ಎ.ಟಿ.ಎಂ.
ಮಷಿನ್ ಕಳವು ಪ್ರಕರಣ:
ದಿನಾಂಕ –
22-03-2016 ರಂದು ಬೆಳಗ್ಗೆ 11-45 ಗಂಟೆಗೆ ಫಿರ್ಯಾದಿದಾರರಾದ
ಶ್ರೀ ಸಿದ್ದಲಿಂಗಯ್ಯ ತಂದಿ ಮಲ್ಲಯ್ಯ ಹಿರೇಮಠ ವಯಾ- 25 ವರ್ಷ ಜಾ- ಜಂಗಮ – ಟಾಟಾ ಇಂಡಿಕ್ಯಾಶ್ ಎ.ಟಿ.ಎಮ್.
ಕ್ಯಾಶ್ ಮ್ಯಾನೇಜ್ಮೆಂಟ್ ಕೆಲಸ ಸಾ- ವಡ್ಡರಹಟ್ಟಿ ತಾ- ಗಂಗಾವತಿ ಇವರು ಫಿರ್ಯಾದಿ ಕೊಟ್ಟಿದ್ದು ಅದರ ಸಾರಾಂಶವೆನೆಂದರೆ, ಒಂದು ವರ್ಷದಿಂದ ಮರ್ಲಾನಹಳ್ಳಿಯಲ್ಲಿ ರಾಯಚೂರ್- ಗಂಗಾವತಿ
ಮುಖ್ಯರಸ್ತೆಗೆ ಹೊಂದಿಕೊಂಡಿರುವ ಸಿ.ಜಯರಾಮ ತಂದಿ
ನಾರಾಯಣಪ್ಪ ಇವರ ಬಿಲ್ಡಿಂಗ್ ದಲ್ಲಿ ಟಾಟಾ ಇಂಡಿಕ್ಯಾಶ್ ಎ.ಟಿ.ಎಮ್. ಯಂತ್ರವನ್ನು ಅಳವಡಿಸಲಾಗಿದೆ. ಸದರ್ ಎ.ಟಿ.ಎಮ್.
ಯಂತ್ರದ ಐ.ಡಿ. ನಂ-0387 ಅಂತಾ ಇರುತ್ತದೆ. ಸದರ ಎ.ಟಿ.ಎಮ್.ಗೆ ದಿನಾಂಕ : 21-03-2016 ರಂದು ನಮ್ಮ ಹೆಡ್ ಆಫೀಸಿನಿಂದ ಮರ್ಲಾನಹಳ್ಳಿಯ .ಎ.ಟಿ.ಎಮ್.ಗೆ 500=00 ರೂ.
ಮುಖ ಬೆಲೆಯ ಒಂದು ಲಕ್ಷ ರೂಪಾಯಿಗಳನ್ನು ಎಕ್ಸಸ್ ಬ್ಯಾಂಕಿನಿಂದ ಪಡೆದು ಹಣ ಹಾಕುವಂತೆ ತಿಳಿಸಿದ್ದರಿಂದ ನಾವು ಮದ್ಯಾಹ್ನ 2-30 ಗಂಟೆಯ ಸುಮಾರಿಗೆ ಬಂದು ಹಣವನ್ನು
ಬಂದು ಸಂದಾಯ ಮಾಡಿದ್ದೇವು. ಈ ಮೊದಲು ಎ.ಟಿ.ಎಮ್.ದಲ್ಲಿ
500 ರೂ. ಮುಖಬೆಲೆಯ 1,55,500=00. ಹಾಗೂ 100 ರೂ. ಮುಖಬೆಲೆಯ 41,000=00 ಎರಡೂ ಸೇರಿ
1,96,500=00 ಹಾಗೂ ದಿನಾಂಕ : 21-03-2016 ರಂದು ಸಂದಾಯ ಮಾಡಿದ ಹಣ ಸೇರಿ ಒಟ್ಟು 2,96,500=00 ರೂ.ಗಳನ್ನು ಜಮಾ ಇದ್ದ ಬಗ್ಗೆ ನಮ್ಮ ಹೆಡ್
ಆಫೀಸಿಗೆ ವರದಿ ಮಾಡಿ ಸಂದೇಶ ಕಳುಹಿಸಿದೇವು.ಇಂದು ದಿನಾಂಕ : 22-03-2016 ರಂದು ಬೆಳಗ್ಗೆ 9-00 ಗಂಟೆಯ ಸುಮಾರಿಗೆ ಮರ್ಲಾನಹಳ್ಳಿ ಜನರು ಪೋನ್
ಮಾಡಿ ತಿಳಿಸಿದ್ದೇನೆಂದರೆ, ಮರ್ಲಾನಹಳ್ಳಿಯ ನಮ್ಮ ಟಾಟಾ ಇಂಡಿಕ್ಯಾಶ್ ಎ.ಟಿ.ಎಮ್.ಯಂತ್ರ ಹಣ ಸಮೇತ
ಕಳ್ಳತನವಾಗಿರುತ್ತದೆ. ಯಾರೋ ಕಳ್ಳರು ದಿನಾಂಕ :
21-03-2016 ರಂದು ರಾತ್ರಿ 12-30 ರಿಂದಾ ದಿನಾಂಕ : 22-03-2016 ರಂದು 04-00 ಎ.ಎಮ್. ನಡುವಿನ
ಅವದಿಯಲ್ಲಿ ಮರ್ಲಾನಹಳ್ಳಿಯ ಟಾಟಾ ಇಂಡಿಕ್ಯಾಶ್ ಎ.ಟಿ.ಎಮ್.ದಲ್ಲಿಯ ಒಳಗಿನ ಸಿ.ಸಿ.ಕ್ಯಾಮರ್ ಝಖಂಗೊಳಿಸಿ
ಎ.ಟಿ.ಎಮ. ಮಷಿನ್ ಸಮೇತ ಹಾಗೂ ರೂ. 2,66,500=00 ಕಳವುಮಾಡಿಕೊಂಡು ಹೋಗಿರುತ್ತಾರೆ. ಈ ಸ್ಥಳಕ್ಕೆ ಎಸ್.ಪಿ. ಕೊಪ್ಪಳರವರು
ಭೇಟಿನೀಡಿ ಅಪರಾಧಿಗಳನ್ನು ಪತ್ತೇ ಹಚ್ಚುವ ಕುರಿತು ಸಿ.ಪಿ.ಐ. ಗಂಗಾವತಿ ಗ್ರಾಮೀಣ
ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು
ರಿಚಿಸಿರುತ್ತಾರೆ.
0 comments:
Post a Comment