Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Wednesday, November 29, 2017

1]  ಕೊಪ್ಪಳ ನಗರ ಪೊಲೀಸ್  ಠಾಣೆ  ಗುನ್ನೆ ನಂ: 178/2017 ಕಲಂ 392 ಐಪಿಸಿ.
ದಿನಾಂಕ: 28-11-2017 ರಂದು ಸಾಯಂಕಾಲ 5-15 ಗಂಟೆಗೆ ಫಿರ್ಯಾದಿದಾರರಾದ ತಾಯಶ್ರೀ ಜೆ ಉ: ನಿಲಯ ಮೇಲ್ವಿಚಾರಕರು(ಸೂಪರಿಡೆಂಟ್) ಡಿ. ದೆವರಾಜ ಅರಸು ಮೇಟ್ರಿಕ್ ನಂತರ ಬಾಲಕೀಯರ ವಸತಿ ನಿಲಯ(ಬಿ) ಕೊಪ್ಪಳ ಇವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಶವೇನೆಂದರೆ, ಭಾರತಿ ತಂದೆ ಅಂದಪ್ಪ ಬಡಿಗೇರ ವಯಾ: 17 ವರ್ಷ ಜಾ: ಬಡಿಗೇರ ಉ: ವಿದ್ಯಾಥರ್ಿ ಸಾ: ಮತ್ತೂರ ಈಕೆಯು ನಮ್ಮ ವಸತಿ ನಿಲಯದಲ್ಲಿ ಇದ್ದು ಈಕೆಯು ಸರಕಾರಿ ಬಾಲಕಿಯರ ಕಾಲೇಜನಲ್ಲಿ ಪ್ರಥಮ ಪಿ.ಯು.ಸಿ ಓದಿಕೊಂಡು ಇರುತ್ತಾಳೆ. ಈಕೆಯು ದಿನಾಲೂ ನಮ್ಮ ಹಾಸ್ಟೇಲ್ನಿಂದ ಕಾಲೇಜ್ಗೆ ನಡೆದುಕೊಂಡು ಹೋಗುತ್ತಿದ್ದಳು. ದಿನಾಂಕ: 28-11-2017 ರಂದು ಮುಂಜಾನೆ 10-30 ಗಂಟೆಯ ಸುಮಾರಿಗೆ ನಾನು ಹಾಸ್ಟೇಲ್ನಲ್ಲಿದ್ದಾಗ ಕುಮಾರಿ ಭಾರತಿಯು ಅಳುತ್ತಾ ನನ್ನ ಹತ್ತಿರ ಬಂದು ಹೇಳಿದ್ದೇನೆಂದರೆ, ತಾನು ಇಂದು ಮುಂಜಾನೆ 7-00 ಗಂಟೆಗೆ ಕಾಲೇಜ್ಗೆ ಹೋಗಿದ್ದು, ನಂತರ ನನಗೆ ಮೈಯಲ್ಲಿ ಆರಾಮ ಇಲ್ಲದಿರುವುದರಿಂದ ಮುಂಜಾನೆ 9-30 ಗಂಟೆಯ ಸುಮಾರಿಗೆ ನಾನು ಕಾಲೇಜಿನಿಂದ ಹಾಸ್ಟೇಲ್ಗೆ ನಂಧಿ ನಗರ, ಗವಿಶ್ರೀ ನಗರದ ಮುಖಾಂತರ ನಮ್ಮ ಹಾಸ್ಟೇಲ್ಗೆ ಬರುತ್ತಿದ್ದಾಗ ಹೊಸದಾಗಿ ನಿರ್ಮಿಸಿರುವ ಡಾಲರ್ಸ್ ಕಾಲೋನಿ ಆಕಡೆ ಸೂರ್ಯ ಕಾಂತಿ ಬೆಳೆದಿರುವ ಹೊಲದ ಹತ್ತಿರ ಸುಮಾರು 10-00 ಗಂಟೆಯ ಸುಮಾರಿಗೆ ನಡೆದುಕೊಂಡು ಬರುತ್ತಿದ್ದಾಗ, ಹಿಂದಿನಿಂದ ಒಂದು ಪ್ಲಾಟೀನಾ ದ್ವಿ-ಚಕ್ರ ವಾಹನದಲ್ಲಿ ಇಬ್ಬರು ಅಪರಿಚಿತರು ಬಂದು ನನ್ನ ಹತ್ತಿರ ಮೋಟಾರ ಸೈಕಲ್ ನಿಲ್ಲಿಸಿ ನನಗೆ ಒಂದು ಹಾಳಿ ಕೊಡು ಪೋನ್ ನಂಬರ ಬರೆದುಕೊಳ್ಳಬೇಕು ಅಂತಾ ಹೇಳಿದರು, ಆಗ ನಾನು ಅವರಿಗೆ ನನ್ನ ನೋಟ ಬುಕ್ನ್ನು ಕೊಟ್ಟೇನು. ಆಗ ಅವರಲ್ಲಿ ಹಿಂದೆ ಕುಳಿತವನು ನೋಟ ಬುಕ್ ತೆಗೆದುಕೊಂಡು ಏನೋ ಬರೆಯುತ್ತಿದ್ದನು, ಆಗ ಮುಂದೆ ಕುಳಿತವನು ನನ್ನ ಕೊರಳಿಗೆ ಕೈ ಹಾಕಿ ನನ್ನ ಕೊರಳಲ್ಲಿದ್ದ ರೋಡ್ ಗೋಲ್ಡ್ ಸರವನ್ನು ಬಲವಂತವಾಗಿ ಕಿತ್ತುಕೊಳ್ಳಲು ಮುಂದಾದನು ಆಗ ನಾನು ಆತನಿಂದ ನಾನು ಬಿಡಿಸಿಕೊಳ್ಳಲು ಯತ್ನಿಸಿದೆನು. ಆಗ ಮುಂದೆ ಕುಳಿತಿರುವನು ನನ್ನ ಕೊರಳಲ್ಲಿದ್ದ ಸರವನ್ನು ಬಲವಂತವಾಗಿ ಕಿತ್ತುಕೊಂಡನು ಆಗ ನನ್ನ ಕೊರಳಿಗೆ ತೆರೆಚಿದ ಗಾಯವಾಗಿದ್ದು ಇರುತ್ತದೆ. ಆಗ ಹಿಂದೆ ಕುಳಿತಿದ್ದವನು ನನ್ನ ನೋಟ್ ಬುಕ್ನ್ನು ಬೀಸಾಕಿ ನನ್ನ ಮುಂದುಗಡೆಯಿಂದ ಹೋದನು. ಅಂತಾ ಹೇಳಿದಳು. ಆಗ ನಾನು ಭಾರತಿಗೆ ಆ ವ್ಯಕ್ತಿಗಳು ಯಾರು ಮತ್ತು ಹೇಗಿದ್ದರು ಅಂತಾ ಕೇಳಿದಾಗ ಆಕೆಯು ಅವರು ಯಾರೂ ಅಂತಾ ಗೋತ್ತಿಲ್ಲಾ ಆದರೆ ಹಿಂದೆ ಕುಳಿತಿದ್ದವನು ಈ ಹಿಂದೆ ನನಗೆ ಆಗಾಗ್ಗೆ ನಾವು ಕಾಲೇಜ್ಗೆ ಹೋಗಿ ಬರುವ ರಸ್ತೆಯಲ್ಲಿ ಚುಡಾಯಿಸುತ್ತಿದ್ದನು. ಅಂತಾ ಹೇಳಿದಳು. ಮೋಟಾರ ಸೈಕಲ್ನಲ್ಲಿ ಮುಂದೆ ಕುಳಿತವನು ಅಂದಾಜು 32 ವಯಸ್ಸು ಮತ್ತು ಹಿಂದೆ ಕುಳಿತಿದ್ದವನು ಅಂದಾಜು 25 ವಯಸ್ಸು ಇರಬಹುದು ಅಂತಾ ಹೇಳಿದಳು. ಕಾರಣ ಮಾನ್ಯರವರು ಕುಮಾರಿ ಭಾರತಿಯ ಕೊರಳಲ್ಲಿದ್ದ ರೋಲ್ಡ್ ಗೋಲ್ಡ್ ಸರ ಅಂ.ಕಿ.ರೂ 200=00 ಬೆಲೆ ಬಾಳುವುದನ್ನು ಬಲವಂತವಾಗಿ ಕಿತ್ತುಕೊಂಡು ಹೋದವರನ್ನು ಪತ್ತೇ ಮಾಡಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2]  ಕುಕನೂರ ಪೊಲೀಸ್  ಠಾಣೆ  ಗುನ್ನೆ ನಂ: 177/2017 ಕಲಂ. 78(3) Karnataka Police Act:.
ದಿನಾಂಕ:28-11-2017 ರಂದು ರಾತ್ರಿ 8-30 ಗಂಟೆಗೆ ತಳಕಲ್ ಗ್ರಾಮದಲ್ಲಿಯ ಅಂಬೇಡ್ಕರ್ ಸರ್ಕಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ಮಾರ್ತಾಂಡಪ್ಪ ತಂದೆ ಫಕೀರಪ್ಪ ತಾಯಮ್ಮನವರ್, ವಯಾ 55 ವರ್ಷ, ಜಾ:ಮಾದಿಗ, ಸಾ:ತಳಕಲ್, 2] ಮುತ್ತಣ್ಣ ತಂದೆ ದುರುಗಪ್ಪ ವಡ್ಡರ, ವಯಾ 35 ವರ್ಷ, ಜಾ:ವಡ್ಡರ, ಉ:ಕೂಲಿ, ಸಾ:ವೀರಾಪೂರ, ಇವರು ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ಪಿ.ಎಸ್.ಐ ಕೂಕನೂರ ಹಾಗೂ ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು, ಸದರಿ ಆರೋಪಿತರಿಂದ 1500/-ರೂ, ನಗದು ಹಣ ಹಾಗೂ ಮಟಕಾ ಜೂಜಾಟದ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡಿದ್ದು ಸದರಿ ಆರೋಪಿತರು ತಾವು ಬರೆದುಕೊಂಡ ಓ.ಸಿ. ಪಟ್ಟಿ & ಜೂಜಾಟದ ಹಣವನ್ನು ತಾವೇ ಇಟ್ಟುಕೊಳ್ಳುವ ಬಗ್ಗೆ ಒಪ್ಪಿಕೊಂಡಿದ್ದು ಈ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3]  ಬೇವೂರು ಪೊಲೀಸ್  ಠಾಣೆ  ಗುನ್ನೆ ನಂ: 152/2017 ಕಲಂ. 279, 337, 338 ಐಪಿಸಿ
ದಿನಾಂಕ: 28-11-2017 ರಂದು  ಮಧ್ಯಾಹ್ನ 1:45 ಗಂಟೆ ಸುಮಾರಿಗೆ ಕೊಪ್ಪಳ-ಕುಷ್ಟಗಿ ರಸ್ತೆಯ ಮೇಲೆ ನೆಲಜೇರಿ ಸೀಮಾದಲ್ಲಿ ಶಿವಣ್ಣ ಡೊಳ್ಳಿನ ಇವರ ಹೊಲದ ಹತ್ತಿರ ಆರೋಪಿ ಶರಣಪ್ಪ ತಂದೆ ಬಾಲಪ್ಪ ಚೌಡಕಿ ಇತನು ಕಾರ ನಂ: ಏಂ-37/ಒ-8865 ನೇದ್ದನ್ನು ಕೊಪ್ಪಳ ಕಡೆಯಿಂದ ಕುಷ್ಟಗಿ ಕಡೆಗೆ ಅತೀ ಜೋರಾಗಿ ಹಾಗೂ ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಎಡಮಗ್ಗಲು ಇರುವ ಬೇವಿನ ಗಿಡದ ಬಡ್ಡಿಗೆ ಜೋರಾಗಿ ಠಕ್ಕರ್ ಕೊಟ್ಟು ಅಪಘಾತಪಡಿಸಿದ್ದರಿಂದ ಸದರಿ ಆರೋಪಿತನಿಗೆ ಸಾದಾ ಮತ್ತು ಭಾರಿ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಫಿರ್ಯಾಧಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
4]  ಕಾರಟಗಿ ಪೊಲೀಸ್  ಠಾಣೆ  ಗುನ್ನೆ ನಂ: 178/2017 ಕಲಂ. 420  ಐಪಿಸಿ
ದಿನಾಂಕ 28-11-2017 ರಂದು ರಾತ್ರಿ 8-20 ಗಂಟೆಗೆ ಪಿರ್ಯಾದಿದಾರರಾದ N. ರಾಮಕೃಷ್ಣಾ ತಂದೆ ಪಾಪರಾವ್ ವಯಾ-40ವರ್ಷ ಜಾ.ಕಮ್ಮಾ ಉ-ಒಕ್ಕಲುತನ ಸಾ.ಹೊಸಜೂರಟಗಿ ಕ್ಯಾಂಪ್ ರವರು ಠಾಣೆಗೆ ಹಾಜರಾಗಿ ದೂರು ನೀಡಿದ್ದು ಸದ್ರಿ ದೂರಿನಲ್ಲಿ ನಾನು ನನ್ನ ವ್ಯವಹಾರದ ಸಲುವಾಗಿ ಕಳೆದ 5-6 ವರ್ಷಗಳ ಹಿಂದೆಯೆ ಮರ್ಲಾನಹಳ್ಳಿಯ Axis Bank ನಲ್ಲಿ A/c no 910010019121465 ಅಂತಾ ಖಾತೆಯನ್ನು ಹೊಂದಿದ್ದು ಇರುತ್ತದೆ ನಾನು ಖಾತೆಯನ್ನು ಹೊಂದಿದಾಗಿನಿಂದ ಇದೇ ಬ್ಯಾಂಕಿನಲ್ಲಿ ನನ್ನ ವ್ಯವಸಾಯದಿಂದ ಬರುವ ಆಧಾಯದ ವ್ಯವಹಾರವನ್ನು ಮಾಡುತ್ತಾ ಬಂದಿದ್ದು ಬ್ಯಾಂಕಿನಲ್ಲಿ ಲಕ್ಷಾನುಗಟ್ಟಲೆ ಹಣವನ್ನು ಸದ್ರಿ ನನ್ನ ಉಳಿತಾಯ ಖಾತೆಯಲ್ಲೆ ಬಿಟ್ಟಿರುತ್ತಿದ್ದೇನೆ. ಅದೇ ರೀತಿ ನನ್ನ ಖಾತೆಯಲ್ಲಿ ದಿನಾಂಕ :- 10-10-2017 ರಂದು ನನ್ನ ಖಾತೆಯಲ್ಲಿ ರೂ. 1,57,725=74 ಗಳು ಇದ್ದವು ತದ ನಂತರ ದಿನಾಂಕ :-11-10-2017 ರಂದು ಸದ್ರಿ ನನ್ನ ಖಾತೆಗೆ ನನ್ನ ಭತ್ತವನ್ನು ಶ್ರಿ ಸಿದ್ದಲಿಂಗೇಶ್ವರ ಕಾರ್ಪೂರೇಷನ್ ರವರಿಗೆ ಮಾರಾಟ ಮಾಡಿದ್ದ ರೂ. 2,00,000=00 ಗಳು ನನ್ನ ಖಾತೆಗೆ ಜಮಾ ಆಗಿತ್ತು ಆಗ ನನ್ನ ಖಾತೆಯಲ್ಲಿ ಒಟ್ಟು ರೂ. 3,57725=74 ಇರುವ ಬಗ್ಗೆ ಎಸ್.ಎಮ್.ಎಸ್ ಬಂದಿತ್ತು ನಂತರ ದಿನಾಂಕ :-23-10-2017 ರಂದು ನಾನು ರೂ.100000=00 ಡ್ರಾ ಮಾಡಿಕೊಂಡು ಬ್ಯಾಲೇನ್ಸ್ ಮಾಹಿತಿ ನನ್ನ ಮೋಬೈಲ್ ನಂಬರ್ 9731453080 ನೆದ್ದಕ್ಕೆ ನಾನು ಮನೆಗೆ ಬಂದ ನಂತರ ಎಸ್.ಎಮ್.ಎಸ್ ಬಂದಾಗ ನನ್ನ ಖಾತೆಯಲ್ಲಿ ಭಾಕಿ ಹಣ ರೂ. 1,06304=00 ಗಳು ಅಂತಾ ತೋರಿಸಿದ್ದರಿಂದ ನನ್ನ ಖಾತೆಯಲ್ಲಿ ಕಡಿಮೆ ಭಾಕಿ ತೋರಿಸಿದ್ದರಿಂದ ನನಗೆ ಗಾಬರಿಯಾಗಿ ನನ್ನ ಮಾವನಾದ ಗಣೇಶ ತಂದೆ ರಾಮರಾವ್ ರವರಿಗೆ ವಿಷಯ ತಿಳಿಸಿ ಅವತ್ತು ನಾನು ನಮ್ಮ ಮಾವ ಮರ್ಲಾನಹಳ್ಳಿ Axis Bank ಗೆ ನನ್ನ ಪಾಸ ಬುಕ್ ತೆಗೆದುಕೊಂಡು ಹೋಗಿ ಮ್ಯಾನೇಜರ್ ಗೆ ವಿಚಾರಿಸಿ ಪಾಸ್ ಬುಕ್ಕಿನಲ್ಲಿ ಎಂಟ್ರಿ ಮಾಡಿಸಿದಾಗ ನಮಗೆ ಗೊತ್ತಾಗಿದ್ದೆಂದರೆ ದಿನಾಂಕ-11-10-2017 ರಂದು ನಮ್ಮ ಭತ್ತದ ಹಣ ಜಮ ಆದ ನಂತರ ಅವತ್ತೆ ರೂ.1,50,017=70 ಗಳನ್ನು ಯಾವುದೋ ಅಪರಿಚಿತ ವ್ಯಕ್ತಿಯ ಬ್ಯಾಂಫ್ ಖಾತೆಯ ನಂ 36545017452 ಎಂಬ ಖಾತೆಗೆ ಮೋಬೈಲ್ ಬ್ಯಾಂಕಿಂಗ್ ಮೂಖಾಂತರ ವರ್ಗಾವಣೆಯಾಗಿರುವ ಬಗ್ಗೆ ಬ್ಯಾಂಫ್ ಮ್ಯಾನೇಜರ್ ತಿಳಿಸಿದರು. ನಾನು ನನ್ನ ಮೋಬೈಲ್ ನಲ್ಲಿ ಯಾವುದೇ ಇಂಟರ್ ನೆಟ್ ಬಳಕೆ ಮಾಡುವುದಿಲ್ಲಾ ಅಂತಾ ಹೇಳಿದರೆ ಬ್ಯಾಂಫ್ ಮ್ಯಾನೇಜರ್ ನಮಗೆ ಏನು ಗೊತ್ತಿಲ್ಲಾ ನಿಮ್ಮ ಖಾತೆಯಿಂದ 36545017452 ಖಾತೆಗೆ ಹಣ ವರ್ಗಾವಣೆಯಾಗಿರುತ್ತದೆ ಅಂತಾ ಇದು ಎಸ್.ಬಿ.ಐ ಬ್ಯಾಂಫ್ ಖಾತೆ ಇದೆ ನಾವು ನೋಡಿ ಆ ಮೇಲೆ ಹೇಳುತ್ತೇನೆ. ಅಂತಾ ತಿಳಿಸಿದರು. ನಾವು ಸದ್ರಿ ಮರ್ಲಾನಹಳ್ಳಿ Axis Bank ಗೆ ದಿನಾಂಕ-26-10-2017 ರಂದು ಮತ್ತು 31-10-2017 ರಂದು ಎರಡು ಸಲ ಕಂಪ್ಲೆಂಟ್ ಕೊಟ್ಟಿರುತ್ತೇನೆ. ಆದಾಗ್ಯೂ ಬ್ಯಾಂಕಿನವರು ವರ್ಗಾವಣೆಯಾಗಿರುವ ನನ್ನ ಹಣದ ಬಗ್ಗೆ ಯಾವುದೇ ಮಾಹಿತಿ ಕೊಡದೇ ಬೇಜವಬ್ದಾರಿ ರೀತಿಯಲ್ಲಿ ಮಾತನಾಡುತ್ತಿದ್ದರು ನಂತರ ನನಗೆ ಹೃದಯ ಖಾಯಿಲೆಗೆ ತುತ್ತಾಗಿದ್ದರಿಂದ ನಾನು ಚಿಕಿತ್ಸೆ ಕುರಿತು ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಿಸಿಕೊಳ್ಳುವ ಸಲುವಾಗಿ ಬೆಂಗಳೂರಿಗೆ ಹೋಗಿದ್ದೆನೆ ನಂತರ ಚಿಕಿತ್ಸೆ ಮುಗಿದ ನಂತರ ನಾನು ಚಿಕಿತ್ಸೆ ಮುಗಿಸಿಕೊಂಡು ದಿನಾಂಕ-19-11-2017 ರಂದು ವಾಪಸ ನಮ್ಮೂರಿಗೆ ಬಂದೇನು. ನನಗೆ ಚಿಕಿತ್ಸೆ ಮಾಡಿಸಿಕೊಳ್ಳುವ ಸಲುವಾಗಿ ಹಣದ ಅವಶ್ಯವಾಗಿದ್ದರೂ ಕೂಡಾ ಬ್ಯಾಂಕಿನವರು ಇವತ್ತು ನಾಳೆ ಅಂತಾ ಕಾಲ ಮುಂದುಡುತ್ತಾ ಬಂದಿದ್ದು ಇವತ್ತಿನ ವರೆಗೂ ನನ್ನ ಹಣದ ಬಗ್ಗೆ ಯಾವುದೇ ರೀತಿಯ ಕ್ರಮ ಕೈಗೊಂಡಿರುವುದಿಲ್ಲಾ ನನಗೆ ಅನಾರೋಗ್ಯವಾಗಿದ್ದರಿಂದ ಚಿಕಿತ್ಸೆ ಮಾಡಿಸಿಕೊಂಡು ಬ್ಯಾಂಕಿನಲ್ಲಿ ವಿಚಾರಿಸಿ ಇವತ್ತು ಠಾಣೆಗೆ ಬಂದು ದೂರು ಕೊಟ್ಟಿರುತ್ತೇನೆ. ಕಾರಣ ನನ್ನ A/c no 910010019121465 ರಲ್ಲಿಯ ರೂ. 150017=70ಗಳನ್ನು ನನಗೆ ಯಾವುದೇ ಮಾಹಿತಿ ಇಲ್ಲದೇ ಮೋಬೈಲ್ ಮೂಖಾಂತರ ಇಂಟರ್ನೆಟ್ ವರ್ಗಾವಣೆ ಮಾಡಿಕೊಂಡು ಮೊಸ ಮಾಡಿರುವ A/c no 36545017452 ನೇದ್ದರ ಅಪರಿಚಿತ ವ್ಯಕ್ತಿಯನ್ನು ಪತ್ತೆ ಮಾಡಿ ಆತನ ಮೇಲೆ ಕಾನೂನು ಕ್ರಮ ಜರುಗಿಸಿ ನನ್ನ ಹಣವನ್ನು ವಾಪಾಸ ಕೊಡಿಸಲು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಅಂತಾ ಮುಂತಾಗಿದ್ದ ಫಿರ್ಯಾದಿ ಮೇಲಿಂದ  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

Tuesday, November 28, 2017

1]  ಮುನಿರಾಬಾದ  ಪೊಲೀಸ್  ಠಾಣೆ  ಗುನ್ನೆ ನಂ: 298/2017 ಕಲಂ. 279, 304(ಎ) ಐ.ಪಿ.ಸಿ:.

ದಿನಾಂಕ 27-11-2017 ರಂದು ಪಿರ್ಯಾದುದಾರರು ತಮ್ಮ ಮೂನ್ ಲೈಟ್ ಡಾಬಾದಲ್ಲಿದ್ದಾಗ ಅವರ ಡಾಬಾ ಮುಂದೆ ಹೊಸಪೇಟೆ ಕುಷ್ಟಗಿ ಎನ್.ಹೆಚ್.50 ರಸ್ತೆಯ ಮೇಲೆ ಆರೊಪಿತನು ತನ್ನ ಮೋ,ಸೈ,ನಂ,ಕೆ,ಎ,15/ಜೆ.0595 ನೇದ್ದನ್ನು ಅತೀ ವೇಗವಾಗಿ ಚಲಾಯಿಸಿಕೊಂಡು ಹೋಗುತ್ತಿದ್ದಾಗ ರಸ್ತೆಯ ಮೇಲೆ ನಾಯಿ ಅಡ್ಡ ಬಂದಿದ್ದು ಅದಕ್ಕೆ ಡಿಕ್ಕಿಕೊಟ್ಟು ಅಪಘಾತ ಮಾಡಿದ್ದರಿಂದ ಆರೋಪಿತನು ಮೋ,ಸೈ ಸಮೇತವಾಗಿ ಕೆಳಗೆ ಬಿದ್ದು ಪಿರ್ಯಾದುದಾರರು ಹೋಗಿ ನೋಡಲು ಆತನ ತಲೆಗೆ ಬಾರಿ ರಕ್ತಗಾಯವಾಗಿದ್ದರಿಂದ ಮಾತನಾಡುವ ಸ್ಥತಿಯಲ್ಲಿರಲಿಲ್ಲಾ ನಂತರ ಪಿರ್ಯಾದುದಾರರು ಆತನಿಗೆ ಅಂಬುಲೆನ್ಸನಲ್ಲಿ ಮುನಿರಾಬಾದ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಆಸ್ಪತ್ರೆಗೆ ಬರುವಷ್ಟರಲ್ಲಿ ಮೃತಪಟ್ಟಿದ್ದು ಇರುತ್ತದೆ ಎಂದು ಮುಂತಾಗಿದ್ದ ಪಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.

Monday, November 27, 2017

1]  ಕಾರಟಗಿ  ಪೊಲೀಸ್  ಠಾಣೆ  ಗುನ್ನೆ ನಂ: 276/2017 ಕಲಂ. 32, 34 ಕೆ.ಇ. ಯಾಕ್ಟ
ದಿನಾಂಕ : 26-11-2017 ರಂದು ರಾತ್ರಿ 8-45 ಗಂಟೆಗೆ ಶ್ರೀ ವೆಂಕಟೇಶ ಎ.ಎಸ್.ಐ. ಕಾರಟಗಿ ಠಾಣೆ ರವರು ಠಾಣೆಗೆ ಹಾಜರಾಗಿ, ಪಂಚನಾಮೆ, ವರದಿಯನ್ನು ಪಡಿಸಿದ್ದು, ಸದ್ರಿ ವರದಿಯ ಸಾರಾಂಶವೇನೆಂದರೆ, ದಿನಾಂಕ 26-11-2017 ರಂದು ರಾತ್ರಿ 6-45 ಗಂಟೆಗೆ ಕಾಮಗುಂಡಮ್ಮಕ್ಯಾಂಪ್ ಗ್ರಾಮದ ಆರೋಪಿ ಪ್ರಭುರಾಜ ಮುಸಾಲಿ ಈತನ ಗಿರಣಿ ಹತ್ತಿರ ಇರುವ ಡಬ್ಬಿ ಅಂಗಡಿಯಲ್ಲಿ ನಮೂದು ಮಾಡಿದ ಆರೋಪಿತನು ತನ್ನ ಮನೆಯ ಮುಂದೆ ಇರುವ ಡಬ್ಬಾ ಅಂಗಡಿಯಲ್ಲಿ ಅನಧಿಕೃತವಾಗಿ ಮದ್ಯದ ಬಾಟಲಿಗಳನ್ನು ಇಟ್ಟುಕೊಂಡು ಅಕ್ರಮವಾಗಿ ಮದ್ಯದ ಬಾಟಲಿಗಳನ್ನು ಮಾರಾಟ ಮಾಡುತ್ತಿದ್ದಾಗ ಮಾನ್ಯ ಸಿ.ಪಿ.ಐ ಸಾಹೇಬರ ಮಾರ್ಗದರ್ಶನದಲ್ಲಿ ಎ.ಎಸ್.ಐ. ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿದ್ದು, ಆರೋಪಿತನ ಡಬ್ಬಾ ಅಂಗಡಿಯಿಂದ  ಒಟ್ಟು 45 ಮದ್ಯದ ಬಾಟಲಿಗಳು ಅಂದಾಜು ಕಿಮ್ಮತ್ತು ರೂ. 1998=39 ಬೆಲೆ ಬಾಳುವುಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2]  ಗಂಗಾವತಿ ಗ್ರಾಮೀಣ ಪೊಲೀಸ್  ಠಾಣೆ  ಗುನ್ನೆ ನಂ: 353/2017  ಕಲಂ. 279, 338 ಐ.ಪಿ.ಸಿ.

ದಿನಾಂಕ: 26-11-2017 ರಂದು ಸಂಜೆ 7:00 ಗಂಟೆಗೆ ನಾನು ಮರಳಿ ಗ್ರಾಮ ಸೀಮಾದ ಬ್ರಿಡ್ಜ್ ಹತ್ತಿರ ಇರುವ ತಾಯಮ್ಮ ಗುಡಿಗೆ ನಡೆದುಕೊಂಡು ಹೋಗುತ್ತಿರುವಾಗ ಗಂಗಾವತಿ-ಸಿಂಧನೂರು ಮುಖ್ಯ ರಸ್ತೆಯಲ್ಲಿ ಸಿಂಧನೂರು ಕಡೆಯಿಂದ ಮಲ್ಲಿಕಾರ್ಜುನ ತಂದೆ ಬಸಪ್ಪ, ವಯಸ್ಸು 30 ವರ್ಷ, ಜಾತಿ: ಕುರುಬರು ಉ: ವೆಲ್ಡಿಂಗ್ ಕೆಲಸ ಸಾ: ಪ್ರಗತಿನಗರ ತಾ: ಗಂಗಾವತಿ ಈತನು ಹಿರೋಹೋಂಡಾ ಸ್ಪ್ಲೆಂಡರ್ ಪ್ಲಸ್ ಮೋಟಾರ ಸೈಕಲ್ ನಂಬರ್: ಕೆ.ಎ-36/ ಕೆ-1000 ನೇದ್ದನ್ನು ಅತೀ ಜೋರಾಗಿ ಮತ್ತು ತೀರ್ವ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ವೇಗ ನಿಯಂತ್ರಿಸಲು ಅಗದೇ ರಸ್ತೆಯ ಎಡಗಡೆ ಇದ್ದ ನನಗೆ ಹಿಂಭಾಗದಿಂದ ಟಕ್ಕರ್ ಕೊಟ್ಟು ಅಪಘಾತ ಮಾಡಿದನು. ಇದರಿಂದ ನನ್ನ ಎಡಗಾಲು ಪಾದದ ಮೇಲೆ ತೀವ್ರ ಸ್ವರೂಪದ ರಕ್ತಗಾಯವಾಗಿದ್ದು,  ಮತ್ತು ಎಡ ಮೊಣಕಾಲ ಕೆಳಗಡೆ ರಕ್ತಗಾಯವಾಯಿತು. ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.

Sunday, November 26, 2017

1]  ಕುಷ್ಟಗಿ ಪೊಲೀಸ್  ಠಾಣೆ  ಗುನ್ನೆ ನಂ: 314/2017 ಕಲಂ. 32, 34 ಕೆ.ಇ. ಯಾಕ್ಟ
ದಿನಾಂಕ: 25-11-2017 ರಂದು ಸಂಜೆ 6-00 ಗಂಟೆಗೆ ಶ್ರೀ ವಿಶ್ವನಾಥ ಹಿರೇಗೌಡ್ರ ಪಿ.ಎಸ್.ಐ. ಕುಷ್ಠಗಿ ಪೊಲೀಸ ರವರಿಗೆ ಚಳಗೇರಿ ಕ್ರಾಸ್ ಹತ್ತಿರ ಇರುವ ಚಾಲುಕ್ಯ ಡಾಬಾದ ಹತ್ತಿರ ಅನಧಿಕೃತವಾಗಿ ಯಾವುದೇ ಲೈಸನ್ಸ ವಗೈರಾ ಹೊಂದಿರದೇ ಮದ್ಯ ಮಾರಾಟ ಮಾಡುತ್ತಿದ್ದಾರೆ ಅಂತಾ ಖಚಿತ ಬಾತ್ಮೀ ಬಂದ ಮೇರೆಗೆ ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ಹೋಗಿ ರೇಡ್ ಮಾಡಿ ಒಬ್ಬ ವ್ಯಕ್ತಿಯನ್ನು ಹಾಗೂ  ಅವನಿಂದ ದೊರೆತ  180 ಎಂ.ಎಲ್. ನ ಒಟ್ಟು 36 ಒಲ್ಡ ಟವರನ್  ಮದ್ಯದ ಟೆಟ್ರಾಪ್ಯಾಕ್ ಅಂ.ಕಿ. 2468=16 ರೂ, ಮತ್ತು ನಗದು ಹಣ 345=00 ರೂ. ಗಳನ್ನು ಜಪ್ತು ಮಾಡಿಕೊಂಡು ಆರೋಪಿ ವಿರೇಶ ತಂದೆ ಬಸನಗೌಡ ಮಾಲಿಪಾಟೀಲ್, ವಯಾ 29 ವರ್ಷ, ಜಾತಿ: ಲಿಂಗಾಯತ, ಉ: ಮ್ಯಾನೇಜರ, ಸಾ: ಚಳಗೇರಿ ಇತನನ್ನು ವಶಕ್ಕೆ ತೆಗೆದುಕೊಂಡು ಬಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ. 
2]  ಕುಷ್ಟಗಿ ಪೊಲೀಸ್  ಠಾಣೆ  ಗುನ್ನೆ ನಂ: 313/2017  ಕಲಂ. 379 ಐ.ಪಿ.ಸಿ.
ದಿನಾಂಕ: 25-11-017 ರಂದು ಮದ್ಯಾಹ್ನ 2-30 ಗಂಟೆಗೆ ಪಿರ್ಯಾದಿದಾರರಾದ ಅಜೀತ್ ತಂದೆ ಸಿದ್ದನಗೌಡ ಪಾಟೀಲ ವಯಾ: 41 ವರ್ಷ ಜಾತಿ: ಹಿಂದೂ ಗಾಣಿಗೇರ ಉ: Enerfra ಕಂಪನಿಯಲ್ಲಿ ಲ್ಯಾಂಡ್ ಲೈಜನಿಂಗ್ ಸಾ: ಅತರಗಾ ತಾ: ಇಂಡಿ ಜಿ: ವಿಜಯಪೂರ ಹಾ:ವ: ಬಿ.ಬಿ ನಗರ ಕುಷ್ಟಗಿ ಇವರು ಠಾಣೆಗೆ ಹಾಜರಾಗಿ ಒಂದು ಗಣಕೀಕೃತ ಫಿರ್ಯಾದಿಯನ್ನು ಸಲ್ಲಿಸಿದ್ದು ಸಾರಾಂಶವೆನೆಂದರೆ ಫಿರ್ಯಾದಿದಾರರು ತಮ್ಮ ಕಂಪನಿಯಲ್ಲಿ ಕೆಲಸ ಮಾಡುವ ಸಂಜೀವಕುಮಾರ ಇವರ ಮೊ.ಸೈ ನೇದ್ದನ್ನು ತಾನು ಉಪಯೋಗಿಸುವ ಸಲುವಾಗಿ ಈಗ್ಗೆ 2 ವರ್ಷಗಳಿಂದ ಇಟ್ಟುಕೊಂಡಿದ್ದು ಸದರಿ ಹಿರೊ ಹೊಂಡಾ ಸ್ಲ್ಪೇಂಡರ್ ಪ್ಲಸ್  ಕಪ್ಪು ಬಣ್ಣದ  ಮೊ.ಸೈ ನಂ: ಕೆ.ಎ-28/ಎಸ್-8506 ನೇದ್ದರ ಇಂಜಿನ್ ನಂ: HA10EA89H62815 ಮತ್ತು ಚೆಸ್ಸಿ ನಂ: MBLHA10EE89H47434 ನೇದ್ದನ್ನು ತಾವು ಇರುವ ಬಸವರಾಜ ರಾಕಿ ಇವರ ಮನೆಯ ಮುಂದೆ ನಿಲ್ಲಿಸಿದ್ದನ್ನು ದಿನಾಂಕ: 25-08-2017 ರಂದು ರಾತ್ರಿ 10-00 ಗಂಟೆಯಿಂದ ದಿನಾಂಕ: 26-08-2017 ರಂದು ಬೆಳಗಿನ 6-00 ಗಂಟೆಯ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಸದರಿ ಮೊ.ಸೈ ನ್ನು ಇಲ್ಲಿಯವರೆಗೆ ಅಲ್ಲಲ್ಲಿ ಹುಡುಕಾಡಿ ಈಗ ತಡವಾಗಿ ಬಂದು ಫಿರ್ಯಾದಿ ನೀಡಿರುತ್ತೇನೆ ಅಂತಾ ಮುಂತಾಗಿ ನೀಡಿದ ಫಿರ್ಯಾದಿಯ ಸಾರಾಂಶದ ಮೇಲಿಂದ  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3]  ಕೊಪ್ಪಳ ನಗರ ಪೊಲೀಸ್  ಠಾಣೆ  ಯು.ಡಿ.ಆರ್. ನಂ. 18/2017 ಕಲಂ: 174 ಸಿ.ಆರ್.ಪಿ.ಸಿ.
ದಿನಾಂಕ: 25-11-2017 ರಂದು ಬೆಳಗ್ಗೆ 08-00 ಗಂಟೆಗೆ ಫಿರ್ಯಾದಿದಾರರಾದ ವಿರೇಶ ಕೊಪ್ಪಳ  ರವರು ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ: 24-11-2017 ರಂದು ಮುಂಜಾನೆ 10-00 ಗಂಟೆಯಿಂದ ಮಧ್ಯಾಹ್ನ 03-00 ಗಂಟೆಯ ನಡುವಿನ ಅವಧಿಲ್ಲಿ  ಕೊಪ್ಪಳ ನಗರದ ಕಿನ್ನಾಳ ರಸ್ತೆಯ ಚೆನ್ನಬಸವೇಶ್ವರ ನಗರದ ಲಕ್ಷ್ಮೀ ಗುಡಿ ಹತ್ತಿರ ಇರುವ ಬಾವಿಯಲ್ಲಿ ನನ್ನ ಮಗನಾದ ಅನೀಲಕುಮಾರ ತಂದೆ ವಿರೇಶ ಕೊಪ್ಪಳ ವ: 10 ವರ್ಷ ಈತನ ಬಾವಿಯ ದಂಡೆಯ ಮೇಲೆ ಪೀಪಿ ಬಿದ್ದದ್ದನ್ನು ತೆಗೆದುಕೊಳ್ಳಲು ಹೋಗಿ ಆಕಸ್ಮಿಕವಾಗಿ ಬಾವಿಯಲ್ಲಿ ಬಿದ್ದು ನೀರು ಕುಡಿದು ಮೃತಪಟ್ಟಿದ್ದು, ಈತನ ಸಾವಿನಲ್ಲಿ ಯಾವುದೇ ಸಂಶಯ ಇರುವುದಿಲ್ಲ.. ಇದೊಂದು ಆಕಸ್ಮಿಕವಾದ ಘಟನೆಯಾಗಿದ್ದು, ಅಂತಾ ವಗೈರೆ ನೀಡಿದ ದೂರಿನ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
4]  ಕೊಪ್ಪಳ ನಗರ ಪೊಲೀಸ್  ಠಾಣೆ  ಯು.ಡಿ.ಆರ್. ನಂ. 19/2017 ಕಲಂ: 174 ಸಿ.ಆರ್.ಪಿ.ಸಿ.

ದಿನಾಂಕ: 25-11-2017 ರಂದು ಬೆಳಗ್ಗೆ 09-15 ಗಂಟೆಗೆ ಫಿರ್ಯಾದಿದಾರರಾದ ವಿರುಪಾಕ್ಷಯ್ಯ ಹಿರೇಮಠ ರವರು ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ: 24-11-2017 ರಂದು ಮುಂಜಾನೆ 11-15 ಗಂಟೆ ಸುಮಾರಿಗೆ ಕಿನ್ನಾಳ ರಸ್ತೆ ಪ್ರಗತಿ ನಗರದಲ್ಲಿರುವ ಮನೆಯಲ್ಲಿ ಫಿರ್ಯಾದಿದಾರರಾಧ ಮಗಳಾದ ವಿನುತಾ ವ:24 ವರ್ಷ ಇವಳು ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯ ರೂಮಿನಲ್ಲಿ ವೇಲಿನಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಲು ಪ್ರಯತ್ನಿಸಿದ್ದು, ಕೂಡಲೇ ನೋಡಿದ ಅವಳ ತಾಯಿ ಹಾಗೂ ಇತರರು ಕೂಡಿಕೊಂಡು ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಿದ್ದು ನಂತರ ದಿನಾಂಕ: 25-11-2017 ರಂದು ರಾತ್ರಿ 02-30 ಗಂಟೆಗೆ ಚಿಕತ್ಸೆ ಫಲೀಸದೇ ಮೃತಪಟ್ಟಿದ್ದು ಅವಳ ಸಾವಿನಲ್ಲಿ ಯಾವುದೇ ಸಂಶಯ ಇರುವುದಿಲ್ಲ. ಮುಂದಿನ ಕ್ರಮ ಕೈಗೊಳ್ಳಿ ಅಂತಾ ನೀಡಿದ ದೂರಿನ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

Saturday, November 25, 2017

1]  ಕನಕಗಿರಿ ಪೊಲೀಸ್  ಠಾಣೆ  ಗುನ್ನೆ ನಂ: 169/2017 ಕಲಂ: 279,338, 304(ಎ) ಐ.ಪಿ.ಸಿ.
ದಿನಾಂಕ:  24/11/2017 ರಂದು  ಸಾಯಾಂಕಾಲ 06:30 ಗಂಟೆಗೆ ಫಿರ್ಯಾದಿದಾರರಾದ  ಹನುಮಂತ ತಂದೆ ದುರುಗಪ್ಪ ನಾಡದಾಳ ವಯಾ : 35 ವರ್ಷ ಜಾತ : ನಾಯಕ : ಕೂಲಿಕೆಲಸ ಸಾ : ವಡಕಿ ತಾ : ಗಂಗಾವತಿ  ರವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಬರೆದ ಫಿರ್ಯಾದಿಯನ್ನು  ನೀಡಿದ್ದು  ಸಾರಂಶ  ಕೆಳಗಿನಂತೆ ಇರುತ್ತದೆ.   ಫಿರ್ಯಾದಿ ದಾರನು ಈಗ್ಗೆ ಸುಮಾರು 7-8 ವರ್ಷಗಳ ಹಿಂದೆ ತನ್ನ  ತಂಗಿಯಾದ ಶ್ರೀಮತಿ ದುರುಗಮ್ಮ ಇವಳನ್ನು  ಸಿಂದನೂರ ತಾಲೂಕಿನ ಮ್ಯಾದರಾಳ ಗ್ರಾಮದ ಮಾನಪ್ಪ ಮ್ಯಾದರಾಳ ಬುವರೊಂದಿಗೆ ಮದುವೆ ಮಾಡಿಕೊಟ್ಟಿದ್ದು. ಇವರಿಗೆ ಇಬ್ಬರೂ ಮಕ್ಕಳಿರುತ್ತಾರೆ. ಈಗ್ಗೆ ಮೂರು ತಿಂಗಳ ಹಿಂದೆ ತನ್ನ ತಂಗಿ ದುರುಗಮ್ಮಳು ತವರು ಮನೆಗೆ ಬಂದು ನಮ್ಮ ವಡಕಿ ಗ್ರಾಅಮದಲ್ಲಿಯ ಇದ್ದಳು ನನ್ನ ಅಳಿಯನಾದ ಮಾನಪ್ಪ ಇತನು ನಿನ್ನೆ ದಿನಾಂಕ : 23/11/2017 ರಂದು ರಾತ್ರಿ 8 :00 ಗಂಟೆಗೆ ತಮ್ಮೂರಾದ ತಾವಿರುವ ಜಾಲಿ ಹಾಳ ಕ್ಯಾಂಪ್  ದಿಂದ ತನ್ನ ಹಿರೋ ಹೊಂಡ ಮೋಟರ್ ಸೈಕಲ್ ನಂ : ಕೆ.ಎ-36/ಆರ- 3372 ನೇದ್ದನ್ನು ತಗೆದುಕೊಂಡು ಫಿರ್ಯಾದಿದಾರರ ರಾದ ವಡಕಿ ಗ್ರಾಮಕ್ಕೆ  ಬಂದು ಹೆಂಡತಿ – ಮಕ್ಕಳ ಯೋಗಕ್ಷಮದ ಬಗ್ಗೆ ವಿಚಾರಿಸಿಕೊಂಡು ರಾತ್ರಿ ಇದ್ದು . ಇಂದು ದಿನಾಂಕ : 24/11/2017 ರಂದು ಬೆಳಿಗ್ಗೆ 9 :00 ಗಂಟೆಯ ಸುಮಾರಿಗೆ  ವಾಪಸ್ ತಮ್ಮೂರಿಗೆ ಹೋಗಿ ಬರುವದಾಗಿ ಹೇಳಿ ತನ್ನ ಮೋಟರ್ ಸೈಕಲ್ ತಗೆದುಕೊಂಡು ಹೋದನು. ಇಂದು ನಾನು ಮದ್ಯಾಹ್ನ 1 :00 ಗಂಟೆ ಸುಮಾರಿಗೆ  ಮನೆಯಲ್ಲಿದ್ದಾಗ  ಫಿಅರ್ಯಾದಿಯ  ಅಳಿಯಾನಾದ ಮಾನಪ್ಪ ತಂದೆ ದುರುಗಪ್ಪ ಮ್ಯಾದರಾಳ ತನು ಇತನು ನವಲಿಕಡೆಯಿಂದ ನಮ್ಮೂರ ಕಡೆಗೆ ತನ್ನ ಮೋಟರ್ ಸೈಕಲ್ ನ್ನು ಅತಿಜೋರಾಗಿ ಹಾಗೂ ಅಲಕ್ಷತನದಿಂದ  ನಡೆಸಿಕೊಂಡು ಕಂಟ್ರೂಲ್ ಮಾಡದೆ ಸ್ಕೀಡ್ ಆಗಿ ನವಲಿ ಸೀಮಾದಲ್ಲಿ ಬರುವ ಗಂಗಾಧರ ಪಟ್ಟಣ ಶೆಟ್ಟರ ಇವರ ಹೊಲದ ಹತ್ತಿರ ರಸ್ತೆಯ ಮೇಲೆ   ಮದ್ಯಾಹ್ನ 12 :15 ಗಂಟೆಯ ಸುಮಾರಿಗೆ ಮೋಟರ್ ಸೈಕಲ್ ಸ್ಕೀಡ್ ಮಾಡಿಕೊಂಡು ಬಿದ್ದು ಅಪಘಾತ ಹೊಂದಿ ತಲೆಯ ಹಾಗೂ ಮುಖದ ಎಡಭಾಗಕ್ಕೆ ಮೈ ಮೇಲೆ ಅಲ್ಲಲಿ ಭಾರಿ ಒಳಪೆಟ್ಟು ಹಾಗೂ ರಕ್ತಗಾಯವಾಗಿದ್ದು. ಇತನನ್ನು ಪಕ್ಕದ ಹೊಲದವರಾದ ಗಂಗಾಧರ ತಂದೆ ವಿರುಪಾಕ್ಷಪ್ಪ ಸಾ : ನವಲಿ & ಸುಭಾಷಚಂದ್ರ ತಂದೆ ಲಕ್ಷ್ಮನಗೌಡ ಸಾ : ಆಕಳಕುಂಪಿ ಇವರು ನೋಡಿ ಇತನಿಗೆ ನೀರುಕುಡಿಸಿ 108 ವಾಹನದಲ್ಲಿ ಹಾಕಿ ಇಲಾಜ ಕುರಿತು ಕಾರಟಗಿ  ಸರಕಾರಿ ಆಸ್ಪತ್ರೆಗೆ ಹೋಗಿ ಅಲ್ಲಿಂದ ಹೆಚ್ಚಿನ ಇಲಾಜ ಕುರಿತು ಸಿಂದನೂರ ಸರಕಾರಿ ಆಸ್ಪತ್ರೆಗೆ ಹೋಗಿದ್ದು ಅಲ್ಲಿ ನನ್ನ ಅಳಿಯನಿಗೆ ಇಲಾಜ ಫಲಿಸದೆ ತನಗಾದ  ಮೋಟರ್ ಸೈಕಲ್ ಅಪಘಾತದ ಗಾಯಗಳ ಭಾದೆ  ಇಂದು ದಿನಾಂಕ : 24/11/2017 ರಂದು ಸಾಯಾಂಕಾಲ 4 :00 ಗಂಟೆಗೆ ಆಸ್ಪತ್ರೆಯಲ್ಲಿ ಮೃತಪಟ್ಟಿರುವದಾಗಿ ಗೋತ್ತಾಯಿತು. ಕಾರಣ ನನ್ನ ಅಳಿಯನಾದ ಮಾನಪ್ಪ ತಂದೆ ದುರುಗಪ್ಪ ಮ್ಯಾದರಾಳ ವಯಾ : 35 ವರ್ಷ ಜಾತಿ : ನಾಯಕ : ಕೂಲಿಕೆಲಸ ಸಾ : ಮ್ಯಾದರಾಳ ಹಾ : ವ : ಜಾಲಿಹಾಳ ಕ್ಯಾಂಪ್ ತಾ :ಸಿಂದನೂರ  ಇತನು ನವಲಿಯಿಂದ - ವಡಕಿ ಕಡೆ ಬರುವಾಗ ತನ್ನ ಹಿರೋ ಹೊಂಡ ಮೋಟರ್ ಸೈಕಲ್ ನಂ : ಕೆ.ಎ-36/ಆರ- 3372 ನೇದ್ದನ್ನು ಅತಿವೇಗ ಹಾಗೂ ಅಲಕ್ಷತದಿಂದ ನಡೆಸಿ ಮೋಟರ್ ಸೈಕಲ್ ನಿಯಂತ್ರಣ ಸಾಧಿಸದೆ ತಾನೇ ಸ್ಕೀಡ್ ಮಾಡಿಕೊಂಡು ಭಾರಿಗಾಯಗೊಂಡು ಮೃತಪಟ್ಟಿದ್ದು .ತಾವು  ಮುಂದಿನ ಕಾನೂನು ಕ್ರಮ ಜರಗಿಸ ಬೆಕೆಂದು ಲಿಖಿತ ಫಿರ್ಯಾದಿ  ಆಧಾರದ ಮೇಲಿಂದ ಪ್ರಕರಣದಾಖಲಿಸಿ ಕೊಂಡು ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.
2]  ಯಲಬುರ್ಗಾ ಪೊಲೀಸ್  ಠಾಣೆ  ಗುನ್ನೆ ನಂ: 160/2017 ಕಲಂ: 143,147,341,323,324,504,.506 ಸಹಿತ 149 ಐ.ಪಿ.ಸಿ.
ದಿನಾಂಕ:23-11-2017 ರಂದು ರಾತ್ರಿ 8-15 ಗಂಟೆಗೆ  ಕುಷ್ಟಗಿ ಪೊಲೀಸ ಠಾಣೆಯಿಂದ  ಮೋ.ಸೈಕಲ ಅಪಘಾತವಾಗಿ ಇಲಾಜ ಕುರಿತು ಕುಷ್ಟಗಿ  ಸರ್ಕಾರಿ ಆಸ್ಪತ್ರೆಯಿಂದ  ಎಂ.ಎಲ್.ಸಿ ಬಂದಿರುವುದಾಗ ತಿಳಿಸಿದ್ದು, ಮತ್ತು ಸದರಿ ಗಾಯಾಳು ಶರಣಪ್ಪನಿಗೆ ಕೊಪ್ಪಳಕ್ಕೆ ಹೆಚ್ಚಿನ ಇಲಾಜ ಕುರಿತು ಕಳುಹಿಸಿದ ನಂತರ ತಿಳಿಸಿದ್ದು , ಆ ವೇಳೆಯಲ್ಲಿ ಬಸ್ಸಿನ ಸೌಕರ್ಯ ಇರಲಾರದಿದ್ದರಿಂದ ಇಂದು ದಿನಾಂಕ; 24-11-2017 ರಂದು ಬೆಳಿಗ್ಗೆ 7-30 ಗಂಟೆಗೆ  ಯಲಬುರ್ಗಾದಿಂದ ಕೊಪ್ಪಳಕ್ಕೆ ಹೊರಟು  ಬೆಳಿಗ್ಗೆ 9-30 ಗಂಟೆಗ ಕೊಪ್ಪಳ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಇಲಾಜ ಪಡೆಯುತ್ತಿದ್ದ ಶರಣಪ್ಪನಿಗೆ ವಿಚಾರ ಮಾಡಿ ಹೇಳಿಕೆಯನ್ನು ಪಡೆದುಕೊಂಡಿದ್ದು, ಸದರಿಯವನು ತನ್ನ ಹೇಳಿಕೆಯಲ್ಲಿ ತಮಗೂ ಮತ್ತು ಆರೋಪಿತರ ನಡುವೆ ಬಂಡಿ ಹೋಗುವ ರಸ್ತೆಯ ಸಂಬಂಧ ತಿರುಗಾಡುವ ವಿಷಯದಲ್ಲಿ ಆಗಾಗ ಇಬ್ಬರ ನಡುವೆ ಜಗಳವಾಗುತ್ತಿತ್ತು.  ಇದೇ ವಿಷಯವಾಗಿ ಆರೋಪಿತರಿಗೂ ಮತ್ತು ತಮಗೂ ದ್ವೇಷ ಇರುತ್ತದೆ. ಇದೇ ವೈಷಮ್ಯದಿಂದ ನಿನ್ನೆ ದಿನಾಂಕ: 23-11-2017 ರಂದು ಸಂಜೆ 5-00 ಗಂಟೆಯ ಸುಮಾರಿಗೆ ಪಿರ್ಯಾದಿದಾರ ಮತ್ತು ಆತನ ಸ್ನೇಹಿತ ಹನಮಂತಪ್ಪ ತಂದೆ ಪರಪಸ್ಪ ಸುದ್ದಿ ಕೂಡಿ ತಮ್ಮ ಹೊಲ ನೋಡುವ ಕುರಿತು ಆರೋಪಿತರ ಹೊಲದಲ್ಲಿ ಹಾದು ಹೋಗುತ್ತಿದ್ದಾಗ ಸದರಿ ಆರೋಪಿತರ ಪೈಕಿ ಬಸಮ್ಮ ಗಂಡ ಸಿದ್ದಪ್ಪ ಹವಾಲ್ದಾರ  ಈಕೆಯು ತನಿಗೆ ತಡೆದು ನಿಲ್ಲಿಸಿ ಅವಾಚ್ಯ ಶಬ್ಬದಗಳಿಂದ ಬೈಯ್ದು ಜಗಳ ತೆಗೆದಿದ್ದು, ಅಲ್ಲಿಯೇ ಇದ್ದ ಉಳಿದ ಆರೋಪಿತರು ಸಹ ಬಂದು ಫೀರ್ಯಾದಿದಾರರಿಗೆ ತಡೆದು ನಿಲ್ಲಿಸಿ ಲೇ ಬೋಸುಡಿ ಮಗನೇ ನಮ್ಮ ಹೊಲದಲ್ಲಿ ತಿರುಗಾಡಬೇಡ ಅಂತಾ ಹೇಳಿದರೂ ಸಹ ನೀನು ಕೇಳುವುದಿಲ್ಲ. ಎನಲೇ ಸೂಳೆ ಮಗನೇ ಅಂತಾ ಅವಾಚ್ಯ ಶಬ್ಬದಗಳಿಂದ ಬೈಯ್ದು ಎಲ್ಲರೂ ಕೈಗಳಿಂದ ಹೊಡೆ-ಬಡಿ ಮಾಡಿದ್ದು, ಆರೋಪಿ ನಾಗರಾಜನು ಬಡಿಗೆಯಿಂದ ತಲೆಗೆ ಜೋರಾಗಿ  ಹೊಡೆದು ರಕ್ತಗಾಯ ಪಡಿಸಿದ್ದು ಅಲ್ಲದೇ ಆರೋಪಿತರು ಲೇ ಸೂಳೆ ಮಗನೇ ಇನ್ನೊಮ್ಮೆ ಇಲ್ಲಿ ತಿರುಗಾಡಿದರೇ ನಿನಗೆ ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವದ ಭಯಹಾಕಿದ್ದು ಅದೇ, ತಾನು ಅರೇ ಪ್ರಜ್ಞಾವಸ್ಥೆಯಲ್ಲಿ ಇರುವದರಿಂದ ಕುಷ್ಟಗಿ ಮತ್ತು ಕೊಪ್ಪಳದ ಆಸ್ಪತ್ರೆಯಲ್ಲಿ ತಾನು  ವೈದ್ಯಾಧಿಕಾರಿಗಳ ಮುಂದೆ ರಸ್ತೆ ಅಪಘಾತವಾಗಿ ತನಿಗೆ ಗಾಯವಾಗಿರುತ್ತದೆ ಅಂತಾ ಹೇಳಿರುವೇನು ಆದರೆ ತನಿಗೆ ಆರೋಪಿತರು  ಹೊಡೆ –ಬಡಿ ಮಾಡಿ ರಕ್ತಗಾಯಪಡಿಸಿದ್ದು ಅದೇ ಅಂತಾ ಮುಂತಾಗಿ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣಾ  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.  
3]  ಯಲಬುರ್ಗಾ ಪೊಲೀಸ್  ಠಾಣೆ  ಗುನ್ನೆ ನಂ: 161/2017 ಕಲಂ: 447, 504, 323, 354, 324, 341, 506 ಸಹಿತ 34 ಐ.ಪಿ.ಸಿ.
ದಿನಾಂಕ: 24-11-2017 ರಂದು ರಾತ್ರಿ 9-00 ಗಂಟೆಗೆ ಫಿರ್ಯಾದಿ ಬಸಮ್ಮ ಗಂಡ ಸಿದ್ಧಪ್ಪ ಹವಾಲ್ದಾರ,  ವಯ: 58 ವರ್ಷ ಜಾ: ಲಿಂಗಾಯತ ಉ: ಹೊಲಮನೆಕೆಲಸ ಸಾ: ಬಂಡಿ  ತಾ: ಯಲಬುರ್ಗಾ ಇವರು ಠಾಣೆಗೆ ಹಾಜರಾಗಿ ಒಂದು ಲಿಖಿತ ಫಿರ್ಯಾದಿಯನ್ನು ಹಾಜರು ಪಡಿಸಿದ್ದು, ಸದರಿ ಪಿರ್ಯಾದಿಯನ್ನು ಪಡೆದುಕೊಂಡು ಪರಿಶೀಲನೆ ಮಾಡಿನೋಡಲು, ಸದರಿ ಫಿರ್ಯಾದಿಯ ಸಾರಾಂಶವೇನೆಂದರೆ, ಈಗ್ಗೆ ಸುಮಾರು ದಿನಗಳಿಂದ ಫಿರ್ಯಾದಿದಾರರ ಹೊಲದಲ್ಲಿ ಆರೋಪಿ ನಂ: 01 ಈತನು ದಾರಿ ಇಲ್ಲದಿದ್ದರೂ, ಅವರ ಹೊಲದಲ್ಲಿ ಅಡ್ಡಾಡುತ್ತಿದ್ದು, ತಮ್ಮ ಹೊಲದಲ್ಲಿ ಅಡ್ಡಾಡ ಬೇಡಿರೀ, ಅಂತಾ ಫಿರ್ಯಾದಿದಾರರು ಆರೋಪಿತನಿಗೆ ತಿಳಿಸಿದ್ದು, ಈ ವಿಷಯವಾಗಿ ಫಿರ್ಯಾದಿದಾರರಿಗೆ ಹಾಗೂ ಆರೋಪಿತರಿಗೂ ಆಗಾಗ್ಗೆ ಜಗಳವಾಗಿದ್ದು, ಈ ಬಗ್ಗೆ ಆರೋಪಿತನು ಫಿರ್ಯಾದಿದಾರರ ಮೇಲೆ ಸಿಟ್ಟಾಗಿದ್ದು ಇರುತ್ತದೆ. ಇದೇ ವಿಷಯವಾಗಿ ದಿನಾಂಕ: 24-11-2017 ರಂದು ಸಂಜೆ 5-00 ಗಂಟೆಗೆ ಫಿರ್ಯಾದಿದಾರರು ಹಾಗೂ ಅವರ ಮಗನಾದ ಚಂದ್ರಶೇಖರ ಇಬ್ಬರು ಕೂಡಿಕೊಂಡು ತಮ್ಮ ಹೊಲದಲ್ಲಿ ಮೆಕ್ಕೆಜೋಳದ ರಾಶಿ ಮಾಡುತ್ತಿದ್ದಾಗ, ಆರೋಪಿತರಿಬ್ಬರೂ ಕೂಡಿಕೊಂಡು ಫಿರ್ಯಾದಿದಾರರ ಹೊಲದಲ್ಲಿ ಅತೀಕ್ರಮ ಪ್ರವೇಶ ಮಾಡಿ, ಫಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಹಾಗೂ ಕಟ್ಟಿಗೆಯಿಂದ ಮೈಕೈಗೆ ಹೊಡೆ ಬಡೆ ಮಾಡಿ, ಮೈ ಕೈ ಮುಟ್ಟಿ, ತಲೆ ಕೂದಲು, ಸೀರೆ ಹಿಡಿದು ಎಳೆದಾಡಿ, ಅವಮಾನ ಮಾಡಿದ್ದು, ಅಲ್ಲದೇ ಚಂದ್ರಶೇಖರನಿಗೂ ಸಹ ಮುಂದೆ ಹೋಗದಂತೆ ಹಿಡಿದುಕೊಂಡು ಕೈಯಿಂದ ಹೊಡೆ ಬಡೆ ಮಾಡಿ, ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಕಾರಣ ತಮಗೆ ಹೊಡೆ ಬಡೆ ಮಾಡಿದವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
4]  ಕಾರಟಗಿ ಪೊಲೀಸ್  ಠಾಣೆ  ಗುನ್ನೆ ನಂ.275/2017 ಕಲಂ 363 ಐಪಿಸಿ.
ದಿನಾಂಕ:-24-11-2017 ರಂದು ರಾತ್ರಿ 7-10 ಗಂಟೆಗ ಫಿರ್ಯಾದಿದಾರ ಶ್ರೀನಿವಾಸ ತಂದೆ ಯಂಕೋಬಣ್ಣ ಉಪ್ಪಾರ ವಯ 42 ವರ್ಷ ಜಾತಿ ಉಪ್ಪಾರ  ಸಾ. ಹಗೇದಾಳ ತಾ. ಗಂಗಾವತಿ ಇವರು ಠಾಣೆಗೆ ಹಾಜರಾಗಿ ತಮ್ಮದೊಂದು ಲಿಖಿತ ದೂರನ್ನು ಕೊಟ್ಟಿದ್ದು  ಅದರ ಸಾರಾಂಶವೇನೆಂದರೆ, ನನಗೆ ಮೂರು ಜನ ಗಂಡು ಮಕ್ಕಳಿದ್ದು, ಅದರಲ್ಲಿ ನನ್ನ ಹಿರಿಯ ಮಗ ಅರವಿಂದ್ ವಯ 21 ವರ್ಷ, 2 ನೇ ಮಗ ಆನಂದ ವಯ 18 ವರ್ಷ ಹಾಗೂ ಕೊನೆಯ ಮಗ ಸತೀಶ @ ಸತ್ಯನಾರಾಯಣ ವಯ 16 ವರ್ಷ ಅಂತಾ ಇದ್ದು ಕೊನೆಯ ಮಗನಾದ ಸತೀಶ್ @ ಸತ್ಯನಾರಾಯಣ ಈತನು  5 ನೇ ತರಗತಿಯಿಂದ ದೇವದುರ್ಗಾ ತಾಲೂಕಿನ ಅಲಕೋಡಾ ಗ್ರಾಮದಲ್ಲಿರುವ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಈಗ 10 ನೇ ತರಗತಿಯಲ್ಲಿ ಓದುತ್ತಿರುತ್ತಾನೆ. ನನ್ನ ಮಗನು ದಸರಾ ರಜೆ ನಿಮಿತ್ಯ ನಮ್ಮ ಸ್ವಂತ ಊರಾದ ಹಗೇದಾಳ ಗ್ರಾಮಕ್ಕೆ ಬಂದಿದ್ದು, ರಜೆಯ ಅವಧಿಯಲ್ಲಿ ಮನೆಯಲ್ಲಿದ್ದನು. ನಂತರ ಮತ್ತೆ ಶಾಲೆ ಪ್ರಾರಂಭವಾಗಿದ್ದರಿಂದ ದಿನಾಂಕ 06-11-2017 ರಂದು ಬೆಳಿಗ್ಗೆ 10-00 ಗಂಟೆಗೆ ತಾನು ವಸತಿ ಶಾಲೆಗೆ ಹೋಗುವುದಾಗಿ ಲಗೇಜ್ ಸಮೇತ ಮನೆಯಿಂದ ಹೋಗಿದ್ದನು. ಇದಾದ ನಂತರ ನಾವು ಹಾಸ್ಟೇಲ್ ದಲ್ಲಿದ್ದಾನೆಂದು ಸುಮ್ಮನಾಗಿದ್ದೆವು. ಆದರೆ ದಿನಾಂಕ 19-11-2017 ರಂದು ವಸತಿ ಶಾಲೆಯಿಂದ ಶಿಕ್ಷಕರು ಫೋನ್ ಮಾಡಿ ರಜೆಗೆ ಹೋಗಿರುವ ನಿಮ್ಮ ಮಗ ವಾಪಸ್ ಶಾಲೆಗೆ ಬಮದಿರುವುದಿಲ್ಲವೆಂದು ತಿಳಿಸಿದರು. ಆಗ ನಾವುಗಳು ಆತನು ಓದುವ ಶಾಲೆಯ ಬಳಿ, ನಮ್ಮ ಸಂಬಂಧಿಕರ ಊರುಗಳಾದ ಯರಡೋಣಾ, ಸಿಂಧನೂರ, ಜಂಗಮರ ಕಲ್ಗುಡಿ ಮುಂತಾದ ಕಡೆಗಳಲ್ಲಿ ವಿಚಾರಣೆ ಮಾಡಿ ಹುಡುಕಾಟ ಮಾಡಲಾಗಿ ಎಲ್ಲಿಯೂ ಪತ್ತೆ ಆಗಿರುವುದಿಲ್ಲ ಕಾಣೆಯಾಗಿರುವ ನನ್ನ ಮಗನ  ಚಹರೆ ಪಟ್ಟಿ ಈ ಕೆಳಗಿನಂತೆ ಇರುತ್ತದೆ. ದುಂಡು ಮುಖ, ಗೋದಿ ಮೈ ಬಣ್ಣ, ಸಾಧಾರಣ ಮೈ ಕಟ್ಟು, ತಲೆಯಲ್ಲಿ ಕಪ್ಪು ಕೂದಲು ಇದ್ದು, 10 ನೇ ತರಗತಿಯಲ್ಲಿ ಓದುತ್ತಿರುತ್ತಾನೆ.  ಕನ್ನಡ ಬಾಷೆ ಮಾಡನಾಡುವವನಿದ್ದು, ಮನೆಯಿಂದ ಹೋಗುವಾಗ ನೀಲಿ ಬಣ್ಣದ ತುಂಬಾ ತೋಳಿನ ಶರ್ಟ, ನೀಲಿ ಜೀನ್ಸ್ ಪ್ಯಾಂಟ್ ಧರಿಸಿದ್ದಾನೆ ಕಾರಣ ಮೇಲ್ಕಂಡ ಚಹರೆ ಪಟ್ಟಿಯುಳ್ಳ ಕಾಣೆಯಾಗಿರುವ ನನ್ನ ಮಗನನ್ನು ಪತ್ತೆ ಮಾಡಿಕೊಡಬೇಕೆಂದು ಈಗ ಠಾಣೆಗೆ ಬಂದು ಫೀರ್ಯಾಧಿ ನೀಡಿದ್ದು, ಅದರ ಸಾರಾಂಶದಲ್ಲಿ ಕಾಣೆಯಾಗಿರುವ ಹುಡುಗ ಅಪ್ರಾಪ್ತನಿರುವುದರಿಂದ  ಅಪಹರಣ ಪ್ರಕರಣ ಅಂತಾ ಪರಿಗಣಿಸಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ  ಕೈಗೊಂಡಿದ್ದು ಇರುತ್ತದೆ.
5]  ಗಂಗಾವತಿ ನಗರ ಪೊಲೀಸ್  ಠಾಣೆ  ಗುನ್ನೆ ನಂ.293/2017 ಕಲಂ 78 (3) ಕೆ.ಪಿ.ಆ್ಯಕ್ಟ್.
ದಿನಾಂಕ 24-11-2017 ರಂದು 11-45 ಗಂಟೆಗೆ ಆರೋಪಿ ಹನುಮಂತ ತಂದೆ ದುರುಗಪ್ಪ ಜೇಕಿನ್ ಸಾ: ಹೆಚ್.ಆರ್ ಎಸ್. ಕಾಲೋನಿ ಗಂಗಾವತಿ. ಇವನು ಗಂಗಾವತಿಯ ಹಿರೇಜಂತಕಲ್ ಪೋಸ್ಟ್ ಆಫೀಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು 1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಸಾರ್ವಜನಿಕರನ್ನು ಕರೆದು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟ್ಕಾ ಚೀಟಿಯನ್ನು ಬರೆದುಕೊಡುತ್ತಾ ಮಟಕಾ ಜೂಜಾಟದಲ್ಲಿ ತೊಡಗಿದಾಗ ಶ್ರೀ ಉದಯರವಿ, ಪಿ.ಐ ಗಂಗಾವತಿ ನಗರ ಪೊಲೀಸ್ ಠಾಣೆ ರವರು ಸದರಿಯವನ ಮೇಲೆ ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಹಿಡಿದು ಅವನನ್ನು ವಶಕ್ಕೆ ತೆಗೆದುಕೊಂಡು ಸದರಿಯವನಿಂದ ಮಟಕ ಜೂಜಾಟದಿಂದ ಸಂಗ್ರಹಿಸಿದ (01) ನಗದು ಹಣ ರೂ. 350-00. (02) ಮಟಕಾ ನಂಬರ ಬರೆದ 01 ಮಟ್ಕಾ ಪಟ್ಟಿ ಹಾಗೂ (03) 01 ಬಾಲ್ ಪೆನ್ ದೊರೆತಿದ್ದು. ಸದರಿ ಆರೋಪಿತನ ಹತ್ತಿರ ದೊರೆತ ಮುದ್ದೇಮಾಲನ್ನು ಜಪ್ತಿ ಪಡಿಸಿಕೊಂಡು ಪ್ರತ್ಯೇಕವಾಗಿ ಪಂಚನಾಮೆಯನ್ನು ಬರೆದುಕೊಂಡಿದ್ದು ಇರುತ್ತದೆ. ಸದರಿ ಮಟಕಾ ಪಟ್ಟಿಯನ್ನು ಬಕ್ಕಿಯಾದ ಕಾಸಿಂಅಲಿ ತಂದೆ ಬುಡನ್ ಸಾಬ ಸಾ: ಗುಂಡಮ್ಮ ಕ್ಯಾಂಪ್  ಗಂಗಾವತಿ ಇವನಿಗೆ ಕೊಡುವುದಾಗಿ ತಿಳಿದ್ದು ಕಾರಣ ಸದರಿಯವರ ಮೇಲೆ ಕಲಂ 78 (3) ಕೆ.ಪಿ.ಆ್ಯಕ್ಟ್ ಅಡಿಯಲ್ಲಿ ಕ್ರಮ ಜರುಗಿಸುವಂತೆ ನೀಡಿದ ವರದಿ ಮೇಲಿಂದ ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 293/2017 ಕಲಂ 78 (3) ಕೆ.ಪಿ.ಆ್ಯಕ್ಟ್ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
6]  ಗಂಗಾವತಿ ನಗರ ಪೊಲೀಸ್  ಠಾಣೆ  ಗುನ್ನೆ ನಂ.294/2017 ಕಲಂ 78 (3) ಕೆ.ಪಿ.ಆ್ಯಕ್ಟ್.
ದಿನಾಂಕ 24-11-2017 ರಂದು 2-00 ಗಂಟೆಗೆ ಆರೋಪಿ ಪರಶುರಾಮ ತಂದೆ ಹುಲಗಪ್ಪ ವಜ್ಜಲ ಸಾ: ಹೆಚ್.ಆರ್ ಎಸ್. ಕಾಲೋನಿ ಗಂಗಾವತಿ. ಇವನು ಗಂಗಾವತಿಯ ಹಿರೇಜಂತಕಲ್ ಮಸೀದಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು 1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಸಾರ್ವಜನಿಕರನ್ನು ಕರೆದು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟ್ಕಾ ಚೀಟಿಯನ್ನು ಬರೆದುಕೊಡುತ್ತಾ ಮಟಕಾ ಜೂಜಾಟದಲ್ಲಿ ತೊಡಗಿದಾಗ, ಶ್ರೀ ಉದಯರವಿ, ಪಿ.ಐ ಗಂಗಾವತಿ ನಗರ ಪೊಲೀಸ್ ಠಾಣೆ ರವರು ಸದರಿಯವನ ಮೇಲೆ ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಹಿಡಿದು ಅವನನ್ನು ವಶಕ್ಕೆ ತೆಗೆದುಕೊಂಡು ಸದರಿಯವನಿಂದ ಮಟಕ ಜೂಜಾಟದಿಂದ ಸಂಗ್ರಹಿಸಿದ (01) ನಗದು ಹಣ ರೂ. 450-00. (02) ಮಟಕಾ ನಂಬರ ಬರೆದ 02 ಮಟ್ಕಾ ಪಟ್ಟಿ ಹಾಗೂ (03) 01 ಬಾಲ್ ಪೆನ್ ದೊರೆತಿದ್ದು. ಸದರಿ ಆರೋಪಿತನ ಹತ್ತಿರ ದೊರೆತ ಮುದ್ದೇಮಾಲನ್ನು ಜಪ್ತಿ ಪಡಿಸಿಕೊಂಡು ಪ್ರತ್ಯೇಕವಾಗಿ ಪಂಚನಾಮೆಯನ್ನು ಬರೆದುಕೊಂಡಿದ್ದು ಇರುತ್ತದೆ. ಸದರಿ ಮಟಕಾ ಪಟ್ಟಿಯನ್ನು ಬಕ್ಕಿಯಾದ ಕಾಸಿಂಅಲಿ ತಂದೆ ಬುಡನ್ ಸಾಬ ಸಾ: ಗುಂಡಮ್ಮ ಕ್ಯಾಂಪ್  ಗಂಗಾವತಿ ಇವನಿಗೆ ಕೊಡುವುದಾಗಿ ತಿಳಿದ್ದು ಕಾರಣ ಸದರಿಯವರ ಮೇಲೆ ಕಲಂ 78 (3) ಕೆ.ಪಿ.ಆ್ಯಕ್ಟ್ ಅಡಿಯಲ್ಲಿ ಕ್ರಮ ಜರುಗಿಸುವಂತೆ ನೀಡಿದ ವರದಿ ಮೇಲಿಂದ ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 294/2017 ಕಲಂ 78 (3) ಕೆ.ಪಿ.ಆ್ಯಕ್ಟ್ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.   
7] ಕೂಕನೂರು ಪೊಲೀಸ್  ಠಾಣೆ  ಗುನ್ನೆ ನಂ. : 172/2017 ಕಲಂ: 87 ಕೆ.ಪಿ.ಅಕ್ಟ್.
ದಿನಾಂಕ: 23-11-2017 ರಂದು ಸಾಯಂಕಾಲ 5:30 ಗಂಟೆ ಸುಮಾರಿಗೆ ಆರೋಪಿತರು ತಳಬಾಳ ಗ್ರಾಮದ ಭೀಮಲಿಂಗೇಶ್ವರ ದೇವಸ್ಥಾನದ ಹಿಂದುಗಡೆ  ಸಾರ್ವಜನಿಕ ಸ್ಥಳದಲ್ಲಿ 04 ಜನ ಆರೋಪಿತರು ಕುಳಿತುಕೊಂಡು ಪಣಕ್ಕೆ ಹಣ ಹಚ್ಚಿ ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ್-ಬಾಹರ್ ಎಂಬ ಜೂಜಾಟದಲ್ಲಿ ತೊಡಗಿದ್ದಾಗ ಪಿಎಸ್ಐ ಹಾಗೂ ಸಿಬ್ಬಂದಿಯವರು ಪಂಚರೊಂದಿಗೆ ದಾಳಿ ಮಾಡಿ ಸದರಿ ಆರೋಪಿತರಿಂದ ಇಸ್ಪೇಟ್ ಜೂಜಾಟದ ನಗದು ಹಣ 1100=00 ರೂ. ಒಂದು ಪ್ಲಾಸ್ಟಿಕ್ ಬರಕಾ  ಮತ್ತು 52 ಇಸ್ಪೀಟ್ ಎಲೆಗಳು ಇವೆಲ್ಲವೂಗಳನ್ನು ಜಪ್ತ ಪಡಿಸಿಕೊಂಡು ಈ ಬಗ್ಗೆ ಇಸ್ಪೀಟ್ ಜೂಜಾಟದ ದಾಳಿ ಪಂಚನಾಮೆಯನ್ನು ಪೂರೈಸಿಕೊಂಡು ಬಂದು ಆರೋಪಿತರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಲು ಪಿಎಸ್ಐ ರವರು ವರದಿ ನೀಡಿದ್ದು ಸದರಿ ವರದಿಯಲ್ಲಿದ್ದ ಸಾರಾಂಶವು ಅಸಂಜ್ಞೆಯ ಅಪರಾಧವಾಗಿದ್ದರಿಂದ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲು ಮಾನ್ಯ ನ್ಯಾಯಾಲಯದ  ಅನುಮತಿಗಾಗಿ ಯಾದಿಯೊಂದಿಗೆ ವಿನಂತಿಸಿಕೊಂಡಿದ್ದು, ಇರುತ್ತದೆ, ನಂತರ ಇಂದು ದಿನಾಂಕ: 24-11-2017 ರಂದು ಸಾಯಂಕಾಲ 4:00 ಗಂಟೆಗೆ ಪಿ.ಸಿ.378 ರವರು ನ್ಯಾಯಾಲಯದಿಂದ ಅನುಮತಿಯ ಪತ್ರವನ್ನು ತಂದು ಹಾಜರಪಡಿಸಿದ್ದು ಸದರ ಪರವಾನಿಗೆ ಆದೇಶದ ಮೇರೆಗೆ ಠಾಣಾ ಗುನ್ನೆ ನಂ: 172/2017 ಕಲಂ: 87 ಕೆ.ಪಿ.ಅಕ್ಟ್ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

Friday, November 24, 2017

1]  ತಾವರಗೇರಾ  ಪೊಲೀಸ್  ಠಾಣೆ  ಗುನ್ನೆ ನಂ. 150/2017 ಕಲಂ. 279, 337 ಐ.ಪಿ.ಸಿ:.

ದಿನಾಂಕ :23-11-2017 ರಂದು ಮದ್ಯಾಹ್ನ 14-30 ಕುಷ್ಟಗಿಯಿಂದ-ಸಿಂಧನೂರ ಕಡೆಗೆ ಸರಕಾರಿ ಬಸ್ಸ ನಂ :ಕೆ.-37, ಎಫ್.0700 ನೆದ್ದನ್ನು ತೆಗೆದುಕೊಂಡು ಹೊರಟಿದ್ದು ಹೀಗ ಹೋಗುವಾಗ ತಾವರಗೇರಾ-ಸಿಂಧನೂರ ರಾಜ್ಯ ಹೆದ್ದಾರಿ ಮೇಲೆ ತಾವರಗೇರಾ..ಪಿ.ಎಮ್.ಸಿ. ಹತ್ತಿರ ಮದ್ಯಾಹ್ನ 13-10  ಗಂಟೆಗೆ ಹೊರಟಿದ್ದಾಗ ಎದುರಿನಿಂದ ನಮೂದಿತ ಆರೋಪಿತನಾದ ವಿನಯ ಜೈನ ತಂದೆ ಜಗದೀಶ ಜೈನ್ ಈತನು ತಮ್ಮ ಪಾರಚೂನರ್ ಕಾರ ನಂ. ಕೆ..25, ಎಮ್.,-8489 ನೇದ್ದನ್ನು ಅತೀವೇಗ ಹಾಗೂ ಅಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ರಸ್ತೆಯ ಎಡಗಡೆ ಹೊರಟಿದ್ದ ನಮ್ಮ ಬಸ್ಸಗೆ ಟಕ್ಕರುಕೊಟ್ಟು ಅಪಘಾತಡಿಸಿದ್ದು ಅಪಘಾತದಿಂದ ಕಾರಿನಲ್ಲಿ ಇದ್ದ ಯಶೋಧ, ಅಕ್ಷಯ. ಅರ್ಪಿತ, ಅಂಕಿತಾ, ಇವರಿಗೆ ಸಾದಾ ಸ್ವರೂಪದ ಗಾಯವಾಗಿದ್ದು ಇರುತ್ತದೆ. ಹಾಗೂ ಬಸ್ಸಿನ ಎಡಗಡೆ ಭಾಗ ಬಂಪರ್ ಡ್ಯಾಮೇಜ್ ಆಗಿದ್ದು ಹಾಗೂ ಕಾರಿನ ಮುಂದಿನ ಭಾಗ ಸಂಪೂರ್ಣ ಡ್ಯಾಮೇಜ್ ಆಗಿರುತ್ತದೆ, ಅಪಘಾತದ ಬಗ್ಗೆ ಪಾರಚೂನರ್ ಕಾರ ನಂ. ಕೆ..25, ಎಮ್.,-8489 ನೇದ್ದರ ಚಾಲಕನಾದ ವಿಜಯ ಜೈನ ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.

Thursday, November 23, 2017

1] ಗಂಗಾವತಿ ಗ್ರಾಮೀಣ ಪೊಲೀಸ್  ಠಾಣೆ  ಗುನ್ನೆ ನಂ. 350/2017 ಕಲಂ. 78(3) Karnataka Police Act:
ದಿನಾಂಕ:- 22-11-2017 ರಂದು ಸಾಯಂಕಾಲ ನಾನು ಠಾಣೆಯಲ್ಲಿರುವಾಗ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಬರುವ ಬಂಡ್ರಾಳ ಗ್ರಾಮ ಆಂಜನೇಯ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆಯುತ್ತಿದೆ ಅಂತಾ ಖಚಿತವಾದ ಮಾಹಿತಿ ಬಂದ ಮೇರೆಗೆ ಹಾಜರಿದ್ದ ಸಿಬ್ಬಂದಿಯವರಾದ, ಪಿ.ಸಿ. 358, 328, 335, 366, ಮತ್ತು ಎಪಿಸಿ-15 ಇವರನ್ನು ಮತ್ತು ಇಬ್ಬರು ಪಂಚರು ಕೂಡಿಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಬಂಡ್ರಾಳ ಗ್ರಾಮದ ಆಂಜನೇಯ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಜನರು ಸೇರಿದ್ದು, ಅವರಲ್ಲಿ ಒಬ್ಬ ವ್ಯಕ್ತಿ 1-00 ರೂಪಾಯಿಗೆ 80-00 ರೂಪಾಯಿ ಕೊಡುತ್ತೇನೆ ಅದೃಷ್ಟದ ಮಟಕಾ ಅಂಕಿಗಳ ಮೇಲೆ ಹಣವನ್ನು ಪಣಕ್ಕೆ ಹಚ್ಚಿರಿ ಅಂತಾ ಕೂಗಿ ಜನರನ್ನು ಕರೆದು ಜನರಿಂದ ಹಣ ಪಡೆದುಕೊಂಡು ಮಟಕಾ ಅಂಕಿ ಸಂಖ್ಯೆಗಳ ಮೇಲೆ ಹಣವನ್ನು ಪಣಕ್ಕೆ ಹಚ್ಚಿಸಿಕೊಂಡು ಅವರಿಗೆ ಮಟ್ಕಾ ಚೀಟಿಗಳನ್ನು ಬರೆದುಕೊಡುತ್ತಾ, ಪಟ್ಟಿಯನ್ನು ಬರೆದುಕೊಳ್ಳುತ್ತಾ ಅದೃಷ್ಠದ ಮಟಕಾ ಜೂಜಾಟದಲ್ಲಿ ತೊಡಗಿದ್ದು, ಕೂಡಲೇ ಅವರ ಮೇಲೆ ದಾಳಿ ಮಾಡಲಾಗಿ ಮಟಕಾ ಪಟ್ಟಿ ಬರೆಯುತ್ತಿದ್ದವನು ಸಿಕ್ಕಿಬಿದ್ದಿದ್ದು, ಉಳಿದ ಜನರು ಅಲ್ಲಿಂದ ಓಡಿ ಹೋದರು. ಸಿಕ್ಕವನ ಹೆಸರು ವಿಚಾರಿಸಲಾಗಿ ತನ್ನ ಹೆಸರು ಪೀರಸಾಬ ತಂದೆ ಇಮಾಮಸಾಬ ಕಂಪ್ಲಿ ವಯಸ್ಸು 50, ವರ್ಷ, ಜಾ. ಮುಸ್ಲಿಂ. . ಕೂಲಿ ಸಾ. ಬಂಡ್ರಾಳ. ತಾ. ಗಂಗಾವತಿ ಅಂತಾ ತಿಳಿಸಿದ್ದು, ಅವನ ಹತ್ತಿರ ಮಟಕಾ ಜೂಜಾಟದ ನಗದು ಹಣ 700-00 ರೂಪಾಯಿ, ಒಂದು ಮಟಕಾ ಪಟ್ಟಿ, ಹಾಗೂ ಒಂದು ಬಾಲ್ ಪೆನ್ನು ದೊರೆತಿದ್ದು, ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ
2] ಕಾರಟಗಿ ಪೊಲೀಸ್  ಠಾಣೆ  ಗುನ್ನೆ ನಂ. 274/2017 ಕಲಂ. 279, 337 ಐ.ಪಿ.ಸಿ:

ದಿನಾಂಕ:-22-11-2017 ರಂದು ಬೆಳಿಗ್ಗೆ  11-30 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ಲಿಖಿತ ದೂರು ಕೊಟ್ಟಿದ್ದು ಸದ್ರಿ ದೂರಿನಲ್ಲಿ ಇಂದು ದಿನಾಂಕ:-22-11-2017 ರಂದು ಬೆಳಿಗ್ಗೆ 7-30 ಗಂಟೆಯ ಸುಮಾರಿಗೆ ಗಂಗಾವತಿ-ಸಿಂಧನೂರು ರಸ್ತೆಯ ಮೇಲೆ ಕಾರಟಗಿಯ ಶಿವನಗರದಲ್ಲಿರುವ ಮಂಜುನಾಥ ಸಾವಜಿ ಖಾನಾವಳಿಯ ಸಮೀಪ  ಆರೋಪಿತರಾದ ದಿನೇಶ ಚವ್ಹಾಣ ತಂದೆ ಶುಕುರಿ ಚವ್ಹಾಣ ಇತನು ತನ್ನ ಲಾರಿ ನಂ NL-01/L-3939 ನೆದ್ದನ್ನು ಕಾರಟಗಿ ಕಡೆಯಿಂದ ಅದೇ ರೀತಿ ಎನಪ್ಪ ತಂದೆ ತಿಪ್ಪಣ್ಣ ಕಟಂಬ್ಲಿ ಇತನು ತನ್ನ ಬೋಲೇರೊ ಪಿಕಫ್ ವಾಹನದ ನಂಬರ್-KA01/B-8033 ನೆದ್ದನ್ನು ಇಬ್ಬರು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ವೇಗವಾಗಿ ವಾಹನವನ್ನು ಚಲಾಯಿಸಿಕೊಂಡು ಬಂದು ಪರಸ್ಥರ ಟಕ್ಕರ ಮಾಡಿಕೊಂಡು ಅಪಘಾತಪಡಿಸಿಕೊಂಡಿದ್ದರಿಂದ ಬುಲೇರೋ ವಾಹನದಲ್ಲಿದ್ದ ಚಾಲಕನಿಗೆ ಮತ್ತು ಪಕ್ಕದಲ್ಲಿ ಕುಳಿತದ್ದ ಬಸವರಾಜ ತಂದೆ ಓಬಪ್ಪ ಇಬ್ಬರಿಗೂ ತಲೆಗೆ, ಕೈಕಾಲುಗಳಿಗೆ, ಇತರೆ ಕಡೆಗೆ ತೆರಚಿದ, ಸಣ್ಣ ಪುಟ್ಟ ಮತ್ತು ಒಳಪೆಟ್ಟಾದ ಗಾಯಗಳು ಆಗಿದ್ದು ಎರಡು ವಾಹನಗಳು ಮುಂದಿನ ಬಾಗ ಡ್ಯಾಮೇಜ್ ಆಗಿದ್ದು ಇರುತ್ತದೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

 
Will Smith Visitors
Since 01/02/2008