1] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 150/2017 ಕಲಂ. 87 Karnataka Police Act.
ದಿನಾಂಕ 08-07-2017 ರಂದು ರಾತ್ರಿ-9-15 ಗಂಟೆಯ ಸುಮಾರಿಗೆ ಗುಂಡೂರ ಸೀಮಾದ ದೊಡ್ಡನಗೌಡ ತಂದೆ
ವೀರಭದ್ರಗೌಡ ಪೊಲೀಸ್ ಪಾಟೀಲ್ ರವರ ಹೊಲದ ಪಕ್ಕದ ಹಳ್ಳದಲ್ಲಿ ದಂಡೆಯಲ್ಲಿ
ಸಾರ್ವಜನಿಕರ ಸ್ಥಳದಲ್ಲಿ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದ ಆರೋಪಿತರ ಮೇಲೆ ಶ್ರೀ
ಯಲ್ಲಪ್ಪ, ಪಿ.ಎಸ್.ಐ ಹಾಗೂ ಸಿಬ್ಬಂದಿಯವರು ಹಾಗೂ ಪಂಚರ ಸಮಕ್ಷದಲ್ಲಿ ದಾಳಿ ಮಾಡಿದಾಗ ಆರೋಪಿ ನಂ-1 ರಿಂದಾ 8 ನೇದ್ದವರು ಸಿಕ್ಕಿಬಿದ್ದಿದ್ದು
ಸದರ್ ಸಿಕ್ಕಿಬಿದ್ದಿರುವ ಆರೋಪಿತರ ವಶದಿಂದ ರೂ. 3140/-
ಹಾಗೂ ಇಸ್ಪೇಟ್ ಜೂಜಾಟದ
ಸಾಮಾಗ್ರಿಗಳನ್ನು ಪಂಚರ ಸಮಕ್ಷಮದಲ್ಲಿ ಜಪ್ತ ಮಾಡಿಕೊಂಡಿದ್ದು ಇರುತ್ತದೆ.
2] ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ. 100/2017 ಕಲಂ. 87 Karnataka Police
Act:
ಪಿ.ಎಸ್.ಐ. ಹಾಗೂ ಸಿಬ್ಬಂದಿಯವರು ಇಂದು ಸಾಯಂಕಾಲ 17-15 ಠಾಣೆಯಲ್ಲಿದ್ದಾಗ ಹುಲಗೇರಿ ಸೀಮಾದ ಯಂಕನಗೌಡ ರವರ ಹೊಲಸದ ಹತ್ತಿರ ರಸ್ತೆಯ ಬಾಜು ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟ ನಡೆಯುತ್ತಿದೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಇಬ್ಬರು ಪಂಚರಾದ 1] ಮಂಜುನಾಥ ತಂದೆ ಬಸವಂತಪ್ಪ ಶಿರೋಳ, ವಯಾ: 23 ವರ್ಷ, ಸಾ: ಹನಮಸಾಗರ 2] ಹುಸೇನಸಾಬ ತಂದೆ ದಾದೇಸಾಬ ಕಟಗಿ, ಸಾ: ಹನಮಸಾಗರ ಹಾಗೂ ಸಿಬ್ಬಂದಿಯವರೊಂದಿಗೆ ಹೋಗಿ ಅಲ್ಲಿ ಕಳ್ಳಿ
ಗಿಡದ ಹತ್ತಿರ ಮರೆಯಾಗಿ ನಿಂತು ಇಸ್ಪೀಟ್ ಜೂಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ದಾಳಿ ಮಾಡಲು ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ 08 ಜನ ಆರೋಪಿತರು ಸಿಕ್ಕಿಬಿದ್ದಿದ್ದು, ಸದರಿ ಆಪಾದಿತರು ಜೂಜಾಟಕ್ಕೆ ಉಪಯೋಗಿಸಿದ 52 ಇಸ್ಪೀಟ್ ಎಲೆಗಳು ಹಾಗೂ 6,100/-
ನಗದು, ಒಂದು ಬರ್ಕಾ ಸಿಕ್ಕಿದ್ದು, ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಗೊಂಡಿದ್ದು ಇರುತ್ತದೆ.
3] ಸಂಚಾರಿ ಪೊಲೀಸ್ ಠಾಣೆ ಗಂಗಾವತಿ ಗುನ್ನೆ ನಂ. 19/2017 ಕಲಂ. 279, 337, 338, 304(ಎ) ಐ.ಪಿ.ಸಿ:.
ದಿನಾಂಕ 10-07-2017 ರಾತ್ರಿ 00-10 ಎಎಂ ಗಂಟೆಗೆ ಫಿರ್ಯಾದಿದಾರನಾದ ಹನುಮೇಶ ತಂದೆ ಮಾನಪ್ಪ ಸಾ:ಗಂಗಾವತಿ ಠಾಣೆ ಹಾಜರಾಗಿ ನೀಡಿದ ದೂರಿನ ಸಾರಂಶವೆನೆಂದರೆ ದಿನಾಂಕ 09-07-2017 ರಾತ್ರಿ 10-50
ಪಿಎಂ ಗಂಟೆ ಸುಮಾರಿಗೆ ಅನೀಲ ಇತನು ತನ್ನ ಮೋಟಾರು ಬಜಾಜ ಕವಾಸಕಿ ನಂ ಕೆ.ಎ.26-ಜೆ 576 ನೇದ್ದರ ಹಿಂದೆ ಮೌನೇಶ ಇತನನ್ನು ಕೂಡಿಸಿಕೊಂಡು ಕೊಪ್ಪಳ ಕಡೆಯಿಂದ ವಾಪಸ್ಸು ಸಿಬಿ ಸರ್ಕಲ್ ಕಡೆಗೆ ಎಡಮಗ್ಗಲು ಬರುತ್ತಿರುವಾಗ ಕೊಪ್ಪಳ ಕಡೆಯಿಂದ ಅಂದರೆ ಹಿಂದಿನಿಂದ ಒಂದು ಮಾರುತಿ ಎಸ್ ಕ್ರಾಸ್ ಡೆಲ್ಟಾ ಬಿಎಸ್ಐವಿ ನೇದ್ದರ ಚಾಲಕ ತನ್ನ ಕಾರನ್ನು ಅತೀಜೋರಾಗಿ ಮತ್ತು ಅಲಕ್ಷತನದಿಂದ ಚಾಲನೆ ಮಾಡಿಕೊಂಡು ಬಂದವನೇ ವೇಗದಲ್ಲಿದ್ದ ಕಾರ್ ನಿಯಂತ್ರಣಕ್ಕೆ ಬಾರದೇ ಮುಂದೆ ಹೋಗುತ್ತಿದ್ದ ಅನೀಲ ಇತನ ಮೋಟಾರು ಸೈಕಲ್ಲಗೆ ಟಕ್ಕರ ಕೊಟ್ಟು ಅಪಘಾತ ಮಾಡಿದ್ದು ಇರುತ್ತದೆ ಈ ಅಪಘಾತದಲ್ಲಿ ಅನೀಲ್ ತಂದೆ ಶಂಬಣ್ಣ ಬಡಿಗೇರ್ ವ:28 ಜಾ:ವಿಶ್ವಕಮರ್ಾ ಖಾಸಗಿ ಕೆಲಸ ಸಾ: ಹೆಚ್ಆರ್ಎಸ್ ಕಾಲೋನಿ ಗಂಗಾವತಿ ಇತನಿಗೆ ತುಟಿಗೆ,ಗದ್ದಕ್ಕೆ ಹೊಟ್ಟೆಗೆ ರಕ್ತಗಾಯವಾಗಿದ್ದು ಮತ್ತು ತೆಲೆಗೆ ಭಾರಿ ಒಳಪೆಟ್ಟು ಹಾಗೂ ರಕ್ತಗಾಯವಾಗಿದ್ದು ಇರುತ್ತದೆ ಮತ್ತು ಮೌನೇಶ ತಂದೆ ವಿರುಪಣ್ಣ ಪತ್ತಾರ ವ:28 ಜಾ:ವಿಶ್ವಕರ್ಮ ಉ:ಬಡಿಗಿತನ ಕೆಲಸ ಸಾ: ಪಂಪಾನಗರ ಗಂಗಾವತಿ ಇತನಿಗೆ ತೆಲೆಗೆ ಭಾರಿ ಒಳಪೆಟ್ಟು ಮತ್ತು ಬಲಕೆನ್ನೆಗೆ ರಕ್ತಗಾಯವಾಗಿದ್ದು ಇರುತ್ತದೆ. ಕೂಡಲೇ ಫಿರ್ಯಾದಿದಾರನು 108 ವಾಹನದಲ್ಲಿ ಕರೆದುಕೊಂಡು ಗಂಗಾವತಿ ಸರಕಾರಿ ಆಸ್ಪತ್ರೆಗೆ ಬಂದಾಗ ಗಂಗಾವತಿ ಸರಕಾರಿ ಆಸ್ಪತ್ರೆಯ ಕಂಪೌಂಡದ ಒಳಗಡೆ 108 ವಾಹನ ಬಂದಾಗ ಮೌನೇಶ ಇತನು ರಾತ್ರಿ 11-15 ಗಂಟೆ ಸುಮಾರು ಮೃತಪಟ್ಟಿದ್ದು ಇರುತ್ತದೆ. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡೆನು
4] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 161/2017 ಕಲಂ. 279, 337, 338 ಐ.ಪಿ.ಸಿ
ಮತ್ತು 187 ಐ.ಎಂ.ವಿ. ಕಾಯ್ದೆ:.
ದಿನಾಂಕ 8.07.2017 ರಂದು ರಾತ್ರಿ ಗಂಟೆಗೆ ಪಿರ್ಯಾದಿ ನಾಗರಾಜ ಹದ್ದಿನ ಸಾ: ಟಣಕನಕಲ್ ಇವರು ಠಾಣೆಗೆ ಹಾಜರಾಗಿ
ಹೇಳಿಕೆ ಫಿರ್ಯಾದಿ ಸಲ್ಲಿಸಿದ್ದು ಅದರ ಸಾರಾಂಶವೇನೇಂದರೆ ಇಂದು ದಿನಾಂಕ 08.07.2017 ರಂದು ರಾತ್ರಿ 09.00 ಗಂಟೆಯ ಸುಮಾರಿಗೆ
ತಮ್ಮ ಗ್ರಾಮವಾದ ಟಣಕನಕಲ್ ತಾನು ಹಾಗೂ ತನಗೆ ಪರಿಚಯನಾದ ಪಂಪಣ್ಣ ಶೆಳ್ಳೆರ, ರವಿ ಹದ್ದಿನ ,ಗವಿಸಿದ್ದಪ್ಪ
ಶೆಳ್ಳೆರ ನಾಲ್ಕು ಜನ ಕೂಡಿಕೊಂಡು ಊಟಕ್ಕೆ ಹೋಗುತ್ತಿರುವಾಗ ತಮ್ಮ ಹಿಂದಿನಿಂದ ಅಂದರೆ ಕೊಪ್ಪಳ
ಕಡೆಯಿಂದ ಕುಷ್ಟಗಿ ಕಡೆಗೆ ಮೋ ಸೈಕಲ್ ನಂ:KA-37/Y-7522 ನೇದ್ದರ ಸವಾರನು ತನ್ನ ಮೋ ಸೈಕಲನ್ನು ಅತೀವೇಗ ಹಾಗೂ ಅಲಕ್ಷತನದಿಂದ
ಮಾನವ ಜೀವಕ್ಕೆ ಅಪಾಯವಾಗುವಂತೆ ಚಲಾಯಿಸಿಕೊಂಡು ಬಂದು ರಸ್ತೆ ಪಕಕ್ಕೆ ನಡೆದು ಕೊಂಡು
ಹೋರಟಿದ್ದ ಪಂಪಣ್ಣ ರವಿ ಗವಿಸಿದ್ದಪ್ಪ ಮೂರು ಜನರಿಗೆ ಟಕ್ಕರ್ ಕೊಟ್ಟು ಅಪಘಾತ ಪಡಿಸಿದ್ದರಿಂದ
ಸಾದಾ ಮತ್ತು ಬಾರಿಗಾಯ ಪಡಿಸಿ ಮೋ.ಸೈಕನ್ನು ಸ್ಥಳದಲ್ಲಿಯೇ ಬಿಟ್ಟು ಓಡಿಹೋಗಿದ್ದು ಸದರಿ ಮೋ ಸೈಕನ
ಸವಾರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಹೇಳಿಕೆಯ ಫಿರ್ಯಾದಿ
ಸಾರಾಂಶ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment