ದಿ : 02-01-2017 ರಂದು 11-30 ಪಿ.ಎಮ್ ಕ್ಕೆ ಕೊಪ್ಪಳ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ ಕಿನ್ನಾಳ ಗ್ರಾಮದ ಸರ್ಕಾರಿ ಖಾದಿ
ಕೇಂದ್ರದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 11 ಜನ ಆರೋಪಿತರು ದುಂಡಾಗಿ ಕುಳಿತು ಪಣಕ್ಕೆ ಹಣವನ್ನು ಹಚ್ಚಿ ಅಂದರ-ಬಾಹರ ಎಂಬ ಇಸ್ಪೇಟ್ ಜೂಜಾಟದಲ್ಲಿ
ತೊಡಗಿದ್ದಾಗ ಪಿ.ಎಸ್,ಐ ರವರು ಸಿಬ್ಬಂದಿಯವರನ್ನು ಸಂಗಡ ಕರೆದುಕೊಂಡು ಪಂಚರ ಸಮಕ್ಷಮ ದಾಳಿ
ಮಾಡಿದ್ದು 11 ಜನರು ಸಿಕ್ಕಿಬಿದ್ದಿದ್ದು, ಸಿಕ್ಕಿಬಿದ್ದವರಿಂದ ಜೂಜಾಟಕ್ಕೆ ಉಪಯೋಗಿಸಿದ ನಗದು ಹಣ, 2670=00 ರೂ, 52 ಇಸ್ಪೇಟ್ ಎಲೆ, ಒಂದು ಹಾಳೆಯ ಚೀಲ ಇವುಗಳನ್ನು
ಪಂಚರ ಸಮಕ್ಷಮ ಜಪ್ತ ಮಾಡಿಕೊಂಡಿದ್ದು ಸಿಕ್ಕ 11 ಜನ ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಹೀಗೆ ಸದರಿ ಆರೋಪಿತರ ವಿರುದ್ದ ಕಾನೂನು ಕ್ರಮ
ಜರುಗಿಸಿದ್ದು ಇರುತ್ತದೆ.
2] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ: 01/2017 ಕಲಂ 279, 337 ಐ.ಪಿ.ಸಿ:
ದಿನಾಂಕ 02-01-2017
ರಂದು ಬೆಳಿಗ್ಗೆ 10-00 ಎ.ಎಂ.ಸುಮಾರಿಗೆ ಪಿರ್ಯಾದುದಾರರು ತಮ್ಮ ಹೋಟೆಲ್ ಮುಂದೆ ಕುಳಿತಿರುವಾಗ ಹೊಸಪೇಟೆ -ಕೊಪ್ಪಳ ಎನ್.ಹೆಚ್.63
ರಸ್ತೆಯ ಮೇಲೆ ಆರೋಪಿತನು ತನ್ನ ಹೊಸ ಪ್ಯಾಸನ್ ಪ್ರೋ ನಂಬರ ಇಲ್ಲದ ಮೋ.ಸೈ.ನಲ್ಲ ಹಿಂದೆ ತಮ್ಮ ತಾಯಿಯನ್ನು ಕುಡಿಸಿಕೊಂಡು ಮೋ.ಸೈ.ನ್ನು ಅತೀ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ರೋಡ ಹಂಪ್ಸ್ ನ್ನು ಗಮನಿಸದೆ
ಹೋಗಿದ್ದರಿಂದ ಮೋ.ಸೈ.ನಲ್ಲಿ ಹಿಂದೆ ಕುಳಿತಿದ್ದ ಮಹಿಳೆಯು ಕೆಳಗೆ ಬಿದ್ದು ತಲೆಗೆ ಗಾಯಪೆಟ್ಟುಗಳಾಗಿರುತ್ತವೆ ಎಂತಾ
ಮುಂತಾಗಿ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಖೆ ಕೈಗೊಂಡಿರುತ್ತದೆ.
3] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ: 02/2017 ಕಲಂ 279, 337, 304(ಎ) ಐ.ಪಿ.ಸಿ:
ದಿನಾಂಕ: 02/01/2017 ರಂದು ಮುಂಜಾನೆ
11-45 ಗಂಟೆಯ ಸುಮಾರಿಗೆ ಗಾಯಾಳು ಟಿ ಶಂಕರಪ್ಪ ಮತ್ತು ಗಾಯಾಳು ಟಿ.ಹುಲಗಪ್ಪ ಸಾ: ಹೊಸಪೇಟಿ ಇವರಿಬ್ಬರು ತಮ್ಮ ಮೋಟಾರ ಸೈಕಲ್ ನಂ: ಕೆ.ಎ.35/
ಇಇ 0404 ನೇದ್ದರಲ್ಲಿ ಕುಳಿತು ಹೊಸಪೇಟಿಯಿಂದ ಹುಲಿಗೆಮ್ಮ ದೇವಸ್ಥಾನಕ್ಕೆ ಹೊಸಪೇಟಿ-ಕೊಪ್ಪಳ ಏಕ ಮುಕ ರಸ್ತೆಯಲ್ಲಿ ಹೊರಟಾಗ ದಾರಿಯಲ್ಲಿ ತುಂಗಭದ್ರ ನದಿಯ 1 ನೆ ಬ್ರಿಡ್ಜ ಸಮೀಪ ಶಂಕ್ರಪ್ಪನು ನಡೆಸುತ್ತಿದ್ದ ಮೋಟಾರ ಸೈಕಲ್ಲಿಗೆ ನಾಯಿ ಅಡ್ಡ ಬಂದಿದ್ದರಿಂದ ತಪ್ಪಿಸಲು ಬೈಕಿನ ವೇಗಕಡಿಮೆ ಮಾಡಿ ಬ್ರೆಕ್ ಹಾಕಿದಾಗ ಅದೇ ರಸ್ತೆಯಲ್ಲಿ ಬೈಕ ಹಿಂದಿನಿಂದ ಬರುತ್ತಿದ್ದ ಕಾರ ನಂ: ಕೆ.ಎ.36/ಎನ್ 5534 ನೇದ್ದರ ಚಾಲಕ ವಿರೇಶ ತಂದೆ ಮಾಸೀಮಸಾಬ ಸಾ:ಅಮರಭಗತ್ಸಿಂಗ್ ನಗರ ಗಂಗಾವತಿ. ಇವನು ಸದರ ಕಾರನ್ನು ಅತೀ ವೇಗದಿಂದ & ನಿಸ್ಕಾಳಜಿತನದಿಂದ ಓಡಿಸಿಕೊಂಡು ಬಂದು ಬೈಕಿನ ಹಿಂದುಗಡೆಯಿಂದ ಡಿಕ್ಕಿ ಹೋಡೆಸಿ ಅಪಘಾತ ಪಡಿಸಿದ್ದರಿಂದ ಬೈಕ ಸವಾರ
& ಹಿಂದೆಕುಳಿತವ ಇಬ್ಬರೂ ಬೈಕ ಸಮೇತ ಕೆಳಗೆ ಬಿದ್ದಾಗ ಸಾದಾ ಸ್ವರೂಪದ ಗಾಯಗಳು ಮತ್ತು ಒಳಪೆಟ್ಟುಗಳಾಗಿರುತ್ತವೆ. ಎಂದು ಮುಂತಾಗಿದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಸಿಕೊಂಡು ತನಿಖೆ ಕೈಕೊಂಡಿರುತ್ತದೆ. ದಿನಾಂಕ 02-01-2017 ರಂದು ಸಾಯಂಕಾಲ
5-00 ಗಂಟೆಗೆ ವಿಮ್ಸ್ ಆಸ್ಪತ್ರೆ ಬಳ್ಳಾರಿಯಿಂದ ಮಾಹಿತಿ ಬಂದಿದ್ದು ಅದರಲ್ಲಿ ಸದರ ಪ್ರಕರಣದಲ್ಲಿ ಗಾಯಾಳು ಟಿ.ಶಂಕ್ರಪ್ಪ ಟಿ.ಅಯ್ಯಮ್ಮ 52
ವರ್ಷ ಸಾ: ಹೊಸಪೇಟೆ ಈತನು ವಿಮ್ಸ್ ಆಸ್ಪತ್ರೆ ಬಳ್ಳಾರಿಯಲ್ಲಿ ಚಿಕಿತ್ಸೆ ಪಡೆಯುವ ಕಾಲಕ್ಕೆ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿರುತ್ತಾನೆಂದು ಫೋನ್ ಮುಖಾಂತರ ಮಾಹಿತಿ ತಿಳಿದು ಬಂದಿರುತ್ತದೆ.
0 comments:
Post a Comment