1] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 81/2017
ಕಲಂ: 143, 147, 447, 504, 506 ಸಹಿತ 149 ಐ.ಪಿ.ಸಿ:.
ದಿನಾಂಕ:-06-04-2017 ರಂದು ಬೆಳಿಗ್ಗೆ
09:00 ಗಂಟೆಯ ಸುಮಾರಿಗೆ ನಾನು ಹಾಗೂ ನನ್ನ ತಮ್ಮ ರುದ್ರಗೌಡ ತಂದೆ ಭೀಮನಗೌಡ ಮಾಲೀಪಾಟೀಲ್, ದೊಡ್ಡಪ್ಪನ
ಮಗನಾದ ಮಲ್ಲಿಕಾರ್ಜುನಗೌಡ ತಂದೆ ವೀರಭದ್ರಗೌಡ ಇವರುಗಳು ಕೂಡಿಕೊಂಡು ನನ್ನ ಜಮೀನು ಸರ್ವೆ ನಂ:
75/3 ವಿಸ್ತೀರ್ಣ 6 ಎಕರೆ 18 ಗುಂಟೆ ಜಮೀನಿನಲ್ಲಿ ಕೆಲಸ ಮಾಡುತ್ತಿರುವಾಗ ಈ ಜಮೀನಿಗೆ ಸಂಬಂಧವಿರದ
ವ್ಯಕ್ತಿಗಳಾದ (1) ಈರಣ್ಣ ತಂದೆ ಅಡಿವೆಪ್ಪ ಕುರಿ, 50 ವರ್ಷ (2) ಶಂಕ್ರಪ್ಪ ತಂದೆ ಅಡಿವೆಪ್ಪ ಕುರಿ,
44 ವರ್ಷ (3) ದುರಗಪ್ಪ ತಂದೆ ಅಡಿವೆಪ್ಪ ಕುರಿ, 42 (4) ನಾಗಬುಷ್ಯಪ್ಪ ತಂದೆ ಅಡಿವೆಪ್ಪ ಕುರಿ,
40 ವರ್ಷ (5) ಬಸವರಾಜ ತಂದೆ ಅಡಿವೆಪ್ಪ ಕುರಿ-38 ವರ್ಷ, ಎಲ್ಲರೂ ಸಾ: ಹಣವಾಳ ಇವರುಗಳು ಅಕ್ರಮಕೂಟ
ರಚಿಸಿಕೊಂಡು ಸಮಾನ ಉದ್ದೇಶದಿಂದ ಕೂಡಿಕೊಂಡು ನನ್ನ ಜಮೀನಿನಲ್ಲಿ ಅತಿಕ್ರಮ ಪ್ರವೇಶ ಮಾಡಿ ಬಂದು ನಮಗೆ
“ ಲೇ ಸೂಳೇ ಮಕ್ಕಳೇ ಇಲ್ಲಿ ಏನು ಮಾಡುತ್ತಿದ್ದೀರಾ, ಈ ಜಮೀನು ನಮ್ಮದು ಇದೆ, ಇಲ್ಲಿಂದ ಹೋಗರಲೇ ”
ಅಂತಾ ಬಾಯಿಗೆ ಬಂದಂತೆ ಅವಾಚ್ಯವಾಗಿ ಬೈದಾಡಹತ್ತಿದರು. ಆಗ ನಾವು ಅವರಿಗೆ ಈ ಜಮೀನು ನಮ್ಮದು ಇದೆ,
ನೀವು ವಿನಾ ಕಾರಣ ತಂಟೆ ಮಾಡಬೇಡಿರಿ ಅಂತಾ ಹೇಳಿದ್ದಕ್ಕೆ ಅವರು “ ನೀವು ಹೋಗದಿದ್ದರೆ ಇಲ್ಲಿಯೇ ನಿಮ್ಮನ್ನು
ಹೂತು ಹಾಕುತ್ತೇವೆ, ಜೀವಸಹಿತ ಬಿಡುವುದಿಲ್ಲಾ” ಅಂತಾ ಜೀವದ ಬೆದರಿಕೆ ಹಾಕಿದರು. ಪ್ರಕರಣ ದಾಖಲು ಮಾಡಿ
ತನಿಖೆ ಕೈಗೊಂಡಿದ್ದು ಇರುತ್ತದೆ.
2] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ: 57/2017
ಕಲಂ: 429 ಐ.ಪಿ.ಸಿ:.
ದಿನಾಂಕ: 06-04-2017
ರಂದು ಪಿರ್ಯಾದಿದಾರರ ಅತ್ತಿಗೆಯವರಾದ ಶ್ರೀಮತಿ ಸುಜಾತ ರವರು ತಮ್ಮ ಎಮ್ಮೆಗಳನ್ನು ಮೇಯಿಸಲು ಹೋಸಳ್ಳಿ ರಸ್ತೆಯ ಕಡೆಗೆ ಹೋದಾಗ ಹೊಸಳ್ಳಿ ರಸ್ತೆಯಲ್ಲಿರುವ ವಿವೇಕ ಭಾರತಿ ಶಾಲೆಯ ಎದುರುಗಡೆ ಇರುವ ಗಟಾರಕ್ಕೆ
ಹೊಂದಿಕೊಂಡಿರುವ ಟ್ರಾನ್ಸ ಫಾರ್ಮರ್ ಹತ್ತಿರ ಒಂದು ಎಮ್ಮೆಯು
ಗಟಾರದಲ್ಲಿಂದ ನೀರು ಕುಡಿದು ರಸ್ತೆಗೆ ಬರುತ್ತಿದ್ದಾಗ ಗಟಾರಿಗೆ ಹೊಂದಿಕೊಂಡಿರುವ, ಟಿ.ಸಿ.ಗೆ ಅಳವಡಿಸಿದ ಕಬ್ಬಿಣದ ಜಾಲಿಗೆ ತಗುಲಿ ಶಾರ್ಟ ಸರ್ಕಿಟ್ ಆಗಿ ಕೆಳಗೆ ಬಿದ್ದು ಮೃತಪಟ್ಟಿದ್ದು ಇರುತ್ತದೆ. ಇದರಿಂಧ ಪಿರ್ಯಾದಿದಾರರಿಗೆ ರೂ. 40,000/- ನಷ್ಟವಾಗಿರುತ್ತದೆ ಅಂತಾ ಮುಂತಾಗಿ ಪಿರ್ಯಾಧಿ ಸಾರಾಂಶ ಮೇಲಿಂದ ಪ್ರಕರಣ ದಾಖಲು
ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment