1] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 80/2017
ಕಲಂ: 306 ಸಹಿತ
34 ಐ.ಪಿ.ಸಿ:.
ನನ್ನ ತವರುಮನೆ ಹೈದ್ರಾಬಾದ್ ಇದ್ದು, ಈಗ್ಗೆ
6 ವರ್ಷಗಳ ಹಿಂದೆ ಬಂಡಿಬಸಪ್ಪ ಕ್ಯಾಂಪಿನ ಕುಮಾರಸ್ವಾಮಿ. ಆರ್.ಕೆ. ತಂದೆ ಕೃಷ್ಣಪ್ಪ-35 ವರ್ಷ ಈತನೊಂದಿಗೆ
ಮದುವೆಯಾಗಿದ್ದು ಇರುತ್ತದೆ. ನನ್ನ ಗಂಡನ ಸಹೋದರಿಯಾದ ಲಕ್ಷ್ಮೀ ಈಕೆಯು ತನ್ನ ಗಂಡನ ಜೊತೆ ಸೇರಿಕೊಂಡು
ನಮ್ಮ ಮನೆಯನ್ನು ನನಗಾಗಲೀ, ನನ್ನ ಗಂಡನಿಗಾಗಲೀ ತಿಳಿಸದೇ ತಮ್ಮ ಹೆಸರಿಗೆ ಮಾಡಿಕೊಂಡ ನಂತರ ದಿನಗಳಿಂದ
ನನ್ನ ಗಂಡನಿಗೆ ಆತನ ಅಕ್ಕ ಲಕ್ಷ್ಮೀ ಮತ್ತು ಆಕೆಯ ಗಂಡನಾದ ಯಮನೂರಪ್ಪ ತಂದೆ ಈರಪ್ಪ ಇವರು ಆಸ್ಥಿಯ
ವಿಷಯದಲ್ಲಿ ಕಿರುಕುಳ ನೀಡಿದರೆ ಮನೆ ಬಿಟ್ಟು ಹೋಗುತ್ತಾನೆ ಅಂತಾ ಆಗಾಗ್ಗೆ ನನ್ನ ಗಂಡನಿಗೆ ತೊಂದರೆ
ಮಾಡುತ್ತಿದ್ದರಿಂದ ಹಾಗೂ ಆತನ ಪಾಲಿಗೆ ಬರುವ ಜಮೀನು ಸಹ ತಮ್ಮ ಹೆಸರಿಗೆ ಮಾಡಿಕೊಳ್ಳುವ ಉದ್ದೇಶದಿಂದ
ತೊಂದರೆ ಕೊಟ್ಟಿದ್ದರಿಂದಲೇ ನನ್ನ ಗಂಡನು ಅವರ ಕಿರುಕುಳ ತಾಳಲಾರದೇ ದಿನಾಂಕ:- 05-04-2017 ರಂದು
ಬೆಳಗಿನಜಾವ 05:00 ಗಂಟೆಯಿಂದ ಮಧ್ಯಾಹ್ನ 12:30 ಗಂಟೆಯ ಅವಧಿಯಲ್ಲಿ ವಾಸದ ಮನೆಯಲ್ಲಿ ತನ್ನ ಲುಂಗಿಯಿಂದ
ಕಬ್ಬಿಣದ ಯಾಂಗ್ಲರಿಗೆ ಬಿಗಿದು ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ. ನಾನು ಗರ್ಭವತಿ ಇದ್ದುದರಿಂದ
ಮುನಿರಾಬಾದನಲ್ಲಿ ನನ್ನ ಚಿಕ್ಕಪ್ಪನ ಮನೆಯಲ್ಲಿ ಇದ್ದು, ವಿಷಯ ತಿಳಿದು ಬಂದು ನೋಡಿ ದೂರು ನೀಡಿರುತ್ತೇನೆ.
ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 56/2017
ಕಲಂ: 341, 323, 324, 355, 504, 506 ಸಹಿತ 34 ಐ.ಪಿ.ಸಿ:.
ಫಿರ್ಯಾದಿದಾರರಾದ ಶ್ರೀ ಮಲ್ಲಿಕಾರ್ಜುನ ತಂದೆ ಚಂದ್ರಶೇಖರಪ್ಪಯತ್ನಟ್ಟಿ ವಯ 34 ವರ್ಷ ಜಾತಿ
ಲಿಂಗಾಯತ ಸಾ. ಹುಳ್ಕಿಹಾಳ ತಾ. ಗಂಗಾವತಿ
ಇವರು ಫಿರ್ಯಾದಿ ನೀಡಿದ್ದು ಮಲ್ಲಮ್ಮ ಗಂಡ ಪಂಪಾಪತಿ ಲಾದುಂಚಿ ಇವರು ಫಿರ್ಯಾದಿದಾರರ ಮನೆಯ ಮುಂದೆ ನೀರು ಚೆಲ್ಲುವ
ಮತ್ತು ದನಗಳನ್ನು ಕಟ್ಟಿ ಗಲೀಜು ಮಾಡುವ ವಿಷಯವಾಗಿ ಫಿರ್ಯಾದಿ ಮತ್ತು ಓಣಿಯ ಜನರು ಬುದ್ದಿವಾದ
ಆಕೆಗೆ ಬುದ್ದಿವಾದ ಹೇಳಿದರೂ ಕೇಳದೇ ಅದನ್ನೆ ಮುಂದುವರಿಸಿದ್ದು ಇರುರತ್ತದೆ. ಇದೇ ವಿಷವಾಗಿ
ನಿನ್ನೆ ದಿವಸ ದಿನಾಂಕ 04-04-2017 ಮದ್ಯಾಹ್ನ 3-00 ಗಂಟೆ ಸುಮಾರಿಗೆ ಫಿರ್ಯಾದಿದಾರರು ತಮ್ಮ
ಮನೆಯವರೊಂದಿಗೆ ತಮ್ಮ ಮನೆಯ ಮುಂದೆ ಕುಳಿತುಕೊಂಡಿದ್ದಾಗ ನಮೂದು ಮಾಡಿದ ಆರೋಪಿತರಾದ 1)
ನಾಗರಡ್ಡೆಪ್ಪ ತಂದೆ ಈಶಪ್ಪ ಕನ್ಯಾಳ ಹಾಗೂ 2) ಶರಣಪ್ಪ ತಂದೆ ಪಂಪಾಪತಿ ಹಾಗೂ 3) ಮಲ್ಲಮ್ಮ ಗಂಡ
ಪಂಪಾಪತಿ ಲಾದುಂಚಿ ರವರು ಪಿರ್ಯಾದಿದಾರರೊಂದಿಗೆ ಜಗಳ ತಗೆದು ಶರಣಪ್ಪ ಲಾದುಂಚಿ ಈತನು
ಫಿರ್ಯಾದಿದಾರರು ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಎಲ್ಲರೂ ಕೂಡಿ ಅವಾಚ್ಯವಾಗಿ ಬೈದು, ನಾಗರಡ್ಡೆಪ್ಪ
ಈತನು ಕಟ್ಟಿಗೆಯಿಂದ ಫಿರ್ಯಾದಿ ತಲೆಗೆ ಹೋಡೆದು ಗಾಯಗೊಳಿಸಿದ್ದು ಅಲ್ಲದೆ ಜಗಳ ಬಿಡಿಸಲು ಬಂದು
ಫಿರ್ಯಾದಿ ಹೆಂಡತಿ ರೂಪಾ ಇವರಿಗೆ ಮಲ್ಲಮ್ಮ ಈಕೆಯು ಕೈಯಿಂದ ಹೊಡೆದಿದ್ದು ಅಲ್ಲದೆ ಚಪ್ಪಲಿಯಿಂದ
ಹೊಡೆಬಡಿ ಮಾಡಿ ದುಖಃಪಾತಗೊಳಿಸಿದ್ದು, ಸದರಿ ಘಟನೆಯ ನಂತರ ಕಾರಟಗಿ ಸರಕಾರಿ ಆಸ್ಪತ್ರೆಗೆ ಬಂದು
ಇಲಾಜುಪಡಿಸಿಕೊಂಡು ಊರಿನ ಗುರುಹಿರಿಯರೊಂದಿಗೆ ವಿಚಾರಿಸಿ ಈಗ ಬಂದು ಸದರಿ ಮೇಲ್ಕಾಣಿಸಿದ 3 ಜನರ
ವಿರುದ್ದ ಸೂಕ್ತ ಕಾನೂನು ಕ್ರಮಕ್ಕೆ ವಿನಂತಿ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ
ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.
0 comments:
Post a Comment