Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Wednesday, August 24, 2016

1] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 243/2016 ಕಲಂ: 87 Karnataka Police Act.
ದಿನಾಂಕ:- 23-08-2016 ರಂದು ಮಧ್ಯಾಹ್ನ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಆಗೋಲಿ ಗ್ರಾಮದ  ಸೀಮಾದ  ವಿಠಲಾಪೂರು ಕ್ರಾಸ್ ಹತ್ತಿರ ಗುಡ್ಡದ ಸಾರ್ವಜನಿಕ ಸ್ಥಳದಲ್ಲಿ ಅಂದಾರ ಬಹಾರ ಎಂಬ ಇಸ್ಪೀಟ್ ಜೂಜಾಟದ ನಡೆಯುತ್ತಿದೆ ಅಂತಾ ಖಚಿತವಾದ ಭಾತ್ಮಿ ಮೇರೆಗೆ ಶ್ರೀ ಪ್ರಕಾಶ ಮಾಳಿ, ಪಿ.ಎಸ್.ಐ. ಹಾಗೂ ಸಿಬ್ಬಂದಿಯವರಾದ 358, 363, 43, 323, 335, ಎ.ಪಿ.ಸಿ. 77 ರವರು ಮತ್ತು ಇಬ್ಬರು ಪಂಚರನ್ನು ಬರಮಾಡಿಕೊಂಡು ನಮಗೆ ಮಾಹಿತಿ ಇದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿ ನಿಂತು ನೋಡಲು ಆಗೋಲಿ ಸೀಮಾದ ಗುಡ್ಡದ ಸಾರ್ವಜನಿಕ ಸ್ಥಳದಲ್ಲಿ ಜನರು ದುಂಡಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ್ ಎಲೆಗಳಿಂದ ಅಂದರ್ ಬಹಾರ್ ಎನ್ನುವ ಕಾನೂನು ಬಾಹಿರವಾದ ಅದೃಷ್ಠದ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದು ಕಂಡುಬಂದಿದ್ದು, ಕೂಡಲೇ ಅವರ ಮೇಲೆ ದಾಳಿ ಮಾಡಲಾಗಿ ಜೂಜಾಟದಲ್ಲಿ ತೊಡಗಿದ್ದವರ ಪೈಕಿ 5 ಜನರು ಸಿಕ್ಕಿಬಿದ್ದಿದ್ದು. ಇನ್ನೂ ಕೆಲವರು ಓಡಿ ಹೋದರು. ಸಿಕ್ಕವರಿಂದ ಹಾಗೂ ಸ್ಥಳದಿಂದ ಜೂಜಾಟದ ನಗದು ಹಣ ರೂ. 8,250/- ರೂಪಾಯಿ, 52 ಇಸ್ಪೀಟ್ ಎಲೆಗಳು, ಹಾಗೂ ನೆಲದ ಮೇಲೆ ಹಾಸಿದ್ದ ಒಂದು ಪ್ಲಾಸ್ಟಿಕ್ ಖಾಲಿ ಚೀಲ ಮತ್ತು ಸ್ಥಳದಲ್ಲಿದ್ದ 6 ದ್ವಿಚಕ್ರ ವಾಹನಗಳನ್ನು ಜಪ್ತಿ ಪಡಿಸಿಕೊಂಡ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 236/2016  ಕಲಂ: 279, 337, 338  ಐ.ಪಿ.ಸಿ:.
ದಿನಾಂಕ:22-08-2016 ರಂದು ಮದ್ಯಾಹ್ನ 3-30 ಗಂಟೆಗೆ ಪಿರ್ಯಾದಿದಾರರಾದ ದೇವಿಂದ್ರಗೌಡ ತಂದೆ ವೀರನಗೌಡ ಪೋ.ಪಾಟೀಲ್ ವಯಾ: 34 ವರ್ಷ ಜಾತಿ: ಲಿಂಗಾಯತ್  : ಒಕ್ಕಲುತನ  ಸಾ: ಮಾದಾಪೂರ ತಾ: ಕುಷ್ಟಗಿ ರವರು ಹಾಜರಾಗಿ ಪಿರ್ಯಾಧಿ ನೀಡಿದ್ದು ನನ್ನ ತಮ್ಮನಾದ ನಾಗನಗೌಡ ತಂದೆ ವೀರನಗೌಡ ಪೊ.ಪಾಟೀಲ್ ವಯ: 28 ಇವರು  ನಮ್ಮ ಗ್ರಾಮದ ವಿರೇಶ ತಂದೆ ದೊಡ್ಡಪ್ಪ ಹಡಪದ ವಯ: 26 ಇತನ ಮೋ.ಸೈ ನಂ ಕೆಎ-29-ಇಎ-0981 ನೇದ್ದನ್ನು ತೆಗೆದುಕೊಂಡು ಇಲಕಲ್ ಗೆ ಹೋಗುತ್ತಿರುವಾಗ ಸದರಿ ವಾಹನವನ್ನು ವಿರೇಶ ಇತನು ನಡೆಸುತ್ತಿದ್ದು ಮದ್ಯಾಹ್ನ12-30 ಗಂಟೆಗೆ ಸುಮಾರು ದೋಟಿಹಾಳ ಕ್ಯಾದಿಗುಂಪಾ  ರಸ್ತೆಯ ಕ್ಯಾದಿಗುಂಪ್ಪಾ ಗ್ರಾಮದ ಆಶ್ರಯ ಮನೆಯ ಹತ್ತಿರ ಮೋ.ಸೈ ನ್ನು ಅತೀ ವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ತಿರುವಿನಲ್ಲಿ ರೋಡ್ ಹಂಪ್ಸ್ ನೋಡದೆ ಜಂಪ್ ಮಾಡಿದ್ದರಿಂದ ಹಿಂದೆ ಕುಳಿತ ನನ್ನ ತಮ್ಮನಾದ ನಾಗನಗೌಡ ಇತನು ಮೋ.ಸೈ ಮೇಲಿಂದ ಕೆಳಗೆ ಬಿದ್ದು ಆತನ ಬಲಗಾಲ ಮೋಣಕಾಲ ಕೆಳಗೆ ರಕ್ತಗಾಯವಾಗಿ ಮುರಿದಂತಾಗಿದೆ ಅಂತಾ ಪೋನ್ ಮಾಡಿದ್ದರಿಂದ ಕೂಡಲೇ ನಾನು ಸ್ಥಳಕ್ಕೆ ಬಂದು ಒಂದು ಖಾಸಗಿ ವಾಹನದಲ್ಲಿ ನನ್ನ ತಮ್ಮನಾದ ನಾಗನಗೌಡ ನನ್ನು ಇಲಕಲ್ ಅಕ್ಕಿ ಆಸ್ಪತ್ರೆಗೆ ದಾಖಲು ಮಾಡಿ ಆತನನ್ನು ಚಿಕಿತ್ಸೆ ಮಾಡಿಸಿ ಇಂದು ತಡವಾಗಿ ಬಂದು  ನನ್ನ ತಮ್ಮನಿಗೆ ಅಪಘಾತ ಮಾಡಿದ ಮೋ.ಸೈ ಸವಾರನಾದ ವಿರೇಶ ಇತನ ವಿರುದ್ದ ಠಾಣೆಗೆ ಬಂದು ನೀಡಿದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
3] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 238/2016  ಕಲಂ: 279, 337  ಐ.ಪಿ.ಸಿ:.

ದಿನಾಂಕ:23-08-2016 ರಂದು ಸಂಜೆ 7-30 ಗಂಟೆಗೆ ಪಿರ್ಯಾದಿದಾರರಾದ ಹುಸೇನಸಾಬ ತಂದೆ ಹಸೇನಸಾಬ ಗುಮಗೇರಿ ವಯಾ 58 ವರ್ಷ ಜಾ.ಮುಸ್ಲಿಂ ಉ.ಹಮಾಲಿ ಕೆಲಸ ಸಾ.ತೆಗ್ಗಿನ ಓಣಿ ಕುಷ್ಟಗಿ ಠಾಣೆಗೆ ಹಾಜರಾಗಿ ನೀಡಿದ ಲಿಖಿತ ಪಿರ್ಯಾದಿಯ ಸಾರಾಂಶವೆನೆಂದರೆ ಇಂದು ದಿನಾಂಕ: 23-08-2016 ರಂದು ಮಂಗಳವಾರ ದಿವಸ ಬೆಳಿಗ್ಗೆ ನಸುಕಿನಲ್ಲಿಯೇ ನನ್ನ ಮಗನಾದ ಹಸನಸಾಬ ವಯಾ 38 ವರ್ಷ ಈತನು ನಮ್ಮ ಎತ್ತುಗಳಿಗೆ ಮೇವು ತರುವ ಕುರಿತು ನಮ್ಮ ಟಿ.ವಿ.ಎಸ್. ಎಕ್ಸೆಲ್ ಮೊಪೆಡ್ ನಂ. ಕೆ.ಎ. 27/ ಹೆಚ್-6879 ನೇದ್ದನ್ನು ತೆಗೆದುಕೊಂಡು ಹೊಲಕ್ಕೆ ಹೋಗಿದ್ದನು, ನಂತರ ಬೆಳಿಗ್ಗೆ 7-30 ಗಂಟೆ ಸುಮಾರಿಗೆ ನನ್ನ ಮಗನಾದ ಹಸನಸಾಬ ಈತನಿಗೆ ಕುಷ್ಟಗಿಯ ಮಾರುತಿ ಸರ್ಕಲ್ ನಲ್ಲಿ ಅಪಘಾತವಾಗಿದೆ ಅಂತಾ ಗೊತ್ತಾಗಿ ನಾನು ಕೂಡಲೇ ಮಾರುತಿ ಸರ್ಕಲ್ ಗೆ ಹೋಗಿ ನೋಡಲಾಗಿ ವಿಷಯ ನಿಜ ಇದ್ದು, ನನ್ನ ಮಗನಾದ ಹಸನಸಾಬ ಈತನು ತಾನು ಹೊಲದಿಂದ ಮೇವು ಮಾಡಿಕೊಂಡು ಮನೆ ಕಡೆಗೆ ನಮ್ಮ ಟಿ.ವಿ.ಎಸ್. ಮೊಪೆಡ್ ನ್ನು ನಡೆಸಿಕೊಂಡು ಕುಷ್ಟಗಿಯ ಬಸ್ ಸ್ಟಾಂಡ್ ಕಡೆಯಿಂದ ಮಾರುತಿ ಸರ್ಕಲ್ ಕಡೆಗೆ ಬರುತ್ತಿದ್ದಾಗ ಎದರುಗಡೆಯಿಂದ ಅಂದರೆ ಬಸವೇಶ್ವರ ಸರ್ಕಲ್ ಕಡೆಯಿಂದ ಮಾರುತಿ ಸರ್ಕಲ್ ಕಡೆಗೆ ಸದರಿ ಲಾರಿ ಟ್ಯಾಂಕರ್ ನಂ. ಕೆ.ಎ.-44/2766 ನೇದ್ದರ ಚಾಲಕ ನಾರಾಯಣ ಈತನು ತನ್ನ ಲಾರಿಯನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಏಕಾಏಕಿ ತನ್ನ ಲಾರಿಯನ್ನು ಟರ್ನ ಮಾಡಿ ಹಸನಸಾಬ ಈತನ ಮೊಪೆಡ್ ಗೆ ಟಕ್ಕರ್ ಮಾಡಿದ್ದರಿಂದ ಸದರಿ ಅಪಘಾತ ಜರುಗಿರುವುದಾಗಿ ಗೊತ್ತಾಯಿತು. ನಂತರ ಹಸನನಾಬ ಈತನನ್ನು ಚಿಕಿತ್ಸೆ ಕುರಿತು ಕುಷ್ಟಗಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು, ವೈದ್ಯರು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಕುರಿತು ಇಲಕಲ್ ಅಕ್ಕಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದ ಮೇರೆಗೆ ಸದರಿಯವನನ್ನು ಇಲಕಲ್ ಅಕ್ಕಿ ಆಸ್ಪತ್ರೆಗೆ ನಂತರ ಅಲ್ಲಿಂದ ಬಾಗಲಕೋಟೆ ಕುಮಾರೇಶ್ವರ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕುರಿತು ಸೇರಿಕೆ ಮಾಡಿ ಈಗ ತಡವಾಗಿ ಬಂದು ದೂರು ನೀಡಿರುತ್ತೇನೆ.  

0 comments:

 
Will Smith Visitors
Since 01/02/2008