Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Monday, October 3, 2016

1] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 258/2016 ಕಲಂ: 279, 337, 338 ಐ.ಪಿ.ಸಿ:.
ದಿನಾಂಕ: 02-10-2016 ರಂದು ಮುಂಜಾನೆ 10-00 ಗಂಟೆಯ ಸುಮಾರಿಗೆ ಫಿರ್ಯಾದಿದಾರರಾದ ಸಂಗಪ್ಪ ತಂದೆ ಶೇಷಪ್ಪ ಭಾವಿಕಟ್ಟಿ ತಮ್ಮನಾದ ಮಾರುತಿ ವಯಾ: 32 ವರ್ಷ  ಮತ್ತು ಆತನ ಸ್ನೇಹಿತನಾದ ರವಿಕುಮಾರ ತಂದೆ ದೇವೆಂದ್ರಪ್ಪ ಭಜೇಂತ್ರಿ ವಯಾ:30 ವರ್ಷ ಜಾತಿ: ಬಜೇಂತ್ರಿ ಉ: ಕೂಲಿ ಕೆಲಸ ಸಾ: ವಣಗೇರಿ ಇವರಿಬ್ಬರೂ ರವಿಕುಮಾರನ ಮೋ.ಸೈ ನಂ: ಕೆ.ಎ-37/ಯು-9702 ನೇದ್ದರಲ್ಲಿ ಸಂತೆ ಮಾಡಿಕೊಂಡು ಬರುತ್ತೇವೆ ಅಂತಾ ಹೇಳಿ ನಮ್ಮ ತಮ್ಮನಾದ ಮಾರುತಿ ಹೇಳಿ ಇಬ್ಬರೂ ಕೂಡಿ ಕುಷ್ಟಗಿ ಕಡೆಗೆ ಹೋದರು. ನಂತರ ಮದ್ಯಾಹ್ನ 3-00 ಗಂಟೆಯ ಸುಮಾರಿಗೆ ಸಾಯಿ ಸ್ಟೀಲ್ ಪ್ಯಾಕ್ಟರಿಯ ಹತ್ತಿರ ನಿಮ್ಮ ತಮ್ಮ ಮಾರುತಿ ಮತ್ತು ರವಿಕುಮಾರ ಇಬ್ಬರೂ  ಸ್ಕೀಡ್ ಮಾಡಿಕೊಂಡು ಬಿದ್ದು ಅಪಘಾತವಾಗಿದೆ ಅಂತಾ ಮಾಹಿತಿ ತಿಳಿದು ಕೂಡಲೇ ನಾನು ಸ್ಥಳಕ್ಕೆ ಹೋಗಿ ಮಾರುತಿ ಇತನನ್ನು ನೋಡಲು ಇತನ ತಲೆಯ ಹಿಂದುಗಡೆ ಭಾರಿ ರಕ್ತ ಗಾಯವಾಗಿದ್ದು, ರವಿಕುಮಾರ ಇತನಿಗೂ ಸಹ ತಲೆಯ ಹಿಂದುಗಡೆ ರಕ್ತ ಗಾಯವಾಗಿ ಎರಡು ಕೈಗಳ ಬೆರಳುಗಳಿಗೆ ತೆರಚಿದ ಗಾಯಗಳಾಗಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
2] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ: 109/2016 ಕಲಂ: 87 Karnataka Police Act.

ದಿನಾಂಕ:02-10-2016 ರಂದು 2-15 ಪಿಎಂಕ್ಕೆ ಚಿಕೇನಕೊಪ್ಪ ಗ್ರಾಮದ ಸೀಮಾದ ಹಳ್ಳದ ದಂಡೆಯಲ್ಲಿ ಇಸ್ಪೀಟ್ ಜೂಜಾಟದ ನಡೆದ ಮಾಹಿತಿ ಬಂದ ಪ್ರಕಾರ ಶ್ರೀ. ವಿಶ್ವನಾಥ ಹಿರೇಗೌಡರ ಪಿ.ಎಸ್.ಐ ಇಬ್ಬರೂ ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ 3-15 ಪಿಎಂಕ್ಕೆ ಚಿಕೇನಕೊಪ್ಪ ಗ್ರಾಮದ ಹಳ್ಳದ ದಂಡೆಯಲ್ಲಿ ಸರಕಾರಿ ಜಾಲಿ ಗಿಡದ ಕೆಳಗಿನ ಸಾರ್ವಜನಿಕ ಸ್ಥಳದಲ್ಲಿ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ದಾಳಿ ಮಾಡಿ, ಸದರಿ ಆರೋಪಿತರನ್ನು ವಶಕ್ಕೆ ಪಡೆದುಕೊಂಡಿದ್ದು, ಸಿಕ್ಕಿಬಿದ್ದವರಿಂದ ಹಾಗೂ ಜೂಜಾಟದ ಕಣದಿಂದ ಒಂದು ಟಾವೆಲ್, 52 ಇಸ್ಪೀಟ್ ಎಲೆಗಳು ಹಾಗೂ ಜೂಜಾಟದ ನಗದು ಹಣ 3800/-ರೂ.ಗಳನ್ನು ಜಪ್ತ ಪಡಿಸಿಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ

0 comments:

 
Will Smith Visitors
Since 01/02/2008