1] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 153/2017 ಕಲಂ. 153/2017 ಕಲಂ. 143, 147, 343, 323, 504, 506 ಸಹಿತ 149 ಐ.ಪಿ.ಸಿ:.
ದಿನಾಂಕ:- 19-06-2017 ರಂದು ಮಧ್ಯಾಹ್ನ 1:45 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಅಹ್ಮದ್ ಹುಸೇನ್ ತಂದೆ ಖಾದರ್ ಸಾಬ ಪಟೇಲ್, ವಯಸ್ಸು 35 ವರ್ಷ, ಜಾತಿ: ಮುಸ್ಲೀಂ ಉ:
ವೆಲ್ಡಿಂಗ್ ಕೆಲಸ ಸಾ: ಬಸಾಪಟ್ಟಣ. ತಾ: ಗಂಗಾವತಿ ಇವರು
ಠಾಣೆಗೆ ಹಾಜರಾಗಿ ಲಿಖಿತ ದೂರನ್ನು ಹಾಜರಪಡಿಸಿದ್ದು, " ನನ್ನ ಹೆಂಡತಿಯಾದ ಶ್ರೀಮತಿ ಸಾಲೀಹಾ
ಪಟೇಲ್ ಇವರು ಮಹಿಳಾ ಗುಂಪಿನ ಸಹಾಯದಿಂದ ಹೆಚ್.ಡಿ.ಎಫ್.ಸಿ. ಬ್ಯಾಂಕಿನಲ್ಲಿ 25,000-00 ರೂ. ಸಾಲವನ್ನು
ಈಗ್ಗೆ 6 ತಿಂಗಳ ಹಿಂದೆ ಪಡೆದುಕೊಂಡಿದ್ದರು, ನನ್ನ ಹೆಂಡತಿ ಕಂತಿನ ರೂಪದಲ್ಲಿ ಸಾಲ ಪಡೆದ ಹಣ ಕಟ್ಟುತ್ತಾ
ಬಂದಿದ್ದಳು. ಈಗ ಸಾಲದ ಹಣವನ್ನು ಕಟ್ಟುವುದು ತಡವಾಗಿತ್ತು. ಅದೆ ನೆಪ ಮಾಡಿಕೊಂಡು ಇಂದು
ದಿ:- 19-06-2017 ರಂದು ಬೆಳಿಗ್ಗೆ 08:00 ಗಂಟೆಗೆ ನಾನು ಮತ್ತು ನನ್ನ ಹೆಂಡತಿ ಮನೆ ಹತ್ತಿರ ಇದ್ದಾಗ
ಆರೋಪಿತರಾದ (1) ಮುತಾಹರ್ ತಂದೆ ಖಾಜಾ ಮೈನುದ್ದೀನ್ (2) ಅಬ್ದುಲ್ ತಂದೆ ಖಾಜಾ ಮೈನುದ್ದೀನ್ (3)
ಬುರಾನ್ ತಂದೆ ಖಾಜಾ ಮೈನುದ್ದೀನ್ (4) ಕರೀಮ್ ಪಾಷಾ ತಂದೆ ಖಾಜಾ ಮೈನುದ್ದೀನ್ (5) ಮೈಬೂಬ ತಂದೆ ಖಾಜಾ
ಮೈನುದ್ದೀನ್ ಎಲ್ಲರೂ ಸೇರಿಕೊಂಡು ನಮ್ಮ ಮನೆಯ ಮುಂದೆ ಬಂದು ಸಾಲ ಕಟ್ಟುವ ವಿಷಯದಲ್ಲಿ ಬಾಯಿ ಮಾಡಹತ್ತಿದರು.
ಆಗ ನಾನು ಈ ರೀತಿ ಮನೆಯ ಹತ್ತಿರ ಬಂದು ಜಗಳ ಮಾಡಿದರೆ ಹೇಗೆ ಅಂತಾ ಕೇಳಲು ಹೋದಾಗ ಆರೋಪಿತರೆಲ್ಲರೂ
ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದಾಡಿ ಕೈಯಿಂದ ಹೊಡಿ-ಬಡಿ ಮಾಡಿ ದು:ಖಪತಗೊಳಿಸಿದರು. ನಂತರ
ಅವರು ನೀವು ಸಾಲ ಕಟ್ಟದೇ ಊರಲ್ಲಿ ಹೇಗೆ ಇದ್ದು ಬಾಳುವೆ ಮಾಡುತ್ತೀರಿ ನೋಡುತ್ತೇವೆ ಅಂತಾ ಜೀವದ
ಬೆದರಿಕೆ ಹಾಕಿದರು. ಕಾರಣ ಮೇಲ್ಕಂಡ 5 ಜನರ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ."
ಅಂತಾ ಇದ್ದ ದೂರಿನ ಆಧಾರದ ಮೇಲಿಂದ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment