Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Friday, October 31, 2014

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 188/2014 ಕಲಂ. 279, 304(ಎ) ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:. 
ದಿನಾಂಕ 14-10-2014 ರಂದು ರಾತ್ರಿ 9-30 ಗಂಟೆ ಸುಮಾರು ನಿಂಗಾಪೂರ ಹತ್ತಿರ ಅಡುಗೆ ಮಾಡಿಕೊಳ್ಳಲು ಕಿರಾಣಿ ಸಾಮಾನುಗಳನ್ನು ತರಲೆಂದು ಹೊಸಪೇಟ-ಕುಷ್ಟಗಿ ಎನ್.ಹೆಚ್-13 ಒನ್-ವೇ ರಸ್ತೆಯನ್ನು ನಡೆದುಕೊಂಡು  ದಾಟುತ್ತಿದ್ದ ಷಣ್ಮುಗಂ ಈತನಿಗೆ ಕುಷ್ಟಗಿ ಕಡೆಯಿಂದ ಯಾವುದೋ ಒಂದು ಲಾರಿ ಚಾಲಕನು ತನ್ನ ಲಾರಿಯನ್ನು ಅತಿ ವೇಗ ಹಾಗೂ ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಠಕ್ಕರ ಕೊಟ್ಟು ಅಪಘಾತಪಡಿಸಿದ್ದು, ಇದರಿಂದ ಷಣ್ಮುಗಂ ಈತನು ರಸ್ತೆಯ ವಿಭಾಜಕಕ್ಕೆ ಬಿದ್ದು, ಬಲಗಡೆ ಪಕ್ಕಡಿ ಹತ್ತಿರ ಭಾರಿ ಒಳಪೆಟ್ಟಾಗಿದ್ದು ಇಲಾಜ ಕುರಿತು ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕುರಿತು ದಾಖಲು ಮಾಡಿದ್ದಾಗ ಇಂದು ದಿನಾಂಕ 30-10-2014 ರಂದು ಬೆಳಿಗ್ಗೆ 10-30 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ ಮತ್ತು ಅಪಘಾತಪಡಿಸಿದ ನಂತರ ಲಾರಿ ಚಾಲಕನು ತನ್ನ ಲಾರಿಯನ್ನು ನಿಲ್ಲಿಸದೇ ಹಾಗೆಯೇ ಹೋಗಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಫಿರ್ಯಾದಿ ಮೇಲಿಂದ ಪ್ರಕರಣ ದಾಖಲಾಗಿದ್ದು ಇರುತ್ತದೆ.
2) ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ. 116/2014 ಕಲಂ. 279, 304(ಎ) ಐ.ಪಿ.ಸಿ:.

ದಿನಾಂಕ:30-10-2014 ರಂದು ªÀÄzÁåºÀß 3-30 UÀAmÉUÉ oÁuÉUÉ ¦ügÁå¢zÁgÀgÁzÀ ಶಿವಲಿಂಗಪ್ಪ ತಂದೆ ಹುಲ್ಲಪ್ಪ ಮೇಲಸಕ್ರಿ ಸಾ: ಸೇಬಿನಕಟ್ಟಿ ಹಾ:ವ: ಹನಮಸಾಗರ ಇಂದು ದಿನಾಂಕ: 30-10-2014 ರಂದು ಮದ್ಯಾಹ್ನ ಫಿರ್ಯಾದಿದಾರರು ಮದ್ಯಾಹ್ನ 2-30 ಗಂಟೆಯ ಸುಮಾರಿಗೆ ಇದ್ದಾಗ  ಶರಣಪ್ಪ ಕೋರಿ ಈತನು ಮೋಟಾರ ಸೈಕಲ ನಂ: ಕೆ.ಎ-36 ಎಲ್.-976 ನೇದ್ದರ ಮೇಲೆ ಹನಮಸಾಗರದಿಂದ ಹನಮನಾಳಕಡೆಗೆ ಹೊರಟಾಗ ಹನಮನಾಳ ಕಡೆಯಿಂದ ರೋಡಿನಲ್ಲಿ ಒಬ್ಬ ಮೋಟಾರ ಸೈಕಲ್ ಸವಾರನು ತನ್ನ ಮೋಟಾರ ಸೈಕಲನ್ನು ಆತಿವೇಗ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ಬಂದವನೆ ಎದುರಿಗೆ ಮೋಟಾರ ಸೈಕಲ ಮೇಲೆ ರೋಡಿನ ಎಡಗಡೆ ಹೊರಟ ಶರಣಪ್ಪ ಕೋರಿಯ ಮೋಟಾರ ಸೈಕಲಗೆ ಟಕ್ಕರ ಕೊಟ್ಟು ಅಪಘಾತ ಪಡಿಸಿದಾಗ ಶರಣಪ್ಪ ಕೋರಿ ಈತನ ಮೋಟಾರ ಸೈಕಲ್ ರೋಡಿಗೆ ಬಿದ್ದು ಅದರ ಮೇಲೆ ಆತನು ಬಿದ್ದು ಮೋಟಾರ ಸೈಕಲ್ ರೋಡಿಗೆ ಗೀಚಿಕೊಂಡು ರೋಡಿನ ಮುಂದೆ ಹೋಯಿತು. ಮತ್ತು ಹನಮನಾಳ ಕಡೆಯಿಂದ ಬಂದ ಮೋಟಾರ ಸೈಕಲ್ ಸವಾರನು ಕೂಡ ರೋಡಿನಲ್ಲಿ ಬಿದ್ದು ಆತನ ಮೋಟಾರ ಸಹ ಗೀಚಿಕೊಂಡು ರೋಡಿನ ಎಡಗಡೆ ಹೋಗಿ ಬಿದ್ದಿದ್ದು ಫಿರ್ಯಾದಿ ಗಾಭರಿಯಾಗಿ ಅಲ್ಲಿಗೆ ಓಡಿ ಹೋಗಿ ನೋಡಲು ಶರಣಪ್ಪ ಕೋರಿ ಈತನಿಗೆ ತಲೆಗೆ ಭಾರಿ ಪೆಟ್ಟಾಗಿ ಮೂಗಿನಲಿ ಮತ್ತು ಕಿವಿಯಲ್ಲಿ ರಕ್ತ ಬಂದು ಸ್ಥಳದಲ್ಲಿಯೇ ಮೃತ ಪಟ್ಟಿದ್ದು ನಂತರ ಇನ್ನೊಬ್ಬ ಮೋಟಾರ ಸೈಕಲ್ ಸವಾರನನ್ನು ನೋಡಲು ಆತನಿಗೆ ಎಡಗೈ, ಎಡಗಾಲಿಗೆ ಭಾರಿ ರಕ್ತಗಾಯಗಳಾಗಿ ಬಿದ್ದಿದ್ದು ಆತನ ಹೆಸರು ವಿಳಾಸ ವಿಚಾರಿಸಲು ಶರಣಪ್ಪ ತಂದೆ ಕರಿಯಪ್ಪ ಕಳಸಾದ ಸಾ: ಯರಗೇರಾ ಅಂತಾ ಹೇಳಿದ್ದು ಆತನ ಮೋಟಾರ ಸೈಕಲನ್ನು ನೋಡಲು ಅದು ಬಜಾಜ ಕಂಪನಿಯ ಪ್ಲಾಟೀನಾ ನಂ: ಕೆ.ಎ-37/ಯು-1671 ಅಂತಾ ಇದ್ದು ಶರಣಪ್ಪ ಕೋರಿ ನಡೆಸಿದ ಮೋಟಾರ ಸೈಕಲ್ ನೋಡಲು ಹಿರೋಹೊಂಡಾ ಕಂಪನಿಯ ಸಿ.ಡಿ ಡಾನ ನಂ ಕೆ.ಎ-36-ಎಲ್-976 ಅಂತಾ ಇದ್ದು ಎರಡು ಮೋಟಾರ ಸೈಕಲಗಳು ಅಪಘಾತದಲ್ಲಿ ಜಖಂಗೊಂಡಿರುತ್ತವೆ ಅಲ್ಲಿ ಹನಮಸಾಗರ ಗ್ರಾಮದ ಚೆನ್ನಬಸಯ್ಯ ಅವತಾರಿ ಆಕಳ ಹೊಡೆದುಕೊಂಡು ಹೊಲಕ್ಕೆ ಹೊರಟಿದ್ದು ಆತ ನಾನು ಸೇರಿ ಯರಿಗೇರಿ ಶರಣಪ್ಪನಿಗೆ ನೀರು ಹಾಕಿದ್ದು ನಂತರ 108 ಅಂಬುಲೆಸ್ನ್ನಲ್ಲಿ ಹಾಕಿ ಉಪಚಾರ ಕುರಿತು ಇಲಕಲಗೆ ಕಳಿಸಿದ್ದು ಇರುತ್ತದೆ ಅಂತಾ ಮುಂತಾಗಿ ಫಿರ್ಯಾದಿ ಇರುತ್ತದೆ. 

Thursday, October 30, 2014

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 245/2014 ಕಲಂ. 302, 201 ಐ.ಪಿ.ಸಿ:. 
ದಿನಾಂಕ 29-10-2014 ರಂದು ಮುಂಜಾನೆ 09-30 ಗಂಟೆಗೆ ಶ್ರೀ ಚಾಂದಪಾಷಾ @ ರಬ್ಬಾನಿ ತಂದೆ ಆಲಂಸಾಬ ವಯ 55 ವರ್ಷ ಜಾ: ಮುಸ್ಲಿಂ ಉ: ಲಾರಿ ಮಾಲೀಕ & ಚಾಲಕ ಸಾ: ಎ.ಪಿ.ಎಂ.ಸಿ. ರೈತಭವನ ಕಂಪೌಂಡ್ ಪಕ್ಕದಲ್ಲಿ ಸಿ.ಬಿ.ಎಸ್. ಗಂಜ್ ಗಂಗಾವತಿ ರವರು ಠಾಣೆಗೆ ಬಂದು ತಮ್ಮದೊಂದು ಫಿರ್ಯಾದಿ ನೀಡಿದ್ದು ಅದರ ಸಾರಂಶವೇನೆಂದರೆ, ದಿನಾಂಕ 28-10-2014 ರಂದು ರಾತ್ರಿ ವೇಳೆಯಲ್ಲಿ ಯಾರೋ ದುಷ್ಕರ್ಮಿಗಳು ಗಂಗಾವತಿ ನಗರದ ಎ.ಪಿ.ಎಂ.ಸಿ. ಜಾಗೆಯಲ್ಲಿ ಅಂ. 30 ರಿಂದ 32 ವರ್ಷ ವಯಸ್ಸಿನ ಮಹಿಳೆಯ ಕುತ್ತಿಗೆ ಕೊಯ್ದು ದೇಹದಿಂದ ರುಂಡವನ್ನು ಬೇರೆ ಮಾಡಿದ್ದು,  ರುಂಡವು ಹತ್ತಿರದಲ್ಲಿಯ ಮುಳ್ಳಿನ ಗಿಡದಲ್ಲಿ ಬಿದ್ದಿರುತ್ತದೆ ಎಂದು ನೀಡಿದ  ಫಿರ್ಯಾದಿ ಮೇಲಿಂದ ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 245/14 ಕಲಂ. 302, 201 ಐ.ಪಿ.ಸಿ. ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.  
2) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 239/2014 ಕಲಂ. 3 & 7 ಇ.ಸಿ. ಕಾಯ್ದೆ 1955 ಮತ್ತು 18 ಪಿ.ಡಿ.ಸಿ ಆದೇಶ:.
ದಿ:29-10-2014 ರಂದು 21-30 ಪಿ.ಎಮ್. ಕ್ಕೆ ಫಿರ್ಯಾದಿದಾರರಾದ ಶ್ರೀ ಮಲ್ಲಪ್ಪ ಹಳ್ಯಾಳ ಆಹಾರ ನಿರೀಕ್ಷಕರು ತಹಶೀಲ ಕಾರ್ಯಾಲಯ ಕೊಪ್ಪಳ ರವರು ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ಇಂದು ಬೆಳಗ್ಗೆ 10-00 ಗಂಟೆಗೆ ಪಡಿತರ ಗೋದಿ ಹಾಗೂ ಅಕ್ಕಿ ಅಕ್ರಮವಾಗಿ ಸಾಗಾಣಿಕೆಯಲ್ಲಿ ತೊಡಗಿರುವ ಬಗ್ಗೆ ಖಚಿತ ಬಾತ್ಮೀ ಬಂದ ಮೇರೆಗೆ ತಮ್ಮ ಅಧಿಕಾರಿಗಳೊಂದಿಗೆ ನಗರದ .ಪಿ.ಎಮ್, ಸಿ. ಯಾರ್ಡನಲ್ಲಿರುವ ವಿನಾಯಕ ಡ್ರೇಡಿಂಗ್ ಕಂಪನಿಯ ಎದುರಿಗೆ ಇದ್ದ ವಿ.ಆರ್.ಎಲ್. ಲಾರಿ ನಂ: ಕೆ.-25/-2415 ನೇದ್ದರಲ್ಲಿದ್ದ 102.50 ಕ್ವಿಂಟಲ್ ಪಡಿತರ ಗೋದಿ ಅಂಕಿ: 82,000/- ಲೋಡ್ ಮಾಡಿದ್ದು ಹಾಗೂ ಕಿರಣ ಟ್ರೇಡರ್ಸ ಗೋದಾಮಿನಲ್ಲಿದ್ದ 75 ಕ್ವಿಂಟಲ್ ಪಡಿತರ ಅಕ್ಕಿ ಅಂಕಿ: 75000/- ನೇದ್ದನ್ನು ಸಂಗ್ರಹಿಸಿ ಆರೋಪಿತರು ಸರ್ಕಾರದ ಅನ್ನಭಾಗ್ಯ ಯೋಜನೆಯ ಪಡಿತರವನ್ನು ಸಾಗಾಟ ಮಾಡುತ್ತಿದ್ದಾಗ ಆರೋಪಿತರಿಂದ ಪಡಿತರ ಮತ್ತು ಲಾರಿ ಹಾಗೂ ತೂಕದ ಯಂತ್ರ ಇವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿ ಮುಂದಿನ ಕ್ರಮಕ್ಕಾಗಿ ಫಿರ್ಯಾದಿಯೊಂದಿಗೆ ಪಂಚನಾಮೆ ಮತ್ತು ಆರೋಪಿ ಹೇಳಿಕೆ ಮತ್ತು ಲಾರಿಯನ್ನು ಹಾಗೂ ಚಾಲಕನನ್ನು ಹಾಜರುಪಡಿಸಿದ್ದು, ಸದರಿ ದೂರಿನ ಮೇಲಿಂದ ಕೊಪ್ಪಳ ನಗರ ಠಾಣೆ ಗುನ್ನೆ ನಂ: 239/2014 ಕಂ: 3 ಸಹಿತ 7 .ಸಿ. ಕಾಯ್ದೆ ಹಾಗೂ ಕಲಂ: 18 ಪಿ.ಡಿ.ಎಸ್. ಕಾಯ್ದೆ 1992 ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
3) ಕೊಪ್ಪಳ ನಗರ ಪೊಲೀಸ್ ಠಾಣೆ ಯು.ಡಿ.ಆರ ನಂ. 18/2014 ಕಲಂ. 174 (ಸಿ) ಸಿ.ಆರ್.ಪಿ.ಸಿ.:

ದಿ: 29-10-201041 ರಂದು 11-30 ಗಂಟೆಗೆ ಫಿರ್ಯಾದಿದಾರರಾದ ಪರಶುರಾಮ ಮೇಘರಾಜ ಸಾ: ಭಾಗ್ಯನಗರ ಇವರು ಠಾಣೆಗೆ ಹಾಜರಾಗಿ ನೀಡಿದ ಹೇಳಿಕೆ ದೂರಿನ ಸಾರಾಂಶವೇನೆಂದರೆ, ಕಳೆದ 4-5 ದಿನಗಳಿಂದ ಇಂದು ಬೆಳಗ್ಗೆ 09-00 ಗಂಟೆಯ ಅವಧಿಯಲ್ಲಿ ಸುಮಾರು 35-40 ವರ್ಷ ವಯಸ್ಸಿನ ಓರ್ವ ಗಂಡಸು ಭಾಗ್ಯನಗರದಿಂದ ನವನಗರಕ್ಕೆ ಹೋಗುವ ರಸ್ತೆಯ ಬಾಜೂ ಶ್ರೀ ಅಜ್ಜಪ್ಪ ಗುಡಿಯ ಹತ್ತಿರ ಬಾಜೂ ರಾಜು ಪವಾರ ಇವರ ಹೊಸ ಮನೆ ಕಟ್ಟಡದಲ್ಲಿ ಮೃತಪಟ್ಟಿದ್ದು ಇರುತ್ತದೆ. ಸದರಿ ಶವವು ಗುರುತು ಸಿಗದಂತೆ ಆಗಿದ್ದು, ಮೃತನ ಸಾವಿನಲ್ಲಿ ಸಂಶಯ ಇರುತ್ತದೆ. ಕಾರಣ ಮಾನ್ಯರವರು ಮುಂದಿನ ಕ್ರಮ ಜರುಗಿಸಲು ವಿನಂತಿ. ಅಂತಾ ಮುಂತಾಗಿ ನೀಡಿದ ದೂರಿನ ಮೇಲಿಂದ ಕೊಪ್ಪಳ ನಗರ ಠಾಣೆ ಯು.ಡಿ.ಆರ್. ನಂ: 18/2014 ಕಲಂ: 174 [ಸಿ] ಸಿ.ಆರ್.ಪಿಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.

Sunday, October 26, 2014

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕೊಪ್ಪಳ ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 61/2014 ಕಲಂ. 279, 338 ಐ.ಪಿ.ಸಿ:.  
ದಿನಾಂಕ 25-10-2014 ರಂದು ಸಂಜೆ 6-30 ಗಂಟೆಗೆ ಜಿಲ್ಲಾ ಆಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ಬಂದಿದ್ದು, ಕೂಡಲೇ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಶ್ರೀ ಅಬ್ದುಲ್ ರೆಹೆಮಾನ್ ಸಾಬ ಲೈನ್ ಇವರ ಹೇಳಿಕೆಯನ್ನು ಪಡೆದುಕೊಂಡಿದ್ದು ಸಾರಾಂಶವೇನೆಂದರೆ, ಇಂದು ದಿನಾಂಕ 25-10-2014 ರಂದು ತಾನು ತನ್ನ ಅಳಿಯ ಇಸ್ಮಾಯಿಲ್ ಇಟಗಿ ಈತನನ್ನು ಮಾತನಾಡಿಸಲು ಕೊಪ್ಪಳಕ್ಕೆ ಬಂದು, ಅಳಿಯನನ್ನು ಮಾತನಾಡಿಸಿಕೊಂಡು ವಾಪಾಸ್ ಊರಿಗೆ ಹೋಗಲು ಕೊಪ್ಪಳದ ಬನ್ನಿಕಟ್ಟಿ ಹತ್ತಿರ ಬಸ್ ಹತ್ತಲು ಹೋಗಿ ಹೊಸಪೇಟೆ ಗದಗ ಎನ್.ಹೆಚ್ 63 ರಸ್ತೆಯನ್ನು ಉತ್ತರ ಭಾಗದಿಂದ ದಕ್ಷಿಣ ಭಾಗದ ಕಡೆಗೆ ದಾಟುತ್ತಿರುವಾಗ ಕೊಪ್ಪಳದ ಬಸ್ ನಿಲ್ದಾಣದ ಕಡೆಯಿಂದ ಒಬ್ಬ ಲಾರಿ ನಂಬರ್ KA 25 / A 8899 ನೇದ್ದರ ಚಾಲಕನು ತಾನು ಚಲಾಯಿಸುತ್ತಿದ್ದ ಲಾರಿಯನ್ನು ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ರಸ್ತೆಯನ್ನು ದಾಟುತ್ತಿದ್ದ ತನಗೆ ಠಕ್ಕರ್ ಮಾಡಿ ಅಪಘಾತ ಮಾಡಿದ್ದು, ಇದರಿಂದ ತನಗೆ ಬಲಗಾಲ ಮೊಣಕಾಲಿನಿಂದ ಪಾದದವರೆಗೆ ಭಾರಿ ರಕ್ತಗಾಯ ಹಾಗೂ ಎಡಗಾಲ ಕೀಲದ ಹತ್ತಿರ ರಕ್ತಗಾಯವಾಗಿದ್ದು ಇರುತ್ತದೆ ಅಂತಾ ಇದ್ದ ಹೇಳಿಕೆಯನ್ನು ಸಂಜೆ 6-45 ಗಂಟೆಯಿಂದ 7-30 ಗಂಟೆಯವರೆಗೆ ಪಡೆದುಕೊಂಡು ವಾಪಾಸ್ ಠಾಣೆಗೆ ಸಂಜೆ 7-45 ಗಂಟೆಗೆ ಬಂದಿದ್ದು, ಸದರ ಹೇಳಿಕೆ ಫಿರ್ಯಾದಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 61/2014 ಕಲಂ. 279, 338 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2) ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ. 119/2014 ಕಲಂ. 279, 337 ಐ.ಪಿ.ಸಿ. ಮತ್ತು 187 ಐ.ಎಂ.ವಿ. ಕಾಯ್ದೆ:
¢£ÁAPÀ 24-10-2014 gÀAzÀÄ gÁwæ 10-30 UÀAmÉUÉ  ºÀħâ½î vÀvÀézÀ²ð D¸ÀàvÉæ¬ÄAzÀ gÀ¸ÉÛ C¥ÀWÁvÀªÁzÀ JA.J¯ï.¹. §AzÀ ªÉÄÃgÉUÉ £Á£ÀÄ RÄzÁÝUÀ D¸ÀàvÉæUÉ ¨ÉÃn ¤Ãr UÁAiÀiÁ¼ÀÄ D£ÀAzÀ FvÀ£ÀÄ PÉÆlÖ °TvÀ ¦üAiÀiÁð¢AiÀÄ£ÀÄß ¥ÀqÉzÀÄPÉÆAqÀÄ ªÁ¥À¸ï EAzÀÄ ¢£ÁAPÀ 25-10-2014 gÀAzÀÄ gÁwæ 9-15 UÀAmÉUÉ §A¢zÀÄÝ, ¸ÀzÀj °TvÀ ¦üAiÀiÁð¢AiÀÄ ¸ÁgÁA±ÀªÉãÀAzÀgÉ, ¢£ÁAPÀ 23-10-2014   gÀAzÀÄ ªÀÄzÁåºÀß 3-30 UÀAmÉUÉ vÁ£ÀÄ ªÀÄvÀÄÛ vÀ£Àß PÁPÀ C±ÉÆÃPÀ vÀAzÉ ªÀiÁ£À¥Àà CPÀ̸Á° EªÀgÉÆA¢UÉ §mÉÖ vÉUÉzÀÄPÉÆAqÀÄ UÀAUÁªÀw¬ÄAzÀ ªÁ¥À¸ï ºÀÄ°ºÉÊzÀgÀ ¸ÀÆÌn ªÉÆÃmÁgÀ ¸ÉÊPÀ¯ï £ÀA.PÉJ-37/«-3607 £ÉÃzÀÝgÀ°è ºÉÆÃUÀÄwÛzÁÝUÀ C±ÉÆÃPÀ FvÀ£ÀÄ Cwà DeÁUÀÆgÀÄPÀvɬÄAzÀ ºÁUÀÆ C®PÀëvÀ£À¢AzÀ £ÀqɹPÉÆAqÀÄ ºÀ¼Àî½î PÁæ¸ï ºÀwÛgÀ §gÀÄwÛzÁÝUÀ PÉ.J¸ï.Dgï.n.¹. §¸ï §A¢zÀÝjAzÀ ZÁ®PÀ£ÀÄ M«ÄäAzÉƪÉÄäÃ¯É JqÀPÉÌ vÉUÉzÀÄPÉÆAqÀÄ ¥ÀPÀÌzÀ ¸ÀeÉÓ ºÉÆ®zÀ°è ºÉÆÃV ©¢ÝzÀÝjAzÀ  »AzÉ PÀĽvÀ ¦üAiÀiÁð¢UÉ £ÉwÛUÉ ¥ÉmÁÖVgÀÄvÀÛzÉ CAvÁ ªÀÄÄAvÁV ¤ÃrzÀ ¦üAiÀiÁð¢AiÀÄ ¸ÁgÁA±ÀzÀ ªÉÄðAzÀ oÁuÁ UÀÄ£Éß £ÀA.119/2014 PÀ®A 279, 338 L¦¹ & 187 L.JA.«.PÁAiÉÄÝ jÃvÁå ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.
3) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 236/2014 ಕಲಂ. 354, 506 ಐ.ಪಿ.ಸಿ:.
ದಿ: 25-10-2014 ರಂದು  07-15 ಪಿ.ಎಮ್. ಕ್ಕೆ ಫಿರ್ಯಾದಾರರಾದ ಶ್ರೀಮತಿ ಫಕ್ಕೀರಮ್ಮ ಮಿರಗನತಂಡಿ ಸಾ: ಗಾಂಧಿನಗರ ಇವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿ: 25-10-2014 ರಂದು ಸಂಜೆ 04-30 ಗಂಟೆಗೆ ನಾನು ಮತ್ತು ನಮ್ಮ ತಮ್ಮ ಯಲ್ಲಪ್ಪ ಇಬ್ಬರೂ ನಮ್ಮ ಮನೆಯ ಮುಂದೆ ಮಾತನಾಡುತ್ತಿದ್ದಾಗ, ನಮ್ಮ ಓಣಿಯ ದುರಗಪ್ಪ ಮೊಡಗಾ ಬಂದು ನೀನು ಮತ್ತು ಓಣಿಯ ಶಿವಪ್ಪ ಶಿರಾ ಇಬ್ಬರ ನಡುವಿನ ಜಗಳದಲ್ಲಿ ನನ್ನ ಹೆಂಡತಿ ದುರಗಮ್ಮ ಮೊಡಗಾ ಇವಳ ಹೆಸರನ್ನು ಯಾಕೆ ಬರಿಸಿದೆ, ನೀನು ಕೊರಮ್ಮ ಗುಡಿ ಹತ್ತಿರ ಹಿರಿಯರಿಗೆ ಪಂಚಾಯತಿ ಮಾಡಕ ಕೂಡಿಸಿನಿ ಅಲ್ಲಿಗೆ ಬಾ ಅಂತಾ ಕರೆದಿದ್ದು ಬರದೇ ಇದ್ದಾಗ ಸಿಟ್ಟೆಗೆದ್ದು ನನ್ನ ಸೀರೆಯ ಸೆರಗನ್ನು ಹಿಡಿದುಕೊಂಡು ದರದರನೇ ಎಳೆದುಕೊಂಡು ಓಣಿಯ ದಾರಿಯಲ್ಲಿ ಎಳೆದಾಡಿ ನಮಗೆಲ್ಲರಿಗೂ ಹೊಡೆದು ಸಾಯಿಸುತ್ತಿನಿ ಅಂತಾ ಜೀವದ ಬೆದರಿಕೆ ಹಾಕಿದ್ದು ದುರಗಪ್ಪ ಮೊಡಗಾ ಈತನ ಮೇಲೆ ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ದೂರಿನ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
4) ಮುನಿರಾಬಾದ ಪೊಲೀಸ್ ಠಾಣೆ ಯು.ಡಿ.ಆರ.ನಂ. 59/2014 ಕಲಂ. 174(ಸಿ) ಸಿ.ಆರ್.ಪಿ.ಸಿ.

ಫಿರ್ಯಾದುದಾರರ ಗಂಡನಾದ ಮೃತ ಶರಣಯ್ಯ ಸಾಲಿಮಠ ಈತನು ನಿನ್ನೆ ದಿನಾಂಕ 24-10-2014 ರಂದು ಬೆಳಿಗ್ಗೆ 7-00 ಗಂಟೆ ಸುಮಾರು ಮನೆಯಿಂದ ಹೋದವನು ವಾಪಸ ಬಂದಿರುವದಿಲ್ಲಾ. ಮೃತ ಶರಣಯ್ಯನು ಲಾಚನಕೇರಿ ಸೀಮಾದಲ್ಲಿರುವ ಶಿವನಗೌಡ ಮಾಲಿ ಪಾಟೀಲ ರವರ ಜಮೀನು ಲಾವಣಿ ಮಾಡುತ್ತಿದ್ದು, ಸದರ ಜಮೀನ ಬದುವು ಚಿಕ್ಕಬಗನಾಳ ಸೀಮಾದಲ್ಲಿ ಬರುತ್ತಿದ್ದು ಸದರ ಜಮೀನಿನ ಬದುವಿನಲ್ಲಿ ಬಲಮಗ್ಗಲಾಗಿ ಮಲಗಿ ಬಿದ್ದು ಮೃತಪಟ್ಟಿದ್ದು, ಸದರಿಯವನ ಬಲಹಣೆಗೆ, ಮೂಗಿನ ಮೇಲೆ, ಎಡಗೈ ಮೊಣಕೈ ಹತ್ತಿರ ತೆರಚಿದ ಗಾಯಗಳಾಗಿದ್ದು, ಮತ್ತು ಬಲಗಾಲ ಮೊಣಕಾಲ ಕೆಳಗೆ, ಎಡಗಾಲ ಹಿಮ್ಮಡಿ ಹತ್ತಿರ ಕಚ್ಚುಗಾಯಗಳಾಗಿದ್ದು, ಸದರಿಯವನ ಮರಣದಲ್ಲಿ ಸಂಶಯ ಇರುತ್ತದೆ ಅಂತಾ ಮುಂತಾಗಿ ಫಿರ್ಯಾದಿ ಸಾರಾಂಶ ಇರುತ್ತದೆ.

Saturday, October 25, 2014

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 243/2014 ಕಲಂ. 87 ಕೆ.ಪಿ. ಕಾಯ್ದೆ:.

ದಿನಾಂಕ: 24-10-2014 ರಂದು 20-00 ಗಂಟೆಗೆ ಶ್ರೀ ಈ. ಕಾಳಿಕೃಷ್ಣ, ಪೊಲೀಸ್ ಇನ್ಸಪೆಕ್ಟರ್ ನಗರ ಪೊಲೀಸ್ ಠಾಣೆ ರವರು ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದ 14 ಜನರ ಮೇಲೆ  ಕ್ರಮ ಜರುಗಿಸಲು ಒಂದು ವರದಿ ನೀಡಿದ್ದು ಅದರ ಸಾರಾಂಶವೇನೆಂದರೆ, ಇಂದು ದಿನಾಂಕ 24-10-2014 ರಂದು ಸಾಯಂಕಾಲ 5-45 ಗಂಟೆಗೆ ಆರೋಪಿತರಾದ ಬಸವರಾಜ ತಂದೆ ದೊಡ್ಡಬಸಪ್ಪ ವಯಾ: 23 ವರ್ಷ, ಜಾ: ಕುರುಬರ, ಉ: ಕೂಲಿ ಕೆಲಸ, ಸಾ: ತೋರಣಗಲ್, ತಾ: ಹೊಸಪೇಟೆ. 02]  ರವಿ ತಂದೆ ಕಾಡಪ್ಪ ವಯಾ: 19 ವರ್ಷ, ಜಾ: ಮೇಷನ್ ಕೆಲಸ, ಸಾ: ಬನ್ನಿಗಿಡ ಕ್ಯಾಂಪ್ ಗಂಗಾವತಿ. 03]   ನಾಗೇಶ ತಂದೆ ನರಸಪ್ಪ ವಯಾ: 30 ವರ್ಷ, ಜಾ; ನಾಯಕ, ಉ: ಹಮಾಲಿ ಕೆಲಸ, ಸಾ; ಬನ್ನಿಗಿಡ ಕ್ಯಾಂಪ್ ಗಂಗಾವತಿ. 04]  ರವಿ ತಂದೆ ಸೆಲ್ವರಾಜ್ ವಯಾ: 19 ವರ್ಷ, ಜಾ: ವಡ್ಡರ, ಉ: ಮೇಷನ್ ಕೆಲಸ, ಸಾ: ಬನ್ನಿಗಿಡ ಕ್ಯಾಂಪ್ ಗಂಗಾವತಿ. 05]     ಖಾದರ ತಂದೆ ರಾಜಮಹ್ಮದ್ ವಯಾ: 22 ವರ್ಷ, ಜಾ; ಮುಸ್ಲಿಂ, ಉ: ಡ್ರೈವರ್, ಸಾ: ಬನ್ನಿಗಿಡ ಕ್ಯಾಂಪ್ ಗಂಗಾವತಿ. 6]   ಶೇಕ್ಷಾವಲಿ ತಂದೆ ಮೆಹಬೂಬ ವಯಾ: 55 ವರ್ಷ, ಜಾ: ಮುಸ್ಲಿಂ, ಉ: ಆಟೋ ಡ್ರೈವರ್, ಸಾ; ಮುರಾರಿ ಕ್ಯಾಂಪ್ ಗಂಗಾವತಿ. 07] ಮೀನಾಜ್ ತಂದೆ ವಲಿಮೋದ್ದೀನ್ ವಯಾ: 28 ವರ್ಷ, ಜಾ: ಮುಸ್ಲಿಂ, ಉ: ವೈರಿಂಗ ಕೆಲಸ, ಸಾ: ಕಿಲ್ಲಾ ಏರಿಯಾ ಗಂಗಾವತಿ. 08]      ಕೇಶಣ್ಣ ತಂದೆ ನಾಗಣ್ಣ ವಯಾ: 52 ವರ್ಷ, ಜಾ; 52 ವರ್ಷ, ಜಾ; ಎಸ್.ಸಿ., ಉ: ಕೂಲಿ ಕೆಲಸ, ಸಾ: ಶರೀಪ್ ನಗರ ಕರ್ನೂಲ್ ಆಂದ್ರಪ್ರದೇಶ. ಹಾ: ವ:- ಗಂಗಾವತಿ.  09]      ಶೇಖರಪ್ಪ ತಂದೆ ಈರಣ್ಣ ಹೊಸಗೇರಿ, ವಯಾ: 40 ವರ್ಷ, ಜಾ: ನಾಯಕ, ಉ: ಕೂಲಿಕೆಲಸ, ಸಾ; ಬಸವಣ್ಣ ದೇವಸ್ಥಾನದ ಹತ್ತಿರ ಹೊಸಗೇರಿ, ತಾ: ಗಂಗಾವತಿ.  10]      ಜೀವರತ್ನಂ ತಂದೆ ಆದಂ ವಯಾ; 52 ವರ್ಷ, ಜಾ: ಕ್ರಿಶ್ಚಿಯನ್, ಉ: ಕೂಲ ಕೆಲಸ, ಸಾ: ಬನ್ನಿಗಿಡ ಕ್ಯಾಂಪ್ ಗಂಗಾವತಿ. 11]       ಚಂದ್ರಪ್ಪ ತಂದೆ ಶಂಕ್ರಪ್ಪ ವಯಾ: 41 ವರ್ಷ, ಜಾ; ಮರಾಠ, ಉ: ಗ್ಯಾರೇಜ್ ಕೆಲಸ, ಸಾ: ಬನ್ನಿಗಿಡದ ಕ್ಯಾಂಪ್ ಗಂಗಾವತಿ. 12]      ಹನುಮಂತ ತಂದೆ ಓಂಕಾರಪ್ಪ ವಯಾ: 40 ವರ್ಷ, ಜಾ: ನೇಕಾರ, ಉ: ಕೂಲಿ ಕೆಲಸ, ಸಾ: ಮುರಾರಿ ನಗರ ಗಂಗಾವತಿ.  13]      ಹುಸೇನಪ್ಪ ತಂದೆ ಯಮನಪ್ಪ ವಯಾ: 55 ವರ್ಷ, ಜಾ: ಈಳಿಗೇರ, ಉ: ಕಾಯಿಪಲ್ಲೆ ವ್ಯಾಪಾರ, ಸಾ: ಸಂತೆಬಯಲು ಗಂಗಾವತಿ. 14]      ಬಾಷಾ ತಂದೆ ಗಫೂರ್ ಸಾಬ ವಯಾ: 32 ವರ್ಷ, ಜಾ; ಮುಸ್ಲಿಂ, ಉ: ಕೇಬಲ್ ಆಪರೇಟರ್, ಸಾ: ಮುರಾರಿ ನಗರ,  ಗಂಗಾವತಿ.  ಗಂಗಾವತಿ ನಗರದ ಬನ್ನಿಗಿಡ ಕ್ಯಾಂಪಿನಲ್ಲಿರುವ ವಿ.ಆರ್.ಎಲ್. ಆಪೀಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ದುಂಡಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ 52 ಇಸ್ಪೇಟ್ ಎಲೆಗಳ ಸಹಾಯದಿಂದ ಅಂದರ್-ಬಾಹರ್ ಇಸ್ಪೇಟ್ ಜೂಜಾಟ ಆಡುತ್ತಿರುವಾಗ ಶ್ರೀ ಈ.ಕಾಳಿಕೃಷ್ಣ, ಪೊಲೀಸ್ ಇನ್ಸಪೆಕ್ಟರ್ ಗಂಗಾವತಿ ನಗರ ಪೊಲೀಸ್ ಠಾಣೆ ರವರು ಸದರಿಯವರ ಮೇಲೆ ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಹಿಡಿದು ಸದರಿಯವರಿಂದ ಇಸ್ಪೇಟ್ ಜೂಜಾಟದ ಒಟ್ಟು ನಗದು ಹಣ ರೂ. 21,500-00 ಹಾಗೂ 52 ಇಸ್ಪೇಟ್ ಎಲೆಗಳನ್ನು ಜಪ್ತಿ ಪಡಿಸಿಕೊಂಡು ಆರೋಪಿತರ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 
Will Smith Visitors
Since 01/02/2008