Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Saturday, April 29, 2017

1] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 98/2017 ಕಲಂ: 87 Karnataka Police Act.
ದಿನಾಂಕ :28-04-2017 ರಂದು ಮದ್ಯಾಹ್ನ 4-30 ಗಂಟೆ ಸುಮಾರಿಗೆ ಗಂಗನಾಳ ಗ್ರಾಮದ ಬಸರಿಕಟ್ಟೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಂದರಬಾಹರ ಎಂಬ ಇಸ್ಪಿಟ್ ಜೂಜಾಟ ನಡೆದಿದೆ ಅಂತಾ ತಿಳಿದು ಬಂದಿದ್ದು ಪಿ.ಎಸ್.ಐ ಕುಷ್ಠಗಿ ಪೊಲೀಸ ಠಾಣೆರವರು ತಮ್ಮ ಸಿಬ್ಬಂದಿ ಪಂಚರೊಂದಿಗೆ ಎಲ್ಲರೂ ಕೂಡಿ ಹೋಗಿ ರೇಡ್ ಮಾಡಿ 7 ಜನ ಆರೋಪಿತರು 1] ಬೀರಪ್ಪ ತಂದಿ ನಾಗಪ್ಪ ಕಂಬಳಿಹಾಳ ವಯ: 28 ವರ್ಷ ಜಾ: ಕುರುಬರ ಉ:ಒಕ್ಕಲುತನ ಸಾ: ತುರುವಿಹಾಳ ತಾ: ಸಿಂಧನೂರು. 2] ಹನಮೇಶ ತಂದಿ ದೊಡ್ಡಪ್ಪ ಮಾದಾಪೂರ ವಯಾ: 26 ವರ್ಷ ಜಾತಿ: ಕುರುಬರ ಉ: ಒಕ್ಕಲುತನ ಸಾ: ಮಾದಾಪೂರ ತಾ: ಕುಷ್ಟಗಿ. 3] ಶರಣಪ್ಪ ತಂದಿ ಶಂಕ್ರಪ್ಪ ಹುಣಸಿಹಾಳ ವಯಾ: 22 ವರ್ಷ ಜಾತಿ: ವಾಲ್ಮೀಕಿ ಉ: ಒಕ್ಕಲುತನ ಸಾ: ಹುಣಸಿಹಾಳ ತಾ: ಯಲಬುರ್ಗಾ 4] ಕರಿಯಪ್ಪ ತಂದಿ ಹನಮಪ್ಪ ಯಾಪಲದಿನ್ನಿ ವಯಾ: 26 ವರ್ಷ ಜಾ:ವಾಲ್ಮೀಕಿ ಉ:ಕೂಲಿಕೆಲಸ ಸಾ: ಗಂಗನಾಳ ತಾ: ಕುಷ್ಟಗಿ 5] ಶಂಕ್ರಪ್ಪ ತಂದಿ ಹನಮಪ್ಪ ಮ್ಯಾಗೇರಿ ವಯಾ: 23 ವರ್ಷ ಜಾತಿ: ವಾಲ್ಮೀಕಿ ಉ:ಕೂಲಿ ಕೆಲಸ ಸಾ: ಗಂಗನಾಳ ತಾ: ಕುಷ್ಟಗಿ 6) ಶರಣಪ್ಪ ತಂದಿ ಸಣ್ಣಹನಮಪ್ಪ ಶಾಖಾಪೂರ ವಯಾ: 40 ವರ್ಷ ಜಾ: ಕುರುಬರ ಉ:ಒಕ್ಕಲುತನ ಸಾ:ಹಿರೇಮನ್ನಾಪೂರ ತಾ: ಕುಷ್ಟಗಿ ಮತ್ತು 7) ಶರಣಪ್ಪ ತಂದಿ ಕರಿಯಪ್ಪ ಗಂಗನಾಳ ವಯಾ: 45 ವರ್ಷ ಜಾ: ಕುರುಬರ ಉ:ಕೂಲಿಕೆಲಸ ಸಾ: ಗುಮಗೇರಿ ತಾ: ಕುಷ್ಟಗಿ ಸಿಕ್ಕಿದ್ದು ಹಾಗೂ ಆರೋಪಿತರಿಂದ ಇಸ್ಪೆಟ್ ಜೂಜಾಟದ ಒಟ್ಟು ಹಣ 5390=00 ರೂ, ಹಾಗೂ 52 ಇಸ್ಪೆಟ್ ಎಲೆಗಳು ಹಾಗೂ ಒಂದು ಹಳೆ ನ್ಯೂಸ್ ಪೇಪರರನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 99/2017 ಕಲಂ: 32, 34, Karnataka Execise Act.
ದಿನಾಂಕ 28-04-2017 ರಾತ್ರಿ 8-00 ಗಂಟೆ ಸುಮಾರಿಗೆ ಕುಷ್ಟಗಿ ಬಸ್ ಸ್ಟಾಂಡ್ ಹತ್ತಿರ ಅನಧಿಕೃತವಾಗಿ ಸರಾಯಿ ಮಾರಾಟ ಮಾಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಕುಷ್ಟಗಿ ರವರು ಹಾಗೂ ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಹೋಗಿದ್ದು ಸಾರಾಯಿ ಮಾರಾಟ ಮಾಡುತ್ತಿದ್ದ ವ್ಯಕ್ತಿ ಸಿಕ್ಕಿ ಬಿದ್ದನು. ಸದರಿಯವನನ್ನು ವಿಚಾರಿಸಿ ಅವನ ಹತ್ತಿರ ಇದ್ದ ಸಾರಾಯಿ ಟೆಟ್ರಾಪ್ಯಾಕ್ ಗಳನ್ನು ಪರೀಶಿಲಿಸಿ ನೋಡಿ ಅವನ ಅಂಗ ಜಪ್ತಿ ಮಾಡಲಾಗಿ ಆತನ ಹೆಸರು ಶಿವಾನಂದ ತಂದೆ ಯಮನಪ್ಪ ಸೂಡಿ ವಯಾ 32 ವರ್ಷ ಜಾ.ಲಿಂಗಾಯತ ಉ.ಒಕ್ಕಲುತನ ಸಾ.ಹಿರೇಮನ್ನಾಪೂರ ಅಂತಾ ಹೇಳಿದ್ದು ಆತನ ಹತ್ತಿರ ಒಟ್ಟು 45 ಓಲ್ಡ ಟವರನ್  ಸಾರಾಯಿ ಟೆಟ್ರಾಪ್ಯಾಕ್ ಗಳು ಅಂ.ಕಿ. 2798=55 ರೂ, ಇದ್ದು ಹಾಗೂ ನಗದು ಹಣ 320=00 ರೂ ಗಳು ಸಿಕ್ಕಿದ್ದು, ಸದರಿಯವನಿಗೆ ಸಾರಾಯಿ ಮಾರಾಟ ಮಾಡಲು ಯಾವುದಾದರೂ ಲೈಸನ್ಸ ವಗೈರಾ ಇರುವ ಬಗ್ಗೆ ವಿಚಾರಿಸಲಾಗಿ ತಾನು ಯಾವುದೇ ಲೈಸನ್ಸ ವಗೈರಾ ಹೊಂದಿರುವದಿಲ್ಲ ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿರುವದಾಗಿ ಹೇಳಿದ್ದು, ಈ ಬಗ್ಗೆ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ: 84/2017 ಕಲಂ: 109 ಸಿ.ಆರ್.ಪಿ.ಸಿ.
ದಿನಾಂಕ 28-04-2017 ರಂದು 4-00 ಎ.ಎಂ.ಸುಮಾರಿಗೆ ಹಿಟ್ನಾಳ ಗ್ರಾಮ ಪಂಚಾಯತಿ ಹತ್ತಿರ ಒಬ್ಬನು ಪೊಲೀಸ್ ಜೀಪನ್ನು ನೋಡಿ ತನ್ನ ಇರುವಿಕೆಯನ್ನು ಮರೆ ಮಾಚಲು ಒಂದು ಅಂಗಡಿಯ ಹಿಂದೆ ಹೋಗಿ ಮರೆಮಾಚುತ್ತಿರಲು ಆಗ ಪಿ.ಎಸ್.ಐ. ಮುನಿರಾಬಾದ್ ಮತ್ತು ಸಿಬ್ಬಂದಿಯರು ಹೋಗಿ ಆತನಿಗೆ ಹಿಡಿದು ವಿಚಾರಿಸಲು ಆತನು ತಡವರಿಸುತ್ತಾ ತನ್ನ ಹೆಸರು ವಿಳಾಸವನ್ನು ತಪ್ಪು ತಪ್ಪಾಗಿ ಹೇಳಿದ್ದು ಪುನಃ ಆತನಿಗೆ ವಿಚಾರಿಸಲು ಆತನು ತನ್ನ ನಿಜವಾದ ಹೆಸರು ಹುಲಗಪ್ಪ ತಂ/ ಹನುಮಂತಪ್ಪ ಹೊಪಸೂರು 24 ವರ್ಷ ಜಾ: ಕುರುಬರ ಉ: ಕೂಲಿ ಕೆಲಸ ಸಾ: ಬೂದಗುಂಪಾ ಎಂದು ಹೇಳಿದ್ದು  ಸದರಿಯವನಿಗೆ ಹಾಗೆಯೆ ಬಿಟ್ಟಲ್ಲಿ ಯಾವುದಾದದರು ಸ್ವತ್ತಿನ ಅಪರಾಧವನ್ನು ಮಾಡುವ ಸಾದ್ಯತೆ ಇರುತ್ತೆ ಎಂಬ ಬಲವಾದ ಸಂಶಯವಿರುವದರಿಂದ ಆತನ ವಿರುದ್ದ ಮುಂಜಾಗ್ರತಾ ಕ್ರಮಾ ಕುರಿತು ಪ್ರಕರಣ ದಾಖಲಿಸಿ ಕೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008