Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Wednesday, January 11, 2017

1] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 12/2017 ಕಲಂ : 279, 337, 338 ಐ.ಪಿ.ಸಿ ಸಹಿತ 187 ಐ.ಎಂ.ವಿ. ಕಾಯ್ದೆ:.
ಫಿರ್ಯಾದಿದಾರರಾದ ಪರಶುರಾಮ ತಂದೆ ದುರುಗಪ್ಪ ಕೊರವರ, ವಯಸ್ಸು: 27 ವರ್ಷ ಜಾತಿ: ಭಜಂತ್ರಿ, ಉ: ಮೇಸನಕೆಲಸ ಸಾ: ಗದ್ವಾಲ್ ಕ್ಯಾಂಪ್, ತಾ: ಗಂಗಾವತಿ ಇವರು ಠಾಣೆಗೆ ಹಾಜರಾಗಿ ನುಡಿ ಹೇಳಿಕೆ ಫಿರ್ಯಾದಿಯನ್ನು ನೀಡಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ. " ಇಂದು ದಿನಾಂಕ:- 10-01-2017 ರಂದು ಮಧ್ಯಾಹ್ನ 1:15 ಗಂಟೆಯ ಸುಮಾರಿಗೆ ಗಂಗಾವತಿ-ಕೊಪ್ಪಳ ಮುಖ್ಯ ರಸ್ತೆಯ ಬಸಾಪಟ್ಟಣ ಗ್ರಾಮದಲ್ಲಿ ಲಾರಿ ನಂಬರ್: ಕೆ.ಎ-40/ 9918 ನೇದ್ದರ ಚಾಲಕನು ತನ್ನ ಲಾರಿಯನ್ನು ಕೊಪ್ಪಳ ಕಡೆಯಿಂದ ಅತೀ ಜೋರಾಗಿ ಹಾಗೂ ತೀವ್ರ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಮುಂದುಗಡೆ ಹೊರಟಿದ್ದ ಹೊಸ ಟಿ.ವಿ.ಎಸ್. ಎಕ್ಸೆಲ್ ಮೋಟಾರ ಸೈಕಲ್ ನಡೆಯಿಸಿಕೊಂಡು ಹೊರಟಿದ್ದ ನನ್ನ ತಂದೆ ದುರುಗಪ್ಪ ತಂದೆ ವೆಂಕಟರಮಣ ವಯಸ್ಸು: 55 ವರ್ಷ ಸಾ: ಗದ್ವಾಲ್ ಕ್ಯಾಂಪ್ ಮತ್ತು ನಮ್ಮ ಮಾವನಾದ ಹುಲುಗಪ್ಪ ತಂದೆ ರಾಮಣ್ಣ ವಯಸ್ಸು: 50 ವರ್ಷ ಸಾ: ಗದ್ವಾಲ್ ಕ್ಯಾಂಪ್  ಇವರಿಗೆ ಟಕ್ಕರ್ ಕೊಟ್ಟು ಅಪಘಾತ ಮಾಡಿ ಲಾರಿ ಬಿಟ್ಟು ಓಡಿ ಹೋಗಿದ್ದು, ಇದರಿಂದ ನನ್ನ ತಂದೆಗೆ ಸಾದಾ ಸ್ವರೂಪದ ಹಾಗೂ ನನ್ನ ಮಾವನಿಗೆ ತೀವ್ರ ಸ್ವರೂಪದ ಗಾಯಗಳಾಗಿರುತ್ತವೆ. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗಂಗಾವತಿ ಗುನ್ನೆ ನಂ: 07/2017 ಕಲಂ 21, 22 ಎಮ. ಎಮ. ಆರ್.ಡಿ. ಕಾಯ್ದೆ 1957, ಕೆ.ಎಮ.ಎಮ.ಸಿ.ಆರ್-1994 ನಿಯಮ 43, 46 ಹಾಗೂ 379 ಐ.ಪಿ.ಸಿ:.

ದಿನಾಂಕ 07-10-2016 ರಂದು  ಟಿಪ್ಪರ ವಾಹನ  ನಂ  ಜಿ.ಎ 05 ಟಿ 0598 ನೇದ್ದರ ಚಾಲಕ ಮತ್ತು  ಮಾಲೀಕರು ತಮಗೆ ಎಲ್ಲ ಖನಿಜಗಳು ಸರಕಾರಿ ಸ್ವತ್ತೆಂದು ಗೊತ್ತಿದ್ದರೂ ಸಹಿತ ಸರಕಾರದಿಂದ ಮತ್ತು ಸಂಬಂಧಪಟ್ಟ ಇಲಾಖೆಯಿಂದ ಪಾಸ್, ಪರ್ಮಿಟ್ ಪಡೆಯದೇ ಸರಕಾರಿ ಸ್ವತ್ತಾದ ನದಿಯ ಪಾತ್ರದಲ್ಲಿ ಅನಧೀಕೃತವಾಗಿ ಅಕ್ರಮ ಪ್ರವೇಶ ಮಾಡಿ ಕಳ್ಳತನದಿಂದ ಟಿಪ್ಪರ  ಮೂಲಕ  ತುಂಬಿಸಿ ಚಾಲಕನ ಮೂಲಕ ಅಕ್ರಮ ಸಾಗಾಣಿಕೆಯಲ್ಲಿ ತೊಡಗಿದ್ದಲ್ಲದೇ ಸರಕಾರದಿಂದ ಅಥವಾ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಂದ ಯಾವುದೇ ಅನುಮತಿ ಅಥವಾ ಪರವಾನಿಗೆ ಪತ್ರ ಪಡೆಯದೇ ಅಕ್ರಮ ಮರಳು ಗಣಿಗಾರಿಕೆಯಲ್ಲಿ ತೊಡಗಿದ್ದಾಗ ಸಿಕ್ಕ ಅಪರಾದ. ಪ್ರಕರಣವನ್ನು  ದಾಖಲಿಸಿ ತಪಾಸಣೆ ಕೈಗೊಂಡಿದ್ದು ಅದೆ.

0 comments:

 
Will Smith Visitors
Since 01/02/2008