ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕೊಪ್ಪಳ ಸಂಚಾರಿ ಪೊಲೀಸ್ ಠಾಣೆ
ಗುನ್ನೆ ನಂ. 47/2015 ಕಲಂ 279, 337 ಐ.ಪಿ.ಸಿ :.
ದಿನಾಂಕ 09-08-2015 ರಂದು ರಾತ್ರಿ 2-00 ಗಂಟೆಗೆ ಕೊಪ್ಪಳದ ಕಿಮ್ಸ ಆಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಕೂಡಲೇ
ಆಸ್ಪತ್ರೆಗೆ ಹೋಗಿ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಗೆ ಚಿಕಿತ್ಸೆ ಕೊಡಿಸಿತ್ತಿರುವ
ಫಿರ್ಯಾದಿದಾರರಾದ ಅರ್ಶದ ತಂದೆ ಜಾಫರಸಾಬ ಪಠಾಣ ವಯ. 22 ಜಾತಿ. ಮುಸ್ಲಿಂ ಉ.ವ್ಯಾಪಾರ
ಸಾ. ವಾರ್ಡ ನಂ. 3 ಹಮಾಲರಕಾಲೋನಿ ಕೊಪ್ಪಳ ಇವರ ಹೇಳಿಕೆಯನ್ನು ಪಡೆದುಕೊಂಡಿದ್ದು ಅದರ ಸಾರಾಂಶವೆನೆಂದರೆ, ನಿನ್ನೆ ದಿನಾಂಕ 08-08-2015 ರಂದು ರಾತ್ರಿ 10-30 ಗಂಟೆಯ ಸುಮಾರಿಗೆ ಫಿರ್ಯಾದಿದಾರರು ತಮ್ಮ ಹಣ್ಣಿನ ಅಂಗಡಿಯಲ್ಲಿರುವಾಗ
ಗಾಯಾಳು ಬಾಬುಸಾಬ ಆಧೋನಿ ಇತನು ಎನ್.ಹೆಚ್-63 ರಸ್ತೆಯನ್ನು ದಾಟುತ್ತಿರುವಾಗ
ಬಸ್ ನಿಲ್ದಾಣದ ಕಡೆಯಿಂದ ಒಬ್ಬ ಸ್ಕೂಟಿ ನಂ. KA-37/Y-3789 ನೆದ್ದರ ಸವಾರನು ತಾನು
ಚಲಾಯಿಸುತ್ತಿರುವ ಸ್ಕೂಟಿಯನ್ನು ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು
ರಸ್ತೆಯನ್ನು ದಾಟುತ್ತಿದ್ದ ಬಾಬುಸಾಬ ಇವರಿಗೆ ಟಕ್ಕರಮಾಡಿ ಅಪಘಾತಮಾಡಿದನು. ಇದರಿಂದ ಬಾಬುಸಾಬ
ಇವರಿಗೆ ಎಡಗಾಲ ಮೊಣಕಾಲ ಕೆಳಗೆ ರಕ್ತಗಾಯ, ಬೆನ್ನಿಗೆ ಮತ್ತು ತಲೆಯ
ಹಿಂದೆ ತೆರಚಿದ ಗಾಯಗಳು ಆಗಿರುತ್ತವೆ ಅಂತಾ ಮುಂತಾಗಿದ್ದ ಹೇಳಿಕೆ ಫಿರ್ಯಾದಿಯ ಸಾರಾಂಶದ ಮೇಲಿಂದ
ಠಾಣಾ ಗುನ್ನೆ ನಂ. 47/2015 ಕಲಂ. 279, 337 ಐ.ಪಿ.ಸಿ ಯಾಕ್ಟ ಅಡಿಯಲ್ಲಿ
ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆಯನ್ನು ಕೈಕೊಂಡೆನು.
2) ಕೊಪ್ಪಳ ನಗರ ಪೊಲೀಸ್ ಠಾಣೆ
ಗುನ್ನೆ ನಂ. 154/2015 ಕಲಂ 417, 419, 420 ಸಹಿತ 34 ಐ.ಪಿ.ಸಿ :.
ಮಾನ್ಯ ನ್ಯಾಯಾಲಯದ ಖಾಸಗಿ
ಪಿರ್ಯಾಧಿ ನಂ 1255/15 ದಿ: 06/08/2015 ನೇದ್ದನ್ನ ಕೋರ್ಟ್ ಪಿಸಿ-414 ರವರು ಹಾಜರುಪಡಿಸಿದ್ದು
ಇಂದು ದಿ: 08-08-2015 ರಂದು 06-30 ಪಿ.ಎಮ್ ಕ್ಕೆ ಸರ್ದಿ ಖಾಸಗಿ ಪಿರ್ಯಾಧಿಯ ಸಾರಾಂಶವೇನೆಂದರೆ,
ಪಿರ್ಯಾಧಿ ವನಪಾಲ ದಸ್ತೇನವರು ಸಾ: ಕೊಪ್ಪಳ ಇವರಿಗೆ ಸರ್ದಿ ಆರೋಪಿತರು ಗುರುಟೆಕ್ ಇನವೆಸ್ಟಮೆಂಟ್
[ಮೈಸೂರು] ಪ್ರೈ.ಲಿ ವ್ಯವಸ್ಥಾಪಕರಾಗಿದ್ದವರು ಕೂಡಿಕೊಂಡು ತಮ್ಮ ಕಂಪನಿಯಲ್ಲಿ ಹಣ ತೊಡಗಿಸಿದರೆ
ಕಲವು ಅವಧಿ ಮುಗಿದ ನಂತರ ಒಳ್ಳೆಯ ಮೊತ್ತವನ್ನು ಪಡೆಯಬಹುದು ಅಂತಾ ನಂಬಿಸಿ ವಿವಿಧ ಸ್ಕೀಮ್ ನಲ್ಲಿ
ಒಟ್ಟು 5,53,786/- ರೂ ಹಾಗೂ 1,25,000/- ರೂ ಹಣವನ್ನು ಕಟ್ಟಿಸಿಕೊಂಡು ಕರಾರಿನಂತೆ ನಡೆದುಕೊಳ್ಳದೇ
ವಂಚಿಸಿ ಮೋಸಗೊಳಿಸಿರುತ್ತಾರೆ ಅಂತಾ ಇರುವ ದೂರಿನ ಮೇಲಿಂದ ಕೊಪ್ಪಳ ನಗರ ಠಾಣೆ ಗುನ್ನೆ ನಂ
154/2015 ಕಲಂ 417, 419, 420 ಸಹಿತ 34 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು
ಅದೆ.
3) ಗಂಗಾವತಿ ನಗರ ಪೊಲೀಸ್ ಠಾಣೆ
ಯು.ಡಿ.ಆರ್ನಂ. 22/2015 ಕಲಂ 174 ಸಿ.ಆರ್.ಪಿ.ಸಿ :
ದಿನಾಂಕ 08-08-2015 ರಂದು 18-00 ಗಂಟೆಗೆ ಶ್ರೀಮತಿ ಯಂಕಮ್ಮ ಗಂಡ ದಿ: ಫಕೀರಪ್ಪ ಕುರಿನೂರ
ವಯಸ್ಸು 60 ವರ್ಷ ಜಾ:ಉಪ್ಪಾರ ಉ: ಕೂಲಿ ಕೆಲಸ ಸಾ: ಬನ್ನಿಗಿಡ ಕ್ಯಾಂಪ್, ಗಂಗಾವತಿ ರವರು ಠಾಣೆಗೆ
ಬಂದು ತಮ್ಮದೊಂದು ಫಿರ್ಯಾದಿ ನೀಡಿದ್ದು ಅದರ ಸಾರಂಶವೇನೆಂದರೆ, ಫಿರ್ಯಾದಿದಾರರ ಮಗಳಾದ ಶ್ರೀಮತಿ
ಹುಲಿಗೆಮ್ಮ ಗಂಡ ಹನುಮಂತ ಇಕೆಯ ಮದುವೆ ಆಗಿ 13 ವರ್ಷಗಳಾಗಿದ್ದು ಇನ್ನು ಮಕ್ಕಳು ಆಗದಿದ್ದರಿಂದ ಈ
ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡಿದ್ದು ಎರಡು ದಿವಸಗಳಿಂದ ಗಂಡನ ಮನೆಯಿಂದ ಗಂಗಾವತಿಯ ತವರು
ಮನೆಗೆ ದೇವರ ಕಾರ್ಯ ನಿಮಿತ್ಯವಾಗಿ ಬಂದಿದ್ದು, ದಿನಾಂಕ 08-08-2015 ರಂದು ಮಧ್ಯಾಹ್ನ 1-30
ಗಂಟೆಯ ಸುಮಾರಿಗೆ ಬನ್ನಿಗಿಡ ಕ್ಯಾಂಪಿನಲ್ಲಿರುವ ಮನೆಯಲ್ಲಿ ಯಾರೂ ಇರದಿರುವಾಗ ಶ್ರೀಮತಿ
ಹುಲಿಗೆಮ್ಮ ಇಕೆಯು ತನಗೆ ಇನ್ನು ಮಕ್ಕಳು ಆಗಿರುವುದಿಲ್ಲವೆಂದು ಜೀವನದಲ್ಲಿ ಜಿಗುಪ್ಸೆಗೊಂಡು
ಸೀಮೆ ಎಣ್ಣೆಯನ್ನು ಮೈಮೇಲೆ ಸುರುವಿಕೊಂಡು ಬೆಂಕಿ ಹಚ್ಚಿಕೊಂಡಿದ್ದು, ಚಿಕಿತ್ಸೆಗಾಗಿ ಗಂಗಾವತಿಯ
ಸರಕಾರಿ ಆಸ್ಪತ್ರೆಗೆ ಬಂದಿದ್ದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ
ಕರೆದುಕೊಂಡು ಹೋದಾಗ ಅಲ್ಲಿ ಸಾಯಂಕಾಲ 5-45 ಗಂಟೆಯ ಸುಮಾರಿಗೆ ಶ್ರೀಮತಿ ಹುಲಿಗೆಮ್ಮ ಇಕೆಯು
ಮೃತಪಟ್ಟಿರುತ್ತಾಳೆ. ಹುಲಿಗೆಮ್ಮ ಇಕೆಯ ಮರಣದಲ್ಲಿ ಯಾವುದೇ ರೀತಿಯ ಸಂಶಯ ವಗೈರೆ
ಇರುವುದಿಲ್ಲವೆಂದು ನೀಡಿದ ಫಿರ್ಯಾದಿ ಸಾರಂಶದ ಮೇಲಿಂದ ಗಂಗಾವತಿ ನಗರ ಠಾಣೆ ಯು.ಡಿ.ಆರ್. ನಂ.
22/15 ಕಲಂ 174 ಸಿಆರ್ ಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು
ಇರುತ್ತದೆ.
0 comments:
Post a Comment