1] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 121/2017 ಕಲಂ. 78(3) Karnataka Police Act.
ದಿನಾಂಕ 20-06-2017
ರಂದು ಸಂಜೆ 7-15 ಗಂಟೆಯ ಸುಮಾರಿಗೆ ಆರೋಪಿತನಾದ ಲೋಹಿತ್ ತಂದೆ ಯಮನಪ್ಪ ಗಿಟಗಿ,
ವಯಸ್ಸು 42 ವರ್ಷ, ಜಾ: ಕುರುಹಿನ ಶೆಟ್ಟಿ, ಉ: ಟೈಲರಿಂಗ್, ಸಾ: ನೀಲಕಂಠೇಶ್ವರ ಕ್ಯಾಂಪ್, ಗಂಗಾವತಿ
ಇವನು ಗಂಗಾವತಿ ನಗರದ ಹೊಸಳ್ಳಿ ರಸ್ತೆಯ ಬುದ್ಧ-ಬಸವ ಸರ್ಕಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ಸಾರ್ವಜನಿಕರನ್ನು ಕರೆದು ಸಾರ್ವಜನಿಕರಿಂದ ಹಣ
ಪಡೆದುಕೊಂಡು ಮಟ್ಕಾ ಚೀಟಿಯನ್ನು ಬರೆದುಕೊಡುತ್ತಾ ಮಟಕಾ ಜೂಜಾಟದಲ್ಲಿ ತೊಡಗಿರುವಾಗ ಸದರಿಯವನ ಮೇಲೆ
ಶ್ರೀ ರಾಜಕುಮಾರ ವಾಜಂತ್ರಿ ಪಿ.ಐ. ರವರು ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ದಾಳಿ ಸದರಿಯವನಿಗೆ ವಶಕ್ಕೆ ತೆಗೆದುಕೊಂಡು ಸದರಿಯವನಿಂದ ಮಟಕ ಜೂಜಾಟದಿಂದ ಸಂಗ್ರಹಿಸಿದ (1) ನಗದು ಹಣ ರೂ. 945-00. (2) ಮಟ್ಕಾ ನಂಬರ ಬರೆದ ಒಂದು ಪಟ್ಟಿ (03) ಒಂದು ಬಾಲ್ ಪೆನ್ನು ಇವುಗಳು ದೊರೆತಿದ್ದು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 115/2017 ಕಲಂ. 78(3) Karnataka Police Act.
ದಿನಾಂಕ:-20-06-2017 ರಂದು
ರಾತ್ರಿ 7-00 ಗಂಟೆಗೆ
ಸಿದ್ದಾಪೂರ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಮೂದು ಮಾಡಿದ ಆರೋಪಿತನು
ಮಟ್ಕಾ ಜೂಜಾಟದಲ್ಲಿ ತೊಡಗಿದ್ದಾಗ್ಗೆ ಪಂಚರ ಸಮಕ್ಷಮದಲ್ಲಿ ಎ.ಎಸ್.ಐ ನೀಲಪ್ಪ ರವರು ಮತ್ತು ಸಿಬ್ಬಂದಿಯವರು ದಾಳಿ ಮಾಡಲು ಮಟ್ಕಾ
ಜೂಜಾಟದಲ್ಲಿ ತೊಡಗಿದ್ದ ಆರೋಪಿತನಿಂದ ರೂ. 1150=00 ಗಳನ್ನು ಮತ್ತು ಮಟ್ಕಾ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡಿದ್ದು
ಇರುತ್ತದೆ. ನಂತರ ಮಟ್ಕಾ
ಪಟ್ಟಿ ಮತ್ತು ಹಣವನ್ನು ಯಾರಿಗೆ ಕೊಡುತ್ತಿ ಅಂತಾ ವಿಚಾರಿಸಲಾಗಿ ಆತನು ಮಟ್ಕಾ
ಪಟ್ಟಿ ಹಣವನ್ನು ಮಟ್ಕಾ ಬುಕ್ಕಿಯಾದ ಕೇಶಪ್ಪ ತಂದೆ ರಾಮಣ್ಣ ಸಾ. ಮಾರಿಕ್ಯಾಂಪ್ ಈತನಿಗೆ ಕೊಡುವುದಾಗಿ ತಿಳಿಸಿದನು ಅಂತಾ ನೀಡಿದ ವರದಿಯ
ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 116/2017 ಕಲಂ. 78(3) Karnataka Police Act.
ದಿನಾಂಕ:- 20-06-2017 ರಂದು
ರಾತ್ರಿ 9-35 ಗಂಟೆಗೆ ಶ್ರೀ
ದೀಪಕ್ ಆರ್. ಬೂಸರೆಡ್ಡಿ, ಸಿ.ಪಿ.ಐ ಸಾಹೇಬರು
ಗಂಗಾವತಿ ಗ್ರಾಮೀಣ ವೃತ್ತರವರು ಠಾಣೆಗೆ ಹಾಜರಾಗಿ ಮಟ್ಕಾ ಜೂಜಾಟದ ವರದಿ ಮೂಲ ಪಂಚನಾಮೆ ಮತ್ತು
ಮಾನ್ಯ ನ್ಯಾಯಾಲಯದ ಪರವಾನಿಗೆಯೊಂದಿಗೆ ಠಾಣೆಗೆ ಹಾಜರಾಗಿ ಕೊಟ್ಟ ವರದಿಯ ಸಾರಾಂಶದಲ್ಲಿ ಇಂದು
ದಿನಾಂಕ:-20-06-2017 ರಂದು
ರಾತ್ರಿ 8-00 ಗಂಟೆಗೆ
ಮೈಲಾಪೂರ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಮೂದು ಮಾಡಿದ ಆರೋಪಿತನು
ಮಟ್ಕಾ ಜೂಜಾಟದಲ್ಲಿ ತೊಡಗಿದ್ದಾಗ್ಗೆ ಪಂಚರ ಸಮಕ್ಷಮದಲ್ಲಿ ಸಿ.ಪಿ.ಐ ಸಾಹೇಬರು ಮತ್ತು ಸಿಬ್ಬಂದಿಯವರು ದಾಳಿ ಮಾಡಲು ಮಟ್ಕಾ ಜೂಜಾಟದಲ್ಲಿ
ತೊಡಗಿದ್ದ ಆರೋಪಿತನಿಂದ ರೂ. 2760=00 ಗಳನ್ನು ಮತ್ತು ಮಟ್ಕಾ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡಿದ್ದು
ಇರುತ್ತದೆ. ನಂತರ ಮಟ್ಕಾ
ಪಟ್ಟಿ ಮತ್ತು ಹಣವನ್ನು ಯಾರಿಗೆ ಕೊಡುತ್ತಿರಿ ಅಂತಾ ವಿಚಾರಿಸಲಾಗಿ ಸಿಕ್ಕ ಆರೋಪಿತನು ತಾನೆ
ಇಟ್ಟುಕೊಳ್ಳುತ್ತೇನೆ ಅಂತಾ ತಿಳಿಸಿರುತ್ತಾನೆ. ಅಂತಾ ನೀಡಿದ ವರದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು
ತನಿಖೆ ಕೈಗೊಂಡಿದ್ದು ಇರುತ್ತದೆ.
4] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 142/2017 ಕಲಂ. 379 ಐ.ಪಿ.ಸಿ
ಮತ್ತು 44(1) ಕೆ.ಎಂ.ಎಂ.ಸಿ. ರೂಲ್ಸ್ -1994.
ದಿ:20-06-2017
ರಂದು ಸಾಯಂಕಾಲ 6-30 ಗಂಟೆಗೆ
ಫಿರ್ಯಾದಿದಾರರಾದ ಶ್ರೀ ಗುರುರಾಜ. ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ
ಸಾರಾಂಶವೇನೆಂದರೇ,
ದಿ:20-06-2017
ರಂದು ಸಂಜೆ 4-30 ಗಂಟೆಗೆ
ಫಿರ್ಯಾದಿದಾರರು ಸಿಬ್ಬಂದಿಗಳ
ಸಂಗಡ ಕೋಳೂರ ಕ್ರಾಸ್ ಹತ್ತಿರ ಬಾತ್ಮಿ ಪ್ರಕಾರ ಮಾದಿನೂರ ಕಡೆಯಿಂದ
ಆರೋಪಿತನು ತನ್ನ ಬೊಲೆರೋ ವಾಹನದ ಇಂಜನ್ ನಂ: TBH1B48145. ನೇದ್ದರಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಕಳ್ಳತನದಿಂದಾ ಅನಧಿಕೃತವಾಗಿ ಸುಮಾರು 3,600=00 ರೂ. ಬೆಲೆಬಾಳುವ ಮರಳನ್ನು ಸಾಗಾಟ ಮಾಡುವಾಗ ದಾಳಿ ಮಾಡಿ ಪಂಚರ ಸಮಕ್ಷಮ ಪಂಚನಾಮೆ ಮೂಲಕ
ಜಪ್ತಿ ಮಾಡಿಕೊಂಡಿದ್ದು,
ಸದರಿ ಬೊಲೆರೋ ವಾಹನ ಅಂ,ಕಿ 1,50,000=00 ರೂ, ಬೆಲೆಬಾಳುವ ವಾಹನ ಮತ್ತು ಮರಳು ಸಮೇತ ಹಾಜರಪಡಿಸಿ ಚಾಲಕ ದೇವೆಂದ್ರಪ್ಪ ತಂದೆ ನಾಗಪ್ಪ
ಕಂದಕೂರ. ವಯ: 23,
ಜಾ: ನಾಯಕ, ಸಾ: ಕಲಿಕೇರಿ. ತಾ:ಜಿ:
ಕೊಪ್ಪಳ. ಇತನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮುಂತಾಗಿದ್ದ ಫಿರ್ಯಾದಿ ಸಾರಾಂಶದ
ಮೇಲಿನಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
5] ಸಂಚಾರಿ ಪೊಲೀಸ್ ಠಾಣೆ ಕೊಪ್ಪಳ ಗುನ್ನೆ ನಂ. 32/2017 ಕಲಂ. 279, 337 ಐ.ಪಿ.ಸಿ:.
ದಿನಾಂಕ. 20-06-2017
ರಂದು ಸಂಜೆ 4-00 ಗಂಟೆ ಸುಮಾರು
ಕೊಪ್ಪಳದ ಸಿ.ಡಿ.ಪಿ.ಓ ಕಚೇರಿಯಲ್ಲಿ ಮೀಟಿಂಗ್ ಮುಗಿಸಿಕೊಂಡು ವಾಪಸ್ ಗಿಣಗೇರಕ್ಕೆ ಹೋಗುವ ಕುರಿತು
ಕೊಪ್ಪಳದ ಅಶೋಕ ಸರ್ಕಲ್ ಹತ್ತಿರ ಒಂದು ಅಟೋ ಬಾಡಿಗೆ ತೆಗೆದುಕೊಂಡು ನನ್ನ ಜೊತೆ ಶ್ರೀಮತಿ ಶಿವಮ್ಮ
ಗಂಡ ಯಲ್ಲಪ್ಪ ವಯ: 55 ಸಾ: ಗಬ್ಬೂರ ಹಾಗೂ ಶ್ರೀಮತಿ ಹೊನ್ನಮ್ಮ ಗಂಡ ಗವಿಸಿದ್ದಪ್ಪ ಅಬ್ಬಿಗೇರಿ ವಯ: 35 ಸಾ: ಗಿಣಗೇರಿ ಮೂರು ಜನ ಸೇರಿ ಹೊರಟೆವು. ಕೊಪ್ಪಳ ಗಿಣಗೇರಿ ರಸ್ತೆಯ
ಹೋಟೇಲ್ ಪಾರ್ಥ ಹಿಂದಿನ ಗೇಟ್ ಹತ್ತಿರ ವೈಭವ ಸಾವಜಿ ಹೋಟೆಲ್ ಮುಂದೆ ನಾವು ಕುಳಿತ ಅಟೋವನ್ನು ಅತೀ
ಜೋರಾತಿ & ಅಲಕ್ಷ್ಯತನದಿಂದ ನಡೆಸಿ ರಸ್ತೆಗೆ
ಬದಿಗೆ ಬಿದ್ದಿರುವ ಕಲ್ಲಿನ ಮೇಲೆ ಗಾಲಿಯನ್ನು ಹತ್ತಿಸಿ ಅಟೋವನ್ನು ಒಮ್ಮೆಲೆ ತಿರುಗಿಸಿದ್ದರಿಂದ
ಅಟೋ ರಸ್ತೆಯ ಮೇಲೆ ಮೂರು ಪಲ್ಟಿಯಾಗಿ ಕೆಳಗೆ ಬಿದ್ದಿದ್ದು ಇದರಿಂದ ಒಳಗಡೆ ಕುಳಿತ ನನಗೆ ಹಾಗೂ
ಶಿವಮ್ಮ ಮತ್ತು ಹೊನ್ನಮ್ಮ ಇವರಿಗೂ ರಕ್ತಗಾಯ ಹಾಗೂ ಒಳಪೆಟ್ಟಾಗಿದ್ದು, ಅಪಘಾತದ ನಂತರ ಅಟೋ ಚಾಲಕ ಓಡಿಹೋಗಿದ್ದು ಅಟೋ ನಂ. ನೋಡಲು
KA-27/B-3407 ಇದ್ದು ಅಲ್ಲೆ ಹತ್ತಿರದಲ್ಲಿದ್ದ ಕೊಪ್ಪಳ
ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆ ಕುರಿತು ಅಲ್ಲಿದ್ದ ಜನರ ಸಹಾಯದಿಂದ ಬಂದು ದಾಖಲಾಗಿದ್ದು
ಇರುತ್ತದೆ. ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
0 comments:
Post a Comment