Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Wednesday, May 25, 2016

1] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ: 114/2016 ಕಲಂ: 279, 337 ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:.
ದಿನಾಂಕ. 23-05-2016 ರಂದು 08-00 ಪಿ.ಎಂ.ಕ್ಕೆ ಫಿರ್ಯಾದಿದಾರರ ಅಣ್ಣನಾದ ಬಸಟ್ಟೆಪ್ಪ ಮತ್ತು ಅವರ ಕಾರ ಚಾಲಕ ಸುರೇಶ ಕೂಡಿಕೊಂಡು ಇನೋವಾ ಕಾರ ನಂ. ಕೆ.ಎ.37/ಎಂ.9922 ನೇದ್ದರಲ್ಲಿ ಗಿಣಿಗೇರಾದಿಂದ ಗಂಗಾವತಿಗೆ ಬರುತ್ತಿರುವಾಗ ಕೊಪ್ಪಳ ಗಂಗಾವತಿ ರಸ್ತೆಯ ಮೇಲೆ ಗಂಗಾವತಿ ಕಡೆಯಿಂದ ಅವರ ಎದುರಿಗೆ ಲಾರಿ ನಂ. ಕೆ.ಎ.26/5138 ನೇದ್ದರ ಚಾಲಕನು ಲಾರಿಯನ್ನು ಅತಿವೇಗವಾಗಿ ನಿರ್ಲಕ್ಷತನದಿಂದ ಮುಂದೆ ಇರುವ ಲಾರಿಗೆ ಓವರಟೇಕ್ ಮಾಡಿಕೊಂಡು ಕಾರಿನ ಎದುರಿಗೆ ಬಂದು ಡಿಕ್ಕಿ ಕೊಟ್ಟು ಅಪಘಾತ ಮಾಡಿದ್ದರಿಂದ ಫಿರ್ಯಾದಿ ಅಣ್ಣ ಬಸಟ್ಟೆಪ್ಪ, ಚಾಲಕ ಸುರೇಶ ಇವರಿಗೆ ಗಾಯ ಪೆಟ್ಟುಗಳಾಗಿರುತ್ತವೆ ಅಂತಾ ಮುಂತಾಗಿದ್ದ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈ ಕೊಂಡಿದ್ದು ಇರುತ್ತದೆ.
2] ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ: 44/2016 ಕಲಂ: 279, 337, 338 ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:.
ಫಿರ್ಯಾಧಿದಾರರಾದ ಚಂದ್ರು ತಂದಿ ರಾಮಲಿಂಗಪ್ಪ ಗೋನಾಳ ಸಾ: ಮುದುಟಗಿ ಮತ್ತು ಪರಶುರಾಮ ಸೂಡಿ ರವರು ಕೂಡಿಕೊಂಡು ಮುದುಟಗಿ ಗ್ರಾಮದಿಂದ ಹನಮಸಾಗರಕ್ಕೆ ಫಿರ್ಯಾದಿದಾರರಿಗೆ ಸಂಬಂಧಿಸಿದ ಹಿರೋಹೊಂಡ ಮೋಟರ ಸೈಕಲ್ ನಂ: ಕೆ.ಎ-37- ಎಲ್-1317 ನೇದ್ದರಲ್ಲಿ ಹಿಂದುಗಡೆ ಫಿರ್ಯಾದಿದಾರರನ್ನು ಕೂಡಿರಿಸಿಕೊಂಡು ಗಾಯಾಳು ಪರಶುರಾಮನು ಮೋಟರ ಸೈಕಲನ್ನು ನಡೆಸುತ್ತಾ ಡಿಸೈಲ್ ತರಲು ಹನಮಸಾಗರಕ್ಕೆ ಬರುತ್ತಿರುವಾಗ ಹನಮಸಾಗರ ಇನ್ನು ಒಂದು ಕೀ.ಮೀ. ಅಂತರ ಇರುವಾಗ ಅದೇ ವೇಳೆಗೆ ಹನಮಸಾಗರ ಕಡೆಯಿಂದ ಒಂದು ಲಾರಿ ನಂ: ಎ.ಎಪಿ-29 / ಯು-9513 ನೇದ್ದರ ಚಾಲಕನು ಲಾರಿಯನ್ನು ಅತಿ ವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಎದುರುಗಡೆಯಿಂದ ಮೋಟರ ಸೈಕಲ್ ಸವಾರರಿಗೆ ಟಕ್ಕರ ಕೊಟ್ಟು ಅಪಘಾತಪಡಿಸಿದ್ದರಿಂದ ಸೈಕಲ್ ಮೋಟರ ಸವಾರರು ವಾಹನ ಸಮೇತ ರಸ್ತೆಯ ಮೇಲೆ ಬಿದ್ದಿದ್ದು ಅಪಘಾತದಿಂದ ಮೋಟರ ಸೈಕಲ್ ಹಿಂದೆ ಕುಳಿತ ಫಿರ್ಯಾದಿದಾರರಿಗೆ ಎದೆಗೆ, ತೆರಚಿದ ಗಾಯ ಮತ್ತು ಬಲ ಬುಜಕ್ಕೆ ಒಳಪೆಟ್ಟು ಮತ್ತು ಬಲಗಾಲ ಮಂಡಿಗೆ ತೆರಚಿದ ಗಾಯ ಮತ್ತು ಒಳ ಪೆಟ್ಟಾಗಿದ್ದು ಮೋಟರ ಸೈಕಲ್ ನಡೆಸುತ್ತಿದ್ದ ಪರಶುರಾಮ ಸೂಡಿ ಈತನಿಗೆ ತಲೆಯ ಹಿಂಭಾಗ ರಕ್ತಗಾಯ ಮತ್ತು ಒಳಪೆಟ್ಟಾಗಿದ್ದು ಅದೇ ವೇಳೆಗೆ ಲಕ್ಷ್ಮಣ ನಾಯಕ ರವರು ಬಂದಿದ್ದು ಗಾಯಾಳುಗಳಿಗೆ ಎಬ್ಬಿಸಿದ್ದು  ಅಪಘಾತದಿಂದ ಮೋಟರ ಸೈಕಲ್ ಮುಂದಿನ ಲೈಟಿನ ಡೂಮ,  ಇಂಡಿಕೇಟರ ಲೈಟ ಒಡೆದಿದ್ದು ಪೆಟ್ರೋಲ ಟ್ಯಾಂಕ ನೆಗ್ಗಿದ್ದು ಮುಂದಿನ ಬಂಪರ, ಮಟಗಾರ್ಡ ಬೆಂಡಾಗಿರುತ್ತದೆ. ಹಿಂದಿನ ರಿಮ್ ಬೆಂಡಾಗಿರುತ್ತದೆ. ಸಲೈನ್ಸರ ಪೈಪ ಬೆಂಡಾಗಿರುತ್ತದೆ, ನಂತರ ಅಪಘಾತಪಡಿಸಿದ ಲಾರಿಯನ್ನು ಅದರ ಚಾಲಕನು ಸ್ವಲ್ಪ ಮುಂದೆ ಹೋಗಿ ನಿಲ್ಲಿಸಿದ್ದು ಅದರ ನಂಬರ ಎ.ಪಿ-29/ಯು-9513 ಅಂತಾ ಇರುತ್ತದೆ ನಂತರ ಗಾಯಾಳು ಪರಶುರಾಮನಿಗೆ ಮೂರ್ಚೆ ಬಂದಂತಾಗಿದ್ದರಿಂದ ಅವನು ನೆಲಕ್ಕೆ ಮಲಗಿಕೊಂಡನು ಆಗ ಆಲಾರಿಯ ಚಾಲಕನು ಗಾಭರಿಗೊಂಡು ಲಾರಿಯನ್ನು ನಡೆಯಿಸಿಕೊಂಡು ಹಾಗೆಯೇ ಹೋದನು, ಪ್ರಕರಣ ದಾಖಲಿಸಿಕೊಂಡು ತನಿಕೆ ಕೈ ಗೊಂಡಿರುತ್ತಾರೆ.
3] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 114/2016 ಕಲಂ:  341, 323, 354, 504, 506 ಸಹಿತ 34 ಐ.ಪಿ.ಸಿ:.
ದಿನಾಂಕ : 24-05-2016 ರಂದು ರಾತ್ರಿ 8-30 ಗಂಟೆಯ ಸುಮಾರಿಗೆ ಫಿರ್ಯಾದಿದಾರರಾದ ಶ್ರೀಮತಿ  ಹಿರೇಬಸಮ್ಮ ಗಂಡ .ಬಸನಗೌಡ  ಕಾಸರಡ್ಡಿ  ಸಾ- ಕೊಟ್ನೆಕಲ್  ನಿವಾಸಿಯಾಗಿದ್ದು ನನ್ನ ಮನೆ ಪಕ್ಕದಲ್ಲಿ ನನ್ನ ತಮ್ಮನದು ಇದ್ದು, ದಿನಾಂಕ : 22-05-2016 ರಂದು  ಇವರು ಊರಿಗೆ ಹೊಗಿದ್ದರು ಅಂದು ಪಬ್ಲಿಕ್ ನಳ ಹರಿದು ನೀರು ಪ್ಲಾಸ್ಟಿಕ್ ಸೇರಿ ನಮ್ಮ ಬಾತ್ ರೂಮಿ  ಪೈಪ್ ಬ್ಲಾಕ್ ಆಗಿದ್ದು ಆದ ಕಾರಣ ನಾವು ಅವರ ಮನೆ ಮುಂದೆ ಇರುವ ಪಬ್ಲಿಕ್ ಟ್ಯಾಪ್  ಬಂದು ಮಾಡಿದ್ದೇವು.  ದಿನಾಂಕ : 23-05/2016 ರಂದು ಊರಿನಿಂದ ಬಂದು  ನನ್ನ   ತಮ್ಮನ ಹೆಂಡತಿ  ಅವಾಚ್ಯ ಶಬ್ದಗಳಿಂದ ಬೈದಾಡುತ್ತಿದ್ದರು.  ನಾನು ಅದನ್ನು  ವಿರೋದಿಸಿದಾಗ  ಅವರು ಸುಮ್ಮನಿದ್ದು,  ರಾತ್ರಿ 9-30 ಗಂಟೆಗೆ ಅವರ ತಮ್ಮನಾದ  1) ಬಸವರಾಜ ತಂದಿ ಲಿಂಗಪ್ಪ, 2) ಶರಣಮ್ಮ ಗಂಡ ವೀರನಗೌಡ ವರು ಕೂಡಿಕೊಂಡು ನ್ನ ತಲೆಗೂದಲು ಹಿಡಿದು ಎಳೆದುಕೊಂಡು ನನ್ನನ್ನು ಬಿಡಿದು ಮತ್ತು ನನ್ನ ಮಕ್ಕಳನ್ನು ಬಡಿದಿರುತ್ತಾರೆ. ಈ ಜಗಳ ಮುಗಿದ  ನಂತರ  ರಾತ್ರಿ 12-30 ಕ್ಕೆ ಇಬ್ಬರೂ ಅಣ್ಣ ತಮ್ಮಂದಿರು ಕೂಡಿಕೊಂಡು ಬಂದು ಹೊರಗೆ  ಅವಾಚ್ಯ ಶಬ್ದಗಳನ್ನು ಬಳಸಿದ್ದಾರೆ ನಾವು ಇದಕ್ಕೆ  ಯಾವುದೇ ಪ್ರತಿರೋದ ತೋರಿಸಲಿಲ್ಲ. ಅವರು ತಮ್ಮ ಬಸವರಾಜ ತಂದಿ ಲಿಂಗಪ್ಪ ಸಾ- ಮೈಲಾಪೂರ  2) ಶರಣಮ್ಮ ಗಂಡ ವೀರನಗೌಡ ಕೊಟ್ನೆಕಲ್ 3) ಶರಣಪ್ಪ   ಮೈಲಾಪೂರ  4) ರೇಖಮ್ಮ ಗಂಡ ಕರಿಬಸಪ್ಪ ಸಾ. ಕುರಕುಂದಿ 5) ಮಲ್ಲಮ್ಮ ಬಸವರಾಜ ನಡುವಿ ಸಾ. ಸಿದ್ರಾಂಪೂರ 6) ಚನ್ನಮ್ಮ ಗಂಡ ಲಿಂಗಪ್ಪ ಗುಡಿತಾಳ ಸಾ. ಮಲಾಪೂರಇವರೆಲ್ಲರೂ ಸೇರಿ ಜಗಳಾ ತೆಗೆದು ಕೈಯಿಂದ ಹೊಡೆಬಡಿ ಮಾಡಿ ಅವಾಚ್ಯ ಶಬ್ದಗಳಿಂದ ಬೈದಾಡಿ ಸಿರೇ ಸೆರಗು ಹಿಡಿದು ಎಳೆದಾಡಿ ಅವಮಾನ ಮಾಡಿದ್ದು ಇರುತ್ತದೆ ಅಂತಾ ಮುಂತಾಗಿ ಕೊಟ್ಟ ಫಿರ್ಯಾದಿ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
4] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 115/2016 ಕಲಂ:  143, 147, 341, 323, 354, 506 ಸಹಿತ 149 ಐ.ಪಿ.ಸಿ:.

ದಿನಾಂಕ : 24-05-2016 ರಂದು ರಾತ್ರಿ 9-45 ಗಂಟೆಯ ಸುಮಾರಿಗೆ ಫಿರ್ಯಾದಿದಾರರಾದ ಶ್ರೀಮತಿ ಶರಣಮ್ಮ ಗಂಡ ವೀರನಗೌಡ ರಡ್ಡಿ ವಯಾ- 28 ವರ್ಷ- ಒಕ್ಕಲುತನ ಸಾ- ಕೊಟ್ನೆಕಲ್ ತಾ- ಗಂಗಾವತಿಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿಯನ್ನು ಕೊಟ್ಟಿದ್ದು ಅದರ ಸಾರಾಂಶವೆನೆಂದರೆಫಿರ್ಯಾದಿದಾರರ ಮನೆಯ ಮುಂದೆ ಇರುವ ನೀರಿನ ಕೊಳಯಿಗೆ  ಕಟ್ಟಿಗೆ ಹೊಡೆದಿದ್ದರಿಂದ  ಫಿರ್ಯಾದಿದಾರರು ಜಗಳಾ ಮಾಡಿದ್ದು, ನಂತರ ರಾತ್ರಿ 8-00 ಗಂಟೆಯ ಸುಮಾರಿಗೆ  ಆರೋಪಿತರಾದ ಬಸಮ್ಮ ಗಂಡ ಬಸನಗೌಡ ಕಾಸರಡ್ಡಿ  2)  ಹಿರೇಬಸವರಾಜಪ್ಪ  ಕೊಟ್ನೆಕಲ್ 3)  ಸಣ್ಣಬಸವರಾಜ  ಕೊಟ್ನೆಕಲ್ 4)  ಶಿವು 5)  ಅಮರೇಶ  6)  ಶರಣಬಸವ 7)  (ಅಮರಮ್ಮ) ಪಲ್ಲವಿ ಗಂಡ ಕುಮಾರ  8)  ಅಮರೇಶ ತಂದಿ ಹಿರೇಬಸವರಾಜಪ್ಪ ಎಲ್ಲರೂ ಸಮಾನ ಉದ್ದೇಶದಿಂದ ಬಂದು ಫಿರ್ಯಾದಿದಾಳಿಗೆ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದಾಡಿ  ಕೈಯಿಂದ ಹೊಡೆಬಡಿ ಮಾಡಿ ಜಡೆ ಹಿಡಿದು ಎಳೆದಾಡಿ ಸೀರೆ ಹಿಡಿದು ಎಳೆದಾಡಿ ಅವಮಾನ ಮಾಡಿ  ಜೀವ ಭಯ ಹಾಕಿ ಊರು ಬಿಟ್ಟು ಹೊಗಿರಿ ಅಂತಾ ಮುಂತಾಗಿ  ಫಿರ್ಯಾದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ

0 comments:

 
Will Smith Visitors
Since 01/02/2008