Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Tuesday, May 24, 2016

1] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 151/2016 ಕಲಂ: 279, 337, 338, 304(ಎ) ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:.
ಫಿರ್ಯಾದಿದಾರರಾದ ಶ್ರೀ ಭರಮಪ್ಪ ತಂದೆ ಹನುಮಂತಪ್ಪ ಪುಜಾರಿ 40 ವರ್ಷ ಫಿರ್ಯಾದಿಯನ್ನು ನೀಡಿದ್ದುನಿನ್ನೆ ದಿನಾಂಕ: 23-05-2016 ರಂದು ಬೆಳಿಗ್ಗೆ 9:00 ಗಂಟೆಯ ಸುಮಾರಿಗೆ ನಾನು ಮತ್ತು 1] ಜಗದೀಶ ತಂದೆ ಯಲ್ಲಪ್ಪ ಪುಜಾರಿ 30 ವರ್ಷ ಸಾ: 15 ನೇ ವಾರ್ಡ ಮುಚಿಗೇರ ಓಣಿ ಗಂಗಾವತಿ 2] ಸಕ್ರಪ್ಪ ತಂದೆ ಲಕ್ಷಮಪ್ಪ 55 ವರ್ಷ ಸಾ: 15 ನೇ ವಾರ್ಡ ಮುಚಿಗೇರ ಓಣಿ ಗಂಗಾವತಿ 3] ರಾಜಸಾಬ ತಂದೆ ದಾದೇಸಾಬ ನಡಗುಂದಿ, 53 ವರ್ಷ ಸಾ: ಬನ್ನಿಗಿಡದ ಕ್ಯಾಂಪ್ ಗಂಗಾವತಿ 4] ಹಜಮತ್ ಅಲಿ ತಂದೆ ಖಾಸೀಮಸಾಬ ವ್ಯಾಪಾರ, 48 ವರ್ಷ ಸಾ: ಲಕ್ಷ್ಮಿಕ್ಯಾಂಪ್ ಗಂಗಾವತಿ ಹಾಗೂ ಇತರರೊಂದಿಗೆ ಮಾವಿನಹಣ್ಣು ಪ್ಯಾಕ ಮಾಡಲು ಇಸ್ಮಾಯಿಲ್ ಸಾಬ ಎಂಬುವರ ಮೇಸ್ತ್ರಿ ಸಂಗಡ ಕೊಪ್ಪಳ ತಾಲೂಕಿನ ಕಲ್ ತಾವರಗೇರಿಗೆ ಬುಲೆರೋ ಫಿಕಪ್ ವಾಹನ ನಂ: ಎಂ.ಹೆಚ್.-45/ಟಿ-2818 ನೇದ್ದರಲ್ಲಿ ಹೋಗಿದ್ದೆವು. ನಂತರ ಕೆಲಸ ಮುಗಿಸಿಕೊಂಡು ಅದೇ ವಾಹನದಲ್ಲಿ ಕೊಪ್ಪಳ ಕಡೆಯಿಂದ ಗಂಗಾವತಿ ಕಡೆಗೆ ಬರುತ್ತಿರುವಾಗ ರಾತ್ರಿ 9:30 ಗಂಟೆಯ ಸುಮಾರಿಗೆ ಗಂಗಾವತಿ-ಕೊಪ್ಪಳ ಮುಖ್ಯ ರಸ್ತೆಯಲ್ಲಿ ಚಿಕ್ಕ ಬೆಣಕಲ್ ಕ್ರಾಸ ಹತ್ತಿರ ನಾವು ಕುಳಿತು ಬರುತ್ತಿದ್ದ ಬುಲೆರೋ ಫಿಕಿಪ್ ವಾಹನ ಚಾಲಕನು ವಾಹನವನ್ನು ಅತೀವೇಗ ಹಾಗೂ ತೀವ್ರ ನಿರ್ಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ರೋಡ್ ಹಂಪ್ಸ್ ನ್ನು ಜೋರಾಗಿ ದಾಟಿದ್ದರಿಂದ ಹಿಂಭಾಗದಲ್ಲಿ ಕುಳಿತುಕೊಂಡಿದ್ದು ನಾವುಗಳು ವಾಹನದಿಂದ ಪುಟಿದು ರಸ್ತೆಯ ಮೇಲೆ ಬಿದ್ದಿದ್ದು ಇದರಿಂದಾಗಿ ನನಗೆ ಬಲಗಡೆ ಸೊಂಟಕ್ಕೆ ಒಳಪೆಟ್ಟು ಹಾಗೂ ಬಲ ಮೊಣಕೈಗೆ ಗಾಯವಾಗಿದ್ದು, ಇತರರಿಗೂ ಸಹ ಸಣ್ಣ ಪುಟ್ಟ ಗಾಯ ಹಾಗೂ ತೀವ್ರ ಒಳಪೆಟ್ಟಾಗಿದ್ದವು. ಜಗದೀಶ ಈತನಿಗೆ ತಲೆಯ ಹಿಂಭಾಗ ತೀವ್ರ ರಕ್ತಗಾಯವಾಗಿ ಎರಡು ಕಿವಿಯಲ್ಲಿ ರಕ್ತ ಬಂದು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲಾ. ಅಪಘಾತದ ನಂತರ ನಾವು ಕುಳಿತು ಬರುತ್ತಿದ್ದ ಬುಲೆರೋ ಫಿಕಪ್ ವಾಹನದ ಚಾಲಕ ಅಲ್ಲಿಂದ ಓಡಿ ಹೋಗಿದ್ದನು. ನೋಡಿದಲ್ಲಿ ಅವನನ್ನು ಗುರುತಿಸುತ್ತೇವೆ. ಕೂಡಲೇ ಯಾರೋ ಟೋಲ್ ಗೇಟ್ ಅಂಬುಲೆನ್ಸ್ ವಾಹನಕ್ಕೆ ಕರೆ ಮಾಡಿದ್ದು ಅದರಲ್ಲಿ ನಾವು ಎಲ್ಲರೂ ಚಿಕಿತ್ಸೆ ಕುರಿತು ಗಂಗಾವತಿ ಉಪ ವಿಭಾಗ ಆಸ್ಪತ್ರೆಗೆ ಬರುತ್ತಿರುವಾಗ 10:00 ಗಂಟೆಯ ಸುಮಾರಿಗೆ ಬಸಾಪಟ್ಟಣದ ಹತ್ತಿರ ಜಗದೀಶ ಈತನು ಮೃತಪಟ್ಟಿದ್ದು ಇರುತ್ತದೆ.
2] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 146/2016 ಕಲಂ: 279, 337  ಐ.ಪಿ.ಸಿ
ದಿನಾಂಕ :-23-05-2016 ರಂದು ರಾತ್ರಿ 08-45 ಗಂಟೆಗೆ ಸರಕಾರಿ  ಆಸ್ಪತ್ರೆ ಕುಷ್ಟಗಿಯಿಂದ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಚನ್ನಬಸಪ್ಪ ತಂದೆ ಮರಿಯಪ್ಪ ಪರಕಿ ಸದರಿ ಹೇಳಿಕೆಯ ಪಿರ್ಯಾದಿಯ ಸಾರಾಂಶವೆನೆಂದರೆ ಇಂದು ದಿನಾಂಕ: 23-05-2016 ರಂದು ಪಿರ್ಯಾದಿದಾರರು ಮದ್ಯಾಹ್ನ ಕೆಲಸದ ನಿಮತ್ಯ ಕುಷ್ಟಗಿ ಬಂದು ಕೆಲಸ ಮುಗಿಸಿಕೊಂಡು ರಾತ್ರಿ 08-15 ಗಂಟೆ ಸುಮಾರಿಗೆ ಕುಷ್ಟಗಿಯಿಂದ ವಾಪಸ್ ಮದಲಗಟ್ಟಿಗೆ ತನ್ನ ಮೋ/ಸೈ ನಂ ಕೆಎ-37-ವೈ-9237 ನೇದ್ದನ್ನು ತೆಗೆದುಕೊಂಡು ಹೋಗುತ್ತಿರುವಾಗ ಕುಷ್ಟಗಿ – ಗಜೇಂದ್ರಗಡ  ರೋಡ್ ಜವಾರಿ ಡಾಬಾದ ಹತ್ತಿರ ರೋಡ್ ಹಮ್ಸ್ ಇದ್ದಿದ್ದು ಆಗ ಆತನು ಮೋ/ಸೈ ನಿದಾನಗೊಳಿಸಿದ್ದು ಅದೇ ವೇಳೆಗೆ ಎದರುಗಡೆಯಿಂದ ಗಜೇಂದ್ರಗಡ ಕಡೆಯಿಂದ ಕುಷ್ಟಗಿ ಕಡೆಗೆ ಮೋ/ಸೈ ನಂ ಕೆಎ-27-ಇಡಿ-5586 ನೇದ್ದರ ಸವಾರನಾದ ಶಿವಕುಮಾರ ಇತನು ಅತಿವೇಗ ಮತ್ತು ಅಲಕ್ಷತನದಿಂದ ಬಂದು ರೋಡ್ ಹಮ್ಸ್ ಲೆಕ್ಕಿಸದೇ ನಡೆಸಿದ್ದು ಅದರಿಂದ ಸದರಿಯವನು ನಿಯಂತ್ರಣ ತಪ್ಪಿ ಪಿರ್ಯಾದಿ ಮೋ.ಸೈ ಗೆ ಟಕ್ಕರ ಕೊಟ್ಟಿದ್ದರಿಂದ ಪಿರ್ಯಾದಿಗೆ ಮತ್ತು ಶಿವಕುಮಾರನಿಗೆ ಸಾದಾ ಸ್ವರೂಪದ ಗಾಯವಾಗಿದ್ದು ಇರುತ್ತದೆ.  ಪ್ರಕರಣ ದಾಖಲಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ದಿನಾಂಕ 22-05-2016
1] ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ: 118/2016 ಕಲಂ: 279, 304(ಎ) ಐ.ಪಿ.ಸಿ:.
ದಿನಾಂಕ 22-05-2016 ರಂದು ಆರೋಪಿತನು ತನ್ನ ನ್ಯಾನೋ ಕಾರ ನಂ ಕೆ.-37, ಎಂ-4918 ನೇದ್ದನ್ನು ಚಲಾಯಿಸಿಕೊಂಡು ಕನಕಗಿರಿಯಿಂದ ನವಲಿ ಕಡೆಗೆ ಹೋಗುವ ರಸ್ತೆಯ ಮೇಲೆ ಅತೀ ಜೋರಾಗಿ ಮತ್ತು ಅಲಕ್ಷತನದಿಂದ ಕಾರನ್ನು ನಡೆಯಿಸಿ ರಸ್ತೆಯ ತಿರುವಿನಲ್ಲಿ ಕಾರನ್ನು ನಿಯಂತ್ರಣ ಮಾಡದೇ ಪಲ್ಟಿ ಮಾಡಿದ್ದು, ಇದರಿಂದ ಆರೋಪಿತನಿಗೆ ತಲೆಗೆ ಭಾರಿ ಒಳಪೇಟ್ಟು ಮತ್ತು ರಕ್ತಗಾಯವಾಗಿ, ಕಿವಿ, ಮೂಗು ಮತ್ತು ಬಾಯಿ ಯಿಂದ ರಕ್ತ ಬಂದು ಸ್ಥಳದಲ್ಲಿಯೇ ಆರೋಪಿ ರಂಗಸುಬ್ಬಣ್ಣ ರಾತ್ತಿ 9-20 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ
2] ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ: 43/2016 ಕಲಂ: 87 Karnataka Police ACT. 
ಕುಷ್ಟಗಿ ಸಿ.ಪಿ.ಐ ರವರು ಹನಮಸಾಗರ ಠಾಣೆಯಲ್ಲಿದ್ದಾಗ ಬಂಡರಗಲ್ ಸೀಮಾದ ಹಳ್ಳದ ಹತ್ತಿರ ಸಾರ್ವನಿಕ ಸ್ಥಳದಲ್ಲಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ನಡೆಯುತ್ತಿದೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಸಿಬ್ಬಂದಿ ಎ.ಎಸ್.ಐ ದೊಡ್ಡಪ್ಪ ತಾವರಗೇರಿ ಪಿ.ಎಸ್. ಹೆಚ್.ಸಿ-83, ಪಿ.ಸಿ-162, ಹನಮಸಾಗರ ಪಿ.ಎಸ್. ಮತ್ತು ಪಿ.ಸಿ-381, 426, 407 ಕುಷ್ಟಗಿ ಠಾಣೆರವರು ಹಾಗೂ ಇಬ್ಬರು ಪಂಚರಾದ 1] ಚಂದ್ರಶೇಖರ ತೋಪಲಕಟ್ಟಿ 2] ಚಂದ್ರಪ್ಪ ರಾಠೋಡ ಸಾ: ಹೂಲಗೇರಿ ರವರೊಂದಿಗೆ ಬಂಡರಗಲ್ ಸೀಮಾದ ಹಳ್ಳದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಜನರು ದುಂಡಾಗಿ ಕುಳಿತುಕೊಂಡು, ಅಲ್ಲಿ ಜನರು ದುಂಡಾಗಿ ಕುಳಿತು ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದರು, ನಾವೆಲ್ಲರೂ ಒಮ್ಮೆಲೆ ರೇಡ್ ಮಾಡಲು ಇಸ್ಪೀಟ್ ಆಡುತ್ತಿದ್ದ ಜನರೆಲ್ಲರೂ ಓಡ ಹತ್ತಿದ್ದು, ಆಗ ನಮ್ಮ ಸಿಬ್ಬಂದಿಯವರ ಕೈಗೆ ಮೂರು ಜನ ಸಿಕ್ಕಿ ಬಿದ್ದಿದ್ದು, ಅವರ ತಮ್ಮ ಹೆಸರು 1] ದೊಡ್ಡಬಸಪ್ಪ ಸಾ: ಮ್ಯಾಗಲಪೇಟೆ ಹುನಗುಂದ ಈತನ ವಶದಲ್ಲಿ 16700/- ರೂ ಒಂದು ಸ್ಯಾಮಸಾಂಗ್ ಮೋಬೈಲ್, 2] ಗೋಪಾಲ ಸಾ: ಹೂಲಗೇರಿ ತಾಂಡಾ, ಈತನ ವಶದಲ್ಲಿ 9900/- ರೂ ಹಾಗೂ ಒಂದು ಇಂಟೆಕ್ಸ್ ಮೋಬೈಲ್ ಸಿಕ್ಕಿದೆ, ಮತ್ತು ಇನ್ನೊಬ್ಬನ ಹೆಸರು 3] ನಾಗರಾಜ @ ನಾಗಪ್ಪ ಸಾ: ಹುನಕುಂಟಿ, ತಾ: ಹುನಗುಂದ ಈತನ ವಶದಲ್ಲಿ 4000/ ರೂ ಮತ್ತು ಒಂದು ಮೈಕ್ರೋಮ್ಯಾಕ್ಸ್ ಮೋಬೈಲ್ ಸಿಕ್ಕಿರುತ್ತದೆ. ಕಣದಲ್ಲಿ ನೋಡಲು 18000/- ರೂ ನಗದು ಹಣ ಸಿಕ್ಕಿರುತ್ತದೆ. ಹೀಗೆ ಒಟ್ಟು ಹಣ 48,600/- ರೂ ನಗದು ಹಣ ಸಿಕ್ಕಿರುತ್ತದೆ. ಅಲ್ಲದೇ ಆ ಸ್ಥಳದ ಆಜು ಬಾಜು 10 ಮೋಟಾರ್ ಸೈಕಲಗಳು ಸಿಕ್ಕಿದ್ದು, ಅವುಗಳನ್ನು ಜಪ್ತು ಪಡಿಸಿದೆ.  ಆರೋಪಿತರ ವಿರುದ್ದ ಕಾನೂನು ಕ್ರಮ ಜರುಗಿಸಲು ವರದಿ ನೀಡಿದ್ದರ ಸಾರಾಂಶದ ಮೇಲಿಂದ ಕ್ರಮ ಜರುಗಿಸಿದ್ದು ಇರುತ್ತದೆ.
3] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 108/2016 ಕಲಂ: 87 Karnataka Police ACT. 
22-05-2016 ರಂದು ಸಾಯಂಕಾಲ 4-45  ಗಂಟೆಯ ಸುಮಾರಿಗೆ ಗುಂಡೂರು ಸೀಮಾದ ಶಿವಣ್ಣ ಸಹುಕಾರ ಇವರ ಹೊಲದ ಹತ್ತಿರ ಹಳ್ಳಿದ ದಂಡೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ  ಆರೋಪಿತರು ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದಾಗ್ಗೆ ಮಾನ್ಯ ಶ್ರೀ. ನಿಂಗಪ್ಪ ಪಿ.ಎಸ್.ಐ ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿದಾಗ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ 7 ಜನರು ತಮ್ಮ ಮೋಟಾರ್ ಸೈಕಲ್ ಬಿಟ್ಟು ಓಡಿ ಹೋಗಿದ್ದು ಒಬ್ಬನು ಸಿಕ್ಕಿಬಿದ್ದಿದ್ದು,. ಸಿಕ್ಕಿ ಬಿದ್ದ ಆರೋಪಿತಕಡೆಯಿಂದ ಹಾಗೂ ಖಣದಲ್ಲಿ ಸೇರಿ ರೂ. 3000=00 ಗಳನ್ನು ಮತ್ತು ಸ್ಥಳದಲ್ಲಿ ಇದ್ದ ಇಸ್ಪೀಟ್ ಜೂಜಾಟದ ಸಾಮಾಗ್ರಿಗಳನ್ನು ಮತ್ತು ಆರೋಪಿತರ 8 ಮೋಟಾರ್ ಸೈಕಲ್ ಗಳನ್ನು  ಜಪ್ತ ಮಾಡಿಕೊಂಡಿದ್ದು ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
4] ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ. 117/2016 ಕಲಂ: 78(6) Karnataka Police ACT. 
ದಿನಾಂಕ 22-05-2016 ರಂದು ಸಂಜೆ 6-00 ಗಂಟೆಗೆ ಶ್ರೀ ಸಾಬಯ್ಯ, ಪಿ.ಎಸ್.ಐ. ಕನಕಗಿರಿ ಪೊಲೀಸ್ ಠಾಣೆ ರವರು  ಸ್ವಂತ ವರದಿಯನ್ನು ಪಂಚನಾಮೆ, ಆರೋಪಿ ಮತ್ತು ಮಾಲಿನೊಂದಿಗೆ ಹಾಜರ ಪಡಿಸಿದ್ದು, ಅದರ ಸಾರಾಂಶವೇನೆಂದರೆ, ಈ ದಿವಸ ದಿನಾಂಕ 22-05-2016 ರಂದು ಸಂಜೆ 4-30 ಗಂಟೆಗೆ ಗುಡದೂರ ಸೀಮಾದ ಹನುಮಂತಪ್ಪ  ಮಂತ್ರಿಕೀ ರವರ ಹೊಲದ ಪಕ್ಕದಲ್ಲಿರುವ ರಸ್ತೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು 2 ಹುಂಜಗಳ ಮೇಲೆ ಹಣವನ್ನು ಪಣಕ್ಕೆ ಹಚ್ಚಿ ಅದೃಷ್ಟದ ಕೋಳಿ ಪಂದ್ಯಾಟದ ಜೂಜಾಟದ ತೊಡಗಿದ ಸಮಯದಲ್ಲಿ ಪಂಚರ ಮತ್ತು ಸಿಬ್ಬಂದಿರವರೊಂದಿಗೆ ದಾಳಿ ಮಾಡಿ ಅವರಿಂದ ನಗದು ಹಣ ರೂ.1200/- ಮತ್ತು ಪಂದ್ಯಾಟಕ್ಕೆ ಬಳಸಿದ 2 ಹುಂಜಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
5] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 86/2016 ಕಲಂ: 454, 457, 380 ಐ.ಪಿ.ಸಿ:.
ದಿನಾಂಕ: 22-05-2016 ರಂದು ಮದ್ಯಾಹ್ನ 1-00 ಗಂಟೆಗೆ ವೀರಭದ್ರಪ್ಪ ತಂದೆ ಬಸಪ್ಪ ಅಂಗಡಿ ಸಾ: ಮರಿಶಾಂತವೀರ ನಗರ ಕೊಪ್ಪಳ ಇವರು ಫಿರ್ಯಾದಿ ನೀಡಿದ್ದು ದಿನಾಂಕ: 20-05-2016 ರಂದು ರಾತ್ರಿ 8-45 ಗಂಟೆಯಿಂದ ದಿನಾಂಕ: 21-05-2016 ರಂದು ಮದ್ಯಾಹ್ನ 2-00 ಗಂಟೆಯ ನಡುವಿನ ಅವಧಿಯಲ್ಲಿ  ಫಿರ್ಯಾದಿದಾರರು ಮತ್ತು ಅವರ ಹೆಂಡತಿ ಹಾಗೂ ಅವರ ಮಕ್ಕಳೊಂದಿಗೆ ಹಲಗೇರಿಗೆ ಮತ್ತು ಹುಬ್ಬಳ್ಳಿಗೆ ಹೋಗಿದ್ದಾಗ ಯಾರೋ ಕಳ್ಳರು ಫಿರ್ಯಾದಿದಾರರ ಮನೆಯ ಮುಂದಿನ ಬಾಗಿಲಿನ ಸೆಂಟರ್ ಲಾಕ್ ಮುರಿದು ಒಳ ಪ್ರವೇಶ ಮಾಡಿ ಮನೆಯ ಬೆಡ್ ರೂಮ್ನಲ್ಲಿದ್ದ ಅಲಮಾರವನ್ನು ತೆರೆದು ಅದರ ಸೇಫ್ ಲಾಕರ್ನ್ನು ಮೀಟಿ ತೆರೆದು ಅದರಲ್ಲಿದ್ದ 1] ಎರಡು ಜೋತೆ ಕಿವಿ ರಿಂಗ್ ಅಂದಾಜು ತೂಕ 8 ಗ್ರಾಂ ಅಂ.ಕಿ.ರೂ: 17,600=00 ಮತ್ತು ನಗದು ಹಣ ರೂ 6000 ಎಲ್ಲಾ ಸೇರಿ ಒಟ್ಟು ಅಂ.ಕಿ.ರೂ: 23,600=00 ಬೆಲೆ ಬಾಳುವುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ.  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಅದೆ.

  


0 comments:

 
Will Smith Visitors
Since 01/02/2008