Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Sunday, April 16, 2017

1] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 69/2017 ಕಲಂ: 379 ಐ.ಪಿ.ಸಿ. ಹಾಗೂ 44[1] ಕೆ.ಎಂ.ಎಂ.ಸಿ. ರೂಲ್ಸ್-1994…
ದಿ:15-04-2017 ಬೆಳಿಗ್ಗೆ 11-20 ಗಂಟೆಗೆ ಶ್ರೀ ಗುರುರಾಜ. ಪಿ.ಎಸ್.ಐ ರವರು ಠಾಣಾ ವ್ಯಾಪ್ತಿಯ ಹಲಿಗೇರಿ ಗ್ರಾಮದಿಂದಾ ವಾಪಾಸ್ ಠಾಣೆಗೆ ಬರುವಾಗ ಮಾರ್ಗದ ದದೇಗಲ್ ಸಮೀಪ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ ಹತ್ತಿರ ಕೊಪ್ಪಳದ ಕಡೆಯಿಂದ ಮರಳು ತುಂಬಿದ ಒಂದು ಟ್ರ್ಯಾಕ್ಟರ ವಾಹನ ಬಂದಿದ್ದು ಅದರಲ್ಲಿ ಮರಳು ಇರುವುದನ್ನು ನೋಡಿ ಕೈ ಮಾಡಿ ನಿಲ್ಲಿಸಿ ತಪಾಸಣೆ ಮಾಡಿದಾಗ ಅದರಲ್ಲಿ ಮರಳು ತುಂಬಿರುವುದು ಕಾಣಿಸುತ್ತಿದ್ದು ಸದರಿಯವರಿಗೆ ಮರಳನ್ನು ಎಲ್ಲಿಂದ ತುಂಬಿಕೊಂಡು ಬಂದಿರುವಿರಿ. ಮತ್ತು ಅನುಮತಿ ಪತ್ರ ತೋರಿಸಿರಿ ಎಂದು ಕೇಳಿದಾಗ ಅವರು ಯಾವುದೇ ಪರವಾನಿಗೆ ಇರುವುದಿಲ್ಲ ಓಜನಹಳ್ಳಿ ಗ್ರಾಮದ ಹಿರೇಹಳ್ಳದ ಹತ್ತಿರ ಮರಳನ್ನು ತುಂಬಿಕೊಂಡು ಗದಗ ಕಡೆಗೆ ರಸ್ತೆಯಲ್ಲಿ ಯಾರಾದರು ಕೇಳಿದರೆ ಮರಳನ್ನು ಮಾರಾಟ ಮಾಡಲು ಹೊರಟಿರುವುದಾಗಿ ತಿಳಿಸಿದರು. ಆಗ ಸದರಿಯವರ ಹೆಸರು ವಿಳಾಸ ಕೇಳಲಾಗಿ ಟ್ರ್ಯಾಕ್ಟರ ಚಾಲಕನು ತನ್ನ ಹೆಸರು, ಶಿವಾನಂದ ತಂದೆ ರಾಮಪ್ಪ ಜಡಿ. ವಯ: 25, ಜಾ: ಕುರುಬರ, ಉ: ಟ್ರ್ಯಾಕ್ಟರ ಚಾಲಕ, ಸಾ: ಅಡವಿಸೋಮಾಪೂರ. ತಾ:ಜಿ: ಗದಗ. ಅಂತಾ ಹೇಳಿದ್ದು, ಇನ್ನೊಬ್ಬ ಲೇಬರ್ ತನ್ನ ಹೆಸರು ದುಶ್ಯಂತ ತಂದೆ ಆನಂದಪ್ಪ ಜಡಿ. ವಯ: 28, ಜಾ: ಕುರುಬರ, ಉ: ಕೂಲಿಕೆಲಸ, ಸಾ: ಅಡವಿಸೋಮಾಪೂರ. ತಾ:ಜಿ: ಗದಗ. ಅಂತಾ ಹೇಳಿದ್ದು ಇರುತ್ತದೆ. ಟ್ರ್ಯಾಕ್ಟರ ಇಂಜನ್ ನಂಬರ: 39.1357/SWH10507. ಹಾಗೂ ಟ್ರೇಲರ್ ನಂ: ಕೆಎ-26/ಟಿ-2403 ಅಂತಾ ಇರುತ್ತದೆ. ಸದರಿ ಮರಳು ಸುಮಾರು 5,000=00 ರೂ. ಬೆಲೆಬಾಳುತ್ತದೆ. ಸದರಿ ಆರೋಪಿತರಿಗೆ ವಶಕ್ಕೆ ತೆಗೆದುಕೊಂಡು ಜಪ್ತಿ ಪಂಚನಾಮೆ ಜರುಗಿಸಿದ್ದು ಅದೆ. ಸದರಿಯವರು ಅಕ್ರಮವಾಗಿ ಮರಳನ್ನ [ಉಸುಕು] ಕಳ್ಳತನ ಮಾಡಿಕೊಂಡು ಟ್ರ್ಯಾಕ್ಟರ ಮೂಲಕ ಸಾಗಾಟ ಮಾಡುತ್ತಿದ್ದರಿಂದ ಸದರಿ ಟ್ರ್ಯಾಕ್ಟರ ಚಾಲಕ ಮತ್ತು ಲೇಬರ್ ಮೇಲೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 70/2017 ಕಲಂ: 279, 338 ಐ.ಪಿ.ಸಿ. ಹಾಗೂ 187 ಐ.ಎಂ.ವಿ. ಕಾಯ್ದೆ..
ದಿ:15-04-2017 ರಂದು ರಾತ್ರಿ 9-15 ಗಂಟೆಗೆ ಜಿಲ್ಲಾ ಆಸ್ಪತ್ರೆಯಿಂದ ಎಮ್.ಎಲ್.ಸಿ ಬಂದಿದ್ದು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಪೈಕಿ ಮಲ್ಲೇಶ ಬಂಡಾ ಸಾ: ಕಿನ್ನಾಳ ಇವರ ಹೇಳಿಕೆ ಫಿರ್ಯಾದಿಯನ್ನು ಪಡೆದುಕೊಂಡಿದ್ದು ಸಾರಾಂಶವೇನೆಂದರೇ, ದಿ:15-04-2017 ರಂದು ರಾತ್ರಿ 8-50 ಗಂಟೆಯ ಸುಮಾರಿಗೆ ತನ್ನ ಸ್ನೇಹಿತ ಶ್ರೀನಿವಾಸ ತಂದೆ ಮಲ್ಲೇಶಪ್ಪ ಹೊನ್ನಾಲಿ. ಸಾ: ಕಿನ್ನಾಳ ಇತನು ತನ್ನ ಟಿವಿಎಸ್. ಮೋ/ಸೈ ನಂ: ಕೆಎ-37/ಕ್ಯೂ-6275 ನೇದ್ದನ್ನು ಓಡಿಸಿಕೊಂಡು ಕಿನ್ನಾಳ ಕಡೆಗೆ ಹೊರಟಿದ್ದಾಗ ಕೋಳಿ ಫಾರ್ಮ ಹತ್ತಿರ ಕಿನ್ನಾಳ ಕಡೆಯಿಂದ ಎದುರುಗಡೆ ಆಟೋ ನಂ:ಕೆಎ-26/ಎ-2280 ನೇದ್ದರ ಚಾಲಕನು ತನ್ನ ವಾಹನವನ್ನು ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದಾ ಓಡಿಸುತ್ತಾ ಬಂದು ಮೋಟಾರ ಸೈಕಲ್ ಗೆ ಟಕ್ಕರ ಕೊಟ್ಟು ಅಪಘಾತ ಮಾಡಿ ಓಡಿ ಹೋಗಿದ್ದು ಇರುತ್ತದೆ. ಸದರಿ ಶ್ರೀನಿವಾಸನಿಗೆ ತಲೆಗೆ ಭಾರಿ ರಕ್ತಗಾಯವಾಗಿದೆ. ಕಾರಣ ಅಪಘಾತ ಮಾಡಿದ ಆಟೋ ಚಾಲಕನಿಗೆ ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ದೂರನ್ನು ಪಡೆದುಕೊಂಡು, ವಾಪಾಸ್ ಠಾಣೆಗೆ ರಾತ್ರಿ 10-00 ಗಂಟೆಗೆ ಬಂದು ಸದರಿ ದೂರಿನ ಮೇಲಿಂದ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008