Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Monday, August 29, 2016

1] ತಾವಗೇರಾ ಪೊಲೀಸ್ ಠಾಣೆ ಗುನ್ನೆ ನಂ. 101/2016 ಕಲಂ: 279, 304 (ಎ) ಐಪಿಸಿ ಮತ್ತು 187 ಐ.ಎಂ.ವಿ ಕಾಯ್ದೆ
ದಿನಾಂಕ 28-08-2016 ರಂದು ರಾತ್ರಿ 7-30 ಗಂಟೆಗೆ ಸರಕಾರಿ ಆಸ್ಪತ್ರೆ ತಾವರಗೇರಾದಿಂದ ಎಂ.ಎಲ್.ಸಿ ಮಾಹಿತಿ ಬಂದಿದ್ದು ಕೂಡಲೇ ಆಸ್ಪತ್ರೆ ಹೋಗಿ ಮೃತಳ ಗಂಡನಾದ ಶ್ರೀ ಹನುಮಂತಪ್ಪ ತಂದೆ ಬಾಲಪ್ಪ ಪೂಜಾರಿ ವಯ : 50 ವರ್ಷ, ಜಾತಿ : ಕುರುಬರು, ಉ : ಒಕ್ಕಲುತನ. ಸಾ : ಉಮಳಿ ರಾಂಪುರ. ತಾ : ಕುಷ್ಟಗಿ. ರವರ ಹೇಳಿಕೆ ಫಿರ್ಯಾಧಿಯನ್ನು  ಪಡೆದುಕೊಂಡಿದ್ದು ಸಾರಾಂಶವೆನೆಂದರೆ ಫಿರ್ಯಾಧಿಯ ಹೆಂಡತಿ ಈರಮ್ಮಳಿಗೆ ಮೈಯಲ್ಲಿ ಆರಾಮ ಇಲ್ಲದೇ ಇದ್ದುದರಿಂದ ಆಕೆಯನ್ನು ತೋರಿಸಿಕೊಂಡು ಬರಲು ತಾವರಗೇರಾಕ್ಕೆ ಫಿಯರ್ಾದಿದಾರರ ಮಗ ಬಸವರಾಜ ಈತನು ತಮ್ಮ ಹಿರೋ ಸ್ಪ್ಲೆಂಡರ್ ಪ್ರೋ ಮೋಟಾರು ಸೈಕಲ್ ನಂ: ಕೆ.ಎ-37/ವಾಯ್-7658 ನೇದ್ದನ್ನು ತೆಗೆದುಕೊಂಡು ಇಂದು ದಿನಾಂಕ: 28-08-2016 ರಂದು ಸಾಯಂಕಾಲ 7-10 ಗಂಟೆ ಮುದುಗಲ್ ತಾವರಗೇರಾ ಹೆದ್ದಾರಿಯಲ್ಲಿ ತಾವರಗೇರಾಕ್ಕೆ ರಸ್ತೆಯ ಎಡಗಡೆ ಹೋಗುತ್ತಿರುವಾಗ ವೀರಾಪುರ ಕ್ರಾಸ್ ಹತ್ತಿರ ತಾವರಗೇರಾ ಕಡೆಯಿಂದ ಎದುರಿಗೆ ಬಂದ ಯಾವುದೋ ಬಂದು ವಾಹನ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಫಿಯರ್ಾದಿದಾರರ ಮಗನ ಮೋಟಾರು ಸೈಕಲ್ಗೆ ಟಕ್ಕರು ಮಾಡಿ ಕೆಡವಿ ವಾಹನವನ್ನು ನಿಲ್ಲಿಸದೇ ಹಾಗೆಯೇ ಹೋಗಿದ್ದು, ನೋಡಲು ಫಿಯರ್ಾದಿದಾರರ ಮಗ ಬಸವರಾಜ ಈತನಿಗೆ ಬಲ ಕಪಾಳಕ್ಕೆ, ಗದ್ದಕ್ಕೆ ತೆರಚಿದ ಗಾಯಗಳಾಗಿದ್ದು ಅಲ್ಲದೇ ಆತನ ಕುತ್ತಿಗೆಯ ಮದ್ಯಭಾಗದಲ್ಲಿ ಮತ್ತು ಎದೆಯ ಎಡಭಾಗದಲ್ಲಿ ತೆರಚಿದ ಗಾಯ ಮತ್ತು ಭಾರಿ ಒಳಪೆಟ್ಟಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಫಿಯರ್ಾದಿದಾರರ ಹೆಂಡತಿ ಈರಮ್ಮ ಪೂಜಾರಿ ಈಕೆಗೂ ಕೂಡ ಬಲಗೈ ಮುಂಗೈಗೆ ತೆರಚಿದ ಗಾಯ ಮತ್ತು ತಲೆಯ ಬಲಭಾಗಕ್ಕೆ ಗುಮಟಿಯಾಗಿ ಭಾರಿ ಒಳಪೆಟ್ಟಾಗಿದ್ದು ಆಕೆಯನ್ನು 108 ಅಂಬುಲೆನ್ಸ್ ವಾಹನದಲ್ಲಿ ಇಲಾಜು ಕುರಿತು ಸರಕಾರಿ ಆಸ್ಪತ್ರೆ ತಾವರಗೇರಾಕ್ಕೆ ಸೇರಿಕೆ ಮಾಡಿದ್ದು ಇಲಾಜು ನೀಡುವಷ್ಟರಲ್ಲಿ ಆಕೆಯೂ ಕೂಡ ತನಗಾದ ಗಾಯಗಳಿಂದ ಮೃತಪಟ್ಟಿದ್ದು ಇರುತ್ತದೆ. ಕಾರಣ ಸದರಿ ವಾಹನ ಚಾಲಕನ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕಾಗಿ ವಿನಂತಿ ಅಂತಾ ಮುಂತಾಗಿ ಇದ್ದ ಹೇಳಿಕೆ ಮೇಲಿಂದ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ. 90/2016 ಕಲಂ: 279 338, 304(A) .ಪಿ.ಸಿ. ಮತ್ತು 187 .ಎಂ.ವಿ ಕಾಯ್ದೆ
ದಿನಾಂಕ 28-08-2016 ರಂದು ರಾತ್ರಿ 8-15 ಗಂಟೆಗೆ ಪಿರ್ಯಾದಿದಾರರು ತನಗೆ ಪರಿಚಯ ಇದ್ದ  ಪ್ರಭು ವಡ್ಡರ ಇತನ ಮೋಟಾರ ಸೈಕಲ ನಂ ಕೆಎ-23/ಯು-2523 ನೇದ್ದರ ಹಿಂದುಗಡೆ ಕುಳಿತು ಕೊಂಡು ಊರ ಕಡೆಗೆ ಹೊರಟಿದ್ದು ಸದರಿ ಮೋಟಾರ ಸೈಕಲನ್ನು ಪ್ರಭು ಈತನು ಯಲಬುರ್ಗಾ- ಚಿಕ್ಕೊಪ್ಪ ರಸ್ತೆ ಮೇಲೆ  ರಸ್ತೆಯ ಎಡಬದಿಯಲ್ಲಿ ಯಲಬುರ್ಗಾ ಸೀಮಾದಲ್ಲಿ ಬರುವ ಕೆಂಪು ಕೆರಯ ಹತ್ತಿರ ಹೊರಟಿದ್ದಾಗ ರಾತ್ರಿ 8-20 ಗಂಟೆ ಸುಮಾರಿಗೆ  ಚಿಕ್ಕೊಪ್ಪ ಕಡೆಯಿಂದ  ನಾಲ್ಕು ಚಕ್ರ ವಾಹನದ ಚಾಲಕನು ತಾನು ಚಲಾಯಿಸುತ್ತಿದ್ದ ವಾಹನವನ್ನು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಎದುಗಡೆಯಿಂದ ಟಕ್ಕರ ಕೊಟ್ಟು ಅಪಘಾತ ಪಡಿಸಿ ಹೋಗಿದ್ದು ಅದೆ. ನಂತರ ಗಾಯಾಳು ಪ್ರಭು ವಡ್ಡರ ಈತನನ್ನು  ಚಿಕಿತ್ಸೆ ಕುರಿತು ಒಂದು ಖಾಸಗಿ ವಾಹನದಲ್ಲಿ ಯಲಬುರ್ಗಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಸ್ಪತ್ರೆಯ ಹತ್ತಿರ ರಾತ್ರಿ 9 ಗಂಟೆಯ ಸುಮಾರಿಗೆ ಮೃತ ಪಟ್ಟಿದ್ದು ಇರುತ್ತದೆ. ನಂತರ ಮೃತ ದೇಹವನ್ನು ಯಲಬುರ್ಗಾ ಸರಕಾರಿ ಆಸ್ಪತ್ರೆಯಲ್ಲಿ ಹಾಕಿದ್ದು ಅದೆ. ಈ ಅಪಘಾತದಲ್ಲಿ ಪಿರ್ಯಾದಿದಾರನಿಗೆ ತಲೆಮೇಲೆ, ಬಲಗಾಲ ಮೋಣಕಾಲಿಗೆ, ಬಲಗಾಲ ಪಾದದ ಬೆರಳಿಗೆ ರಕ್ತಗಾಯ, ಬಲಗೈಮುಂಗೈಗೆ ಭಾರಿಸ್ವರೂಪದ ಒಳಪೆಟ್ಟು ಬಿದ್ದು ಬಾಹುಬಂದಂತಾಗಿರುತ್ತದೆ. ಸದರಿ ಅಪಘಾತ ಪಡಿಸಿದ ವಾಹನ ಹಾಗೂ ಅದರ ಚಾಲಕನ್ನು ನೋಡಿದರೆ ಪಿರ್ಯಾದಿರಾನು ಗುರ್ತಿಸುವದಾಗಿ ಹೇಳಿದ್ದು ಅದೆ.  ಸದರಿ ಅಪಘಾತ ಪಡಿಸಿದ  ನಾಲ್ಕು ಚಕ್ರ ವಾಹನ ಹಾಗೂ ಅದರ ಚಾಲಕನನ್ನು ಪತ್ತೆ ಮಾಡಿ ಕಾನೂನ ಪ್ರಕಾರ ಕ್ರಮ ಜರುಗಿಸಬೇಕು ವಿನಂತಿ ಅಂತಾ ಮುಂತಾಗಿ ಇದ್ದ ಪಿರ್ಯಾದಿಯ ಸಾರಾಂಶ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
3] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಯು.ಡಿ. ನಂ. 23/2016 ಕಲಂ: 174(ಸಿ) ಸಿ.ಆರ್.ಪಿ.ಸಿ.
ದಿನಾಂಕ. 28-08-2016 ರಂದು ಬೆಳಿಗ್ಗೆ 09-00 ಗಂಟೆ ಸುಮಾರಿಗೆ ಮುಷ್ಟೂರ ಗ್ರಾಮದ ಪಕ್ಕದಲ್ಲಿ ತುಂಗಭದ್ರಾ ನದಿಯಲ್ಲಿ  ಮೀನು ಹಿಡಿಯುವ ಮೀನುಗಾರರು ಫಿರ್ಯಾದಿದಾರರ ಹತ್ತಿರ ಬಂದು ತುಂಗಭದ್ರಾ ನದಿಯಲ್ಲಿ ಯಾರೋ ಒಬ್ಬರು ಅಪರಿಚಿತ ವ್ಯಕ್ತಿ ಮೃತ ಪಟ್ಟಿರುತ್ತಾರೆ ಎಂದು ತಿಳಿಸಿದ ಮೇರೆಗೆ ಫೀರ್ಯಾದಿದಾರರು ಹಾಗೂ ಊರಿನ ಹಿರಿಯರು ಹೋಗಿ ನೋಡಲು ತುಂಗಭದ್ರಾ ನದಿಯಲ್ಲಿ ಸುಮಾರು 55 ರಿಂದ 60 ವರ್ಷದ ಅಪರಿಚಿತ ವ್ಯಕ್ತಿ ಇದ್ದು, ಮೃತ ದೇಹವು ತುಂಗಭದ್ರಾ ನದಿಯ ನೀರಿನಲ್ಲಿ ಕಂಡು ಬರುತ್ತದೆ. ಮೃತ ದೇಹವು ಬೋರಲಾಗಿದ್ದು ಮೈಮೇಲೆ ಒಂದು ಕೆಂಪು ಚಡ್ಡಿ ಮತ್ತು ಒಂದು ನೀಲಿ ಕಲರಿನ ಚಕ್ಸ ಲುಂಗಿ ಇರುತ್ತದೆ. ಸದರ ಮೃತ ದೇಹವು ನೋಡಲಾಗಿ ತಾಜಾ ಸ್ಥಿತಿಯಲ್ಲಿದ್ದು ನಿನ್ನೆ ರಾತ್ರಿ  ವೇಳೆಗೆ ತುಂಗಭದ್ರಾ ನದಿಯಲ್ಲಿ ಯಾವುದೋ ಕಾರಣಕ್ಕೆ ಬಿದ್ದು ಮೃತ ಪಟ್ಟಂತೆ ಕಂಡು ಬರುತ್ತಿದ್ದು, ಮೃತನ ಸಾವಿನಲ್ಲಿ ಸಂಶಯ ಕಂಡುಬರುತ್ತದೆ. ಅಂತಾ ಮುಂತಾಗಿದ್ದ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ಯು.ಡಿ.ಆರ್. ನಂ. 23/2016 ಕಲಂ. 174 (ಸಿ) ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ.
4] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 193/2016 ಕಲಂ. 447,341 323,  504, 506 R/w 34  IPC.

ದಿನಾಂಕ:-28-08-2016 ರಂದು ಮದ್ಯಾಹ್ನ 1-20 ಗಂಟೆಗೆ ಕಾರಟಗಿ ಸರಕಾರಿ ಆಸ್ಪತ್ರೆಯಿಂದ ಎಮ್.ಎಲ್ .ಸಿ ಮಾಹಿತಿ ಬಂದಿದ್ದು ಕೂಡಲೇ ಆಸ್ಪತ್ರೆಗೆ ಬೇಟಿ ನೀಡಿದ್ದು ಆಸ್ಪತ್ರೆಯಲ್ಲಿ ಜಗಳದಲ್ಲಿ ದುಖಃಪಾತಗೊಂಡು ಚಿಕಿತ್ಸೆ ಕುರಿತು ದಾಖಲಾಗಿದ್ದ ಕೆ.ಜಗದೀಶ ತಂದಿ ಹನುಮಂತಪ್ಪ ಕಟಂಬ್ಲಿ ವಯಾ-32 ವರ್ಷ ಜಾ. ಲಿಂಗಾಯತ ಉ- ಒಕ್ಕಲುತನ ಸಾ. ಯರಡೋಣ ತಾ. ಗಂಗಾವತಿ ರವರಿಗೆ ವಿಚಾರಿಸಿದ್ದು ಸದ್ರಿವಯರು ಒಂದು ಲಿಖಿತ ಪಿರ್ಯಾದಿಯನ್ನು ಬರೆಯಿಸಿಕೊಟ್ಟಿದ್ದು ಸಾರಾಂಶವೆನಂದರೆ, ನನ್ನ ತಂದೆ ತಾಯಿಗೆಳಿಗೆ 6 ಜನ ಗಂಡು ಮಕ್ಕಳು ಇದ್ದು ಎಲ್ಲರೂ ಕುಟುಂಬ ಸಮೇತ ಬೇರೆ ಬೇರೆಯಾಗಿ ವಾಸಮಾಡುತ್ತಿದ್ದು ಉಪಜೀವನ ಸಲುವಾಗಿ ಎಲ್ಲರಿಗೂ ಜಮೀನನ್ನು ಕೊಟ್ಟಿದ್ದು ಇರುತ್ತದೆ ಪಿರ್ಯಾದಿದಾರು ಮತ್ತು ಅವರ ತಾಯಿ, ಅಕ್ಕಗಂಗಮ್ಮ ಮತ್ತು ತಮ್ಮ ಮಂಜುನಾಥ ಇವರು ಒಂದೆ ಮನೆಯಲ್ಲಿ ವಾಸವಾಗಿದ್ದು ಪಿರ್ಯಾದಿದಾರರು ತಮ್ಮ ತಾಯಿಯ ಹೆಸರಿನಲ್ಲಿರುವ ಭೂವಿ ಸರ್ವೆ ನಂ 341 ರಲ್ಲಿರುವ 6.2 ಎಕರೆ ಜಮೀನನ್ನು ಸಾಗುವಳಿ ಮಾಡುತ್ತಿದ್ದು ಸದ್ರಿ ಜಮೀನಿಗೆ ನೀರು ಬರುವ ಸಲುವಾಗಿ ಮಾಡಿಕೊಂಡಿದ್ದ ಕಾಲೂವೆ ಸಲುವಾಗಿ ಪಿರ್ಯಾದಿದಾರರು ಅಣ್ಣಂದಿರಾದ 1) ಮುರಡಪ್ಪ ತಂದಿ ಹನುಮಂತಪ್ಪ 2) ಶರಣಪ್ಪ ತಂದಿ ಹನುಮಂತಪ್ಪ 3) ಶೇಖರಪ್ಪ ತಂದಿ ಹನುಮಂತಪ್ಪ 4) ಮಲ್ಲಿಕಾರ್ಜುನ ತಂದಿ ಹನುಮಂತಪ್ಪ ರವರು ಕೂಡಿಕೊಂಡು ದಿನಾಂಕ:-28-08-2016 ರಂದು ಬೆಳಿಗ್ಗೆ 8-30 ಗಂಟೆಯ ಸುಮಾರಿಗೆ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಪಿರ್ಯಾದಿದಾರರಿಗೆ ತಡೆದು ನಿಲ್ಲಿಸಿ ಅವಚ್ಯವಾಗಿ ಬೈದು ಕೈಯಿಂದ ಬಡಿದು, ಕಲ್ಲಿನಿಂದ ಗುದ್ದಿ, ಸಲುಕೆಯ ಕಾವಿನಿಂದ ಹೊಡೆಬಡೆ ಮಾಡಿ ಜೀವ ಬೇದರಿಕೆ ಹಾಕಿರುತ್ತಾರೆ ಅಂತಾ ಮುಂತಾಗಿ ನೀಡಿದ ದೂರನ್ನು ಸ್ವೀಕರಿಸಿಕೊಂಡು ವಾಪಾಸ ಠಾಣೆಗೆ ಮದ್ಯಾಹ್ನ 3-15 ಗಂಟೆಗೆ ಬಂದು ದೂರಿನ ಸಾರಾಂಶದ ಮೇಲಿಂದ ಠಾಣೆಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008