Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Wednesday, March 16, 2016

1) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 96/2016 ಕಲಂ: 87 Karnataka Police Act.
ದಿನಾಂಕ 15-03-2016 ರಂದು ರಾತ್ರಿ 9-30 ಗಂಟೆಗೆ ಮಾನ್ಯ ಪಿ.ಎಸ್.ಐ ಸಾಹೇಬರು ಕುಷ್ಠಗಿ ಪೊಲೀಸ ಠಾಣೆರವರು ಠಾಣೆಗೆ ಬಂದು ಹಾಜರು ಪಡಿಸಿದ್ದು ಅದರ ಸಾರಾಂಶವೆನಂದರೆ ಕುಷ್ಟಗಿ ಠಾಣಾ ವ್ಯಾಪ್ತಿಯ ಕನಕೊಪ್ಪ ಗ್ರಾಮದಲ್ಲಿನ ಬಸವಣ್ಣ ಕಟ್ಟೆ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಂದರಬಾಹರ ಎಂಬ ಇಸ್ಪಿಟ್ ಜೂಜಾಟ ನಡೆದಿದೆ ಅಂತಾ ತಿಳಿದು ಬಂದಿದ್ದು ಆಗ ಪಿರ್ಯಾಧಿದಾರರು ಮತ್ತು ಹೆಚ್.ಸಿ-108, ಪಿ.ಸಿ-105,109, 116,117,24,393 ಹಾಗೂ ನಮ್ಮ ಸರಕಾರಿ ಜೀಪ ನಂ: ಕೆ.-37-ಜಿ-292 ನೇದ್ದರಲ್ಲಿ ಮತ್ತು ಇಬ್ಬರು ಪಂಚರೊಂದಿಗೆ ಎಲ್ಲರೂ ಕೂಡಿ ಹೋಗಿ ರೇಡ್ ಮಾಡಿ 4 ಜನ ಆರೋಪಿತರನ್ನು ಹಾಗೂ ಇಸ್ಪೆಟ್  ಜೂಜಾಟದ ಒಟ್ಟು ಹಣ 4,100-00 ರೂ, ಹಾಗೂ 52 ಇಸ್ಪೆಟ್ ಎಲೆಗಳು ಹಾಗೂ ಇತರೇ ಜೂಜಾಟದ ಸಾಮಗ್ರಿಗಳನ್ನು ಪಂಚನಾಮೆ ಕಾಲಕ್ಕೆ ಜಪ್ತಿ ಮಾಡಿಕೊಂಡು ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಬಂದು ಹಾಜರು ಪಡಿಸಿದ ಮೇರೆಗೆ  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ: 61/2016 ಕಲಂ: 87 Karnataka Police Act.
ದಿನಾಂಕ. 15-03-2016 ರಂದು 5-00 ಪಿ.ಎಂ.ಕ್ಕೆ 7 ಜನ ಆರೋಪಿತರು ಕಂಪಸಾಗರ ಸೀಮಾದ ಮಾವಿನ ತೋಟದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ ಜೂಜಾಟದಲ್ಲಿ ತೊಡಗಿದ್ದಾಗ ಶ್ರೀ. ಜಯಪ್ರಕಾಶ ಪಿ.ಎಸ್.ಐ. ಮುನಿರಾಬಾದ ಠಾಣೆ ರವರು ಹಾಗೂ ಸಿಬ್ಬಂದಿಯವರು ಪಂಚರೊಂದಿಗೆ ದಾಳಿ ಮಾಡಿ ಆರೋಪಿತರಿಂದ ಇಸ್ಪೇಟ ಜೂಜಾಟದ ನಗದು ಹಣ. 4100-00 ರೂ. ಮತ್ತು ಇಸ್ಪೇಟ ಜೂಜಾಟದ ಸಾಮಗ್ರಿಗಳನ್ನು ಜಪ್ತ ಮಾಡಿಕೊಂಡಿದ್ದು ಇರುತ್ತದೆ. ಅಂತಾ ಮುಂತಾಗಿದ್ದ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ.
3) ಬೇವೂರ ಪೊಲೀಸ್ ಠಾಣೆ ಗುನ್ನೆ ನಂ: 17/2016 ಕಲಂ: 279, 337, 338, 283, 304(ಎ) ಐ.ಪಿ.ಸಿ:.
ದಿನಾಂಕ: 15.03.2016 ರಂದು ಬೆಳೆಗ್ಗೆ 07.00 ಗಂಟೆ ಸುಮಾರಿಗೆ ಕುಷ್ಟಗಿ ಹೊಸಪೇಟ ಎನ್ಹೆಚ್ 50 ಒಮ್ಮುಖ ರಸ್ತೆಯ ಮೇಲೆ ಮಾಟಲದಿನ್ನಿ ಸೀಮಾದಲ್ಲಿ ಆರೋಪಿ ನಂಬರ್ 1 ನೇದ್ದವನು ತಾನು ನೆಡೆಸುತ್ತಿದ್ದ ಟ್ಯಾಂಕರ್ ಲಾರಿ ನಂಬರ್  ಹೆಚ್ಆರ್- 55 ಜೆ- 0123 ನೇದ್ದನ್ನು ಕುಷ್ಟಗಿ ಕಡೆಯಿಂದ ಹೋಸಪೆಟ ಕಡೆಗೆ ಅತೀವೇಗವಾಗಿ ಹಾಗೂ ಆಲಕ್ಷತನದಿಂದ ಮಾನವ ಜಿವಕ್ಕೆ ಅಪಾಯವುಂಟಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ಮಾಟಲದಿನ್ನಿ ಸೀಮಾದಲ್ಲಿ ಒಮ್ಮುಖ ರಸ್ತೆಯ ಮೇಲೆ ಯಾವುದೆ ಮುಂಜಾಗೃತ ಕ್ರಮವಹಿಸದೆ ರಸ್ತೆ ಮೇಲೆ ಕೆಟ್ಟು ನಿಂತಿದ್ದ ಆರೋಪಿ ನಂ 2 ನೇದ್ದವನ ಲಾರಿ ನಂಬರ್ ಕೆಎ-01 ಸಿ-7736 ನೇದ್ದನ್ನು ಗಮನಿಸದೇ ಸದರಿ ಲಾರಿಗೆ ಆರೋಪಿ ನಂಬರ್ 1 ನೇದ್ದವನು ಹಿಂದಿನಿಂದ ಬಲವಾಗಿ ಠಕ್ಕರ್ ಕೊಟ್ಟು  ಅಪಘಾತ ಮಾಡಿದ್ದರಿಂದ ಸದರಿ ಅಪಘಾತದಲ್ಲಿ ಆರೋಪಿ ನಂ 1 ನೇದ್ದವನ ಟ್ಯಾಂಕರ್ ಲಾರಿಯ ಮುಂದಿನ ಬಾಗ ಸಂಪೂರ್ಣ ಜಖಂಗೊಂಡು ಸದರಿ ಲಾರಿಯ ಚಾಲಕ ವೆಂಕಟೇಶ ಇವನಿಗೆ ಭಾರಿ ಸ್ವರೂಪದ ಗಾಯಗಳಾಗಿದ್ದು ಮತ್ತು ಸದರಿ ಲಾರಿಯಲ್ಲಿದ್ದ ಫಿರ್ಯಾದಿಗೆ ಸಾದಾ ಸ್ವರೂಪದ ಗಾಯಗಳಾಗಿದ್ದು ಅಲ್ಲದೆ ಆರೋಪಿ ನಂಲಾರಿ ಚಾಲಕ ಹರಿರಾಮ್ ಮತ್ತು ಕ್ಲೀನರ್ ನರೇಶ್ ಇವರಿಬ್ಬರಿಗೂ ಭಾರಿ ಸ್ವರೂಪದ ರಕ್ತಗಾಯ ಹಾಗೂ ಬಾರಿ ಒಳಪೆಟ್ಟುಗಳಾಗಿ ಸ್ಥಳದಲ್ಲಿಯೆ ಮೃತ ಪಟ್ಟಿದ್ದು ಇರುತ್ತದೆ, ಅಂತಾ ಮುಂತಾಗಿ ಇದ್ದ ಫಿರ್ಯಾದಿ ಸಾರಾಂಶದ ಮೇಲಿಂದ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.


0 comments:

 
Will Smith Visitors
Since 01/02/2008