Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Monday, April 3, 2017

1] ಹನಮಸಾಗರ ಪೊಲೀಸ್ ಠಾಣಾ ಗುನ್ನೆ ನಂ: 29/2017 ಕಲಂ: 279, 338, 304[] .ಪಿ.ಸಿ:.
ದಿನಾಂಕ: 02-04-2017 ರಂದು ಸಾಯಾಂಕಾಲ 18-30 ಗಂಟೆಗೆ ಫಿರ್ಯಾದಿದಾದರರಾದ ಶ್ರೀ ಅನೀಲ್ ಕಾಟವಾ ಸಾ: ಚಳಗೇರಿ ರವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿ ಹಾಜರಪಡಿಸಿದ್ದರ ಸಾರಾಂಶವೆನೆಂದರೆ. ಫಿರ್ಯಾದಿಯ ತಮ್ಮನಾದ ದಿನಾಂಕ: 07-03-2017 ರಂದು ರಾತ್ರಿ 8-45 ಗಂಟೆಯ ಸುಮಾರಿಗೆ ತಮ್ಮ ಚಿಕ್ಕಪ್ಪನಾದ ಚಂದ್ರಾಹಾಸ ಕಾಟಾವಾ ರವರು ಫಿರ್ಯಾದಿಯ ಮನೆಗೆ ಫೋನಮಾಡಿ ತಿಳಿಸಿದ್ದೆನೆಂದರೆ, ಅನೀಲನು ಹೂಲಗೇರಿ ಹನಮಸಾಗರ ರಸ್ತೆಯ ಹೈಸ್ಕೂಲ್ ಮುಂದೆ ರೋಡಿನ ತಿರುವಿನಲ್ಲಿ ಗಾಡಿ ಅಪಘಾತ ಮಾಡಿಕೊಂಡು ಬಿದ್ದಿರುವನು ಅಂತಾ ಫೊನ್ ಮೂಲಕ ರಾತ್ರಿ 8-45 ಗಂಟೆಗೆ ತಿಳಿಸಿದ್ದರಿಂದ ಫಿರ್ಯಾದಿ ಹಾಗೂ ಅವರ ತಂದೆ ಕೂಡಿ ಸ್ಥಳಕ್ಕೆ ಹೋಗಿ ನೋಡಲು ಅನೀಲನಿಗೆ ಹಿಂದೆಲೆಗೆ ಹಾಗೂ ಎರಡೂ ತುಟಿ, ಹಾಗೂ ಎಡಕಪಾಳ ಮತ್ತು ಎಡಕುತ್ತಿಗೆ ಹತ್ತಿರ ಭಾರಿ ರಕ್ತ ಗಾಯವಾಗಿದ್ದು ಅಷ್ಟರಲ್ಲಿ 108 ಆಂಬ್ಯುಲೆನ್ಸ್ ಬಂದಿದ್ದು, ತಾನು ಹಾಗೂ ತಮ್ಮ ತಂದೆ ಕೂಡಿ ಅನೀಲನನ್ನು 108 ಆಂಬ್ಯುಲೆನ್ಸದಲ್ಲಿ ಕರೆದುಕೊಂಡು ಬಾಗಲಕೋಟ ಧನುಷ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಇಲಾಜು ಕುರಿತು ಸೇರಿಕೆ ಮಾಡಿದ್ದು, ನಂತರ ವಿಷಯ ತಿಳಿದು ಹನಮಸಾಗರ ಪೊಲೀಸ್ ಠಾಣೆಯ ಶಿವಕುಮಾರ ಹೆಚ್.ಸಿ-104 ರವರು ಬಂದಿದ್ದು, ಫಿರ್ಯಾದಿಯ ತಮ್ಮ ಮಾತನಾಡುವ ಸ್ಥಿತಿಯಲ್ಲಿ ಇಲ್ಲದ್ದರಿಂದ ತಮ್ಮ ತಂದೆ ಪರಶುರಾಮಸಾ ರವರು ಈ ಘಟನೆ ಬಗ್ಗೆ ನಂತರ ಠಾಣೆಗೆ ಬಂದು ತಿಳಿಸುವುದಾಗಿ ಹಾಗೂ ಸದ್ಯ ಯಾವುದೇ ಫಿರ್ಯಾದಿ ಇರುವುದಿಲ್ಲ ಅಂತಾ ಅರ್ಜಿ ಬರೆದು ಕೊಟ್ಟಿದ್ದು ಇರುತ್ತದ. ನಂತರ ಫಿರ್ಯಾದಿ ತಮ್ಮನನ್ನು ಅಲ್ಲಿಂದ ಹೆಚ್ಚಿನ ಇಲಾಜು ಕುರಿತು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು, ಫಿರ್ಯಾದಿ ತಮ್ಮ ಆರಾಮ ಆಗಬಹುದು ಅಂತಾ ಇಲ್ಲಿಯವರೆಗೆ ಕಾದು ನೋಡಿದರು ಆರಾಮ ಆಗದೇ ಇಂದು ದಿನಾಂಕ: 02-04-2017 ರಂದು ಮುಂಜಾನೆ 10-00 ಗಂಟೆಗೆ ಇಲಾಜು ಫಲಿಸದೇ ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
2] ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ: 34/2017 ಕಲಂ: 279, 337, 338 .ಪಿ.ಸಿ:.

ದಿನಾಂಕ 02-04-2017 ರಂದು ರಾತ್ರಿ 07-30 ಗಂಟೆಯ ಸುಮಾರಿಗೆ ಫಿರ್ಯಾದಿದಾರರಾದ ಶ್ರೀ ನಿರುಪಾದಿ ತಂದೆ ಹೊಳಿಯಪ್ಪ ಗೊಲ್ಲರ್, ವಯಾ :38 ವರ್ಷ. ಲಿಖಿತ ಫಿರ್ಯಾದಿಯನ್ನು ಹಾಜರುಪಡಿಸಿದ್ದು.   ದಿನಾಂಕ :31-03-2017 ರಂದು ರಾತ್ರಿ 08-00 ಗಂಟೆಯ ಸುಮಾರಿಗೆ ಬೀಮಣ್ಣ ತಂದಿ ಕಂಠೆೆಪ್ಪ ದಂಡಿನ್ ಇತನು ತನ್ನ ಹಿರೋ ಸ್ಪ್ಲೆಂಡರ್ ಪ್ಲಸ್ ಮೋ.ಸೈಕಲ್ನ್ನು ನಂ :ಕೆ.-37-ವಾಯ್-1898 ನೇದ್ದನ್ನು ಕನಕಗಿರಿ ಪಟ್ಟಣದ ಹೊರ ವಲಯದಲ್ಲಿರುವ ಕಾತರ್ಿಕ್ ಪೆಟ್ರೋಲ್ ಬಂಕ್ ಕಡೆಯಿಂದ ಅತೀ ವೇಗವಾಗಿ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ಗಂಗಾವತಿ ಕಡೆ ಜೋರಾಗಿ ತಿರುಗಿಸಿ ಹೋಗುತ್ತಾ ಎದುರುಗಡೆ ನಿಧಾನವಾಗಿ ಬರುತ್ತಿದ್ದ ವೆಂಕಟೇಶ ಗೊಲ್ಲರ್ ಇತನ ಮೋ.ಸೈಕಲ್ ಹೋಂಡಾ ಶೈನ್ ನಂ : ಕೆ.-37/ಈಎ-5143 ನೇದ್ದಕ್ಕೆ ಜೋರಾಗಿ ಟಕ್ಕರ್ ಕೊಟ್ಟಿದ್ದು, ಇದರಿಂದ ವೆಂಕಟೇಶ ಆತನ ಹಿಂದೆ ಕುಳಿತ ಅತ್ತಿಗೆ ಕರಿಯಮ್ಮ ಮತ್ತು ಚಾಲಕ ಬೀಮಣ್ಣನಿಗೆ ಸಾದ ಮತ್ತು ಭಾರಿ ಸ್ವರೂಪದ ಗಾಯಗಳಾಗಿದ್ದು ನಂತರ ಗಾಯಾಳುಗಳನ್ನು ಸರಕಾರಿ ಆಸ್ಪತ್ರೆ ಕನಕಗಿರಿಗೆ ದಾಖಲಿಸಿ ಅದೇ ದಿವಸ ಗಂಗಾವತಿಯ ಮಲ್ಲನಗೌಡ ಆಸ್ಪತ್ರೆಗೆ ಸೇರಿಸಿದ್ದು ಬಗ್ಗೆ ನಾವು ನಮ್ಮ ಮನೆಯವರರೊಂದಿಗೆ ದಿವಸ ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು ಇರುತ್ತದೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

0 comments:

 
Will Smith Visitors
Since 01/02/2008