Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Wednesday, September 7, 2016

1] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 259/2016 ಕಲಂ: 87 Karnataka Police Act.
ದಿನಾಂಕ:- 06-09-2016 ರಂದು ಮಧ್ಯಾಹ್ನ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಹೇರೂರು ಗ್ರಾಮದ ಶ್ರೀ ಗಂಗಮ್ಮನ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಂದಾರ ಬಹಾರ ಎಂಬ ಅದೃಷ್ಟದ ಇಸ್ಪೀಟ್ ಜೂಜಾಟದ ನಡೆಯುತ್ತಿದೆ ಅಂತಾ ಖಚಿತವಾದ ಭಾತ್ಮಿ ಮೇರೆಗೆ ಶ್ರೀ ಪ್ರಕಾಶ ಮಾಳಿ, ಪಿ.ಎಸ್.ಐ. ಹಾಗೂ ಸಿಬ್ಬಂದಿಯವರಾದ 129, 429, 363, 120, 110, 287, 43 ಎ.ಪಿ.ಸಿ. 77 ರವರು ಮತ್ತು ಇಬ್ಬರು ಪಂಚರನ್ನು ಬರಮಾಡಿಕೊಂಡು ನಮಗೆ ಮಾಹಿತಿ ಇದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿ ನಿಂತು ನೋಡಲು ಹೇರೂರು ಗ್ರಾಮದ ಶ್ರೀ ಗಂಗಮ್ಮನ ಗುಡಿಯ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಜನರು ದುಂಡಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ್ ಎಲೆಗಳಿಂದ ಅಂದರ್ ಬಹಾರ್ ಎನ್ನುವ ಕಾನೂನು ಬಾಹಿರವಾದ ಅದೃಷ್ಠದ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದು ಕಂಡುಬಂದಿದ್ದು, ಆಗ ಸಮಯ ಮಧ್ಯಾಹ್ನ 3:00 ಗಂಟೆಯಾಗಿತ್ತು. ಕೂಡಲೇ ಅವರ ಮೇಲೆ ದಾಳಿ ಮಾಡಲಾಗಿ ಜೂಜಾಟದಲ್ಲಿ ತೊಡಗಿದ್ದ 8 ಜನರು ಸಿಕ್ಕಿಬಿದ್ದಿದ್ದು. ವಿಚಾರಿಸಲು ಅವರು ತಮ್ಮ ಹೆಸರುಗಳು (1) ವಿರುಪಣ್ಣ ತಂದೆ ಬಸಪ್ಪ ಅಡವಿಭಾವಿ, ವಯಸ್ಸು 32 ವರ್ಷ, ಜಾತಿ: ಗಂಗಾಮತ ಉ: ಕೂಲಿ ಕೆಲಸ ಸಾ: ಹೇರೂರು (2) ಅಳ್ಳಪ್ಪ ತಂದೆ ಫಕೀರಪ್ಪ ಕಲಿಕೇರಿ, ವಯಸ್ಸು 40 ವರ್ಷ, ಜಾತಿ: ನಾಯಕ ಉ: ಕೂಲಿ ಕೆಲಸ ಸಾ: ಹೇರೂರು (3) ಪರಶುರಾಮ ತಂದೆ ಮಲ್ಲಪ್ಪ ಬೆನಕನಾಳ, ವಯಸ್ಸು 26 ವರ್ಷ, ಜಾತಿ: ಗಂಗಾಮತ ಉ: ಕೂಲಿಕೆಲಸ ಸಾ: ಹೇರೂರು (4) ವೀರೇಶ ತಂದೆ ಫಕೀರಪ್ಪ, ವಯಸ್ಸು 38 ವರ್ಷ, ಜಾತಿ: ಗಂಗಾಮತ ಉ: ಕೂಲಿ ಕೆಲಸ ಸಾ: ಹೇರೂರು (5) ಫಕೀರಪ್ಪ ತಂದೆ ದುರಗಪ್ಪ, ವಯಸ್ಸು 30 ವರ್ಷ, ಜಾತಿ: ನಾಯಕ ಉ: ಆಟೋ ಚಾಲಕ ಸಾ: ಹೇರೂರು (6) ಭುವನೇಶ ತಂದೆ ಶಂಕ್ರಪ್ಪ ಸೂಳೇಕಲ್, ವಯಸ್ಸು 25 ವರ್ಷ, ಜಾತಿ: ಗಂಗಾಮತ ಉ: ಒಕ್ಕಲುತನ ಸಾ: ಹೇರೂರು (7) ಬಸವರಾಜ ತಂದೆ ಹನುಮಂತ, ವಯಸ್ಸು 25 ವರ್ಷ, ಜಾತಿ: ಗಂಗಾಮತ ಉ: ಕೂಲಿ ಕೆಲಸ ಸಾ: ಹೇರೂರು (8) ಸೋಮನಾಥ ತಂದೆ ಮಲ್ಲಪ್ಪ, ವಯಸ್ಸು 24 ವರ್ಷ, ಜಾತಿ: ಗಂಗಾಮತ ಉ: ಗದ್ದಿ ಕೆಲಸ ಸಾ: ಹೇರೂರು ಅಂತಾ ತಿಳಿಸಿದರು.14 ಸಿಕ್ಕವರಿಂದ ಹಾಗೂ ಸ್ಥಳದಿಂದ ಜೂಜಾಟದ ನಗದು ಹಣ ರೂ. 5,100/- ರೂಪಾಯಿ, 52 ಇಸ್ಪೀಟ್ ಎಲೆಗಳು, ಹಾಗೂ ನೆಲದ ಮೇಲೆ ಹಾಸಿದ್ದ ಒಂದು ಪ್ಲಾಸ್ಟಿಕ್ ಬರಕಾ ಸಿಕ್ಕಿದ್ದು, ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 204/2016 ಕಲಂ: 143, 147, 148, 341, 323, 324, 504, 506 ಸಹಿತ 149 ಐ.ಪಿ.ಸಿ ಮತ್ತು 3(1)(10) ಎಸ್.ಸಿ/ಎಸ್.ಟಿ. ಕಾಯ್ದೆ:.

ಶ್ರೀ ಬಸವರಾಜ ತಂದಿ ಹನುಮಂತಪ್ಪ ಬಿಲ್ಗಾರ ವಯಾ-47 ವರ್ಷ ಜಾ. ನಾಯಕ ಉ-ವ್ಯಾಪಾರ ಸಾ. ಬೂದಗುಂಪಾ ಇವರ ಹೊಲದಲ್ಲಿ ಕೆಲಸ ಮಾಡುವ ಕನಕಪ್ಪ ತಂದಿ ರಾಮಪ್ಪ ಸಾ. ಬೂದಗುಂಪಾ ಈತನು ಹೊಲದಿಂದ  ಪಿರ್ಯಾದಿದಾರರ ಮನೆಯ ಕಡೆಗೆ ಬರುತ್ತಿದ್ದಾಗ್ಗೆ ಆರೋಪಿತರಾದ 1) ಮಲ್ಲನಗೌಡ ತಂದಿ ಲಿಂಗನಗೌಡ ಮಾಲೀಪಾಟೀಲ್, ಲಿಂಗಾಯತ 2)ನಾಗನಗೌಡ ತಂದಿ ಮರೇಗೌಡ ಮಾಲೀಪಾಟೀಲ್ , ಲಿಂಗಾಯತ 3)ಮಂಜುನಾಥ ತಂದಿ ಸಿದ್ದನಗೌಡ ಮಾ.ಪಾಟೀಲ್ , ಲಿಂಗಾಯತ 4) ರಮೇಶ ತಂದಿ ಸಣ್ಣೆಪ್ಪ ಡಂಬರ್ 5) ಶಿವಕುಮಾರ ತಂದಿ ಭಿನಗೌಡ , ಲಿಂಗಾಯತ 6) ವೀರಭದ್ರಪ್ಪ @ ಅಪ್ಪಣ್ಣ ತಂದಿ ವೀರೇಶಪ್ಪ ಮುಳ್ಳೂರು 7) ಸಿದ್ದನಗೌಡ ತಂದಿ ಲಿಂಗನಗೌಡ ಲೀಪಾಟೀಲ್ 8) ವಿರೇಶ ತಂದಿ ಪಂಪಾಪತಿ ಮುಳ್ಳೂರು (ಅಚ್ಚೊಳ್ಳಿ) , ಲಿಂಗಾಯತ 9) ದೊಡ್ಡಬಸವ ತಂದಿ ಬಸನಗೌಡ ಸಾ. ಬೂದಗುಂಪಾ ಇವರು ಹಿಂದಿನ ರಾಜಕೀಯ ಹಿನ್ನೆಲೆಯಲ್ಲಿ ಕನಕಪ್ಪನಿಗೆ ತಡೆದುನಿಲ್ಲಿಸಿ ಜಾತಿ ನಿಂದನೆ ಮಾಡಿ ಜಿವದ ಬೇದರಿಕೆ ಹಾಕಿ ಹೋಗಿರುತ್ತಾರೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.  

0 comments:

 
Will Smith Visitors
Since 01/02/2008