1] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 44/2017
ಕಲಂ: 96(ಬಿ)
ಮತ್ತು (ಸಿ) Karnataka Police Act.
ದಿನಾಂಕ 10-04-2017
ರಂದು ರಾತ್ರಿ 09-15 ಗಂಟೆಗೆ ಪಿಸಿ 226 ನಿಸಾರ್ ಅಹ್ಮದ್ ಇವರು ನೀಡಿದ ವರದಿಯಲ್ಲಿ ಇಂದು ರಾತ್ರಿ 08-15 ಗಂಟೆಗೆ ನಗರದ ಬಿ.ಟಿ ಪಾಟೀಲ್ ನಗರದಲ್ಲಿ ತಿರುಗಾಡುತ್ತಿದ್ದಾಗ ಬಿ.ಟಿ ಪಾಟೀಲ್ ನಗರದ
ಅರಿಹಂತ ಕಂಪ್ಯೂಟರ್ಸ್ ಹತ್ತಿರ ಒಬ್ಬನು ನಮ್ಮನ್ನು ನೋಡಿ ಕತ್ತಲಲ್ಲಿ ತನ್ನ ಇರುವಿಕೆಯನ್ನು
ಮರೆಮಾಚುವ ಉದ್ದೇಶದಿಂದ ತನ್ನ ಮುಖ ಮುಚ್ಚಿಕೊಂಡು ಕತ್ತಲಲ್ಲಿ ಅವಿತುಕೊಂಡಿರುವುದು
ಕಂಡುಬಂದಿದ್ದು,
ಆಗ ನಾನು ಅವನನ್ನ ನೋಡಿದ್ದು, ನನಗೆ ಅವನ ಮೇಲೆ ಸಂಶಯ ಬಂದು, ಕೂಡಲೇ ನಾನು ಅವನನ್ನು
ಹಿಡಿಯಲು ಹೋದಾಗ ಅವನು ನನ್ನನ್ನು ನೋಡಿ ಪೊಲೀಸ್ರು ಅಂತಾ ಗುರುತಿದಿ ಓಡಿ ಹೊರಟಿದ್ದು, ಆಗ ನಾನು ಅವನನ್ನು ಬೆನ್ನತ್ತಿ ಹಿಡಿದುಕೊಂಡೇನು, ಆಗ ನಾನು ಇವನನ್ನು ವಿಚಾರಿಸಲಾಗಿ ಅವನು ತನ್ನ ಹೆಸರನ್ನು ತಪ್ಪುತಪ್ಪಾಗಿ ಹೇಳಿದ್ದು ಮೇಲಿಂದ
ಮೇಲೆ ವಿಚಾರಿಸಲಾಗಿ ತನ್ನ ಹೆಸರು ಸಿರಾಜ್ಖಾನ್ ತಂದೆ ರಸೂಲ್ಖಾನ ಕುಡುಕ ವಯಾ: 19 ವರ್ಷ ಜಾ: ಮುಸ್ಲಿಂ ಉ: ಕೂಲಿಕೆಲಸ ಸಾ: ವಿಜಯ ಟಾಕೀಸ್ ಹಿಂದೆ ಹೊಸಪೇಟೆ ಜಿ: ಬಳ್ಳಾರಿ.
ಅಂತಾ ಹೇಳಿದ್ದು ನಂತರ ನಾನು ಅವನಿಗೆ ರಾತ್ರಿ ವೇಳೆಯಲ್ಲಿ ಅಲ್ಲಿದ್ದ ಬಗ್ಗೆ ವಿಚಾರಿಸಲು ಅವನು
ಸಮರ್ಪಕವಾದ ಉತ್ತರ ಕೊಡಲಿಲ್ಲಾ, ಸದರಿಯವನನ್ನು ಹಾಗೆಯೇ
ಬಿಟ್ಟಲ್ಲಿ ರಾತ್ರಿ ವೇಳೆಯಲ್ಲಿ ಯಾವುದಾದರೂ ಸ್ವತ್ತಿನ ಅಪರಾಧ ಮಾಡುವ ಸಂಭವ ಕಂಡುಬಂದಿದ್ದರಿಂದ
ಮುಂಜಾಗೃತೆ ಕುರಿತು ಸದ್ರಿಯವನನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಬಂದು ಪ್ರಕರಣ ದಾಖಲಿಸಿ
ತನಿಖೆ ಕೈಗೊಂಡೆನು.
2] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ: 61/2017
ಕಲಂ: 341, 34 IPC.
ದಿನಾಂಕ 10-04-2017 ರಂದು ಸಂಜೆ 6-30 ಗಂಟೆಗೆ ಫಿರ್ಯಾಧಿದಾರರಾದ ನಾನು ಚಿಲಕೂರಿ ಸೂರ್ಯನಾರಾಯಣ ತಂದೆ ಕೃಷ್ಣಮೂರ್ತಿ ಸಾ: ಗಂಗಾವತಿ, ರವರು ಫಿರ್ಯಾದಿ ನೀಡಿದ್ದು, ನಾನು ಎನ್.ಅರ್. ಇಂಡಸ್ಟ್ರೀಜ್
ಪಾಲಿದಾರನಿದ್ದು ನೆಲ್ಲಿನ ಮತ್ತು ಅಕ್ಕಿಯ ವ್ಯಾಪಾರವನ್ನು ಮಾಡುತ್ತಿರುತ್ತೇನೆ. ದಿನಾಂಕ:
10-04-2017 ರಂದು ಮುಂಜಾನೆ 9-00 ಗಂಟೆ ಸುಮಾರಿಗೆ ವಡ್ಡರ ಹಟ್ಟಿ ಗ್ರಾಮದ ಗೋಡಾನ್ ನಿಂದ ಲಾರಿ ನಂಬರು:
ಕೆಎ-37-5989 ಮೂಲಕ ನಮ್ಮ ಮಿಲ್ಲಿನ ನೆಲ್ಲು ತರಿಸಲು ಹೋಗಿದ್ದಾಗ ಅರೋಪಿ ಸಿಂಗನಾಳ ಸುರೇಶ ಮತ್ತು
ಪ್ರಾಣೇಶ ಹಾಗೂ ಅವರ ಕೆಲ ಬೆಂಬಲಿಗರು, ಗುಂಡಾ ಜನರು ಬಂದು ಅಕ್ರಮವಾಗಿ ನಮ್ಮ ಲೋಡ ಗಾಡಿ ಲಾರಿಯನ್ನು
ತಡೆಗಟ್ಟಿ ಅಕ್ರಮವಾಗಿ ತಮ್ಮ ಸ್ವಾದೀನದಲ್ಲಿ ತೆಗೆದುಕೊಂಡು ಹೋಗಿರುತ್ತಾರೆ. ವಿಚಾರಿಸಲು ಲಾರಿಯನ್ನು
ಬಿಡುವುದಿಲ್ಲ ಅಂದು ಏನು ಮಾಡಿಕೊಳ್ಳುತ್ತಿರಾ ಮಾಡಿಕೊಳ್ಳಿ ಎಂದು ಉದ್ದಟತನದಿಂದ ಹೇಳುತ್ತಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ. ನಂ. 62/2017 ಕಲಂ: 143, 341, 448, 504, 506 ಸಹಿತ 149 ಐ.ಪಿ.ಸಿ:
ದಿನಾಂಕ 10-04-2017 ರಂದು 9-30 ಪಿ.ಎಂ.ಕ್ಕೆ ರಾಜೇಂದ್ರ ತಂದೆ ಸೋಹನ್ ರಾಜ್ ಮೊತಾ, ವಯ 44 ವರ್ಷ, ಜಾತಿ:
ಜೈನ್, ಉ: ಅಕ್ಕಿ ವ್ಯಾಪಾರ, ಸಾ: ಪಂಪಾನಗರ ಗಂಗಾವತಿ ರವರು ಫಿರ್ಯಾದಿ ನೀಡಿದ್ದು, ದಿನಾಂಕ
10-04-2017 ರಂದು ಸಂಜೆ 4-00 ಗಂಟೆಯ ಸುಮಾರಿಗೆ ಗಂಗಾವತಿ ನಗರದ ಕಂಪ್ಲಿ ರಸ್ತೆಯಲ್ಲಿರುವ ಸರಸ್ವತಿ
ರೈಸ್ ಮಿಲ್ಲಿಗೆ ಮಹಾರಾಷ್ಟ್ರಕ್ಕೆ ಅಕ್ಕಿ ಲೋಡ ಕಳಿಸುವ ಸಲುವಾಗಿ ಹೊರ ರಾಜ್ಯದ ಲಾರಿ ಬಂದಿದ್ದು ಸದರಿ
ಲಾರಿಯಲ್ಲಿ ಲೋಡ ಮಾಡಬೇಕೆನ್ನುವಷ್ಟರಲ್ಲಿ ಆರೋಪಿತರಾದ 01] ಅನ್ವರ 02] ಪರಶುರಾಮ 03] ಪರಶೂರಾಮ ಕಂಪ್ಲಿ,
04]ದಾವಲಸಾಬ 05]ಬಸವರಾಜ ನಾಯಕ, 06] ಮಹಿಬೂಬ ಹಾಗೂ ಇತರರು ಕೂಡಿಕೊಂಡು ಅಕ್ರಮ ಕೂಟವನ್ನು ರಚಿಸಿಕೊಂಡು
ರೈಸ್ ಮಿಲ್ಲಿನಲ್ಲಿ ಅತಿ ಕ್ರಮ, ಪ್ರವೇಶಮಾಡಿ ಲೇ ಸೋಳೆ ಮಕ್ಕಳೇ ನಿಮಗೆಷ್ಟು ಸೊಕ್ಕು ನಮ್ಮ ಲಾರಿ
ಅಧ್ಯಕ್ಷರು ಲಾರಿಗಳನ್ನು ಲೋಡ ಮಾಡ ಬೇಡಿರಿ ಅಂತಾ ಹೇಳಿದರು ಸಹ ನೀವು ಲಾರಿಯಲ್ಲಿ ಅಕ್ಕಿಯನ್ನು ಲೋಡಮಾಡಲು
ಲಾರಿಯನ್ನು ತರಿಸಿರುವಿರಿ ಅಂತಾ ಮಿಲ್ಲಿನ ಮ್ಯಾನೇಜರ್ ಹಾಗೂ ಹಮಾಲರೊಂದಿಗೆ ಜಗಳ ಮಾಡಿದ್ದು, ಫಿರ್ಯಾದಿ
ಹಾಗೂ ಇತರರು ಹೋಗಿ ವಿಚಾರಿಸಲು ಅವರಿಗೆ ನಮ್ಮ ಅದ್ಯಕ್ಷರಾದ ಸುರೇಶ ಸಿಂಗನಾಳ ಮತ್ತು ಪ್ರಾಣೇಶ ಇವರು
ಗಂಗಾವತಿಯಲ್ಲಿ ನಮ್ಮ ಲಾರಿಗಳ ಬೇಡಿಕೆ ಇಡೆರುವವರೆಗೂ ಯಾವುದೇ ಲಾರಿಗಳನ್ನು ಚಾಲು,ಮಾಡಬಾರದೆಂದು ತಿಳಿಸಿರುತ್ತಾರೆಂದು
ಹೇಳಿದ್ದು ಇರುತ್ತದೆ ಫಿರ್ಯಾದಿದಾರರು ಸದರಿಯವರಿಗೆ ವಿನಂತಿಸಿದರು ಸಹ ಕೇಳದೆ ಜಗಳ ಮಾಡಿ ಲೇ ಸೋಳೆ
ಮಕ್ಕಳೆ ನೀವು ಲಾರಿಯನ್ನು ಹೇಗೆ ಲೋಡ ಮಾಡುತ್ತಿರಿ ನಾವು ನೋಡಿಕೊಳ್ಳುತ್ತೇವೆ ಲಾರಿಯನ್ನು ಲೋಡ ಮಾಡಿ
ಕಳಿಸಿದರೆ ನಿಮಗೆ ಜೀವ ಸಹಿತಾ ಉಳಿಸುವುದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ. ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
0 comments:
Post a Comment