Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Wednesday, January 18, 2017

1] ಸಂಚಾರಿ ಪೊಲೀಸ್ ಠಾಣೆ ಕೊಪ್ಪಳ ಗುನ್ನೆ ನಂ: 02/2017 ಕಲಂ : 279, 337 ಐ.ಪಿ.ಸಿ:.  
ದಿನಾಂಕ 17-01-2017 ರಂದು ಬೆಳಿಗ್ಗೆ 8-30 ಗಂಟೆಗೆ ಧಾರವಾಡದ ಎಸ್.ಡಿ.ಎಂ ಆಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಠಾಣೆಯ ರವೀಂಧ್ರ ಸಿ.ಹೆಚ್.ಇಸ 164 ರವರನ್ನು ಕಳುಹಿಸಿದ್ದು ಅವರು ಆಸ್ಪತ್ರೆಗೆ ಹೋಗಿ ಗಾಯಾಳುವಿನ ಹೇಳಿಕೆಯನ್ನು ಪಡೆದುಕೊಂಡು ಇಂದು ರಾತ್ರಿ 9-30 ಗಂಟೆಗೆ ವಾಪಾಸ ಠಾಣೆಗೆ ಬಂದು ಹೇಳಿಕೆ ಫಿರ್ಯಾದಿಯನ್ನು ಹಾಜರಪಡಿಸಿದ್ದು ಅದನ್ನು ಪಡೆದುಕೊಂಡಿದ್ದು ಅದರ ಸಾರಾಂಶವೇನೆಂದರೆ, ದಿನಾಂಕ. 14-01-2017 ರಂದು ಸಂಜೆ 7-15 ಗಂಟೆಗೆ ಫಿರ್ಯಾದಿದಾರರು ತಮ್ಮ ಅಂಗವಿಕಲರ ಮೂರು ಗಾಲಿಯ ವಾಹನ ನಂಬರ. KA-37/X-9324 ನೆದ್ದರಲ್ಲಿ ತನ್ನ ಹೆಂಡತಿ ಕಮಲಮ್ಮ ಮತ್ತು ತನ್ನ ಎರಡು ಮಕ್ಕಳನ್ನು ಕರೆದುಕೊಂಡು ಕೊಪ್ಪಳದ ಗವಿಮಠ ಜಾತ್ರೆಯನ್ನು ಮುಗಿಸಿಕೊಂಡು ವಾಪಾಸ ಮನೆಗೆ ಹೊಗಲು ವಾಹನವನ್ನು ಚಲಾಯಿಸಿಕೊಂಡು ಕುಷ್ಟಗಿ ರಸ್ತೆಯ ಮೇಲೆ ಹೋಗಿ ಬೇಲದಾರ ಕಾಲೋನಿಗೆ ಹೋಗಲು ತನ್ನ ವಾಹನವನ್ನು ಬಲಗಡೆಗೆ ತಿರುಗಿಸುತ್ತಿರುವಾಗ ಹಿಂದಿನಿಂದ ಮೋಟಾರ್ ಸೈಕಲ್ ನಂಬರ. KA-35/X-3096 ನೆದ್ದರ ಸವಾರನು ತಾನು ಚಲಾಯಿಸುತ್ತಿರುವ ವಾಹನವನ್ನು ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ವಾಹನಕ್ಕೆ ಟಕ್ಕರಮಾಡಿ ಅಪಘಾತಮಾಡಿದನು. ಇದಿರಿಂದ ಫಿರ್ಯಾದಿಗೆ ಮತ್ತು ಆತನ ಹೆಂಡತಿಗೆ ಸಾದಾ ಸ್ವರೂಪದ ಗಾಯಗಳು ಆಗಿರುತ್ತವೆ. ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
2] ನಗರ ಪೊಲೀಸ್ ಠಾಣೆ ಗಂಗಾವತಿ ಗುನ್ನೆ ನಂ: 05/2017 ಕಲಂ : 143, 147, 148, 323, 324, 354, 307, 504, 506 ಸಹಿತ 149 ಐ.ಪಿ.ಸಿ:.  
ದಿನಾಂಕ 17-01-2017 ರಂದು ಸಾಯಂಕಾಲ 6-00 ಗಂಟೆಗೆ ಶ್ರೀಮತಿ ವಿಜಯ ಲಕ್ಷ್ಮಿ ಗಂಡ ಪ್ರಸಾದ ತಾಳೂರು, ಫಿರ್ಯಾದಿ ನೀಡಿದ್ದು, ಆರೋಪಿತರಾದ ಶ್ರೀಮತಿ ಸಿ.ಹೆಚ್. ಪದ್ಮಾವತಿ ಇವರು ಫಿರ್ಯಾದಿದಾರರ ಮನೆಯ ಮುಂದೆ ಸುಮ್ಮನೆ ತಿರುಗಾಡುವುದು ಮತ್ತು ಬೇರೆಯವರ ಮೇಲೆ ಹಾಕಿ ಬೈದಾಡುವುದು ಮಾಡುತ್ತಿದ್ದು, ಮುಂಜಾನೆ 11-00 ಗಂಟೆಯ ಸುಮಾರಿಗೆ ಫಿರ್ಯಾದಿದಾರರು ವೆಂಕಟೇಶ್ವರ ಕಾಲೋನಿಯಲ್ಲಿರುವ ತಮ್ಮ ಮನೆಯಲ್ಲಿ ಇರುವಾಗ ಯಾರೋ ವ್ಯಕ್ತಿಗಳು ಮನೆಯ ಮುಂದೆ ಬಂದು ಕಾಲಿಂಗ್ ಬೆಲ್ಲನ್ನು ಒತ್ತಿದ್ದರಿಂದ ಫಿರ್ಯಾದಿಯು ಯಾರು ಅಂತಾ ಕೇಳಲು ಅವರು ಮನೆಯಲ್ಲಿ ಕಾರ್ಯಕ್ರಮವಿದೆ ಅಂತಾ ಹೇಳಿದ್ದರಿಂದ ಫಿರ್ಯಾದಿಯು ಬಾಗಿಲನ್ನು ತೆಗೆದು ಮನೆಯಿಂದ ಹೊರಗೆ ಬಂದು ನೋಡಲು ಹೊರಗಡೆ ಯಾರೋ ವ್ಯಕ್ತಿಗಳಿದ್ದು ಅವರಿಗೆ ಎನು ಅಂತಾ ವಿಚಾರಿಸಲು ಅವರು ನಮ್ಮ ಮನೆಯಲ್ಲಿ ಕಾರ್ಯಾಕ್ರಮವಿದೆ ಬನ್ನಿರಿ ಅಂತಾ ಅಂದು ತಮ್ಮ ಧರ್ಮದ ಪದ್ದತಿಯಂತೆ ಹಣೆಗೆ ಕುಂಕುಮ ಹಚ್ಚಲು ಬಂದಿದ್ದು, ಕುಂಕುಮ ಹಚ್ಚಿಕೊಳ್ಳುತ್ತಿರುವಾಗ ಆರೋಪಿತರಾದ 01]  ಸಿ.ಹೆಚ್. ಶ್ರೀನಿವಾಸ. 02] ಸಿ.ಹೆಚ್. ಪದ್ಮಾವತಿ. 03] ಸಿ.ಹೆಚ್. ಅನಂತ ಲಕ್ಷ್ಮಿ, ಹಾಗೂ ಅವರ ಮನೆಯಲ್ಲಿ ಕೆಲಸ ಮಾಡುವ 04] ಲಲಿತಾ @ ಲಲ್ಲಿ ಹಾಗೂ ಇತರರು ಅಕ್ರಮಕೂಟ ರಚಿಸಿಕೊಂಡು ಬಂದು ಏನಲೇ ಸೋಳೆ ನಿನ್ನ ಸೊಕ್ಕು ಬಹಳವಾಗಿದೆ ನಮ್ಮ ಮನೆಯ ಹತ್ತಿರ ಇದ್ದು ನಮ್ಮ ಮಾತನ್ನು ಕೇಳುವುದಿಲ್ಲಾ ಅಂತಾ ಅಂದವರೇ ಕೈ ಹಿಡಿದು ಎಳೆದಾಡಿ ಕೈಗಳಿಂದ ಹೊಡೆದು ಕಾಲಿನಿಂದ ಒದ್ದಿದ್ದು ಅಲ್ಲದೇ ಕೊಲೆ ಮಾಡುವ ಉದ್ದೇಶದಿಂದ ಕಟ್ಟಿಗೆಯಿಂದ ತಲೆಗೆ ಹೊಡೆಯಲು ಬಂದಿದ್ದು ಫಿರ್ಯಾದಿಯು ಹಿಂದೆ ಸರಿದಿದ್ದರಿಂದ ಮುಗಿನ ಹತ್ತಿರ ಭಾರಿ ಪೆಟ್ಟಾಗಿ ರಕ್ತ ಸೋರುತ್ತಿದ್ದು ಮತ್ತು ಕಣ್ಣಲ್ಲಿ ಕಾರ ಪುಡಿಯನ್ನು ಉಗ್ಗಿ ಹಲ್ಲೆ ಮಾಡಿ ಹೋಗುವಾಗ ಲೇ ಸೋಳೆ ಇವತ್ತು ನೀನು ಉಳಿದುಕೊಂಡೆ ನಾಳೆ ಸಿಗು ನಿನ್ನ ಕತೆ ಮುಗಿಸಿ ಬಿಡುತ್ತೇವೆಂದು ಜೀವದ ಬೆದರಿಕೆ ಹಾಕಿ ಹೋಗಿರುತ್ತಾ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 16/2017 ಕಲಂ : 306 ಐ.ಪಿ.ಸಿ:.

ದಿನಾಂಕ: 17-01-2017 ರಂದು ಮುಂಜಾನೆ 10:00 ಗಂಟೆಗೆ ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ಕೊಪ್ಪಳ ರವರಿಂದ ಬಂದ ಜ್ಞಾಪನ ಪತ್ರದೊಂದಿಗೆ ರಾಯಚೂರ ಜಿಲ್ಲೆಯ ಮಸ್ಕಿ ಪೊಲೀಸ್ ಠಾಣೆ ಗುನ್ನೆ ನಂ: 164/2016 ಕಲಂ 306 ಐಪಿಸಿ ನೇದ್ದು ಹದ್ದಿಯ ಪ್ರಯುಕ್ತ ವರ್ಗಾವಣೆಯಾಗಿ ಬಂದಿದ್ದು ಅದರ ಸಾರಾಂಶ ಏನಂದರೆ, ಮೃತ ವೆಂಕಟೇಶ ತಂದೆ ಸಣ್ಣ ಅಯ್ಯಪ್ಪ ಕಂಬಾರ, 32 ವರ್ಷ ಸಾ: ವೆಂಕಟಗಿರಿ ಈತನು ಈಗ್ಗೆ 08 ವರ್ಷಗಳಿಂದ ಸಿ.ಎಂ.ಎಸ್. ಇಂಡಿಯಾ ಪ್ರೈವೇಟ್ ಲಿಮಿಟೇಡ್ ಗಂಗಾವತಿ ಶಾಖೆಯಲ್ಲಿ ಕ್ಯಾಷ್ ಲೋಡರ್ ಅಂತಾ ಕೆಲಸ ಮಾಡಿಕೊಂಡು ಇದ್ದೂ ಸದ್ರಿ ಕಂಪನಿಯವರು ತಿಳಿಸಿದ ಎ.ಟಿ.ಎಂ. ಗಳಿಗೆ ಹಣವನ್ನು ಹಂಚಿಕೆ ಮಾಡುವಾಗ ಹೆಚ್ಚು ಕಡಿಮೆಯಾಗಿ ಈ ಬಗ್ಗೆ ಮೃತನೇ ಹಣವನ್ನು ಬಳಿಸಿಕೊಡ್ಡಿದ್ದಾನೆ ನೀನೇ ಕಟ್ಟಬೇಕು ಅಂತಾ ಪದೆ ಪದೆ ಕಿರುಕುಳ ಕೊಡುವದು ಮಾಡುತ್ತಿದ್ದರಿಂದ ಮನಸ್ಸಿಗೆ ಬೇಜಾರು ಮಾಡಿಕೊಂಡು ಮನೆಯಲ್ಲಿ ಇದ್ದೂ, ಮನೆಗೂ ಸಹ ಸಿ.ಎಂ.ಎಸ್. ಇಂಡಿಯಾ ಪ್ರೈವೇಟ್ ಲಿಮಿಟೇಡ್ ಗಂಗಾವತಿ ಶಾಖೆಯವರ ಪೈಕಿ ವಿರೇಶ ಎಂಬುವರು ಬಂದು ಹಣವನ್ನು ಕೊಡು ಅಂತಾ ಕರೆದುಕೊಂಡು ಹೋಗಿ ಕಿರುಕುಳ ಕೊಡುತ್ತಾ ಪದೆಪದೆ ಪೀಡಿಸುತ್ತಿದ್ದರಿಂದ ಮನನೊಂದು ಬೆಸತ್ತು ಈ ಹಿಂದೆ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದು, ಮೃತ ವೆಂಕಟೇಶನು ದಿನಾಂಕ 23-10-2016 ರಂದು 11.00 ಗಂಟೆಗೆ ದಾಸನಾಳ ಬ್ರೀಜ್ ಹತ್ತಿರದ ಕಾಲುವೆ ನೀರಿನಲ್ಲಿ ಹಾರಿ ಹರಿದು ಹೋಗಿದ್ದು ಹುಡುಕುತ್ತಾ ಬಂದಾಗ ಮಸ್ಕಿ ಕೇನಾಲ ಬಳಗಾನೂರು ರೊಡ್ ಬ್ರೀಜ್ ಹತ್ತಿರ ಇಂದು ದಿನಾಂಕ 24-10-2016 ರಂದು 12.00 ಗಂಟೆಗೆ ಸಿಕ್ಕಿದ್ದು ಇರುತ್ತದೆ. ಕಾರಣ ಮೃತ ವೆಂಕಟೇಶನು ಸಿ.ಎಂ.ಎಸ್. ಪ್ರೈವೇಟ್ ಲಿಮಿಟೇಂಡ್ ಗಂಗಾವತಿ ಶಾಖೆ ಇವರ ಕಿರುಕುಳದಿಂದ ಬೆಸತ್ತು ಮನನೊಂದು ದಾಸನಾಳ ಬ್ರೀಜ್ ಹತ್ತಿರ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 

0 comments:

 
Will Smith Visitors
Since 01/02/2008