Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Tuesday, February 7, 2017

1] ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ: 14/2017 ಕಲಂ 78(3) Karnataka Police Act.
ದಿನಾಂಕ 06-02-2017 ರಂದು ಸಂಜೆ 7-30 ಗಂಟೆಯ ಸುಮಾರಿಗೆ ನಾಗಲಾಪೂರ ಗ್ರಾಮದ ಅಗಸಿ ಮುಂದೆ ಸಮುದಾಯದ ಭವನದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಆರೋಫಿ ನಂ.1 ಮತ್ತು 2 ರವರು ಸಾರ್ವಜನಿಕರನ್ನು ಬರ ಮಾಡಿಕೊಂಡು ಅವರಿಗೆ 1 ರೂಪಾಯಿಗೆ 80 ರೂಪಾಯಿ ಬರುತ್ತದೆ ಬನ್ನಿ ನಸೀಬದ ಜೂಜಾಟ ಅಂತಾ ಕೂಗುತ್ತಾ ಅವರಿಂದ ಹಣ ಪಡೆದು ಅವರಿಗೆ ಓ.ಸಿ ನಂಬರಗಳನ್ನು ಬರೆದು ಕೊಡುತ್ತಿದ್ದಾಗ  ಶ್ರೀ ವೀರಾರೆಡ್ಡಿ ಪಿ.ಎಸ್.ಐ. ಕನಕಗಿರಿ ಠಾಣೆ ರವರು ಪಂಚರೊಂದಿಗೆ ದಾಳಿ ಮಾಡಲು ಆರೋಪಿ ನಂ.1 ಮತ್ತು 2 ರವರಿಂದ 1 ಮಟಕಾ ಪಟ್ಟಿ, 1 ಬಾಲ್ ಪೆನ್ನು ಹಾಗೂ ನಗದು ಹಣ ರೂ.410/-  ಗಳನ್ನು ಸಂಜೆ 7-30 ಗಂಟೆಯಿಂದ 8-30 ಗಂಟೆಯವರೆಗೆ ಲೈಟಿನ  ಬೆಳಕಿನಲ್ಲಿ ಪಂಚರ ಸಮಕ್ಷಮ ಜಪ್ತ ಮಾಡಿಕೊಂಡಿದ್ದು ಮಟಕಾ ಪಟ್ಟಿಯನ್ನು ಆರೋಫಿ ನಂ.3 ರವರಿಗೆ ಕೊಡುವುದಾಗಿ ತಿಳಿಸಿದ್ದು ಇರುತ್ತದೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2] ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ: 09/2017 ಕಲಂ 78(3) Karnataka Police Act.
ದಿನಾಂಕ: 06-02-2017 ರಂದು ರಾತ್ರಿ 21:15 ಗಂಟೆಗೆ ಪಿ.ಎಸ್.ಐ. ತಾವರಗೇರಾ ಪೊಲೀಸ್ ಠಾಣೆರವರು ಗಣಕೀಕೃತ ವರದಿ, ದಾಳಿ ಪಂಚನಾಮೆ, ಮುದ್ದೇಮಾಲು ಸಿಕ್ಕಿಬಿದ್ದ ಒಬ್ಬ ಆರೋಪಿಯನ್ನು ಹಾಜರಪಡಿಸಿದ್ದು, ವರದಿಯಲ್ಲಿ ಕನ್ನಾಳ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟವನ್ನು ಆಡುತ್ತಿದ್ದು, ಆ ಕಾಲಕ್ಕೆ ಅಧಿಕಾರಿ ಹಾಗೂ ಸಿಬ್ಬಂದಿಯವರು ದಾಳಿ ಮಾಡಿ ಜೂಜಾಟದ ಒಟ್ಟು ನಗದು ಹಣ ರೂ.2050-00, ಒಂದು ಬಾಲ್ ಪೆನ್ ,ಒಂದು ಮಟಕಾ ಚೀಟಿ, ಜಪ್ತ ಮಾಡಿಕೊಂಡಿದ್ದು, ಸಿಕ್ಕಿಬಿದ್ದ ಆರೋಪಿತನಾದ ಹನಮಂತ ತಂದೆ ಕನಕಪ್ಪ ಹೊಸಗೇರಿ, ಹಾಗೂ ಮಟಕಾ ಪಟ್ಟಿ ತೆಗೆದುಕೊಳ್ಳುವವನಾದ ಹನಮಂತ ಸಾ:ಹಾಗಲದಾಳ ತಾ:ಗಂಗಾವತಿ ಈತನ ವಿರುದ್ದ ಕಾನೂನು ಕ್ರಮ ಜರುಗಿಸಲು ವರದಿಯನ್ನು ನೀಡಿದ್ದು ಇರುತ್ತದೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
3] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 29/2017 ಕಲಂ 143, 147, 447, 323, 504, 506 ರೆಡ್ ವಿತ್ 149 .ಪಿ.ಸಿ. ಮತ್ತು 3(1)(x) S.C/S.T. P.A. Act 1989:.

ದಿನಾಂಕ:- 06-02-2017 ರಂದು ಸಂಜೆ 7:00 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಹನುಮೇಶ ತಂದೆ ದಿ: ರಾಮಲಿಂಗಪ್ಪ ಕನಕಗಿರಿ ರವರು, ದೂರನ್ನು ಹಾಜರಪಡಿಸಿದ್ದು, "ನಮಗೂ ಹಾಗೂ ನನ್ನ ದೊಡ್ಡಪ್ಪ ಕನಕಪ್ಪ ಇವರಿಗೂ ಜಮೀನಿನ ವಿಭಾಗದ ವಿಚಾರದಲ್ಲಿ ಸಿವಿಲ್ ವ್ಯಾಜ್ಯ ನಡೆದಿರುತ್ತದೆ. ಆದರೆ ಇಂದು ದಿನಾಂಕ:- 06-02-2017 ರಂದು ಮಧ್ಯಾಹ್ನ 2:00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ತಾಯಿಯಾದ ಯಂಕಮ್ಮ ಗಂಡ ದಿ: ರಾಮಲಿಂಗಪ್ಪ-75 ವರ್ಷ ಇಬ್ಬರೂ ಕೇಸರಹಟ್ಟಿ ಗ್ರಾಮ ಸೀಮಾದ ನಮ್ಮ ಜಮೀನು ಸರ್ವೆ ನಂ: 80/ ರಲ್ಲಿ ಇದ್ದಾಗ ಜಮೀನುಗಳಿಗೆ ಸಂಬಂಧವಿರದ ವ್ಯಕ್ತಿಗಳಾದ (1) ಬಸವರಾಜ ತಂದೆ ಪಂಪಾಪತೆಪ್ಪ ಹಳ್ಳಿ-35 ವರ್ಷ (2) ವಿರುಪಣ್ಣ ತಂದೆ ಪಂಪಾಪತೆಪ್ಪ ಹಳ್ಳಿ-40 ವರ್ಷ (3) ಮಂಜುನಾಥ ತಂದೆ ಪಂಪಾಪತೆಪ್ಪ ಹಳ್ಳಿ-32 ವರ್ಷ (4) ನಿರುಪಾದಿಗೌಡ ತಂದೆ ಬಸವನಗೌಡ ಕನ್ನಾಳ-33 ವರ್ಷ (5) ಚಂದ್ರಶೇಖರ ತಂದೆ ರುದ್ರಪ್ಪ ಗುಡೂರ-30 ವರ್ಷ (6) ಹೆಚ್.ಎಲ್. ಬಸವರಾಜ ತಂದೆ ಲಿಂಗರಡ್ಡೆಪ್ಪ ಹಳ್ಳಿ-45 ವರ್ಷ (7) ವಿರುಪಣ್ಣ @ ವಿ.ಪಿ. ಸಿಂಗ್ ತಂದೆ ಬಸಪ್ಪ ಹಳ್ಳಿ-48 ವರ್ಷ (8) ರೆಡ್ಡಿ ತಂದೆ ಅನ್ನನಗೌಡ ಹಳ್ಳಿ-48 ವರ್ಷ ಎಲ್ಲರೂ ಜಾತಿ: ಲಿಂಗಾಯತ ಸಾ: ಕೇಸರಹಟ್ಟಿ  (9) ವಿಶ್ವನಾಥ ತಂದೆ ಮಲ್ಲಯ್ಯ ಜಿನ್ನದ,-30 ವರ್ಷ (10) ಶಿವಯ್ಯ ತಂದೆ ಆದಯ್ಯಸ್ವಾಮಿ-30 ವರ್ಷ ಇಬ್ಬರೂ ಜಾತಿ: ಜಂಗಮರು ಸಾ: ಕೇಸರಹಟ್ಟಿ ಇವರುಗಳು ಅಕ್ರಮಕೂಟ ರಚಿಸಿಕೊಂಡು ಸಮಾನ ಉದ್ದೇಶದಿಂದ ಕೂಡಿಕೊಂಡು ಜೆ.ಸಿ.ಬಿ.ಯನ್ನು ತೆಗೆದುಕೊಂಡು ನಮ್ಮ ಜಮೀನಿನಲ್ಲಿ ಅತಿಕ್ರಮ ಪ್ರವೇಶ ಮಾಡಿ ಬಂದು ನಮ್ಮ ಜಮೀನಿನಲ್ಲಿಯ ಜಾಲಿಯನ್ನು ಸ್ವಚ್ಛ ಮಾಡಲು ಬಂದರುಆಗ ನಾನು, ನನ್ನ ತಾಯಿ ಅಡ್ಡ ಹೋಗಿ ಜಮೀನು ನಮ್ಮದು ಇದೆ ಇಲ್ಲಿ ಯಾಕೆ ಬಂದು ಸ್ವಚ್ಛ ಮಾಡುತ್ತೀರಾ ಅಂತಾ ಕೇಳಿದ್ದಕ್ಕೆ  ಲೇ ನಾಯಕ ಸೂಳೇ ಮಕ್ಕಳ ಜಮೀನನ್ನು ನಾವು ಖರೀದಿ ಮಾಡಿದ್ದೇವೆ, ಜಮೀನು ನಮ್ಮದು ಇದೆ  ಅಂತಾ ಜಾತಿ ಎತ್ತಿ ಬೈದು ಬೈದರುಆಗ ನಾವು ಅಡ್ಡ ಹೋಗಿದ್ದಕ್ಕೆ  ನೀವೇನಾದರೂ ಅಡ್ಡ ಬಂದರೆ ಇಲ್ಲಿಯೇ ಹೂತು ಹಾಕುತ್ತೇವೆ  ಅಂತಾ ಬೆದರಿಕೆ ಹಾಕಿ ಜೆ.ಸಿ.ಬಿ.ಯನ್ನು ಹಾಗೆಯೇ ಮೈಮೇಲೆ ತಂದರು. ನಂತರ ನನಗೆ ಕೈಗಳಿಂದ ಹೊಡಿ-ಬಡಿ ಮಾಡಿ ಎಳೆದಾಡಿದರುಬಿಡಿಸಲು ಬಂದ ನನ್ನ ತಾಯಿ ಯಂಕಮ್ಮಳನ್ನು ದಬ್ಬಿದರು. ಇದರಿಂದ ನಮಗೆ ಒಳಪೆಟ್ಟಾಯಿತು ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008