Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Monday, October 17, 2016

1] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 295/2016 ಕಲಂ: 87 Karnataka Police Act.
ದಿನಾಂಕ:- 16-10-2016 ರಂದು ಸಂಜೆ  ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಮುಷ್ಟೂರು ಡಗ್ಗಿ ಗ್ರಾಮದ ಮಾರೆಮ್ಮನ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಂದಾರ ಬಾಹರ್ ಎಂಬ ಅದೃಷ್ಟದ ಇಸ್ಪೀಟ್ ಜೂಜಾಟದ ನಡೆಯುತ್ತಿದೆ ಅಂತಾ ಖಚಿತವಾದ ಭಾತ್ಮಿ ಬಂದ ಮೇರೆಗೆ ಶ್ರೀ ಪ್ರಕಾಶ ಮಾಳಿ, ಪಿ.ಎಸ್.ಐ ಮತ್ತು  ಸಿಬ್ಬಂದಿಯವರಾದ ಸಿಪಿಸಿ- 429, 120, 358, 363, 43, 323, 386, 180 .ಪಿ.ಸಿ. 77 ಇವರನ್ನು ಮತ್ತು ಇಬ್ಬರು ಪಂಚರನ್ನು ಕರೆದುಕೊಂಡು ನಮಗೆ ಮಾಹಿತಿ ಇದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿ ನಿಂತು ನೋಡಲು ಮಾರೆಮ್ಮನ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಜನರು ದುಂಡಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ್ ಎಲೆಗಳಿಂದ ಅಂದರ್ ಬಹಾರ್ ಎನ್ನುವ ಕಾನೂನು ಬಾಹಿರವಾದ ಅದೃಷ್ಠದ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದು ಕಂಡುಬಂದಿದ್ದು, ಕೂಡಲೇ ಅವರ ಮೇಲೆ ದಾಳಿ ಮಾಡಲಾಗಿ ಜೂಜಾಟದಲ್ಲಿ ತೊಡಗಿದ್ದ 7 ಜನರು ಸಿಕ್ಕಿಬಿದ್ದಿದ್ದು. ಸಿಕ್ಕವರಿಂದ ಹಾಗೂ ಸ್ಥಳದಿಂದ ಜೂಜಾಟದ ನಗದು ಹಣ ರೂ. 3,150-00 ಗಳು, 52 ಇಸ್ಪೀಟ್ ಎಲೆಗಳು, ಹಾಗೂ ನೆಲದ ಮೇಲೆ ಹಾಸಿದ್ದ ಒಂದು ಪ್ಲಾಸ್ಟಿಕ್ ಬರಕಾ ಸಿಕ್ಕಿದ್ದು, ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 171/2016 ಕಲಂ: 87 Karnataka Police Act.
ದಿನಾಂಕ: 16-10-2016 ರಂದು ಸಂಜೆ 5-00 ಗಂಟೆಯ ಸುಮಾರಿಗೆ ನಗರ ಹುಲಿಕೇರಿ ರಸ್ತೆಯ ವೀರಭದ್ರೇಶ್ವರ ಗುಡಿ ಹತ್ತಿರ ಬಯಲು ಜಾಗೆಯ ಸಾರ್ವಜನಿಕ ಸ್ಥಳದಲ್ಲಿ  11 ಜನ ಆರೋಪಿತರು ಗುಂಪಾಗಿ ಕುಳಿತುಕೊಂಡು ಅಂದರ-ಬಾಹರ್ ಇಸ್ಪೀಟ ಜೂಜಾಟದಲ್ಲಿ ತೊಡಗಿರುವಾಗ ಶ್ರೀ ಸತೀಶ.ಎಸ್.ಪಾಟೀಲ್ ಪಿ.ಐ ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿದ್ದು, ಓರ್ವ ವ್ಯಕ್ತಿ ಪರಾರಿಯಾಗಿದ್ದು, ಉಳಿದ 10 ಜನರು ಸಿಕ್ಕಿದ್ದು,  ಸಿಕ್ಕ ಆರೋಪಿತರಿಂದ  9100=00 ನಗದು ಹಣ ಹಾಗೂ 52 ಇಸ್ಪೀಟ ಎಲೆಗಳು ಮತ್ತು ಒಂದು ಹಾಳಿ ಚೀಲವನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು ಅದೆ.
3] ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ: 95/2016 ಕಲಂ: 279, 337, 338 ಐ.ಪಿ.ಸಿ:.

ದಿನಾಂಕ: 16-10-2016 ರಂದು ಸಾಯಂಕಾಲ 18-30 ಗಂಟೆಗೆ ಫಿರ್ಯಾದಿ ಅನ್ವರ ಚಿನ್ನೂರ ಸಾ: ಗಜೇಂದ್ರಗಡ ರವರು ತನ್ನ ಮೋಟಾರ ಸೈಕಲ್ ನಂ: ಕೆ.ಎ-26 ಎಸ್-7215 ನೇದ್ದರ ಮೇಲೆ ಮುದಗಲ್ಲಿದ ಇಲಕಲ್ ಮಾರ್ಗಾವಗಿ ಹನಮಸಾಗರಕ್ಕೆ ಬಂದು ಹನಮಸಾಗರದಿಂದ ಗಜೇಂದ್ರಗಡಕ್ಕೆ ಯಲಬುಣಚಿ ಕ್ರಾಸ್ ಇನ್ನು ಅರ್ದ ಕಿ.ಮಿ. ಇರುವಾಗ ಗಜೇಂದ್ರಗಡ ಕಡೆಯಿಂದ ಮೋಟಾರ ಸೈಕಲ್ ನಂ: ಕೆ.ಎ-37 ಯು-7122 ನೇದ್ದರ ತನ್ನ ಹಿಂದೆ ಇಬ್ಬರನ್ನು ಕೂಡಿಸಿಕೊಂಡು ಬಂದು ರಸ್ತೆಯ ಎಡಬದಿಗೆ ಹೊರಟ ಫಿರ್ಯಾದಿಗೆ ಹಾಯಿಸಿ ಅಪಘಾತಪಡಿಸಿದ್ದು ಅಪಗಾತದಲ್ಲಿ ಫಿರ್ಯಾದಿಯ ಬಲಗಾಲ ಪಾದದ ಮೇಲೆ ಹಾಗೂ ಮಂಡಿಯ ಕೆಳಗೆ, ಹಾಗೂ ಎಡಗಾಲ ಮುಂಗಾಲ ಪಾದದ ಹತ್ತಿರ ರಕ್ತಗಾಯಗಳಾಗಿದ್ದು ಇರುತ್ತದೆ.  ಅಪಘಾತ ಪಡಿಸಿದ ಮೋಟಾರ ಸೈಕಲ ಸವಾರನಾದ ಸಂಗಪ್ಪ ತಂದೆ ಹನಮಪ್ಪ ಮುರಡಿ ಸಾ: ಬೆನಕನಾಳ. ಆತನಿಗೆ ಕಾಲಿಗೆ, ತಲೆಗೆ, ಸೊಂಟ, ಕಪಾಳಕ್ಕೆ ಬಾರಿ ರಕ್ತಗಾಯಗಳಾಗಿದ್ದು. ಆತನ ಹಿಂದೆ ಕುಳಿತ ಶಿವಪ್ಪ ತಂದೆ ಬುಡ್ಡಪ್ಪ ಹಿರೇಮನಿ ಸಾ: ಬೆನಕನಾಳ ಈತನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಇರುತ್ತದೆ. ಇನ್ನೊಬ್ಬರಾದ ಸುರೇಶ ತಂದೆ ಯಮನಪ್ಪ ಪೂಜಾರ  ಸಾ: ಬೆನಕನಾಳ ಈತನಿಗೆ ಬಲಗಾಲು, ಎಡಗೈ, ಹಾಗೂ ತಲೆಗೆ ಬಾರಿ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.

0 comments:

 
Will Smith Visitors
Since 01/02/2008