Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Sunday, July 9, 2017

1] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 203/2017 ಕಲಂ. 87 Karnataka Police Act.
ದಿನಾಂಕ: 08-07-2017 ರಂದು ಮಧ್ಯಾಹ್ನ ನಾನು ಠಾಣೆಯಲ್ಲಿರುವಾಗ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಹಣವಾಳ ಗ್ರಾಮದ ದುರ್ಗಮ್ಮನ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ ಜೂಜಾಟ ನಡೆಯುತ್ತಿದೆ ಅಂತಾ ಖಚಿತವಾದ ಮಾಹಿತಿ ಶ್ರೀ ಪ್ರಕಾಶ ಮಾಳಿ, ಪಿ.ಎಸ್.ಐ. ರವರಿಗೆ ಬಂದ ಮೇರೆಗೆ ಇಬ್ಬರು ಪಂಚರನ್ನು ಹಾಗೂ ಸಿಬ್ಬಂದಿಯವರನ್ನು ಕರೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಹಣವಾಳ ಗ್ರಾಮದ ದುರ್ಗಮ್ಮನ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ್ ಎಲೆಗಳಿಂದ ಅಂದರ್ ಬಹಾರ್ ಎನ್ನುವ ಕಾನೂನು ಬಾಹಿರವಾದ ಅದೃಷ್ಠದ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದು ಕಂಡುಬಂದಿದ್ದು, ಕೂಡಲೇ ಅವರ ಮೇಲೆ ದಾಳಿ ಮಾಡಲಾಗಿ ಜೂಜಾಟದಲ್ಲಿ ತೊಡಗಿದ್ದ 12 ಜನರು ಸಿಕ್ಕಿ ಬಿದ್ದಿದ್ದು, ಸದರಿ ದಾಳಿಯಲ್ಲಿ ಸಿಕ್ಕವರಿಂದ ಹಾಗೂ ಸ್ಥಳದಿಂದ ಜೂಜಾಟದ ನಗದು ಹಣ ರೂ. 5,800/- ಗಳು, 52 ಇಸ್ಪೀಟ್ ಎಲೆಗಳು, ಹಾಗೂ ನೆಲದ ಮೇಲೆ ಹಾಸಿದ್ದ ಒಂದು ಹಳೆಯ ಪ್ಲಾಸ್ಟಿಕ್ ಬರಕಾ ಸಿಕ್ಕಿದ್ದು ಇರುತ್ತವೆ. ಪ್ರಕರಣ ದಾಖಲು ಮಾಡಿದ್ದು ಇರುತ್ತದೆ.
2] ಬೇವೂರ ಪೊಲೀಸ್ ಠಾಣೆ ಗುನ್ನೆ ನಂ. 83/2017 ಕಲಂ. 87 Karnataka Police Act:
ದಿನಾಂಕ:-07.07.2017 ರಂದು ಸಾಯಂಕಾಲ 6:00 ಗಂಟೆ ಸುಮಾರಿಗೆ   ಸೀಮಾದಲ್ಲಿರುವ ಸಾರ್ವಜನಿಕ ಸ್ಥಳದ ಜಾಲಿ ಹಳ್ಳದಲ್ಲಿ ಇಸ್ಪೆಟ್ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಹಾಗೂ ಸಿಬ್ಬಂದಿಯವರು ಪಂಚರೊಂದಿಗೆ ಹೋಗಿ ದಾಳಿ ಮಾಡಿದಾಗ 04 ಜನ ಆರೋಪಿತರು ಸಿಕ್ಕಿ ಬಿದ್ದಿದ್ದು ಸದರಿ ದಾಳಿಯ ಕಾಲಕ್ಕೆ 03 ಜನ ಆರೋಪಿತರು ಓಡಿ ಹೋಗಿದ್ದು ಸದರಿ ಸಿಕ್ಕಿಬಿದ್ದ ಆರೋಪಿತರಿಂದ 480=00 ರೂ ನಗದು ಹಣ ಹಾಗೂ ಇಸ್ಪೇಟ್ ಜೂಜಾಟದ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡು ಬಂದು ಜಪ್ತಿ ಪಂಚನಾಮೆಯೊಂದಿಗೆ ತಮ್ಮ ವರದಿ ಸಲ್ಲಿಸಿದ್ದು ಇರುತ್ತದೆ. ಸದರಿ ಅಪರಾಧವು ಅಸಂಜ್ಞೇಯ ಅಪರಾಧವಾದ್ದರಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲು ಮಾನ್ಯ ನ್ಯಾಯಾಲಯದ ಅನುಮತಿ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.      
3] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 88/2017 ಕಲಂ. 32, 34 Karnataka Excise Act:
ದಿನಾಂಕ: 08-07-2017 ರಂದು ಸಾಯಂಕಾಲ 5:30 ಗಂಟೆ ಸುಮಾರಿಗೆ ದ್ಯಾಂಪೂರ ಕ್ರಾಸ್ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಆರೊಪಿತರು ಅನಧೀಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಹಾಗು ಸಿಬ್ಬಂದಿಯವರು ಪಂಚರೊಂದಿಗೆ ಹೋಗಿ ದಾಳಿ ಮಾಡಿ ರಾಮಪ್ಪ ನೇದ್ದವನಿಂದ 90 ಎಂ.ಎಲ್. ದ ಹೈವಾಡ್ರ್ಸ ಚೀಯರ್ಸ ವಿಸ್ಕಿ ಯ 31  ಟೇಟ್ರಾ ಪ್ಯಾಕ್ಗಳ ಕಿಮ್ಮತ್ತು 872:03 ರೂ. ಹಾಗೂ ಮದ್ಯ ಮಾರಾಟದ ನಗದು ಹಣ 130/-ರೂ. ರೋಪಿ ನಂ: 2 ನೇದ್ದವನಿಂದ  90 ಎಂ.ಎಲ್. ದ ಹೈವಾಡ್ರ್ಸ ಚೀಯರ್ಸ ವಿಸ್ಕಿ ಯ 30ಟೇಟ್ರಾ ಪ್ಯಾಕ್ಗಳ ಕಿಮ್ಮತ್ತು , 843:90 ರೂ. ಹಾಗೂ ಮದ್ಯ ಮಾರಾಟದ ನಗದು ಹಣ 130/-ರೂ.  ಮತ್ತು ಆರೋಪಿ ನಂ: 3 ನೇದ್ದವನಿಂದ 90 ಎಂ.ಎಲ್. ದ ಹೈವಾಡ್ರ್ಸ ಚೀಯರ್ಸ ವಿಸ್ಕಿ ಯ 29 ಟೇಟ್ರಾ ಪ್ಯಾಕ್ಗಳ ಕಿಮ್ಮತ್ತು 815:77 ರೂ. ಮದ್ಯ ಮಾರಾಟದ ನಗದು ಹಣ 130/-ರೂ. ಆರೋಪಿ ನಂ: 4 ನೇದ್ದವನಿಂದ 90 ಎಂ.ಎಲ್. ದ ಹೈವಾಡ್ರ್ಸ ಚೀಯರ್ಸ ವಿಸ್ಕಿ ಯ 33 ಟೇಟ್ರಾ ಪ್ಯಾಕ್ಗಳ ಕಿಮ್ಮತ್ತು 928:29 ರೂ. ಮದ್ಯ ಮಾರಾಟದ ನಗದು ಹಣ 160/-ರೂ. ಮತ್ತು ಆರೋಪಿ ನಂ: 5 ನೇದ್ದವನಿಂದ  90 ಎಂ.ಎಲ್. ದ ಹೈವಾಡ್ರ್ಸ ಚೀಯರ್ಸ ವಿಸ್ಕಿ ಯ 32 ಟೇಟ್ರಾ ಪ್ಯಾಕ್ಗಳ ಕಿಮ್ಮತ್ತು  900:16 ರೂ. ಮದ್ಯ ಮಾರಾಟದ ನಗದು ಹಣ 120/-ರೂ. ಆರೋಪಿ ನಂ: 6 ನೇದ್ದವನಿಂದ  90 ಎಂ.ಎಲ್. ದ ಹೈವಾಡ್ರ್ಸ ಚೀಯರ್ಸ ವಿಸ್ಕಿ ಯ 29 ಟೇಟ್ರಾ ಪ್ಯಾಕ್ ಗಳ ಕಿಮ್ಮತ್ತು  787:64 ರೂ. ಮದ್ಯ ಮಾರಾಟದ ನಗದು ಹಣ 180/-ರೂ. ಹಾಗೂ ಆರೋಪಿ ನಂ: 7 ನೇದ್ದವನಿಂದ 90 ಎಂ.ಎಲ್. ದ ಹೈವಾಡ್ರ್ಸ ಚೀಯರ್ಸ ವಿಸ್ಕಿ ಯ 30 ಟೇಟ್ರಾ ಪ್ಯಾಕ್ ಗಳ ಕಿಮ್ಮತ್ತು 843:90 ರೂ. ಮದ್ಯ ಮಾರಾಟದ ನಗದು ಹಣ 140/-ರೂ. ಗಳನ್ನು ಈ ಪ್ರಕಾರ ಒಟ್ಟು  07 ಜನ ಆರೋಪಿತರಿಂದ 213 ಹೈವಾಡ್ರ್ಸ ಚೀಯರ್ಸ ವಿಸ್ಕಿ ಯ ಟೇಟ್ರಾ ಪ್ಯಾಕ್ ಗಳ ಒಟ್ಟು ಅಂ.ಕಿ.5991:62 ರೂ ಮದ್ಯವನ್ನು ಹಾಗೂ ಮದ್ಯ ಮರಾಟದ ಹಣ 990/- ರೂ. ಗಳನ್ನು ಜಪ್ತ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು  ಇರುತ್ತದೆ.
4] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 200/2017 ಕಲಂ. 379 ಐ.ಪಿ.ಸಿ :.

ದಿನಾಂಕ : 08-07-2017  ರಂದು ಮದ್ಯಾಹ್ನ 12-30 ಗಂಟೆಯ ಸುಮಾರಿಗೆ ಫಿರ್ಯಾದಿದಾರರು ತಮ್ಮ ಸಂಬಂಧಿಕರು ಬರುತ್ತಿದ್ದರಿಂದ ಅವರನ್ನು ಕಾಯುತ್ತಾ ಬಸವೇಶ್ವರ ಸರ್ಕಲ್ ಹತ್ತಿರ ನಿಂತಿರುವಾಗ ಜನರ ಗದ್ದಲದಲ್ಲಿ ಅರೋಪಿತರು ಫಿರ್ಯಾಧಿದಾರರ ಪ್ಯಾಂಟಿನ ಹಿಂದಿನ ಜೇಬಿನಿಂದ 3000-00 ರೂಪಾಯಿ ಹಣವನ್ನು ಪಿಕ್ ಪಾಕೀಟ್ ಮಾಡಿ ಓಡಿಹೋಗುತ್ತಿದ್ದು ಅದನ್ನು ನೋಡಿಕೊಂಡ ಫಿರ್ಯಾಧಿದಾರರು ಕೂಗಿಕೊಂಡಾಗ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಯವರ ಸಹಾಯದೊಂದಿಗೆ ಹಿಡಿದು ವಿಚಾರಿಸಿ ಠಾಣೆಗೆ ಕರೆತಂದು ನೋಡಲಾಗಿ ಆರೋಪಿ ಸುನೀಲ್ ತಂದೆ ಯಲ್ಲಪ್ಪ ಇತನ ಕಡೆಗೆ ಫಿರ್ಯಾಧಿಯ 3000-00 ರೂಪಾಯಿ ಹಣ ಇದ್ದು ಆ ಬಗ್ಗೆ ವಿಚಾರಿಸಿ ದೂರನ್ನು ನೀಡಿದ್ದು ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.    

0 comments:

 
Will Smith Visitors
Since 01/02/2008