Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Tuesday, August 1, 2017

1] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 167/2017 ಕಲಂ. 78(3) Karnataka Police Act.
ದಿನಾಂಕ:-31-07-2017 ರಂದು ರಾತ್ರಿ 7-00 ಗಂಟೆಯ ಸುಮಾರಿಗೆ ನಮೂರು ಮಾಡಿದ ಆರೋಪಿ ನಂ 1 ರವರು  ನಂದಿಹಳ್ಳೀ ಗ್ರಾಂದ ಶಾಲೆಯ ಸಾರ್ವಜನಿಕರ ರಸ್ತೆಯಲ್ಲಿ  ಆರೋಪಿತರು ಮಟ್ಕಾ ಜೂಜಾಟದಲ್ಲಿ ತೊಡಗಿದ್ದಾಗ್ಗೆ ಪಂಚರ ಸಮಕ್ಷಮದಲ್ಲಿ ಪಿ.ಎಸ್.ಐ ರವರು ಮೋನಯ್ಯ ಎ.ಎಸ್.ಐ ಮತ್ತು ಪಿ.ಸಿ 334, 164, 413 ರವರು ದಾಳಿ ಮಾಡಲು ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ಆರೋಪಿತರ ಮೇಲೆ ದಾಳಿ ಮಾಡಲು ಆರೋಪಿ ನಂ 1 ಸಿಕ್ಕಿಬಿದ್ದದ್ದು ಸಿಕ್ಕಿಬಿದ್ದವನಿಂದ ರೂ. 710=00 ಗಳನ್ನು ಮತ್ತು ಮಟ್ಕಾ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡಿದ್ದು ಇರುತ್ತದೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ 
2] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 168/2017 ಕಲಂ. 78(3) Karnataka Police Act.
ದಿನಾಂಕ:-31-07-2017 ರಂದು ರಾತ್ರಿ 8-30 ಗಂಟೆಯ ಸುಮಾರಿಗೆ ಆರೋಪಿಯು ಕಾರಟಗಿಯ ಉಪ್ಪಾರ ಓಣಿಯಲ್ಲಿರುವ ಆಂಜನೇಯ ಗುಡಿಯ ಹತ್ತಿರ ಸಾರ್ವಜನಿಕರ ಸ್ಥಳದಲ್ಲಿ ಮಟ್ಕಾ ಜೂಜಾಟದಲ್ಲಿ ತೊಡಗಿದ್ದಾಗ್ಗೆ ಪಂಚರ ಸಮಕ್ಷಮದಲ್ಲಿ ಶ್ರೀ. ಯಲ್ಲಪ್ಪ ಪಿ.ಎಸ್.ಐ ರವರು ವೆಂಕಟೇಶ ಎ.ಎಸ್.ಐ ಮತ್ತು ಪಿ.ಸಿ 331, 367 ರವರು ದಾಳಿ ಮಾಡಲು ಮಟ್ಕಾ ಜೂಜಾಟದಲ್ಲಿ ತೊಡಗಿದ್ದಾಗ  ಆರೋಪಿತನ ಮೇಲೆ ದಾಳಿ ಮಾಡಲು ಆರೋಪಿ ಸಿಕ್ಕಿಬಿದ್ದದ್ದು ಸಿಕ್ಕಿಬಿದ್ದವನಿಂದ ರೂ. 1470=00 ಗಳನ್ನು ಮತ್ತು ಮಟ್ಕಾ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
3] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 114/2017 ಕಲಂ. 32, 34 ಅಬಕಾರಿ ಕಾಯ್ದೆ:
ದಿನಾಂಕ: 31-07-2017 ರಂದು ರಾತ್ರಿ 11-30 ಗಂಟೆಗೆ ಫಿರ್ಯಾದಿದರರಾದ ಶ್ರೀ ರವಿ.ಸಿ.ಉಕ್ಕುಂದ ಪಿ... ನಗರ ಠಾಣೆ ರವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೆ, ದಿನಾಂಕ: 31-07-17 ರಂದು ರಾತ್ರಿ 10-00 ಗಂಟೆಗೆ ಕೊಪ್ಪಳದ, ಕುವೆಂಪು ನಗರದ ರಸ್ತೆಯಲ್ಲಿ ಆರೋಪಿತನು ಅನಧೀಕೃತವಾಗಿ ಯಾವುದೇ ಲೈಸನ್ಸ ವಗೈರೆ ಇಲ್ಲದೇ ಅಕ್ರಮವಾಗಿ ಸುಮಾರು 928=90 ರೂ. ಬೆಲೆಬಾಳುವ ಹೈವಾರ್ಡ್ಸ್ ಕಂಪನಿಯ ಮಧ್ಯದ 35 ಟೆಟ್ರಾ ಪಾಕೇಟಗಳ ಮಧ್ಯವನ್ನು ಸಂಗ್ರಹಿಸಿಕೊಂಡು ಸಾಗಾಟ ಮಾಡುತ್ತಿದ್ಧಾಗ ದಾಳಿ ಕಾಲಕ್ಕೆ ಸಿಕ್ಕಿದ್ದು, ಸದರಿ ಆರೋಪಿತನಿಂದ ಜಪ್ತ ಮಾಡಿಕೊಂಡು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
4] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 165/2017 ಕಲಂ. 457, 380 ಐ.ಪಿ.ಸಿ:
ದಿನಾಂಕ:-28-07-2017 ರಂದು ಮದ್ಯಾಹ್ನ 3-00 ಗಂಟೆಗೆ ಪಿರ್ಯಾದಿದಾರರಾದ ಶ್ರೀಪತಿ  ತಂದೆ ಪುಂಡರಿಕಾಕ್ಷಿ ಉಪಾಧ್ಯ ವಯ 59 ವರ್ಷ ಜಾತಿ ಬ್ರಾಹ್ಮಣ ಉ. ಕಿರಾಣಿ ವ್ಯಾಪಾರ ಸಾ. 4 ನೇ ವಾರ್ಡ ಕಾರಟಗಿ, ದಿನಾಂಕ 31-07-2017 ರಂದು ಬೆಳಿಗ್ಗೆ  9-00 ಗಂಟೆಗೆ ತಮ್ಮ ಕಿರಾಣಿ ಅಂಗಡಿ ವ್ಯಾಪಾರ ಮಾಡುವ ಸಲುವಾಗಿ ತಮ್ಮ ಮನೆಯ ಮುಖ್ಯ ಬಾಗಿಲಿಗೆ ಬೀಗ ಹಾಕಿಕೊಂಡು ಹೋದ ವೇಳೆಯಲ್ಲಿ  ಯಾರೋ ಕಳ್ಳರು ಈ ದಿನ  ದಿನಾಂಕ 31-07-2017 ರಂದು ಮುಂಜಾನೆ 9-00 ಗಂಟೆಯಿಂದ ಮದ್ಯಾಹ್ನ 12-30 ಗಂಟೆಯ ಅವಧಿಯಲ್ಲಿ ಫಿರ್ಯಾದಿದಾರರ ಮನೆಯ ಮುಖ್ಯ ಬಾಗಿಲಿನ ಬೀಗ ಮುರಿದು ಒಳಗೆ ಹೋಗಿ  ಅಲಮಾರ್ ನ ಬಾಗಿಲಿನ್ನು ಮೀಟಿ ಅದರಲ್ಲಿ ವ್ಯಾಪಾರ ಮಾಡಿ ಇಟ್ಟಿದ್ದ ನಗದು ಹಣ ರೂ.5 ಲಕ್ಷ, 50 ಸಾವಿರ ಗಳನ್ನು ಹಾಗೂ ಇನ್ನೊಂದು ಅಲಮಾರ್ ದಲ್ಲಿದ್ದ 1 ಬೆಳ್ಳಿಯ  ಪ್ಲೆಟ್, ಒಂದು ಬೆಳ್ಳಿ ಲೋಟ್ ಹಾಗೂ ಕೆಲವೊಂದು ಬೆಳ್ಳಿ ಕ್ವಾನಿ ಎಲ್ಲಾ ಸೇರಿ ಅಂದಾಜ 300 ಗ್ರಾಂ ಬೆಲೆ ಬಾಳುವ  .ಕಿ.ರೂ.12000/- ಗಳು ಹಿಗೆ ಒಟ್ಟು ಎಲ್ಲಾ ಸೇರಿ 5,62,000=00 ರೂ ಬೆಲೆಭಾಳುವ ನಗದು ಮತ್ತು ಬೆಳ್ಳಿಯ ಸಾಮಾಗ್ರಿಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಅವುಗಳನ್ನು ಪತ್ತೆ ಮಾಡಿ ಕಳುವು ಮಾಡಿ ಹೋದ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ
5] ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ. 115/2017 ಕಲಂ. 279, 337, 338 ಐ.ಪಿ.ಸಿ:

ದಿನಾಂಕ: 31-07-2017 ರಂದು ಸಾಯಾಂಕಾಲ 19-10 ಗಂಟೆಗೆ ಫಿರ್ಯಾದಿದಾರರಾದ ಮಾಬುಬಿ ಬೇನಾಳ ಸಾ: ಶಾಂತಗೇರಿ, ಹಾ/: ನೈನಾಪೂರ ರವರು ಠಾಣೆಗ ಹಾಜರಾಗಿ ತಮ್ಮ ಲಿಖಿತ ಫಿರ್ಯಾದಿ ಹಾಜರಪಡಿಸಿದ್ದರ ಸಾರಾಂಶವೇನೆಂದರೆ, ದಿನಾಂಕ: 28-07-2017 ರಂದು ಮಧ್ಯಾಹ್ನ 12-00 ಗಂಟೆಯ ಸುಮಾರು ಹನಮನಾಳಗೆ ಹೋಗಿ ಅಕ್ಕಿ ತೆಗೆದುಕೊಂಡು ಬರುತ್ತೇನೆ ಅಂತಾ ಹೇಳಿ  ತಮ್ಮ ಮೋಟಾರ್ ಸೈಕಲ್ ನಂ: ಕೆ.-37/ಹೆಚ್.-5948 ನೇದ್ದನ್ನು ತೆಗೆದುಕೊಂಡು ಹೋದನು. ನಂತರ ತಾನು ದಿನಾಂಕ: 28-07-2017 ರಂದು ಸಾಯಾಂಕಾಲ 16-30 ಗಂಟೆಯ ನೈನಾಪೂರ ಗ್ರಾಮದಲ್ಲಿ ಇದ್ದಾಗ, ತಮ್ಮ ಚಿಕ್ಕಪ್ಪ ಫೋನ್ ಮಾಡಿ ತಿಳಿಸಿದ್ದೇನೆಂದರೆ, ತನ್ನ ಗಂಡನಿಗೆ ಪಟ್ಟಲಚಿಂತಿ ಹತ್ತಿರ ರಸ್ತೆ ಅಪಘಾತವಾಗಿದೆ ಬದಾಮಿ ಆಪ್ಪತ್ರೆಗೆ ಕರೆದುಕೊಂಡು ಬರುತ್ತಿದ್ದಾರೆ ಅಂತಾ ತಿಳಿಸಿದ್ದರಿಂದ ತಾನು ಬದಾಮಿ ಕಾರೂಡಗಿಮಠ ಆಸ್ಪತ್ರೆಗೆ ಬಂದು ನೋಡಲು ವಿಷಯ ನಿಜವಿದ್ದು, ಅಪಘಾತದದಲ್ಲಿ ತನ್ನ ಗಂಡನಿಗೆ ಬಲಗಾಲ ಹಣೆ, ಮೊಣಕೈ, ಹಾಗೂ ಬಲಗಾಲ ತೊಡೆಗೆ, ಹಾಗೂ ಬಲಗಾಲ ಮೊಣಕಾಲ ಕೆಳಗೆ ಭಾರಿ ರಕ್ತಗಾವಾಗಿದ್ದು, ಅಪಘಾತದ ಬಗ್ಗೆ ತನ್ನ ಗಂಡನಿಗೆ ವಿಚಾರಿಸಲು ಹನಮನಾಳ ದಿಂದ ಅಕ್ಕಿ ತೆಗೆದುಕೊಂಡು ತಮ್ಮ ಮೋಟಾರ್ ಸೈಕಲ್ ಮೇಲೆ ಬರುತ್ತಿದ್ದಾಗ ಪಟ್ಟಲಚಿಂತಿ ಕಡೆಯಿಂದ ಎದುರುಗಡೆ ಒಬ್ಬ ಶಾಲಾ ಬಸ್ ಚಾಲಕ ಅತೀವೇಗ ಹಾಗೂ ಆಲಕ್ಷತನದಿಂದ ಶಾಲಾ ಬಸ್ ಚಾಲನೆ ಮಾಡಿಕೊಂಡು ಮೋಟಾರ್ ಸೈಕಲಗೆ ಟಕ್ಕರಕೊಟ್ಟು ಅಪಘಾತಪಡಿಸಿದ ಆಗ ತನಗೆ ಮೂರ್ಛೆ ಹೋಗಿದ್ದು, ನಂತರ ಸ್ವಲ್ಪ ಸುದಾರಿಸಿಕೊಂಡು ಅಪಘಾತ ಪಡಿಸಿದ ಶಾಲಾ ಬಸ್ ವಾಹನ ನಂಬರ ನೋಡಲು ಅದರ ನಂ: ಕೆ.-ಕೆ.-37/7775 ಇರುತ್ತದೆ.

0 comments:

 
Will Smith Visitors
Since 01/02/2008