Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Tuesday, August 4, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 194/2015  ಕಲಂ 78(3) Karnataka Police Act:
ದಿನಾಂಕ: 03-08-2015 ರಂದು ರಾತ್ರಿ 8-00 ಗಂಟೆಗೆ ಶ್ರೀ ಚಿತ್ತರಂಜನ್ ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ಮಟಕಾ ಜೂಜಾಟದ ದಾಳಿ ಮಾಡಿ ವರದಿಯನ್ನು ಹಾಜರಪಡಿಸಿದ್ದು, ಸದರಿ ಪ್ರಕರಣವು ಅಸಂಜ್ಞೆಯ ಪ್ರಕರಣವಾಗಿದ್ದರಿಂದ ಮಾನ್ಯ ಘನ ನ್ಯಾಯಾಲಯದಿಂದಾ ಅನುಮತಿ ಪಡೆದುಕೊಂಡಿದ್ದು, ಸದರಿ ದೂರಿನ ಸಾರಾಂಶವೇನೆಂದರೇ, ಇಂದು ದಿ:03-08-2015 ರಂದು ಸಾಯಂಕಾಲ 6-25 ಗಂಟೆಗೆ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ, ಯಲಮಗೇರಿ ಗ್ರಾಮದ ಸಣ್ಣ ನೀರಿನ ಟ್ಯಾಂಕ್ ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ  ಆರೋಪಿತನು ಬರ ಹೋಗುವ ಸಾರ್ವಜನಿಕರಿಗೆ ನೀವು ಬರೆಯಿಸಿದ ನಶಿಬದ ನಂಬರ ಹತ್ತಿದಲ್ಲಿ 1 ರೂಪಾಯಿಗೆ 80 ರೂಪಾಯಿಗಳನ್ನು ಕೊಡುತ್ತೇನೆ ಅಂತಾ ಕೂಗುತ್ತಾ ಮಟಕಾ ನಶಿಬದ ಜೂಜಾಟದಲ್ಲಿ ತೊಡಗಿದ್ದಾಗ ಪಿ.ಎಸ್.ಐ ಸಾಹೇಬರು ಹಾಗೂ ಸಿಬ್ಬಂದಿಗಳು ಕೂಡಿಕೊಂಡು ದಾಳಿ ಮಾಡಿ ಆರೋಪಿ ಬಸವರಾಜ ಸಾ: ಯಲಮಗೇರಿ ತಾಂಡಾ ಇತನಿಂದ ನಗದು ಹಣ ರೂ 900=00 ರೂ, ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ್ ಪೆನ್ ಇವುಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡಿದ್ದು, ಸದರಿ ಆರೋಪಿತನು ತಾನು ಬರೆದ ಪಟ್ಟಿಯನ್ನು ಕೊಪ್ಪಳದ ಪರಶುರಾಮ ಗಿಣಿಗೇರಿ ಇತನು ತೆಗೆದುಕೊಂಡು ಹೋಗುವುದಾಗಿ ತಿಳಿಸಿದ್ದು ಇರುತ್ತದೆ. ಅಂತಾ ಮುಂತಾಗಿ ನೀಡಿದ ದೂರಿನ ಮೇಲಿಂದ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈ ಗೊಂಡಿದ್ದು ಇರುತ್ತದೆ.
2) ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ. 77/2015  ಕಲಂ 279, 337, 338, 304(ಎ) ಐ.ಪಿ.ಸಿ:.

ದಿನಾಂಕ 03/08/2015 ರಂದು ಹುಚನೂರ-ಇಲಕಲ್ಲ ರಸ್ತೆಯ ಮೇಲೆ ಹುಚನೂರ ಸೀಮಾದಲ್ಲಿ ರಸ್ತೆ ಅಪಘಾತವಾಗಿ ಇಲಾಜ ಕುರಿತು ಇಲಕಲ್ಲ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆಯಾದ ಮಾಹಿತಿ ಮೇರೆಗೆ ಪಿ.ಎಸ್.ಐ. ರವರು ಆಸ್ಪತ್ರೆಗೆ ಬೇಟಿ ನೀಡಿ ಮದ್ಯಾಹ್ನ 1-00 ಗಂಟೆಯಿಂದ 1-45 ಗಂಟೆಯವರೆಗೆ ಫಿರ್ಯಾದಿ ಅಂಬವ್ವ ಅಂಠರಠಾಣ ರವರು ನೀಡಿರುವ ಲಿಖಿತ ಫಿರ್ಯಾದಿಯನ್ನು ಪಿ.ಸಿ-208 ರವರ ಸಂಘಡ ಕಳುಹಿಸಿಕೊಟ್ಟಿದ್ದರ ಫಿರ್ಯಾದಿ ಸಾರಾಂಶವೇನೆಂದರೆ, ಫಿರ್ಯಾದಿ ಹಾಗೂ ಗಾಯಾಳುಗಳು ಮತ್ತು ಇತರೆ ಇಬ್ಬರು ಸೇರಿ ಹುಚನೂರದಿಂದ ಇಲಕಲ್ಲ ಕಡೆಗೆ ಬೇವಿನ ಬೀಜ ಆರಿಸಲು ಹೋಗಲು ನಿಂತಾಗ ಹುಚನೂರ ಗ್ರಾಮದ ಶೇಖಪ್ಪ ಬುರ್ಲಿ ರವರ ಟ್ರ್ಯಾಕ್ಟರನ್ನು ಆತನ ಮಗ ಸಂಗಪ್ಪ ಬುರ್ಲಿ ಈತನು ನಡೆಯಿಸಿಕೊಂಡು ಇಲಕಲ್ಲ ಕಡೆಗೆ ಹೊರಟಿದ್ದು ಫಿರ್ಯಾದಿ ಹಾಗೂ ಇತರರು  ಟ್ರ್ಯಾಕ್ಟರನ್ನು ಕೈ ಮಾಡಿ ನಿಲ್ಲಿಸಿ ತಾವು ಬರುವದಾಗಿ ಹೇಳಿ ಎಲ್ಲರೂ ಸಣ್ಣ ಟ್ರ್ಯಾಕ್ಟರ ಟ್ರ್ಯಾಲಿಯಲ್ಲಿ ಹತ್ತಿ ಕುಳಿತಿದ್ದು ಆಗ ಟ್ರ್ಯಾಕ್ಟರನ್ನು ಸಂಗಪ್ಪ ಈತನು ಮುಂಜಾನೆ 10-00 ಗಂಟೆಯ ಸುಮಾರಿಗೆ ಅತೀ ವೇಗ ಮತ್ತು ಅಲಕ್ಷತನದಿಂದ ಜಕ್ಕಳ್ಳ ದಾಟಿ ಬಸನಗೌಡ ಹೊಸಗೌಡ್ರ ಹೊಲದ ಹತ್ತಿರ ಮಾನವ ಜೀವಕ್ಕೆ ಅಪಾಯಕಾರಿಯಾಗುವಂತೆ ನಡೆಯಿಸಿ ರಸ್ತೆಯ ಎಡ ಬದಿಗೆ ಟ್ರ್ಯಾಕ್ಟರನ್ನು ಪಲ್ಟಿ ಮಾಡಿ ಅಪಘಾತಪಡಿಸಿದ್ದು ಅಪಘಾತದಲ್ಲಿ ಫಿರ್ಯಾದಿಗೆ ಎಡಗಡೆಯ ಗಲ್ಲ ಹರಿದು ರಕ್ತಗಾಯವಾಗಿದ್ದು ಇನ್ನುಳಿದ ಗಾಯಾಳುಗಳಿಗೆ ಕೈ ಹಾಗು ಕಾಲು ಮುರಿದು ಒಳಪೆಟ್ಟಾಗಿ ಅದರಲ್ಲಿ ಕಮಲವ್ವ @ ಸಂಗವ್ವ ಇವರಿಗೆ ಕುತ್ತಿಗೆ ಹಾಗೂ ತಲೆಯ ಹಿಂದೆ ರಕ್ತಗಾಯವಾಗಿ ಮಿಸುಕಾಡುತ್ತಿದ್ದಾಗ ಫಿರ್ಯಾದಿ ಮತ್ತು ಇತರೆ ಗಾಯಾಳುಗಳೆಲ್ಲರೂ 108 ಅಂಬ್ಯೂಲೆನ್ಸದಲ್ಲಿ ಇಲಕಲ್ಲ ಸರಕಾರಿ ಆಸ್ಪತ್ರೆಗೆ ಬರುವಾಗ ದಾರಿ ಮದ್ಯದಲ್ಲಿ ಕಮಲವ್ವ @ ಸಂಗವ್ವ ಇವಳು ಮೃತಪಟ್ಟಿದ್ದು ಅಪಘಾತವಾದ ಟ್ರ್ಯಾಕ್ಟರ ಇಂಜನ್ ನಂ: ಕೆ.ಎ-29/ ಟಿ.ಎ-8787 ಟ್ರ್ಯಾಲಿ ನಂಬರ ಇರುವದಿಲ್ಲ. ಕಾರಣ ಅಪಘಾತಮಾಡಿದ ಸಂಗಪ್ಪ ತಂದಿ ಶೇಖಪಗ್ಪ ಬುರ್ಲಿ ಇವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಫಿರ್ಯಾದಿ ಮೇಲಿಂದ  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಅದೆ

0 comments:

 
Will Smith Visitors
Since 01/02/2008