ದಿನಾಂಕ:
12-01-2017 ರಂದು ರಾತ್ರಿ 9 ಗಂಟೆಯ ಸುಮಾರಿಗೆ ಫಿರ್ಯಾದಿದಾರರು
ತಮ್ಮ ಮೋಟಾರ ಸೈಕಲ ನಂ ಕೆಎ-37/w-1763 ನೇದ್ದನ್ನು ಚಲಾಯಿಸಿಕೊಂಡು ತಮ್ಮೂರಿಗೆ ಯಲಬುರ್ಗಾ ಪಟ್ಟಣದಲ್ಲಿ ಬರುವ ಯಲಬುರ್ಗಾ-
ಬಂಡಿ ರಸ್ತೆ ಮೇಲೆ ಡಾ- ಬಿ.ವಿ ಇಟಗಿ ಇವರ ಶಿವಕೃಪಾ ಆಸ್ಪತ್ರೆಯ ಹತ್ತಿರ ಹೋಗುತ್ತಿದ್ದಾಗ
ಪಿರ್ಯಾದಿದಾರನ ಹಿಂದುಗಡೆಯಿಂದ ಅಂದರೆ ಯಲಬುರ್ಗಾ ಪಟ್ಟಣದಲ್ಲಿ ಬರುವ ಕನಕದಾಸ ವೃತ್ತದ ಕಡೆಯಿಂದ
ಆರೋಪಿತನು ತಾನು ನಡೆಸುತ್ತಿದ್ದ ಮೋಟಾರ ಸೈಕಲ ನಂ ಕೆಎ-37/ಈಎ-7905 ನೇದ್ದನ್ನು ಅತೀ ವೇಗವಾಗಿ
ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರನ ಮೋಟಾರ ಸೈಕಲ ಹಿಂದಿನಿಂದ ಜೋರಾಗಿ ಠಕ್ಕರ
ಕೊಟ್ಟು ಅಪಘಾತ ಪಡಿಸಿದ್ದರಿಂದ ಪಿರ್ಯಾದಿದಾರರಿಗೆ ಸಾದಾ & ಭಾರಿ ಸ್ವರೂಪದ ಗಾಯಗಳಾಗಿದ್ದು
ಇರುತ್ತದೆ. ಕಾರಣ ಸದರಿ ಮೋಟಾರ ಸೈಕಲ್ ಸವಾರನ ವಿರುದ್ಧ ಕಾನೂನು ಕ್ರಮ ಜರುಗಿಸಿರಿ ಅಂತಾ
ಮುಂತಾಗಿ ಫಿರ್ಯಾದಿ ಇರುತ್ತದೆ. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 04/2017
ಕಲಂ : 341, 355, 504, 506 ಸಹಿತ 34 ಐ.ಪಿ.ಸಿ:.
ದಿ: 12-01-2017 ರಂದು ಮಧ್ಯಾಹ್ನ 12-00 ಗಂಟೆಗೆ ಫಿರ್ಯಾದಿದಾರರಾದ ರಾಯಪ್ಪ ತಂದೆ ಹನುಮಪ್ಪ
ಹಟ್ಟಿ ಸಾ: ಇರಕಲಗಡಾ ಇವರು ದೂರು ನೀಡಿದ್ದು, ದಿ: 10-01-2017 ರಂದು ಮಧ್ಯಾಹ್ನ 03-40 ಗಂಟೆಗೆ
ಕೊಪ್ಪಳ ನಗರದ ತಾಲೂಕ ಪಂಚಾಯತಿ ಆಫೀಸ್ ಹತ್ತಿರ ಕಲಕೇರಿ ಗ್ರಾಮ ಪಂಚಾಯತಿ ಕಾರ್ಯದರ್ಶಿಯಾದ ಹನಮಂತಪ್ಪ
ನಾಯಕ ಈತನು ತನ್ನ ಸಂಗಡ ಓರ್ವ ವ್ಯಕ್ತಿಯನ್ನು ಕರೆದುಕೊಂಡು ಮೋಟಾರ್ ಸೈಕಲ್ ಮೇಲೆ ಬಂದು ನನ್ನ ಮೋಟಾರ್
ಸೈಕಲ್ ಅಡ್ಡ ಗಟ್ಟಿ ಹನುಮಂತಪ್ಪ ನಾಯಕ ಈತನು ನನಗೆ ಲೇ ಸೂಳೆ ಮಗನೆ ನನ್ನ ಮೇಲೆ ಕಂಪ್ಲೇಟ್ ಮಾಡತೀಯಾ
ಅಂತಾ ನನ್ನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಲು ಮುಂದಾಗಿ ಚಪ್ಪಲಿಯಿಂದ ನನ್ನ ಮುಖಕ್ಕೆ ಹೊಡೆದು
ಸಾರ್ವಜನಿಕರ ಮುಂದೆ ನನಗೆ ಮಾನ ಹಾನಿ ಮಾಡಿರುತ್ತಾನೆ. ಅಲ್ಲದೆ ಜೀವದ ಭಯ ಉಂಟಾಗಿದೆ ಕಾರಣ ಹನಮಂತಪ್ಪನ
ಮೇಲೆ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ನೀಡಿದ ದೂರಿನ ಮೇಲಿಂದ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಗೊಂಡಿದ್ದು ಅದೆ.
3] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 07/2017 ಕಲಂ 454, 457, 380 ಐ.ಪಿ.ಸಿ:.
ದಿನಾಂಕ:-12-01-2017 ರಂದು ಬೆಳಿಗ್ಗೆ 11-05 ಗಂಟೆಯ ಸುಮಾರಿಗೆ ಪಿರ್ಯಾದಿದಾರರಾದ ಶರಣಪ್ಪ ತಂದಿ ಪರ್ವತಗೌಡ ಬೆಣಕಲ್ ವಯಾ-36
ವರ್ಷ ಜಾ. ಲಿಂಗಾಯತ ಉ-ವ್ಯವಹಾರ ಸಾ. ಜೆ.ಪಿ ನಗರ ಕಾರಟಗಿ.
ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿ ಕೊಟ್ಟಿದ್ದು ಅದರ ಸಾರಾಂಶವೆನೆಂದರೆ,
ಪಿರ್ಯಾದಿದಾರರು ದಿನಾಂಕ:-10-01-2017
ರಂದು ಗಂಗಾವತಿಯ ಶ್ರೀ ಚನ್ನಬಸವೇಶ್ವರ ಜಾತ್ರೆ ಇದ್ದುದರಿಂದ ಅಂದು ಮದ್ಯಾಹ್ನ 3-30 ಗಂಟೆಯ ಸುಮಾರಿಗೆ
ತಮ್ಮ ಕುಟುಂಬ ಸಮೇತ ಗಂಗಾವತಿಯ ಜಾತ್ರೆಗೆಂದು ಜೆ.ಪಿ ನಗರದಲ್ಲಿರುವ ನಮ್ಮ ಮನೆಗೆ ಮುಖ್ಯಾ ಭಾಗಿಲಿಗೆ
ಭೀಗ ಹಾಕಿಕೊಂಡು ಹೋಗಿ ಇಂದು ದಿನಾಂಕ;-12-01-2017 ರ ಬೆಳಿಗ್ಗೆ 8-00 ಗಂಟೆಯ ಸುಮಾರಿಗೆ ಮನೆಗೆ
ಬಂದು ನೋಡಲು ಯಾರೋ ಕಳ್ಳರು ಮನೆಯ ಬಾಗಿಲಿಗೆ ಹಾಕಿಕೊಂಡು ಹೋಗಿದ್ದ ಭೀಗದ ಚಿಲಕವು ಮುರಿದು ಒಳಗಡೆ
ಹೋಗಿ ಬೆಡ್ ರೂಮಿನಲ್ಲಿ ಇಟ್ಟಿದ್ದ ಟ್ರೀಜರಿಯ ಬಾಗಿಲು ತೆರೆದು ಅದರಲ್ಲಿ 1) 20 ಗ್ರಾಂನ ಬಂಗಾರದ
ಒಂದು ನಕ್ಲೇಸ್ ಅಂ.ಕಿ 48000=00 ಗಳು 2) 5 ಗ್ರಾಂನ ಒಂದು ಬಂಗಾರದ ಚೈನ್ ಸರ ಅಂ.ಕಿ 13000=00 ಗಳು
3) ಅಂದಾಜು 5 ಗ್ರಾಂ ನ ಮಕ್ಕಳ 6 ಸಣ್ಣ ಬಂಗಾರದ ಉಂಗುರಗಳು ಅಂ.ಕಿ 13000=00 ಗಳು 4) 5 ಗ್ರಾಂನ
ಲಕ್ಷ್ಮಿ ಮೂರ್ತಿ ಇರುವ ಬಂಗಾರದ ಉಂಗರ ಅ.ಕಿ 13000=00 ಗಳು 5) ಅಂದಾಜು 7 ಗ್ರಾಂನ ಎರಡು ಜೊತೆಯ
ಕೀವಿಯ ರಿಂಗ್ ಗಳು ಅಂ.ಕಿ 18000=00 ಗಳು 6) ಅಂದಾಜು 5 ಗ್ರಾಂ ನ ಒಟ್ಟು 110 ತಾಳಿಯ ಗುಂಡುಗಳು
ಅಂ ಕಿ 12000=00 ಗಳು 7) 8 ತೊಲೆಯ ಒಂದು ಜೊತೆ ಕಾಲು ಚೈನು ಅಂ.ಕಿ 3200=00 8) 10 ತೊಲೆಯ ಮಕ್ಕಳ
ಬೆಳ್ಳಿ ಗೆಜ್ಜೆಗಳು ಮಾವಿನ ಗೆಜ್ಜೆಗಳು ಅಂ ಕಿ 4000=00 ಮತ್ತು 13500=00 ನಗದು ಹಣ ಕಾಣಲಿಲ್ಲಾ
ಹೀಗೆ ಒಟ್ಟು 47 ಗ್ರಾಂ ಬಂಗಾರದ ಆಭರಣಗಳು ಅಂದಾಜು ಕಿಮ್ಮತ್ತು
117000=00 ರೂ. ಗಳು ಮತ್ತು 18 ತೊಲೆ ಬೆಳ್ಳಿಯ ಆಭರಣಗಳು ಅಂದಾಜು ಕಿಮ್ಮತ್ತು 7200=00 ರೂ. ಗಳು
ಹಾಗೂ ನಗದು ಹಣ 13500=00 ರೂ. ಗಳನ್ನು ಯಾರೋ ಕಳುವು ಮಾಡಿಕೊಂಡು ಹೋಗಿರುತ್ತಾರೆ ಗುನ್ನೆ ದಾಖಲು
ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment