1] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 13/2017 ಕಲಂ : 143, 147, 148, 448,
323, 326, 504, 354, 506 ಸಹಿತ 149 ಐ.ಪಿ.ಸಿ:.
ದಿ:23-01-2017 ರಂದು ರಾತ್ರಿ 9-15 ಗಂಟೆಗೆ ಕೊಪ್ಪಳ ಜಿಲ್ಲಾ ಸರಕಾರಿ ಆಸ್ಪತ್ರೆಯಿಂದ ಗಾಯಾಳು ದಾಖಲಾದ
ಬಗ್ಗೆ ಎಮ್.ಎಲ್.ಸಿ ಸ್ವೀಕೃತವಾಗಿದ್ದು, ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಗವಿಸಿದ್ದಪ್ಪ ಆನಂದಹಳ್ಳಿ ಸಾ: ಗಿಣಿಗೇರಿ
ಇವರನ್ನು ವಿಚಾರಿಸಿದ್ದು, ಸದರಿ ಫಿರ್ಯಾಧಿದಾರರು ತಮ್ಮ ಲಿಖಿತ ಫಿರ್ಯಾದಿಯನ್ನು ರಾತ್ರಿ 10-30 ಗಂಟೆಗೆ ಪಡೆದುಕೊಂಡಿದ್ದು ಸಾರಾಂಶವೇನೆಂದರೇ, ಫಿರ್ಯಾದಿದಾರರು ಕಳೆದ 5 ವರ್ಷಗಳ ಹಿಂದೆ ಗಬ್ಬೂರ ಸೀಮಾದಲ್ಲಿ ಆರೋಪಿ ಹನುಮಪ್ಪ ಕುರಿ ಇವರ ಜಮೀನನ್ನು ಖರೀದಿ
ಮಾಡಿದ್ದು ಆದರೆ ಆರೋಪಿತರು ಫಿರ್ಯಾದಿತರಿಗೆ ಜಮೀನನ್ನು ಕಬ್ಜಾಕ್ಕೆ ಬಿಡದೇ, ಇಂದು ದಿ:23-01-2017 ರಂದು ರಾತ್ರಿ 7-30 ಗಂಟೆಗೆ ಆರೋಪಿತರು ಅಕ್ರಮ
ಗುಂಪು ಕಟ್ಟಿಕೊಂಡು ಕೈಯಲ್ಲಿ ಕಟ್ಟಿಗೆಗಳನ್ನು ರಾಡು ಹಿಡಿದುಕೊಂಡು ಫಿರ್ಯಾದಿದಾರರ ಮನೆಯಲ್ಲಿ
ಅತೀಕ್ರಮ ಪ್ರವೇಶ ಮಾಡಿ ಜಮೀನು ವಿಚಾರವಾಗಿ ಅವಾಚ್ಯ ಶಬ್ದಗಳಿಂದ ಬೈಯ್ದು, ಜಗಳ ತೆಗೆದು ಕಟ್ಟಿಗೆ, ರಾಡಿನಿಂದ ಹೊಡೆದು ಹಲ್ಲೆ ಮಾಡಿದ್ದರಿಂದ ಫಿರ್ಯಾದಿತರ ಎಡಕಣ್ಣಿನ ಹತ್ತಿರ ರಕ್ತಗಾಯ ಹಾಗೂ
ಮೂಗಿಗೆ ಭಾರಿ ಪೆಟ್ಟಾಗಿ ರಕ್ತ ಬಂದಿದ್ದು ಇರುತ್ತದೆ. ಅಲ್ಲದೇ ಆರೋಪಿತರು ಫಿರ್ಯಾದಿಯ ಹೆಂಡತಿ
ಸುನಿತಾ ಇವರ ಸೀರೆ ಹಿಡಿದು ಎಳೆದಾಡಿ ಕೈಗಳಿಂದ ಹಲ್ಲೆ ಮಾಡಿದ್ದು ಇರುತ್ತದೆ. ಅಲ್ಲದೇ ಜಮೀನು ವಿಚಾರವಾಗಿ ತಂಟೆಗೆ ಬಂದರೆ ಇದೇ ರೀತಿ ನಿನಗೆ ಮತ್ತು
ನಿನ್ನ ಕುಟುಂಬಕ್ಕೆ ಹೊಡೆದು ನಿಮ್ಮ ಪ್ರಾಣ ತೆಗೆಯುತ್ತೇವೆ, ಎಂದು ಮುಂತಾಗಿ ಪ್ರಾಣದ ಬೆದರಿಕೆ ಹಾಕಿದ್ದು ಇರುತ್ತದೆ. ಪ್ರಕರಣವನ್ನು
ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
0 comments:
Post a Comment