Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Saturday, March 19, 2016

1) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 102/2016 ಕಲಂ: 87 Karnataka Police Act.
ದಿನಾಂಕ:-18-03-2016 ರಂದು ಸಂಜೆ 4:30 ಗಂಟೆಗೆ ಶ್ರೀ ಹನುಮರಡ್ಡೆಪ್ಪ ಪಿ.ಎಸ್.ಐ. ಗಂಗಾವತಿ ಗ್ರಾಮೀಣ ಠಾಣೆ ರವರು ಮೂಲ ವರದಿಯೊಂದಿಗೆ ಮೂಲ ಪಂಚನಾಮೆ, ಇಸ್ಪೀಟ್ ಜೂಜಾಟಕ್ಕೆ ಸಂಭಂದಿಸಿದಂತಹ ಮುದ್ದೆಮಾಲು ಹಾಗೂ ಆರೋಪಿತರನ್ನು ಹಾಜರಪಡಿಸಿದ್ದು ಅದರ ಸಾರಾಂಶ ಈ ಪ್ರಕಾರ ಇದೆ. ಇಂದು ದಿನಾಂಕ: 18-03-2016 ರಂದು ಮಧ್ಯಾಹ್ನ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಹೇರೂರು ಗ್ರಾಮದ ವಿರುಪಣ್ಣ ತಾತನ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಂದಾರ ಬಹಾರ ಎಂಬ ಇಸ್ಪೀಟ್ ಜೂಜಾಟದ ನಡೆಯುತ್ತಿದೆ ಅಂತಾ ಖಚಿತವಾದ ಬಾತ್ಮಿ ಮೇರೆಗೆ ಮಾನ್ಯ ಡಿ.ಎಸ್.ಪಿ. ಹಾಗೂ ಸಿಪಿಐ ಸಾಹೇಬರವರ ಮಾರ್ಗದರ್ಶನದಲ್ಲಿ  ಸಿಬ್ಬಂದಿಯವರಾದ ಹೆಚ್.ಸಿ. 156 ಪಿ.ಸಿ. 110, 97, 129, 160, 323, 277, 287, ಎ.ಪಿ.ಸಿ. 77 ಹಾಗೂ ಇಬ್ಬರು ಪಂಚರು ಕೂಡಿಕೊಂಡು ಸರಕಾರಿ ಜೀಪ್ ನಂ: ಕೆ.ಎ-37/ ಜಿ-307 ನೇದ್ದರಲ್ಲಿ ಹಾಗೂ ಸಿಬ್ಬಂದಿಯವರ ವೈಯಕ್ತಿಕ ಮೋಟಾರ ಸೈಕಲನಲ್ಲಿ ಗಂಗಾವತಿಯಿಂದ ಮಧ್ಯಾಹ್ನ 2:30 ಗಂಟೆಗೆ ಹೊರಟೆವು. ಹೇರೂರು ಊರ ಮುಂದೆ ಜೀಪ ಹಾಗೂ ಮೋಟಾರ ಸೈಕಲಗಳನ್ನು ನಿಲ್ಲಿಸಿ ಎಲ್ಲರೂ ನಡೆದುಕೊಂಡು ಹೋಗಿ ನೋಡಲಾಗಿ ವಿರುಪಣ್ಣ ತಾತನ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಜನರು ದುಂಡಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ್ ಎಲೆಗಳಿಂದ ಅಂದರ್ ಬಹಾರ್ ಎನ್ನುವ ಕಾನೂನು ಬಾಹಿರವಾದ ಅದೃಷ್ಠದ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದು, ಆಗ ಸಮಯ ಮಧ್ಯಾಹ್ನ 3:00 ಗಂಟೆಯಾಗಿದ್ದು ಕೂಡಲೇ ಅವರ ಮೇಲೆ ದಾಳಿ ಮಾಡಲಾಗಿ ಜೂಜಾಟದಲ್ಲಿ ತೊಡಗಿದ್ದ 6 ಜನರು ಸಿಕ್ಕಿ ಬಿದ್ದಿದ್ದು, ಸಿಕ್ಕವರ ಹೆಸರನ್ನು ವಿಚಾರಿಸಲು (1) ರಾಮಲಿಂಗಪ್ಪ ತಂದೆ ಬಸಪ್ಪ ತಳವಾರ, ವಯ್ಸು 45 ವರ್ಷ, ನಾಯಕ, ವ್ಯವಸಾಯ ಸಾ: ಹೇರೂರು (2) ವಿರುಪಣ್ಣ ತಂದೆ ಪಂಪಣ್ಣ, ಮೆದಿಕಿನಾಳ, ವಯಸ್ಸು 52 ವರ್ಷ, ಲಿಂಗಾಯತ, ಒಕ್ಕಲುತನ ಸಾ: ಹೇರೂರು (3) ಮಜ್ಜನಗೌಡ ತಂದೆ ಬಸನಗೌಡ ಮಾಲೀಪಾಟೀಲ್, ವಯಸ್ಸು 50 ವರ್ಷ, ಜಾತಿ: ರೆಡ್ಡಿ ಲಿಂಗಾಯತ ಉ: ಒಕ್ಕಲುತನ ಸಾ: ಹೇರೂರು (4) ಹನುಮಂತಪ್ಪ ತಂದೆ ಭೀಮಪ್ಪ ವಯಸ್ಸು 58 ವರ್ಷ,ಲಿಂಗಾಯತ, ಒಕ್ಕಲುತನ ಸಾ: ಹೇರೂರು (5) ಸುರೇಶ ತಂದೆ ಹನುಮಂತಪ್ಪ ಬಸಿರಹಾಳ, 35 ವರ್ಷ, ನಾಯಕ ಉ: ಕೂಲಿ ಕೆಲಸ ಸಾ: 4ನೇ ವಾರ್ಡ-ಬಸಾಪಟ್ಟಣ (6) ಹನುಮಂತಪ್ಪ ತಂದೆ ಯಂಕಪ್ಪ ಹಟ್ಟಿ, 45 ವರ್ಷ, ನಾಯಕ, ಕೂಲಿ ಕೆಲಸ ಸಾ: 4ನೇ ವಾರ್ಡ-ಬಸಾಪಟ್ಟಣ ಅಂತಾ ತಿಳಿಸಿದ್ದು ಅವರಿಂದ ಹಾಗೂ ಸ್ಥಳದಿಂದ ಜೂಜಾಟದ ನಗದು ಹಣ ರೂ. 1,490/- ರೂಪಾಯಿ, 52 ಇಸ್ಪೀಟ್ ಎಲೆಗಳು, ಹಾಗೂ ನೆಲದ ಮೇಲೆ ಹಾಸಿದ್ದ ಒಂದು ಪ್ಲಾಸ್ಟಿಕ್ ಬರಕಾ ಸಿಕ್ಕಿದ್ದು, ಈ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 103/2016 ಕಲಂ: 78(3) Karnataka Police Act.
ದಿನಾಂಕ: 18-03-2016 ರಂದು ಸಂಜೆ 6:30 ಗಂಟೆಗೆ ಶ್ರೀ ಹನುಮರಡ್ಡೆಪ್ಪ ಪಿ.ಎಸ್.ಐ. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಇವರು  ಆರೋಪಿತನೊಂದಿಗೆ ಮೂಲ ಪಂಚನಾಮೆ, ಮುದ್ದೆಮಾಲು ಹಾಗೂ ವರದಿಯನ್ನು ಸಲ್ಲಿಸಿದ್ದು ಅದರ ಸಾರಾಂಶ ಈ ಪ್ರಕಾರ ಇದೆ. ಇಂದು ದಿನಾಂಕ:- 18-03-2016 ರಂದು ಸಂಜೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ  ಆರಾಳ ಗ್ರಾಮದ ಮಸೀದಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆಯುತ್ತಿದೆ ಅಂತಾ ಖಚಿತವಾದ ಮಾಹಿತಿ ಬಂದ ಮೇರೆಗೆ ಹೆಚ್.ಸಿ. 156, ಪಿ.ಸಿ. 110, 160, 323, 361 ಎ.ಪಿ.ಸಿ. 77 ಕನಕಪ್ಪ ಹಾಗೂ ಇಬ್ಬರು ಪಂಚರು ಕೂಡಿಕೊಂಡು ಸರಕಾರಿ ಜೀಪ್ ನಂಬರ್: ಕೆ.ಎ-37/ ಜಿ-307 ನೇದ್ದರಲ್ಲಿ ಠಾಣೆಯಿಂದ ಸಂಜೆ 4:30 ಗಂಟೆಗೆ ಹೊರಟು ಆರಾಳ ಗ್ರಾಮದಲ್ಲಿ ಹೋಗಿ ಜೀಪನ್ನು ನಿಲ್ಲಿಸಿ ಎಲ್ಲರೂ ನಡೆದುಕೊಂಡು ಹೋಗಿ ನೋಡಲಾಗಿ ನಮಗೆ ಮಾಹಿತಿ ಇದ್ದ ಪ್ರಕಾರ ಆರಾಳದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಬೀದಿಯ ಲೈಟಿನ ಬೆಳಕಿನಲ್ಲಿ ಜನರು ಸೇರಿದ್ದು, ಅವರಲ್ಲಿ ಒಬ್ಬ ವ್ಯಕ್ತಿಯು ಜನರಿಗೆ 1-00 ರೂಪಾಯಿಗೆ 80-00 ರೂಪಾಯಿ ಕೊಡುತ್ತೇನೆ, ಅದೃಷ್ಟದ ಮಟಕಾ ನಂಬರಗಳಿಗೆ ಹಣವನ್ನು ಪಣಕ್ಕೆ ಹಚ್ಚಿರಿ ಅಂತಾ ಕೂಗುತ್ತಾ ಜನರನ್ನು ಕರೆಯುತ್ತಿದು ಅವರಿಂದ ಹಣವನ್ನು ಪಡೆದುಕೊಂಡು ಮಟಕಾ ಅಂಕಿ ಸಂಖ್ಯೆಗಳ ಮೇಲೆ ಪಣಕ್ಕೆ ಹಚ್ಚಿಸಿಕೊಂಡು ಅವರಿಗೆ ಮಟ್ಕಾ ಚೀಟಿಗಳನ್ನು ಬರೆದುಕೊಡುತ್ತಾ, ಪಟ್ಟಿಯನ್ನು ಬರೆದುಕೊಳ್ಳುತ್ತಾ ಅದೃಷ್ಠದ ಮಟಕಾ ಜೂಜಾಟದಲ್ಲಿ ತೊಡಗಿದ್ದು, ಆಗ ಸಮಯ ಸಂಜೆ 5:00 ಗಂಟೆಯಾಗಿದ್ದು ಕೂಡಲೇ ಅವರ ದಾಳಿ ಮಾಡಲಾಗಿ ಮಟಕಾ ಜೂಜಾಟದಲ್ಲಿ ತೊಡಗಿದ್ದವನು ಸಿಕ್ಕಿ ಬಿದ್ದಿದ್ದು, ಉಳಿದ ಜನರು ಅಲ್ಲಿಂದ ಓಡಿ ಹೋದರು. ವಿಚಾರಿಸಲಾಗಿ ಮಟಕಾ ಪಟ್ಟಿ ಬರೆದುಕೊಳ್ಳುತ್ತಿದ್ದವನು ತನ್ನ ಹೆಸರು  ಹನುಮಂತ ತಂದೆ ಯಂಕಪ್ಪ ನಾಯಕ, ವಯಸ್ಸು 42 ವರ್ಷ, ಉ: ಆಟೋ ಚಾಲಕ ಸಾ: 3ನೇ ವಾರ್ಡ-ಆರಾಳ. ತಾ: ಗಂಗಾವತಿ ಅಂತಾ ತಿಳಿಸಿದ್ದು, ಅವನ ಹತ್ತಿರ ಮಟಕಾ ಜೂಜಾಟದ ನಗದು ಹಣ ರೂ. 900/- ರೂಪಾಯಿ, ಒಂದು ಮಟಕಾ ಪಟ್ಟಿ, ಒಂದು ಬಾಲ್ ಪೆನ್ನು ದೊರೆತಿದ್ದು ಇದೆ. ಅವನಿಗೆ ಮಟಕಾ ಪಟ್ಟಿಯನ್ನು ಯಾರಿಗೆ ಕೊಡುತ್ತೀಯಾ ? ಅಂತಾ ವಿಚಾರಿಸಲು ಅವನು ಮಟಕಾ ಪಟ್ಟಿಯನ್ನು ರುದ್ರೇಶ ತಂದೆ ಸಣ್ಣ ಯಮನಪ್ಪ ಗೌರೀಪುರ ಸಾ: ಆರಾಳ ಈತನಿಗೆ ಕೊಡುವುದಾಗಿ ತಿಳಿಸಿದನು. ಈ ಬಗ್ಗೆ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ. 
3) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 104/2016 ಕಲಂ: 78(3) Karnataka Police Act.
ದಿನಾಂಕ: 18-03-2016 ರಂದು ರಾತ್ರಿ 8:30 ಗಂಟೆಗೆ ಶ್ರೀ ಹನುಮರಡ್ಡೆಪ್ಪ ಪಿ.ಎಸ್.ಐ. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಇವರು  ಆರೋಪಿತನೊಂದಿಗೆ ಮೂಲ ಪಂಚನಾಮೆ, ಮುದ್ದೆಮಾಲು ಹಾಗೂ ವರದಿಯನ್ನು ಸಲ್ಲಿಸಿದ್ದು ಅದರ ಸಾರಾಂಶ ಈ ಪ್ರಕಾರ ಇದೆ. ಇಂದು ದಿನಾಂಕ:- 18-03-2016 ರಂದು ರಾತ್ರಿ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ   ಕೇಸರಹಟ್ಟಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆಯುತ್ತಿದೆ ಅಂತಾ ಖಚಿತವಾದ ಮಾಹಿತಿ ಬಂದ ಮೇರೆಗೆ ಹೆಚ್.ಸಿ. 68 ಪಿ.ಸಿ. 129, 97, 277, 287 ಎ.ಪಿ.ಸಿ. 77 ಕನಕಪ್ಪ ಹಾಗೂ ಇಬ್ಬರು ಪಂಚರು ಕೂಡಿಕೊಂಡು ಸರಕಾರಿ ಜೀಪ್ ನಂಬರ್: ಕೆ.ಎ-37/ ಜಿ-307 ನೇದ್ದರಲ್ಲಿ ಠಾಣೆಯಿಂದ ಸಂಜೆ 6:45 ಗಂಟೆಗೆ ಹೊರಟು ಕೇಸರಹಟ್ಟಿ ಗ್ರಾಮದ ಊರ ಮುಂದೆ ಹೋಗಿ ಜೀಪ್ನ್ನು ನಿಲ್ಲಿಸಿ ಎಲ್ಲರೂ ನಡೆದುಕೊಂಡು ಹೋಗಿ ನೋಡಲಾಗಿ ನಮಗೆ ಮಾಹಿತಿ ಇದ್ದ ಪ್ರಕಾರ ಕೇಸರಹಟ್ಟಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಬೀದಿಯ ಲೈಟಿನ ಬೆಳಕಿನಲ್ಲಿ ಜನರು ಸೇರಿದ್ದು, ಅವರಲ್ಲಿ ಒಬ್ಬ ವ್ಯಕ್ತಿಯು ನಿಂತುಕೊಂಡು ಜನರಿಗೆ 1-00 ರೂಪಾಯಿಗೆ 80-00 ರೂಪಾಯಿ ಕೊಡುತ್ತೇನೆ, ಅದೃಷ್ಟದ ಮಟಕಾ ನಂಬರ್ಗಳಿಗೆ ಹಣವನ್ನು ಪಣಕ್ಕೆ ಹಚ್ಚಿರಿ ಅಂತಾ ಕೂಗುತ್ತಾ ಜನರನ್ನು ಕರೆಯುತ್ತಾ ಅವರಿಂದ ಹಣವನ್ನು ಪಡೆದುಕೊಂಡು ಮಟಕಾ ಅಂಕಿ ಸಂಖ್ಯೆಗಳ ಮೇಲೆ ಪಣಕ್ಕೆ ಹಚ್ಚಿಸಿಕೊಂಡು ಅವರಿಗೆ ಮಟ್ಕಾ ಚೀಟಿಗಳನ್ನು ಬರೆದುಕೊಡುತ್ತಾ, ಪಟ್ಟಿಯನ್ನು ಬರೆದುಕೊಳ್ಳುತ್ತಾ ಅದೃಷ್ಠದ ಮಟಕಾ ಜೂಜಾಟದಲ್ಲಿ ತೊಡಗಿದ್ದು, ಆಗ ಸಮಯ ರಾತ್ರಿ 7:15 ಗಂಟೆಯಾಗಿದ್ದು ಕೂಡಲೇ ಅವರ ದಾಳಿ ಮಾಡಲಾಗಿ ಮಟಕಾ ಜೂಜಾಟದಲ್ಲಿ ತೊಡಗಿದ್ದವನು ಸಿಕ್ಕಿ ಬಿದ್ದಿದ್ದು, ಉಳಿದ ಜನರು ಅಲ್ಲಿಂದ ಓಡಿ ಹೋದರು. ವಿಚಾರಿಸಲಾಗಿ ಮಟಕಾ ಪಟ್ಟಿ ಬರೆದುಕೊಳ್ಳುತ್ತಿದ್ದವನು ತನ್ನ ಹೆಸರು  ಬಸವರಾಜ ತಂದೆ ಮಲ್ಲಿಕಾಜರ್ುನ ದೇಸಾಯಿ, ವಯಸ್ಸು 35 ವರ್ಷ, ಜಾತಿ: ಲಿಂಗಾಯತ ಉ: ಪಾನ್ಶಾಪ್ ಸಾ: ಕೇಸರಹಟ್ಟಿ. ತಾ: ಗಂಗಾವತಿ ಅಂತಾ ತಿಳಿಸಿದ್ದು, ಅವನ ಹತ್ತಿರ ಮಟಕಾ ಜೂಜಾಟದ ನಗದು ಹಣ ರೂ. 2,000/- ರೂಪಾಯಿ, ಒಂದು ಮಟಕಾ ಪಟ್ಟಿ, ಒಂದು ಬಾಲ್ಪೆನ್ನು ದೊರೆತಿದ್ದು ಇದೆ.  ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
4) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 68/2016 ಕಲಂ: 87 Karnataka Police Act.
ದಿನಾಂಕ:-18-03-2016 ರಂದು ಸಾಯಂಕಾಲ 7-00 ಗಂಟೆಗೆ ಮಾನ್ಯ ಪಿ.ಎಸ್.ಐ ಸಾಹೇಬರು ಒಂದು ಇಸ್ಪೀಟ್ ಜೂಜಾಟದ ದಾಳಿ ಮೂಲ ಪಂಚನಾಮೆ ಮತ್ತು ವರದಿಯನ್ನು ಹಾಜರುಪಡಿಸಿದ್ದು ಸದರಿ ವರದಿಯ ಸಾರಾಂಶವೆನಂದರೆ ಇಂದು 18-03-2016 ರಂದು ಸಾಯಂಕಾಲ 5-00 ಗಂಟೆಯ ಸುಮಾರಿಗೆ ಬೇವಿನಾಳ ಗ್ರಾಮದ ಸರಕಾರಿ ಶಾಲೆಯ ಹಿಂದೆ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದಾಗ್ಗೆ ಮಾನ್ಯ ಪಿ.ಎಸ್.ಐ ಸಾಹೇಬರು ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ 6 ಜನ ಆರೋಪಿತನ್ನು ಹಿಡಿದುಕೊಂಡು ಆರೋಪಿತರಿಂದ ರೂ.3300=00 ನಗದು ಹಣ ಮತ್ತು ಇಸ್ಪೀಟ್ ಜೂಜಾಟದ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡಿದ್ದು ಇರುತ್ತದೆ. ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
5) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ: 65/2016 ಕಲಂ: 279, 304(ಎ) ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:.
ದಿನಾಂಕ. 18-03-2016 ರಂದು ಫಿರ್ಯಾದಿದಾರರ ತಂದೆ ಅಯ್ಯಪ್ಪ ವಾಲಿಕಾರ ಇವರು ಬೂದಗುಂಪಾ ಗ್ರಾಮದ ಕುರಿ ಸಂತೆಯಲ್ಲಿ ಕುರಿ ಖರಿದಿಸಲು ಬಂದು 3 ಕುರಿಗಳನ್ನು ಖರಿದಿ ಮಾಡಿ ಟಾಟಾ ಏಸ್ ಜಿಪ್ ವಾಹನದಲ್ಲಿ ಹಾಕಿಕೊಂಡು ವಾಪಸ ಊರಿಗೆ ಬರುವಾಗ ಟಾಟಾ ಏಸ್ ವಾಹನ ಚಾಲಕನು ವಾಹನವನ್ನು ಹೊಸಪೇಟೆ ಕುಷ್ಟಗಿ ಒನ್ ವೇ ಎನ್.ಹೆಚ್. 13 ರಸ್ತೆಯ ಮೇಲೆ ಅತಿವೇಗವಾಗಿ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಒಮ್ಮೇಲೆ ಬ್ರೇಕ್ ಹಾಕಿದ್ದರಿಂದ ಟಾಟಾ ಏಸ್ ವಾಹನದ ಕ್ಯಾರಿಯರ ಮೇಲೆ ಕುಳಿತ ಫಿರ್ಯಾದಿ ತಂದೆ ಅಯ್ಯಪ್ಪ ಇವರು ಪುಟಿದು ಕೆಳಗೆ ಬಿದ್ದು ತಲೆಗೆ ಮುಖಕ್ಕೆ ಭಾರಿ ಗಾಯ ಪೆಟ್ಟಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಇರುತ್ತದೆ.
6) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ: 66/2016 ಕಲಂ: 279, 337 ಐ.ಪಿ.ಸಿ:.
ದಿನಾಂಕ. 18-03-2016 ರಂದು 06-00 ಪಿಎಂ ಸುಮಾರಿಗೆ ಫಿಯರ್ಾದಿದಾರರು ತಮ್ಮ ಲಾರಿ ನಂ.ಕೆ..16/.3424 ನೇದ್ದರಲ್ಲಿ ಚಿತ್ರದುರ್ಗ ದಿಂದ ಕಬ್ಬಿಣದ ಅದಿರನ್ನು ಲೋಡ ಮಾಡಿಕೊಂಡು ಬಗನಾಳ ಹತ್ತಿರ ಇರುವ ತ್ರೀವಿಸ್ಟಾ ಕಂಪನಿಗೆ ಹೊಸಪೇಟೆ ಕುಷ್ಟಗಿ ಒನ್ ವೇ ಎನ್.ಹೆಚ್. 13 ರಸ್ತೆಯ ಮೇಲೆ ಹುಲಗಿ ಕ್ರಶ್ ಹತ್ತಿರ ಹೋಗುತ್ತಿರುವಾಗ ರೋಡ್ ಬ್ರೇಕರ ಇದ್ದುದರಿಂದ ನಿದಾನವಾಗಿ ಚಲಾಯಿಸುತ್ತಿರುವಾಗ ಅವರಹಿಂದಿನಿಂದ ಲಾರಿ ನಂ ಕೆ,01/ .ಡಿ.5783 ನೇದ್ದರಚಾಲಕನು ತನ್ನ ಲಾರಿಯನ್ನು ಅತಿವೇಗವಾಗಿ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರ ಲಾರಿಗೆ ಹಿಂದಿನಿಂದ ಡಿಕ್ಕಿಕೊಟ್ಟು ಅಪಘಾತ ಮಾಡಿದ್ದರಿಂದ ಆರೋಪಿತನಿಗೆ ಕಾಲುಗಳಿಗೆ ಗಾಯವಾಗಿರುತ್ತವೆ ಅಂತಾ ಮುಂತಾಗಿದ್ದ ಪಿಯರ್ಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.
7) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 99/2016 ಕಲಂ: 498(ಎ), 304(ಬಿ) ಐ.ಪಿ.ಸಿ ಹಾಗೂ 3 & 4 ವರದಕ್ಷಿಣೆ ನಿಷೇಧ ಕಾಯ್ದೆ:. 

ದಿನಾಂಕ. 19-03-3016 ರಂದು ಬೆಳಗಿನ ಜಾವ 04-30ಗಂಟೆಗೆ ಫಿರ್ಯಾಧಿದಾರರಾದ ಶ್ರೀಮತಿ ರಾಚಮ್ಮ @ ಪುಟ್ಟಮ್ಮ ಗಂಡ ರಾಚಪ್ಪ ನಾಗಲೀಕರ ವಯಾ 38 ವರ್ಷ ಜಾ: ಸಿಂಪಿ ಉ: ವ್ಯಾಪರ ಸಾ:ಡಿ.ಕೆ. ಸರ್ಕಲ್ ಹತ್ತಿರ ಮಸ್ಕಿ ಜಿ: ರಾಯಚೂರ ರವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿ ನೀಡಿದ್ದು ಸಾರಾಂಶವೇನೆಂದರೆ, ನನ್ನ ಗಂಡನು ಈಗ್ಗೆ 15 ವರ್ಷಗಳ ಹಿಂದೆ ತೀರಿಕೊಂಡಿದ್ದು,  ನಮಗೆ 1) ಚೈತ್ರಾ ವಯಾ 19 ವರ್ಷ ಮತ್ತು 2) ಅಮರೇಶ ವಯಾ 16 ವರ್ಷ ಅಂತಾ ಮಕ್ಕಳು ಇರುತ್ತಾರೆ. ನನ್ನ ಮಗಳಾದ ಚೈತ್ರಾ ಈಕೆಯನ್ನು ದಿನಾಂಕ: 06-12-2015 ರಂದು ಕುಷ್ಟಗಿ ಗ್ರಾಮದ ಧೀರೇಶ ಪಾವಟೆ ರವರ ಮಗನಾದ ಕಪೀಲ್ ರವರೊಂದಿಗೆ ಕುಷ್ಟಗಿಯಲ್ಲಿ ಆಕೆಯ ಗಂಡನ ಮನೆಯಲ್ಲಿ ನಮ್ಮ ಹಿಂದೂ ಸಂಪ್ರದಾಯದಂತೆ ಮದುವೆ ಮಾಡಿಕೊಟ್ಟಿದ್ದು, ಮದುವೆಯ ಕಾಲಕ್ಕೆ ವರದಕ್ಷಿಣೆ, ವರೋಪಚಾರವಾಗಿ 12 ಅಣಿ ತೂಕದ ಬಂಗಾರ, ಮುದುಮಕ್ಕಳ ಬಟ್ಟೆ ಬರೆ, ಬಾಂಡೆ ಸಾಮಾನುಗಳನ್ನು ಕೊಟ್ಟಿದ್ದು,  ಮದುವೆಯಾದ ನಂತರ ನನ್ನ ಮಗಳಾದ ಚೈತ್ರಾ ಈಕೆಯು ತನ್ನ ಗಂಡನ ಮನೆಯಲ್ಲಿ ಇದ್ದು,    ಈಗ್ಗೆ ಸುಮಾರು ಒಂದು ತಿಂಗಳದಿಂದ ನನ್ನ ಮಗಳಾದ ಚೈತ್ರಾಳಿಗೆ ಆಕೆಯ ಗಂಡನಾದ ಕಪೀಲ, ಅತ್ತೆ ಮಧುಮತಿ, ಹಾಗೂ ಮಾವ ಧೀರೇಶ ಪಾವಟೆ ರವರು ನೀನು ನಿನ್ನ ತವರು ಮನೆಗೆ ಹೋಗಿ 4 ತೊಲೆ ಬಂಗಾರವನ್ನು ತೆಗೆದುಕೊಂಡು ಬಾ, ಹಾಗೂ ನಿನ್ನ ಮದುವೆಯ ಸಲುವಾಗಿ ನಾನು ಸಾಲವನ್ನು ಮಾಡಿದ್ದೇವೆ, ಹಣವನ್ನು ತೆಗೆದುಕೊಂಡು ಬಾ, ಅಂತಾ ಮಾನಸಿಕ ಮತ್ತು ದೈಹಿಕ ಕಿರುಕುಳ ಕೊಡುತ್ತಿದ್ದ ಬಗ್ಗೆ ನನ್ನ ಮಗಳು ಚೈತ್ರಾಳು ನನಗೆ ಪೋನ್ ನಲ್ಲಿ ಹೇಳುತ್ತಿದ್ದಳು, ಮತ್ತು ಸದರಿಯವರು ಆಕೆಗೆ ಸರಿಯಾಗಿ ಊಟವನ್ನು ಕೊಡದೇ ಕಿರಿಕಿರಿ ಮಾಡುತ್ತಿರುವ ಬಗ್ಗೆ ಹೇಳುತ್ತಿದ್ದಳು, ಹಾಗೂ ಈಗ್ಗೆ 15 ದಿವಸಗಳ ಹಿಂದೆ ನನ್ನ ಮಗಳೊಂದಿಗೆ ಆಕೆಯ ಗಂಡ ಹಾಗೂ ಅತ್ತೆ ಮಾವರವರು ಜಗಳ ಮಾಡಿಕೊಂಡಿದ್ದರಿಂದ ನಾನು ಕುಷ್ಟಗಿಗೆ ಬಂದು ಸದರಿಯವರಿಗೆ ಬುದ್ದಿ ಹೇಳಿದ್ದೇನು, ಆಕೆಯ ಗಂಡ, ಅತ್ತೆ ಮಾವರವರಿಗೆ ಬಂಗಾರ ಮತ್ತು ಹಣವನ್ನು ನಂತರ ಕೊಡುವುದಾಗಿ ಹೇಳಿ ಹೋಗಿದ್ದೇನು.  ನಿನ್ನೆ ದಿನಾಂಕ: 18-03-2016 ರಂದು ಸಾಯಂಕಾಲ 06-00 ಗಂಟೆಯ ಸುಮಾರಿಗೆ ನನ್ನ ಮಗಳಾದ ಚೈತ್ರಾಳು ನನಗೆ ಪೋನ್ ಮಾಡಿ ನನ್ನ ಗಂಡನಾದ ಕಪೀಲನು ಬೆಳಿಗ್ಗೆ ಎರಡು ಇಡ್ಲಿಯನ್ನು ತಂದು ಕೊಟ್ಟಿದ್ದಾನೆ, ಇದರ ಹೊರತಾಗಿ ನನ್ನ ಗಂಡನು ಹಾಗೂ ಅತ್ತೆ, ಮಾವನವರು ಇಲ್ಲಿಯವರೆಗೂ ಊಟವನ್ನು ಕೊಡದೇ, ವಿನಾಃ ಕಾರಣ ನನ್ನ ಜೊತೆ ಜಗಳಾ ತೆಗೆದು ಹೊಡಿ ಬಡಿ ಮಾಡಿ ಕಿರುಕುಳ ಕೊಡುತ್ತಿದ್ದಾರೆ, ನೀನು ಬಂದು ನನ್ನನ್ನು ಊರಿಗೆ ಕರೆದುಕೊಂಡು ಹೋಗು ಅಂತಾ ಹೇಳಿದ್ದು, ಆಗ ನಾನು ಆಕೆಗೆ ನಾಳೆ ಬೆಳಿಗ್ಗೆ 06-00 ಗಂಟೆ ಬಸ್ಸಿಗೆ ಕುಷ್ಟಗಿಗೆ ಬರುತ್ತೇನೆ ಅಂತಾ ಹೇಳಿ ಸಮಧಾನ ಮಾಡಿದ್ದೇನು.  ನಂತರ ನಿನ್ನೆ ರಾತ್ರಿ 09-15 ಗಂಟೆಗೆ ನನ್ನ ಅಣ್ಣನಾದ ದೊಡ್ಡಪ್ಪ ತಂದೆ ಶಾಂತಮಲ್ಲಪ್ಪ ಬುಳ್ಳಾ ರವರಿಗೆ ಚೈತ್ರಾಳ ಗಂಡ ಕಪೀಲನು ಪೋನ್ ಮಾಡಿ ಚೈತ್ರಾಳು ಮನೆಯಲ್ಲಿ  ನೇಣು ಬಿಗಿದುಕೊಂಡು ಮೃತ ಪಟ್ಟಿದ್ದಾಳೆ ಅಂತಾ ತಿಳಿಸಿದರು. ಆಗ ನಾವು ಎಲ್ಲರೂ ಕೂಡಿಕೊಂಡು ಕುಷ್ಟಗಿಗೆ  ಬಂದು ಮನೆಗೆ ಹೋಗಿ ನೋಡಲಾಗಿ ನನ್ನ ಮಗಳು ಚೈತ್ರಾಳನ್ನು ಬೆಡ್ ಮೇಲೆ ಹಾಕಿದ್ದು ಆಕೆಯು ಮೃತಪಟ್ಟಿದ್ದಳು, ನಂತರ ನಾವು ನೋಡಲಾಗಿ ನನ್ನ ಮಗಳು ಚೈತ್ರಾಳ ಸಾವಿನಲ್ಲಿ ಸಂಶಯ ಕಂಡು ಬಂದಿದ್ದು ಅದೆ.    ಸದರಿ ನನ್ನ ಮಗಳಾದ ಚೈತ್ರಾಳ ಗಂಡನಾದ ಕಪೀಲ ಅತ್ತೆಯಾದ ಮಧುಮತಿ ಮತ್ತು ಮಾವನಾದ ಧಿರೇಶ ಪಾವಟೆ ರವರು ಮೂವರು ಸೇರಿ ನಿನ್ನೆ ದಿನಾಂಕ:18-03-2016 ರಂದು ರಾತ್ರಿ 07-00 ಗಂಟೆಯಿಂದ 09-00 ಗಂಟೆಯ ಅವಧಿಯಲ್ಲಿ ನನ್ನ ಮಗಳು ಚೈತ್ರಾಳಿಗೆ ವರದಕ್ಷಿಣೆಯಾಗಿ 4 ತೊಲೆ ಬಂಗಾರ ಮತ್ತು ಹಣವನ್ನು ತೆಗೆದುಕೊಂಡು ಬರಲಾರದಕ್ಕೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿ ಸೀರೆಯಿಂದ ಶಿಲಿಂಗ್ ಪ್ಯಾನಗೆ ನೇಣು ಬೀಗಿದು ಸಾಯಿಸಿ,  ನಂತರ ಶವವನ್ನು ಬೆಡ್ ಮೇಲೆ ಹಾಕಿದ್ದು ಇರುತ್ತದೆ. ಕಾರಣ ಸದರಿ ಮೂರು ಜನರ  ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಫಿರ್ಯಾದಿ ಸಾರಾಂಶದ ಮೇಲಿಂದ   ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕ್ರಮ ಕೈಕೊಂಡಿದ್ದು ಇರುತ್ತದೆ. 

0 comments:

 
Will Smith Visitors
Since 01/02/2008