ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಗಂಗಾವತಿ ನಗರ ಪೊಲೀಸ್ ಠಾಣಾ ಗುನ್ನೆ ನಂ. 174/2015
ಕಲಂ 4 ಕರ್ನಾಟಕ ಮಿತಿ ಮೀರಿದ ಬಡ್ಡಿ ವಿಧಿಸುವಿಕೆಯ ನಿಷೇಧ ಅಧಿನಿಯ 2004 ಮತ್ತು ಹಾಗೂ ಕಲಂ 420, 34 ಐ.ಪಿ.ಸಿ :.
ದಿನಾಂಕ 01-08-2015 ರಂದು 1730 ಗಂಟೆಗೆ ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು
ಕೊಪ್ಪಳ ರವರ ಕಾರ್ಯಾಲಯದಿಂದ ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 133/2015 ಕಲಂ.
04 ಕರ್ನಾಟಕ ಮಿತಿ ಮೀರಿದ ಬಡ್ಡಿ ವಿಧಿಸುವಿಕೆಯ ನಿಷೇಧ ಅಧಿನಿಯಮ 2004 ಮತ್ತು ಕಲಂ 504, 506,
420 ಐ.ಪಿ.ಸಿ. ನೇದ್ದು ಹದ್ದಿ ಪ್ರಯುಕ್ತ ಗಂಗಾವತಿ ನಗರ ಠಾಣೆಗೆ ವರ್ಗಾವಣೆಗೊಂಡು
ಬಂದಿದ್ದು ಇರುತ್ತದೆ. ಸದರಿ ಫಿರ್ಯಾದಿಯನ್ನು ದಿನಾಂಕ. 17-07-2015 ರಂದು ಸಂಜೆ 7-30
ಗಂಟೆಗೆ ಶ್ರೀ ವೀರಬಸಪ್ಪ ತಂದೆ ವೀರಣ್ಣ ನರೇಗಲ್, ವಯಸ್ಸು 43 ವರ್ಷ, ಜಾ:
ಲಿಂಗಾಯತ, ಉ: ಬೋರ್ ವೆಲ್ ಏಜೆನ್ಸಿ, ಸಾ: ಇರಕಲ್ ಗಡಾ ಹಾ:ವ: ಬಿ.ಟಿ. ಪಾಟೀಲ ನಗರ, ಕೊಪ್ಪಳ
ರವರು ಕೊಪ್ಪಳ ನಗರ ಪೊಲೀಸ್ ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದ್ದು, ಅದರ ಸಾರಾಂಶವೇನೆಂದರೆ, ಫಿರ್ಯಾದಿದಾರರು ದಿನಾಂಕ 15-04-2008 ರಂದು ಗಂಗಾವತಿಯ ಗೌರಿಶಂಕರ
ಟ್ರೇಡರ್ಸ್ ಮಾಲೀಕರಾದ ಷಣ್ಮುಖಪ್ಪ ಸಿಂಗನಾಳ ಹಾಗೂ ಆತನ ಮಕ್ಕಳಾದ ಸುರೇಶ, ಮಹೇಶ ಇವರಿಂದ ರೂ.
8,32,000/- ಗಳ ಸಾಲ ಪಡೆದಿದ್ದು, ಸಾಲಕ್ಕೆ ಪ್ರತಿಯಾಗಿ ಪ್ರಗತಿ ಗ್ರಾಮೀಣ ಬ್ಯಾಂಕಿನ 2
ಚೆಕ್ಕುಗಳನ್ನು ಮತ್ತು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಬ್ಯಾಂಕಿನ 2 ಚೆಕ್ಕುಗಳನ್ನು ಹಾಗೂ 2
ಪ್ರಾಮಿಸರಿ ನೋಟಗಳನ್ನು ಭದ್ರತೆಗಾಗಿ ಪಡೆದುಕೊಂಡಿದ್ದು, ಸದರಿ ಸಾಲಕ್ಕೆ ಅತೀಹೆಚ್ಚು ಬಡ್ಡಿ
ಸಮೇತವಾಗಿ ಒಟ್ಟು ರೂ. 34,00,000/- ಹಣವನ್ನು ವಸೂಲ ಮಾಡಿರುತ್ತಾರೆ. ಅಲ್ಲದೇ ಮೂರು
ಜನರು ನನಗೆ ಇನ್ನೂ ಸಾಲ ಬಾಕಿ ಇದೆ ನೀನು ಹೆಚ್ಚಿಗೆ ಮಾತನಾಡಿದರೆ ನಾವು ನಿನಗೆ
ಸಾಯಿಸಿಬಿಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿದ್ದು ಅಲ್ಲದೇ ನಾನು ಕೊಟ್ಟ ಚೆಕ್ಕುಗಳನ್ನು
ದುರುಪಯೋಗ ಪಡಿಸಿಕೊಂಡು ನನ್ನ ಮೇಲೆ ರೂ. 24,00,000/- ಗಳ ಚೆಕ್ ಬೌನ್ಸ್ ಕೇಸ್ ಹಾಕಿ ಮೋಸ
ಮಾಡಿರುತ್ತಾರೆ ಅಂತಾ ಮುಂತಾಗಿ ಇದ್ದ ಫಿರ್ಯಾದಿ ಸಾರಾಂಶದ ಮೇಲಿಂದ ಗಂಗಾವತಿ ನಗರ ಪೊಲೀಸ್
ಠಾಣೆ ಗುನ್ನೆ ನಂ. 174/2015 ಕಲಂ. 04 ಕರ್ನಾಟಕ ಮಿತಿ ಮೀರಿದ ಬಡ್ಡಿ ವಿಧಿಸುವಿಕೆಯ ನಿಷೇಧ
ಅಧಿನಿಯ 2004 ಹಾಗೂ ಕಲಂ. 504, 506, 420 ಐ.ಪಿ.ಸಿ. ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಕೊಂಡಿದ್ದು ಇರುತ್ತದೆ.
2) ಗಂಗಾವತಿ ನಗರ ಪೊಲೀಸ್ ಠಾಣಾ ಗುನ್ನೆ ನಂ. 175/2015
ಕಲಂ 4 ಕರ್ನಾಟಕ ಮಿತಿ ಮೀರಿದ ಬಡ್ಡಿ ವಿಧಿಸುವಿಕೆಯ ನಿಷೇಧ ಅಧಿನಿಯ 2004 ಮತ್ತು ಹಾಗೂ ಕಲಂ 420, 504, 506 ಐ.ಪಿ.ಸಿ :.
ದಿನಾಂಕ 01-08-2015 ರಂದು ರಾತ್ರಿ 8-30 ಶ್ರೀ ಹುಸೇನಸಾಬ
ತಂದೆ ರಜಾಕಸಾಬ ಆರಿವಾಲೆ, ವಯಸ್ಸು 46 ವರ್ಷ, ಜಾತಿ ಮುಸ್ಲಿಂ, ಉದ್ಯೋಗ ಟೈಲರಿಂಗ್, ಸಾಃ
ಪ್ರಶಾಂತನಗರ, ಗಂಗಾವತಿ ರವರು ಠಾಣೆಗೆ ಬಂದು ತಮ್ಮದೊಂದು ಫಿರ್ಯಾದಿ ನೀಡಿದ್ದು ಅದರ
ಸಾರಂಶವೇನೆಂದರೆ, ಫಿರ್ಯಾಧಿಯು ಸನ್ 2011 ನೇ ಸಾಲಿನಲ್ಲಿ ಆರೋಪಿತರಾದ (1) ಸಂಗಮೇಶ
ಸ್ವಾಮಿ ಹಾಗೂ (2) ಹೇರೂರ ವಿರುಪಾಕ್ಷ ಇಬ್ಬರೂ ಸಾ: ಗಂಗಾವತಿ ಇವರ ಬಳಿ ರೂ. 5.00
ರ ಬಡ್ಡಿಯಂತೆ ರೂ. 40,000-00 ಗಳ ಸಾಲವನ್ನು ಮಾಡಿದ್ದು, ಇಲ್ಲಿಯವರೆಗೆ ಪ್ರತಿ ತಿಂಗಳಿಗೆ ರೂ.
6,000-00 ರಂತೆ ಬಡ್ಡಿಯನ್ನು ಕಟ್ಟುತ್ತಾ ರೂ.2,88,000-00 ಹಣವನ್ನು ಕಟ್ಟಿದ್ದು
ಇರುತ್ತದೆ. ಆದಾಗ್ಯೂ ಆರೋಪಿತರು ಇನ್ನೂ ರೂ. 1,67,000-00 ಹಣವನ್ನು ಕಟ್ಟಬೇಕು ಅಂತಾ
ಕಿರಿಕಮಾಡುತ್ತಿದ್ದುದು ಇರುತ್ತದೆ. ಕಾರಣ ನನಗೆ ಮೋಸ ಮಾಡಿ ನನ್ನ ಹತ್ತಿರ ಅಧಿಕ ಬಡ್ಡಿ
ಕಟ್ಟಿಸಿಕೊಂಡು, ಇನ್ನೂ ಬಡ್ಡಿ ಕಟ್ಟಬೇಕು ಅಂತಾ ಕಿರಿಕಿರಿ ಮಾಡುವ ಮೇಲ್ಕಂಡವರ ಮೇಲೆ ಸೂಕ್ತ
ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ
ನಂ. 175/2015
ಕಲಂ 04 ಕರ್ನಾಟಕ ಮಿತಿ
ಮೀರಿದ ಬಡ್ಡಿ ವಿಧಿಸುವಿಕೆಯ ನಿಷೇದ ಅಧಿನಿಯಮ 2004 ಮತ್ತು ಕಲಂ 420 ಸಹಿತ 34 ಐ.ಪಿ.ಸಿ. ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
0 comments:
Post a Comment