Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Friday, January 20, 2017

1] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ: 06/2017 ಕಲಂ : 447, 341, 323, 324, 504, 506 ಸಹಿತ 34 ಐ.ಪಿ.ಸಿ:. 
ದಿನಾಂಕ: 19-01-2017 ರಂದು ಮುಂಜಾನೆ  10-30 ಗಂಟೆಯ ಸುಮಾರಿಗೆ ಪಿರ್ಯಾದಿ ತನ್ನ  ಜಮೀನು ಸರ್ವೇ ನಂ:58 ರಲ್ಲಿ ಇದ್ದಾಗ ಆರೋಪಿ 01 ಈತನು ಪಿರ್ಯಾದಿಯ ಹೊಲದಲ್ಲಿ ಅತೀಕ್ರಮಣ ಪ್ರವೇಶ ಮಾಡಿ ಪಿರ್ಯಾದಿಯನ್ನು ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಆರೋಪಿ ನಂ:1 ಈತನು ಫಿರ್ಯಾದಿಗೆ ಏನಲೇ ಸೂಳೇ ಮಗನೇ ಬೇವಿನ,ನೀಲಿಗಿರಿ, ಜಾಲಿಗಿಡಗಳನ್ನು ಏನ ನಿಮ್ಮಪ್ಪ ನೀರಹಾಕಿ ಬೇಳೆಸ್ಯಾನೇನು ಊರ ಹಿರಿಯರ ಮುಂದೆ ಸರ್ವೇಮಾಡಿಸಿ ಗಿಡ ಯಾರಿಗೆ ಬರುತ್ತವೋ ಅವರು ಕಡಕೋಲಿ ಅಂತಾ ಊರಾಗ ಮಂದಿಮುಂದ ನಮ್ಮ ಬಗ್ಗೆ ಹೇಳುಕೊಂತಾ ಅಡ್ಡಾಡ್ತಿಯೇನು ಅಂತಾ ಅಂದು ಅಲ್ಲಿಯೇ ಬಿದ್ದಿದ್ದಒಂದು ಕಟ್ಟಿಗೆ ಬಡಿಗೆಯಿಂದ ಕೈ.ಕಾಲುಗಳಿಗೆ ಮತ್ತು ಬೆನ್ನಿಗೆ ಹೊಡೆದಿದ್ದು ನಂತರ   ತನ್ನ ಮಕ್ಕಳಾದ ಆರೋಪಿ ನಂ;2 ಮತ್ತು 3 ನೇದ್ದವರಿಗೆ ಫೋನ ಮಾಡಿ ಸ್ಥಳಕ್ಕೆ ಕರೆಯಿಸಿದ್ದು, ಆರೋಪಿ ನಂ:2 ಈತನು ಫಿರ್ಯಾದಿಗೆ ಕಾಲಿನಿಂದ ಹೊಟ್ಟೆಗೆ ಒದ್ದಿದ್ದು, ಮತ್ತು ಆರೋಪಿ ನಂ:3 ಈತನು ಫಿರ್ಯಾದಿಗೆ ಕಟ್ಟಿಗೆಯಿಂದ ಮೊಣಕಾಲು ಕೆಳಗೆ ಹೊಡೆದು ರಕ್ತಗಾಯ ಮಾಡಿದ್ದು, ನಂತರ ಆರೋಪಿತರು ಪಿರ್ಯಾದಿಗೆ ನಿನ್ನ ಜೀವ ಸಹಿತ ಬೀಡುವದಿಲ್ಲಾ ನಿನ್ನ  ಜೀವ ತೆಗೆಯುತ್ತೇವೆ ಅಂತಾ ಜೀವದ ಭಯ ಹಾಕಿದ್ದು  ಪ್ರಕರಣ ಧಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.   
2] ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ: 06/2017 ಕಲಂ : 447, 323, 324, 504, 506 ಸಹಿತ 34 ಐ.ಪಿ.ಸಿ:.


ದಿನಾಂಕ:-19-01-2017 ರಂದು ಬೆಳಿಗ್ಗೆ 08-00 ಗಂಟೆ ಸುಮಾರಿಗೆ ಉದ್ಯಾಳ ಸೀಮಾದ ತಮ್ಮ ಹೊಲಕ್ಕೆ ಪ್ರತಿ ದಿನದಂತೆ ಇವತ್ತು ಫೀರ್ಯಾಧಿದಾರನು ಮತ್ತು ಆತನ ಅಣ್ಣನಾದ ಮಲ್ಲಿಕಾಜರ್ುನ  ಮತ್ತು ಮಾವ ವೆಂಕಟರೆಡ್ಡಿ ರವರೊಂದಿಗೆ ಹೊಲದಲ್ಲಿ ಇದ್ದಾಗ ಆ ಸಮಯದಲ್ಲಿ 1) ಬಸವರಾಜ ತಂದೆ ಸಿದ್ದನಗೌಡ ಮಾದಿನೂರ. 2) ವಿರುಪಣ್ಣ ತಂದೆ ಸಿದ್ದನಗೌಡ ಮಾದಿನೂರ ರವರು ಹೊಲದಲ್ಲಿ ಎತ್ತಿನ ಬಂಡಿಯನ್ನು ನಮ್ಮ ಹೊಲದ ಬೆಳೆಗಳ ಮೇಲೆ ಹೊಡೆದುಕೊಂಡು ಹೋಗುತ್ತಿದ್ದಾಗ ಆ ಸಮಯದಲ್ಲಿ ಯಾಕೆ ನಮ್ಮ ಹೊಲದಲ್ಲಿ ಎತ್ತಿನ ಬಂಡಿಯನ್ನು ಹೊಡೆದುಕೊಂಡು ಹೋಗುತ್ತೀರಿ ಅಂತಾ ನನ್ನ ಮಾವ ಮತ್ತು ಅಣ್ಣ ರವರು ಕೇಳಿದಾಗ ಅವರು ಒಮ್ಮಿಂದೊಮ್ಮೇಲೆ ಬಸವರಾಜ, ವಿರುಪಣ್ಣ ರವರು ಸಿಟ್ಟಿಗೆ ಬಂದು ನಮ್ಮ ಅಣ್ಣ ಮಲ್ಲಿಕಾಜರ್ುನ ಈತನಿಗೆ ಜೋರಾಗಿ ಕೈಯಿಂದ ಮತ್ತು ಮೊಣಕೈಯಿಂದ ಎದೆಗೆ ಗುದ್ದಿದರು ನಮ್ಮ ಮಾವನವರು ಬಿಡಸಲಿಕ್ಕೆ ಬಂದಾಗ ಅವರಿಗೂ ಮತ್ತು  ನನಗೂ ಕೂಡ ಈ ಬಂಡ ಸೂಳೇ ಮಗನೇ ನೀನು ನಿಮ್ಮವ್ವನಿಗೆ ಹುಟ್ಟಿದ್ದರೇ ನನ್ನ ಬಾ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಬಡಿದು ಅಲ್ಲಿ ನಮ್ಮ ಅಣ್ಣನು ಕೆಳಗೆ ಬಿದ್ದು ಒದ್ದಾಡಿದನು, ಇನ್ನೂ ಮುಂದೆ ನನ್ನ ತಂಟೆಗೆ ಬಂದರೇ ಜೀವ ಸಹಿತ ತೆಗೆಯುತ್ತೇವೆಂದು ನಿನ್ನನ್ನು ಬಿಡುವದಿಲ್ಲವೆಂದು ಹೇಳುತ್ತಾ ಹೋದರು. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008