1] ಕೊಪ್ಪಳ
ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 183/2016 ಕಲಂ: 279,
304(ಎ) ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:.
ದಿ:02-09-2016 ರಂದು ಸಂಜೆ 6-45 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಕೃಷ್ಣ
ಭಂಡಾರಿ. ಸಿ.ಪಿ.ಸಿ-246, ಮುನಿರಾಬಾದ ಪೊಲೀಸ್ ಠಾಣೆ, ಫಿರ್ಯಾದಿ ದಿ:02-09-2016 ರಂದು ಸಾಯಂಕಾಲ 4-45 ಗಂಟೆಯ ಸುಮಾರಿಗೆ ಫಿರ್ಯಾದಿದಾರರು ತಮ್ಮ ಸ್ಕೂಟಿ ಮೋಟಾರ ಸೈಕಲ್
ದಲ್ಲಿ ತನ್ನ ಸಹೋದ್ಯೋಗಿ ಮಹ್ಮದ್ ರಫೀ ಸಿಪಿಸಿ-96 ಇವರಿಗೆ ಸಂಗಡ ಕರೆದುಕೊಂಡು ನಾಳೆ ದಿ:03-09-16 ರಂದು ಕೊಪ್ಪಳದಲ್ಲಿ ನಡೆಯುವ ಚತುಷ್ಪತ ರಸ್ತೆಯ [ಎನ್.ಹೆಚ್] ಶಂಕು ಸ್ಥಾಪನೆ ಕಾರ್ಯಕ್ರಮದ
ಬಂದೋಬಸ್ತ ಕರ್ತವ್ಯದ ನಿಮಿತ್ತ ಕೊಪ್ಪಳಕ್ಕೆ ಬರುತ್ತಿದ್ದಾಗ ಹೊಸಪೇಟೆ-ಕೊಪ್ಪಳ ಎನ್.ಹೆಚ್-63 ರಸ್ತೆಯ ಬಸಾಪೂರ ಕ್ರಾಸ್ ಹತ್ತಿರ ತನ್ನ ಮುಂದೆ ಮುಂದೆ ಮುನಿರಾಬಾದ
ಠಾಣೆಯ ಗುರುಲಿಂಗಪ್ಪ. ಸಿ.ಹೆಚ್.ಸಿ-54 ರವರು ತನ್ನ ಮೋಟಾರ ಸೈಕಲ್ ನಂ: ಕೆಎ-37/ಬಿ-1690 ನೇದ್ದನ್ನು ಓಡಿಸಿಕೊಂಡು ಕೊಪ್ಪಳ ಕಡೆಗೆ ಬಂದೋಬಸ್ತ ಕರ್ತವ್ಯಕ್ಕೆ ಹೊರಟಿದ್ದಾಗ, ಅದೇವೇಳೆಗೆ ಎದುರುಗಡೆ ಕೊಪ್ಪಳ ಕಡೆಯಿಂದ ಲಾರಿ ನಂ: ಕೆಎ-37/ಎ-6642 ನೇದ್ದರ ಚಾಲಕನು ತನ್ನ ವಾಹನವನ್ನು ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದಾ ಮಾನವ ಜೀವಕ್ಕೆ
ಅಪಾಯವಾಗುವ ರೀತಿಯಲ್ಲಿ ಓಡಿಸಿಕೊಂಡು ಬಂದವನೇ ಗುರುಲಿಂಗಪ್ಪ ಇವರ ಮೋಟಾರ ಸೈಕಲ್ ಗೆ ಟಕ್ಕರ
ಕೊಟ್ಟು ಅಪಘಾತ ಮಾಡಿ ಚಾಲಕನು ತನ್ನ ವಾಹನ ನಿಲ್ಲಿಸದೇ ಗಿಣಿಗೇರಿ ಕಡೆಗೆ ಹೋಗಿದ್ದು ಚಾಲಕನಿಗೆ
ನೋಡಿದಲ್ಲಿ ಗುರುತಿಸುತ್ತೇನೆ. ಸದರಿ ಗಾಯಾಳು ಗುರುಲಿಂಗಪ್ಪ ಇವರ ಹಿಂದೆ ಭಾರಿ ಪೆಟ್ಟಾಗಿ ರಕ್ತ ಬಂದಿದ್ದು, ಹಣೆಗೆ, ಮೂಗಿನ ಮೇಲೆ ತೆರೆಚಿದ ರಕ್ತಗಾಯವಾಗಿದ್ದು, ಎಡಗೈಗೆ ಭಾರಿ ಪೆಟ್ಟಾಗಿ ಬಾವು ಬಂದಿದೆ. ಅಲ್ಲದೇ ಮರ್ಮಾಂಗಕ್ಕೆ ರಕ್ತಗಾಯವಾಗಿದ್ದು
ಇರುತ್ತದೆ. ಕೊಪ್ಪಳದ ಜಿಲ್ಲಾ
ಆಸ್ಪತ್ರೆಗೆ ಕರೆತಂದು ವೈದ್ಯರಲ್ಲಿ ತೋರಿಸಿದಾಗ ಪರೀಕ್ಷಿಸಿದ ವೈದ್ಯರು ಬ್ರಾಟಡೆಡ್ ಆಗಿರುವ
ಬಗ್ಗೆ ತಿಳಿಸಿದ್ದು ಇರುತ್ತದೆ. ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ
ನಂ. 190/2016
ಕಲಂ: 379 ಐ.ಪಿ.ಸಿ:.
ದಿನಾಂಕ 02-09-2016 ರಂದು ಸಾಯಂಕಾಲ 6-00 ಗಂಟೆಗೆ ಶ್ರೀ ಪ್ರದೀಪ
ಕುಮಾರ ಪಾಲ್ ತಂದೆ ಮಿಶ್ರಿ ಲಾಲ್ ಪಾಲ್ ಉ: ಅಸಿಸ್ಟೆಂಟ್ ಮ್ಯಾನೇಜರ್ ಸ್ಟೇಟ್ ಬ್ಯಾಂಕ್ ಆಫ್
ಮೈಸೂರು ಗಂಗಾವತಿ ಶಾಖೆ ಸಾ: ಜಯನಗರ, ಫಿರ್ಯಾದಿ ನೀಡಿದ್ದು, ಗಂಗಾವತಿ ನಗರದ ಕೊಪ್ಪಳ ರಸ್ತೆಯಲ್ಲಿ
ಮಲ್ಲೇಶ್ವರ ಕಾಂಪ್ಲೆಕ್ಸದಲ್ಲಿ ಸ್ಟೇಟ್ ಬ್ಯಾಂಕ್ ಮೈಸೂರು ಶಾಖೆ ಇದ್ದು, ಸದರಿ ಶಾಖೆ ಕಟ್ಟಡದ ಕೆಳಭಾಗದ
ಎ.ಟಿ.ಎಂ. ಕೌಂಟರ್, ದಿನಾಂಕ 17-08-2016 ರಂದು 11-30 ಎ.ಎಂ.ಕ್ಕೆ ನಗದು ಹಣ ರೂ. 32 ಲಕ್ಷ ರೂಪಾಯಿಗಳನ್ನು
ಎ.ಟಿ.ಎಂ. ಕೌಂಟರದಲ್ಲಿ ಬ್ಯಾಂಕ್ ಸಿಬ್ಬಂದಿಯವರು ಹಾಕಿದ್ದು, ಎ.ಟಿ.ಎಂ. ಕೌಂಟರದಲ್ಲಿ ಒಟ್ಟು ರೂ.
32,55,100-00 ಇದ್ದು, ದಿನಾಂಕ 17-08-2016 ರಂದು 11-30 ಎ.ಎಂ. ದಿಂದ ದಿನಾಂಕ 22-08-2016 ರಂದು
10-20 ಎ.ಎಂ.ದ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಸದರಿ ಎ.ಟಿ.ಎಂ. ಕೌಂಟರದಲ್ಲಿ ಹಾಕಿರುವ ಹಣದಲ್ಲಿ
ಒಟ್ಟು ರೂ. 10,09,000-00 ಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಪ್ರಕರಣ ದಾಖಲು ಮಾಡಿಕೊಂಡು
ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment