1] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 174/2017 ಕಲಂ. 379 ಐ.ಪಿ.ಸಿ:
ದಿನಾಂಕ 14-07-2017 ರಂದು ಸಾಯಂಕಾಲ 5-00 ಗಂಟೆಗೆ ಗವಿಸಿದ್ದೇಶ ತಂದೆ ಚಿನ್ನಪ್ಪ ಅಕ್ಕಿ ವಯಸ್ಸು 42 ವರ್ಷ ಫಿರ್ಯಾದಿ
ನೀಡಿದ್ದು ಅದರ ಸಾರಂಶವೇನೆಂದರೆ, ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ.
98/2017 ಕಲಂ 379 ಐ.ಪಿ.ಸಿ. ಪ್ರಕರಣದಲ್ಲಿ ಜಪ್ತಿ ಪಡಿಸಿದ ಹಿರೋ ಕಂಪನಿಯ ಫ್ಯಾಶನ್ ಪ್ರೋ ಮೋಟಾರ
ಸೈಕಲ್ ನಂ. ಕೆ.ಎ 36 ವಾಯ್, 1469 ( ನಂಬರ ಬದಲಾಯಿಸಿದೆ) ( ವಾಹನದ ಮೂಲ ನೊಂದಣಿ ಸಂ.
ಕೆ.ಎ.35/ಎಕ್ಸ್-2571 ) ಚಾಸ್ಸಿ ನಂ :MBLHA10AWCHL53511 ಇಂಜಿನ್
ನಂ : HA10ENCHL14273 ಅಂ.ಕಿ. ರೂ 30,000-00 ಬೆಲೆ ಬಾಳುವದನ್ನು ನೋಡಿ ತಮ್ಮದೆಂದು ಗುರುತಿಸಿ
ಸದರಿ ಮೋಟಾರ ಸೈಕಲ್ ನ್ನು ದಿನಾಂಕ 30-06-2015 ರಂದು ಸಾಯಂಕಾಲ 7-00 ಗಂಟೆಯಿಂದ 7-30 ಗಂಟೆಯ ಮಧ್ಯದ ಅವಧಿಯಲ್ಲಿ ಫಿರ್ಯಾದಿದಾರರ
ಮೋಟಾರ ಸೈಕಲ್ ನ್ನು ಅವರ ಸಹೋದರನು ತೆಗೆದುಕೊಂಡು ಹೋಗಿ ಅದನ್ನು ಗಂಗಾವತಿ ನಗರದ ಆನೇಗುಂದಿ ರಸ್ತೆಯ
ರಾಮದೇವರ ಗುಡಿ ಹತ್ತಿರ ಇರುವ ವೀಣಾ ಡಾಕ್ಟರ್ ಆಸ್ಪತ್ರೆ ಮುಂದೆ ನಿಲ್ಲಿಸಿರುವುದನ್ನು (01) ರಾಜಾ @ ರಾಜಾಹುಸೇನ @ ಚಂಡ್
ತಂದೆ ಶ್ರೀನಿವಾಸ @ ದಾವಲಸಾಬ ವಯ 25 ವರ್ಷ ಜಾ: ಮುಸ್ಲಿಂ ಉ: ಡ್ರೈವರ ಸಾ: ಝಂಡಾ ಕಟ್ಟೆ ಹತ್ತಿರ
ಇಸ್ಲಾಂಪುರ, ಗಂಗಾವತಿ. (02) ಸದ್ದಾಂ @ ರಿಯಾಜ್ ತಂದೆ ರಫೀಕಸಾಬ ಸಾ: ಮಹಿಬೂಬು ನಗರ, ಗಂಗಾವತಿ ರವರು
ಕಳ್ಳತನ ಮಾಡಿರುತ್ತಾರೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 176/2017 ಕಲಂ. 143, 147,
148, 323, 324, 395, 506 ಸಹಿತ 149 ಐ.ಪಿ.ಸಿ:
ದಿನಾಂಕ 14-07-2017 ರಂದು ರಾತ್ರಿ 11-30 ಗಂಟೆಗೆ ಮನೋಹರಸ್ವಾಮಿ ತಂದೆ ಅಯ್ಯಸ್ವಾಮಿ
ಹಿರೇಮಠ ಜಾ: ಲಿಂಗಾಯತ ಸಾ: ಇಸ್ಲಾಂಪುರ, ಗಂಗಾವತಿ ರವರು ಠಾಣೆಗೆ ಬಂದು ತಮ್ಮದೊಂದು ಲಿಖಿತ ಫಿರ್ಯಾದಿ
ನೀಡಿದ್ದು ಅದರ ಸಾರಂಶವೇನೆಂದರೆ, ದಿನಾಂಕ 14-07-2017 ರಂದು ರಾತ್ರಿ 10-12 ಗಂಟೆಗೆ
ಫಿರ್ಯಾದಿದಾರರು ಸಿ.ಬಿ.ಎಸ್. ಗಂಜದಲ್ಲಿರುವ ತಮ್ಮ ಅಂಗಡಿಯಲ್ಲಿರುವಾಗ ಆರೋಪಿತರಾದ ನವೀನ ಹಾಗೂ
ಇತರರು ಅಕ್ರಮ ಕೂಟ ರಚಿಸಿಕೊಂಡು ದಿಢೀರನೆ ಫಿರ್ಯಾದಿದಾರರ ಅಂಗಡಿಯೊಳಗೆ ಹೋಗಿ ಫಿರ್ಯಾದಿದಾರರಿಗೆ
ಮಾರಣಾಂತಿಕ ಹಲ್ಲೆ ಮಾಡಿ ಇವನನ್ನು ಮುಗಿಸಿ ಬಿಡೋಣವೆಂದು ಚಾಕುವಿನಿಂದ ಕೊಲೆಯತ್ನ ಮಾಡಿ ಹೊಡಿ-ಬಡಿ ಮಾಡಿ ಫಿರ್ಯಾದಿದಾರರ
05 ತೊಲೆಯ ಬಂಗಾರದ ಚೈನ, ಉಂಗುರ ಮತ್ತು ಬ್ರಾಸಲೈಟ್ ಮತ್ತು ನಗದು ಹಣ ರೂ.3,000-00 ಮತ್ತು ದಾಖಲೆಗಳನ್ನು
ದೋಚಿಕೊಂಡು ಹೋಗಿರುತ್ತಾರೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ. 91/2017 ಕಲಂ. 78(3) Karnataka Police Act.
ದಿನಾಂಕ: 14-07-2017 ರಂದು ರಾತ್ರಿ 9:30 ಗಂಟೆಗೆ ಎ.ಎಸ್.ಐ. ತಾವರಗೇರಾ ಪೊಲೀಸ್ ಠಾಣೆರವರು
ಗಣಕೀಕೃತ ವರದಿ, ದಾಳಿ ಪಂಚನಾಮೆ, ಮುದ್ದೇಮಾಲು ಸಿಕ್ಕಿಬಿದ್ದ ಒಬ್ಬ ಆರೋಪಿಯನ್ನು ಹಾಜರಪಡಿಸಿದ್ದು,
ವರದಿಯಲ್ಲಿ ತಾವರಗೇರಾ ಪಟ್ಟಣದ ಸಿಂಧನೂರು ವೃತ್ತದ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟವನ್ನು ಆಡುತ್ತಿದ್ದು,
ಆ ಕಾಲಕ್ಕೆ ಅಧಿಕಾರಿ ವ ಸಿಬ್ಬಂದಿಯವರು ದಾಳಿ ಮಾಡಿ ಜೂಜಾಟದ ಒಟ್ಟು ನಗದು ಹಣ ರೂ. 1770=00, ಜಪ್ತ ಮಾಡಿಕೊಂಡಿದ್ದು, ಸಿಕ್ಕಿಬಿದ್ದ
ಒಬ್ಬ ಆರೋಪಿ ಕೃಷ್ಣಪ್ಪ ತಂದೆ ಮಾನಪ್ಪ ಬಡಿಗೇರಾ ಸಾ: ತಾವರಗೇರಾ ರವರ ವಿರುದ್ದ ಕಾನೂನು ಕ್ರಮ ಜರುಗಿಸಲು
ವರದಿಯನ್ನು ನೀಡಿದ್ದು ಗುನ್ನೆ ದಾಖಲಿಸಿಕೊಂಡು ತಪಾಸಣೆಯನ್ನು ಕೈ ಕೊಂಡಿದ್ದು ಇರುತ್ತದೆ.
0 comments:
Post a Comment