Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Saturday, April 8, 2017

1] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 82/2017 ಕಲಂ: 78 (3) Karnataka Police Act.
ದಿ:-07-04-2017 ರಂದು ಸಂಜೆ 5:00 ಗಂಟೆಗೆ ಗಂಗಾವತಿ ಗ್ರಾಮೀಣ ಠಾಣಾ ವ್ಯಾಪ್ತಿಯ ವೆಂಕಟಗಿರಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆಯುತ್ತಿದೆ ಅಂತಾ ಖಚಿತವಾದ ಮಾಹಿತಿ ಬಂದಿದ್ದು, ಶ್ರೀ ಪ್ರಕಾಶ ಮಾಳಿ ಪಿ.ಎಸ್.ಐ. ಹಾಗೂ ಸಿಬ್ಬಂದಿಯವರಾದ ಪಿ.ಸಿ. ನಂ: 160, 129 ಹೆಚ್.ಸಿ. 173, ಎ.ಎಸ್.ಐ. ಶ್ರೀ ಸಣ್ಣ ಬಸಪ್ಪ ಹೂಗಾರ ದಾಳಿ ಮಾಡಲಾಗಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಗೆ ಕೂಗಿ ಕರೆದು 1-00 ರೂಪಾಯಿಗೆ 80-00 ರೂಪಾಯಿ ಕೊಡುತ್ತೇವೆ ಅದೃಷ್ಟದ ಮಟಕಾ ಅಂಕಿಗಳ ಮೇಲೆ ಹಣವನ್ನು ಪಣಕ್ಕೆ ಹಚ್ಚಿರಿ ಅಂತಾ ಜನರನ್ನು ಕರೆಯುತ್ತಿದ್ದು, ಇನ್ನೊಬ್ಬ ವ್ಯಕ್ತಿ ಕುಳಿತು ಜನರಿಂದ ಹಣ ಪಡೆದುಕೊಂಡು ಮಟಕಾ ಅಂಕಿ ಸಂಖ್ಯೆಗಳ ಮೇಲೆ ಪಣಕ್ಕೆ ಹಚ್ಚಿಸಿಕೊಂಡು ಅವರಿಗೆ ಮಟ್ಕಾ ಚೀಟಿಗಳನ್ನು ಬರೆದುಕೊಡುತ್ತಾ, ಪಟ್ಟಿಯನ್ನು ಬರೆದುಕೊಳ್ಳುತ್ತಾ ಅದೃಷ್ಠದ ಮಟಕಾ ಜೂಜಾಟದಲ್ಲಿ ತೊಡಗಿದ್ದು, ಅವರನ್ನು ಹಿಡಿದು ವಿಚಾರಿಸಲಾಗಿ ತನ್ನ ಹೆಸರು (1) ಮಲ್ಲಿಕಾರ್ಜುನ ರಾಮಣ್ಣ ವಯಸ್ಸು 25 ವರ್ಷ, ಜಾತಿ: ಮಡಿವಾಳ ಉ: ಕಿರಾಣಿ ಅಂಗಡಿ ಸಾ: ವೆಂಕಟಗಿರಿ  ಅಂತಾ ತಿಳಿಸಿದನು.  ಮಟಕಾ ಪಟ್ಟಿ ಬರೆಯುತ್ತಿದ್ದವನು ತನ್ನ ಹೆಸರು (2) ಪರಸಪ್ಪ ತಂದೆ ಹನುಮಂತಪ್ಪ, ಜಾತಿ: ಮಡಿವಾಳರು, ವಯಸ್ಸು 35 ವರ್ಷ, ಉ: ಕಿರಾಣಿ ಅಂಗಡಿ ಸಾ: ವೆಂಕಟಗಿರಿ ಅಂತಾ ತಿಳಿಸಿದ್ದು, ಆತನ ಹತ್ತಿರ ಮಟಕಾ ಜೂಜಾಟದ ನಗದು ಹಣ ರೂ. 690/- ರೂಪಾಯಿ, ಒಂದು ಮಟಕಾ ಪಟ್ಟಿ, ಒಂದು ಬಾಲ್ಪೆನ್ನು ದೊರೆಯಿತು. ಅವರಿಗೆ ಮಟಕಾ ಪಟ್ಟಿಯನ್ನು ಯಾರಿಗೆ ಕೊಡುತ್ತೀರಾ ? ಅಂತಾ ವಿಚಾರಿಸಲು ಅವರು ಪಟ್ಟಿಯನ್ನು ಬುಕ್ಕಿಯಾದ (3) ವಿಶ್ವನಾಥ @ ತಾತ ತಂದೆ ಸಂಗಯ್ಯ ಮಲ್ಲದಗುಡ ಸಾ: ಕನಕಗಿರಿ ಎಂಬಾತನಿಗೆ ಕೊಡುವುದಾಗಿ ತಿಳಿಸಿದ್ದು ಈ ಬಗ್ಗೆ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ. 
2] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 57/2017 ಕಲಂ: 341, 323, 504, 506, 34 IPC.
ದಿನಾಂಕ:-07-04-2017 ರಂದು ಮದ್ಯಾಹ್ನ 2-50 ಗಂಟೆಗೆ ಪಿರ್ಯಾದಿ ಎನ್. ಕೃಷ್ಣಾ ತಂದೆ ರತ್ನಯ್ಯ ನೆಲದ್ದವಲು ವಯಾ-58 ವರ್ಷ ಜಾ. ಕಮ್ಮಾ ಉ-ಒಕ್ಕುತನ ಸಾ. 5 ನೇ ವಾರ್ಡ ಮರ್ಲಾನಹಳ್ಳಿ ತಾ. ಗಂಗಾವತಿ ಇವರು ಠಾಣೆಗೆ ಹಾಜರಾಗಿ ಒಂದು ದೂರನ್ನೆ ಹಾಜರು ಪಡಿಸಿದ್ದು ಸದ್ರಿ ದೂರಿನಲ್ಲಿ ನಮೂದು ಮಾಡಿದ ಆರೋಪಿ 1) ಮಂಜುನಾಥ ಶೆಟ್ಟಿ ತಂದಿ ಶ್ರೀನಿವಾಸ ಶೆಟ್ಟಿ ಸಾ. ಮರ್ಲಾನಹಳ್ಳಿ 2) ಶಶಿಧರರೆಡ್ಡಿ ಗುಂಡೂರು ಕಾರಟಗಿ ಕೇನಾರ್ ಬ್ಯಾಂಕ್ ಉದ್ಯೋಗಸ್ಥ 3)  ವಿನಯ ತಂದಿ ಶರಣಪ್ಪ ಬಾವಿ ಸಾ. ಸಿದ್ದಾಪೂರ ಇವರು ಪಿರ್ಯಾದಿದಾರರ ಮಗನಾದ ನರೇಶನಿಗೆ ಕರದುಕೊಂಡು ಹೋಗಿ ಪಿರ್ಯಾದಿದಾರರಿಗೆ ಏನು ಮಾಹಿತಿ ನೀಡಿದ ನರೇಶನಿಗೆ ಒಟ್ಟು ರೂ. 91 ಲಕ್ಷದಷ್ಟು ಬಡ್ಡಿ ಸಾಲ ಕೊಟ್ಟು ಆ ಸಾಲದ ಹಣದ ಮರುಪಾವತಿಯ ಸಲುವಾಗಿ ಪಿರ್ಯಾದಿದಾರರ ಮಗನಿಗೆ ಕಿರುಕುಳ ಕೊಟ್ಟು ಪಿರ್ಯಾದಿದಾರರ ಹೆಸರಿನಲ್ಲಿ ಜಾಲ್ಯಾಳ ಕ್ಯಾಂಪಿನಲ್ಲಿ ಪರ್ಟಿಲೈಸರ್ ಅಂಗಡಿಯಲ್ಲಿ ಸುಮಾರು 15 ಲಕ್ಷ ರೂ.ಗಳಷ್ಟು ಪರ್ಟಿಲೈಸರ್ ಮಾಲುಗಳನ್ನು ಪಡೆದುಕೊಂಡು ದಿನಾಂಕ:-21-03-2017 ರಂದು ರಾತ್ರಿ 8-00 ಗಂಟೆಯ ಸುಮಾರಿಗೆ ಪಿರ್ಯಾದಿದಾರರ ಅಂಗಡಿಯ ಹತ್ತಿರ ಆರೋಪಿತರು ಬಂದು ಪಿರ್ಯಾದಿದಾರರಿಗೆ ತಡೆದು ನಿಲ್ಲಿಸಿ ಅವಾಚ್ಯ ಶಭ್ದಗಳಿಂದ ಬೈದು ಕೈಮೈಮುಟ್ಟಿ ಎಳೆದಾಡಿ ನಿನ್ನ ಮಗ ಕ್ರಿಕೇಟ್ ಬೆಟಿಂಗ್ ಮತ್ತು ಇಸ್ಪೀಟ್ ಸಲುವಾಗಿ ಸಾಲ ಪಡೆದುಕೊಂಡು ಸೋತಿದ್ದು ನಿನ್ನ ನಾವು ಮಗನಿಂದ ಖಾಲಿ ಚೆಕ್ ಮತ್ತು ಪ್ರಾಮೀಸರಿ ನೋಟ್ ಪಡೆದುಕೊಂಡಿರುತ್ತೇವೆ ನಿಮ್ಮನ್ನು ಕೋರ್ಟಿಗೆ ಎಳೆದು ನಿಮ್ಮ ಆಸ್ತಿಯನ್ನು ಬರೆಯಿಸಿಕೊಳ್ಳುತ್ತೇವೆ ಅಂತಾ ಜೀವ ಬೆದರಿಕೆ ಹಾಕಿದ್ದು ಅಲ್ಲದೇ ಇಲ್ಲಿಯವರೆಗೆ ಸಾಲದ ಮರುಪಾವತಿಗಾಗಿ ಅಂಗಡಿಯ ಹತ್ತಿರ ಮತ್ತು ಮನೆಯ ಹತ್ತಿರ ಬಂದು ಕಿರುಕುಳಕೊಡುತ್ತಿದ್ದಾರೆ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಗಂಗಾವತಿ ನಗರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 07/2017 ಕಲಂ: 174 ಸಿ.ಆರ್.ಪಿ.ಸಿ.
ದಿನಾಂಕ 07-04-2017 ರಂದು 05-00 ಎ.ಎಂ.ಕ್ಕೆ ಡಿ.ಶಾಂತಪ್ಪ ತಂದೆ ದಿ:ಬಸವನಗೌಡ ದಾನನಗೌಡ್ರು ವಯಸ್ಸು 41 ವರ್ಷ ಜಾ:ಲಿಂಗಾಯತ ಉ: ವ್ಯವಸಾಯ ಸಾ: ಗೆಣಿಕಿಹಾಳ್ ತಾ:ಜಿ: ಬಳ್ಳಾರಿ ರವರು ಠಾಣೆಗೆ ಬಂದು ತಮ್ಮದೊಂದು ಫಿರ್ಯಾದಿ ನೀಡಿದ್ದು ಅದರ ಸಾರಂಶವೇನೆಂದರೆ, ಫಿರ್ಯಾಧಿದಾರರ ತಮ್ಮನಾದ ಡಿ.ದೊಡ್ಡನಗೌಡ ಇತನು ಹುಬ್ಬಳ್ಳಿಯಲ್ಲಿಯ ಖಾಸಗಿ ಕಾಲೇಜದಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡಿಕೊಂಡಿದ್ದು ಹಾಗೂ ಪಿ.ಹೆಚ್.ಡಿ. ಮಾಡಿಕೊಂಡಿದ್ದು, ತನಗೆ ಸರಕಾರಿ ನೌಕರಿ ಸಿಗಲಿಲ್ಲವೆಂದು ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ದಿನಾಂಕ 06-04-2017 ರಂದು ಬೆಳಿಗ್ಗೆ 8-30 ಗಂಟೆಯಿಂದ ಮಧ್ಯಾಹ್ನ 12-30 ಗಂಟೆಯ ಮಧ್ಯದ ಅವಧಿಯಲ್ಲಿ ಫಿಯರ್ಾದಿದಾರರ ಸಹೋದರನಾದ ದೊಡ್ಡನಗೌಡ ಇತನು ಗಂಗಾವತಿ ನಗರದ ಜುಲಾಯಿನಗರದಲ್ಲಿರುವ ಸ್ವಾಗತ್ ಲಾಡ್ಜ ಹತ್ತಿರ ಕ್ರಿಮಿನಾಶಕ ಔಷಧಿಯನ್ನು ಸೇವನೆ ಮಾಡಿದ್ದು, ಚಿಕಿತ್ಸೆ ಕುರಿತು ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದಾಗ ದಿ: 06-04-2017 ರಂದು ರಾತ್ರಿ 8-30 ಗಂಟೆಗೆ ಮೃತಪಟ್ಟಿದ್ದು, ತನ್ನ ತಮ್ಮನ ಮರಣದಲ್ಲಿ ಯಾವುದೇ ರೀತಿಯ ಸಂಶಯ ಇರುವುದಿಲ್ಲವೆಂದು ವಗೈರೆ ಆಗಿ ನೀಡಿದ ಫಿರ್ಯಾಧಿ ಮೇಲಿಂದ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008