್ಡ ಟವರನ್  ಸಾರಾಯಿ ಟೆಟ್ರಾಪ್ಯಾಕ್ ಗಳು ಅಂ.ಕಿ. 2798=55 ರೂ, ಇದ್ದು ಹಾಗೂ ನಗದು ಹಣ 320=00 ರೂ ಗಳು ಸಿಕ್ಕಿದ್ದು, ಸದರಿಯವನಿಗೆ ಸಾರಾಯಿ ಮಾರಾಟ ಮಾಡಲು ಯಾವುದಾದರೂ ಲೈಸನ್ಸ ವಗೈರಾ ಇರುವ ಬಗ್ಗೆ ವಿಚಾರಿಸಲಾಗಿ ತಾನು ಯಾವುದೇ ಲೈಸನ್ಸ ವಗೈರಾ ಹೊಂದಿರುವದಿಲ್ಲ ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿರುವದಾಗಿ ಹೇಳಿದ್ದು, ಈ ಬಗ್ಗೆ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ: 84/2017 ಕಲಂ: 109 ಸಿ.ಆರ್.ಪಿ.ಸಿ.
ದಿನಾಂಕ 28-04-2017 ರಂದು 4-00 ಎ.ಎಂ.ಸುಮಾರಿಗೆ ಹಿಟ್ನಾಳ ಗ್ರಾಮ ಪಂಚಾಯತಿ ಹತ್ತಿರ ಒಬ್ಬನು ಪೊಲೀಸ್ ಜೀಪನ್ನು ನೋಡಿ ತನ್ನ ಇರುವಿಕೆಯನ್ನು ಮರೆ ಮಾಚಲು ಒಂದು ಅಂಗಡಿಯ ಹಿಂದೆ ಹೋಗಿ ಮರೆಮಾಚುತ್ತಿರಲು ಆಗ ಪಿ.ಎಸ್.ಐ. ಮುನಿರಾಬಾದ್ ಮತ್ತು ಸಿಬ್ಬಂದಿಯರು ಹೋಗಿ ಆತನಿಗೆ ಹಿಡಿದು ವಿಚಾರಿಸಲು ಆತನು ತಡವರಿಸುತ್ತಾ ತನ್ನ ಹೆಸರು ವಿಳಾಸವನ್ನು ತಪ್ಪು ತಪ್ಪಾಗಿ ಹೇಳಿದ್ದು ಪುನಃ ಆತನಿಗೆ ವಿಚಾರಿಸಲು ಆತನು ತನ್ನ ನಿಜವಾದ ಹೆಸರು ಹುಲಗಪ್ಪ ತಂ/ ಹನುಮಂತಪ್ಪ ಹೊಪಸೂರು 24 ವರ್ಷ ಜಾ: ಕುರುಬರ ಉ: ಕೂಲಿ ಕೆಲಸ ಸಾ: ಬೂದಗುಂಪಾ ಎಂದು ಹೇಳಿದ್ದು  ಸದರಿಯವನಿಗೆ ಹಾಗೆಯೆ ಬಿಟ್ಟಲ್ಲಿ ಯಾವುದಾದದರು ಸ್ವತ್ತಿನ ಅಪರಾಧವನ್ನು ಮಾಡುವ ಸಾದ್ಯತೆ ಇರುತ್ತೆ ಎಂಬ ಬಲವಾದ ಸಂಶಯವಿರುವದರಿಂದ ಆತನ ವಿರುದ್ದ ಮುಂಜಾಗ್ರತಾ ಕ್ರಮಾ ಕುರಿತು ಪ್ರಕರಣ ದಾಖಲಿಸಿ ಕೊಂಡಿದ್ದು ಇರುತ್ತದೆ.

Friday, April 28, 2017

1] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 84/2017 ಕಲಂ: 279, 338 ಐ.ಪಿ.ಸಿ.
ಫಿರ್ಯಾದಿ ರಾಮಪ್ಪ ಇವರ ಹೇಳಿಕೆ ಫಿರ್ಯಾದಿಯನ್ನು ಪಡೆದುಕೊಂಡಿದ್ದು, ಸಾರಾಂಶವೇನೆಂದರೆ, ದಿ:27-04-17 ರಂದು ಬೆಳಿಗ್ಗೆ 09-45 ಗಂಟೆಗೆ ಫಿರ್ಯಾದಿದಾರರು ತಮ್ಮ ಮೋಟಾರ ಸೈಕಲ್ ನಂ: ಕೆಎ-35/ವಿ-9707 ನೇದ್ದನ್ನು ಓಡಿಸಿಕೊಂಡು ತಮ್ಮ ಗ್ರಾಮದಿಂದಾ ಕರ್ಕಿಹಳ್ಳಿ ಕಡೆಗೆ ಕುರಿಹಟ್ಟಿಗೆ ಹೋಗಲು ಅಂತಾ ಗದಗ-ಕೊಪ್ಪಳ ಎನ್,ಹೆಚ್-63 ರಸ್ತೆಯ ಕಾವೇರಿ ಪೆಟ್ರೋಲಬಂಕ್ ಸಮೀಪದಲ್ಲಿ ಬರುತ್ತಿದ್ದಾಗ ಅದೇ ಸಮಯಕ್ಕೆ ಎದುರುಗಡೆ ಕೊಪ್ಪಳದ ಕಡೆಯಿಂದ ಕಾರ್ ನಂ: ಕೆಎ-37/ಎಮ್-4963 ನೇದ್ದರ ಚಾಲಕನು ತನ್ನ ವಾಹನವನ್ನು ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದಾ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಮೋಟಾರ ಸೈಕಲ್ ಗೆ ಟಕ್ಕರ ಕೊಟ್ಟು ಅಪಘಾತ ಮಾಡಿದ್ದರಿಂದ ಫಿರ್ಯಾದಿಗೆ ಎಡಕಾಲ ಪಾದದ ಹತ್ತಿರ ಭಾರಿಗಾಯವಾಗಿದ್ದು ಇರುತ್ತದೆ. ಕಾರಣ ಸದರಿ ಕಾರ್ ಚಾಲಕ ಶಿವಯೋಗಪ್ಪ ಪಟ್ಟೇದ. ಸಾ: ಆರಾಳ ತಾ: ಗಂಗಾವತಿ ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ನೀಡಿದ ಫಿರ್ಯಾಧಿ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 85/2017 ಕಲಂ: 143,147,148,448,323,324,504,506 ಸಹಿತ 149 ಐ.ಪಿ.ಸಿ.
ಫಿರ್ಯಾದಿ ನಾಗಪ್ಪ ಗ್ವಾಡಿಕಾರ. ಸಾ: ಕಿನ್ನಾಳ ಇವರು ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೇ, ದಿ:27-04-2017 ರಂದು ರಾತ್ರಿ 8-30 ಗಂಟೆಯ ಸುಮಾರಿಗೆ ಫಿರ್ಯಾದಿದಾರರು ತನ್ನ ಹೆಂಡತಿ, ಮಗನೊಂದಿಗೆ ಮಾತನಾಡುತ್ತಾ ಕುಳಿತಿರುವಾಗ, ಆರೋಪಿತರು ಅಕ್ರಮ ಗುಂಪು ಕಟ್ಟಿಕೊಂಡು ಅತೀಕ್ರಮ ಪ್ರವೇಶ ಮಾಡಿ ತಮ್ಮ ಕೈಗಳಲ್ಲಿ ಕಟ್ಟಿಗೆ, ಕಲ್ಲುಗಳನ್ನು ಹಿಡಿದುಕೊಂಡು ಬಂದು ಮನೆಯೊಳಗೆ ಕುಳಿತಿದ್ದ ಫಿರ್ಯಾದಿಗೆ ಆರೋಪಿ ಹನುಮಪ್ಪ ಇತನು ಏನಲೇ ಸೂಳೆಮಗನೆ ನಮ್ಮ ತಂದೆಯ ಹೆಸರಿನಲ್ಲಿರುವ ಹೊಲವನ್ನು ನಮಗೆ ಬಿಟ್ಟುಕೊಡಲೇ ಅಂತಾ ಜಗಳ ತೆಗೆದು ತನ್ನ ಕೈಯಲ್ಲಿದ್ದ ಕಟ್ಟಿಗೆಯಿಂದ ಫಿರ್ಯಾದಿಯ ಬಲಗಡೆ ಮಲಕಿಕೆ ಮತ್ತು ಬಲಕಣ್ಣಿನ ಕೆಳಗೆ ಮತ್ತು ಬಲಗಡೆ ಪಕ್ಕಡಿಗೆ ಹೊಡೆದು ರಕ್ತಗಾಯ ಮತ್ತು ಒಳಪೆಟ್ಟು ಪಡಿಸಿದನು. ಆಗ ಅಲ್ಲಿಯೇ ಕುಳಿತಿದ್ದ ಫಿರ್ಯಾದಿ ಹೆಂಡತಿ ರೇಣುಕವ್ವ ಇವಳು ತನ್ನ ಗಂಡನಿಗೆ ಯಾಕೆ ಹೊಡೆಯುತ್ತೀರಿ ಜಮೀನಿನ ಬಗ್ಗೆ ಬೆಳಿಗ್ಗೆ ಹಿರಿಯರೊಂದಿಗೆ ಮಾತನಾಡೊಣ ಅಂತಾ ಹೇಳಿದರು ಅದಕ್ಕೆ ಆರೋಪಿತರಾದ ರಾಮಪ್ಪ ಮತ್ತು ಈರಪ್ಪ ಇವರು ಅದೇನು ಹೇಳುತ್ತೀಯಲೇ ಭೋಸುಡಿ ಸೂಳೆ ಆ ಹೊಲ ನಮ್ಮದು ಅದೇನು ನಮಗೆ ಬುದ್ದಿ ಹೇಳ್ಯಾಕ ಬಂದಿಯಲೇ ಅಂತಾ ಅಂದವರೆ ಅವಳ ಮೈಮೇಲಿದ್ದ ಸೀರೆಯ ಸೆರಗನ್ನು ಹಿಡಿದು ಜಗ್ಗಾಡಿ ಅವಮಾನ ಮಾಡಿ ಮತ್ತು ಅವರು ಕೈಯಿಂದ ಮುಷ್ಟಿಮಾಡಿ ರೇಣುಕಮ್ಮಳ ಬಾಯಿಗೆ ಜೋರಾಗಿ ಗುದ್ದಿ ರಕ್ತಗಾಯ ಮಾಡಿದರು. ಮತ್ತು ಫಿರ್ಯಾದಿಯ ಅಂಗವಿಕಲ ಮಗ ಶರಣಪ್ಪ ಇತನು ತನ್ನ ತಂದೆ-ತಾಯಿಗೆ ಹೊಡೆಯ ಬೇಡಿರಿ ನಿಮ್ಮ ಜಮೀನನ್ನು ನಿಮಗೆ ಕೊಡುತ್ತೇವೆ ಈಗ ನಿಮ್ಮ ಮನೆಗೆ ಹೋಗಿರಿ ಅಂತಾ ಅವರಿಗೆ ಹೇಳಿದನು, ಆಗ ಆರೋಪಿತರಾದ ಕಸ್ತೂರೆವ್ವ, ಲಕ್ಷ್ಮವ್ವ ಮತ್ತು ಸಂತೋಷ ಇವರು ಲೇ ಕುಂಟ ಬೋಸುಡಿ ಮಗನೆ ನಿನಗೆ ಕಾಲು ಸರಿಯಾಗಿಲ್ಲಂದರು ನಮಗೆ ಬುದ್ದಿ ಹೇಳ್ಯಾಕ ಬಂದಾನ ಮಗ ಅಂತಾ ಅಂದವರೆ ಕಸ್ತೂರೆವ್ವ, ಲಕ್ಷ್ಮವ್ವ ಇವರು ಕೈಯಿಂದ ಮೈಕೈಗೆ ಮತ್ತು ಸಂತೋಷ ಇತನು ತನ್ನ ಕೈಯಲ್ಲಿದ್ದ ಕಲ್ಲಿನಿಂದ ಎಡಕಣ್ಣಿನ ಮೇಲೆ , ತಲೆಗೆ ಬಲಗಾಲಿನ ಮೊಣಕಾಲಿಗೆ ಹೊಡೆದು ರಕ್ತಗಾಯ ಮತ್ತು ಒಳಪೆಟ್ಟು ಮಾಡಿದ್ದು ಅಲ್ಲದೇ ಆರೋಪಿತರು ಅಲ್ಲಿಂದ ಹೋಗುವಾಗ ಇವತ್ತು ಉಳಿದುಕೊಂಡಿರಿ ಭೋಸುಡಿ ಮಕ್ಕಳಾ ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ಫಿರ್ಯಾದಿ ಮೇಲಿಂದ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
3] ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ: 42/2017 ಕಲಂ: 341 307 326 323 392 504 506 ಐ.ಪಿ.ಸಿ.
ದಿನಾಂಕ 27-04-2017 ರಂದು ಮುಂಜಾನೆ 10-15 ಗಂಟೆಗೆ ಫಿರ್ಯಾಧಿದಾರ ಶ್ರೀ ಬಾರೆಪ್ಪ ತಂದೆ ಸಿದ್ದಪ್ಪ ಬಂಗಾರಿ, ವಯಾ 25 ವರ್ಷ ಜಾತಿ ವಾಲ್ಮೀಕಿ, ಉ : ಕೂಲಿಕೆಲಸ ಸಾ : ಹಿರೇಖೇಡಾ ಇವರು ಠಾಣೆಗೆ ಹಾಜರಾಗಿ ತಾವು ಸ್ವಂತಾಕ್ಷರದಿಂದ ಬರೆದ ಲಿಖಿತ ಫಿರ್ಯಾಧಿಯನ್ನು ಹಾಜರ ಪಡಿಸಿದ್ದು, ಅದರ ಸಾರಾಂಶವೇನೆಂದರೆ, ದಿನಾಂಕ 26-04-2017 ರಂದು ಸಂಜೆ 6-00 ಗಂಟೆಯ ಸುಮಾರಿಗೆ ನಾನು ತಾವರಗೇರಾ ಗ್ರಾಮದಲ್ಲಿ ನನ್ನ ತಂಗಿಗೆ ಬುತ್ತಿ ಕೊಟ್ಟು ವಾಪಸ್ ನಮ್ಮೂರಿಗೆ ನಾನು ಮತ್ತು ನನ್ನ ಅಳಿಯ ರಮೇಶ ಈತನೊಂದಿಗೆ ನಮ್ಮ ಸಂಬಂಧಿಕರ ಹೆಚ್.ಎಫ್. ಡಿಲೆಕ್ಸ್ ಮೋಟಾರ ಸೈಕಲ್ ನಂ.ಕೆಎ-37/ಇಬಿ-7655 ರಲ್ಲಿ ನಮ್ಮೂರಿಗೆ ಹೋಗುತ್ತಿದ್ದೇವು. ರಾತ್ರಿ 8-00 ಗಂಟೆಯ ಸುಮಾರಿಗೆ ನಾವು ಕನಕಗಿರಿಯ ನವಲಿ ಸರ್ಕಲ್ ದಲ್ಲಿ ಊಟ ಮಾಡುತ್ತಿದ್ದಾಗ ಆ ಸಮಯದಲ್ಲಿ ಮಲ್ಲಿಗೆವಾಡ ಗ್ರಾಮದ ಹನುಮಂತಪ್ಪ ತಂದೆ ನಾಗಪ್ಪ ನಾಯಕ ಈತನು ನನ್ನ ಹತ್ತಿರ ಕುಡಿದ ಅಮಲಿನಲ್ಲಿ ಬಂದು ಏನಲೇ ಸೂಳೇ ಮಗನೇ ಬಾರೇ ನನ್ನನ್ನು ನಮ್ಮೂರಿಗೆ ಬಿಟ್ಟು ಬಾ ಅಂತಾ ಅನ್ನುತ್ತಾ ಚೀರಾಡುತ್ತಾ ನಮಗೆ ಹೊಡೆಯಲು ಬಂದನು. ನಾವು ಗಾಬರಿಯಾಗಿ ಹನುಮಂತನನ್ನು ಹಿಂದೆ ಕೂಡಿಸಿಕೊಂಡು ನಾವು ಕನಕಗಿರಿ-ನವಲಿ ರಸ್ತೆಯ ಮುಖಾಂತರ ಮಲ್ಲಿಗೆವಾಡ ಗ್ರಾಮಕ್ಕೆ ಹೋಗುವಾಗ ರಾತ್ರಿ 10-30 ಗಂಟೆಯ ಸುಮಾರಿಗೆ ಮಲ್ಲಿಗೆವಾಡ ಸೀಮಾದ ಗಾಳಿ ದುರಗಮ್ಮ ಗುಡಿಯ ಹತ್ತಿರ ನಮ್ಮನ್ನು ನಿಲ್ಲಿಸಿ ಹನುಮಂತಪ್ಪನು ನಮಗೆ ಸರಾಯಿ ಕುಡಿಯಲು ಹಣ ಕೊಡಲೇ ಸೂಳೇ ಮಗನೇ ಅಂತಾ ಅನ್ನುತ್ತಾ ನನ್ನ ಜೇಬಿನಲ್ಲಿದ್ದ ರೂ.200/-ಗಳನ್ನು ಹಣವನ್ನು ಒತ್ತಾಯ ಪೂರ್ವಕವಾಗಿ ಕಸಿದುಕೊಂಡನು. ನನ್ನ ಅಳಿಯ ರಮೇಶನು ಅವನಿಗೆ ಯಾಕೇ ಹಣ ಕಸಿದುಕೊಳ್ಳುತ್ತೀಯಾ ಇವೆಷ್ಟಾ ಅವನ ಹತ್ತಿರ ಖಚರ್ಿಗೆ ಇವೇ ಅಂತಾ ಅವನಿಗೆ ಕೋರಿ ಕೊಂಡನು. ಕೂಡಲೇ ಹನುಮಂತಪ್ಪನು ಸಿಟ್ಟಿಗೆ ಬಂದು ನನಗೇನು ಹೇಳುತ್ತೀಲೇ ಸೂಳೇ ಮಗನೇ ಅಂತಾ ಅನ್ನುತ್ತಾ ನಮ್ಮನ್ನು ಕೊಲೆ ಮಾಡುವ ಉದ್ದೇಶದಿಂದ ಅಲ್ಲಿಯೇ ಗುಡಿಯಲ್ಲಿದ್ದ ಕಬ್ಬಿಣದ ರಾಡ್ ತೆಗೆದುಕೊಂಡು ಬಂದು ನನ್ನ ಅಳಿಯ ರಮೇಶ ಈತನ ತಲೆಗೆ, ಎಡಗೈ ಮೊಣಕೈ ಜೋರಾಗಿ ಹೊಡೆದನು. ಇದರಿಂದ ಅವನಿಗೆ ಜೋರಾಗಿ ರಕ್ತ ಬರ ಹತ್ತಿದ್ದು, ಹಾಗೂ ಎಡಗೈ ಬುಜಕ್ಕೆ, ಬೆನ್ನಿಗೆ ಜೋರಾಗಿ ಹೊಡೆದನು. ಬಿಡಿಸಲು ಹೋದ ನನಗೆ ಎದೆಗೆ ಕಾಲಿನಿಂದ ಜೋರಾಗಿ ಒದ್ದನು. ಮತ್ತು ರಸ್ತೆಯ ಪಕ್ಕದಲ್ಲಿದ್ದ ಒಂದು ದೊಡ್ಡ ಕಲ್ಲಿನಿಂದ ನನ್ನ ಮೋ.ಸೈ.ನ ಡೂಮಿಗೆ, ಟ್ಯಾಂಕಿಗೆ. ಸೈಡ್ ಭಾಕ್ಸ್ ಗೆ ಕಲ್ಲಿನಿಂದ ಜಜ್ಜಿ ಲುಕ್ಸಾನ ಮಾಡಿದನು. ಈ ಜಗಳವನ್ನು ನೋಡಿ ಅಲ್ಲಿಯೇ ರಸ್ತೆಯ ಮೇಲೆ ಹೋಗುತ್ತಿದ್ದ ನನ್ನ ಮಾವ ಲಕ್ಷ್ಮಣ ತಂದೆ ವಾಸಪ್ಪ ಬಿಳಿಗುಡ್ಡ, ನನ್ನ ತಂದೆ ಸಿದ್ದಪ್ಪ ತಂದೆ ಮರಿಯಪ್ಪ ಬಂಗಾರಿ ಇವರು ಬಂದು ಜಗಳ ಬಿಡಿಸಿ ಕಳುಹಿಸುವಾಗ ಹನುಮಂತಪ್ಪ ನಾಯಕನು ಈ ಸಲಾ ಉಳಿದಿಯೇಲೇ ಬಾರೆ ಸೂಳೇ ಮಗನೇ ನಾನು ಯಾವಾಗ ಕೇಳುತ್ತಿನೇ ಆವಾಗ ರೊಕ್ಕ ಕೊಡಬೇಕು ಇಲ್ಲದಿದ್ದರೇ ನಿನ್ನನ್ನು ಕೊಲೆ ಮಾಡುತ್ತೇವೆ ಅಂತಾ ಅನ್ನುತ್ತಾ ಕಬ್ಬಿಣದ ರಾಡ್ನ್ನು ಅಲ್ಲಿಯೇ ಬಿಸಾಕಿ ಹೋದರು. ಈ ಘಟನೆಯಿಂದ ನನ್ನ ಅಳಿಯ ರಮೇಶನ ತಲೆಗೆ, ಎಡಗೈಗೆ ಭಾರಿ ಪೆಟ್ಟಾಗಿ ಮೂಛರ್ೆ ಬಂದು ನೆಲಕ್ಕೆ ಬಿದ್ದಿದ್ದರಿಂದ ಅವನನ್ನು ಚಿಕಿತ್ಸೆಗಾಗಿ ಖಾಸಗಿ ವಾಹನದಲ್ಲಿ ಕರೆದುಕೊಂಡು ಬಂದು ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತೇವೆ ಕಾರಣ ಹನುಮಂತಪ್ಪ ತಂದೆ ನಾಗಪ್ಪ ನಾಯಕ ಸಾ : ಮಲ್ಲಿಗೆವಾಡ ಈತನ ಮೇಲೆ ಕೇಸ್ ಮಾಡಲು ವಿನಂತಿ ಅಂತಾ ಕೊಟ್ಟ ಲಿಖಿತ ಫಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ. 

Thursday, April 27, 2017

1] ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ: 57/2017 ಕಲಂ: 379 IPC and KMMCR 1994 Rule 44(1).
ದಿನಾಂಕ: 26-04-2017 ರಂದು ಮಧ್ಯಾಹ್ನ 12-00 ಗಂಟೆ ಸುಮಾರಿಗೆ ಶ್ರೀ ಶಂಕರಪ್ಪ ಎಲ್. ಪಿ.ಎಸ್.ಐ. ಹಾಗೂ ಅವರ ಸಿಬ್ಬಂದಿಗಳಾದ ಶ್ರೀ ರಾಘವೇಂದ್ರ ಹಕಾರಿ ಸಿಪಿಸಿ-427, ಆನಂದ ಹೆಚ್.ಜಿ-342 ಇವರೆಲ್ಲರೂ ಸೇರಿ ಕೂಡಿಕೊಂಡು ಠಾಣಾ ವ್ಯಾಪ್ತಿಯ ಕೇಸಲಾಪುರ ಕ್ರಾಸ್ ಹತ್ತಿರ ಹಾಲಿನ ಡೈರಿ ಮುಂದುಗಡೆ ಅಕ್ರಮ ಮರಳು ಸಾಗಾಣಿಕೆ ಪತ್ತೆ ಕುರಿತು ನಿಂತುಕೊಂಡಿದ್ದಾಗ, ಲಾರಿ ನಂ: ಕೆಎ-25/ಸಿ-1121  ನೇದ್ದರಲ್ಲಿ ಆರೋಪಿ ನಂ; 01 ಮತ್ತು 02 ಇವರಿಬ್ಬರು ಕೂಡಿಕೊಂಡು ಸರ್ಕಾರಕ್ಕೆ ಸೇರಿದ ತುಂಗಭದ್ರ ನದಿಯಲ್ಲಿಯ ಮರಳನ್ನು ಸರ್ಕಾರದಿಂದ ಅಥವಾ ಸಂಭಂದಿಸಿದ ಇಲಾಖೆಯಿಂದ ಯಾವುದೇ ಪಾಸ್ ಅಥವಾ ಪರ್ಮೀಟ್ ಪಡೆಯದೇ ಅಂದಾಜು 10,000-00 ರೂ. ಬೆಲೆ ಬಾಳುವ ಮರಳನ್ನು ಕಳ್ಳತನ ಮಾಡಿ, ಮಾರಾಟ ಮಾಡಿ ಲಾಭ ಗಳಿಸುವ ಉದ್ಧೇಶದಿಂದ ಮೇಲ್ಕಂಡ ತಮ್ಮ ಲಾರಿಯಲ್ಲಿ ತುಂಬಿಕೊಂಡು ಹೋರಾಟಾಗ ಪಿ.ಎಸ್.ಐ ರವರು ತಮ್ಮ ಸಿಬ್ಬಂದಿಯೊಂದಿಗೆ ದಾಳಿ ಮಾಡಿ, ಮರಳು ತುಂಬಿದ ಲಾರಿಯನ್ನು ಪಂಚರ ಸಮಕ್ಷಮ ವಶ ಪಡಿಸಿಕೊಂಡು ತಂದು ಠಾಣೆಯ ಆವರಣದಲ್ಲಿ ನಿಲ್ಲಿಸಿದ್ದು ಇರುತ್ತದೆ.  ಲಾರಿಯ ಚಾಲಕನು ಮರಳು ತುಂಬಿದ ಲಾರಿಯನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 68/2017 ಕಲಂ: 323, 324, 353 ,307,504, 506   IPC
ದಿನಾಂಕ : 26-04-2017 ರಂದು ಸಂಜೆ 5-45  ಗಂಟೆಗೆ ಫಿರ್ಯಾದಿದಾರರಾದ ಶ್ರೀ ಮಹಾಂತಗೌಡ ತಂದಿ ಶಿವನಗೌಡ ಪಾಟೀಲ್   ಪಿ.ಡಿ.ಓ  ಗ್ರಾಮ ಪಂಚಾಯತ್ ಕಾರ್ಯಾಲಯ ಬೇವಿನಾಳ ತಾ- ಗಂಗಾವತಿ  ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿಯನ್ನು ಕೊಟ್ಟಿದ್ದು ಅದರ ಸಾರಾಂಶವೇನೆಂದರೆ,  ನಾನು  ಬೇವಿನಾಳ ಗ್ರಾಮ ಪಂಚಾಯತ್  ಅಭಿವೃದ್ದಿ ಅಧಿಕಾರಿ ಅಂತಾ ಕಾರ್ಯ ನಿರ್ವಹಿಸುತ್ತಿದ್ದು,  ಇಂದು ದಿನಾಂಕ 26-04-2017 ರಂದು ಮದ್ಯಾಹ್ನ 2-00 ಗಂಟೆಗೆ ಕುಡಿಯುವ ನೀರಿನ ವಿಷಯದಲ್ಲಿ ದೂರವಾಣಿ ಮುಖಾಂತರ  ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀಮತಿ ಶಾರಮ್ಮ ಗದ್ದಿ ಇವರ ಪತಿಯಾದ ದ್ಯಾವಣ್ಣ ತಂದೆ ಹನುಮಂತಪ್ಪ ಗದ್ದಿ  ಅವಾಚ್ಯ ಪದಗಳಿಂದ ಬೈದಾಡಿದ್ದು ಅಲ್ಲದೆ ಜೀವದ ಬೇದರಿಕೆ ಹಾಕಿದ್ದು ನಂತರ ಇದೇ ದಿನ ಮದ್ಯಾಹ್ನ 3-30 ಗಂಟೆ ಸುಮಾರಿಗೆ ನಾನು ಬೇವಿನಾಳ ಗ್ರಾಮದಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿ ವಿಕ್ಷಣೆಗೆ ತೆರಳಿದ ಸಂದರ್ಭದಲ್ಲಿ ದ್ಯಾವಣ್ಣ ಗದ್ದಿ ಈತನು ತನ್ನ ಮೋಟಾರ್ ಸೈಕಲ್ ಮೇಲೆ ಬಂದು ನನಗೆ ತೀವ್ರವಾದ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸುತ್ತಾರೆ. ನನಗೆ ಬಡಿದು ಕಾಲಿನಿಂದ ಒದ್ದು, ಅವಾಚ್ಯ ಶಬ್ದದಿಂದ ಹಿನಾಯವಾಗಿ ನಿಂಧಿಸಿ ಸೂಳೇ ಮಗ ಡಾಣಿ ಮಗ ಅಂತಾ ಬೈದು ನನ್ನ ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾರೆ. ಯಾವುದೇ ತರನಾದ ಪೊಲೀಸ್ ದೂರನ್ನು ಕೊಟ್ಟರೆ, ನಿನಗೆ ಕೊಲೆ ಮಾಡುತ್ತಿನೆಂದು ಹಾಗೂ ಯಾವುದೇ ಪೊಲೀಸರು ನನಗೆ ಏನು ಮಾಡಲು ಆಗುವುದಿಲ್ಲ ಅಂತಾ ಕೂಗಾಡಿರುತ್ತಾನೆ. ದ್ಯಾವಣ್ಣ ತಂದೆ ಹನುಮಂತಪ್ಪ ತನು ನನ್ನ ಮೇಲೆ ತೀವ್ರ ತರನಾದ ಹಲ್ಲೆ ಮಾಡಿ ಕೊಲೆ ಮಾಡಿ ಯತ್ನಿಸುತ್ತಿದ್ದಾಗ ಗ್ರಾಮ ಪಂಚಾಯತಿ ಸಿಬ್ಬಂದಿಯವರಾದ ಯಮನೂರಪ್ಪ ತಂದೆ ಸೋಮಪ್ಪ, ಕರವಸೂಲಿಗಾರ, ಹನುಮಂತಪ್ಪ ತಂದೆ ಬಸಪ್ಪ ಮೂಲಿಮನಿ ವಾಟರ್ ಮ್ಯಾನ್ ಇವರು ನನ್ನನ್ನು ರಕ್ಷಿಸಿದರು. ತದನಂತರ ಘಟನಾ ಸ್ಥಳಕ್ಕೆ ಆಗಮಿಸಿದ ಬೇವಿನಾಳ ಗ್ರಾಂ ಪಂ ಅದ್ಯಕ್ಷರಾದ ಶ್ರೀ ಯಮನಪ್ಪ ತಂದೆ ಲಿಂಗಪ್ಪ ಸಾ. ಪನ್ನಾಪೂರ ಇವರಿಗೂ ಹಲ್ಲೆ ಮಾಡಿರುತ್ತಾರೆ ನನ್ನ ಮೇಲೆ ಹಲ್ಲೆ ಮಾಡಿದ ಸಂದರ್ಭದಲ್ಲಿ ದ್ಯಾವಣ್ಣ ತಂದೆ ಹನುಮಂತಪ್ಪ ಇವರು ಪೂರ್ತಿ ಪಾನಮತ್ತಾರಾಗಿದ್ದರು. ಈತನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
3] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 69/2017 ಕಲಂ: 323,  354 ,307,504, 506   R/w 34 IPC.
ದಿನಾಂಕ : 26-04-2017 ರಂದು ರಾತ್ರಿ 8-15  ಗಂಟೆಗೆ ಫಿರ್ಯಾದಿದಾರರಾದ ಶ್ರೀ ಶಾರದಮ್ಮ ಗಂಡ ದ್ಯಾವಣ್ಣ ಗದ್ದಿ ವಯ 35 ವರ್ಷ ಜಾತಿ ಕುರುಬರ ಮನೆಗೆಲಸ ಮತ್ತು 3 ನೇ ವಾರ್ಡ ಗ್ರಾಮ ಪಂಚಾಯತ ನಾಗನಕಲ್ ಸದಸ್ಯರು ಸಾ. ನಾಗನಕಲ್  ತಾ- ಗಂಗಾವತಿ.ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿಯನ್ನು ಕೊಟ್ಟಿದ್ದು ಅದರ ಸಾರಾಂಶವೇನೆಂದರೆ,  ಫಿರ್ಯಾದಿದಾರರು  ಬೇವಿನಾಳ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಗನಕಲ್ ಗ್ರಾಮದ 3 ನೇ ವಾರ್ಡದ ಗ್ರಾಮ ಪಂಚಾಯತಿ ಹಾಲಿ ಸದಸ್ಯಳಿರುತ್ತಾರೆ. ಈ ದಿನ ದಿನಾಂಕ 26-04-2017 ರಂದು ಮದ್ಯಾಹ್ನ 4-50 ಗಂಟೆ ಸುಮಾರಿಗೆ ಫಿರ್ಯಾದಿದಾರರು ಮತ್ತು ಅದೇ ಗ್ರಾಮದ ಗ್ರಾಮ ಪಂಚಾಯತ ಸದಸ್ಯರಾದ ಪಂಪಾಪತಿ ತಂದೆ ಹನುಮಂತಪ್ಪ ಇಬ್ಬರು ಕೂಡಿಕೊಂಡು ಗ್ರಾಮದ ಅಭಿವೃದ್ದಿ ವಿಚಾರವಾಗಿ ಮತ್ತು ನೀರಿನ ಕಾಂಗಾರಿ ವಿಷಯವಾಗಿ ಮಾತನಾಡು ಕುರಿತು ಬೇವಿನಾಳ ಗ್ರಾಮದ ಕೆರೆ ಒಡ್ಡಿ ಹತ್ತಿರ ಬರುತ್ತಿದ್ದಾಗ ನಮೂದು ಮಾಡಿದ ಆರೋಪಿತರು ಕೂಡಿ ಫಿರ್ಯಾದಿದಾರರಿಗೆ ಪಿಡಿಓ ಮಹಾಂತಗೌಡ ಪಾಟೀಲ್ ಈತನು ಫಿರ್ಯಾದಿದಾರರಿಗೆ ನಿನೇನು ಕೇಳಾಕ ಬಂದಿ ಹೆಂಗಸಾಗಿ ನಿನಗೇನು ಗೊತ್ತಿದೆ ಅಂತಾ ನಿನ್ನನ್ನು ಸದಸ್ಯಳಾಗಿ ಮಾಡಿದ್ದಾರೆ ಹೋಗಲೇ ಎಂದು ಅವಾಚ್ಯವಾಗಿ ಬೈದಾಡಿದ್ದು ಅಲ್ಲದೆ ಅಲ್ಲಿಗೆ ಬಂದ ಫಿರ್ಯಾದಿದಾರರ ಗಂಡನಿಗೂ ಕೂಡ ಅವಾಚ್ಯವಾಗಿ ಲೇ ಸೂಳೇ ಮಗನೇ ನಿನ್ನ ಹೆಂಡತಿ ಸರಿಯಾಗಿ ನೋಡಿಕೋ ಇಲ್ಲದಿದ್ದರೆ ನಾನು ಆಕೆಗೆ ನೋಡಿಕೊಳ್ಳುತ್ತೇನೆ ಆಕೆಯನ್ನು ನನ್ನ ಹತ್ತಿರ ಕಳಿಸು ಅಂತಾ ಬೈದಾಡಿದ್ದು ಆಗ ಫಿರ್ಯಾದಿ ಮತ್ತು ಪಂಪಾಪತಿ ಇವರು ಆತನಿಗೆ ಈ ರೀತಿಯಾಗಿ ಮಾತನಾಡುವುದು ಸರಿ ಅಲ್ಲ ಅಂದಿದ್ದಕ್ಕೆ ಸದರಿ ಫಿಡಿಓ ಈತನು ಒಮ್ಮಿಂದೊಮ್ಮಲೆ ಸಿಟ್ಟಿಗೆ ಬಂದು ಲೇ ಸೂಳೇ ಮಗನೇ ನಿನ್ನ ಹೆಂಡತಿ ಮೇಂಬರ್ ಅದಾಳ ನಿನೇನು ಕೇಳತಿಲೇ ಅಂತಾ ಅಂದು ನನ್ನ ಗಂಡನನ್ನು ಕೊಲೆ ಮಾಡುವ ಉದ್ದೇಶದಿಂದ ಆತನ ಕುತ್ತಿಗೆಗೆ ಕೈ ಹಾಕಿ ಕುತ್ತಿಗೆ ಇಸುಕಲು ಹತ್ತಿದ್ದು ಆಗ ಅಲ್ಲಿಯೇ ಇದ್ದ ನಾನು ಮತ್ತು ಪಂಪಾಪತಿ ಕೂಡಿ ಬಿಡಿಸಿಕೊಂಡೆವು ಮತ್ತು  ಸದರಿ ಮಹಾಂತಗೌಡ ಈತನು ಫಿರ್ಯಾದಿದಾರರಿಗೆ ಮರ್ಯಾದೆ ಕೊಡದೇ ಅವರ ಸೀರೆಯ ಸೆರಗು ಹಿಡಿದು  ಜಗ್ಗಾಡಿ ಅವಮಾನಗೊಳಿಸಿ ಫಿರ್ಯಾದಿದಾರರ ಗಂಡನಿಗೆ ಕಪಾಳಕ್ಕೆ ಹೊಡೆದಿದ್ದು ಅಲ್ಲದೆ ಹನುಮಂತಪ್ಪ ವಾಟರ್ ಮೆನ್ ಮತ್ತು ಯಮನೂರಪ್ಪ ಈಡಿಗೇರ ಬಿಲ್ ಕಲೆಕ್ಟರರ್ ಮತ್ತು ಇಬ್ಬರೂ ಕೂಡಿ ಫಿರ್ಯಾದಿಗೆ ಮತ್ತು ಫಿರ್ಯಾದಿ ಗಂಡನಿಗೆ  ಅವಾಚ್ಯವಾಗಿ ಬೈದು ಕೈಯಿಂದ ಹೊಡೆದು ಕಾಲಿನಿಂದ ಒದ್ದಿದ್ದು  ಇರುತ್ತದೆ. ಕಾರಣ ಮೇಲ್ಕಾಣಿಸಿದ ಮೂರು ಜನರ ವಿರುದ್ದ ಸೂಕ್ತ ಕಾನೂನು ಕ್ರಮಕ್ಕೆ ವಿನಂತಿ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
4] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 82/2017 ಕಲಂ. 143,147,341,323,504,506 ಸಹಿತ 149 ಐ.ಪಿ.ಸಿ.
ಫಿರ್ಯಾದಿ ವೀರಯ್ಯ ಕಾತರಕಿ ಸಾ: ಹೊರತಟ್ನಾಳ ಇವರು ನೀಡಿದ ದೂರಿನ ಸಾರಾಂಶವೇನೆಂದರೇ, ನಿನ್ನೆ ದಿ:25-04-2017 ರಂದು ರಾತ್ರಿ 8-00 ಗಂಟೆಯ ಸುಮಾರಿಗೆ ಫಿರ್ಯಾದಿದಾರರು ತನ್ನ ತಂದೆ, ತಾಯಿ, ಅಣ್ಣ, ಅತ್ತಿಗೆ ಇವರ ಸಂಗಡ ಇರುವಾಗ ಶಿವಮೂರ್ತೆಯ್ಯ ಆಡೂರ ಇತನು ಅಕ್ರಮ ಗುಂಪು ಕಟ್ಟಿಕೊಂಡು ಬಂದು ತನ್ನ ತಂದೆ ಚಿದಾನಂದಯ್ಯನಿಗೆ ಲೇ ಸೂಳೆಮಗನೇ ಈಗ ಹೊಲಗಳಲ್ಲಿ ಎನ್.ಹೆಚ್ ಕೆಲಸ ನಡೆದಿದೆ ಬಂದಷ್ಟು ಹಣ ತೆಗೆದುಕೋ ಕೋರ್ಟಿನಲ್ಲಿ ತಕರಾರು ಮಾಡಿದ ಕೇಸು ವಾಪಾಸ್  ತೆಗೆದುಕೊ ಎಂದು ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈಯ್ದು, ಕೈಗಳಿಂದ ಆರೋಪಿತರು ಫಿರ್ಯಾದಿಗೆ ಮತ್ತು ಫಿರ್ಯಾದಿಯ ತಂದೆ, ಅಣ್ಣ ಇವರಿಗೆ ಹಲ್ಲೆ ಮಾಡಿದ್ದು ಅಲ್ಲದೇ ಕೋರ್ಟಿನಲ್ಲಿನ ಕೇಸ್ ವಾಪಸ್ ತೆಗೆದುಕೊಳ್ಳಿರಿ ಇಲ್ಲದಿದ್ದರೆ ನಿಮಗೆಲ್ಲಾ ಹೊಡೆದು ಸಾಯಿಸುತ್ತೇವೆ. ಎಂದು ಪ್ರಾಣದ ಬೆದರಿಕೆ ಹಾಕಿದ್ದು ಇರುತ್ತದೆ. ಕಾರಣ ಸದರಿ ಶಿವಮೂರ್ತೆಯ್ಯ ಆಡೂರ ಹಾಗೂ ಇತರೆ 05 ಜನರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮುಂತಾಗಿ ನೀಡಿದ ಫಿರ್ಯಾಧಿ ಸಾರಾಂಶದ ಮೇಲಿಂದ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
5] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 83/2017 ಕಲಂ. 143,147,341,323,504,506 ಸಹಿತ 149 ಐ.ಪಿ.ಸಿ.
ಫಿರ್ಯಾದಿ ಶಿವಮೂರ್ತೆಯ್ಯ ಆಡೂರ. ಸಾ: ಹೊರತಟ್ನಾಳ ಇವರು ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೇ, ನಿನ್ನೆ ದಿ:25-04-2017 ರಂದು ರಾತ್ರಿ 8-00 ಗಂಟೆಯ ಸುಮಾರಿಗೆ ಫಿರ್ಯಾದಿದಾರರು ತನ್ನ ಹೆಂಡತಿ, ಮಗ, ಅಳಿಯಂದಿರು, ಹಾಗೂ ಅತ್ತೆ ಹೀಗೆ ಎಲ್ಲರೂ ನಡೆದುಕೊಂಡು ಅಳಿಯ ರಾಜಶೇಖರ ಮನೆಯಿಂದ ತಮ್ಮ ಮನೆಗೆ ದಾರಿಯಲ್ಲಿ ಹೋಗುವಾಗ ಆರೋಪಿತರಾದ ಚಿದಾನಂದಯ್ಯ ಹಾಗೂ ಇತರರು ಅಕ್ರಮ ಗುಂಪು ಕಟ್ಟಿಕೊಂಡು ಬಂದು ಮುಂದೆ ಹೋಗದಂತೆ ಅಡ್ಡಗಟ್ಟಿ ಹೊಲದ ವಿಚಾರವಾಗಿ ಸಿಟ್ಟು ಇಟ್ಟುಕೊಂಡು ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈಯ್ದು, ಕೈಗಳಿಂದ ಆರೋಪಿತರು ಫಿರ್ಯಾದಿಗೆ ಹೊಡೆದು, ಮತ್ತು ಫಿರ್ಯಾದಿ ಅಳಿಯ ಮಂಜುನಾಥನಿಗೆ ಬಾಯಿಯಿಂದ ಕಚ್ಚಿದ್ದು ಅಲ್ಲದೇ ಫಿರ್ಯಾದಿ ಹೆಂಡತಿಗೆ ಮಹಿಳೆಯರು ಹಲ್ಲೆ ಮಾಡಿದ್ದು, ಅಲ್ಲದೇ ಊರಿನ ಜನರು ಬಂದು ಬಿಡಿಸಿದ್ದಕ್ಕೆ ಉಳಿದುಕೊಂಡಿರಿ ಸೂಳೇ ಮಕ್ಕಳೇ ಇಲ್ಲದಿದ್ದರೆ ನಿಮಗೆ ಹೊಡೆದು ಸಾಯಿಸುತ್ತಿದ್ದೆವು. ಎಂದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಕಾರಣ ಸದರಿ ಚಿದಾನಂದಯ್ಯ ಕಾತರಕಿ ಹಾಗೂ 04 ಜನರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮುಂತಾಗಿ ನೀಡಿದ ಫಿರ್ಯಾಧಿಯ ಮೇಲಿಂದ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
6] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ: 72/2017 ಕಲಂ. 436 ಐ.ಪಿ.ಸಿ.
ದಿನಾಂಕ: 26-04-2017 ರಂದು ಮಧ್ಯಾಹ್ನ 12-30 ಗಂಟೆಗೆ ಫಿರ್ಯಾದಿ  ಕೆ. ವೇಣು ಗೋಪಾಲ ಕೃಷ್ಣ ತಂದೆ ಕೆ.ನಾಗರಾಜ ಬಾಬು, ಉ: ಹಿಂದುಸ್ತಾನ ಹೋಮ್ ನಿಡ್ಸ್ ಮಾಲಿಕ, ಸಾ: ಬಸ್ ಸ್ಟ್ಯಾಂಡ್ ರೋಡ್ ಗುಂಡಮ್ಮ ಕ್ಯಾಂಪ್ ಗಂಗಾವತಿ ಇವರು ಠಾಣೆಗೆ ಹಾಜರಾಗಿ ಒಂದು ಗಣೀಕೃತ ಫಿರ್ಯಾದಿಯನ್ನು ಹಾಜರ ಪಡಿಸಿದ್ದು ಸದರಿ ಫಿರ್ಯಾದಿಯ ಸಾರಾಂಶವೇನೆಂದರೆ, ದಿನಾಂಕ: 26-04-2017 ರಂದು ರಾತ್ರಿ 1-00 ಗಂಟೆ ಸುಮಾರಿಗೆ ಫಿರ್ಯಾದಿಯು ಹೊರಗಡೆ ಬಂದು ನೋಡಲಾಗಿ ಮನೆಯ ಮುಂದೆ ನಿಲ್ಲಿಸಿದ್ದ ಓಮಿನಿ ವಾಹನ ನಂ ಕೆ.ಎ 37/ ಎಂ1164 ನೇದ್ದು ಬೆಂಕಿ ಹತ್ತಿ ಸುಡುತ್ತಿದ್ದು ಸದರಿ ವಾಹನವನ್ನು ಆರಿಸಲು ಅದು ಸಂಪೂರ್ಣವಾಗಿ ಸುಟ್ಟಿಹೋಗಿರುತ್ತದೆ. ನಂತರ ಅಂಗಡಿಯ ಮುಂದೆ ಇಟ್ಟಿದ್ದ ಇತರೇ ಸಾಮನಾಗಳನ್ನು ನೋಡಲಾಗಿ 2 ಫ್ರಿಜ್ ಮತ್ತು 2 ವಾಷಿಂಗ್ ಮಷಿನ್ ಗಳನ್ನು ತೆಗೆದುಕೊಂಡು ಹೋಗಿ ತಮ್ಮ ಅಂಗಡಿಯ ಹಿಂದೆ ಇರುವ ಗುಂಡಮ್ಮ ಕ್ಯಾಂಪಿನ ಸಂತೆ ಬಯಲಿನಲ್ಲಿ ಸುಟ್ಟು ಹಾಕಿರುತ್ತಾರೆ ಯಾರೋ ದುಷ್ಕರ್ಮಿಗಳು ನನ್ನ ಮೇಲೆ ಹಗೆ ಸಾದಿಸುವುದಕ್ಕಾಗಿ ಈ ರೀತಿ ಕೃತ್ಯವನ್ನು ಮಾಡಿರುತ್ತಾರೆ ಇದರಿಂದ ನನಗೆ ತುಂಬಾ ಆರ್ಥಿಕ ನಷ್ಠವಾಗಿರುತ್ತದೆ ಎಂದು ಮುಂತಾಗಿ ನೀಡಿದ ಫಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
7] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 96/2017 ಕಲಂ. 87 Karnataka Police Act.
ದಿನಾಂಕ :26-04-2017 ರಂದು ರಾತ್ರಿ 10-30 ಗಂಟೆಗೆ ಪಿ.ಎಸ್.ಐ ಸಾಹೇಬರು ಕುಷ್ಠಗಿ ಪೊಲೀಸ ಠಾಣೆ ರವರಿಗೆ ಕುಷ್ಟಗಿ ಪಟ್ಟಣದ ಸರಕಾರಿ ಡಿಪ್ಲೋಮೊ ಕಾಲೇಜ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಂದರಬಾಹರ ಎಂಬ ಇಸ್ಪಿಟ್ ಜೂಜಾಟ ನಡೆದಿದೆ ಅಂತಾ ತಿಳಿದು ಬಂದಿದ್ದು ಆಗ ಸಿಬ್ಬಂದಿ ಮತ್ತು ಇಬ್ಬರು ಪಂಚರೊಂದಿಗೆ ಎಲ್ಲರೂ ಕೂಡಿ ಹೋಗಿ ರೇಡ್ ಮಾಡಿ 7 ಜನ ಆರೋಪಿ 1] ರಾಜಶೇಖರ ತಂದೆ ಸಿದ್ದಲಿಂಗಪ್ಪ ಹೊಸಮನಿ ವಯಾ: 42 ವರ್ಷ ಜಾತಿ: ಲಿಂಗಾಯತ ಉ: ಕೂಲಿಕೆಲಸ ಸಾ: ವಿಷ್ಣುತೀರ್ಥನಗರ ಕುಷ್ಟಗಿ  2] ಹುಲಗಪ್ಪ ತಂದೆ ಹನುಮಂತಪ್ಪ ಆಲೂರ ವಯಾ: 35 ವರ್ಷ ಜಾತಿ: ಹಿಂದೂ ಮಾದಿಗ ಉ: ಡ್ರೈವರ್ ಸಾ: ಬಿ.ಬಿ.ನಗರ ಕುಷ್ಟಗಿ 3] ಚನ್ನಬಸಯ್ಯ ತಂದೆ ಗುರುಸಿದ್ದಯ್ಯ ಗಣವಾರಿ ವಯಾ: 36 ವರ್ಷ ಜಾತಿ: ಜಂಗಮ ಉ: ಒಕ್ಕಲುತನ ಸಾ: ಹಳೇಬಜಾರ ಕುಷ್ಟಗಿ  4] ಶ್ಯಾಮೀದ ತಂದೆ ಖಾಸಿಂಸಾಬ ಕಲಾಲಬಂಡಿ ವಯಾ: 35 ವರ್ಷ ಜಾ:ಮುಸ್ಲಿಂ ಉ:ಕೂಲಿಕೆಲಸ ಸಾ: ಮುಲ್ಲಾರ ಓಣಿ ಕುಷ್ಟಗಿ 5] ಸೈಯದ್ ಅನ್ವರ ತಂದೆ ದಾದೇಸಾಬ ಅತ್ತಾರ ವಯಾ: 50 ವರ್ಷ ಜಾತಿ: ಮುಸ್ಲಿಂ ಉ:ವ್ಯಾಪರ ಸಾ: ನಾಯಕವಾಡಿ ಓಣಿ ಕುಷ್ಟಗಿ 6) ಬಸವರಾಜ ತಂದೆ ತಿಪ್ಪಣ್ಣ ಬುಡಕುಂಟಿ ವಯಾ 42 ವರ್ಷ ಜಾ:ಲಿಂಗಾಯತ ಉ:ಒಕ್ಕಲುತನ ಸಾ:ಹಳೇಬಜಾರ ಕುಷ್ಟಗಿ ಮತ್ತು 7) ಗೋಪರಪ್ಪ ತಂದೆ ಸಂಗನಬಸಪ್ಪ ಕುಡತನಿ ವಯಾ 55 ವರ್ಷ ಜಾ:ಲಿಂಗಾಯತ ಉ:ವ್ಯಾಪರ ಸಾ:ಬಿ.ಬಿ.ನಗರ ಕುಷ್ಟಗಿ ಇವರು ಸಿಕ್ಕಿದ್ದು ಇರುತ್ತದೆ. ಹಾಗೂ ಆರೋಪಿತರಿಂದ ಇಸ್ಪೆಟ್ ಜೂಜಾಟದ ಒಟ್ಟು ಹಣ 6090=00 ರೂ, ಹಾಗೂ 52 ಇಸ್ಪೆಟ್ ಎಲೆಗಳು ಹಾಗೂ ಒಂದು ಹಳೆ ನ್ಯೂಸ್ ಪೇಪರರನ್ನು ಪಂಚನಾಮೆ ಕಾಲಕ್ಕೆ ಜಪ್ತಿ ಮಾಡಿಕೊಂಡು ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
8] ಹನಮಸಾಗರ ಪೊಲೀಸ್ ಠಾಣೆ ಗುನ್ನೆ ನಂ: 38/2017 ಕಲಂ. 78(3) Karnataka Police Act.
ದಿನಾಂಕ: 26-04-2017 ರಂದು ಸಾಯಾಂಕಾಲ 16-25 ಗಂಟೆ ಸುಮಾರಿಗೆ ಹೂಲಗೇರಿ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆಯುತ್ತಿದೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಶ್ರೀ ತಿಪ್ಪೇಸ್ವಾಮಿ ರವರು ಹಾಗೂ ಸಿಬ್ಬಂದಿ ಹೋಗಿ ದಾಳಿ ಮಾಡಲಾಗಿ ಮಟಕಾ ನಂಬರ ಬರೆದುಕೊಂಡು ಹಣ ಪಡೆದುಕೊಳ್ಳುವವನು ಸಿಕ್ಕಿಬಿದಿದ್ದು ಅವರ ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು ಈರಪ್ಪ ತಂದೆ ಬಸಪ್ಪ ಸಂಕನೂರು ವಯಾ: 50 ವರ್ಷ, ಜಾತಿ: ಪಂಚಮಸಾಲಿ, ಸಾ: ಹೂಲಗೇರಿ ಅಂತಾ ತಿಳಿಸಿದ್ದು ಅವನ ಹತ್ತಿರ ಮಟಕಾ ಚೀಟಿ, 2350=00 ರೂಪಾಯಿ ನಗದು ಹಣ ಹಾಗೂ ಒಂದು ಬಾಲಪೆನ್ನ ಜಪ್ತಮಾಡಿಕೊಂಡಿದ್ದು ನಂತರ ಸದರಿ ಆರೋಪಿ ಈರಪ್ಪನಿಗೆ ಈ ಮಟಕಾ ಚೀಟಿಯನ್ನು ಯಾರಿಗೆ ಕೊಡುವದಾಗಿ ಕೇಳಿದಾಗ ತಾನೇ ಇಟ್ಟುಕೊಳ್ಳುವುದಾಗಿ ತಿಳಿಸಿದ್ದು ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
9] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 94/2017 ಕಲಂ 279, 337, 338, 304(A) ಐ.ಪಿ.ಸಿ..
ಫಿರ್ಯಾದಿ ಗಾಯಾಳು ಶಿವು ತಂದೆ ದುರುಗಪ್ಪ ವಯಸ್ಸು: 30 ವರ್ಷ ಜಾತಿ: ವಡ್ಡರ, ಉ: ಕಲ್ಲು ಒಡೆಯುವದು. ಸಾ: ಮಲ್ಲಾಪೂರ ತಾ: ಗಂಗಾವತಿ ಈತನ ನುಡಿ ಹೇಳಿಕೆ ದೂರನ್ನು ಪಡೆದುಕೊಂಡಿದ್ದು ಅದರ ಸಾರಾಂಶ ಏನಂದರೆ, ದಿನಾಂಕ:- 26-04-2017 ರಂದು ವೈಯಕ್ತಿಕ ಕೆಲಸದ ನಿಮಿತ್ಯ ಜಂಬುನಾಥನ ಬಜಾಜ ಪಲ್ಸರ್ ಮೋಟಾರ ಸೈಕಲ್ ನಂ: ಕೆ.ಎ-37/ ಇ.ಸಿ-2267 ನೇದ್ದರಲ್ಲಿ ಮಲಕನಮರಡಿಗೆ ಹೋಗುತ್ತಿದ್ದಾಗ ಮೋಟಾರ ಸೈಕಲನ್ನು ಜಂಬುನಾಥನು ನಡೆಯಿಸುತ್ತಿದ್ದು, ನಾನು ಮತ್ತು ಪರಶುರಾಮ ಹಿಂಭಾಗದಲ್ಲಿ ಕುಳಿತಿದ್ದೆವು.  ರಾತ್ರಿ 8:15 ಗಂಟೆಯ ಸುಮಾರಿಗೆ ನಾವು ಕೊಪ್ಪಳ-ಗಂಗಾವತಿ ಮುಖ್ಯ ರಸ್ತೆಯಲ್ಲಿ ಬಸಾಪಟ್ಟಣ ಊರ ಮುಂದೆ ರೈಸ್ ಮಿಲ್ ಹತ್ತಿರ ಕೊಪ್ಪಳ ಕಡೆಗೆ ಹೋಗುತ್ತಿರುವಾಗ ಜಂಬುನಾಥನು ಮೋಟಾರ ಸೈಕಲನ್ನು ಅತೀ ಜೋರಾಗಿ ಮತ್ತು ತೀವ್ರ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೊರಟಿದ್ದು, ಅದೇ ರೀತಿಯಾಗಿ ನಮ್ಮ ಎದುರುಗಡೆ ಕೊಪ್ಪಳ ಕಡೆಯಿಂದ ಸಹ ಒಬ್ಬ ಮೋಟಾರ ಸೈಕಲ್ ಚಾಲಕನು ತನ್ನ ಮೋಟಾರ ಸೈಕಲನ್ನು ಅತೀ ಜೋರಾಗಿ ಮತ್ತು ತೀವ್ರ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದಿದ್ದು, ಎರಡೂ ಮೋಟಾರ ಸೈಕಲ್ ಚಾಲಕರಿಗೆ ವೇಗವನ್ನು ನಿಯಂತ್ರಿಸಲು ಆಗದೇ ಒಬ್ಬರಿಗೊಬ್ಬರು ಟಕ್ಕರ್ ಕೊಟ್ಟು ಅಪಘಾತ ಮಾಡಿದ್ದು, ಇದರಿಂದ ನಾವೆಲ್ಲರೂ ಮೋಟಾರ ಸೈಕಲ್ ಸಮೇತ ಕೆಳಗೆ ಬಿದ್ದೆವು. ಇದರಿಂದ ನನಗೆ ಎಡ ಮತ್ತು ಬಲಗಾಲಿಗೆ, ಕೆಳ ತುಟಿಗೆ ತೆರೆಚಿದ ಗಾಯಗಳಾಗಿದ್ದು, ಮೈಗೆ ಒಳಪೆಟ್ಟಾಯಿತು. ನೋಡಲಾಗಿ ಜಂಬುನಾಥನಿಗೆ ತಲೆಯ ಹಿಂಭಾಗದಲ್ಲಿ ತೀವ್ರ ರಕ್ತಗಾಯವಾಗಿತ್ತು ಆತನು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲಾ.  ಪರಶುರಾಮನಿಗೆ ಬಲಗಣ್ಣಿನ ಹತ್ತಿರ ರಕ್ತಗಾಯವಾಗಿತ್ತು, ಬಲಗಣ್ಣಿಗೆ ಸಹ ಪೆಟ್ಟಾಗಿತ್ತು. ಇನ್ನೊಂದು ಮೋಟಾರ ಸೈಕಲ ಚಾಲಕನಿಗೆ ನೋಡಲಾಗಿ ಆತನಿಗೆ ತಲೆಗೆ ತೀವ್ರ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದನು.  ಎಡಗೈಗೆ ಪೆಟ್ಟಾಗಿತ್ತು.  ಅದೇ ವೇಳೆಗೆ ಅಲ್ಲಿಗೆ ಬಂದ ಬಸಾಪಟ್ಟಣ ಗ್ರಾಮದವರು ಮೃತಪಟ್ಟ ವ್ಯಕ್ತಿಯನ್ನು ನೋಡಿ ಆತನ ಹೆಸರು ಅಂಜಿನಪ್ಪ ತಂದೆ ವಾಸನಗೌಡ ರಾವಣಕಿ, ವಯಸ್ಸು 50 ವರ್ಷ ಜಾತಿ: ದೇವಾಂಗ, ಉ: ಸ್ಟೇಷನರಿ ಅಂಗಡಿ ಸಾ: ಬಸಾಪಟ್ಟಣ ಅಂತಾ ತಿಳಿಸಿದರು.  ಆತನು ಚಲಾಯಿಸಿಕೊಂಡು ಬಂದ ಮೋಟಾರ ಸೈಕಲ್ ಹಿರೋ ಹೋಂಡಾ ಸ್ಪ್ಲೆಂಡರ್ ನಂ: ಕೆ.ಎ-37/ ಆರ್-4963 ಅಂತಾ ಇತ್ತು ಅಂತಾ ಮುಂತಾಗಿ ನೀಡಿದ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ

Wednesday, April 26, 2017

1] ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ: 38/2017 ಕಲಂ: 87 Karnataka Police Act.
ದಿನಾಂಕ: 25-04-2017 ರಂದು ಸಂಜೆ 5:15 ಗಂಟೆ ಸುಮಾರಿಗೆ ಶ್ರೀ ಅಮರೇಶ ಹುಬ್ಬಳ್ಳಿ ಪಿ.ಎಸ್.ಐ. ತಾವರಗೇರಾ ರವರು ತಮ್ಮ ಠಾಣಾ ವ್ಯಾಪ್ತಿಯ ಮುದೇನೂರು ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಎಂಬ ಇಸ್ಪೀಟ್ ಜೂಜಾಟವನ್ನು ಆಡುತ್ತಿದ್ದು, ಆ ಕಾಲಕ್ಕೆ ಸಿಬ್ಬಂದಿಯವರೊಂದಿಗೆ ಹೋಗಿ ದಾಳಿ ಮಾಡಿ ಜೂಜಾಟದ ಒಟ್ಟು ನಗದು ಹಣ ರೂ. 8490=00, ಹಾಗೂ 52 ಇಸ್ಪಿಟ್ ಎಲೆಗಳನ್ನು ಜಪ್ತ ಮಾಡಿಕೊಂಡಿದ್ದು, ಸಿಕ್ಕಿಬಿದ್ದ 05 ಜನ ಆರೋಪಿ 1) ಚಂದ್ರಪ್ಪ ತಂದೆ ದುರುಗಪ್ಪ ಹರಿಜನ. ವಯ: 26 ವರ್ಷ. ಜಾತಿ: ಮಾದರ ಉ: ಕೂಲಿ. ಸಾ: ಮುದೇನೂರು.  2] ಶರಣಪ್ಪ ತಂದೆ ಮಹಾಂತಪ್ಪ ಹಾವಿನಾಳ. ವಯ: 43 ವರ್ಷ. ಜಾತಿ: ಲಿಂಗಾಯತ. ಉ: ಒಕ್ಕಲುತನ. ಸಾ: ಮುದೇನೂರು.  3] ನಿಂಗಯ್ಯ ತಂದೆ ಸಿದ್ದಲಿಂಗಯ್ಯ ಹಿರೇಮಠ ವಯ: 40 ವರ್ಷ. ಜಾತಿ: ಜಂಗಮ. ಉ: ಕೂಲಿಕೆಲಸ. ಸಾ: ಬನ್ನಟ್ಟಿ.  4] ಬಸವರಾಜ ತಂದೆ ಮಹಾಂತಪ್ಪ ಮಾಕಾಪುರ ವಯ: 31 ವರ್ಷ. ಜಾತಿ: ಲಿಂಗಾಯತ. ಉ: ಕೂಲಿಕೆಲಸ. ಸಾ: ಮಾಕಾಪುರ.  5] ಗದ್ದೆಪ್ಪ ತಂದೆ ಯಲ್ಲಪ್ಪ ಕಠಾರಿ ವಯ: 43 ವರ್ಷ. ಜಾತಿ: ಕುರುಬರು. ಉ: ಒಕ್ಕಲುತನ. ಸಾ: ಕೂಡ್ಲೂರು ಇವರ ವಿರುದ್ದ ಕಾನೂನು ಕ್ರಮ ಜರುಗಿಸಲು ವರದಿಯನ್ನು ನೀಡಿದ್ದು ಇರುತ್ತದೆ. ಸದರಿ ವರದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 67/2017 ಕಲಂ: 279, 338 ಐಪಿಸಿ 187 ಐ.ಎಂ.ವಿ. ಕಾಯ್ದೆ.
ದಿನಾಂಕ 25-04-207 ರಂದು ಬೆಳಿಗ್ಗೆ 11-30 ಗಂಟೆಗೆ  ಫಿರ್ಯಾದಿದಾರರಾದ ಶ್ರೀ ಶರೀಪ್ ಸಾಬ ತಂದೆ ಗೈಬೂಸಾಬ ವಯ 36 ವರ್ಷ ಜಾತಿ ಮುಸ್ಲಿಂ  ಉ. ಒಕ್ಕಲುತನ ಸಾ. ನಾಗಕಲ್ ತಾ.ಗಂಗಾವತಿ ರವರು ಠಾಣೆಗೆ ಹಾಜರಾಗಿ ಒಂದು ಲಿಖಿತ ದೂರು ಸಲ್ಲಿಸಿದ್ದು ಸದರ್ ದೂರಿನ ಸಾರಾಂಶವೆನಂದರೆ, ದಿನಾಂಕ 24-04-2017 ರಂದು ಬೆಳಿಗ್ಗೆ 9-45 ಗಂಟೆ ಸುಮಾರಿಗೆ ಗಂಗಾವತಿ ಕಾರಟಗಿ ಮುಖ್ಯ ರಸ್ತೆಯ ಮೇಲೆ ಜೂರಟಗಿ ಹತ್ತಿರ ಫಿರ್ಯಾದಿದಾರರ ತಮ್ಮನಾದ ಮರ್ದಾನಸಾಬ ಈತನು ತನ್ನ ಮೋಟಾರ್ ಸೈಕಲ್  ನಂ ಕೆಎ-37/ವಾಯ್-1039 ನೇದ್ದರಲ್ಲಿ ನಮ್ಮೂರಿನ ಅಬ್ದುಲ್ ಸಾಬ ಬ್ಬರೂ ಕೂಡಿಕೊಂಡು ರಸ್ತೆಯ ಮೇಲೆ ಮೋಟಾರ್ ಸೈಕಲ್ ಮೇಲೆ ಗಂಗಾವತಿ ಕಡೆಯಿಂದ ಬರುತ್ತಿದ್ದಾಗ್ಗೆ ಹಳೇ ಜೂರುಟಗಿ ಏಕಲವ್ಯ ಟ್ಯೂಷನ್ ಕ್ಲಾಸಸ್ ಅಡ್ಡ ರಸ್ತೆಯಿಂದ ಲಾರಿ ಚೆಸ್ಸಿ ನಂ 388002JQQ120670 ನೇದ್ದರ ಚಾಲಕನು ತಾನು ನಡೆಸುತ್ತಿದ್ದ ಲಾರಿಯನ್ನು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಮೋಟಾರ್ ಸೈಕಲ್ ಗೆ ಠಕ್ಕರ್ ಕೊಟ್ಟು ಅಪಘಾತಪಡಿಸಿ ಲಾರಿಯನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು, ಸದರಿ ಅಪಘಾತದಿಂದ ಮೋಟಾರ್ ಸೈಕಲ್ ಮೇಲಿದ್ದ  ಮರ್ದಾನಸಾಬ ತಂದೆ ಗೈಬೂಸಾಬ ವಯ 32 ಮತ್ತುಅಬ್ದುಲ್ ಸಾಬ ತಂದೆ ರಾಜಮಹಮ್ಮದ್ ವಯ 33 ವರ್ಷ ಸಾ. ನಾಗನಕಲ್ ಇಬ್ಬರಿಗೂ ಗಂಬೀರ ಸ್ವರೂಪದ ಗಾಯಗಳಾಗಿದ್ದು ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
3] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 95/2017 ಕಲಂ. 279, 337, 338 ಐ.ಪಿ.ಸಿ.
ದಿನಾಂಕ: 25-04-2017 ರಂದು 07-15 ಪಿ.ಎಂ.ಗಂಟೆಗೆ ಫಿರ್ಯಾದಿ ಶಿವಪ್ಪ ತಂದೆ ಸಿದ್ದಪ್ಪ ಡಂಬರ ವಯಾ: 34 ವರ್ಷ ಜಾತಿ: ಡಂಬರ ಉ: ಆಟೋಚಾಲಕ ಸಾ: ಸಂದೀಪನಗರ ಕುಷ್ಟಗಿ ಇವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ಫಿರ್ಯಾದಿಯ ಸಾರಾಂಶವೆನೆಂದರೆದಿನಾಂಕ:25-04-2017 ರಂದು ಮುಂಜಾನೆ 09-00 ಗಂಟೆಯ ಸುಮಾರಿಗೆ ನನ್ನ ತಾಯಿ ಅಂಭಮ್ಮಳು ಕೂಲಿಕೆಲಸಕ್ಕೆ ಹೋಗಿದ್ದರುನಂತರ ಮದ್ಯಾಹ್ನ 12:15 ಗಂಟೆಯ ಸುಮಾರಿಗೆ ನನ್ನ ಮಗ ಉಲ್ಲಾಸ ಮತ್ತು ನನ್ನ ತಮ್ಮ ಅಯ್ಯಪ್ಪ ಇಬ್ಬರೂ ಕೂಡಿ ನಮ್ಮ ತಾಯಿಯ ಹತ್ತಿರ ಹೋಗುವುದಾಗಿ ಹೇಳಿ ಹೋದರು. ನಾನು ನಿಧಾನವಾಗಿ ಎಡಗಡೆ ಕಚ್ಚಾ ರಸ್ತೆಯಲ್ಲಿ ಹೋಗಿರಿ ಅಂತಾ ಹೇಳಿ ಕಳಿಸಿದ್ದೇನು. ನಂತರ ಸ್ವಲ್ಪ ಹೊತ್ತಿನ ನಂತರ ಅಂದರೆ ಮದ್ಯಾಹ್ನ 12-45 ಗಂಟೆಯ ಸುಮಾರಿಗೆ ಕುಷ್ಟಗಿ-ಗಜೇಂದ್ರಗಡಾ ರೋಡ ಅರಬಿಕ್ ಶಾಲೆಯ ಹತ್ತಿರ ನಿನ್ನ ಮಗನಿಗೆ ಅಪಘಾತವಾಗಿದೆ, ಅಂತಾ ಸುದ್ದಿ ಕೇಳಿ ನಾನು ಕೂಡಲೇ ಬಂದು ನೋಡಲಾಗಿ ವಿಷಯ ನಿಜವಿದ್ದು ನನ್ನ ಮಗ ಉಲ್ಲಾಸ ಮತ್ತು ನನ್ನ ತಮ್ಮ ಅಯ್ಯಪ್ಪ ಇಬ್ಬರೂ ಕೂಡಿ ರಸ್ತೆಯ ಎಡಗಡೆ ಕಚ್ಚಾ ರಸ್ತೆಯ ಮೇಲೆ ಹೋಗುತ್ತಿದ್ದಾಗ ಕುಷ್ಟಗಿ ಕಡೆಯಿಂದ ಯಾವುದೋ ಒಂದು ವಾಹನದ ಚಾಲಕನು ತನ್ನ ವಾಹನವನ್ನು  ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ಎಡಗಡೆ ಕಚ್ಚಾ ರಸ್ತೆಯ ಮೇಲೆ ಹೋಗುತ್ತಿರುವ ನನ್ನ ಮಗ ಉಲ್ಲಾಸನಿಗೆ ಟಕ್ಕರಕೊಟ್ಟು ಅಪಘಾತಪಡಿಸಿ ವಾಹನವನ್ನು ನಿಲ್ಲಿಸದೇ ಹಾಗೇ ವಾಹನವನ್ನು ಚಾಲಾಯಿಸಿಕೊಂಡು ಹೋಗಿದ್ದು ಇರುತ್ತದೆ. ಅಂತಾ ಗೊತ್ತಾಯಿತು, ನನ್ನ ತಮ್ಮ ಅಯ್ಯಪ್ಪ ವಯಾ 10 ವರ್ಷ ಈತನಿಗೆ ಯಾವುದೇ ಗಾಯ ವಗೈರೆ ಆಗಿರುವುದಿಲ್ಲಾ. ನನ್ನ ಮಗನನ್ನು ನೋಡಲು ನನ್ನ ಮಗ ಉಲ್ಲಾಸನಿಗೆ ಎಡಗಡೆ ಹಣೆಯ ಮೇಲೆ ಮತ್ತು ಎಡಕಣ್ಣಿನ ಹತ್ತಿರ ಭಾರಿ ರಕ್ತಗಾಯವಾಗಿದ್ದು ಕೂಡಲೇ ಒಂದು ಖಾಸಗಿ ವಾಹನದಲ್ಲಿ ಚಿಕಿತ್ಸೆ ಕುರಿತು ಕುಷ್ಟಗಿ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಇರುತ್ತದೆ ಅಂತಾ ಮುಂತಾಗಿದ್ದು ಫಿರ್ಯಾಧಿ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
4] ಬೇವೂರು ಪೊಲೀಸ್ ಠಾಣೆ ಗುನ್ನೆ ನಂ: 26/2017 ಕಲಂ. 279, 338 ಐ.ಪಿ.ಸಿ.
ದಿನಾಂಕ: 22-04-2017 ರಂದು ಬೆಳಿಗ್ಗೆ 08:00 ಗಂಟೆ ಸುಮಾರಿಗೆ ತಾಳಕೇರಿ - ಚೌಡಾಪೂರ ರಸ್ತೆಯ ಮೇಲೆ ತಾಳಕೇರಿ ಸೀಮಾದಲ್ಲಿ ಆರೋಪಿ ಬಸವರಾಜ ತಂದೆ ನಿಂಗಪ್ಪ ಏಳಗುಡ್ಡ ಸೈಕಲ್ ನಂ:ಕೆ.ಎ-37 ಇಸಿ-7374 ನೇದ್ದರ ಸವಾರ ಸಾ//ತಾಳಕೇರಿ ಇತನು ತಾನು ನಡೆಸುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-37     ಇಸಿ-7374 ನೇದ್ದನ್ನು ತಾಳಕೇರಿ ಕಡೆಯಿಂದ ಚೌಡಾಪೂರ ಕಡೆಗೆ ಅತೀವಾಗವಾಗಿ ಹಾಗೂ ಆಲಕ್ಷತನದಿಂದ ನೆಡೆಸಿಕೊಂಡು ಹೋಗಿ ರಸ್ತೆಯ ಎಡಬದಿಗೆ ಕಾಲ್ನಡಿಗೆಯಲ್ಲಿ ಹೊರಟಿದ್ದ ಶೇಖರಪ್ಪನಿಗೆ ಹಿಂದಿನಿಂದ ಬಲವಾಗಿ ಟಕ್ಕರ್ ಕೊಟ್ಟು ಅಪಘಾತ ಮಾಡಿದ್ದು ಇರುತ್ತದೆ, ಸದರಿ ಅಪಘಾತದಲ್ಲಿ ಶೇಖರಪ್ಪನ ತಲೆಗೆ  ಭಾರಿ ಸ್ವರೂಪದ ಒಳ ಪೆಟ್ಟಾಗಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ,

Tuesday, April 25, 2017

1] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 54/2017 ಕಲಂ: 392  ಐಪಿಸಿ.
ದಿನಾಂಕ: 24-04-2017 ರಂದು ರಾತ್ರಿ 11-45 ಗಮಟೆಗೆ ಪಿರ್ಯಾಧಿದಾರರಾದ ಶ್ರೀಮತಿ ಶಾರದಾ ಗಂಡ ಸಿದ್ದಯ್ಯ ನವಲಿಹಿರೇಮಠ ವಯ: 45 ವರ್ಷ ಜಾ: ಜಂಗಮ ಉ: ಮನೆಗೆಲಸ ಸಾ: ಪ್ರಗತಿ ನಗರ ಕೊಪ್ಪಳ ಇವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ಪಿರ್ಯಾಧಿಯ ಸಾರಾಂಶವೇನೆಂದರೆ, ದಿನಾಂಕ: 24-04-2017 ರಂದು ರಾತ್ರಿ 10-00 ಗಂಟೆಗೆ ತಮ್ಮ ಮಗಳಿಗೆ ಫೋನ್ ಮಾಡುವ ಸಲುವಾಗಿ ತಮ್ಮ ಮನೆಯ ಎದುರಿಗೆ ಇರುವ ಕಟ್ಟೆಯ ಮೇಲೆ ಬಂದು ಕುಳಿತಿದ್ದಾಗ ಯಾರೋ ಒಬ್ಬ ಅಪರಿಚಿತ ವ್ಯಕ್ತಿಯು ಬಂದು ಇಲ್ಲಿ ಯಾಕೇ ಕುಳಿತಿರುವಿರಿ ಅಂತಾ ಕೇಳಿದವನೇ ಪಿರ್ಯಾದಿದಾರರ ಕಣ್ಣಿಗೆ ಕಾರದ ಪುಡಿಯನ್ನು ಎರಚಿ ಒಮ್ಮೆಲೇ  ಕುತ್ತಿಗೆಗೆ ಕೈ ಹಾಕಿ ಕೊರಳಲ್ಲಿದ್ದ ಮಾಂಗಲ್ಯ ಸರವನ್ನು ಹಿಡಿದುಕೊಂಡು ಬಲವಂತವಾಗಿ ಕಿತ್ತುಕೊಳ್ಳಲು ಪ್ರಯತ್ನಿಸಿದ್ದು, ಆಗ ಪಿರ್ಯಾದಿದಾರರು ತಮ್ಮ ಮಾಂಗಲ್ಯ ಸರವನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದು ಸ್ವಲ್ಪ ಮಾಂಗಲ್ಯ ಸರ ತಮ್ಮ ಕೈಯಲ್ಲಿದ್ದು ಇನ್ನು ಸ್ವಲ್ಪ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೊರಟು ಓಣಿಯ ರಸ್ತೆಯ ಕಡೆಗೆ ಹೊರಟನು, ಅಷ್ಟರಲ್ಲಿ ಪಿರ್ಯಾದಿದಾರರು ಕಳ್ಳ ಕಳ್ಳ ಅಂತಾ ಜೋರಾಗಿ ಕೂಗಿದಾಗ ಸುತ್ತಮುತ್ತಲಿನ ಮನೆಯವರು ಬಂದಿದ್ದು, ಆಗ ಅವರು ವಿಚಾರಿಸಿದಾಗ ಈ ವಿಷಯವನ್ನು ತಿಳಿಸಿದ್ದು ಕೂಡಲೇ ಈ ವಿಷಯವನ್ನು ತಮ್ಮಪತಿಗೆ ತಿಳಿಸಿದ್ದು. ತಮ್ಮ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋದ ವ್ಯಕ್ತಿಯು ಸ್ವಲ್ಪ ದಪ್ಪಗೆ ಇದ್ದನು, ಕೆಂಪು ಕಲರ್ ಟಿ-ಶರ್ಟ ಮತ್ತು ನೀಲಿ ಜೀನ್ಸ್ ಪ್ಯಾಂಟ ಹಾಕಿದ್ದು ಮುಖಕ್ಕೆ ಮಂಕಿ ಕ್ಯಾಪ್ ಹಾಕಿದ್ದನು. ಯಾರೋ ಅಪರಿಚಿತ ದುಷ್ಕರ್ಮಿಯು ಪಿರ್ಯಾದಿದಾರರ ಕೊರಳಲ್ಲಿದ್ದ ಮಾಂಗಲ್ಯ ಸರದಲ್ಲಿ ಅರ್ಧ ಮಾಂಗಲ್ಯ ಸರ ಅಂದಾಜು ತೂಕ 02 ತೊಲೆ ಒಟ್ಟು ಅಂ.ಕಿ.ರೂ: 45,000=00 ಬೆಲೆ ಬಾಳುವುದನ್ನು ಬಲವಂತವಾಗಿ ಕಿತ್ತುಕೊಂಡು ಹೋದವರನ್ನು ಪತ್ತೇ ಮಾಡಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇರುವ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
2] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ: 70/2017 ಕಲಂ. 341, 354, 504, 506 ಐ.ಪಿ.ಸಿ.
ದಿನಾಂಕ 24-04-2017 ರಂದು ಸಂಜೆ 5-30 ಗಂಟೆಗೆ ಶ್ರೀಮತಿ ತಾರಾ @ ತಿಪ್ಪಮ್ಮ ಗಂಡ ಪಂಪಾಪತಿ, ವಯಸ್ಸು 35 ವರ್ಷ, ಜಾ: ಮಡಿವಾಳರ, ಉ: ಸ್ಟಾಫ್ ನರ್ಸ್, ಸಾ: ಉಪ್ಪಾರ ಓಣಿ, ಗಂಗಾವತಿ ಹಾ:ವ: ಸ್ಟಾಫ್ ಕ್ವಾಟರ್ಸ ಸರಕಾರಿ ಆಸ್ಪತ್ರೆ, ಗಂಗಾವತಿ ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾಧಿಯನ್ನು ಹಾಜರುಪಡಿಸಿದ್ದು ಅದರ ಸಾರಂಶವೇನೆಂದರೆ, ನನ್ನ ಗಂಡನು ಮೃತಪಟ್ಟಿದ್ದು ಅವರು ಜೀವಂತವಿರುವಾಗ ಅವರ ಪರಿಚಯದ ಅಕ್ಕಪ್ಪ ತಂದೆ ಸಾಬಣ್ಣ ಮಡಿವಾಳರ ಸಾ: ಜಯನಗರ, ಗಂಗಾವತಿ ಇವರಿಗೆ ರೂ. 60,000-00 ಗಳನ್ನು ಕೊಟ್ಟಿದ್ದು ಇರುತ್ತದೆ. ನನಗೆ ಹಣದ ಅವಶ್ಯಕತೆ ಇದ್ದುದರಿಂದ, ನಾನು ಹಾಗೂ ನನ್ನ ಪರಿಚಯದ ಶ್ಯಾಮಿದ್ಅಲಿ ಇವರೊಂದಿಗೆ ದಿನಾಂಕ 21-04-2017 ರಂದು ಮಧ್ಯಾಹ್ನ 1-00 ಗಂಟೆ ಸುಮಾರಿಗೆ ಅಕ್ಕಪ್ಪ ಇವರಿಗೆ ನನ್ನ ಗಂಡ ನೀಡಿದ ದುಡ್ಡನ್ನು ಕೊಡುವಂತೆ ಕೇಳಲು ಅವರಿದ್ದ ಇಸ್ಲಾಂಪುರದಲ್ಲಿರುವ ಈರಣ್ಣ ದೇವಸ್ಥಾನಕ್ಕೆ ಒಂದು ಆಟೋರಿಕ್ಷಾದಲ್ಲಿ ಹೊರಟಿದ್ದು, ನಾನು ಎಸ್.ಬಿ.ಹೆಚ್. ಬ್ಯಾಂಕ್ ಹತ್ತಿರ ರಸ್ತೆಯ ಮೇಲೆ ಹೊರಟಿದ್ದಾಗ ಅಲ್ಲಿಗೆ ಬೈಕ್ ಹೊಡೆದುಕೊಂಡು ಬಂದ ಅಕ್ಕಪ್ಪ ಇವನು ನಾನಿದ್ದ ಆಟೋರಿಕ್ಷಾವನ್ನು ಅಡ್ಡಗಟ್ಟಿ ನಿಲ್ಲಿಸಿ ಏಯ್ ನಿನ್ನ ಕಿರಿಕಿರಿ ಭಾಳ ಆಗೈತಿ, ನಿನ್ನ್ ರೊಕ್ಕಾ ಕೊಡಂಗಿಲ್ಲ ಏನ್ಮಾಡ್ತಿ ಮಾಡ್ಕೋ ಹೋಗ್ ಅಂತಾ ಅಂದನು.  ಅದಕ್ಕೆ ನಾನು ನನ್ನ ಗಂಡ ತೀರಿಕೊಂಡಿರುತ್ತಾರೆ ಅದಕ್ಕೆ ನನಗೆ ಹಣದ ಅವಶ್ಯಕತೆ ಇದೆ ಕೊಡಿರಿ ಅಂತಾ ಕೇಳಿದೆನು.  ಅದಕ್ಕೆ ಅವನು ಏಕಾಏಕಿ ಸಿಟ್ಟಿಗೆ ಬಂದು ಲೇ ನಿನ್ನ ಚಾಳಿ ಏನ್ ಅಂತ ಇಡೀ ಊರಿಗೆ ಗೊತ್ತೈತೀ ಅಂತಾ ಅನ್ನುತ್ತಾ ಆಟೋರಿಕ್ಷಾದಲ್ಲಿ ಕುಳಿತಿದ್ದ ನನ್ನ ಕೈ ಹಿಡಿದು ಆಟೋರಿಕ್ಷಾದಿಂದ ಹೊರಗೆಳೆದು ಅಪಮಾನ ಮಾಡಿದನು.  ಅಲ್ಲದೇ ಅಕ್ಕಪ್ಪನು ನೀ ಹಿಂಗ ನಾ ಇದ್ದಲ್ಲಿ ಬಂದ್ ನನ್ನ ರೊಕ್ಕಾ ಕೊಡ ಅಂತ ಮರ್ಯಾದಿ ಕಳದಿ ಅಂದ್ರ, ನಿನ್ನ ಜೀವಂತ ಬಿಡಂಗಿಲ್ಲ ಹುಷಾರ್ ಅಂತಾ ಬೆದರಿಕೆ ಹಾಕುತ್ತಾ ಹೊರಟು ಹೋದನು.  ಆಗ ಸಮಯ ಮಧ್ಯಾಹ್ನ 1-30 ಗಂಟೆಯಾಗಿರಬಹುದು. ನಂತರ ನಾನು ಭಯಗೊಂಡು ಪೊಲೀಸ್ ಸ್ಟೇಷನ್ಗೆ ಬರದೇ ಇದ್ದು, ಇಂದು ತಡವಾಗಿ ಬಂದು ಈ ಫಿರ್ಯಾಧಿಯನ್ನು ಸಲ್ಲಿಸುತ್ತಿದ್ದುದು ಇದೆ.  ಕಾರಣ ಸದರಿ ಅಕ್ಕಪ್ಪ ತಂದೆ ಸಾಬಣ್ಣ ಮಡಿವಾಳರ ಸಾ: ಜಯನಗರ, ಗಂಗಾವತಿ ಇವನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ ಫಿರ್ಯಾಧಿ ಸಾರಾಂಶದ ಮೇಲಿಂದ ಪ್ರಕರಣ ತನಿಖೆ ಕೈಗೊಂಡಿದ್ದು ಇರುತ್ತದೆ.
3] ಮುನಿರಾಬಾದ್ ಪೊಲೀಸ್ ಠಾಣೆ ಗುನ್ನೆ ನಂ: 83/2017 ಕಲಂ. 279, 337 ಐ.ಪಿ.ಸಿ ಹಾಗೂ 187 ಐ.ಎಂ.ವಿ. ಕಾಯ್ದೆ.
ದಿನಾಂಕ: 24-04-2017 ರಂದು 1-30 ಎ.ಎಮ್.ಕ್ಕೆ ಫಿರ್ಯಾದಿದಾರನಾದ ಮಂಜು ತಂದೆ ಟಿ.ವ್ಹಿ ದಯಾನಂದ ಸಾ: ಹೊಸಪೇಟಿ ಇವರು ಪೊಲೀಸ್ ಠಾಣೆಗೆ ಹಾಜರಾಗಿ ತನ್ನ ಹೇಳಿಕೆಯನ್ನು ಹೇಳಿ ಬರೆಸಿದ್ದರ ಸಾರಾಂಶವೇನೆಂದರೆ, ದಿನಾಂಕ: 22/04/2017 ರಂದು ರಾತ್ರಿ 9-00 ಗಂಟೆ ಸುಮಾರಿಗೆ ಗಾಯಾಳು ತನ್ನ ತಮ್ಮನಾದ ಗಾಯಾಳು ರವಿ  ಇವನು ಹೊಸಪೇಟಿಯಲ್ಲಿ ಚಾಲಕ ಕರ್ತವ್ಯ ಮುಗಿಸಿಕೊಂಡು ತನ್ನ ಮೋಟರ ಸೈಕಲ ನಂ: ಕೆ.ಎ.03/ಇಕೆ 7305 ನೇದ್ದರ  ಮೇಲೆ ಹೊಸಪೇಟಿಯಿಂದ ಎನ್.ಎಚ್-50 ರಸ್ತೆಯಲ್ಲಿ ಹೊಸಳ್ಳಿಗೆ ಮನೆಗೆ ಹೋಗುತ್ತಿರುವಾಗ ಹೊಸಳ್ಳಿ ಗ್ರಾಮದ ಹತ್ತಿರ ಎನ್.ಎಚ್-50 ರಸ್ತೆಯಲ್ಲಿರುವ ಸಿದ್ದಾರ್ಥ ಪೆಟ್ರೋಲ ಬಂಕ ಎದುರುಗಡೆ  ಒಂದು ಲಾರಿಯನ್ನು ಯಾವೂದೆ ಸೂಚನೆ ರಸ್ತೆಯಲ್ಲಿ ನಿಲ್ಲಿಸಿದ್ದು ಸದರ ಲಾರಿ ನಿಲ್ಲಿಸಿದ್ದು ರವಿ ಇವನು ಬೈಕನ್ನು ಲಾರಿ ಕಾಣಿಸದೆ ಲಾರಿಯ ಹಿಂದಿನ ಭಾಗಕ್ಕೆ ಡಿಕ್ಕಿ ಹೊಡೆಸಿದ್ದು  ಇದರಿಂದ ರವಿಗೆ ಹಣೆಗೆ ಮತ್ತು ಎಡ ಶೊಲ್ಡರ್ ಗೆ  ಗಾಯ ಪೆಟ್ಟುಗಳಾಗಿರುತ್ತವೆ.  ಚಾಲಕನ ಹೆಸರು ಗೊತ್ತಾಗಿರುವದಿಲ್ಲ ಕಾರಣ ಸದರ ಲಾರಿ ಚಾಲಕನ ಮೇಲೆ ಕ್ರಮ ಜರುಗಿಸಲು ವಿನಂತಿ ಎಂದು ವಗೈರೆ ದೂರು ಇದ್ದ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ. 

 
Will Smith Visitors
Since 01/02/2008