ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಗಂಗಾವತಿ ನಗರ ಪೊಲೀಸ್ ಠಾಣಾ ಗುನ್ನೆ ನಂ. 178/2015
ಕಲಂ 4 ಕರ್ನಾಟಕ ಮಿತಿ ಮೀರಿದ ಬಡ್ಡಿ ವಿಧಿಸುವಿಕೆಯ ನಿಷೇಧ ಅಧಿನಿಯ 2004 ಮತ್ತು ಹಾಗೂ ಕಲಂ 420, 109, 504, ಸಹಿತ 34 ಐ.ಪಿ.ಸಿ :.
ದಿನಾಂಕ 04-08-2015 ರಂದು ಮಧ್ಯಾಹ್ನ 2-00 ಗಂಟೆಗೆ ಶ್ರೀ ಶೇಖಪ್ಪ ತಂದೆ
ಅಯ್ಯಪ್ಪ ಪೂಜಾರಿ, ವಯಸ್ಸು 53 ವರ್ಷ, ಜಾಃ ಮುಚಿಗೇರ, ಉಃ ಒಕ್ಕಲುತನ, ಸಾಃ 15ನೇ ವಾರ್ಡ,
ಮುಚಿಗೇರ ಓಣಿ, ಗಂಗಾವತಿ ರವರು ಠಾಣೆಗೆ ಹಾಜರಾಗಿ ತಮ್ಮದೊಂದು ಫಿರ್ಯಾದಿ ನೀಡಿದ್ದು ಅದರ ಸಾರಂಶವೇನೆಂದರೆ,
ಫಿರ್ಯಾಧಿಯು ಸನ್ 2013 ನೇ ಸಾಲಿನಲ್ಲಿ ಆರೋಪಿತನಾದ ತುಳಸಪ್ಪ ತಂದೆ ಯಂಕಪ್ಪ ಕಲ್ಮನಿ ಸಾಃ
ಗಂಗಾವತಿ ಇವರ ಬಳಿ ರೂ. 3.00 ರ ಬಡ್ಡಿಯಂತೆ ರೂ. 1,50,000-00 ಗಳ ಸಾಲವನ್ನು ಮಾಡಿದ್ದು,
ಇಲ್ಲಿಯವರೆಗೆ ಪ್ರತಿ ತಿಂಗಳಿಗೆ ರೂ. 6,000-00 ರಂತೆ ಬಡ್ಡಿಯನ್ನು ಕಟ್ಟುತ್ತಾ
ರೂ.2,00,000-00 ಹಣವನ್ನು ಕಟ್ಟಿದ್ದು ಇರುತ್ತದೆ. ಆದಾಗ್ಯೂ ಆರೋಪಿತರು ಇನ್ನೂ ರೂ.
8,00,000-00 ಹಣವನ್ನು ಕಟ್ಟಬೇಕು ಅಂತಾ ಕಿರಿಮಾಡುತ್ತಿದ್ದು ಕಾರಣ ನಾನು ನನ್ನ
ಹೊಲವನ್ನು ಒತ್ತಿ ಹಾಕಲು ಹೋದಾಗ ಅದಕ್ಕೂ ಬಿಡದೇ, ನನ್ನ ಮನೆಯ ಹತ್ತಿರ ಬಂದು ಲೇ ಸೂಳೇಮಗನೇ ನನ್ನ
ಸಾಲಾ ತೀರಿಸು ಅಂದ್ರ ಅವ್ರಿಗೆ ಹೊಲಾ ಮಾರಾಕ ಹೊಂಟಿ ನಿನ್ ಜೀವಾ ತೆಗಿತಿನಿ ಹುಷಾರ್ ಅಂತಾ
ಅವಾಚ್ಯವಾಗಿ ಬೈದಾಡಿ ಜೀವ ಬೆದರಿಕೆ ಹಾಕಿದ್ದು ಇರುತ್ತದೆ. ಈ ಬಗ್ಗೆ ತುಳಸಪ್ಪ ಇವನಿಗೆ
ದೇವರಾಜಶೆಟ್ಟಿ ಸಾಃ ಗಂಗಾವತಿ ಇವನು ಹೆಚ್ಚಿನ ಬಡ್ಡಿ ವಸೂಲಿ ಮಾಡುವಂತೆ ಕುಮ್ಮಕ್ಕು ನೀಡಿದ್ದು
ಇರುತ್ತದೆ. ಕಾರಣ ಮೇಲ್ಕಂಡ ಇಬ್ಬರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ
ಮುಂತಾಗಿದ್ದ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
0 comments:
Post a Comment