1] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ: 35/2017 ಕಲಂ: 279, 304(A) IPC..
ದಿನಾಂಕ:
18-04-2017 ರಂದು ರಾತ್ರಿ 9-20 ಗಂಟೆಯ ಸುಮಾರಿಗೆ ಮೃತ ಕರಿಯಪ್ಪ ತಂದೆ ರಾಮಪ್ಪ
ತಳವಾರ ಸಾ: ಮಾರನಬಸರಿ ತಾ: ರೋಣ ಜಿಲ್ಲಾ: ಗದಗ ಇತನು ತನ್ನ ಮೋಟಾರ ಸೈಕಲ ನಂ: KA-26/W-3161 ನೇದ್ದರ ಮೇಲೆ ಗಜೇಂದ್ರಗಡಾ-ಗದಗ ರಸ್ತೆಯ ಮೇಲೆ
ಗಜೇಂದ್ರಗಡಾ ಕಡೆಯಿಂದ ಸಂಕನೂರ ಕ್ರಾಸ್ ಕಡೆಗೆ ಹೆಚ್.ಸೊಂಪೂರ ಸೀಮಾದಲ್ಲಿ ಬರುವ ಶ್ರೀ
ಕಂಠಿಬಸವೇಶ್ವರ ದೇವಸ್ಥಾನದ ಹತ್ತಿರ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಅದೇ ಸಮಯಕ್ಕೆ ಆರೋಪಿ ವೀರಭದ್ರಯ್ಯ ತಂದೆ ಬಸಯ್ಯ
ನಿಂಬಲಗುಂದಿ ಸಾ: ಐಹೊಳೆ ಇತನು ತಾನು ಚಲಾಯಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ಸ ನಂ: ಕೆ.ಎ-26/ಎಪ್-817
ನೇದ್ದನ್ನು ಸಂಕನೂರ ಕ್ರಾಸ್ ಕಡೆಯಿಂದ ಗಜೇಂದ್ರಗಡಾ ಕಡೆಗೆ ಅತೀಜೋರಾಗಿ ಹಾಗೂ ಅಲಕ್ಷತನದಿಂದ
ಚಲಾಯಿಸಿಕೊಂಡು ಬಂದು ಮೃತನಿಗೆ ಮತ್ತು ಅವನ ಮೋಟಾರ ಸೈಕಲಿಗೆ ಜೋರಾಗಿ ಠಕ್ಕರಕೊಟ್ಟು ಅಪಘಾತ
ಪಡಿಸಿದ್ದರಿಂದ ಎಡ ಹುಬ್ಬಿನ ಮೇಲೆ, ತಲೆಯ ಹಿಂಭಾಗದಲ್ಲಿ ಭಾರಿ ಸ್ವರೂಪದ ಗಾಯವಾಗಿದ್ದು, ಎಡಗೈ
ತೋಳಿನ ಹತ್ತಿರ, ಮೊಣಕೈ ಚಿಪ್ಪಿನ ಹತ್ತಿರ ತೆರಚಿದ ನಮೂನೆಯ ಗಾಯವಾಗಿ ಸ್ಥಳದಲ್ಲಿಯೇ ಮೃತ
ಪಟ್ಟಿದ್ದು ಇರುತ್ತದೆ. ಫಿರ್ಯಾಧಿ ಸುಭಾಷ ತಂದೆ ರಾಮಪ್ಪ ತಳವಾರ ವಯ: 45 ವರ್ಷ ಜಾತಿ: ವಾಲ್ಮೀಕಿ ಉ: ಕೂಲಿ ಕೆಲಸ ಸಾ:
ಮಾರನಬಸರಿ ತಾ: ರೋಣ ಜಿಲ್ಲಾ: ಗದಗ ಇವರು ನೀಡಿದ ಪಿರ್ಯಾದಿ ಸಾರಾಂಶ ಮೇಲಿಂದ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕುಕನೂರು ಪೊಲೀಸ್ ಠಾಣೆ ಗುನ್ನೆ ನಂ:
33/2017 ಕಲಂ. 341,323, 504, 506,109, 447, 449, 295 ಸಹಿತ 149 ಐಪಿಸಿ.
ದಿನಾಂಕ:18-04-2017 ರಂದು 3-00 ಪಿಎಂಕ್ಕೆ ಕೋರ್ಟ ಕರ್ತವ್ಯ ನಿರ್ವಹಿಸುವ ಶ್ರೀ ಶಿವರಾಜ
ಸಿಪಿಸಿ-242 ರವರು ಮಾನ್ಯ ನ್ಯಾಯಾಲಯದ ಖಾಸಗಿ ಪಿರ್ಯಾದಿ ಸಂ.02/2017 ನೇದ್ದನ್ನು ಹಾಜರಪಡಿಸಿದ್ದು,
ಅದರ ಸಾರಾಂಶವೇನಂದರೆ, ದಿನಾಂಕ: 15-04-2017 ರಂದು ಮುಂಜಾನೆ 11-30 ಗಂಟೆ ಸುಮಾರಿಗೆ ಪಿರ್ಯಾದಿ
ಜಾಹಿದ್ ಅಹ್ಮದಖಾನ್ ತಂದೆ ಫೈಜ ಅಹ್ಮದಖಾನ ಮುಲ್ಲಾ ವಯಾ: 34 ವರ್ಷ, ಉ:
ಒಕ್ಕಲುತನ ಸಾ : ಕುಕನೂರು. ಇವರು ತನ್ನ ಮನೆಯಿಂದ ಹೊರಗೆ ಹೋಗುವಾಗ
ಕುಕನೂರು ಗ್ರಾಮದ ಸ.ನಂ. 54/1, 54-16, 54-15 ಇವುಗಳಲ್ಲಿ ಪಿರ್ಯಾದಿದಾರರ ಪೂರ್ವಜರ ಗೋರಿಗಳು ಇರುತ್ತವೆ.
ಅವುಗಳನ್ನು ರಶೀದ್ ಅಹ್ಮದ ತಂದೆ ರಾಜಾಸಾಬ ಹಣಜಗೇರಿ ವ : 45 ವರ್ಷ ಹಾಗೂ ಇತರೇ
15 ಜನರು ಕೂಡಿ ಧ್ವಂಸಗೊಳಿಸಿದ್ದು ಅದೆ. 01 ನೇ ಆರೋಪಿಯು ಪಿರ್ಯಾದಿದಾರನನ್ನು
ಮುಂದಕ್ಕೆ ಚಲಿಸದಂತೆ ತಡೆ ಹಿಡಿದು ಕೈಯಿಂದ ಬಡಿದು ಇನ್ನೂಳಿದ ಆರೋಪಿತರು ಬಾಯಿಗೆ ಬಂದಂತೆ ಅವಾಚ್ಯ
ಶಬ್ದಗಳಿಂದ ಬೈಯುತ್ತಾ ಜೀವದ ಬೆದರಿಕೆ ಹಾಕಿದ್ದು, ಅಲ್ಲದೇ ಪಿರ್ಯಾದಿದಾರನ ಮನೆ ಒಳಗೆ ಹೊಕ್ಕು ಅತಿ
ಕ್ರಮಿಸಿ ಮಹಿಳೆಯರಿಗೆ ನಿಂದಿಸಿ ಜೀವ ತೆಗೆದು ಬೀಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ
ಅಂತಾ ಮುಂತಾಗಿದ್ದ ಖಾಸಗಿ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಕೊಂಡೆನು.
3] ವಿಶೇಷ ಪೊಲೀಸ್ ಠಾಣೆ ಕೊಪ್ಪಳ ಗುನ್ನೆ ನಂ:
03/2017 ಕಲಂ: 32, 34 ಕರ್ನಾಟಕ ಪೊಲೀಸ್ ಕಾಯ್ದೆ.
ದಿ:18-04-2017 ರಂದು ಸಾಯಂಕಾಲ 5:45 ಗಂಟೆಗೆ ಗಂಗಾವತಿ ನಗರದ ಹೊಸಳ್ಳಿ ರಸ್ತೆಯ ಕನಕದಾಸ ವೃತ್ತ ಹತ್ತೀರದ ಆರೋಪಿತ ಶಶಿಕಾಂತನು ತನ್ನ ಶೆಡ್ನಲ್ಲಿ ಅನಧೀಕೃತವಾಗಿ ಯಾವುದೇ ಪರವಾನಗಿ ಇಲ್ಲದೇ ಮಧ್ಯದ ಡಬ್ಬಿಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತೀರುವಾಗ ಶ್ರೀಮತಿ ನಾಗರತ್ನಾ ಆರ್ ಪಿ.ಎಸ್.ಐ ವಿಶೇಷ ಪೊಲೀಸ್ ಠಾಣೆ, ಜಿಲ್ಲಾ ಅಪರಾಧ ವಿಭಾಗ, ಇವರು
ತಮ್ಮ ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಅವನನ್ನು ವಶಕ್ಕೆ ಪಡೆದುಕೊಂಡು ಅವನಿಂದ ಒಟ್ಟು ಅಂ.ಕಿ.ರೂ: 1,592=00 ಬೆಲೆಯುಳ್ಳ ಮಧ್ಯದ ಡಬ್ಬಿಗಳನ್ನು ಜಫ್ತು ಮಾಡಿಕೊಂಡು ಆರೋಪಿತನ ವಿರುದ್ದ ಪ್ರಕರಣ
ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment