Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Monday, July 31, 2017

1] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 202/2017 ಕಲಂ. 279, 337 ಐ.ಪಿ.ಸಿ:.
ದಿನಾಂಕ 29-07-2017 ರಂದು 3-30 ಪಿ.ಎಂ.ಸುಮಾರಿಗೆ ಪಿರ್ಯಾದುದಾರರು ತಮ್ಮ ಲಾರಿ ನಂ.ಕೆ.ಎ.11/ ಎ-6789 ನೇದ್ದರಲ್ಲಿ ಬೂದಿ ಲೋಡಮಾಡಿಕೊಂಡು ಕೊಪ್ಪಳ - ಗಂಗಾವತಿ ರಸ್ತೆಯ ಮೇಲೆ ಹೋಗುತ್ತಿರುವಾಗ ಮಳೆ ಜೋರಾಗಿ ಬರುತ್ತಿದ್ದರಿಂದ ನಿಧಾನವಾಗಿ ಹೋಗುತ್ತಿರುವಾಗ ಲಾರಿಯ ಹಿಂದಿನಿಂದ ಕಾರ ನಂ ಕೆ.ಎ.37/ಎಂ 8577 ನೇದ್ದರ ಚಾಲಕನು ತನ್ನ ಕಾರನ್ನು ಅತೀ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಲಾರಿಯ ಹಿಂಬಾಗಕ್ಕೆ ಡಿಕ್ಕಿಕೊಟ್ಟು ಅಪಘಾತ ಮಾಡಿದ್ದರಿಂದ ಕಾರಿನಲ್ಲಿದ್ದವರಿಗೆ ಗಾಯ ಪೆಟ್ಟುಗಳಾಗಿರುತ್ತವೆ. ಎಂದು ಮುಂತಾಗಿದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೇನೆ.   
2] ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ. 114/2017 ಕಲಂ. 32, 34 ಅಬಕಾರಿ ಕಾಯ್ದೆ:
ದಿನಾಂಕ: 30-07-2017 ರಂದು ಮುಂಜಾನೆ 8-30 ಗಂಟೆಗೆ ಠಾಣೆಯಲ್ಲಿದ್ದಾಗ ಗಡಚಿಂತಿ ಗ್ರಾಮದಲ್ಲಿ ಅನಧಿಕೃತ ಮದ್ಯ ಮಾರಾಟ ಮಾಡುತ್ತಿದ್ದಾರೆ ಅಂತಾ  ಖಚಿತ ಬಾತ್ಮೀ ಪಿ.ಎಸ್.ಐ. ರವರಿಗೆ ಬಂದ ಮೇರೆಗೆ ಕೂಡಲೆ ಇಬ್ಬರು ಪಂಚರು ಹಾಗೂ ಸಿಬ್ಬಂದಿಯವರಾದ ಹೆಚ್.ಸಿ-11, ಮಪಿ.ಸಿ-211, ರವರೊಂದಿಗೆ ಗಡಚಿಂತಿ ಗ್ರಾಮಕ್ಕೆ ತಲುಪಿ ಅಲ್ಲಿ ಮಶೀದಿ ಹತ್ತಿರ ಮುಂಜಾನೆ 9-20 ಗಂಟೆಗೆ ತಲುಪಿ ಮುಂಜಾನೆ 9-25 ದಾಳಿಮಾಡಿದಾಗ ಯಲ್ಲವ್ವ ಗಂಡ ಗಂಗಪ್ಪ ದಂಡಿನ ಸಾ: ಗಡಚಿಂತಿ ಇವರ ಹತ್ತಿರ 90 ml HAYWARDS CHEERS WHISKY ಟೆಟ್ರಾ ಪಾಕೇಟಗಳು ಒಟ್ಟು 52 ಪಾಕೇಟಗಳು ಪ್ರತಿಯೊಂದಕ್ಕೆ 28-13 ರೂಪಾಯಿಗಳಂತೆ ಒಟ್ಟು 1462-76 ಹಾಗೂ ನಗದು ಹಣ 290-00  ರೂಪಾಯಿ ಸಿಕ್ಕಿದ್ದು ಸದರ ದಾಳಿ ಪಂಚನಾಮೆಯನ್ನು ಇಂದು ಮುಂಜಾನೆ 9-25 ಗಂಟೆಯಿಂದ ಮುಂಜಾನೆ 10-50 ಗಂಟೆಯವರಗೆ ನಿರ್ವಹಿಸಿದ್ದು ಇರುತ್ತದೆ. ಸದರ ಆರೋಪಿತಳು ತನ್ನ ಲಾಬಕ್ಕೋಸ್ಕರ ಮಾರಾಟ ಮಾಡಿ ಅಪರಾದ ಮಾಡಿದ್ದರಿಂದ ಸದರಿಯವಳನ್ನು ಮಹಿಳಾ ಸಿಬ್ಬಂದಿಯೊಂದಿಗೆ ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
3] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 84/2017 ಕಲಂ. 87 Karnataka Police Act.

ದಿನಾಂಕ:30-07-2017 ರಂದು ಮದ್ಯಾಹ್ನ 4-00 ಗಂಟೆ ಸುಮಾರಿಗೆ ಮಸಬಹಂಚಿನಾಳ ಗ್ರಾಮದ ಗ್ರಾ.ಪಂ. ಮಾರಾಟ ಮಳಿಗೆ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ದುಂಡಾಗಿ ಕುಳಿತುಕೊಂಡು ಪಣಕ್ಕೆ ಹಣ ಹಚ್ಚಿ ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ್-ಬಾಹರ್ ಎಂಬ ಜೂಜಾಟದಲ್ಲಿ ತೊಡಗಿದ್ದಾಗ ಪಿ.ಎಸ್.ಐ. ರವರು ಸಿಬ್ಬಂದಿಯೊಂದಿಗೆ ಅವರ ಮೇಲೆ ದಾಳಿ ಮಾಡಿ ಆರೋಪಿತರಿಂದ 3200=00 ರೂ.ಗಳನ್ನು ಹಾಗೂ ಇಸ್ಪೇಟ್ ಜೂಜಾಟದ ಸಾಮಗ್ರಿಗಳನ್ನು ಜಪ್ತ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

Saturday, July 29, 2017

1] ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ. 113/2017 ಕಲಂ. 78(3) Karnataka Police Act.
ಪಿ.ಎಸ್.. ಹಾಗೂ ಸಿಬ್ಬಂದಿಯವರು ಇಂದು ಸಾಯಾಂಕಾಲ 16-00 ಗಂಟೆಗೆ ಠಾಣೆಯಲ್ಲಿದ್ದಾಗ ಹನಮಸಾಗರದ ಚನ್ನಮ್ಮ ಸರ್ಕಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆಯುತ್ತಿದೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಸಿಬ್ಬಂದಿ ಹಾಗೂ ಇಬ್ಬರು ಪಂಚರ ಸಮೇತ ಹೋಗಿ ದಾಳಿ ಮಾಡಲಾಗಿ ಮಟಕಾ ಬರೆದುಕೊಂಡು ಹಣ ಪಡೆದುಕೊಳ್ಳುವವನು ಸಿಕ್ಕಿಬಿದಿದ್ದು, ಮಟಕಾ ಚೀಟಿ ಬರೆದುಕೊಡುವವನ ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು ಖಾಜೇಸಾಬ ತಂದೆ ದಾದೇಸಾಬ ಚೌಧರಿ, ವಯಾ: 61 ವರ್ಷ, ಜಾತಿ: ಮುಸ್ಲಿಂ, ಸಾ: ಹನಮಸಾಗರ, ಅಂತಾ ತಿಳಿಸಿದ್ದು ಅವನ ಹತ್ತಿರ ಮಟಕಾ ಚೀಟಿ, 1110=00 ರೂಪಾಯಿ ನಗದು ಹಣ ಹಾಗೂ ಒಂದು ಬಾಲಪೆನ್ನ ಜಪ್ತಮಾಡಿಕೊಂಡಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿದ್ದು ಇರುತ್ತದೆ.   
2] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 173/2017 ಕಲಂ. 34 ಅಬಕಾರಿ ಕಾಯ್ದೆ:

ಫಿರ್ಯಾದಿದಾರರು ದಿ:28-07-2017 ರಂದು ರಾತ್ರಿ 9-45 ಗಂಟೆಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೇ, ಇಂದು ದಿ:28-07-2017 ರಂದು ರಾತ್ರಿ 7-10 ಗಂಟೆಗೆ ಠಾಣಾ ವ್ಯಾಪ್ತಿಯ ಹಾಸಗಲ್ ಗ್ರಾಮದ ಗಂಗನಾಳ ಕ್ರಾಸ್ ಸಮೀಪ ಮೂರು ಜನ ವ್ಯಕ್ತಿಗಳು ಅಕ್ರಮವಾಗಿ ಮದ್ಯದ ಬಾಟಲಿಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದಿದ್ದರಿಂದ, ಫಿರ್ಯಾದಿದಾರರು ಸಿಬ್ಬಂದಿ ಸಂಗಡ ಕರೆದುಕೊಂಡು ರಾತ್ರಿ 8-00 ಗಂಟೆಗೆ ದಾಳಿ ಮಾಡಿ ಆರೋಪಿ ನಂ: 01 ನೇದ್ದವರಿಗೆ ವಶಕ್ಕೆ ತೆಗೆದುಕೊಂಡು, ಹಾಯವಾರ್ಡ್ಸ ಚೀಯರ್ಸ ವಿಸ್ಕಿ. 90 ಎಮ್.ಎಲ್. ಅಳತೆಯ ಒಂದು ಟೆಟ್ರಾಪಾಕೇಟ್ ಅಂ.ಕಿ. 28=13 ರೂ. ಹೀಗೆ ಒಟ್ಟು 62 ಟೆಟ್ರಾಪಾಕೇಟಗಳು ಅಂ.ಕಿ. 1,744=06.  ರೂ. ಬೆಲೆಬಾಳುವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿದ್ದು ಇರುತ್ತದೆ. 

Friday, July 28, 2017

1] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 198/2017 ಕಲಂ. 15(C) NDPS Act.
ದಿನಾಂಕ: 27-07-2017 ರಂದು ಮದ್ಯಾಹ್ನ 2-15 ಗಂಟೆಗೆ ಪಿರ್ಯಾದಿದಾರರು ಗಸಗಸೆ ಸಿಪ್ಪೆಯ ಮಾದಕ ವಸ್ತುವಿನ ದಾಳಿ ಪಂಚನಾಮೆ, ಮುದ್ದೆಮಾಲು ಹಾಗೂ ಒಬ್ಬ ಆರೋಪಿತನೊಂದಿಗೆ ವರದಿಯನ್ನು ಹಾಜರ ಪಡಿಸಿದ್ದು ಅದರ ಸಾರಾಂಶವೇನಂದರೆ,  ಇಂದು ದಿನಾಂಕ: 27-07-2017 ರಂದು ಮುಂಜಾನೆ 11-30 ಗಂಟೆ ಸುಮಾರಿಗೆ ಕೂಕನಪಳ್ಳಿ ಸೀಮಾದಲ್ಲಿರುವ ಬಲ್ ಪಂಜಾಬಿ ಡಾಬಾದ ಮಾಲೀಕರನಾದ ಮೇಲ್ಕಂಡ ಆರೋಪಿತನು ತನ್ನ ಡಾಬಾದ ಹಿಂದೆ ಹೊಲದಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅನಧೀಕೃತವಾಗಿ ಗಸಗಸೆ ಸಿಪ್ಪೆಯ ಮಾದಕ ವಸ್ತುವನ್ನು ಅಕ್ರಮವಾಗಿ ಇಟ್ಟುಕೊಂಡಿದ್ದು, ಸದರಿ ಗಸಗಸೆ ಸಿಪ್ಪೆಯ ಮಾದಕ ವಸ್ತುವನ್ನು ಪಿರ್ಯಾದಿದಾರರು ದಾಳಿ ಮಾಡಿ ಹಿಡಿದಿದ್ದು, ಆ ಕಾಲಕ್ಕೆ 5 ಳಿ ಕೆ.ಜಿ. ಗಸಗಸೆ ಸಿಪ್ಪೆಯ ಮಾದಕ ವಸ್ತು ಅಂದಾಜು ಮೌಲ್ಯ 5500-00 ರೂ. ವಸ್ತುವನ್ನು ಪಂಚರ ಸಮಕ್ಷಮದಲ್ಲಿ ಜಪ್ತ ಪಡಿಸಿಕೊಂಡಿರುತ್ತಾರೆ.  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತದೆ.
2] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 109/2017 ಕಲಂ. 505 ಐ.ಪಿ.ಸಿ:

ದಿನಾಂಕ: 27-07-2017 ರಂಧು ಬೆಳಿಗ್ಗೆ 10-45 ಗಂಟೆಯ ಸುಮಾರಿಗೆ ನನ್ನ ವಾಟ್ಸಾಪ್ ನ ಹಾಲುಮತ ಮಹಾಸಭಾದ ಗ್ರುಪ್ ನಲ್ಲಿ ನೋಡುತ್ತಿದ್ದಾಗ ಹಾಲುಮತ ಮಹಾಸಭಾದ ಸದಸ್ಯರಾಧ ನಿಂಗಜ್ಜ ಇವರ ಫೋನ್ ನಂ: 8123494264 ನೇದ್ದರಿಂದ ಒಂದು ಪೋಟೋ ಬಂದಿದ್ದು, ಅದರಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ರವರಿಗೆ ಹೂವಿನ ಹಾರ ಹಾಕಿ ಶವದಂತೆ ಕುಳಿಸಿರುವ ಪೋಟೋ ಇದ್ದು ಆಗ ನಾನು ಕೂಡಲೇ ನಿಂಗಜ್ಜ ರವರಿಗೆ ವಿಚಾರಿಸಲಾಗಿ ಸದರಿ ಪೋಟೋವನ್ನು ಗಂಗಾವತಿ ತಾಲೂಕ ಮೈಲಾಪೂರ ಗ್ರಾಮದ ವಾಗೀಶ ನವಲಿ ಹಿರೇಮಠ ಈತನು ದಿನಾಂಕ: 26-07-2017 ರಂದು ಸಂಜೆ 07-32 ಗಂಟೆಗೆ ತನ್ನ ಮೊಬೈಲ್ ಫೇಸ್ ಬುಕ್ಕಿನಲ್ಲಿ ಈ ರೀತಿ ಮಾಡಿ ಪೋಟೋ ತಯಾರಿಸಿ ಹರಿಬಿಟ್ಟು ಸಮಾಜಿಕ ಜಾಲತಾಣದ ಮೂಲಕ ಅವಮಾನ ಮಾಡಿರುತ್ತಾನೆ. ಅಂತಾ ನೀಡಿದ ದೂರಿನ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡೆನು.

Thursday, July 27, 2017

1] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 197/2017 ಕಲಂ. 78(3) Karnataka Police Act.
ದಿನಾಂಕ: 26-07-2017 ರಂದು 10-00 ಎ.ಎಂ. ಸುಮಾರಿಗೆ ಶಿವಪೂರ ಗ್ರಾಮದ ಹನುಮಪ್ಪನಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನಾದ ರಾಮಚಂದ್ರ ತಂ/ ತುಳಿಜಾರಾಮ್ ಕಾಂಬ್ಳೆ ಸಾ: ಹಳೆ ಶಿವಪೂರ ಇವನು  ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ, ಪಿರ್ಯಾದಿದಾರರಾದ ಶ್ರೀ ಕೆ.ಜಯಪ್ರಕಾಶ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತನನ್ನು ಹಿಡಿದುಕೊಂಡು ಅವರಿಂದ 430-00 ರೂ. ಮಟಕಾ ಜೂಜಾಟದ ನಗದು ಹಣ ಮತ್ತು ಒಂದು ಬಾಲ್ ಪೆನ್ ಹಾಗೂ ಒಂದು ಮಟಕಾ ಚೀಟಿಯನ್ನು ಜಪ್ತ ಪಡಿಸಿಕೊಂಡಿದ್ದು ಇರುತ್ತದೆ, ಅಂತಾ ಮುಂತಾಗಿದ್ದ ಫಿರ್ಯಾದಿ ಸಾರಾಂಶದ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.   
2] ಅಳವಂಡಿ ಪೊಲೀಸ್ ಠಾಣೆ ಯು.ಡಿ.ಆರ್. ನಂ. 14/2017 ಕಲಂ. 174 ಸಿ.ಆರ್.ಪಿ.ಸಿ:

ದಿನಾಂಕ: 26-07-2017 ರಂದು ಮುಂಜಾನೆ 9-30 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಮಾಳವ್ವ ಗಂಡ ಭೀಮಪ್ಪ ಯತ್ನಟ್ಟಿ ವಯ: 40 ವರ್ಷ ಜಾತಿ: ಕುರಬರ  ಉ: ಕೂಲಿಕೆಲಸ ಸಾ: ಹಿರೇಸಿಂದೋಗಿ  ತಾ:ಜಿ: ಕೊಪ್ಪಳ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬರೆದ ಒಂದು ಫಿರ್ಯಾದಿಯನ್ನು ಹಾಜರು ಪಡಿಸಿದ್ದು, ಅದರ ಸಾರಾಂಶವೆನೆಂದರೆ, ದಿನಾಂಕ: 25-07-2017 ರಂದು ರಾತ್ರಿ 10-30 ಗಂಟೆಯಿಂದ ಇಂದು ದಿನಾಂಕ: 26-07-2017 ಮುಂಜಾನೆ 6-15 ಗಂಟೆಯ ನಡುವಿನ ಅವಧಿಯಲ್ಲಿ ತನ್ನ ಗಂಡನಾದ ಭೀಮಪ್ಪ ಯತ್ನಟ್ಟಿ ವಯಸ್ಸು: 47 ವರ್ಷ ಈತನು ಶ್ರೀ ಧರ್ಮಸ್ಥಳ ಮಂಜುನಾಥ ಗುಂಪುಗಳಲ್ಲಿ ಮಾಡಿಕೊಂಡ ಸಾಲಭಾದೆಯಿಂದ ಜೀವನದಲ್ಲಿ ಜಿಗುಪ್ಸೆ ಹೊಂದಿ ವಿಷ ಸೇವನೆ ಮಾಡಿ ತಮ್ಮ ಹೊಲದಲ್ಲಿರುವ ಬೇವಿನ ಗಿಡಕ್ಕೆ ನೇಣು ಹಾಕಿಕೊಂಡು ಮೃತಪಟ್ಟಿದ್ದು ಅವನ ಮರಣದಲ್ಲಿ ಯಾವುದೇ ರೀತಿಯ ಯಾರ ಮೇಲೆ ಸಂಶಯ ವಗೈರೆ ಇರುವದಿಲ್ಲಾ. ಅಂತಾ ನೀಡಿದ ಫಿರ್ಯಾದಿ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ. 

Wednesday, July 26, 2017

1] ಬೇವೂರ ಪೊಲೀಸ್ ಠಾಣೆ ಗುನ್ನೆ ನಂ. 90/2017 ಕಲಂ. 143, 147, 148, 341, 323, 324, 326, 504 ಸಹಿತ 149 ಐ.ಪಿ.ಸಿ ಹಾಗೂ ಕಲಂ. 3(1)(10) 3(2), (5) /ಎಸ್.ಸಿ/ಎಸ್.ಟಿ ಪಿ.ಎ. ಕಾಯ್ದೆ.
ದಿನಾಂಕ: 25-07-2017 ರಂದು ಮಧ್ಯಾನ್ಹ 1 ಗಂಟೆಯ ಸುಮಾರಿಗೆ ಪಿರ್ಯಾದಿ ಹಾಗೂ ಗಾಯಾಳು ಆನಂದ ವಡ್ಡರ ಇವರು ಬೈರನಾಯಕನಹಳ್ಳಿಯಲ್ಲಿ ``ನಮ್ಮ ಹೊಲ ನಮ್ಮ ದಾರಿ'' ಎಂಬ ಯೋಜನೆಯ ಅಡಿಯಲ್ಲಿ ರಸ್ತೆ ಕಾಮಗಾರಿ ಕೆಲಸಕ್ಕೆ ಕುದ್ರಿಮೋತಿ ಸೀಮಾದಿಂದ ಮರಮನ್ನು ಟ್ರಾಕ್ಟರ ಇಂಜನ್ ನಂ ಕೆ.ಎ-37/ಟಿಎ-7982 ಹಾಗೂ ಟ್ರಾಲಿ ನಂ: ಕೆ.ಎ-37/ಟಿ.ಎ-8033 ನೇದ್ದರಲ್ಲಿ ತೆಗೆದುಕೊಂಡು ಬರುವ ಕುರಿತು ನೆಲಜೇರಿ ಸೀಮಾದಲ್ಲಿ ಬರುವ ಬಸಪ್ಪ ದನದಮನಿ ಇವರ ಹೊಲದ ಹತ್ತಿರ ಬಂಡಿ ರಸ್ತೆಯ ಮೇಲೆ ಟ್ರ್ಯಾಕ್ಟರನ್ನು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಆರೋಪಿತರೆಲ್ಲರೂ ಅಕ್ರಮಕೂಟ ರಚಿಸಿಕೊಂಡು ಬಂದು ಟ್ರ್ಯಾಕ್ಟರನ್ನು ತಡೆದು ನಿಲ್ಲಿಸಿ ''ನಿಮಗೆ ಇಲ್ಲಿ ರಸ್ತೆ ಇರುವದಿಲ್ಲ ಯಾಕೇ ನಮ್ಮ ಹೊಲದ ಹತ್ತಿರ ಹೊಡೆಯುತ್ತಿರಿ ವಡ್ಡ ಸೂಳ್ಳೆ ಮಕ್ಕಳೆ'' ಅಂತಾ ಎಲ್ಲರೂ ಅವಾಚ್ಯ ಶಬ್ದಗಳಿಂದ ಬೈದಾಡಿ ಜಾತಿ ನಿಂದನೆ ಮಾಡಿ ನಂತರ ಎಲ್ಲರೂ ಅವರಿಬ್ಬರನ್ನು ಟ್ರಾಕ್ಟರದಿಂದ ಕೆಳಗೆ ಇಳಿಸಿ ಆರೋಪಿ ನಂ: 1 ಈತನು ಅಲ್ಲಿಯೇ ಬಿದ್ದಿದ್ದ ಒಂದು ಕಟ್ಟಿಗೆ ಬಡಿಗೆಯನ್ನು ತೆಗೆದುಕೊಂಡು ಆನಂದ ವಡ್ಡರ ಇತನ ತಲೆಯ ಮೇಲೆ ಹೊಡೆದಿದ್ದರಿಂದ ಭಾರಿ ಸ್ವರೂಪದ ಒಳಪೆಟ್ಟಾಗಿ ಬಾವು ಬಂದಿದ್ದು ಮತ್ತು ಅವನ ಎಡಗಣ್ಣಿನ ಹುಬ್ಬಿನ ಹತ್ತಿರ, ಹಣೆಯ ಮೇಲೆ ಹೊಡೆದು ರಕ್ತಗಾಯ ಮಾಡಿದ್ದು ಆರೋಪಿ ನಂ: 3 ರಿಂದ 5 ಇವರೆಲ್ಲರೂ ಆನಂದ ಇತನಿಗೆ ಕೈಗಳಿಂದ ಹೊಡೆ ಬಡೆ ಮಾಡಿ ಕಾಲಿನಿಂದ ಮನಬಂದಂತೆ ಒದ್ದಿದ್ದು ಇರುತ್ತದೆ. ಆರೋಪಿ ನಂ: 2 ಈತನು ಒಂದು ಕಟ್ಟಿಗೆ ಬಡಿಗೆಯನ್ನು ತೆಗೆದುಕೊಂಡು ಪಿರ್ಯಾದಿಯ ತಲೆಯ ಮೇಲೆ ಹೊಡೆದು ರಕ್ತಗಾಯಗೊಳಿಸಿದ್ದು, ಆರೋಪಿ ನಂ: 6 ಮತ್ತು 7 ನೇದ್ದವರು ಪಿರ್ಯಾದಿದಾರನಿಗೆ ಕೈಗಳಿಂದ ಮೈಕೈಗೆ ಹೊಡೆ ಬಡೆ ಮಾಡಿ ಕಾಲಿನಿಂದ ಮನಬಂದಂತೆ ಒದ್ದಿದ್ದು ಇರುತ್ತದೆ.    
2] ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ. 106/2017 ಕಲಂ. 279, 337, 338 ಐ.ಪಿ.ಸಿ:
 ದಿನಾಂಕ: 25/07/2017 ರಂದು ಬೆಳಿಗ್ಗೆ  8:00 ಗಂಟೆಗೆ  ಫಿರ್ಯಾಧಿ ಮತ್ತು ಚರಣಕುಮಾರ ತಂದೆ ರಂಗನಾಥ ಸಾ:ಬಳ್ಳಾರಿ ಇಬ್ಬರೂ ಕೂಡಿ ಫಿರ್ಯಾಧಿ ಮೊಟರ್ ಸೈಕಲ್ ನಂ: ಕೆ.ಎ-37/ಇ.ಸಿ-0820 ನೇದ್ದನ್ನು ತಗೆದುಕೊಂಡು  ಫಿರ್ಯಾಧಿರಾನು ನಡೆಸುತ್ತಾ ಗಂಗಾವತಿ ಯಿಂದ ಹೊರಟಿದ್ದು. ಹಿರೇಮಾದಿನಾಳ ಗ್ರಾಮದ ದಾಟಿ ಮುಸಲಾಪೂರ ಕಡೆ ನಿಧಾವಾಗಿ ಹೋಗುತ್ತಿದ್ದಾಗ ಹಿರೇಮಾದಿನಾಳ-ಚಿಕ್ಕಮಾದಿನಾಳ ರಸ್ತಯ ಮೇಲೆ  ತಿರುವಿನಲ್ಲಿ ಮುಸಲಾಪೂರ ಕಡೆಯಿಂದ ಒಬ್ಬ ಮೋಟರ್ ಸೈಕಲ್ ಸವಾರನು ತನ್ನ ಮೋಟರ್ ಸೈಕಲನ್ನು ಅತಿಜೋರಾಗಿ ಹಾಗೂ ಅಲಕ್ಷತನದಿಂದ ನಡೆಸುಕೊಂಡು ಬಂದು  ಫಿರ್ಯಾಧಿಯ ಮೊಟರ್ ಸೈಕಲ್ ಗೆ  ಬೆಳಿಗ್ಗೆ ಸುಮಾರು 9:00 ಸುಮಾರಿಗೆ ಜೋರಾಗಿ ಟಕ್ಕರ್ ಕೊಟ್ಟು ಅಪಘಾತ ಪಡಿಸಿದ್ದು ಇದರಿಂದ ಎರಡೂ ಮೋಟರ್ ಸೈಕಲ್ ನವರು ನೆಲಕ್ಕೆ ಬಿದ್ದಿದೇವು ಇದರಿಂದ ಫಿರ್ಯಾಧಿಯ ನಡಕ್ಕೆ ಗದ್ದಕ್ಕೆ ತಲೆಗೆ ಹಾಗೂ ಎಡಗೈಗೆ ಒಳಪೆಟ್ಟು ಉಂಟಾಗಿದ್ದು ಇಂದೆ ಕುಳಿತ ಚರಣಕುಮಾರನಿಗೆ ಎಡಗೈ ಮುರಿದು ತಲೆ ಹೊಡೆದು ಭಾರಿ ರಕ್ತಗಾಯವಾಗಿದ್ದು. ಅಲ್ಲದೆ ಬಾಯಿಗೆ ಗಾಯವಾಗಿದ್ದು , ಇರುತ್ತದೆ ನಂತರ ಟಕ್ಕರ್ ಕೊಟ್ಟ ಮೋಟರ್ ಸೈಕಲ್ ನೋಡಲು ಅದರ ನಂಬರ್ ಕೆ.ಎ-36/ಯು.3076 ಅಂತಾ ಇದ್ದು ಅದನ್ನು ನಡೆಸುತ್ತಿದ್ದವನ ಹೆಸರು ಹನುಮೇಶ ತಂದೆ ದುರುಗಪ್ಪ ನಾಯಕ ವಯಾ:25 ವರ್ಷ ಸಾ: ಒಬಳಬಂಡಿ ಅಂತಲು ಹಾಗೂ ಅವನ ಹಿಂದೆ ಕುಳಿತವನ ಹೆಸರು ಮುಕ್ಕಾಲಗೌಡ ತಂದೆ ರಾಮನಗೌಡ ಸಾ: ಹಿರೇಮಾದಿನಾಳ  ಅಂತಾ ತಿಳಿದಿದ್ದು ಇವರಿಬ್ಬರಿಗೂ ಸಹ ಸಾಧ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ. ಪ್ರಕರಣದಾಖಲಿಸಿಕೊಂಡು ತನಿಖೆಯನ್ನು ಕೈಗೊಂದಿದ್ದು ಇರುತ್ತದೆ. 
3] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 102/2017 ಕಲಂ. 279, 338 ಐ.ಪಿ.ಸಿ ಹಾಗೂ 187 ಐ.ಎಂ.ವಿ. ಕಾಯ್ದೆ:
ದಿನಾಂಕ: 25-07-2017 ರಂದು ಮುಂಜಾನೆ 08 ಗಂಟೆ ಸುಮಾರಿಗೆ ಆರೋಪಿ ನಂ. 02 ನೇದವನು ಟ್ರ್ಯಾಕ್ಟರ್ ನಂ. ಕೆಎ-37/ಟಿ-8893 ನೇದ್ದನ್ನು ತಳಕಲ್ ಕಡೆಯಿಂದ ತಳಬಾಳ ಕಡೆಗೆ ಅತಿಜೋರು & ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ, ಎನ್.ಹೆಚ್-63 ರಸ್ತೆಯನ್ನು ದಾಟುತ್ತಿರುವಾಗ ಅದೇಸಮಯಕ್ಕೆ ಆರೋಪಿ ನಂ. 01 ನೇದವನು ಲಾರಿ ನಂ. ಕೆಎ-51/ಬಿ-7681 ನೇದ್ದನ್ನು ಗದಗ ಕಡೆಯಿಂದ ಕೊಪ್ಪಳ ಕಡೆಗೆ ಅತಿಜೋರು & ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಟ್ರ್ಯಾಕ್ಟರಿಗೆ ಟಕ್ಕರ್ ಕೊಟ್ಟು ಅಪಘಾತಪಡಿಸಿ ಎನ್.ಹೆಚ್-63 ರಸ್ತೆಯ ಪಕ್ಕದಲ್ಲಿದ್ದ ಪಿರ್ಯಾದಿದಾರನ ಎಗರೈಸ್ ಹೊಟೇಲ್ ಗೆ ಗುದ್ದಿಕೊಂಡು ಹೋಗಿ ಪಲ್ಟಿಯಾಗಿ ಬಿದ್ದಿದ್ದು ಇರುತ್ತದೆ. ಇದರಿಂದಾಗಿ ಆರೋಪಿ ನಂ. 02 ನೇದವನ ತಲೆಯ ಹಿಂಭಾಗ ರಕ್ತಗಾಯ, ಎಡಪಕ್ಕಡಿಗೆ ತೆರಚಿ ಭಾರಿ ಒಳಪೆಟ್ಟಾಗಿರುತ್ತದೆ. ಆರೋಪಿ ನಂ. 01 ನೇದವ ಹಾಗೂ ಲಾರಿಯ ಕ್ಲೀನರ್ ಓಡಿ ಹೋಗಿರುತ್ತಾರೆ. ಪ್ರಕರಣ ದಾಖಲಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ,

Tuesday, July 25, 2017

1] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 196/2017 ಕಲಂ. 78(3)  Karnataka Police Act.
ದಿನಾಂಕ: 25-07-2017 ರಂದು 10-00 ಎ.ಎಂ. ಸುಮಾರಿಗೆ ಹುಲಗಿ ಗ್ರಾಮದ ನಂದಿ ಸರ್ಕಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನಾದ ರಿಯಾಜ್ ಅಹಮದ ತಂ/ ಮಹ್ಮದ್ ಗೌಸ ಕಾಲೇಗಾರ ಇವನು  ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ, ಪಿರ್ಯಾದಿದಾರರಾದ ಶ್ರೀ ಕೆ.ಜಯಪ್ರಕಾಶ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತನನ್ನು ಹಿಡಿದುಕೊಂಡು ಅವರಿಂದ 1410-00 ರೂ. ಮಟಕಾ ಜೂಜಾಟದ ನಗದು ಹಣ ಮತ್ತು ಒಂದು ಬಾಲ್ ಪೆನ್ ಹಾಗೂ ಒಂದು ಮಟಕಾ ಚೀಟಿಯನ್ನು ಜಪ್ತ ಪಡಿಸಿಕೊಂಡಿದ್ದು , ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.     
2] ಯಲಬರ್ಗಾ ಪೊಲೀಸ್ ಠಾಣೆ ಗುನ್ನೆ ನಂ. 100/2017 ಕಲಂ. 379 IPC & Rule 4, 4(1), 4(A) MMRD 1957.
ದಿನಾಂಕ: 25-07-2017 ರಂದು ಬೆಳಗ್ಗೆ 9-40 ಆರೋಪಿತರಿಗೆ ಸೇರಿದ ಟ್ರಾಕ್ಟರ್ ನಂ: ಕೆಎ-26 ಟಿಎ-6550 ನೇದ್ದರಲ್ಲಿ ಇಬ್ಬರೂ ಕೂಡಿಕೊಂಡು  ಹಾಗೂ ಆರೋಪಿ ನಂ: 03 ಈತನು ಆರೋಪಿ 04 ಇವರು ಈತನಿಗೆ ಸಂಭಂದಿಸಿದ  ಟ್ರಾಕ್ಟರ್ ಇಂಜನ್ ನಂ: 39.1354/EB001129A ನೇದ್ದರಲ್ಲಿ  ಸರ್ಕಾರಕ್ಕೆ ಸೇರಿದ ಮುಧೋಳ ಹಳ್ಳದಲ್ಲಿಯ ಮರಳನ್ನು ಸರ್ಕಾರದಿಂದ ಅಥವಾ ಸಂಭಂದಿಸಿದ ಇಲಾಖೆಯಿಂದ ಯಾವುದೇ ಪರವಾನಿಗೆ ಅಥವಾ ಪಾಸ್ ವ ಪರ್ಮೀಟ್ ಪಡೆಯದೇ ಕಳ್ಳತನದಿಂದ ತುಂಬಿಕೊಂಡು ಮಾರಾಟ ಮಾಡಿ, ಲಾಭ ಗಳಿಸುವ ಉದ್ಧೇಶದಿಂದ ಆರೋಪಿ ನಂ: 01 ಮತ್ತು 03 ಇವರು ಟ್ರಾಕ್ಟರ್ ಗಳಲ್ಲಿ ತುಂಬಿಕೊಂಡು ಮಾರಾಟ ಮಾಡುವ ಸಲುವಾಗಿ ಕರಮುಡಿ ಕಡೆಯಿಂದ ಹಾಳಕೇರಿ ಕಡೆಗೆ ಹೋಗುತ್ತಿದ್ದಾಗ, ಬೆಳಗ್ಗೆ 09-40 ಗಂಟೆಗೆ ಫಿರ್ಯಾದಿದಾರರು, ತಮ್ಮ ಸಿಬ್ಬಂದಿ ಮತ್ತು ಪಂಚರೊಂದಿಗೆ ದಾಳಿ ಮಾಡಿದಾಗ ಸಿಕ್ಕಿ ಬಿದ್ದಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

1] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 195/2017 ಕಲಂ. 279, 338 ಐ.ಪಿ.ಸಿ:
ದಿನಾಂಕ 21-07-2017 ರಂದು ಪಿರ್ಯಾದುದಾರರು ಮುನಿರಾಬಾದ - ಹೊಸಪೇಟೆ ರಸ್ತೆಯೆ ಮೇಲೆ ನಡೆದುಕೊಂಡು ಹೋಗುತ್ತಿರುವಾಗ ಅದೇ ರಸ್ತೆಯೆ ಮೇಲೆ ಅವರ ಮಾವನಾದ ಅಬ್ದುಲ್ ಜಬ್ಬರ ಇವರು ಮುಂದೆ ಹೋಗುತ್ತಿರುವಾಗ ಮೋ,ಸೈ,ನಂ,ಕೆ.ಎ.37/ಇ.ಡಿ.3682 ನೇದ್ದರ ಚಾಲಕನು ಅತೀ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿಕೊಟ್ಟು ಅಪಘಾತ ಮಾಡಿದ್ದರಿಂದ ಅಬ್ದುಲ್ ಜಬ್ಬರ್ ಇವರಿಗೆ ತಲೆಗೆ ರಕ್ತಗಾಯವಾಗಿ ಕಾಲಿಗೆ ಗಾಯ ಒಳಪೆಟ್ಟಾಗಿದ್ದು ಮಾತನಾಡುತ್ತಿರಲಿಲ್ಲಾ ಮತ್ತು ಮೋ.ಸೈ.ಹಿಂದೆ ಕುಳಿತ ಮಹೇಶ ಇವರಿಗೂ ಗಾಯ ಪೆಟ್ಟುಗಳಾಗಿರುತ್ತವೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ. 
2] ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ. 112/2017 ಕಲಂ. 32, 34 Karnataka Excise Act.
ದಿನಾಂಕ: 24-07-2017 ರಂದು ರಾತ್ರಿ 8-10 ಗಂಟೆಗೆ ಠಾಣೆಯಲ್ಲಿದ್ದಾಗ ಹನಮಸಾಗರದ ನಾರಾಯಣಪ್ಪ ನಾಗೂರ ರವರ ಗೊಬ್ಬರದ ಅಂಗಡಿಯ ಮುಂದೆ ಬುಲೋರ ವಾಹನದಲ್ಲಿ ಸಾಗಿಸುತ್ತಿದ್ದಾನೆ ಅಂತಾ  ಖಚಿತ ಬಾತ್ಮೀ ಪಿ.ಎಸ್.ಐ. ರವರಿಗೆ ಬಂದ ಮೇರೆಗೆ ಕೂಡಲೆ ಇಬ್ಬರು ಪಂಚರು ಹಾಗೂ ಸಿಬ್ಬಂದಿಯವರಾದ ಹೆಚ್.ಸಿ-83, ಪಿ.ಸಿ-28, ರವರೊಂದಿಗೆ ಹನಮಸಾಗರದ ನಾರಾಯಣಪ್ಪ ನಾಗೂರ ರವರ ಅಂಗಡಿಯ ಮುಂದೆ ಬುಲೋರ ವಾಹನವಿದ್ದು ಅಲ್ಲಿಗೆ ರಾತ್ರಿ 8-40 ಗಂಟೆಗೆ ತಲುಪಿ ಆರೋಪಿ ಸುಬಾಷಚಂದ್ರ ನನ್ನು ಮತ್ತು 180 ಎಂ.ಎಲ ಓಲ್ಡ ಟವರನ್ 2 ಮದ್ಯದ ಬಾಟಲಿಗಳು ಅಂದಾಜು ಕಿಂ:137-12 ಹಾಗೂ ಒಂದು ಬುಲೋರ ವಾಹನ ನಂ: ಕೆ.ಎ-37 -9059 ಅಂದಾಜ ಕಿಂ: 50,000/- ರೂಪಾಯಿ ಆಗ ಬಹುದು ಹಾಗೂ 300/- ರೂಪಾಯಿ ನಗದು ಹಣ ಸಿಕ್ಕಿದ್ದು ಸದರ ದಾಳಿ ಪಂಚನಾಮೆಯನ್ನು ಇಂದು ರಾತ್ರಿ 8-40 ಗಂಟೆಯಿಂದ 09-55 ಗಂಟೆಯವರಗೆ ನಿರ್ವಹಿಸಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿದ್ದು ಇರುತ್ತದೆ.
3]  ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 233/2017 ಕಲಂ 34 Karnataka Excise Act.
ದಿನಾಂಕ:- 24-07-2017 ರಂದು  ಮುಕ್ಕುಂಪಿ ಗ್ರಾಮದಲ್ಲಿ ಬೆಟ್ಟದಪ್ಪ ಪೂಜಾರ ಎಂಬುವವನ ಅಕ್ರಮ ಮಧ್ಯ ಮಾರಾಟ ದಾಳಿ ಮುಗಿದ ನಂತರ ಪುನ: ಮುಕ್ಕುಂಪಿ ಗ್ರಾಮದ ಬನ್ನಿ ಕಟ್ಟೆಯ ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದಾರೆ ಅಂತಾ ಖಚಿತವಾದ ಭಾತ್ಮೀ ಶ್ರೀ ಪ್ರಕಾಶ ಮಾಳಿ, ಪಿ.ಎಸ್.ಐ ರವರಿಗೆ ಬಂದ ಮೇರೆಗೆ ಸಿಬ್ಬಂದಿಯವರು ಹಾಗೂ ಪಂಚರು ಕೂಡಿಕೊಂಡು ಸಂಜೆ 5:00 ಗಂಟೆಗೆ  ಬನ್ನಿ ಕಟ್ಟೆಯ ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ  ಒಂದು ಪ್ಲಾಸ್ಟಿಕ್ ಚೀಲದಲ್ಲಿ ಮಧ್ಯದ ಟೆಟ್ರಾ ಪಾಕೇಟಗಳನ್ನು ಇಟ್ಟುಕೊಂಡು ಯಾವುದೇ ಲೈಸೆನ್ಸ್ ಇಲ್ಲದೇ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ   ಇಂದ್ರೇಶ ತಂದೆ ಈಶಪ್ಪ ಕೆಂಗೇರಿ, ವಯಸ್ಸು 20 ವರ್ಷ, ಜಾತಿ: ಕುರುಬರು ಉ: ಒಕ್ಕಲುತನ ಸಾ: ಮುಕ್ಕುಂಪಿ.  ತಾ- ಗಂಗಾವತಿ  ಜಿ- ಕೊಪ್ಪಳ ಎಂಬುವನ ಮೇಲೆ ದಾಳಿ ಮಾಡಿ ಹಿಡಿದು  ಅಕ್ರಮವಾಗಿ ಮಾರಾಟ ಮಾಡಲು ಇಟ್ಟಿದ್ದ  (1) 8 PM Whisky 180 ml.ನ 7 ಟೆಟ್ರಾ ಪಾಕೇಟಗಳು (ಪ್ರತಿಯೊಂದರ ಬೆಲೆ ರೂ. 68.56)  ಅಂ.ಕಿ. ರೂ. 479.92  (2) Old Tavern Whisky  180 ml . ನ 15  ಟೆಟ್ರಾ ಪಾಕೇಟಗಳು (ಪ್ರತಿಯೊಂದರ ಬೆಲೆ ರೂ. 68.56) ಅಂ.ಕಿ. ರೂ. 1028.40  (3) Original Choise Whisky 180 ml. n 44 ಟೆಟ್ರಾ ಪಾಕೀಟ್ ಗಳು (ಪ್ರತಿಯೊಂದರ ಬೆಲೆ ರೂ. 56.27)  ಅಂ.ಕಿ. ರೂ. 2,475.88 ಈ ಪ್ರಕಾರ ಒಟ್ಟು 11.880 ಲೀಟರ್ ಮಧ್ಯ ಅಂದಾಜು ಕಿಮ್ಮತ್ತು  ರೂ. 3,984.20 /- ಹಾಗೂ ಮಧ್ಯ ಮಾರಾಟದಿಂದ ಬಂದ ನಗದು ಹಣ ರೂ. 50-00 ಗಳನ್ನು ಜಪ್ತು ಮಾಡಿದ್ದು ಇರುತ್ತದೆ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.  
4] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 185/2017 ಕಲಂ. 323, 353, 504, 506 ಐ.ಪಿ.ಸಿ:

ದಿನಾಂಕ 24-07-2017 ರಂದು ಬೆಳಿಗ್ಗೆ 11-00 ಗಂಟೆಗೆ ಶ್ರೀ ಟಿ.ಜೆ. ನಾಗರಾಜ ಪಿ.ಎಸ್.ಐ.-1, ಸಂಚಾರಿ ಪೊಲೀಸ್ ಠಾಣೆ, ಗಂಗಾವತಿ ರವರು ಒಂದು ಲಿಖಿತ ಫಿರ್ಯಾದಿಯನ್ನು ಹಾಜರುಪಡಿಸಿದ್ದು ಅದರ ಸಾರಾಂಶವೇನೆಂದರೆ, ಇಂದು ದಿನಾಂಕ 24-07-2017 ರಂದು ಬೆಳಿಗ್ಗೆ 9-30 ಗಂಟೆಗೆ ಗಂಗಾವತಿ ನಗರದಲ್ಲಿ ಪಟ್ರೋಲಿಂಗ್ ಮಾಢುತ್ತಾ ಗಾಂಧಿ ಸರ್ಕಲ್ ಗೆ ಬಂದು ಸಾರ್ವಜನಿಕ ಸುಗಮ ಸಂಚಾರಕ್ಕಾಗಿ ಇಡ್ಲಿ ಬಂಡಿಯನ್ನು ತೆಗೆಯುವಂತೆ ಖಾಸೀಂಸಾಬ ತಂದೆ ಖಾದರ್ ಸಾಬ, ವಯಸ್ಸು 50 ವರ್ಷ, ಉ: ಇಡ್ಲಿ ವ್ಯಾಪಾರ, ಸಾ: ಗಂಗಾವತಿ ಇವನಿಗೆ ಹೇಳಿದ್ದು, ಅಲ್ಲದೇ ನಿನ್ನೆ ದಿನಾಂಕ 23-07-2017 ರಂದು ನೀಡಿದ ಲಘು ಪ್ರಕರಣದ ನೋಟೀಸ್ ಕುರಿತಂತೆ ಮಾನ್ಯ ನ್ಯಾಯಾಲಯಕ್ಕೆ ಹೋಗಿ ದಂಡ ಪಾವತಿಸುವಂತೆ ತಿಳಿಸಿ ಸಿ.ಬಿ. ಸರ್ಕಲ್ ಕಡೆಗೆ ಹೋಗಿದ್ದು ಇರುತ್ತದೆ.  ನಂತರ ಬೆಳಿಗ್ಗೆ 10-30 ಗಂಟೆ ಸುಮಾರಿಗೆ ವಾಪಸ್ ಗಾಂಧಿ ಸರ್ಕಲ್ ಗೆ ಬಂದು ನೋಡಿದಾಗ ಸದರಿ ಖಾಸಿಂಸಾಬ ಇವನು ಗಾಂಧಿ ಸರ್ಕಲ್ ಮಧ್ಯದಲ್ಲಿಯೇ ನಿಂತುಕೊಂಡು ಇಡ್ಲಿ ವ್ಯಾಪಾರ ಮಾಡುತ್ತಿದ್ದು ಗಾಂಧಿ ಸರ್ಕಲ್ ದಲ್ಲಿ ಸಂಚಾರ ನಿಯಂತ್ರಣ ಕರ್ತವ್ಯದಲ್ಲಿದ್ದ ಮೇಘರಾಜ ಹೆಚ್.ಸಿ. 192 ರವರಿಗೆ ಬಂಡಿ ತೆಗೆಸುವಂತೆ ಹೇಳಿದ್ದು, ಅವರು ಖಾಸಿಂಸಾಬನಿಗೆ ಬಂಡಿ ತೆಗೆಯುವಂತೆ ಹೇಳಿದಾಗ ಬಂಡಿ ಮಾಲೀಕನು “ನಾನು ಬಂಡಿ ತೆಗೆಯುವುದಿಲ್ಲ, ನೀನು ನಿಮ್ಮ ಪಿ.ಎಸ್.ಐ. ಏನು ಮಾಡಿಕೊಳ್ಳುತ್ತೀರಿ ಮಾಡಿಕೊಳ್ಳಿ” ಅಂತಾ ಏರುಧ್ವನಿಯಲ್ಲಿ ಹೇಳಿದ್ದು, ಅದಕ್ಕೆ ನಾನು “ಏಕೆ ಬಂಡಿ ತೆಗೆಯುವುದಿಲ್ಲ, ಸಾರ್ವಜನಿಕರಿಗೆ ಏಕೆ ತೊಂದರೆ ನೀಡುತ್ತೀ” ಅಂತಾ ಹೇಳಿದ್ದಕ್ಕೆ ಸದರಿಯವನು “ಲೇ ಪೊಲೀಸ್ ಸೂಳೇಮಕ್ಕಳೇ ನೀವೇನು ಶಂಟಾ ನನಗೆ ಬಂಡಿ ತೆಗಿ ಅಂತಾ ಹೇಳುತ್ತೀರಿ, ನಿಮ್ಮದು ಪೊಲೀಸರದು ಬಹಳ ಆಗಿದೆ ನಿಮ್ಮನ್ನು ಜೀವ ಸಹಿತ ಉಳಿಸಬಾರದು ನನ್ನನ್ನು ನೀವು ಯಾರು ಅಂತಾ ತಿಳಿದುಕೊಂಡಿದ್ದೀರಿ ನನ್ನ ತಂಟೆಗೆ ಬಂದವರು, ಇದುವರೆಗೂ ಯಾರೂ ಜೀವಂತ ಉಳಿದುಕೊಂಡಿಲ್ಲಾ ನಿಮಗೆ ಈಗ ಒಂದು ಗತಿ ಕಾಣಿಸುತ್ತೇನೆ” ಅಂತಾ ಹೇಳುತ್ತಾ ಸಮವಸ್ತ್ರದಲ್ಲಿದ್ದ ನನ್ನ ಎದೆಯ ಮೇಲಿನ ಅಂಗಿಯನ್ನು ಹಿಡಿದುಕೊಂಡು ಎಳೆದಾಡಿದನು.  ಅಲ್ಲಿಯೇ ಇದ್ದ ಮೇಘರಾಜ, ಪ್ರಭುಗೌಡ ಎ.ಪಿ.ಸಿ. ರವರು ನನ್ನನ್ನು ಬಂದು ಬಿಡಿಸಿದರು.  “ಇನ್ನೊಮ್ಮೆ ಬಂದು ನನ್ನ ಬಂಡಿ ತೆಗೆಯೆಂದರೆ ನೀನು ಗಂಗಾವತಿಯಲ್ಲಿ ಕೆಲಸ ಮಾಡುವುದು ಕಷ್ಟ ಆಗುತ್ತದೆ” ಅಂತಾ ಬೆದರಿಕೆ ಹಾಕಿದ್ದು ಇರುತ್ತದೆ.  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

Monday, July 24, 2017

1] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 227/2017 ಕಲಂ. 87 Karnataka Police Act.
ದಿನಾಂಕ:- 23-07-2017 ರಂದು ಮಧ್ಯಾಹ್ನ ನಾನು ಠಾಣೆಯಲ್ಲಿರುವಾಗ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಮುಷ್ಟೂರು ಸೀಮಾದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ ಜೂಜಾಟ ನಡೆಯುತ್ತಿದೆ ಅಂತಾ ಖಚಿತವಾದ ಮಾಹಿತಿ ಶ್ರೀ ಪ್ರಕಾಶ ಮಾಳಿ, ಪಿ.ಎಸ್.ಐ. ರವರಿಗೆ ಬಂದ ಮೇರೆಗೆ ಇಬ್ಬರು ಪಂಚರನ್ನು ಬರಮಾಡಿಕೊಂಡು ಶ್ರೀ ವೆಂಕಟೇಶ ಚೌವ್ಹಾಣ ಎ.ಎಸ್.ಐ. ಹಾಗೂ ಸಿಬ್ಬಂದಿಯವರಾದ ಹೆಚ್.ಸಿ. 44, 191,  ಪಿ.ಸಿ. 354, 363, 366, 110  ರವರನ್ನು ಕರೆದುಕೊಂಡು ಹೋಗಿ ಕೂಡಲೇ ಅವರ ಮೇಲೆ ದಾಳಿ ಮಾಡಲಾಗಿ ಜೂಜಾಟದಲ್ಲಿ ತೊಡಗಿದ್ದ 4 ಜನರು ಸಿಕ್ಕಿ ಬಿದ್ದಿದ್ದುಸಿಕ್ಕವರಿಂದ ಹಾಗೂ ಸ್ಥಳದಿಂದ ಜೂಜಾಟದ ನಗದು ಹಣ ರೂ. 7,440 /- ಗಳು, 52 ಇಸ್ಪೀಟ್ ಎಲೆಗಳು, ಹಾಗೂ ನೆಲದ ಮೇಲೆ ಹಾಸಿದ್ದ ಒಂದು ಹಳೆಯ ಪ್ಲಾಸ್ಟಿಕ್ ಬರಕಾ ಸಿಕ್ಕಿದ್ದು ಇರುತ್ತವೆ. ಪ್ರಕರಣ ದಾಖಲು ಮಾಡಿದ್ದು ಇರುತ್ತದೆ.
2]  ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 228/2017 ಕಲಂ 457, 380 ಐ.ಪಿ.ಸಿ:
ದಿನಾಂಕ: 23-07-2017 ರಂದು 7:00 ಪಿಎಂ.ಕ್ಕೆ ಫಿರ್ಯಾದಿದಾರರಾದ  ಸುದರ್ಶನ ವೈದ್ಯ ತಂದೆ ದಿ: ವೆಂಕಟರಾವ್ ವೈದ್ಯ, ವಯಸ್ಸು 51 ವರ್ಷ, ಫಿರ್ಯಾದಿ ನೀಡಿದ್ದು “ನಿನ್ನೆ ದಿನಾಂಕ. 22-07-2017 ರಂದು ರಾತ್ರಿ 9-00 ಗಂಟೆಯಿಂದ ಇಂದು ದಿನಾಂಕ. 23-07-2017 ರಂದು ಬೆಳಿಗ್ಗೆ 08:00 ಗಂಟೆಯ ಅವಧಿಯೊಳಗೆ ಯಾರೋ ಕಳ್ಳರು  ಶ್ರೀರಾಮನಗರದ ಗುಂಡೂರು ರಸ್ತೆಯ ಪಕ್ಕದ ಪೆಟ್ರೋಲ್ ಬಂಕ್ ಹಿಂಭಾಗದಲ್ಲಿರುವ ಶ್ರೀ ವೀರ ಬ್ರಹ್ಮೇಂದ್ರ ಸ್ವಾಮಿ ದೇವಸ್ಥಾನದ ಬೀಗವನ್ನು ಮುರಿದು ಒಳಗೆ ಪ್ರವೇಶ ಮಾಡಿ ಶ್ರೀ ವೀರ ಬ್ರಹ್ಮೇಂದ್ರ ಸ್ವಾಮಿ ಮತ್ತು ಗೋವಿಂದಮಾಂಬ ಇವರ ತಲೆಯ ಮೇಲಿದ್ದ ಎರಡು ಬೆಳ್ಳಿಯ ಕಿರೀಟಗಳು ಅಂದಾಜು 500 ಗ್ರಾಂ ಅಂ.ಕಿ. ರೂ. 81,000-00 (2 ವರ್ಷಗಳ ಹಿಂದಿನ ಬೆಲೆ) ಬೆಲೆ ಉಳ್ಳದ್ದನ್ನು ಕಳವು ಮಾಡಿಕೊಂಡು ಹೋಗಿದ್ದು ಇರುತ್ತದೆ. ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ. 
3] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 194/2017 ಕಲಂ. 13, 32, 34 Karnataka Excise Act.

ದಿನಾಂಕ:  23-07-2016 ರಂದು ಆರೋಪಿತನು ಮಹ್ಮದನಗರದ ತನ್ನ ಮನೆಯಲ್ಲಿ ಯಾವುದೇ ಅಧೀಕೃತ ಪರವಾನಿಗೆ ಇಲ್ಲದೆ ಅನಧೀಕೃತವಾಗಿ ಅಕ್ರಮ ಮಧ್ಯವನ್ನು ತಯಾರಿಸುತ್ತಿದ್ದು, ಆ ಕಾಲಕ್ಕೆ ಶ್ರೀ. ಜಯಪ್ರಕಾಶ ಪಿ.ಎಸ್.ಐ. ಹಾಗೂ ಸಿಬ್ಬಂದಿ ಸಮೇತ ದಾಳಿ ಮಾಡಿದ್ದು, ಆರೋಪಿ ಪುಲ್ಲಿನಾಯ್ಕ ತಂದೆ ತಿಪ್ಪಾನಾಯ್ಕ ವಯ: 58, ಜಾತಿ: ಲಮಾಣಿ, ಉ: ಕೂಲಿ ಕೆಲಸ ಸಾ: ಮಹ್ಮದನಗರ ಎಂದು ತಿಳಿಸಿರುತ್ತಾನೆ.  ಸದರಿಯವನಿಂದ 250 ಎಂ.ಎಲ್.ನಷ್ಟು ಮಧ್ಯ ತಯಾರಿಕೆಯ ರಸಾಯನಿಕ ವಸ್ತು ಮತ್ತು ಒಂದು ಹುಟ್ಟು (ಕೋಲು) ಇವುಗಳನ್ನು ಜಪ್ತ ಪಡಿಸಿಕೊಂಡಿರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ.

Sunday, July 23, 2017

1] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 182/2017 ಕಲಂ. 143, 147, 148, 323, 324, 395, 504, 506 ಸಹಿತ 149 ಐ.ಪಿ.ಸಿ:
ದಿನಾಂಕ 22-07-2017 ರಂದು ಸಂಜೆ 4-00 ಗಂಟೆಗೆ ಶ್ರೀ ಖಾಜಾಹುಸೇನ್ ತಂದೆ ಮೆಹಬೂಬಸಾಬ, 51 ವರ್ಷ, ಜಾ: ಮುಸ್ಲಿಂ, ಉ: ಶಾಮಿಯಾನ ಸಪ್ಲಾಯರ್ ಕೆಲಸ, ಸಾ: ಪ್ರಶಾಂತನಗರ, ಗಂಗಾವತಿ ರವರು ಠಾಣೆಗೆ ಬಂದು ತಮ್ಮದೊಂದು ಫಿಯರ್ಾದಿ ನೀಡಿದ್ದು ಅದರ ಸಾರಂಶವೇನೆಂದರೆ, ನನ್ನ ಮಗನಾದ ಅಜೀಜ್,  23 ವರ್ಷ ಇವನು ಮೆಕ್ಯಾನಿಕ್ ಇದ್ದು, ಚಾಲಕನಾಗಿಯೂ ಕೆಲಸ ಮಾಡುತ್ತಾನೆ.  ನಿನ್ನೆ ದಿನಾಂಕ 21-07-2017 ರಂದು ನಮ್ಮ ಓಣಿಯಲ್ಲಿರುವ ತಸ್ಲೀಮ್ ತಂದೆ ಸಾಧಿಕ್ಸಾಬ ಇವಳು ತನ್ನ ಸ್ನೇಹಿತರೊಂದಿಗೆ ಪಿಕ್ನಿಕ್ ಹೋಗುತ್ತಿದ್ದು, ಕಾರಣ ನೀನೂ ನಮ್ಮೊಂದಿಗೆ ಬರಬೇಕೆಂದು ತಿಳಿಸಿದ್ದರಿಂದ ನನ್ನ ಮಗನು ಕಾರನ್ನು ತೆಗೆದುಕೊಂಡು ಅವರನ್ನು ಬಳ್ಳಾರಿಗೆ ಕರೆದುಕೊಂಡು ಹೋಗಿದ್ದು, ನಂತರ ವಾಪಸ್ ಗಂಗಾವತಿಗೆ ಬಂದಿದ್ದು ಇದೆ.  ನಂತರ ರಾತ್ರಿ 9-00 ಗಂಟೆ ಸುಮಾರಿಗೆ ನನ್ನ ಮಗ ಅಜೀಜನಿಗೆ ಕೈಸರ್ ಮತ್ತಿತರರು ಹೊಡೆಯುತ್ತಿದ್ದಾರೆ ಅಂತಾ ವಿಷಯ ತಿಳಿದು ಹೋಗಿ ನೋಡಲಾಗಿ ನನ್ನ ಮಗ ಅಜೀಜನಿಗೆ ಹಣೆಗೆ, ಮುಖಕ್ಕೆ ಹಾಗೂ ಮೈಕೈಗೆ ತರಚಿದ ಗಾಯಗಳಾಗಿದ್ದವು.   ಅವನಿಗೆ ವಿಚಾರಿಸಲಾಗಿ ನಾನು ಎ.ಪಿ.ಎಂ.ಸಿ. ಏರಿಯಾದ 21ನೇ ಮಳಿಗೆ ಹತ್ತಿರ ನಿಂತಿದ್ದಾಗ ಏಕಾಏಕಿ (1) ಕೈಸರ್ ತಂದೆ ಶಫೀಸಾಬ ಇವನು ಅವನೊಂದಿಗೆ (2) ಇಮ್ರಾನ್ ತಂದೆ ಸಾಧಿಕಸಾಬ, (3) ಮೆಹಬೂಬ ಬಿಲ್ಡರ್ ತಂದೆ ಬಾಬಣ್ಣ, (4) ಇಬ್ಬು, (5) ಅಜ್ಜು, (6) ಸದ್ದಾಂ, (7) ನವಾಜ್ ಇವರೆಲ್ಲರೂ ಬಂದು ಏಯ್ ಸೂಳೇಮಗನೇ ನಮ್ಮ ಹೆಣ್ಣಮಕ್ಕಳನ್ನು ಕಕರ್ೊಂಡು ಹೊಗ್ತಿ ಏನಲೇ  ಅಂತಾ ಅನ್ನುತ್ತಾ ಕೈಸರನು ತನ್ನ ಕೈಯಲ್ಲಿದ್ದ ಕಟ್ಟಿಗೆಯಿಂದ ನನ್ನ ಹಣೆಗೆ ಹೊಡೆದಿದ್ದು, ಉಳಿದವರೆಲ್ಲರೂ ಹಾಕ್ರಿ ಆ ಸೂಳೇಮಗ್ಗ ಬಿಡಬ್ಯಾಡ್ರಿ ಅಂತಾ ಅನ್ನುತ್ತಾ ಕೈಯಿಂದ ಬೆನ್ನಿಗೆ, ಮೈಕೈಗೆ ಹೊಡೆಬಡೆ ಮಾಡಿದ್ದು ಅಲ್ಲದೇ ಎಲ್ಲರೂ ಸೇರಿ ನನ್ನನ್ನು ನೆಲಕ್ಕೆ ಹಾಕಿ ಕಾಲಿನಿಂದ ಒದ್ದಿರುತ್ತಾರೆ. ಅಲ್ಲದೇ ನನ್ನ ಹತ್ತಿರವಿದ್ದ ರೂ. 48,000-00 ಗಳನ್ನೂ ಸಹಾ ಕಸಿದುಕೊಂಡಿರುತ್ತಾರೆ. ಅಲ್ಲದೇ ಅವರೆಲ್ಲರೂ ಭೋಸುಡಿಕೆ, ನಮ್ಮ ಹೆಣ್ಣುಮಕ್ಕಳ ತಂಟೆಗೆ ಬಂದ್ರ ನಿನ್ನ ಉಳಸಂಗಿಲ್ಲ, ಹುಷಾರ್ ಅಂತಾ ಅನ್ನುತ್ತಾ ಹೊರಟು ಹೋದರು. ಅಂತಾ ತಿಳಿಸಿದನು.  ನಂತರ ನನ್ನ ಮಗನನ್ನು ಕರೆದುಕೊಂಡು ಠಾಣೆಗೆ ಬಂದಿದ್ದು, ಅಲ್ಲಿಂದ ನನ್ನ ಮಗನನ್ನು ಚಿಕಿತ್ಸೆ ಕುರಿತು ಸಕರ್ಾರಿ ಆಸ್ಪತ್ರೆ, ಗಂಗಾವತಿಗೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಸಕರ್ಾರಿ ಆಸ್ಪತ್ರೆ, ಕೊಪ್ಪಳಕ್ಕೆ ಕರೆದುಕೊಂಡು ಹೋಗಿದ್ದು, ಚಿಕಿತ್ಸೆಗಾಗಿ ದಾಖಲು ಮಾಡಿ ಈಗ ತಡವಾಗಿ ಠಾಣೆಗೆ ಬಂದಿರುತ್ತೇನೆ.  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2]  ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 183/2017 ಕಲಂ. 379 ಐ.ಪಿ.ಸಿ:
ದಿನಾಂಕ 22-07-2017 ರಂದು 17-00 ಗಂಟೆಗೆ ಜಿ.ವಿಠ್ಠಲ ತಂದೆ ಮಲ್ಲಯ್ಯ ಗಾಜುಲ ವಯಾ: 70 ವರ್ಷ ರವರು ಠಾಣೆಗೆ ಬಂದು ತಮ್ಮದೊಂದು ಗಣಕಿಕೃತ ಫಿರ್ಯಾದಿ ನೀಡಿದ್ದು ಅದರ ಸಾರಂಶವೇನೆಂದರೆ.  ದಿ: 19-07-2017  ರಂದು ಮಧ್ಯಾಹ್ನ 12-30 ಪಿ ಎಮ್  ಗಂಟೆಯಿಂದ 2-00 ಪಿ ಎಮ್ ಗಂಟೆಯ ಮಧ್ಯದ  ಅವಧಿಯಲ್ಲಿ ಯಾರೋ ಕಳ್ಳರು ಗಂಗಾವತಿ ನಗರದ ಗಂಗಾವತಿ ನಗರದ  ಕೋರ್ಟಿನ ಕಂಪೌಂಡ ಮುಂಭಾಗದ ಬಲ ಬಾಗದಲ್ಲಿ ನಿಲ್ಲಿಸಿದ ಪಿರ್ಯಾಧಿದಾರರ ಹೊಂಡ್  ಕಂಪನಿಯ ಡ್ರೀಮ್ ಯುಗ ಸೈಕಲ್  ಮೋಟಾರ ನಂ KA37 - U 9833   ಚಾಸ್ಸಿ ನಂ: ME4JC583HC8048780  ಇಂಜಿನ್ ನಂ JC58E1049367 ಇದ್ದು  ಸಿಲ್ವರ್  ಬಣ್ಣದ್ದು  ಅಂ.ಕಿ 25,000-00.ಬೆಲೆ ಬಾಳುವುದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 220/2017 ಕಲಂ. 87 Karnataka Police Act.
ದಿನಾಂಕ : 22-07-2017 ರಂದು ಸಾಯಂಕಾಲ 06-30 ಗಂಟೆಗೆ ಮಾನ್ಯ ಪಿ.ಎಸ್.ಐ ಸಾಹೇಬರು ಕುಷ್ಠಗಿ ಪೊಲೀಸ ಠಾಣೆರವರು ಠಾಣೆಗೆ ಬಂದು ಒಂದು ವರದಿ ಮತ್ತು ಪಂಚನಾಮೆಯನ್ನು ಹಾಜರು ಪಡಿಸಿದ್ದು ಜುಂಜಲಕೊಪ್ಪ ಗ್ರಾಮದ ಸಮುದಾಯ ಭವನದ ಮುಂದೆ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಅಂದರ ಬಾಹರ ಎಂಬ ಇಸ್ಪಿಟ್ ಜೂಜಾಟ ನಡೆದಿದೆ ಅಂತಾ ತಿಳಿದು ಬಂದಿದ್ದು ಆಗ ಪಿರ್ಯಾಧಿದಾರರು ಮತ್ತು ಸಿಬ್ಬಂದಿಯವರಾದ ಸಿಬ್ಬಂದಿಯವರಾದ HC-70 ಅತೀಕಅಹ್ಮದ್ , PC-116 ಸಂಗಮೇಶ, PC-344 ಸಂಗಪ್ಪ ಮೇಟಿ, PC-184 ಮಂಜುನಾಥ, PC-407 ಜೈರಾಮ ಹಾಗೂ ನಮ್ಮ ಸರಕಾರಿ ಜೀಪ ನಂ: ಕೆ.-37-ಜಿ-292 ನೇದ್ದರಲ್ಲಿ ಅದರ ಚಾಲಕ ಶ್ರೀನಾಥ ಎ.ಪಿ.ಸಿ-180 ಮತ್ತು ಇಬ್ಬರು ಪಂಚರೊಂದಿಗೆ ಎಲ್ಲರೂ ಕೂಡಿ ಹೋಗಿ ರೇಡ್ ಮಾಡಿ 8 ಜನ ಆರೋಪಿತರು ಸಿಕ್ಕಿದ್ದು ಇರುತ್ತದೆ. ಹಾಗೂ ಆರೋಪಿತರಿಂದ ಇಸ್ಪೆಟ್ ಜೂಜಾಟದ ಒಟ್ಟು ನಗದು ಹಣ 8145=00 ರೂ, 52 ಇಸ್ಪೆಟ್ ಎಲೆಗಳು, ಹಾಗೂ ಒಂದು ಹಳೆ ನ್ಯೂಸ್ ಪೇಪರನ್ನು ಪಂಚನಾಮೆ ಕಾಲಕ್ಕೆ ಜಪ್ತಿ ಮಾಡಿಕೊಂಡು ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಬಂದು ಹಾಜರು ಪಡಿಸಿದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
4] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ. 99/2017 ಕಲಂ. 32. 34 Karnataka Excise Act.

ದಿನಾಂಕ: 22-07-2017 ರಂದು ಮಧ್ಯಾಹ್ನ 3-30 ಗಂಟೆ ಸುಮಾರಿಗೆ ಆರೋಪಿತನು ವಜ್ರಬಂಡಿ ಸೀಮಾದ ವಜ್ರಬಂಡಿ-ಮಂಡಲಮರಿ ರಸ್ತೆಯ ಮೇಲೆ ಶ್ರೀ ದ್ಯಾಮಪ್ಪ ಪೂಜಾರ ಇವರ ಹೊಲದ ಹತ್ತಿರ. ಯಾವುದೇ ಪರವಾನಿಗೆ ಇಲ್ಲದೇ ಮಾರಾಟ ಮಧ್ಯಸಾರ ಟೆಟ್ರಾ ಪಾಕೀಟಗಳನ್ನು ತಮ್ಮ ಗ್ರಾಮದಲ್ಲಿ ಮಾರಾಟ ಮಾಡಿ ಲಾಭ ಗಳಿಸುವ ಉದ್ಧೇಶದಿಂದ ಒಂದು ಕೈ ಚೀಲದಲ್ಲಿ ಹಾಕಿಕೊಂಡು ಹೋಗುತ್ತಿದ್ದಾಗ ಶ್ರೀ. ವಿನಾಯಕ ಪಿ.ಎಸ್.ಐ ರವರು, ತಮ್ಮ ಸಿಬ್ಬಂದಿ ಮತ್ತು ಪಂಚರೊಂದಿಗೆ ದಾಳಿ ಮಾಡಿ, ಆರೋಪಿತನಿಂದ 90 ML ನ HAYWARDS CHEERS WHISKY - ಒಟ್ಟು 61 (ಅರವತ್ತೊಂದು) ಟೆಟ್ರಾ ಪಾಕೀಟಗಳು. ಪ್ರತಿಯೊಂದಕ್ಕೆ-28.13 ರೂ.ಗಳಂತೆ ಒಟ್ಟು 1,715.93 ರೂ.ಗಳು ಸಿಕ್ಕಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ. 

Saturday, July 22, 2017

1] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 106/2017 ಕಲಂ. 379 ಐ.ಪಿ.ಸಿ:
ದಿನಾಂಕ: 21-07-2017 ರಂದು ಮದ್ಯಾಹ್ನ 2-30 ಗಂಟೆಗೆ ಪಿರ್ಯಾಧಿದಾರರಾದ ±Áರದಾ ಗಂಡ ಮಾನಪ್ಪ ಬಡಿಗೇರ ಸಾ ಹಲಗೇರಿ ತಾ ಕೊಪ್ಪಳ ಇವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಇಂದು ಮುಂಜಾನೆ ಫಿರ್ಯಾದಿದಾರರು ಮತ್ತು ಅವರ ಸ್ನೇಹಿತೆ ರೇಣುಕಾ ಗಂಡ ದ್ಯಾಮಪ್ಪ ಗುಡ್ಲಾನೂರ ಕೂಡಿಕೊಂಡು ಧರ್ಮಸ್ಥಳ ಸಂಘದವರು ನೀಡಿದ ಚೇಕ್ ನ್ನು ಡ್ರಾ ಮಾಢಿಕೊಳ್ಳಲು ಕೊಪ್ಪಳದ ಯೂನಿಯನ್ ಬ್ಯಾಂಕ್ ಗೆ ಬಂದು ರೂ 1,50,000=00 ಹಣವನ್ನು ಡ್ರಾ ಮಾಡಿಕೊಂಡು ಆ ಹಣವನ್ನು ತಮ್ಮ ಬ್ಯಾಗಿನಲ್ಲಿ ಹಾಕಿಕೊಂಡು ಬಸ್ ನಿಲ್ದಾಣಕ್ಕೆ ಬಂದು ಬಸ್ ನಿಲ್ದಾಣದ ಹತ್ತಿರ ಹಲಗೇರಿಗೆ ಹೋಗುವ ಆಟೋದ ಹತ್ತಿರ ಬಂದು ತಮ್ಮೂರಿಗೆ ಹೋಗುವ ಆಟೋವನ್ನು ಹತ್ತಿ ಕೂಳಿತುಕೊಂಡಾಗ ಆಗ ರೇಣುಕಾ ಇವರು ಬ್ರೇಡ್ ತರಲು ಕೆಳಗೆ ಇಳಿದಾಗ ಯಾರೋ ಒಬ್ಬನು ಫಿರ್ಯಾದಿದಾರರ ಹತ್ತಿರ ಬಂದು ಇಲ್ಲಿ ಹಣ ಬಿದ್ದಿರುತ್ತವೆ ನೋಡಿ ಅಂದಾಗ ಫಿರ್ಯಾದಿದಾರರು ಹಣ ತೆಗೆದುಕೊಳ್ಳಲು ಕೆಳಗೆ ಇಳಿದಾಗ ಯಾರೋ ಕಳ್ಳರು ಆಟೋದಲ್ಲಿದ್ದ ನನ್ನ ಹಣ ರೂ 1,50,000=00 ಮತ್ತು ಬ್ಯಾಂಕ್ ದಾಖಲಾತಿಗಳು ಮತ್ತು ಎ.ಟಿ.ಎಮ್ ಕಾರ್ಡಾ ಇರುವ ಬ್ಯಾಗ್ ನ್ನು ತೆಗೆದುಕೊಂಡು ಹೋದನು ಆಗ ಫಿರ್ಯಾದಿದಾರರು ಚಿರಾಡಿದಾಗ ಅವನು ಬ್ಯಾಗ್ ನ್ನು ತೆಗೆದುಕೊಂಡು ಹೋದನು ಅಂತಾ ಮುಂತಾಗಿ ಮುಂತಾಗಿ ಇರುವ ಫಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 218/2017 ಕಲಂ. 87 Karnataka Police Act.
ದಿನಾಂಕ : 21-07-2017 ರಂದು ರಾತ್ರಿ 07-30 ಗಂಟೆಗೆ ಮಾನ್ಯ ಪಿ.ಎಸ್.ಐ ಸಾಹೇಬರಿಗೆ ಮಾಹಿತಿ ಬಂದಿದ್ದು ಕಲಾಲಬಂಡಿ ಗ್ರಾಮದ ಮಾರುತೇಶ್ವರ ದೇವಸ್ಥಾನದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಅಂದರ ಬಾಹರ ಎಂಬ ಇಸ್ಪಿಟ್ ಜೂಜಾಟ ನಡೆದಿದೆ ಅಂತಾ ತಿಳಿದು ಬಂದಿದ್ದು ಆಗ ಪಿರ್ಯಾಧಿದಾರರು ಮತ್ತು ಸಿಬ್ಬಂದಿಯವರಾದ ಪುಂಡಲೀಕಪ್ಪ ಎ.ಎಸ್., PC-344, 117, 407 ಹಾಗೂ ನಮ್ಮ ಸರಕಾರಿ ಜೀಪ ನಂ: ಕೆ.-37-ಜಿ-292 ನೇದ್ದರಲ್ಲಿ ಅದರ ಚಾಲಕ ಶ್ರೀನಾಥ ಎ.ಪಿ.ಸಿ-180 ಮತ್ತು ಇಬ್ಬರು ಪಂಚರೊಂದಿಗೆ ಎಲ್ಲರೂ ಕೂಡಿ ಹೋಗಿ ರೇಡ್ ಮಾಡಿ 4 ಜನ ಆರೋಪಿತರು ಸಿಕ್ಕಿದ್ದು ಇರುತ್ತದೆ. ಹಾಗೂ ಆರೋಪಿತರಿಂದ ಇಸ್ಪೆಟ್ ಜೂಜಾಟದ ಒಟ್ಟು ನಗದು ಹಣ 3800=00 ರೂ, 52 ಇಸ್ಪೆಟ್ ಎಲೆಗಳು, ಹಾಗೂ ಒಂದು ಹಳೆ ನ್ಯೂಸ್ ಪೇಪರನ್ನು ಪಂಚನಾಮೆ ಕಾಲಕ್ಕೆ ಜಪ್ತಿ ಮಾಡಿಕೊಂಡು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ. 107/2017 ಕಲಂ. 78(3) Karnataka Police Act.
ದಿನಾಂಕ: 21-07-2017 ರಂದು ಪಿ.ಎಸ್.. ಹಾಗೂ ಸಿಬ್ಬಂದಿಯವರು ಸಾಯಾಂಕಾಲ 16-00 ಗಂಟೆಗೆ ಠಾಣೆಯಲ್ಲಿದ್ದಾಗ ವೆಂಕಟಾಪೂರ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆಯುತ್ತಿದೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಸಿಬ್ಬಂದಿ ಹಾಗೂ ಇಬ್ಬರು ಪಂಚರನ್ನು ಕರೆದುಕೊಂಡು ಹೋಗಿ ದಾಳಿ ಮಾಡಲಾಗಿ ಮಟಕಾ ಬರೆದುಕೊಂಡು ಹಣ ಪಡೆದುಕೊಳ್ಳುವವನು ಸಿಕ್ಕಿಬಿದಿದ್ದು, ಮಟಕಾ ಚೀಟಿ ಬರೆದುಕೊಡುವವನ ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು ಕೃಷ್ಣಪ್ಪ ತಂದೆ ಪಾಲಪ್ಪ ನಾಯಕ, ವಯಾ: 23 ವರ್ಷ, ಜಾತಿ: ಲಂಬಾಣಿ, ಸಾ: ವೆಂಕಟಾಪೂರ ಅಂತಾ ತಿಳಿಸಿದ್ದು ಅವನ ಹತ್ತಿರ ಮಟಕಾ ಚೀಟಿ, 1070=00 ರೂಪಾಯಿ ನಗದು ಹಣ ಹಾಗೂ ಒಂದು ಬಾಲಪೆನ್ನ ಜಪ್ತಮಾಡಿಕೊಂಡಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
4] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 224/2017 ಕಲಂ. 78(3) Karnataka Police Act.

ದಿನಾಂಕ: 21-07-2017 ರಂದು ಸಂಜೆ ಶ್ರೀಮತಿ ಶಾರವ್ವ, ..ಎಸ್. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿರುವಾಗ ಠಾಣಾ ವ್ಯಾಪ್ತಿಯ ಬರುವ ಹೊಸ ಹಿರೆಬೆಣಕಲ್ ಗ್ರಾಮಕ್ಕೆ ಹೋಗುವ ರಸ್ತೆಯ ಪಕ್ಕದ ಬೀಳು ಜಾಗೆಯ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆಯುತ್ತಿದೆ ಅಂತಾ ಖಚಿತವಾದ ಮಾಹಿತಿ ಬಂದ ಮೇರೆಗೆ ಶ್ರೀ ಪ್ರಕಾಶ. ಎಲ್. ಮಾಳಿ, ಪಿ.ಎಸ್.. ರವರ ಮಾರ್ಗದರ್ಶನದಲ್ಲಿ ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ ಪಿ.ಸಿ. ನಂ: 180, 363 ಇವರು ಮತ್ತು ಇಬ್ಬರು ಪಂಚರು ಕೂಡಿಕೊಂಡು ಮಾಹಿತಿ ಇದ್ದ ¸ÀܼÀPÉÌ ºÉÆÃV ಅವರ ಮೇಲೆ ದಾಳಿ ಮಾಡಲಾಗಿ ಮಟಕಾ ಪಟ್ಟಿ ಬರೆಯುತ್ತಿದ್ದವನು ಸಿಕ್ಕಿಬಿದ್ದಿದ್ದು, ಉಳಿದ ಜನರು ಅಲ್ಲಿಂದ ಓಡಿ ಹೋದರು. ಸಿಕ್ಕವನ ಹೆಸರು ವಿಚಾರಿಸಲಾಗಿ ತನ್ನ ಹೆಸರು ಸೈಯ್ಯದ್ ಜಿಲಾನಿ ತಂದೆ ಸೈಯ್ಯದ್ ಮೀರಾ ಸಾಬ, ವಯಸ್ಸು 48 ವರ್ಷ, ಜಾತಿ: ಮುಸ್ಲೀಂ : ಆಟೋ ಚಾಲಕ ಸಾ: ಹೊಸ ಹಿರೇಬೆಣಕಲ್. ತಾ: ಗಂಗಾವತಿ ಅಂತಾ ತಿಳಿಸಿದ್ದು, ಅವನ ಹತ್ತಿರ ಮಟಕಾ ಜೂಜಾಟದ ನಗದು ಹಣ ರೂ. 810/- ರೂಪಾಯಿ, ಒಂದು ಮಟಕಾ ಪಟ್ಟಿ, ಒಂದು ಬಾಲ್ಪೆನ್ನು ದೊರೆತಿದ್ದು ಇದೆ. ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.

 
Will Smith Visitors
Since 01/02/2008