Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Thursday, October 22, 2015

1) ಕುಕನೂರ ಪೊಲೀಸ್ ಠಾಣೆ ಗುನ್ನೆ. ನಂ. 142/2015  ಕಲಂ. 87 Karnataka Police Act.
ದಿನಾಂಕ: 21-10-2015 ರಂದು 3-30 ಪಿಎಂಕ್ಕೆ ಪಿ.ಎಸ್.. ಕುಕನೂರ ಠಾಣೆರವರು ಠಾಣೆಗೆ ಹಾಜರಾಗಿ 3-40 ಪಿಎಂಕ್ಕೆ ದಾಳಿ ಪಂಚನಾಮೆ ಲಗತ್ತಿಸಿ, ಸರ್ಕಾರೀ ತರ್ಫೆ ಪಿರ್ಯಾದಿಯನ್ನು ಮುದ್ದೆಮಾಲು ಹಾಗೂ ವಶಕ್ಕೆ ಪಡೆದ 9 ಜನ ಆರೋಪಿತರನ್ನು ಹಾಜರಪಡಿಸಿ ವರದಿ ನೀಡಿದ್ದು, ಅದರ ಸಾರಾಂಶವೇನೆಂದರೆ, ಇಂದು ಜೂಜಾಟದ ಮಾಹಿತಿ ಬಂದ ಪ್ರಕಾರ ತಾವು ಮಾನ್ಯ ಸಿಪಿಐ ಸಾಹೇಬರು, ಯಲಬುರ್ಗಾರವರೊಂದಿಗೆ ಇಬ್ಬರೂ ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ 2-00 ಪಿಎಂಕ್ಕೆ ಮುತ್ತಾಳ ಗ್ರಾಮದ ಹಳ್ಳದ ದಂಡೆಯ ಸಾರ್ವಜನಿಕ ಬಯಲು ಜಾಗೆಯಲ್ಲಿ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ, ಸದರಿಯವರನ್ನು ವಶಕ್ಕೆ ಪಡೆದುಕೊಂಡು ಸದರಿಯವರಿಂದ ಹಾಗೂ ಜೂಜಾಟದ ಕಣದಿಂದ ಒಂದು ಪ್ಲಾಸ್ಟಿಕ್ ಬರಕಾ, 52 ಇಸ್ಪೀಟ್ ಎಲೆಗಳು ಹಾಗೂ ಜೂಜಾಟದ ನಗದು ಹಣ 24,400/- ರೂ.ಗಳನ್ನು ಜಪ್ತ ಪಡಿಸಿಕೊಂಡಿದ್ದು, ಈ ಬಗ್ಗೆ ಇಸ್ಪೀಟ್ ಜೂಜಾಟದ ದಾಳಿ ಪಂಚನಾಮೆಯನ್ನು ಪೂರೈಸಿಕೊಂಡು ಬಂದಿದ್ದು, ಕಾರಣ, ಸದರಿಯವರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಲು ಸೂಚಿಸಿದೆ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಕುಕನೂರ ಪೊಲೀಸ್ ಠಾಣಾ ಗುನ್ನೆ ನಂ: 142/2015 ಕಲಂ:87 ಕೆ.ಪಿ. ಅಕ್ಟ್ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದುಇರುತ್ತದೆ.
2) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 255/2015 ಕಲಂ.279, 304(ಎ) ಐ.ಪಿ.ಸಿ. ಮತ್ತು 187 ಐ.ಎಂ.ವಿ. ಕಾಯ್ದೆ:.
ದಿನಾಂಕ-21.10.2015 ರಂದು ಬೆಳೆಗ್ಗೆ 09.45 ಗಂಟೆಗೆ ಫಿರ್ಯಾದಿದಾರರಾದ ಗುರುಬಸಯ್ಯ ಬ್ರಹ್ನಮಠ ಸಾ: ಬಿಸರಳ್ಳಿ ಹಾ.ವ: ಬೆಟಗೇರಿ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರನ್ನು ಹಾಜರಪಡಿಸಿದ್ದು ಅದರ ಸಾರಾಂಶವೆನೆಂದರೆ, ದಿ:21.10.2015 ರಂದು ಬೆಳೆಗ್ಗೆ 07.40 ಗಂಟೆಗೆ ಫಿರ್ಯಾದಿದಾರರ ಚಿಕ್ಕಪ್ಪನಾದ ವೀರಯ್ಯ ಬ್ರಹ್ನಮಠ ವಯ: 55 ವರ್ಷ, ಇವರು ತಮ್ಮ ಮೋಟಾರ ಸೈಕಲ್ ನಂ: ಕೆಎ-36/ಹೆಚ್-667 ನೇದ್ದನ್ನು ಓಡಿಸಿಕೊಂಡು ಕೋಳೂರ ಕ್ರಾಸ್ ಹತ್ತಿರ ಕೊಪ್ಪಳ ಕಡೆಗೆ ಬರುತ್ತಿದ್ದಾಗ ಅದೇವೇಳೆಗೆ ಗದಗ ಕಡೆಯಿಂದ ವಿ.ಆರ್.ಎಲ್ ಕಂಪನಿಯ ಬಸ್ ನಂ: ಕೆಎ-25/ಸಿ-8907 ನೇದ್ದರ ಚಾಲಕನು ತನ್ನ ಬಸನ್ನು ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದಾ ಮಾನವ ಜೀವಕ್ಕೆ ಅಪಾಯಕರವಾಗುವ ರೀತಿಯಲ್ಲಿ ಓಡಿಸಿಕೊಂಡು ಬಂದು ಮೋಟಾರ ಸೈಕಲ್ ಗೆ ಟಕ್ಕರ ಕೊಟ್ಟು ಅಪಘಾತ ಮಾಡಿದ್ದರಿಂದ ಸವಾರ ವೀರಯ್ಯ ಇವರ ತಲೆಗೆ ಭಾರಿ ರಕ್ಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಅಪಘಾತ ಮಾಡಿದ ಬಸ್ ಚಾಲಕನು ತನ್ನ ಬಸ್ ನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು, ಸದರಿ ಬಸ್ ಚಾಲಕನನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರಿನ ಮೇಲಿಂದ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
3) ಯಲಬುರ್ಗಾ ಪೊಲೀಸ್ ಠಾಣಾ ಗುನ್ನೆ ನಂ. 106/2015  ಕಲಂ 287, 337, 338, 304(ಎ) ಐ.ಪಿ.ಸಿ:.
ದಿನಾಂಕ -21-10-2015 ರಂದು ಸಾಯಾಂಕಾಲ 5 ಗಂಟೆಯ ಸುಮಾರಿಗೆ ದಾವಲಸಾಬ ತಂದೆ ಇಸ್ಮಾಯಿಲಸಾಬ ಕೌಡಲಿ ಇತನು ತನ್ನ ಮೋಟಾರ ಸೈಕಲ ನಂ: ಕೆ.-29/ಆರ್-1489 ನೇದ್ದನ್ನು ತೆಗೆದುಕೊಂಡು ಅದರ ಹಿಂದುಗಡೆ ಗಾಯಾಳು ಭೀಮಪ್ಪನನ್ನು ಕೂಡಿಸಿಕೊಂಡು ಮೋಟಾರ ಸೈಕಲನ್ನು ಸಂಕನೂರ ಗ್ರಾಮದಿಂದ ಗಜೇಂದ್ರಗಡಾಕ್ಕೆ ಸಂಕನೂರ ಕ್ರಾಸ್ ಮಾರ್ಗವಾಗಿ ನಡೆಯಿಸಿಕೊಂಡು ಸಂಕನೂರ-ಯಲಬುರ್ಗಾ ರಸ್ತೆಯ ಪೂರ್ವ ಭಾಗದಲ್ಲಿ ರಸ್ತೆಗೆ ಹೊಂದಿಕೊಂಡು ಸಂಕನೂರ ಸೀಮಾದಲ್ಲಿ ಬರುವ ಮಾರುತೇಪ್ಪ ಗೋಡಿನಹಾಳ ಇವರ ಹೊಲದ ಹತ್ತಿರ ಹೋಗುತ್ತಿದ್ದಾಗ ಒಂದು ಹಿಟಾಚಿಯ ಆಪರೇಟರ ಈತನು ರಸ್ತೆಯ ಮಗ್ಗಲು ಇರುವ ತೆಗ್ಗಿನಲ್ಲಿಯ ಮಣ್ಣನ್ನು ತೆಗೆದು ರಸ್ತೆಯ ಮೇಲೆ ಹಾಕುತ್ತಾ ಬರ ಹೋಗುವ ವಾಹನಗಳನ್ನು ಲೇಕ್ಕಿಸದೇ ನಿರ್ಲಕ್ಷತನದಿಂದ ಮತ್ತು ಬೇಜವಾಬ್ದಾರಿತನದಿಂದ ಸಂಕನೂರ ಗ್ರಾಮದ ಕಡೆಯಿಂದ ಬರುತ್ತಿದ್ದ ದಾವಲಸಾಬ ಕೌಡಲಿ ಈತನಿಗೆ ಮತ್ತು ಅವನ ಮೋಟಾರ ಸೈಕಲನ್ನು ಹಾಗೂ ಅವನ ಹಿಂದೆ ಕುಳಿತುಕೊಂಡಿದ್ದ ಭೀಮಪ್ಪನಿಗೆ ಲೇಕ್ಕಿಸದೇ ಅವರಿಗೆ ಹಿಟಾಚಿಯ ಬಾಕೇಟಿನಿಂದ ಜೋರಾಗಿ ಠಕ್ಕರ ಕೊಟ್ಟದ್ದು. ಇದರಿಂದ ದಾವಲಸಾಬ ಕೌಡಲಿ ಮತ್ತು ಅವನ ಹಿಂದುಗಡೆ ಕುಳಿತುಕೊಂಡಿದ್ದ ಗಾಯಾಳು ಭೀಮಪ್ಪ ರಸ್ತೆಯ ಮೇಲೆ ಬಿದ್ದಿದ್ದು. ಇದರಿಂದ ದಾವಲಸಾಬನಿಗೆ ಎಡಗೈ ರಟ್ಟೆಗೆ, ಎಡಗೈ ಮುಂಗೈ ಮೇಲೆ, ಎಡಗಡೆ ಎದೆಗೆ, ಎಡಗಡೆ ಹೊಟ್ಟೆಗೆ, ಎಡ ತೊಡೆಗೆ, ತೆರಚಿದ ನಮೂನೆಯ ಗಾಯಗಳಾಗಿದ್ದು, ಎಡ ಮೊಣಕಾಲ ಕೆಳಗೆ ಪೆಟ್ಟು ಬಿದ್ದು ರಕ್ತಗಾಯವಾಗಿದ್ದು, ಬಲಗಾಲ ತೊಡೆಯ ಒಳಬಾಗದಲ್ಲಿ ಭಾರಿ ಸ್ವರೂಪದ ಗಾಯವಾಗಿದ್ದು ಇತ್ತು. ಮೋಟಾರ್ ಸೈಕಲ ಹಿಂದುಗಡೆ ಕುಳಿತುಕೊಂಡಿದ್ದ ಗಾಯಾಳು ಭೀಮಪ್ಪನಿಗೆ ಎಡಗೈ ರಟ್ಟೆಗೆ ರಕ್ತಗಾಯವಾಗಿದ್ದು, ತಲೆಯ ಹಿಂಬಾಗ ಭಾರಿ ಸ್ವರೂಪದ ರಕ್ತಗಾಯವಾಗಿದ್ದು, ಸದ್ರಿಯವರಿಗೆ ಚಿಕಿತ್ಸೆಗಾಗಿ ಗಜೇಂದ್ರಗಡಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲ ಮಾಡಿದ್ದು, ನಂತರ ವೈಧ್ಯರ ಸಲಹೆ ಮೇರೆಗೆ ದಾವಲಸಾಬನಿಗೆ ಹೆಚ್ಚಿನ ಚಿಕಿತ್ಸೆಗಾಗಿ ಗದಗಿಗೆ ಕರೆದುಕೊಂಡು ಹೋಗುತ್ತಿರುವಾಗ ರಸ್ತೆ ಮಾರ್ಗದ ಮಧ್ಯದಲ್ಲಿ ಬರುವ ಸಂಕನೂರ ಕ್ರಾಸ್ ಸಮೀಪ ಸಂಜೆ 7 ಗಂಟೆಗೆ ಮೃತ ಪಟ್ಟಿದ್ದು ಇರುತ್ತದೆ. ಟಾಟಾ ಹಿಟಾಚಿ ಮಾಡಲ ನಂ : EX  70 ಮಶೀನ ನಂ: 0703-6468  ನೇದ್ದರ  ಅಪರೇಟರನು ಟಾಟಾ ಹಿಟಾಚಿಯನ್ನು ಬಿಟ್ಟು ಹೋಡಿ ಹೋಗಿದ್ದರಿಂದ ಅವನ ಹೆಸರು ಮತ್ತು ವಿಳಾಸ ಗೊತ್ತಾಗಿರುವದಿಲ್ಲ.  ಅಂತಾ ಮುಂತಾಗಿ ಇದ್ದ ಪಿರ್ಯಾದಿಯ ಸಾರಾಂಶ ಸಾರಾಂಶ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008