Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Friday, January 6, 2017

1] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ: 04/2017 ಕಲಂ 78(3) Karnataka Police Act.
ದಿನಾಂಕ 05-01-2017 ರಂದು 09-30 ಎ.ಎಂ.ಕ್ಕೆ ಆರೋಪಿತನು ಮುನಿರಾಬಾದ ಗ್ರಾಮದ ಬಸ್ ನಿಲ್ದಾಣದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ಶ್ರೀ ಜಯಪ್ರಕಾಶ ಪಿ.ಎಸ್.ಐ ಹಾಗೂ ಸಿಬ್ಬಂದಿಯವರು ಪಂಚರೊಂದಿಗೆ ದಾಳಿ ಮಾಡಿ ಆರೋಪಿತನಿಂದ ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ ಪೆನ್ನು, ಹಾಗೂ ಜೂಜಾಟದ ನಗದು ಹಣ.1410-00 ರೂ. ಜಪ್ತ ಮಾಡಿಕೊಂಡಿದ್ದು ಇರುತ್ತದೆ, ಅಂತಾ ಮುಂತಾಗಿದ್ದ ಫಿರ್ಯಾದಿ ಸಾರಾಂಶದ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.
2] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 03/2017 ಕಲಂ 279, 338 ಸಹಿತ 149 ಐ.ಪಿ.ಸಿ:
ದಿನಾಂಕ. 05-01-2017 ರಂದು ಮದ್ಯಾನ್ಹ 02-30  ಗಂಟೆ ಸುಮಾರಿಗೆ ಫಿರ್ಯಾದಿದಾರರ ಗಂಡನಾದ ಕರಿಯಪ್ಪ ಇವರು ತಮ್ಮ ಮೋಟಾರ ಸೈಕಲ್ ನಂ. ಕೆ.ಎ.48/ಹೆಚ್.2230 ನೇದ್ದನ್ನು ಚಲಾಯಿಸಿಕೊಂಡು ಲಕ್ಕಹಾಳ ಗ್ರಾಮದಿಂದ ಹುಲಿಗೆಮ್ಮ ದೇವಸ್ಥಾನಕ್ಕೆ ಹೋಗುತ್ತಿರುವಾಗ ಬಂಡ್ರಾಳದಿಂದ ವೆಂಕಟಗಿರಿಗೆ ಹೋಗುವ ರಸ್ತೆಯಿಂದ ಕೊಪ್ಪಳ ಗಂಗಾವತಿ ರಸ್ತೆಗೆ ಹೋಗುವ ರಸ್ತೆಯ ಮೇಲೆ ಕರಿಯಪ್ಪನು ಮೋಟಾರ ಸೈಕಲನ್ನು ಅತಿವೇಗವಾಗಿ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ಪಕ್ಕದಲ್ಲಿರುವ ಲೈಟಿನ ಕಂಬಕ್ಕೆ ಡಿಕ್ಕಿ ಕೊಟ್ಟು ಅಪಘಾತ ಮಾಡಿದ್ದರಿಂದ ಕರಿಯಪ್ಪನಿಗೆ ಎಡಗಾಲು ಮೊಣಕಾಲ ಕೆಳಗೆ ಎಲಬು ಮುರಿದು ಭಾರಿ ಗಾಯವಾಗಿದ್ದು ತಲಗೆ ಒಳಪೆಟ್ಟು ಬಿದ್ದು ಕಿವಿಯಿಂದ ಮೂಗಿನಿಂದ ರಕ್ತ ಬಂದಿರುತ್ತದೆ. ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ.
3] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 04/2017 ಕಲಂ 87 Karnataka Police Act.

ದಿನಾಂಕ:- 05-01-2017 ರಂದು ಸಾಯಂಕಾಲ 05-30 ಗಂಟೆಗೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಆರಾಳ ಸೀಮಾದಲ್ಲಿರು ಮುದ್ದಪ್ಪ ಉಪ್ಪಾರ ಎಂಬುವವರ ಜಮೀನ ಹತ್ತಿರ ಸರಕಾರಿ ಗುಡ್ಡದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ ಜೂಜಾಟ ನಡೆಯುತ್ತಿದೆ ಅಂತಾ ಖಚಿತವಾದ ಮಾಹಿತಿ ಶ್ರೀ ದೀಪಕ ಬೋಸರೆಡ್ಡಿ ಸಿ.ಪಿ. ಗಂಗಾವತಿ ಗ್ರಾಮೀಣ ವೃತ್ತ ರವರಿಗೆ ಬಂದಿದ್ದು , ಅದನ್ನು ದಾಳಿ ಮಾಡಲು ಸಿಬ್ಬಂದಿಯವರಾದ ಪಿ.ಸಿ. ನಂ: 40, 277, 363 ಹಾಗೂ ಚೀಪ ಚಾಲಕ .ಹೆಚ್.ಸಿ. ಬಸವರಾಜ ಇವರು ಕೂಡಿಕೊಂಡು ಆರಾಳ ಗ್ರಾಮದ ಊರ ಮುಂದೆ ಜೀಪನ್ನು ನಿಲ್ಲಿಸಿ ಮಾಹಿತಿ ಇದ್ದ ಸ್ಥಳವನ್ನು ಹುಡುಕಾಡುತ್ತಾ ಒಳದಾರಿಯಿಂದ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಮುದ್ದಪ್ಪ ಉಪ್ಪಾರ ಎಂಬುವವರ ಜಮೀನ ಹತ್ತಿರ ಸರಕಾರಿ ಗುಡ್ಡದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ್ ಎಲೆಗಳಿಂದ ಅಂದರ್ ಬಹಾರ್ ಎನ್ನುವ ಕಾನೂನು ಬಾಹಿರವಾದ ಅದೃಷ್ಠದ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದು ಕಂಡುಬಂದಿದ್ದು, ಕೂಡಲೇ ಅವರ ಮೇಲೆ ದಾಳಿ ಮಾಡಲಾಗಿ ಜೂಜಾಟದಲ್ಲಿ ತೊಡಗಿದ್ದ 04 ಜನರು ಸಿಕ್ಕಿಬಿದ್ದಿದ್ದು. ಉಳಿದವರು ಓಡಿ ಹೋಗಿರುತ್ತಾರೆ. ಸಿಕ್ಕವರಿಂದ ಹಾಗೂ ಸ್ಥಳದಿಂದ ಜೂಜಾಟದ ನಗದು ಹಣ ರೂ. 5,230-00 ಗಳು, 52 ಇಸ್ಪೀಟ್ ಎಲೆಗಳು, ಹಾಗೂ ನೆಲದ ಮೇಲೆ ಹಾಸಿದ್ದ ಒಂದು ಪ್ಲಾಸ್ಟಿಕ್ ಚೀಲ ಸಿಕ್ಕಿದ್ದು, ಸದರ ಸ್ಥಳದಲ್ಲಿ 08 ಮೋಟಾರ ಸೈಕಲಗಳು ಸಿಕ್ಕಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ. 

0 comments:

 
Will Smith Visitors
Since 01/02/2008