Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Wednesday, August 31, 2016

1] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 195/2016 ಕಲಂ: 78(3) Karnataka Police Act:.
ದಿನಾಂಕ 30-08-2016 ರಂದು 7-00 ಗಂಟೆಯ ಸುಮಾರಿಗೆ ಸಿದ್ದಾಪೂರ ಗ್ರಾಮದ ಹನುಮಂತ ದೇವರ ಗುಡಿಯ ಮುಂದೆ ಸಾರ್ವಜನಿಕರ ಸ್ಥಳದಲ್ಲಿ ಮಟಕಾ ಜೂಜಾಟ ತೊಡಗಿದ್ದ ಆರೋಪಿತರ ಮೇಲೆ ಪಿ.ಎಸ್.ಐ ಸಾಹೇಬರು ಮತ್ತು ಸಿಬ್ಬಂದಿವರು ಪಂಚರ ಸಮಕ್ಷದಲ್ಲಿ ದಾಳಿ ಮಾಡಿದಾಗ ಆರೋಪಿ 1 ಬಸವನಗೌಡ ತಂದಿ ನಂದಪ್ಪ ಹೊಟೇಲ್ ವಯಾ-50ವರ್ಷ ಜಾ.ಲಿಂಗಾಯತ ಸಾ. ಸಿದ್ದಾಪೂರ ತಾ. ಗಂಗಾವತಿ  2 ) ಬಸವರಾಜ ತಂದಿ ಶಂಕರಪ್ಪ ಬೇರಗಿ ವಯಾ-35 ವರ್ಷ ಜಾ. ಲಿಂಗಾಯತ ಸಾ. ಸಿದ್ದಾಪೂರ ತಾ. ಗಂಗಾವತಿ ಇತನು ಸಿಕ್ಕಿಬಿದ್ದಿದ್ದು ಸಿಕ್ಕಿಬಿದ್ದ ಆರೋಪಿತನ ಕಡೆಯಿಂದ ನಗದು ಹಣ ರೂ. 750=00 ಗಳು ಹಾಗೂ ಮಟ್ಕಾ ಸಾಮಾಗ್ರಿಗಳು ಸಿಕ್ಕಿದ್ದು ಮಟ್ಕಾ ಪಟ್ಟಿ ಮತ್ತು ಹಣವನ್ನು ಆರೋಪಿ ನಂ 3  ಈಶಪ್ಪ ತಂದಿ ರಾಮಪ್ಪ ಆರ್ಯಾರ ಸಾ. ಸಿದ್ದಾಪೂರ ಇತನಿಗೆ ಕೊಡುವುದಾಗಿ ತಿಳಿಸಿರುತ್ತಾರೆ ಅಂತಾ ಮುಂತಾಗಿ ಠಾಣೆಗೆ ಬಂದು ನೀಡಿದ ವರದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗಕೊಂಡೆನು.
2] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 194/2016 ಕಲಂ: 279, 338 ಐ.ಪಿ.ಸಿ:
ಪಿರ್ಯಾದಿದಾರರು ಮತ್ತು ಅವರ ಸಂಬಂದಿಕ ಶರಣಬಸವ ಇಬ್ಬರು ಇಂದು ದಿನಾಂಕ:-30-08-2016 ರಂದು ಬೆಳಿಗ್ಗೆ 11-00 ಗಂಟೆಯ ಸುಮಾರಿಗೆ ಮಾತನಾಡುತ್ತಾ ಕಾರಟಗಿ-ಗಂಗಾವತಿ ರಸ್ತೆಯ ಪಕ್ಕದಲ್ಲಿರುವ ಮಲ್ಲಿಗೆ ಡಾಬಾದ ಹತ್ತಿರ ನಿಂತುಕೊಂಡಿದ್ದಾಗ್ಗೆ ಕೆ.ಎಸ್.ಆರ್.ಟಿ.ಸಿ ಬಸ್ ನಂ ಕೆ.-35ಎಪ್-195 ನೆದ್ದರ ಚಾಲಕ ಪರ್ವತಗೌಡನು ತನ್ನ ಬಸ್ ನ್ನು ಅತೀ ವೇಗ ಅಲಕ್ಷತನದಿಂದ ಚಲಾಯಿಸಿಕೊಂಡು ಕಾರಟಗಿ ಕಡೆಯಿಂದ ಬಂದು ಗಂಗಾವತಿ ಕಡೆಯಿಂದ ಮೋಟಾರ್ ಸೈಕಲ್ ನಂ ಕೆ.-37ಇಎ-4197 ನೆದ್ದನ್ನು ಚಲಾಯಿಸಿಕೊಂಡು ತನ್ನ ಸೈಡಿನಲ್ಲಿ ಬರುತ್ತಿದ್ದ ಬಸವರಾಜರೆಡ್ಡಿ ತಂದಿ ಮಲ್ಲಿರ್ಜುನರೆಡ್ಡಿ ಸಾ. ಕೊಟ್ನೆಕಲ್ ಈತನಿಗೆ ಟಕ್ಕರ ಕೊಟ್ಟು ಅಪಘಾತಪಡಿಸಿದ್ದರಿಂದ ಬಸವರಾಜರೆಡ್ಡಿ ಈತನಿಗೆ ಬಲಗಾಲಿಗೆ ಮೂಳೆಮುರಿತವಾದ, ಬಲಕಿವಿಯ ಹತ್ತಿರ ಹರಿತವಾದ ಗಂಭೀರ ಗಾಯ ಹಾಗು ಇತರೆ ಕಡೆಗಳಲ್ಲಿ ತೆರಚಿದಗಾಯವಾಗಿದ್ದರಿಂದ ಚಿಕಿತ್ಸೆ ಕುರಿತು 108 ವಾಹನದಲ್ಲಿ ಕಾರಟಗಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿದ್ದು ಇರುತ್ತದೆ. ಮೇಲಿಂದ ಗುನ್ನೆ ದಾಖಲುಮಾಡಿಕೊಂಡಿದ್ದು ಇರುತ್ತದೆ.
3] ಹನಮಸಾಗರ ಪೊಲೀಸ್ ಠಾಣೆ ಗುನ್ನೆ ನಂ: 73/2016 ಕಲಂ: 143, 147, 148, 323, 324, 354, 354[ಎ], 504 506 ಸಹಿತ 149 ಐ.ಪಿ.ಸಿ ಕಾಯ್ದೆ:

ದಿನಾಂಕ: 30-08-2016 ರಂದು 22-30 ಗಂಟೆಗೆ ಫಿರ್ಯಾದಿದಾರರಾದ ಶ್ರೀ ದೊಡ್ಡಯ್ಯ ತಂದೆ ಶಿವರುದ್ರಯ್ಯ ಸೊಪ್ಪಿಮಠ ಸಾ: ಹೂಲಗೇರಿ ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿಯನ್ನು ಸಲ್ಲಿಸಿದ್ದು ಸಾರಾಂಶವೇನೆಂದರೆ, ಫಿರ್ಯಾದಿ ಹಾಗೂ ಆರೋಪಿತರ ಹೊಲ ಹೂಲಗೇರಿ ಸೀಮಾದಲ್ಲಿ ಹನಮಸಾಗರ ದಾರಿಯಲ್ಲಿ ಅಕ್ಕಪಕ್ಕದಲ್ಲಿದ್ದು, ಆರೋಪಿತರು ಒಡ್ಡು ಹರೆಗಡೆದು ಫಿರ್ಯಾದಿದಾರರ ಹೊಲದಲ್ಲಿ ನೀರು ಬಿಟ್ಟಿದ್ದರಿಂದ ಒಬ್ಬರಿಗೊಬ್ಬರು ಸಿಟ್ಟಾಗಿದ್ದು, ಈ ಕುರಿತು ಇಂದು ದಿನಾಂಕ: 30-08-2016 ರಂದು ರಾತ್ರಿ 21-15 ಗಂಟೆಗೆ ಆರೋಪಿತರೆಲ್ಲರೂ ಅಕ್ರಮ ಕೂಟ ರಚಿಸಿಕೊಂಡು ಫಿರ್ಯಾದಿಯ ಮನೆಯ ಹತ್ತಿರ ಬಂದು ಫಿರ್ಯಾದಿ ಮನೆಯವರು ಪಡಸಾಲಿ ಕಟ್ಟೆಯ ಮೇಲೆ ಮಲಗಿದ್ದು, ಫಿರ್ಯಾದಿಯನ್ನು ಬಸಪ್ಪ ಮತ್ತು ಮಹಾಂತೇಶ ಇವರು ಹಿಡಿದು ಎಳೆದು ಕೆಳಗೆ ಕೆಡವಿ ಅವಾಚ್ಯ ಬೈದಾಡಿ ಹಾಗೂ ಶರಣಪ್ಪ ಮತ್ತು ಸಂಗಪ್ಪ ಫಿರ್ಯಾದಿಯ ಹೆಂಡತಿಯ ಸೀರೆ ಹಿಡಿದು ಎಳೆದು ಅವಮಾನಿಸಿದ್ದು, ಹಾಗೂ ಫಿರ್ಯಾದಿಯ ಮಗ ಶ್ರೀಧರನಿಗೆ ಕಸ್ತೂರೆವ್ವ ಕೈಯಿಂದ ಹೊಡೆಬಡೆ ಮಾಡಿದ್ದು, ದೊಡ್ಡಸಂಗಪ್ಪ ಈತನು ಹಾಕರಿಲೇ ಅವರನ್ನೇನು ಕೇಳತೀರಿ ಅಂತಾ ಜೀವದ ಬೆದರಿಕೆ ಹಾಕಿದ್ದು, ಮತ್ತೆ ಬಸಪ್ಪ ಈತನು ಕಟ್ಟಿಗೆಯಿಂದ ಫಿರ್ಯಾದಿಯ ತಲೆಗೆ ಹೊಡೆದು ಹಾಗೂ ಶರಣಪ್ಪ ಈತನು ಕಟ್ಟಿಗೆಯಿಂದ ಫಿರ್ಯಾದಿಯ ಎಡರಟ್ಟೆಗೆ ಹೊಡೆದು, ಹಾಗೂ ಮಹಾಂತೇಶ ಈತನು ಫಿರ್ಯಾದಿಯ ಬಲರಟ್ಟೆಗೆ ಹೊಡೆದು ರಕ್ತಗಾಯ ಹಾಗೂ ಮುಖಪೆಟ್ಟು ಮಾಡಿದ್ದು, ಮತ್ತೆ ಶರಣಪ್ಪ ಈತನು ಕಟ್ಟಿಗೆಯಿಂದ ಫಿರ್ಯಾದಿಯ ಹೆಂಡತಿ ಪರಿಮಳ ಈಕೆಗೆ ತಲೆಗೆ ಹೊಡೆದು ರಕ್ತಗಾಯ ಮಾಡಿ ಫಿರ್ಯಾದಿಯ ತಂದೆ ಒದ್ದು ದುಖಃಪಾತಗೊಳಿಸಿದ್ದು ಇರುತ್ತದೆ. ಕಾರಣ ಆರೋಪಿತರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಫಿರ್ಯಾದಿ ನೀಡಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ. 

0 comments:

 
Will Smith Visitors
Since 01/02/2008