Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Thursday, March 31, 2016

1) ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ: 102/2016 ಕಲಂ. 143, 147, 323, 504, 506 ಸಹಿತ 149 ಐ.ಪಿ.ಸಿ:.
ದಿನಾಂಕ 30-03-2016 ರಂದು ಮಧ್ಯಾಹ್ನ 2-15 ಗಂಟೆಗೆ  ಫಿರ್ಯಾಧಿದಾರರಾದ ಶ್ರೀ ಹನುಮಂತಪ್ಪ ತಂದೆ ಮಲ್ಲಪ್ಪ ಹಿರೇಕುರುಬರ ವಯ.40 ವರ್ಷ ಜಾ.ಕುರುಬರು ಉ.ಒಕ್ಕಲುತನ ಸಾ. ಬಂಕಾಪುರ ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾಧಿ ಕೊಟ್ಟಿದ್ದು, ಅದರ ಸಾರಾಂಶವೇನೆಂದರೆ, ತಮ್ಮ ಗ್ರಾಮದಲ್ಲಿರುವ ತನ್ನ ಸ್ವಂತ ಅಣ್ಣಂದಿರಾದ ಪರಸಪ್ಪ, ಕೊಟ್ರಪ್ಪ ಇವರ ಜೊತೆ ಇತ್ತೀಚಿಗೆ ಮೃತಪಟ್ಟ ತನ್ನ ತಾಯಿಯ ಶವಸಂಸ್ಕಾರವನ್ನು ಮಾಡುವ ಸ್ಥಳದ ಕುರಿತಂತೆ ವಾದವಿವಾದಗಳಾಗಿದ್ದು ಇದರಿಂದಾಗಿ ಆರೋಪಿತರು ಫಿರ್ಯಾದಿಯ ಜೊತೆಯಲ್ಲಿ ದ್ವೇಷ ಸಾಧಿಸುತ್ತಿದ್ದುದು ಇರುತ್ತದೆ. ದಿನಾಂಕ 29/03/16 ರಂದು ಪರಸಪ್ಪ ಈತನ ಕುರಿಗಳು ಹನುಮಂತಪ್ಪ ಈತನ ಹೊಲದಲ್ಲಿ ಹೋದ ಬಗ್ಗೆ ಜಗಳವಾಗಿದ್ದು ಇದಕ್ಕೆ ಸಂಭಂಧಪಟ್ಟಂತೆ ಫಿರ್ಯಾದಿಯು ವಿಚಾರಿಸಲೆಂದು ಪರಸಪ್ಪ ಈತನ ಮನೆಯ ಮುಂದೆ ರಾತ್ರಿ 8-00 ಗಂಟೆಯ ಸುಮಾರಿಗೆ ಅಲ್ಲಿದ್ದ ಪರಸಪ್ಪ ಹಾಗೂ ಕೊಟ್ರಪ್ಪ ಮತ್ತು ಇವರಿಬ್ಬರು ಮತ್ತು ಇವರ ಮಕ್ಕಳಾದ ನಾಗಪ್ಪ ತಂದೆ ಪರಸಪ್ಪ, ಯಮನೂರ ತಂದೆ ಪರಸಪ್ಪ, ಬಸವರಾಜ ತಂದೆ ಪರಸಪ್ಪ,  ಮಲ್ಲಪ್ಪ ತಂದೆ ಕೊಟ್ರಪ್ಪ, ನಿರುಪಾದೆಪ್ಪ ತಂದೆ ಕೊಟ್ರಪ್ಪ ಎಲ್ಲರೂ ಜಾ.ಕುರುಬರು ಸಾ. ಬಂಕಾಪುರ ಇವರೆಲ್ಲರೂ ಸೇರಿಕೊಂಡು ಫಿಯರ್ಾದಿಯನ್ನು ಎಳೆದಾಡಿ ಕೈಯಿಂದ ಹೊಡಿಬಡಿ ಮಾಡಿ ಕಾಲಿನಿಂದ ಒದ್ದು ಅವಾಚ್ಯವಾಗಿ ಬೈದಾಡಿ ಒಳಪೆಟ್ಟುಗಳನ್ನುಂಟು ಮಾಡಿರುವುದಾಗಿ ಇದಕ್ಕೆ ಸಂಭಂಧಪಟ್ಟಂತೆ ಫಿರ್ಯಾದಿದಾರರು ದಿನಾಂಕ 29-03-2016 ರಂದು ಠಾಣೆಗೆ ಬಂದು ಆಸ್ಪತ್ರೆಗೆ ಹೋಗಿ ಬಂದಿದ್ದು ನಂತರ ವಾಪಸ್ ಗ್ರಾಮಕ್ಕೆ ತೆರಳಿ ಗ್ರಾಮದ ಹಿರಿಯರನ್ನು ಕಂಡು ಮತ್ತು ಕುಟುಂಬದವರ ಜೊತೆಗೆ ಚಚರ್ೆ ಮಾಡಿ ಇಂದು ದಿನಾಂಕ 30-03-2016 ರಂದು ತಡವಾಗಿ ಬಂದು ಫಿರ್ಯಾದಿಯನ್ನು ಸಲ್ಲಿಸಿರುವುದಾಗಿ ಕಾರಣ ತನಗೆ ಹೊಡಿಬಡಿ ಮಾಡಿದ ತನ್ನ ಸ್ವಂತ ಅಣ್ಣಂದಿರ ಹಾಗೂ ಆತನ ಮಕ್ಕಳ ವಿರುದ್ಧ ಸೂಕ್ತ ಕಾನೂನು ಕ್ರಮವನ್ನು ತೆಗೆದುಕೊಳ್ಳಲು ವಿನಂತಿಯಿರುತ್ತದೆ. ಅಂತಾ ಮುಂತಾಗಿ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿನಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
2) ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ: 103/2016 ಕಲಂ. 454, 380 ಐ.ಪಿ.ಸಿ:.

ದಿನಾಂಕ 30-03-2016 ರಂದು ರಾತ್ರಿ 9-30 ಗಂಟೆಗೆ ಫಿರ್ಯಾಧಿದಾರ ಶ್ರೀಪರಶುರಾಮ  ತಂದೆ ವಿಠಪ್ಪ ಹಂಚಾಟಿ ಸಾ: ತೆಗ್ಗಿನಮನೆ ಓಣಿ ಕನಕಗಿರಿ ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾಧಿ ಕೊಟ್ಟಿದ್ದು, ಅದರ ಸಾರಾಂಶವೇನೆಂದರೆ, ನಮ್ಮ ಮನೆಯಲ್ಲಿ ನಾನು, ನನ್ನ ಹೆಂಡತಿ ರೂಪಬಾಯಿ, 2 ಜನ ಗಂಡು, ಒಬ್ಬಳು ಹೆಣ್ಣು ಮಕ್ಕಳಿರುತ್ತಾರೆ. ನಾನು ಮತ್ತು ನನ್ನ ಹೆಂಡತಿ ರೂಪಬಾಯಿ ಕೂಡಿಕೊಂಡು ಮೇನ್ ಬಜಾರದಲ್ಲಿ ಮಹಿಷಾಷರ ಮದರ್ಿನಿ ಗುಡಿಯಲ್ಲಿ ಟೇಲರ್ ಕೆಲಸ ಮಾಡಿಕೊಂಡು ಜೀವಿಸುತ್ತೇವೆ. ಈಗ ಕನಕಾಚಲ ಜಾತ್ರೆ ಇದ್ದ ಪ್ರಯುಕ್ತ ಈಗ್ಗೆ ಸುಮಾರು 1 ತಿಂಗಳದಿಂದ ನಾನು ಮತ್ತು ನನ್ನ ಹೆಂಡತಿ ಹಗಲು ರಾತ್ರಿ ಟೇಲರ ಕೆಲಸ ಮಾಡಿ ಬಂದ ಹಣವನ್ನು ಮನೆಯಲ್ಲಿ ಕೂಡಿ ಇಟ್ಟಿದ್ದೇವು.  ದಿನಾಂಕ 30-03-2016 ರಂದು ಸಂಜೆ 4-00 ಗಂಟೆಯಿಂದ 6-00 ಗಂಟೆಯ ಅವಧಿಯಲ್ಲಿ ನಾನು ಮತ್ತು ನನ್ನ ಹೆಂಡತಿ ಮಕ್ಕಳೊಂದಿಗೆ ಶ್ರೀ ಕನಕಾಚಲ ದೇವರ ರಥೋತ್ಸವ ನೋಡಲು ನಮ್ಮ ಮನೆಯ ಬಾಗಿಲಿಗೆ ಬೀಗ ಹಾಕಿ ಮೇನ ಬಜಾರಕ್ಕೆ ಹೋದ ಸಮಯದಲ್ಲಿ ಯಾರೋ ಅಪರಿಚಿತ ಕಳ್ಳರು ನಮ್ಮ ಮನೆಯ ಬಾಗಿಲು ಕೀಲಿ ಪತ್ತ ಕುರಿತು ಮನೆಯಲ್ಲಿ ಇಟ್ಟಿದ್ದ ನಗದು ಹಣ ರೂ.30,000/-,ಒಂದು ತೊಲೆ ಬಂಗಾರ ಅ.ಕಿ.ರೂ.18,000/- ಒಟ್ಟು ರೂ.48,000/- ಗಳ ಬೆಲೆ ಬಾಳವುದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಕಾರಣ ಅವರನ್ನು ಪತ್ತೆ ಹಚ್ಚಿ ಕಳ್ಳತನವಾದ ಬಂಗಾರ, ಹಣವನ್ನು  ನಮಗೆ ಕೊಡಲು ವಿನಂತಿ ಅಂತಾ ಕೊಟ್ಟ ಫಿರ್ಯಾಧಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಯಿತು.

Wednesday, March 30, 2016

1) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 106/2016 ಕಲಂ. 78(3) Karnataka Police Act.
ದಿನಾಂಕ: 29-03-2016 ರಂದು ರಾತ್ರಿ 9-15 ಗಂಟೆಗೆ  ಮಾನ್ಯ ಪಿ.ಎಸ್.ಐ ಸಾಹೇಬರು ಕುಷ್ಟಗಿ ಪೊಲೀಸ್ ಠಾಣೆ ರವರು  ಹಾಜರುಪಡಿಸಿದ ವರದಿ, ಪಂಚನಾಮೆ ಸಾರಾಂಶವೆನೆಂದರೆ ಕುಷ್ಠಗಿ ಪೊಲೀಸ್ ಠಾಣೆಯಲ್ಲಿದ್ದಾಗ ರಾತ್ರಿ 7-15 ಗಂಟೆಗೆ ಕುಷ್ಟಗಿ ಠಾಣಾ ವ್ಯಾಪ್ತಿಯ ಕುಷ್ಟಗಿ ಪಟ್ಟಣದ ಬಸ್ ನಿಲ್ದಾಣದ ಹತ್ತಿರ ಗನೇಶ ಹೊಟೇಲ್ ಮುಂದೆ ಮಟ್ಕಾ ಜೂಜಾಟ ನಡೆದಿದೆ ಅಂತಾ ಖಚಿತ ಬಾತ್ಮಿ ಬಂದಿದ್ದು ಆಗ ಪಂಚರಾದ 1) ಅನಿಲ ತಂದೆ ಮೋತಿಲಾಲಸಾ ರಂಗ್ರೇಜಿ ವಯ: 26 ವರ್ಷ, ಜಾ: ಸಾವಜಿ : ಕೂಲಿಕೆಲಸ ಸಾ: ಸಂದೀಪ ನಗರ ಕುಷ್ಟಗಿ  2] ಪರಶುರಾಮ ತಂದೆ ಕುಳುಕುಸಾ ಕಠಾರಿ  ವಯ: 37 ವರ್ಷ, ಜಾ: ಸಾವಜಿ  : ವ್ಯಾಪಾರ ಸಾ: ಗಜೇಂದ್ರಗಡ ಹಾಲಿ ವಸ್ತಿ: ವಿಷ್ಣುತೀರ್ಥ ನಗರ ಕುಷ್ಟಗಿ ರವರನ್ನು ಠಾಣೆಗೆ ಬರಮಾಡಿಕೊಂಡು ವಿಷಯ ತಿಳಿಸಿ ಹಾಗೂ ನಮ್ಮ ಠಾಣೆಯ ಸಿಬ್ಬಂದಿಯವರಾದ ಹೆಚ್.ಸಿ-63, ಪಿ.ಸಿ-117,24 ಮತ್ತು ಸರಕಾರಿ ಜೀಪ್ ಚಾಲಕ ಎ.ಪಿ.ಸಿ-38 ಶಿವಕುಮಾರ ಎಲ್ಲರೂ ಕೂಡಿ ಸರಕಾರಿ ಜೀಪನಲ್ಲಿ ಠಾಣೆಯಿಂದ 7-15 ಪಿ.ಎಂ ಗೆ ಕುಷ್ಟಗಿ ಬಸ್ ನಿಲ್ದಾಣದ ಹತ್ತಿರ  ದೂರದಲ್ಲಿ ನಿಂತು ನೋಡಲು ಗಣೇಶ ಹೊಟೇಲ್ ಮುಂದೆ  ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಜನರಿಂದ ಹಣ ಪಡೆಯುತ್ತಾ ಮಟಕಾ ಜೂಜಾಟದಲ್ಲಿ ತೊಡಗಿ ಮಟಕಾ ಚೀಟಿಗಳನ್ನು ಬರೆದುಕೊಡುತ್ತಿದ್ದನು. ಆಗ ನಾವು ಒಮ್ಮಲೇ ಎಲ್ಲರೂ ರೇಡ ಮಾಡಲು ಪೊಲೀಸರನ್ನು ನೋಡಿ ಮಟಕಾ ಬರೆಯಿಸುತ್ತಿದ್ದ ಜನ ಓಡಿ ಹೋಗಿದ್ದು, ಮಟಕಾ ಬರೆಯುದ್ದವನು ಸಹ ಓಡಿ ಹೋಗಲು ಪ್ರಯತ್ನಿಸುತ್ತಿದ್ದಾಗ ಸದರಿಯವನ್ನು ಹಿಡಿದು ವಿಚಾರಿಸಿದಾಗ ಹೆಸರು ಗಣೇಶ ತಂದೆ ತಿಪ್ಪಣ್ಣ ಕಾಟವಾ ವಯಾ: 25 ವರ್ಷ ಜಾತಿ: ಸಾವಜಿ ಉ: ವ್ಯಾಪಾರ ಸಾ: ವಿದ್ಯಾನಗರ ಕುಷ್ಟಗಿ ಅಂತಾ ಹೇಳಿದ್ದು ಹಾಗೂ ಸದರಿಯವರು ಜನರಿಂದ ಹಣ ಪಡೆದು 1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳಿದನು.  ಮತ್ತು ಮಟ್ಕಾ ಜೂಜಾಟದಲ್ಲಿ ತೊಡಗಿದ್ದನ್ನು ಒಪ್ಪಿಕೊಂಡನು. ಸದರಿಯವನನ್ನು ಅಂಗ ಜಡತಿ ಮಾಡಿದಾಗ ಮಟಕಾ ಜೂಜಾಟದ ಹಣ 1360-00 ರೂಪಾಯಿ ನಗದು ಹಣ, ಒಂದು ಶ್ಯಾಮಸಂಗ್ ಕಂಪನಿಯ ಮೊಬೈಲ್ ಅಂ ಕಿ. 400-00 ರೂ, ಒಂದು ಬಾಲ್ ಪೆನ್ನು ಹಾಗೂ ಒಂದು ಮಟ್ಕಾ ಬರೆದ ಚೀಟಿ ಇವುಗಳನ್ನು ಜಪ್ತ ಪಡಿಸಿದ್ದು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.
2) ಬೇವೂರ ಪೊಲೀಸ್ ಠಾಣೆ ಗುನ್ನೆ ನಂ: 21/2016 ಕಲಂ. 279, 337, 338 ಐ.ಪಿ.ಸಿ:.

ದಿನಾಂಕ : 29.03.2016  ರಂದು ಬೆಳಗಿನ ಜಾವ 05:30  ಗಂಟೆ ಸುಮಾರಿಗೆ ಕುಷ್ಟಗಿ - ಹೊಸಪೇಟ್ ಎನ್ಹೆಚ್ 50 ರಸ್ತೆಯ ಮೇಲೆ ಪುಟಗಮರಿ ಕ್ರಾಸ್ ಹತ್ತಿರ ರೋಡ ಹಂಪ್ಸ ಇದ್ದುದ್ದರಿಂದ ಫಿರ್ಯಾದಿದಾರನು ತಾನು ನಡೆಸುತ್ತಿದ್ದ  ಬಸ್ ನಂ  KA-42 / 7787 ನೇದ್ದನ್ನು ಸಿಗ್ನಲ್ ಹಾಕುತ್ತಾ ನಿಧಾನವಾಗಿ ನಡೆಸಿಕೊಂಡು ಹೋಗುವ ಕಾಲಕ್ಕೆ ಅದೇ ವೇಳೆಗೆ ಹಿಂದಿನಿಂದ ಆರೋಪಿತನು ತಾನು ನಡೆಸುತ್ತಿದ್ದ ವರಲಕ್ಷ್ಮೀ ಟ್ರಾವೇಲ್ಸ್ ಬಸ್ ನಂಬರ KA-51 C-7894 ನೇದ್ದನ್ನು ಹೊಸಪೇಟಿ ಕಡೆಯಿಂದ ಕುಷ್ಟಗಿ ಕಡೆಗೆ ಅತಿ ವೇಗವಾಗಿ ಹಾಗೂ ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯವುಂಟಾಗುವ ರೀತಿಯಲ್ಲಿ ನಡೆಸಿಕೊಂಡು ಬಂದವನೇ ಮುಂದೆ ಹೊರಟಿದ್ದ ಫಿರ್ಯಾದಿದಾರನ ಬಸ್ಸಿಗೆ ಅಂತರವನ್ನು ಕಾಪಾಡದೆ ಸದರಿ ಬಸ್ಸಿಗೆ ಆರೋಪಿತನು ಹಿಂದಿನಿಂದ ಟಕ್ಕರ್ ಕೊಟ್ಟು ಅಪಘಾತ ಮಾಡಿದರಿಂದ ಸದರಿ ಅಫಘಾತದಲ್ಲಿ ಫಿರ್ಯಾದಿಗೆ ಹಾಗೂ ಪಿಯರ್ಾದಿದಾರನ ಬಸ್ಸಿನಲ್ಲಿದ್ದ ಸುಮಾರು 07 ಜನ ಪ್ರಯಾಣಿಕರಿಗೆ ಹಾಗೂ ಅಪಘಾತ ಮಾಡಿದ ಆರೋಪಿತನಿಗೆ ಮತ್ತು ಸದರಿ ಆರೋಪಿತನ ಬಸ್ಸಿನಲ್ಲಿದ್ದ ಸುಮಾರು 10-12 ಜನ ಪ್ರಯಾಣಿಕರಿಗೆ ಸಾಧಾ ಹಾಗೂ ಭಾರಿ ಸ್ವರೂಪದ ರಕ್ತಗಾಯ ಹಾಗೂ ಭಾರಿ ಒಳಪೆಟ್ಟುಗಳಾಗಿದ್ದು ಇರುತ್ತದೆ, ಅಂತಾ ಇತ್ಯಾದಿ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ

Tuesday, March 29, 2016

1) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 104/2016 ಕಲಂ. 87 Karnataka Police Act.
ದಿನಾಂಕ 28-03-2016 ರಂದು ರಾತ್ರಿ 10-30 ಗಂಟೆಗೆ ಮಾನ್ಯ ಪಿ.ಎಸ್.ಐ ಸಾಹೇಬರು ಕುಷ್ಠಗಿ ಪೊಲೀಸ ಠಾಣೆರವರು ಠಾಣೆಗೆ ಬಂದು ಹಾಜರು ಪಡಿಸಿದ್ದು ಅದರ ಸಾರಾಂಶವೆನಂದರೆ ಕುಷ್ಟಗಿ ಠಾಣಾ ವ್ಯಾಪ್ತಿಯ ಕಂದಕೂರ ಗ್ರಾಮದಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಅಂದರಬಾಹರ ಎಂಬ ಇಸ್ಪಿಟ್ ಜೂಜಾಟ ನಡೆದಿದೆ ಅಂತಾ ತಿಳಿದು ಬಂದಿದ್ದು ಆಗ ಪಿರ್ಯಾಧಿದಾರರು ಮತ್ತು ಹೆಚ್.ಸಿ-63 ಪಿ.ಸಿ-109, 116,117,161, 407, ಹಾಗೂ ನಮ್ಮ ಸರಕಾರಿ ಜೀಪ ನಂ: ಕೆ.-37-ಜಿ-292 ನೇದ್ದರಲ್ಲಿ ಮತ್ತು ಇಬ್ಬರು ಪಂಚರೊಂದಿಗೆ ಎಲ್ಲರೂ ಕೂಡಿ ಹೋಗಿ ರೇಡ್ ಮಾಡಿ 7 ಜನ ಆರೋಪಿತರನ್ನು ಹಾಗೂ ಇಸ್ಪೆಟ್  ಜೂಜಾಟದ ಒಟ್ಟು ಹಣ 10900-00 ರೂ, ಹಾಗೂ 52 ಇಸ್ಪೆಟ್ ಎಲೆಗಳು ಹಾಗೂ ಇತರೇ ಜೂಜಾಟದ ಸಾಮಗ್ರಿಗಳನ್ನು ಪಂಚನಾಮೆ ಕಾಲಕ್ಕೆ ಜಪ್ತಿ ಮಾಡಿಕೊಂಡು ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಬಂದು ಹಾಜರು ಪಡಿಸಿದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 72/2016 ಕಲಂ. 279, 304(ಎ) ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:.
ದಿ:28-03-2016 ರಂದು ರಾತ್ರಿ 9-00 ಗಂಟೆಗೆ ಫಿರ್ಯಾದಿದಾರರಾದ ಶ್ರೀಮತಿ ಗಂಗಮ್ಮ ಗಂಡ ಯಂಕಪ್ಪ ಹಲಗಿ. ಸಾ: ಕುಣಿಕೇರಿ. ಇವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ಫಿರ್ಯಾದಿಯ ಸಾರಾಂಶವೇನೆಂದರೇ, ದಿ:28-03-16 ರಂದು ಮಧ್ಯಾಹ್ನ 1-00 ಗಂಟೆಗೆ ಮೃತ ಯಂಕಪ್ಪನು ಹೊಲದಲ್ಲಿ ಕೆಲಸ ಮುಗಿಸಿಕೊಂಡು ವಾಪಾಸ್ ಊರಿಗೆ ಅಂತಾ ತನ್ನ ಮೋಟಾರ ಸೈಕಲ್ ನಂ: ಕೆಎ-37/ಯು-1801 ನೇದ್ದನ್ನು ಓಡಿಸಿಕೊಂಡು ಗಾಳೆಮ್ಮ ಗುಡಿಯ ಸಮೀಪ ಬರುವಾಗ ಗೊಂಡಬಾಳ ಕಡೆಯಿಂದ ಟಿಪ್ಪರ ಲಾರಿ ನಂ: ಕೆಎ-35/9552 ನೇದ್ದರ ಚಾಲಕನು ತನ್ನ ವಾಹನವನ್ನು ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದಾ ಮಾನವ ಜೀವಕ್ಕೆ ಅಪಾಯಕರವಾಗುವ ರೀತಿಯಲ್ಲಿ ಓಡಿಸಿಕೊಂಡು ಬಂದವನೇ ಮೃತ ಯಂಕಪ್ಪನ ಮೋಟಾರ ಸೈಕಲ್ ಗೆ ಟಕ್ಕರ ಕೊಟ್ಟು ಅಪಘಾತ ಮಾಡಿದ್ದರಿಂದ ಮೋಟಾರ ಸೈಕಲ್ ಸವಾರ ಯಂಕಪ್ಪನಿಗೆ ಭಾರಿ ಪೆಟ್ಟುಗಳಾಗಿದ್ದು ಆತನಿಗೆ ಉಪಚಾರಕ್ಕಾಗಿ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಸೇರಿಸಿದ್ದು, ನಂತರ ಹೆಚ್ಚಿನ ಉಪಚಾರಕ್ಕೆ ಎಸ್.ಡಿ.ಎಮ್ ಆಸ್ಪತ್ರೆ ಧಾರವಾಢಕ್ಕೆ ಕರೆದುಕೊಂಡು ಹೋಗುವಾಗ ಮಾರ್ಗದ ಲಕ್ಕುಂಡಿ ಹತ್ತಿರ ಇಂದು ಸಾಯಂಕಾಲ 4-30 ಗಂಟೆಗೆ ಮೃತಪಟ್ಟಿರುತ್ತಾನೆ. ಕಾರಣ ಸದರಿ ಟಿಪ್ಪರ ಚಾಲಕನು ಮೋಟಾರ ಸೈಕಲ್ ಗೆ ಟಕ್ಕರ ಕೊಟ್ಟು ಅಪಘಾತ ಮಾಡಿ ತನ್ನ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಸದರಿ ವಾಹನದ ಚಾಲಕನನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಮುಂತಾಗಿ ನೀಡಿದ ದೂರಿನ ಮೇಲಿಂದ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
3) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 73/2016 ಕಲಂ. 279, 338, 304(ಎ) ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:.
ದಿ:28-03-2016 ರಂದು ರಾತ್ರಿ 11-30 ಗಂಟೆಗೆ ಕೊಪ್ಪಳ ಜಿಲ್ಲಾ ಆಸ್ಪತ್ರೆಯಿಂದ ವಾಹನ ಅಪಘಾತದಲ್ಲಿ ಗಾಯಗೊಂಡವರು ಚಿಕಿತ್ಸೆಗೆ ದಾಖಲಾದ ಬಗ್ಗೆ ಎಮ್.ಎಲ್.ಸಿ ಸ್ವೀಕೃತವಾಗಿದ್ದು, ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಯಮನೂರಪ್ಪ ಬೆಣಕಲ್. ಸಾ: ಒಣಬಳ್ಳಾರಿ ತಾ:ಜಿ: ಕೊಪ್ಪಳ ಇವರನ್ನು ವಿಚಾರಿಸಿ ಹೇಳಿಕೆ ಫಿರ್ಯಾದಿಯನ್ನು ಪಡೆದುಕೊಂಡಿದ್ದು ಸಾರಾಂಶವೇನೆಂದರೇ, ದಿ:28-03-16 ರಂದು ರಾತ್ರಿ ಫಿರ್ಯಾದಿಯು ತಮ್ಮ ಅಳಿಯ ಚೆನ್ನಪ್ಪ ಮ್ಯಾಗೇರಿ ಇವರ ತಂಗಿ ರತ್ನಮ್ಮ ಎಂಬ ಗರ್ಭಿಣಿ ಹೆಣ್ಣುಮಗಳಿಗೆ ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸೇರಿಸಿ ಇಬ್ಬರೂ ವಾಪಾಸ್ ತಮ್ಮೂರಿಗೆ ಹೋಗಲು ಅಂತಾ ತಮ್ಮ ಅಳಿಯ ಚೆನ್ನಪ್ಪನ ಮೋಟಾರ ಸೈಕಲ್ ನಂ: ಕೆಎ-37/ಕ್ಯೂ-3729 ನೇದ್ದರ ಹಿಂದೆ ಕುಳಿತುಕೊಂಡು ರಾತ್ರಿ 9-30 ಗಂಟೆಯ ಸುಮಾರಿಗೆ ಕೊಪ್ಪಳ-ಗಿಣಿಗೇರಿ ರಸ್ತೆಯ ಬಸಾಪೂರ ದಾಟಿ ಗಿಣಿಗೇರಿ ಕಡೆಗೆ ಹೋಗುತ್ತಿದ್ದಾಗ ಅದೇವೇಳೆಗೆ ಎದುರುಗಡೆ ಅಂದರೆ ಗಿಣಿಗೇರಿ ಕಡೆಯಿಂದ ಒಂದು ಮೋಟಾರ ಸೈಕಲ್ ನಂ: ಕೆಎ-47/ಹೆಚ್-830 ನೇದ್ದು ಬರುತ್ತಿದ್ದು ಸದರಿ ಮೋಟಾರ ಸೈಕಲ್ ಹಿಂದೆ ಬರುತ್ತಿದ್ದ ಒಂದು ಲಾರಿಯ ಚಾಲಕನು ತನ್ನ ವಾಹನವನ್ನು ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದಾ ಮಾನವ ಜೀವಕ್ಕೆ ಅಪಾಯಕರವಾಗುವ ರೀತಿಯಲ್ಲಿ ಓಡಿಸಿಕೊಂಡು ಬಂದವನೇ ತನ್ನ ಮುಂದೆ ಬರುತ್ತಿದ್ದ ಮೋಟಾರ ಸೈಕಲ್ ಗೆ ನಿಗದಿತ ಅಂತರ ಕಾಪಾಡದೇ ಬಂದು ಟಕ್ಕರ ಕೊಟ್ಟು ಅಪಘಾತ ಮಾಡಿದ್ದಲ್ಲದೇ ಅಡ್ಡಾದಿಡ್ಡಿಯಾಗಿ ಓಡಿಸಿಕೊಂಡು ಬಂದು ಫಿರ್ಯಾದಿ ಕುಳಿತು ಬರುತ್ತಿದ್ದ ಮೋಟಾರ ಸೈಕಲ್ ಗೆ ಸಹ ಟಕ್ಕರ ಕೊಟ್ಟು ಅಪಘಾತ ಮಾಡಿ ಸದರಿ ಲಾರಿಯ ಚಾಲಕನು ತನ್ನ ಲಾರಿಯನ್ನು ನಿಲ್ಲಿಸದೇ ಕೊಪ್ಪಳ ಕಡೆಗೆ ಓಡಿಸಿಕೊಂಡು ಹೋಗಿದ್ದು ಇರುತ್ತದೆ. ಈ ಅಪಘಾತದಲ್ಲಿ ಫಿರ್ಯಾದಿ ಮತ್ತು ಫಿರ್ಯಾದಿಯ ಮೋಟಾರ ಸೈಕಲ್ ಸವಾರ ಚೆನ್ನಪ್ಪನಿಗೆ ಭಾರಿ ಪೆಟ್ಟುಗಳಾಗಿದ್ದು ಇರುತ್ತದೆ. ಮತ್ತು ಇನ್ನೊಂದು ಮೋಟಾರ ಸೈಕಲ್ ನಂ:ಕೆಎ-47/ಹೆಚ್-830 ನೇದ್ದರ ಸವಾರ ಯಮನೂರಸಾಬ ನದಾಫ್ ಹಾಗೂ ಸದರಿ ಮೋಟಾರ ಸೈಕಲ್ ಹಿಂದೆ ಕುಳಿತು ಬಂದಿದ್ದ ಅಲ್ಲಾಸಾಬ ಅಂಗಡಿ ಇಬ್ಬರೂ ಸಾ: ಕರ್ಕಿಹಳ್ಳಿ ತಾ:ಜಿ: ಕೊಪ್ಪಳ ಎಂಬುವವರಿಗೆ ಭಾರಿ ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಕಾರಣ ಸದರಿ ಯಾವುದೋ ಲಾರಿ ಚಾಲಕನು ಎರಡೂ ಮೋಟಾರ ಸೈಕಲ್ ಗಳಿಗೆ ಟಕ್ಕರ ಕೊಟ್ಟು ಅಪಘಾತ ಮಾಡಿ ತನ್ನ ವಾಹನವನ್ನು ನಿಲ್ಲಿಸದೇ ಹೋಗಿದ್ದು ಸದರಿ ವಾಹನ ಮತ್ತು ಲಾರಿಯ ಚಾಲಕನನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಮುಂತಾಗಿ ನೀಡಿದ ದೂರನ್ನು ಪಡೆದುಕೊಂಡು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
4) ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ. 101/2016 ಕಲಂ: 279, 338,  304(ಎ) ಐ.ಪಿ.ಸಿ:.


ದಿನಾಂಕ 28-03-2016 ರಂದು ರಾತ್ರಿ 11-45 ಗಂಟೆಗೆ  ಫಿರ್ಯಾಧಿದಾರ ಶ್ರೀ ಹನುಮನಗೌಡ ತಂದೆ ಸಕ್ರಗೌಡ ಸಾ: ಭಟ್ಟರ ನರಸಾಪೂರ ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾಧಿ ಕೊಟ್ಟಿದ್ದು, ಅದರ ಸಾರಾಂಶವೇನೆಂದರೆ, ತಮ್ಮ ಗ್ರಾಮದ ನನ್ನ 2 ನೇ ಅಣ್ಣ -ತಮ್ಮಂದಿರ ಪೈಕಿ ಬಸವರಾಜ ತಂದೆ ನಾಗಪ್ಪ ಕಾರಪುಡಿ, ಅಳಿಯ ಮಂಜುನಾಥ ತಂದೆ ಹನುಮಂತಪ್ಪ ದಳಪತಿ ಮತ್ತು ಆಂಜನೇಯ ತಂದೆ ಯಲ್ಲಪ್ಪ ಈಳಿಗೇರ್ ಇವರೆಲ್ಲರೂ ಒಟ್ಟುಗೂಡಿ ಆಗಾಗ ಜಾತ್ರೆಗೆ ಮೋ.ಸೈ. ಮೇಲೆ ಹೋಗಿ ಬರುತ್ತಿದ್ದರು. ನನ್ನ ತಮ್ಮ ಬಸವರಾಜ, ಅಳಿಯ ಮಂಜುನಾಥ ಇವರಿಗೆ ಮೊ.ಸೈ. ನಡೆಸಲು ಬರುವದಿಲ್ಲ. ಅದರಂತೆ ಇಂದು ದಿನಾಂಕ 28-03-2016 ರಂದು ಸಂಜೆ 4-00 ಗಂಟೆಗೆ ಅಂಜನೇಯ ಇತನು ಹೊಸ ಹಿರೋ ಹೆಚ್.ಎಪ್.ಡಿಲೆಕ್ಸ್ ಮೋಟಾರ ಸೈಕಲ್ ನಂ.ಇರುವದಿಲ್ಲ. ಅದರ ಚಸ್ಸಿ ನಂ. MBLHA11ATG9B36944 ನೇದ್ದನ್ನು ತೆಗೆದುಕೊಂಡು ಬೆನಕನಾಳ ಗ್ರಾಮಕ್ಕೆ ಶರಣಬಸವೇಶ್ವರ್ ಜಾತ್ರೆಗೆ ಹೋಗಿ ಅಲ್ಲಿ ಜಾತ್ರೆ ಮುಗಿಸಿಕೊಂಡು ಕನಕಗಿರಿಯಲ್ಲಿ ಊಟ ಮಾಡಿಕೊಂಡು ವಾಪಸ್ ನಮ್ಮೂರಿಗೆ ಬರುತ್ತಿದ್ದರು. ಸದ್ರಿ ಮೊ.ಸೈ.ನ್ನು ಚಾಲಕ ಆಂಜನೇಯ ತಂದೆ ಯಲ್ಲಪ್ಪ ಈಳಿಗೇರ್ ಈತನು ನಡೆಸುತ್ತಿದ್ದು. ಆತನ ಹಿಂದೆ ಬಸವರಾಜ, ಮಂಜುನಾಥ ಇವರು ಕುಳಿತುಕೊಂಡಿದ್ದರು. ಆಂಜನೇಯ ಈತನು ರಾತ್ರಿ 9-00 ಗಂಟೆಯ ಸುಮಾರಿಗೆ ತನ್ನ ಮೊ.ಸೈ.ನ್ನು ಕನಕಗಿರಿ ಕಡೆಯಿಂದ ಅತೀ ವೇಗವಾಗಿ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ಭಟ್ಟರ ನರಸಾಪೂರ ಕಡೆ ಬರುತ್ತಾ ರಾತ್ರಿ 9-30 ಗಂಟೆಯ ಸುಮಾರಿಗೆ ಅರಳಹಳ್ಳಿ ಕ್ರಾಸ್ ಹತ್ತಿರ ಅರಳಹಳ್ಳಿ ಸೀಮಾದ ಸಿದ್ದಪ್ಪ ನಾಗೂರ ಇವರ ಹೊಲದ ಪಕ್ಕದಲ್ಲಿ ರಸ್ತೆಯ ಬಾಜು ಇದ್ದ ಕುಡಿಯುವ ನೀರಿನ ಪೈಪಿಗೆ ಜೋರಾಗಿ ಟಕ್ಕರ್ ಕೊಟ್ಟಿದ್ದರಿಂದ ಮಂಜುನಾಥನು ಎರಡೂ ಮೊಣಕಾಲು ಕೆಳಗೆ ಭಾರಿ ಪೆಟ್ಟಾಗಿ ಮೂಳಗೆಗಳು ಮುರಿದು ಹೊರ ಬಂದಿದ್ದು, ಸ್ಥಳದಲ್ಲಿ ಮೃತಪಟ್ಟಿರುತ್ತಾನೆ. ಅಲ್ಲದೇ ಭಾರಿ ಗಾಯಗೊಂಡ ಆಂಜನೇಯ, ಬಸವರಾಜ ಇವರನ್ನು ಗಂಗಾವತಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಬಸವರಾಜ ತಂದೆ ನಾಗಪ್ಪ ಕಾರಪುಡಿ ಈತನು ಗಂಗಾವತಿ ಸರಕಾರಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಲಿಸದೇ ರಾತ್ರಿ 11-20 ಗಂಟೆಯ ಸುಮಾರಿಗೆ ಮೃತಪಟ್ಟಿರುತ್ತಾನೆ. ಆಂಜನೇಯ ಇವರನ್ನು ಗಂಗಾವತಿಯಿಂದ ಕೊಪ್ಪಳಕ್ಕೆ ಆಸ್ಪತ್ರೆಗೆ ಕಳುಹಿಸಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ಫಿರ್ಯಾಧಿಯ ಸಾರಾಂಶದ ಮೇಲಿಂದ  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

 
Will Smith Visitors
Since 01/02/2008