1) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 100/2016
ಕಲಂ: 87 Karnataka Police Act.
ದಿನಾಂಕ:-17-03-2016
ರಂದು ಸಂಜೆ 5:30 ಗಂಟೆಗೆ ಶ್ರೀ ಹನುಮರಡ್ಡೆಪ್ಪ ಪಿ.ಎಸ್.ಐ. ಗಂಗಾವತಿ ಗ್ರಾಮೀಣ ಠಾಣೆ ರವರು ಮೂಲ
ವರದಿಯೊಂದಿಗೆ ಮೂಲ ಪಂಚನಾಮೆ, ಇಸ್ಪೀಟ್ ಜೂಜಾಟಕ್ಕೆ ಸಂಭಂದಿಸಿದಂತಹ ಮುದ್ದೆಮಾಲು ಹಾಗೂ
ಆರೋಪಿತರನ್ನು ಹಾಜರಪಡಿಸಿದ್ದು ಅದರ ಸಾರಾಂಶ ಈ ಪ್ರಕಾರ ಇದೆ. ಇಂದು ದಿನಾಂಕ: 17-03-2016 ರಂದು
ಮಧ್ಯಾಹ್ನ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಜೀರಾಳ ಕಲ್ಗುಡಿ ಗ್ರಾಮದ ವಾಲ್ಮೀಕಿ
ಮೂರ್ತಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಂದಾರ ಬಹಾರ ಎಂಬ ಇಸ್ಪೀಟ್ ಜೂಜಾಟದ ನಡೆಯುತ್ತಿದೆ
ಅಂತಾ ಖಚಿತವಾದ ಬಾತ್ಮಿ ಮೇರೆಗೆ ಮಾನ್ಯ ಡಿ.ಎಸ್.ಪಿ. ಹಾಗೂ ಸಿಪಿಐ ಸಾಹೇಬರವರ ಮಾರ್ಗದರ್ಶನದಲ್ಲಿ
ನಾನು ಸಿಬ್ಬಂದಿಯವರಾದ ಹೆಚ್.ಸಿ. 68, 156 ಪಿ.ಸಿ. 110, 160, 180, 323, 277, 13, 358, 386 ಹಾಗೂ
ಸರಕಾರಿ ಜೀಪ ನಂ ಕೆ.ಎ-37/ ಜಿ-307 ನೇದ್ದರ ಜೀಪ ಚಾಲಕ ಎ.ಪಿ.ಸಿ. ಕನಕಪ್ಪ ರವರೊಂದಿಗೆ ಇಬ್ಬರು
ಪಂಚರನ್ನು ಬರಮಾಡಿಕೊಂಡು ಸರಕಾರಿ ಜೀಪ್ ಹಾಗೂ ಸಿಬ್ಬಂದಿಯವರ ವೈಯಕ್ತಿಕ ಮೋಟಾರ ಸೈಕಲನಲ್ಲಿ
ಗಂಗಾವತಿಯಿಂದ ಮಧ್ಯಾಹ್ನ 3:00 ಗಂಟೆಗೆ ಹೊರಟೆವು. ಆನೆಗುಂದಿ ಊರ ಮುಂದೆ ಜೀಪ ಹಾಗೂ ಮೋಟಾರ
ಸೈಕಲಗಳನ್ನು ನಿಲ್ಲಿಸಿ ಎಲ್ಲರೂ ನಡೆದುಕೊಂಡು ಹೋಗಿ ನೋಡಲಾಗಿ ವಾಲ್ಮೀಕಿ ಮೂತರ್ಿಯ
ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಜನರು ದುಂಡಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ
ಇಸ್ಪೇಟ್ ಎಲೆಗಳಿಂದ ಅಂದರ್ ಬಹಾರ್ ಎನ್ನುವ ಕಾನೂನು ಬಾಹಿರವಾದ ಅದೃಷ್ಠದ ಇಸ್ಪೇಟ್ ಜೂಜಾಟದಲ್ಲಿ
ತೊಡಗಿದ್ದು, ಆಗ ಸಮಯ ಮಧ್ಯಾಹ್ನ 3:45 ಗಂಟೆಯಾಗಿದ್ದು ಕೂಡಲೇ ಅವರ ಮೇಲೆ ದಾಳಿ
ಮಾಡಲಾಗಿ ಜೂಜಾಟದಲ್ಲಿ ತೊಡಗಿದ್ದ 8 ಜನರು ಸಿಕ್ಕಿ ಬಿದ್ದಿದ್ದು, ಕೆಲವರು
ಅಲ್ಲಿಂದ ಓಡಿ ಹೋದರು. ಸಿಕ್ಕವರ ಹೆಸರನ್ನು ವಿಚಾರಿಸಲು (1) ಹೇಮೇಸಿ ತಂದೆ ಕಾಜನಗೌಡ ಈಳಿಗರು, ವಯಸ್ಸು 55
ವರ್ಷ, ಉ: ವ್ಯವಸಾಯ ಸಾ: ಜೀರಾಳ ಕಲ್ಗುಡಿ (2) ನರಸಪ್ಪ ತಂದೆ ಬಸಪ್ಪ
ಮಲ್ಲಿಗವಾಡ, 50 ವರ್ಷ, ನಾಯಕ, ವ್ಯವಸಾಯ ಸಾ: ಜೀರಾಳ ಕಲ್ಗುಡಿ (3) ಈರಣ್ಣ ತಂದೆ ಈರಪ್ಪ ಹಳ್ಳದ ಮನೆ, 32 ವರ್ಷ, ಜಾತಿ:
ಮೋಚಿ ಉ: ವ್ಯವಸಾಯ ಸಾ: ಜೀರಾಳ ಕಲ್ಗುಡಿ (4) ಮಳಿಯಪ್ಪ ತಂದೆ ಕನಕಪ್ಪ ಭಜಂತ್ರಿ, 33 ವರ್ಷ, ಕೂಲಿ ಕೆಲಸ
ಸಾ: ಜೀರಾಳ ಕಲ್ಗುಡಿ (5) ಕಂಪಗಪ್ಪ ತಂದೆ ನಾಗಪ್ಪ, ಹರಿಜನ, 50 ವರ್ಷ, ವ್ಯವಸಾಯ
ಸಾ: ಜೀರಾಳ ಕಲ್ಗುಡಿ (6) ಯಲ್ಲಪ್ಪ ತಂದೆ ಯಲ್ಲಪ್ಪ ಗಾಣಿಗೇರ, 55 ವರ್ಷ, ಕೂಲಿ ಕೆಲಸ
ಸಾ: ಗಾಂಧೀನಗರ (7) ಹನುಮಂತ ತಂದೆ ಪದ್ಮಯ್ಯ ದಾಸರ, 40 ವರ್ಷ, ಕೂಲಿ ಕೆಲಸ
ಜೀರಾಳ ಕಲ್ಗುಡಿ (8) ಈರಪ್ಪ ತಂದೆ ಮಲ್ಲಪ್ಪ ಬುರ್ಲಿ, ವಯಸ್ಸು 55
ವರ್ಷ, ಜಾತಿ: ಮೋಚಿ ಉ: ಕೂಲಿ ಕೆಲಸ ಸಾ: ಜೀರಾಳ ಕಲ್ಗುಡಿ ಅಂತಾ ತಿಳಿಸಿದ್ದು
ಅವರಿಂದ ಹಾಗೂ ಸ್ಥಳದಿಂದ ಜೂಜಾಟದ ನಗದು ಹಣ ರೂ. 1,800/- ರೂಪಾಯಿ, 52
ಇಸ್ಪೀಟ್ ಎಲೆಗಳು, ಹಾಗೂ ನೆಲದ ಮೇಲೆ ಹಾಸಿದ್ದ ಒಂದು ಪ್ಲಾಸ್ಟಿಕ್ ಬರಕಾ ಸಿಕ್ಕಿದ್ದು ಇರುತ್ತದೆ. ಪ್ರಕರಣ ದಾಖಲು
ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2)
ಗಂಗಾವತಿ
ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 101/2016 ಕಲಂ: 78(3) Karnataka Police Act.
ದಿನಾಂಕ:
17-03-2016 ರಂದು ರಾತ್ರಿ 7:30 ಗಂಟೆಗೆ ಶ್ರೀ ಹನುಮರಡ್ಡೆಪ್ಪ ಪಿ.ಎಸ್.ಐ. ಗಂಗಾವತಿ ಗ್ರಾಮೀಣ
ಪೊಲೀಸ್ ಠಾಣೆ ಇವರು ಇಬ್ಬರು ಆರೋಪಿತರೊಂದಿಗೆ ಮೂಲ ಪಂಚನಾಮೆ,
ಮುದ್ದೆಮಾಲು ಹಾಗೂ
ವರದಿಯನ್ನು ಸಲ್ಲಿಸಿದ್ದು ಅದರ ಸಾರಾಂಶ ಈ ಪ್ರಕಾರ ಇದೆ. ಇಂದು ದಿನಾಂಕ:- 17-03-2016 ರಂದು
ಸಂಜೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಬಸಾಪಟ್ಟಣ ಗ್ರಾಮದ ಬಸ್ ನಿಲ್ದಾಣದ ಹತ್ತಿರ
ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆಯುತ್ತಿದೆ ಅಂತಾ ಖಚಿತವಾದ ಮಾಹಿತಿ ಬಂದ ಮೇರೆಗೆ
ಹೆಚ್.ಸಿ. 29, ಪಿ.ಸಿ. 362, 323 ಹಾಗೂ ಇಬ್ಬರು ಪಂಚರನ್ನು ಬರಮಾಡಿಕೊಂಡು ಸರಕಾರಿ ಜೀಪ್ ನಂಬರ್:
ಕೆ.ಎ-37/ ಜಿ-307 ನೇದ್ದರಲ್ಲಿ ಚಾಲಕ ಎ.ಪಿ.ಸಿ. 77 ಕನಕಪ್ಪ ಇವರನ್ನು ಠಾಣೆಯಿಂದ ಸಂಜೆ 6:00
ಗಂಟೆಗೆ ಹೊರಟು ಬಸಾಪಟ್ಟಣ ಗ್ರಾಮದಲ್ಲಿ ಹೋಗಿ ಜೀಪ್ನ್ನು ನಿಲ್ಲಿಸಿ ಎಲ್ಲರೂ ನಡೆದುಕೊಂಡು ಹೋಗಿ
ನೋಡಲಾಗಿ ನಮಗೆ ಮಾಹಿತಿ ಇದ್ದ ಪ್ರಕಾರ ಬಸಾಪಟ್ಟಣದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ
ಸ್ಥಳದಲ್ಲಿ ಬೀದಿಯ ಲೈಟಿನ ಬೆಳಕಿನಲ್ಲಿ ಜನರು ಸೇರಿದ್ದು,
ಅವರಲ್ಲಿ ಒಬ್ಬ
ವ್ಯಕ್ತಿಯು ಜನರಿಗೆ 1-00 ರೂಪಾಯಿಗೆ 80-00 ರೂಪಾಯಿ ಕೊಡುತ್ತೇವೆ,
ಅದೃಷ್ಟದ ಮಟಕಾ
ನಂಬರಗಳಿಗೆ ಹಣವನ್ನು ಪಣಕ್ಕೆ ಹಚ್ಚಿರಿ ಅಂತಾ ಕೂಗುತ್ತಾ ಜನರನ್ನು ಕರೆಯುತ್ತಿದ್ದನು.
ಇನ್ನೊಬ್ಬನು ನಿಂತುಕೊಂಡು ಜನರಿಂದ ಹಣವನ್ನು ಪಡೆದುಕೊಂಡು ಮಟಕಾ ಅಂಕಿ ಸಂಖ್ಯೆಗಳ ಮೇಲೆ ಪಣಕ್ಕೆ
ಹಚ್ಚಿಸಿಕೊಂಡು ಅವರಿಗೆ ಮಟ್ಕಾ ಚೀಟಿಗಳನ್ನು ಬರೆದುಕೊಡುತ್ತಾ,
ಪಟ್ಟಿಯನ್ನು
ಬರೆದುಕೊಳ್ಳುತ್ತಾ ಅದೃಷ್ಠದ ಮಟಕಾ ಜೂಜಾಟದಲ್ಲಿ ತೊಡಗಿದ್ದು,
ಆಗ ಸಮಯ ಸಂಜೆ 6:30
ಗಂಟೆಯಾಗಿದ್ದು ಕೂಡಲೇ ಅವರ ದಾಳಿ ಮಾಡಲಾಗಿ ಮಟಕಾ ಜೂಜಾಟದಲ್ಲಿ ತೊಡಗಿದ್ದ ಇಬ್ಬರು ಸಿಕ್ಕಿ
ಬಿದ್ದಿದ್ದು, ಉಳಿದ ಜನರು ಅಲ್ಲಿಂದ ಓಡಿ ಹೋದರು. ವಿಚಾರಿಸಲಾಗಿ ಮಟಕಾ ಪಟ್ಟಿ
ಬರೆದುಕೊಳ್ಳುತ್ತಿದ್ದವನು ತನ್ನ ಹೆಸರು ವೆಂಕಟೇಶ ತಂದೆ ಈರಪ್ಪ ತಳವಾರ,
ವಯಸ್ಸು: 26 ವರ್ಷ
ಜಾತಿ: ನಾಯಕ, ಉ: ಹಿಟ್ಟಿನ ಗಿರಣಿ ಕೆಲಸ ಸಾ: 2ನೇ ವಾರ್ಡ ಬಸಾಪಟ್ಟಣ ತಾ: ಗಂಗಾವತಿ
ಅಂತಾ ತಿಳಿಸಿದ್ದು, ಅವನ ಹತ್ತಿರ ಮಟಕಾ ಜೂಜಾಟದ ನಗದು ಹಣ ರೂ. 530/- ರೂಪಾಯಿ,
ಒಂದು ಮಟಕಾ ಪಟ್ಟಿ,
ಒಂದು ಬಾಲ್ಪೆನ್ನು
ದೊರೆತಿದ್ದು ಇದೆ. ಕೂಗುತ್ತಿದ್ದವನಿಗೆ ವಿಚಾರಿಸಲು ಅವನು ತನ್ನ ಹೆಸರು ಹೊನ್ನೂರಸಾಬ ತಂದೆ ರಾಜಾಸಾಬ
ವಯಸ್ಸು: 28 ವರ್ಷ ಜಾತಿ: ನಧಾಪ್ ಉ: ಕಾಯಿಪಲ್ಲೆ ವ್ಯಾಪಾರ ಸಾ: 1ನೇ ವಾರ್ಡ ಬಸಾಪಟ್ಟಣ,
ತಾ: ಗಂಗಾವತಿ ಅಂತಾ
ತಿಳಿಸಿದ್ದು, ಅವನ ಹತ್ತಿರ ಯಾವುದೇ ಹಣ ಮತ್ತು ಪಟ್ಟಿ ದೊರೆಯಲಿಲ್ಲಾ. ನಂತರ
ಅವರಿಬ್ಬರಿಗೆ ಮಟಕಾ ಪಟ್ಟಿಯನ್ನು ಯಾರಿಗೆ ಕೊಡುತ್ತೀರಾ ?
ಅಂತಾ ವಿಚಾರಿಸಲು
ಯಾರಿಗೂ ಕೊಡುವುದಿಲ್ಲಾ ತಾವೇ ಇಟ್ಟುಕೊಳ್ಳುವದಾಗಿ ತಿಳಿಸಿದರು. ಈ ಬಗ್ಗೆ ಸಂಜೆ 6:30 ರಿಂದ
7:00 ಗಂಟೆಯವರೆಗೆ ಸ್ಥಳದಲ್ಲಿಯೇ ಪಂಚನಾಮೆ ನಿರ್ವಹಿಸಿ ನಂತರ ಆರೋಪಿತರೊಂದಿಗೆ ಠಾಣೆಗೆ ವಾಪಸ್
ಬಂದಿದ್ದು, ನಂತರ ಸದರಿ ಆರೋಪಿತರ ವಿರುದ್ಧ ಕಲಂ 78(iii) ಕೆ.ಪಿ. ಆ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲು
ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
3)
ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ: 25/2016 ಕಲಂ: 147, 148, 323, 324, 504, 506, 306 ಸಹಿತ 149 ಐ.ಪಿ.ಸಿ.
ದಿನಾಂಕ: 17-03-2016 ರಂದು ಸಂಜೆ
6-00 ಗಂಟೆಗೆ ಠಾಣೆಯ ಪಿಸಿ-194
ಶ್ರೀ ಛತ್ರಪ್ಪರವರು ಟಪಾಲು ಕರ್ತವ್ಯದಿಂದ ವಾಪಾಸು ಬಂದು ಹದ್ದಿ ಪ್ರಯುಕ್ತ ಕುಷ್ಟಗಿ ಠಾಣೆಯಿಂದ ವಗರ್ಾವಣಿಯಾಗಿ ಬಂದ ಒಂದು ಮಾನ್ಯ ನ್ಯಾಯಾಲಯದಿಂದ ಉಲ್ಲೇಖಿತ ಖಾಸಗಿ ಫಿರ್ಯಾದಿ ನಂ: 105/2015 ನೇದ್ದನ್ನು ತಂದು ಹಾಜರುಪಡಿಸಿದ್ದು ಸದರಿ ಫಿರ್ಯಾದಿಯ ಸಾರಾಂಶವೆನೆಂದರೆ ಫಿರ್ಯಾದಿದಾರರು ಹಾಗೂ ಫಿರ್ಯಾದಿದಾರರ ಮಗ ರಮೇಶ್ ಇಬ್ಬರು ಕೂಡಿ ದಿನಾಂಕ:
12-07-2015 ರಂದು ಮದ್ಯಾಹ್ನ 4-00 ಗಂಟೆ ಸುಮಾರಿಗೆ ತಮ್ಮ ಮನೆಯ ಮುಂದಿನ ರಸ್ತೆಯಲ್ಲಿ ಬರುತ್ತಿದ್ದಾಗ ಆರೋಪಿತರೆಲ್ಲರೂ ಅಕ್ರಮ ಕೂಟ ರಚಿಸಿಕೊಂಡು ಬಂದು ಫಿರ್ಯಾದಿದಾರರು ಮತ್ತು ಅವರ ಮಗ ರಮೇಶ್ನೊಂದಿಗೆ ಜಗಳ ತೆಗೆದು ಫಿಯರ್ಾದಿದಾರರಿಗೆ ಕೈಯಿಂದ, ಚಪ್ಪಲಿಯಿಂದ ಹೊಡೆದಿದ್ದು ಬಿಡಿಸಿಕೊಳ್ಳಲು ಬಂದ ಮಗ ರಮೇಶನಿಗೂ ಕೂಡ ಆರೋಪಿ ನಂ: 1 ರಿಂದ 10 ನೇದ್ದವರು ಚಪ್ಪಲಿಯಿಂದ ಹೊಡೆಬಡೆ ಮಾಡಿ ಬಾಯಿಗೆ ಬಂದಂತೆ ಅವಾಚ್ಯವಾಗಿ ಬೈದು ರಮೇಶನು ಬೇರೆ ಮನೆ ಮಾಡದಿದ್ದರೆ ಕೈಕಾಲು ಮುರಿದು ಕೊಲೆ ಮಾಡುತ್ತೆವೆ ಅಂತಾ ಬೆದರಿಕೆ ಹಾಕಿದ್ದು, ಅಲ್ಲದೇ ಆರೋಪಿತರು ಹೊಡೆಬಡೆ ಮಾಡುವಾಗ ರಮೇಶನಿಗೆ ನೀನು ಸತ್ತುಹೋಗು ನಮ್ಮ ಮಗಳು ನೀಲಮ್ಮ ರಂಡೆಯಾದರೂ ಚಿಂತೆಯಲ್ಲ. ಅಂತಾ ಆತ್ಮಹತ್ಯೆಗೆ ಪ್ರಚೋದನೆ ಮಾಡಿದ್ದರಿಂದ ರಮೇಶ್ನು ಉಳ್ಳಾಗಡ್ಡಿಗೆ ಹೊಡೆಯುವ ಕ್ರೀಮಿನಾಶಕ ಕುಡಿದು ಇಲಾಜು ಕುರಿತು ತಾವರಗೇರಾ ಸರಕಾರಿ ಆಸ್ಪತ್ರೆಗೆ ನಂತರ ಹೆಚ್ಚಿನ ಇಲಾಜು ಕುರಿತು ದೇಶಕ್ಯಾಂಪನ ಬಾಬು ಡಾಕ್ಟರ ಹತ್ತಿರ ಚಿಕಿತ್ಸೆ ಪಡೆದುಕೊಂಡಿದ್ದು ಅಂತಾ ಮುಂತಾಗಿ ಇದ್ದ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
0 comments:
Post a Comment